Homeಅಂಕಣಗಳುಬದುಕು ಮತ್ತು ಅನುಭವಕ್ಕೆ ಅಲ್ಪನಿಷ್ಠೆಯ ಭೈರಪ್ಪನ ಕುರಿತು 

ಬದುಕು ಮತ್ತು ಅನುಭವಕ್ಕೆ ಅಲ್ಪನಿಷ್ಠೆಯ ಭೈರಪ್ಪನ ಕುರಿತು 

- Advertisement -
- Advertisement -

ಗೌರಿ ಲಂಕೇಶ್|

ಭೈರಪ್ಪನವರ ಸಾಹಿತ್ಯ ಮತ್ತು ಜೀವನ ದರ್ಶನಗಳ ಬಗ್ಗೆ ವಸ್ತುನಿಷ್ಠವಾಗಿ ಚರ್ಚಿಸುವ ಅಗತ್ಯತೆ ಇದ್ದೇ ಇದೆ. ಯಾಕೆಂದರೆ ಭೈರಪ್ಪನವರ ಸಾಹಿತ್ಯಿಕ ಜನಪ್ರಿಯತೆಯನ್ನೇ ಅವರು ಎತ್ತಿ ಹಿಡಿಯುವ ಬ್ರಾಹ್ಮಣೀಯ ಮೌಲ್ಯಗಳಿಗೆ ಸಿಗುತ್ತಿರುವ ಜನಮನ್ನಣೆ ಎಂದು ಕೆಲವರು ಅರ್ಥೈಸುತ್ತಿದ್ದಾರೆ. ಇಲ್ಲಿ ಆರಂಭದಲ್ಲೇ ಒಂದೆರಡು ವಿಷಯಗಳನ್ನು ಸ್ಪಷ್ಟಪಡಿಸುವ ಅಗತ್ಯವಿದೆ. ನಾನು ಭೈರಪ್ಪನವರ ಸಾಹಿತ್ಯಿಕ ಪ್ರತಿಭೆಯನ್ನು ನಿರಾಕರಿಸುವುದಿಲ್ಲ. ಅವರು ಬಳಸುವ ಭಾಷೆ ನನಗೆ ವಿಭಿನ್ನವಾಗಿ ಕಂಡರೂ ಅವರು ಪಾತ್ರಗಳನ್ನು, ಸಂದರ್ಭಗಳನ್ನು ಮತ್ತು ಸನ್ನಿವೇಶಗಳನ್ನು ಸಮಗ್ರವಾಗಿ ಚಿತ್ರಿಸುವಲ್ಲಿ ಎಷ್ಟು ಯಶಸ್ವಿಯಾಗುತ್ತಾರೆಂದರೆ ಅವರ ಕೃತಿಗಳು ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ಅಂತಹ ಕೃತಿಗಳಲ್ಲಿ ಅವರ `ಗೃಹಭಂಗ’ ಒಂದು. ಇತ್ತೀಚೆಗೆ ನಾನು ಮತ್ತೊಮ್ಮೆ ಇದನ್ನು ಓದಿದಾಗ ಬೆರಗಾಗಿದ್ದೆ. ಇಂತಹ ಉತ್ತಮ ಕೃತಿ ಬರೆದ ಭೈರಪ್ಪನವರು ಅದು ಹೇಗೆ `ಕವಲು’ ತರಹದ ಕೆಟ್ಟ ಕಾದಂಬರಿ ಬರೆಯಲು ಸಾಧ್ಯ ಎಂದು ನನಗೆ ಅಚ್ಚರಿ ಆಗಿತ್ತು.

ಇರಲಿ, ಭೈರಪ್ಪನವರ ಸಮಗ್ರ ಸಾಹಿತ್ಯಕ್ಕೆ ಬರುವುದಾದರೆ ಅವರ ಕೃತಿಗಳನ್ನು ಓದಿ ಮುಗಿಸಿದನಂತರ ಸಾಮಾನ್ಯ ಓದುಗರಲ್ಲಿ ಒಂದು ಒಳ್ಳೆಯ ಕತೆಯನ್ನು ಓದಿದ ಅನುಭವವಾಗುತ್ತದೆಯೇ ಹೊರತು ಆ ಕತೆಯ ಆಳದಲ್ಲಿ ಅಡಗಿರುವ ಅವರ ಜನವಿರೋಧಿ ಮತ್ತು ಮಹಿಳಾ ವಿರೋಧಿ ನಿಲುವುಗಳಾಗಲಿ ಅಥವಾ ಪುರೋಹಿತಶಾಹಿಯನ್ನು ಎತ್ತಿಹಿಡಿಯುವ ಅವರ ಸಿದ್ಧಾಂತವಾಗಲಿ ಓದುಗರ ಗ್ರಹಿಕೆಗೆ ಸಿಗುವುದಿಲ್ಲ. ಅದಕ್ಕೆ ಉತ್ತಮ ಉದಾಹರಣೆ `ವಂಶವೃಕ್ಷ.’
`ವಂಶವೃಕ್ಷ’ ಕಾದಂಬರಿಯಲ್ಲಿ `ಕವಲು’ ಕಾದಂಬರಿಯಲ್ಲಿರುವಂತಹ ಪೇಲವ ಪಾತ್ರಗಳಾಗಲಿ, ಅಸೂಕ್ಷ್ಮ ಭಾವಸಂಬಂಧಗಳಾಗಲಿ, ಸರಳ ರೇಖೆಯಂಥ ಕಾರ್ಡ್‍ಬೋರ್ಡ್ ವ್ಯಕ್ತಿತ್ವಗಳಾಗಲೀ ಇಲ್ಲ. ಆದ್ದರಿಂದ ಮೇಲುನೋಟಕ್ಕೆ ಇದೊಂದು ಒಳ್ಳೆಯ ಕೃತಿಯಂತೆ ಸಾಮಾನ್ಯ ಓದುಗರಿಗೆ ಭಾಸವಾಗುತ್ತದೆ. ಅದರಲ್ಲೂ ಕಾತ್ಯಾಯಿನಿ ಎಂಬ ಯುವ ವಿಧವೆ ಬ್ರಾಹ್ಮಣೀಯ ಕಟ್ಟುಪಾಡುಗಳನ್ನು ವಿರೋಧಿಸಿ ಹೊಸ ಬದುಕು ಕಂಡುಕೊಳ್ಳುವ ಪ್ರಯತ್ನವೂ ಕ್ರಾಂತಿಕಾರಿಯಾಗಿಯೇ ಕಾಣಿಸುತ್ತದೆ. ಅಷ್ಟೇ ಮುಖ್ಯವಾಗಿ ಕಾದಂಬರಿಯ ಅಂತ್ಯದಲ್ಲಿ ಆಕೆಯ ಸಂಪ್ರದಾಯಸ್ಥ ಮಾವ ಶ್ರೋತ್ರಿಗೇ ತನ್ನ ಹುಟ್ಟು ಪರಿಶುದ್ಧವಾಗಿರಲಿಲ್ಲವಾದ್ದರಿಂದ ವಂಶ ಎಂಬ ವೃಕ್ಷದ ಪವಿತ್ರತೆಯೆ ಅರ್ಥಹೀನವಾಗಿ ಕಾಣಿಸುವುದೂ ಚಾರಿತ್ರಿಕವಾಗಿ ಭಾಸವಾಗುತ್ತದೆ. ಆದರೆ ಆಳದಲ್ಲಿ `ವಂಶವೃಕ್ಷ’ ಕಾದಂಬರಿ ಏನನ್ನು ಹೇಳುತ್ತಿದೆ ಎಂದು ನೋಡುವುದು ಮುಖ್ಯವಾಗುತ್ತದೆ, ಯಾಕೆಂದರೆ ಬ್ರಾಹ್ಮಣಿಕೆಯ ಕಟ್ಟುಪಾಡುಗಳನ್ನು ವಿರೋಧಿಸುವ ಕಾತ್ಯಾಯಿನಿ `ಸತತ ಗರ್ಭಪಾತಕ್ಕೆ’ ತುತ್ತಾಗುತ್ತಾಳೆ; ತಾನು ತಪ್ಪು ಮಾಡಿದೆ, ಪಾಪ ಮಾಡಿದೆ ಎಂಬ ಕೊರಗಿನಲ್ಲೇ ಸಾಯುತ್ತಾಳೆ. ಅದರರ್ಥ, ಮಹಿಳೆಯರು ಸಂಪ್ರದಾಯವನ್ನು ಮುರಿದರೆ, ಕಟ್ಟುಪಾಡುಗಳನ್ನು ವಿರೋಧಿಸಿದರೆ ಅವರು ಎಂದೂ ಸಂತೋಷದಿಂದಿರಲು ಸಾಧ್ಯವಿಲ್ಲ ಎಂಬ ನಿಲುವನ್ನು ಭೈರಪ್ಪ ಚೆಂದವಾಗಿ ರೂಪಿಸಿದ್ದಾರೆ ಎಂದಲ್ಲವೆ?

ಹಾಗೆಯೇ ಆಕೆಯ ಮಾವ ಶ್ರೋತ್ರಿಗೆ ತಾನು ಕಾತ್ಯಾಯಿನಿಗೆ ಅನ್ಯಾಯ ಮಾಡಿದೆ ಎಂಬ ಭಾವನೆ ಕಾಡುತ್ತದೆಯೇ ಹೊರತು ಸಂಪ್ರದಾಯ, ವಂಶದ ಪವಿತ್ರತೆ, ಕಟ್ಟುಪಾಡುಗಳೆಲ್ಲ ನಿರುಪಯುಕ್ತ ಎಂದೆನಿಸುವುದೇ ಇಲ್ಲ. ಯಾಕೆಂದರೆ ಅವನು ಅದ್ಯಾವುಗಳನ್ನು ವಿರೋಧಿಸುವ ಗೋಜಿಗೇ ಹೋಗುವುದಿಲ್ಲ. ಬದಲಾಗಿ ಅದೇ ಸಂಪ್ರದಾಯಕ್ಕೆ ಕಟ್ಟುಬಿದ್ದು ಸಾಯುವ ಹೊಸ್ತಿಲಲ್ಲಿರುವ ಕಾತ್ಯಾಯಿನಿಯ ಬಾಯಿಗೆ ಗಂಗಾಜಲವನ್ನು ಹಾಕಿಸುತ್ತಾನೆ ಮತ್ತು ಸನ್ಯಾಸವನ್ನು ಅರಸುತ್ತಾ ಅದ್ಯಾವುದೋ `ಪುಣ್ಯ’ ಕ್ಷೇತ್ರಕ್ಕೆ ಹೊರಡುತ್ತಾನೆ. ಅಂದರೆ ಕಾತ್ಯಾಯಿನಿ ಮತ್ತು ಶ್ರೋತ್ರಿ- ಇಬ್ಬರಲ್ಲೂ ಬ್ರಾಹ್ಮಣಿಕೆ ಕಟ್ಟುಪಾಡುಗಳನ್ನು ಮೀರಿದ್ದಕ್ಕೆ ಪಾಪಪ್ರಜ್ಞೆ ಹುಟ್ಟುತ್ತದೆಯೇ ವಿನಃ ವಿಮೋಚನಾ ಭಾವವಲ್ಲ. ಆದ್ದರಿಂದ ಸಾಹಿತ್ಯಿಕವಾಗಿ `ವಂಶವೃಕ್ಷ’ ಕುರಿತ ವಿಮರ್ಶೆ ಏನೇ ಇದ್ದರೂ ಅದರ ತಾತ್ವಿಕ ದರ್ಶನ ಈ ಬ್ರಾಹ್ಮಣೀಯ ಕಟ್ಟುಪಾಡನ್ನು ಮೀರುವುದರಿಂದ ಉಂಟಾಗುವ `ಪಾಪಪ್ರಜ್ಞೆ’ಯೇ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.

ಈ ಬ್ರಾಹ್ಮಣಿಕೆಯ ಎತ್ತಿಹಿಡಿಯುವಿಕೆ ಕೇವಲ `ವಂಶವೃಕ್ಷ’ದಲ್ಲಿ ಮಾತ್ರ ಸಂಭವಿಸುವುದಿಲ್ಲ. ಭೈರಪ್ಪನವರ `ದಾಟು’ ಕಾದಂಬರಿಯಲ್ಲೂ ಅಬ್ರಾಹ್ಮಣನನ್ನು ಸತ್ಯಭಾಮೆ ಪ್ರೀತಿಸಿದ್ದಕ್ಕೆ ಇಡೀ ಹಳ್ಳಿಯೇ ಸರ್ವನಾಶವಾಗುತ್ತದೆ. `ತಬ್ಬಲಿಯು ನೀನಾದೆ ಮಗನೆ’ಯಲ್ಲೂ ನಾಯಕ ತಬ್ಬಲಿಯಾಗುವುದು ಹಿಂದೂ ಧರ್ಮದ ಕಟ್ಟಳೆಯನ್ನು ಮೀರಿದ್ದಕ್ಕೆ. ಹೀಗೆ ಭೈರಪ್ಪನವರು ಕಾತ್ಯಾಯಿನಿಯರ ಮತ್ತು ಸತ್ಯಭಾಮೆಯರ `ಮಹಿಳಾ ಪ್ರಜ್ಞೆ’ಯನ್ನು ಸೋಲಿಸುತ್ತಾ ಬ್ರಾಹ್ಮಣಿಕೆಯ ವಿಜಯದ ಕಥೆಗಳನ್ನೇ ಹೇಳುತ್ತಾ ಬಂದಿದ್ದಾರೆ.

ಭೈರಪ್ಪನವರು ಹಲವಾರು ಬಾರಿ ಸಾಹಿತ್ಯ ಸೃಷ್ಟಿಯ ಬಗ್ಗೆ ಮಾತನಾಡುವಾಗ ತಾವು ಸಿದ್ಧಾಂತಕ್ಕಿಂತ `ಸತ್ಯ ಮತ್ತು ಸೌಂದರ್ಯ’ಕ್ಕೆ ಬದ್ಧ ಎಂದು ಹೇಳಿದ್ದಾರೆ. ಮಾತ್ರವಲ್ಲ ಲೇಖಕ ಸಿದ್ಧಾಂತಕ್ಕೆ ಬದ್ಧನಾದಾಗ ಉತ್ತಮ ಸಾಹಿತ್ಯ ಸೃಷ್ಟಿಯಾಗುವುದಿಲ್ಲ ಎಂದೆಲ್ಲ ಪ್ರತಿಪಾದಿಸಿದ್ದಾರೆ.
ಆದರೆ ಭೈರಪ್ಪನವರು `ಗೃಹಭಂಗ’ ಮತ್ತು `ಪರ್ವ’ ಎಂಬ ಎರಡು ಕೃತಿಗಳನ್ನು ಬಿಟ್ಟರೆ ಮಿಕ್ಕಂತೆ ಬರೆದಿರುವುದೆಲ್ಲ ತಾವು ನಂಬಿರುವ ಸಿದ್ಧಾಂತದ ಪ್ರಚಾರಕ್ಕಾಗಿಯೇ. ಆದ್ದರಿಂದಲೇ ಅವೆಲ್ಲ ಕೆಟ್ಟ ಕೃತಿಗಳಾಗಿವೆ. ಆರೆಸ್ಸೆಸ್ ಸಿದ್ಧಾಂತ ಮಾತ್ರವಲ್ಲದೆ ಆ ಸಂಘಟನೆಯ ವೈಭವೀಕರಣವನ್ನೇ ವಸ್ತುವಾಗಿಟ್ಟುಕೊಂಡ ಅವರ ಮೊದಲ ಕಾದಂಬರಿಯಾದ `ಗೃಹಶ್ರೀ’ಯಿಂದ ಹಿಡಿದು ಇತ್ತೀಚೆಗೆ ಮುಸ್ಲಿಮರನ್ನು ತುಚ್ಛವಾಗಿ ಚಿತ್ರಿಸಲೆಂದೇ ಬರೆದ `ಆವರಣ’ ಮತ್ತು ಸ್ವಾಭಿಮಾನಿ ಮಹಿಳೆಯರ ಬಗ್ಗೆ ಬ್ರಾಹ್ಮಣೀಯ ಪುರುಷಾಧಿಪತ್ಯದ ತಿರಸ್ಕಾರದಿಂದ ಹುಟ್ಟಿಕೊಂಡ `ಕವಲು’ ಎಲ್ಲವೂ ಅವರು ನಂಬಿರುವ ಹಿಂದೂತ್ವ ಸಿದ್ಧಾಂತಹ ಕರಪತ್ರಗಳಷ್ಟೇ ಎಂದರೆ ತಪ್ಪಾಗಲಾರದು.

ಭೈರಪ್ಪನವರ ಈ ಮತಾಂಧಕ್ಕೆ ಕಾರಣ ಇಲ್ಲದಿಲ್ಲ. ಅವರು ತಮ್ಮ ಬದುಕು ಮತ್ತು ಅನುಭವಕ್ಕೆ ನಿಷ್ಠರಾಗಿ ಬರೆದಾಗ `ಗೃಹಭಂಗ’ ಸೃಷ್ಟಿಯಾಗುತ್ತದೆ. ಯಾವಾಗ ಅವರು ಬದುಕು ಮತ್ತು ಅನುಭವಕ್ಕೆ ನಿಷ್ಠರಾಗದೆ ತಮ್ಮ ಮೆದುಳು ಮತ್ತು ಹೃದಯದಲ್ಲಿ ಇರುವ ಮನು ಮಹರ್ಷಿಯನ್ನು ಆವಾಹಿಸಿಕೊಳ್ಳುತ್ತಾರೋ (ಅನಂತಮೂರ್ತಿಯವರು ಹೇಳಿದ್ದಂತೆ) ಹೈಸ್ಕೂಲ್ ಮಟ್ಟದ ಡಿಬೆಟ್ ತರಹ ಬಾಲಿಶ ಸ್ವರೂಪದ, ಯಾವುದೇ ಸಾಹಿತ್ಯಿಕ ಮೌಲ್ಯವನ್ನು ಹೊಂದಿರದ ಕೃತಿಗಳನ್ನು ಸೃಷ್ಟಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...