Homeಅಂಕಣಗಳುಬದುಕು ಮತ್ತು ಅನುಭವಕ್ಕೆ ಅಲ್ಪನಿಷ್ಠೆಯ ಭೈರಪ್ಪನ ಕುರಿತು 

ಬದುಕು ಮತ್ತು ಅನುಭವಕ್ಕೆ ಅಲ್ಪನಿಷ್ಠೆಯ ಭೈರಪ್ಪನ ಕುರಿತು 

- Advertisement -
- Advertisement -

ಗೌರಿ ಲಂಕೇಶ್|

ಭೈರಪ್ಪನವರ ಸಾಹಿತ್ಯ ಮತ್ತು ಜೀವನ ದರ್ಶನಗಳ ಬಗ್ಗೆ ವಸ್ತುನಿಷ್ಠವಾಗಿ ಚರ್ಚಿಸುವ ಅಗತ್ಯತೆ ಇದ್ದೇ ಇದೆ. ಯಾಕೆಂದರೆ ಭೈರಪ್ಪನವರ ಸಾಹಿತ್ಯಿಕ ಜನಪ್ರಿಯತೆಯನ್ನೇ ಅವರು ಎತ್ತಿ ಹಿಡಿಯುವ ಬ್ರಾಹ್ಮಣೀಯ ಮೌಲ್ಯಗಳಿಗೆ ಸಿಗುತ್ತಿರುವ ಜನಮನ್ನಣೆ ಎಂದು ಕೆಲವರು ಅರ್ಥೈಸುತ್ತಿದ್ದಾರೆ. ಇಲ್ಲಿ ಆರಂಭದಲ್ಲೇ ಒಂದೆರಡು ವಿಷಯಗಳನ್ನು ಸ್ಪಷ್ಟಪಡಿಸುವ ಅಗತ್ಯವಿದೆ. ನಾನು ಭೈರಪ್ಪನವರ ಸಾಹಿತ್ಯಿಕ ಪ್ರತಿಭೆಯನ್ನು ನಿರಾಕರಿಸುವುದಿಲ್ಲ. ಅವರು ಬಳಸುವ ಭಾಷೆ ನನಗೆ ವಿಭಿನ್ನವಾಗಿ ಕಂಡರೂ ಅವರು ಪಾತ್ರಗಳನ್ನು, ಸಂದರ್ಭಗಳನ್ನು ಮತ್ತು ಸನ್ನಿವೇಶಗಳನ್ನು ಸಮಗ್ರವಾಗಿ ಚಿತ್ರಿಸುವಲ್ಲಿ ಎಷ್ಟು ಯಶಸ್ವಿಯಾಗುತ್ತಾರೆಂದರೆ ಅವರ ಕೃತಿಗಳು ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ಅಂತಹ ಕೃತಿಗಳಲ್ಲಿ ಅವರ `ಗೃಹಭಂಗ’ ಒಂದು. ಇತ್ತೀಚೆಗೆ ನಾನು ಮತ್ತೊಮ್ಮೆ ಇದನ್ನು ಓದಿದಾಗ ಬೆರಗಾಗಿದ್ದೆ. ಇಂತಹ ಉತ್ತಮ ಕೃತಿ ಬರೆದ ಭೈರಪ್ಪನವರು ಅದು ಹೇಗೆ `ಕವಲು’ ತರಹದ ಕೆಟ್ಟ ಕಾದಂಬರಿ ಬರೆಯಲು ಸಾಧ್ಯ ಎಂದು ನನಗೆ ಅಚ್ಚರಿ ಆಗಿತ್ತು.

ಇರಲಿ, ಭೈರಪ್ಪನವರ ಸಮಗ್ರ ಸಾಹಿತ್ಯಕ್ಕೆ ಬರುವುದಾದರೆ ಅವರ ಕೃತಿಗಳನ್ನು ಓದಿ ಮುಗಿಸಿದನಂತರ ಸಾಮಾನ್ಯ ಓದುಗರಲ್ಲಿ ಒಂದು ಒಳ್ಳೆಯ ಕತೆಯನ್ನು ಓದಿದ ಅನುಭವವಾಗುತ್ತದೆಯೇ ಹೊರತು ಆ ಕತೆಯ ಆಳದಲ್ಲಿ ಅಡಗಿರುವ ಅವರ ಜನವಿರೋಧಿ ಮತ್ತು ಮಹಿಳಾ ವಿರೋಧಿ ನಿಲುವುಗಳಾಗಲಿ ಅಥವಾ ಪುರೋಹಿತಶಾಹಿಯನ್ನು ಎತ್ತಿಹಿಡಿಯುವ ಅವರ ಸಿದ್ಧಾಂತವಾಗಲಿ ಓದುಗರ ಗ್ರಹಿಕೆಗೆ ಸಿಗುವುದಿಲ್ಲ. ಅದಕ್ಕೆ ಉತ್ತಮ ಉದಾಹರಣೆ `ವಂಶವೃಕ್ಷ.’
`ವಂಶವೃಕ್ಷ’ ಕಾದಂಬರಿಯಲ್ಲಿ `ಕವಲು’ ಕಾದಂಬರಿಯಲ್ಲಿರುವಂತಹ ಪೇಲವ ಪಾತ್ರಗಳಾಗಲಿ, ಅಸೂಕ್ಷ್ಮ ಭಾವಸಂಬಂಧಗಳಾಗಲಿ, ಸರಳ ರೇಖೆಯಂಥ ಕಾರ್ಡ್‍ಬೋರ್ಡ್ ವ್ಯಕ್ತಿತ್ವಗಳಾಗಲೀ ಇಲ್ಲ. ಆದ್ದರಿಂದ ಮೇಲುನೋಟಕ್ಕೆ ಇದೊಂದು ಒಳ್ಳೆಯ ಕೃತಿಯಂತೆ ಸಾಮಾನ್ಯ ಓದುಗರಿಗೆ ಭಾಸವಾಗುತ್ತದೆ. ಅದರಲ್ಲೂ ಕಾತ್ಯಾಯಿನಿ ಎಂಬ ಯುವ ವಿಧವೆ ಬ್ರಾಹ್ಮಣೀಯ ಕಟ್ಟುಪಾಡುಗಳನ್ನು ವಿರೋಧಿಸಿ ಹೊಸ ಬದುಕು ಕಂಡುಕೊಳ್ಳುವ ಪ್ರಯತ್ನವೂ ಕ್ರಾಂತಿಕಾರಿಯಾಗಿಯೇ ಕಾಣಿಸುತ್ತದೆ. ಅಷ್ಟೇ ಮುಖ್ಯವಾಗಿ ಕಾದಂಬರಿಯ ಅಂತ್ಯದಲ್ಲಿ ಆಕೆಯ ಸಂಪ್ರದಾಯಸ್ಥ ಮಾವ ಶ್ರೋತ್ರಿಗೇ ತನ್ನ ಹುಟ್ಟು ಪರಿಶುದ್ಧವಾಗಿರಲಿಲ್ಲವಾದ್ದರಿಂದ ವಂಶ ಎಂಬ ವೃಕ್ಷದ ಪವಿತ್ರತೆಯೆ ಅರ್ಥಹೀನವಾಗಿ ಕಾಣಿಸುವುದೂ ಚಾರಿತ್ರಿಕವಾಗಿ ಭಾಸವಾಗುತ್ತದೆ. ಆದರೆ ಆಳದಲ್ಲಿ `ವಂಶವೃಕ್ಷ’ ಕಾದಂಬರಿ ಏನನ್ನು ಹೇಳುತ್ತಿದೆ ಎಂದು ನೋಡುವುದು ಮುಖ್ಯವಾಗುತ್ತದೆ, ಯಾಕೆಂದರೆ ಬ್ರಾಹ್ಮಣಿಕೆಯ ಕಟ್ಟುಪಾಡುಗಳನ್ನು ವಿರೋಧಿಸುವ ಕಾತ್ಯಾಯಿನಿ `ಸತತ ಗರ್ಭಪಾತಕ್ಕೆ’ ತುತ್ತಾಗುತ್ತಾಳೆ; ತಾನು ತಪ್ಪು ಮಾಡಿದೆ, ಪಾಪ ಮಾಡಿದೆ ಎಂಬ ಕೊರಗಿನಲ್ಲೇ ಸಾಯುತ್ತಾಳೆ. ಅದರರ್ಥ, ಮಹಿಳೆಯರು ಸಂಪ್ರದಾಯವನ್ನು ಮುರಿದರೆ, ಕಟ್ಟುಪಾಡುಗಳನ್ನು ವಿರೋಧಿಸಿದರೆ ಅವರು ಎಂದೂ ಸಂತೋಷದಿಂದಿರಲು ಸಾಧ್ಯವಿಲ್ಲ ಎಂಬ ನಿಲುವನ್ನು ಭೈರಪ್ಪ ಚೆಂದವಾಗಿ ರೂಪಿಸಿದ್ದಾರೆ ಎಂದಲ್ಲವೆ?

ಹಾಗೆಯೇ ಆಕೆಯ ಮಾವ ಶ್ರೋತ್ರಿಗೆ ತಾನು ಕಾತ್ಯಾಯಿನಿಗೆ ಅನ್ಯಾಯ ಮಾಡಿದೆ ಎಂಬ ಭಾವನೆ ಕಾಡುತ್ತದೆಯೇ ಹೊರತು ಸಂಪ್ರದಾಯ, ವಂಶದ ಪವಿತ್ರತೆ, ಕಟ್ಟುಪಾಡುಗಳೆಲ್ಲ ನಿರುಪಯುಕ್ತ ಎಂದೆನಿಸುವುದೇ ಇಲ್ಲ. ಯಾಕೆಂದರೆ ಅವನು ಅದ್ಯಾವುಗಳನ್ನು ವಿರೋಧಿಸುವ ಗೋಜಿಗೇ ಹೋಗುವುದಿಲ್ಲ. ಬದಲಾಗಿ ಅದೇ ಸಂಪ್ರದಾಯಕ್ಕೆ ಕಟ್ಟುಬಿದ್ದು ಸಾಯುವ ಹೊಸ್ತಿಲಲ್ಲಿರುವ ಕಾತ್ಯಾಯಿನಿಯ ಬಾಯಿಗೆ ಗಂಗಾಜಲವನ್ನು ಹಾಕಿಸುತ್ತಾನೆ ಮತ್ತು ಸನ್ಯಾಸವನ್ನು ಅರಸುತ್ತಾ ಅದ್ಯಾವುದೋ `ಪುಣ್ಯ’ ಕ್ಷೇತ್ರಕ್ಕೆ ಹೊರಡುತ್ತಾನೆ. ಅಂದರೆ ಕಾತ್ಯಾಯಿನಿ ಮತ್ತು ಶ್ರೋತ್ರಿ- ಇಬ್ಬರಲ್ಲೂ ಬ್ರಾಹ್ಮಣಿಕೆ ಕಟ್ಟುಪಾಡುಗಳನ್ನು ಮೀರಿದ್ದಕ್ಕೆ ಪಾಪಪ್ರಜ್ಞೆ ಹುಟ್ಟುತ್ತದೆಯೇ ವಿನಃ ವಿಮೋಚನಾ ಭಾವವಲ್ಲ. ಆದ್ದರಿಂದ ಸಾಹಿತ್ಯಿಕವಾಗಿ `ವಂಶವೃಕ್ಷ’ ಕುರಿತ ವಿಮರ್ಶೆ ಏನೇ ಇದ್ದರೂ ಅದರ ತಾತ್ವಿಕ ದರ್ಶನ ಈ ಬ್ರಾಹ್ಮಣೀಯ ಕಟ್ಟುಪಾಡನ್ನು ಮೀರುವುದರಿಂದ ಉಂಟಾಗುವ `ಪಾಪಪ್ರಜ್ಞೆ’ಯೇ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.

ಈ ಬ್ರಾಹ್ಮಣಿಕೆಯ ಎತ್ತಿಹಿಡಿಯುವಿಕೆ ಕೇವಲ `ವಂಶವೃಕ್ಷ’ದಲ್ಲಿ ಮಾತ್ರ ಸಂಭವಿಸುವುದಿಲ್ಲ. ಭೈರಪ್ಪನವರ `ದಾಟು’ ಕಾದಂಬರಿಯಲ್ಲೂ ಅಬ್ರಾಹ್ಮಣನನ್ನು ಸತ್ಯಭಾಮೆ ಪ್ರೀತಿಸಿದ್ದಕ್ಕೆ ಇಡೀ ಹಳ್ಳಿಯೇ ಸರ್ವನಾಶವಾಗುತ್ತದೆ. `ತಬ್ಬಲಿಯು ನೀನಾದೆ ಮಗನೆ’ಯಲ್ಲೂ ನಾಯಕ ತಬ್ಬಲಿಯಾಗುವುದು ಹಿಂದೂ ಧರ್ಮದ ಕಟ್ಟಳೆಯನ್ನು ಮೀರಿದ್ದಕ್ಕೆ. ಹೀಗೆ ಭೈರಪ್ಪನವರು ಕಾತ್ಯಾಯಿನಿಯರ ಮತ್ತು ಸತ್ಯಭಾಮೆಯರ `ಮಹಿಳಾ ಪ್ರಜ್ಞೆ’ಯನ್ನು ಸೋಲಿಸುತ್ತಾ ಬ್ರಾಹ್ಮಣಿಕೆಯ ವಿಜಯದ ಕಥೆಗಳನ್ನೇ ಹೇಳುತ್ತಾ ಬಂದಿದ್ದಾರೆ.

ಭೈರಪ್ಪನವರು ಹಲವಾರು ಬಾರಿ ಸಾಹಿತ್ಯ ಸೃಷ್ಟಿಯ ಬಗ್ಗೆ ಮಾತನಾಡುವಾಗ ತಾವು ಸಿದ್ಧಾಂತಕ್ಕಿಂತ `ಸತ್ಯ ಮತ್ತು ಸೌಂದರ್ಯ’ಕ್ಕೆ ಬದ್ಧ ಎಂದು ಹೇಳಿದ್ದಾರೆ. ಮಾತ್ರವಲ್ಲ ಲೇಖಕ ಸಿದ್ಧಾಂತಕ್ಕೆ ಬದ್ಧನಾದಾಗ ಉತ್ತಮ ಸಾಹಿತ್ಯ ಸೃಷ್ಟಿಯಾಗುವುದಿಲ್ಲ ಎಂದೆಲ್ಲ ಪ್ರತಿಪಾದಿಸಿದ್ದಾರೆ.
ಆದರೆ ಭೈರಪ್ಪನವರು `ಗೃಹಭಂಗ’ ಮತ್ತು `ಪರ್ವ’ ಎಂಬ ಎರಡು ಕೃತಿಗಳನ್ನು ಬಿಟ್ಟರೆ ಮಿಕ್ಕಂತೆ ಬರೆದಿರುವುದೆಲ್ಲ ತಾವು ನಂಬಿರುವ ಸಿದ್ಧಾಂತದ ಪ್ರಚಾರಕ್ಕಾಗಿಯೇ. ಆದ್ದರಿಂದಲೇ ಅವೆಲ್ಲ ಕೆಟ್ಟ ಕೃತಿಗಳಾಗಿವೆ. ಆರೆಸ್ಸೆಸ್ ಸಿದ್ಧಾಂತ ಮಾತ್ರವಲ್ಲದೆ ಆ ಸಂಘಟನೆಯ ವೈಭವೀಕರಣವನ್ನೇ ವಸ್ತುವಾಗಿಟ್ಟುಕೊಂಡ ಅವರ ಮೊದಲ ಕಾದಂಬರಿಯಾದ `ಗೃಹಶ್ರೀ’ಯಿಂದ ಹಿಡಿದು ಇತ್ತೀಚೆಗೆ ಮುಸ್ಲಿಮರನ್ನು ತುಚ್ಛವಾಗಿ ಚಿತ್ರಿಸಲೆಂದೇ ಬರೆದ `ಆವರಣ’ ಮತ್ತು ಸ್ವಾಭಿಮಾನಿ ಮಹಿಳೆಯರ ಬಗ್ಗೆ ಬ್ರಾಹ್ಮಣೀಯ ಪುರುಷಾಧಿಪತ್ಯದ ತಿರಸ್ಕಾರದಿಂದ ಹುಟ್ಟಿಕೊಂಡ `ಕವಲು’ ಎಲ್ಲವೂ ಅವರು ನಂಬಿರುವ ಹಿಂದೂತ್ವ ಸಿದ್ಧಾಂತಹ ಕರಪತ್ರಗಳಷ್ಟೇ ಎಂದರೆ ತಪ್ಪಾಗಲಾರದು.

ಭೈರಪ್ಪನವರ ಈ ಮತಾಂಧಕ್ಕೆ ಕಾರಣ ಇಲ್ಲದಿಲ್ಲ. ಅವರು ತಮ್ಮ ಬದುಕು ಮತ್ತು ಅನುಭವಕ್ಕೆ ನಿಷ್ಠರಾಗಿ ಬರೆದಾಗ `ಗೃಹಭಂಗ’ ಸೃಷ್ಟಿಯಾಗುತ್ತದೆ. ಯಾವಾಗ ಅವರು ಬದುಕು ಮತ್ತು ಅನುಭವಕ್ಕೆ ನಿಷ್ಠರಾಗದೆ ತಮ್ಮ ಮೆದುಳು ಮತ್ತು ಹೃದಯದಲ್ಲಿ ಇರುವ ಮನು ಮಹರ್ಷಿಯನ್ನು ಆವಾಹಿಸಿಕೊಳ್ಳುತ್ತಾರೋ (ಅನಂತಮೂರ್ತಿಯವರು ಹೇಳಿದ್ದಂತೆ) ಹೈಸ್ಕೂಲ್ ಮಟ್ಟದ ಡಿಬೆಟ್ ತರಹ ಬಾಲಿಶ ಸ್ವರೂಪದ, ಯಾವುದೇ ಸಾಹಿತ್ಯಿಕ ಮೌಲ್ಯವನ್ನು ಹೊಂದಿರದ ಕೃತಿಗಳನ್ನು ಸೃಷ್ಟಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...