Homeಅಂಕಣಗಳುಬಹುಜನ ಭಾರತ: ನಂದಿಗ್ರಾಮ ಬರೆಯಲಿದೆಯೇ ಜನತಂತ್ರದ ಭವಿಷ್ಯವನು?

ಬಹುಜನ ಭಾರತ: ನಂದಿಗ್ರಾಮ ಬರೆಯಲಿದೆಯೇ ಜನತಂತ್ರದ ಭವಿಷ್ಯವನು?

- Advertisement -
- Advertisement -

ನಂದಿಗ್ರಾಮದ ಹಿಂಸಾಚಾರ ಈ ಸರ್ಕಾರವನ್ನು ಪತನದ ಇಳಿಜಾರಿಗೆ ನೂಕಿತ್ತು. ರಾಜ್ಯವನ್ನು ಕೈಗಾರಿಕೀಕರಣದ ಹಾದಿಗೆ ಹಚ್ಚುವ ಭರದಲ್ಲಿ ಕುರುಡಾಗಿ ಜೇನುಹುಟ್ಟಿಗೆ ಕೈ ಇಟ್ಟಿತ್ತು ವಾಮವಾದಿ ಆಡಳಿತ. 2011ರಲ್ಲಿ ಛಿದ್ರವಾದ ಕೆಂಪುಕೋಟೆಯ ಅಡಿಯಲ್ಲಿ ಇಡಲಾದ ಸಿಡಿಮದ್ದು ತಯಾರಾದದ್ದು ನಂದಿಗ್ರಾಮದ ಮೂಸೆಯಲ್ಲಿ. ಆದರೆ ಈ ಸಿಡಿಮದ್ದನ್ನು ಅರೆದು ಗಟ್ಟಿ ಮಾಡುವ ಕ್ರಿಯೆಯಲ್ಲಿ ಖುದ್ದು ಎಡರಂಗ ಸರ್ಕಾರ ಕೈಜೋಡಿಸಿದ್ದು ಬಹುದೊಡ್ಡ ವಿಡಂಬನೆ. ಈ ಪರಿಯ ಮೈಮರೆವಿನಲ್ಲಿ ಮುಳುಗಿದ್ದ ಎಡರಂಗಕ್ಕೆ ಕಾಲ ಕೆಳಗಿನ ನೋಟವೇ ಕಾಣದಾಗಿತ್ತು. ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಲೇ ಹೋಯಿತು. ತಾನು ಜನರ ನಡುವೆ ಕೆಲಸ ಮಾಡಿ ಕಟ್ಟಿ ಬೆಳೆಸಿದ್ದ ಜನಶಕ್ತಿಯ ಕ್ರೋಧವನ್ನು ತನ್ನ ಮೈಮೇಲೆ ಎಳೆದುಕೊಂಡಿತು. ನೆಲಕ್ಕೆ ಆನಿಸಿ ಜನದನಿಯನ್ನು ಆಲಿಸಬೇಕಿದ್ದ ಕಿವಿಗಳಲ್ಲಿ ಟೊಳ್ಳುಗಾಳಿಯ ಸದ್ದೇ ತುಂಬಿ ಹೋಗಿತ್ತು. ದಮನದ ದಾರಿಯನ್ನು ಆರಿಸಿಕೊಂಡಿತು. ಎಡರಂಗದ ಕಾರ್ಯಕರ್ತರು ಪೊಲೀಸರ ವೇಷ ಧರಿಸಿದ್ದರು. ಅವರ ಕೈಯಲ್ಲಿ ಬಂದೂಕುಗಳಿದ್ದವು. ಹಿಂಸೆಯಲ್ಲಿ ಮುಳುಗೆದ್ದ ನಂದಿಗ್ರಾಮ ರಣರಂಗವಾಗಿತ್ತು. 14 ಮಂದಿ ಅಸುನೀಗಿದ್ದರು. ಎಡರಂಗ ಸರ್ಕಾರ 2011ರಲ್ಲಿ ಘೋರ ಪರಾಭವ ಕಂಡಿತ್ತು.

ಅಂದು ಮಮತಾ ಗೆಲುವಿನ ಪಯಣವನ್ನು ನಿರ್ಣಯಿಸಿದ್ದ ಅದೇ ನಂದಿಗ್ರಾಮ ಇಂದು ಆಕೆಯನ್ನು ಸತ್ವಪರೀಕ್ಷೆಗೆ ಗುರಿಪಡಿಸಿದೆ. ನಂದಿಗ್ರಾಮ ಮತ್ತು ಸಿಂಗೂರಿನಲ್ಲಿ ಕೃಷಿ ವ್ಯವಸ್ಥೆ ಮತ್ತು ಕೈಗಾರಿಕೀಕರಣದ ಕವಲುದಾರಿಯಲ್ಲಿ ನಿಂತಿತ್ತು ಬಂಗಾಳ. ಎಡರಂಗ ಸರ್ಕಾರ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಗೊಡವೆಗೆ ಹೋಗದೆ ದುಡುಕಿತು. ಬಲವಂತ ಭೂಗ್ರಹಣದ ವಿರುದ್ಧ ಜನರೊಂದಿಗೆ ನಿಂತು ಮಮತಾ ಕಟ್ಟಿ ಬೆಳೆಸಿದ ಆಂದೋಲನವನ್ನು ಹಣಿಯಲು ಹೋಗಿ ಮಣ್ಣು ಮುಕ್ಕಿತು. ಆದರೆ ಅಂದು ಕೈಗಾರಿಕೆಗಳ ಸ್ಥಾಪನೆಗೆ ಕೃಷಿ ಭೂಮಿಯ ಬಲವಂತದ ಸ್ವಾಧೀನವನ್ನು ವಿರೋಧಿಸಿದ ಮಮತಾ ದೀದಿ ಕಳೆದ ಹತ್ತು ವರ್ಷಗಳ ತಮ್ಮ ಆಡಳಿತದಲ್ಲಿ ಮಾಡಿದ್ದಾದರೂ ಏನು? ಕೃಷಿ ಮತ್ತು ಕೈಗಾರಿಕೆಯ ಸಮನ್ವಯ ಅರ್ಥವ್ಯವಸ್ಥೆಯೊಂದನ್ನು ಜನವಿಶ್ವಾಸದ ಅಡಿಪಾಯದ ಮೇಲೆ ಕಟ್ಟಿ ಬೆಳೆಸಬೇಕಿತ್ತಲ್ಲವೇ? ಈ ಕಾರ್ಯದಲ್ಲಿ ಅವರು ಸಂಪೂರ್ಣ ವಿಫಲರಾದರು.

ಬಂಗಾಳದ ಅರ್ಥವ್ಯವಸ್ಥೆ ಹೆಚ್ಚೂಕಡಿಮೆ ಹದಿನಾಲ್ಕು ವರ್ಷಗಳ ಹಳೆಯ ನಂದಿಗ್ರಾಮ-ಸಿಂಗೂರುಗಳಲ್ಲೇ ಹೂತು ಹೋಗಿದೆ. ನಂದಿಗ್ರಾಮ ಹೊಮ್ಮಿಸಿದ ಸವಾಲುಗಳ ನೋಟಕ್ಕೆ ನೋಟ ಬೆರೆಸಿ ನೋಡಲಿಲ್ಲ ಮಮತಾ ಆಡಳಿತ. ಮಮತಾ ದಂಡು ಮತ್ತು ದಂಡನಾಯಕರು ನಡೆಸಿದ ಭ್ರಷ್ಟಾಚಾರವನ್ನೂ ತಮ್ಮ ಕೊರಳಿಗೆ ಸುತ್ತಿಕೊಂಡಿದ್ದಾರೆ. ಪರಿವರ್ತನೆಯ ಮಂತ್ರ ಜಪಿಸಿ ಅಧಿಕಾರಕ್ಕೆ ಬಂದವರು ಮಮತಾ. ಸರ್ಕಾರದ ಪರಿವರ್ತನೆ ಆಯಿತೇ ವಿನಾ ವ್ಯವಸ್ಥೆ ಬದಲಾಗಲಿಲ್ಲ. ಹಾಗೆಂದು ಮಮತಾ ಆಡಳಿತದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎನ್ನುವುದು ತಪ್ಪಾದೀತು. ಆದರೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿಲ್ಲ. ಅದರ ಸುತ್ತ ಬೆಸೆದಿದ್ದ ಆಶೋತ್ತರಗಳು ಚಿಗಿತು ಫಲ ನೀಡಲಿಲ್ಲ. ನಿಜ, ಮಮತಾ ಆಡಳಿತ ವಿರೋಧಿ ಅಲೆಯನ್ನೇನೂ ಎದುರಿಸಿಲ್ಲ.

ಬಂಗಾಳ ಚುನಾವಣೆ: ಸೀತಾಲ್ಕುಚ್ಚಿ ಶೂಟೌಟ್ ಬಗ್ಗೆ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕರು
PC: Deccan herald

ಎರಡು ಅವಧಿಗಳ ನಂತರವೂ ಅಂತಹ ಅಲೆ ಇಲ್ಲದಿರುವುದು ಸಾಧಾರಣ ಸಂಗತಿಯೇನೂ ಅಲ್ಲ. ತಾವು ಎಡಕ್ಕಿಂತ ಹೆಚ್ಚು ಎಡ ಎಂದು ತೋರಿಸಿಕೊಂಡ ದೀದಿ ನೀತಿ ನಿರ್ಧಾರಗಳಲ್ಲಿ ಮೂಲಭೂತ ಬದಲಾವಣೆಗೆ ಕೈ ಹಾಕಲಿಲ್ಲ. ಹೀಗಾಗಿ ನಿರಾಸೆಯ ಅಂತರ್ವಾಹಿನಿ ಜನಮಾನಸದಲ್ಲಿ ಹರಿದಿರುವುದು ಹೌದು. ಅದು ಭ್ರಮನಿರಸನದ ರೂಪನ್ನು ಇನ್ನೂ ತಳೆದಿಲ್ಲವೆಂದರೆ ಮಮತಾ ಸರ್ಕಾರದ ಹಲವಾರು ಜನಪ್ರಿಯ ಕಾರ್ಯಕ್ರಮಗಳೇ ಕಾರಣ. ಎಡರಂಗವೇ ಪ್ರತಿಪಕ್ಷವಾಗಿ ಉಳಿದಿದ್ದರೆ ಮಮತಾಗೆ ಎದುರೇ ಇರುತ್ತಿರಲಿಲ್ಲ. ಆದರೆ ಎಡರಂಗ ಮತ್ತು ಕಾಂಗ್ರೆಸ್ ಉಳಿಸಿರುವ ಶೂನ್ಯವನ್ನು ಮೋದಿ ಮತ್ತು ಅಮಿತ್ ಶಾ ಅವರ ಅತ್ಯುಗ್ರ ಅಕ್ರಮಣಕಾರಿ ಹಿಂದುತ್ವ ರಾಜಕಾರಣ ಕಬಳಿಸಿದೆ.

ಎದುರಾದದ್ದನ್ನೆಲ್ಲ ಉರುಳಿಸಿ ನೆಲಸಮ ಮಾಡುವ ದೈತ್ಯ ಬುಲ್ಡೋಜರ್ ರಾಜಕಾರಣವಿದು. ಹುಟ್ಟಾ ಬಂಡಾಯಗಾರ್ತಿ ಎಂಬ ಪಟ್ಟ ಪಡೆದಿರುವ ಮಮತಾ ಅವರನ್ನೂ ಅಲ್ಲಾಡಿಸಿರುವ ದಾಳಿಯಿದು. ಬೇರುಮಟ್ಟದಲ್ಲಿ ರಾಜಕಾರಣವನ್ನು ನಿಯಂತ್ರಿಸುವ ತೋಳ್ಬಲ-ಧನಬಲದ ಕಟ್ಟಾಳುಗಳನ್ನು ತೃಣಮೂಲದಿಂದ ಸೆಳೆದುಕೊಂಡಿದೆ ಬಿಜೆಪಿ. ಶಾರದ-ನಾರದ ಹಗರಣಗಳಲ್ಲಿ ಕಳಂಕಿತರಾದ ಹಲವು ತೃಣಮೂಲ ತಲೆಯಾಳುಗಳು ಇಂದು ಬಿಜೆಪಿ ಎಂಬ ’ಗಂಗೆ’ಯಲ್ಲಿ ಮುಳುಗಿ ’ಪವಿತ್ರ’ರಾಗಿದ್ದಾರೆ. ಹೀಗಾಗಿ ಬಿಜೆಪಿ ಕೇವಲ ’ಕಟ್ ಮನಿ’ ಭ್ರಷ್ಟಾಚಾರದ ವಿರುದ್ಧ ಕತ್ತಿ ಝಳಪಿಸುತ್ತಿದೆಯೇ ವಿನಾ ಶಾರದ- ನಾರದ ಚಿಟ್ ಫಂಡ್ ಹಗರಣಗಳ ಕುರಿತು ತುಟಿ ಹೊಲಿದುಕೊಂಡಿದೆ.

ಬೀಡುಬೀಸು ಪಕ್ಷಾಂತರ, ಹಣದಶಕ್ತಿಯ ಅಬ್ಬರ, ಕೇಂದ್ರದ ಅಧಿಕಾರದ ದಂಡದ ಯಥೇಚ್ಛ ಬಳಕೆ, ಕೋಮುವಾದಿ ಧ್ರುವೀಕರಣ ಹಾಗೂ ಮಿಥ್ಯಾಪ್ರಚಾರದ ಹಲವು ಹತಾರುಗಳನ್ನು ಝಳಪಿಸುತ್ತ ಬಿಜೆಪಿ ಬಂಗಾಳಕ್ಕೆ ಲಗ್ಗೆ ಹಾಕಿ ವರ್ಷಗಳೇ ಉರುಳಿವೆ. ತನ್ನ ಸನ್ನಾಹದಲ್ಲಿ ಅದು ಕಣ್ಣುಕುಕ್ಕುವ ಯಶಸ್ಸನ್ನು ಕಂಡಿದೆ ಕೂಡ. ಇಂದು ಬಂಗಾಳದ ಅಧಿಕಾರದ ಗದ್ದುಗೆಯ ಮೇಲೆ ಕೈಯಿರಿಸಿ ನಿಂತೀತೆಂದು ಹತ್ತು ವರ್ಷಗಳ ಹಿಂದೆ ಯಾರೂ ಊಹಿಸಿರಲಿಲ್ಲ.

ಇಂತಹ ಬಿಜೆಪಿ ಪ್ರವೇಶದ ನಂತರ ಪಶ್ಚಿಮ ಬಂಗಾಳದ ಬದಲಾದ ರಾಜಕಾರಣದ ವಿನ್ಯಾಸದ ಸುಳಿವುಗಳು ನಂದಿಗ್ರಾಮದ ಮಮತಾ ಬ್ಯಾನರ್ಜಿ-ಸುವೇಂದು ಅಧಿಕಾರಿ ಹಣಾಹಣಿಯಲ್ಲಿ ಕಾಣಸಿಗುತ್ತವೆ. ನಂದೀಗ್ರಾಮದ ಪರಿಶಿಷ್ಟ ಜಾತಿ-ಪಂಗಡಗಳ ಜನಸಂಖ್ಯೆಯ ಪ್ರಮಾಣ ಶೇ.16.5. ಈ ಸಮುದಾಯಗಳನ್ನೂ ಒಡೆದಿರುವ ಬಿಜೆಪಿ, ಹಿಂದೂ-ಮುಸ್ಲಿಮ್ ಧ್ರುವೀಕರಣ ಮತ್ತು ಭಾರೀ ಪ್ರಮಾಣದ ಪಕ್ಷಾಂತರದ ಮೂಲಕ ನಂದೀಗ್ರಾಮವನ್ನು ಗೆಲ್ಲಲು ಹೊರಟಿದೆ. ಈ ಮಾತು ಇಡೀ ಪಶ್ಚಿಮ ಬಂಗಾಳಕ್ಕೆ ಅಕ್ಷರಶಃ ವಿಸ್ತರಿಸಲಿದೆ. ನಂದಿಗ್ರಾಮದ ಕಂಪನಗಳು ರಾಜ್ಯಾದ್ಯಂತ ಹರಿಯಲಿವೆ. ಚುನಾವಣಾ ಫಲಿತಾಂಶಗಳ ನಂತರವೂ ಮುಂದುವರೆಯಲಿವೆ.

ಭಾರತದ ಸಹಬಾಳ್ವೆಯ ಆತ್ಮದ ಅಳಿವು ಉಳಿವಿಗಾಗಿ ನಡೆದಿರುವ ಬಂಗಾಳದ ಸಮರದ ಆತ್ಮ ನಂದಿಗ್ರಾಮ. ಇಲ್ಲಿ ಮಮತಾ ಸೋತರೆ ಈ ಉತ್ಪಾತದ ಕಂಪನಗಳು ದೇಶದ ಜನತಂತ್ರವನ್ನು ಅಸ್ಥಿರಗೊಳಿಸುವುದು ನಿಶ್ಚಿತ. ಬಿಜೆಪಿ ಬಯಸುತ್ತಿರುವ ಪ್ರತಿಪಕ್ಷಮುಕ್ತ ಭಾರತ ಬಾಗಿಲು ಬಡಿಯುತ್ತಿದೆ.


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...