Homeಅಂಕಣಗಳುಬದುಕು ಮತ್ತು ಅನುಭವಕ್ಕೆ ಅಲ್ಪನಿಷ್ಠೆಯ ಭೈರಪ್ಪನ ಕುರಿತು 

ಬದುಕು ಮತ್ತು ಅನುಭವಕ್ಕೆ ಅಲ್ಪನಿಷ್ಠೆಯ ಭೈರಪ್ಪನ ಕುರಿತು 

- Advertisement -
- Advertisement -

ಗೌರಿ ಲಂಕೇಶ್|

ಭೈರಪ್ಪನವರ ಸಾಹಿತ್ಯ ಮತ್ತು ಜೀವನ ದರ್ಶನಗಳ ಬಗ್ಗೆ ವಸ್ತುನಿಷ್ಠವಾಗಿ ಚರ್ಚಿಸುವ ಅಗತ್ಯತೆ ಇದ್ದೇ ಇದೆ. ಯಾಕೆಂದರೆ ಭೈರಪ್ಪನವರ ಸಾಹಿತ್ಯಿಕ ಜನಪ್ರಿಯತೆಯನ್ನೇ ಅವರು ಎತ್ತಿ ಹಿಡಿಯುವ ಬ್ರಾಹ್ಮಣೀಯ ಮೌಲ್ಯಗಳಿಗೆ ಸಿಗುತ್ತಿರುವ ಜನಮನ್ನಣೆ ಎಂದು ಕೆಲವರು ಅರ್ಥೈಸುತ್ತಿದ್ದಾರೆ. ಇಲ್ಲಿ ಆರಂಭದಲ್ಲೇ ಒಂದೆರಡು ವಿಷಯಗಳನ್ನು ಸ್ಪಷ್ಟಪಡಿಸುವ ಅಗತ್ಯವಿದೆ. ನಾನು ಭೈರಪ್ಪನವರ ಸಾಹಿತ್ಯಿಕ ಪ್ರತಿಭೆಯನ್ನು ನಿರಾಕರಿಸುವುದಿಲ್ಲ. ಅವರು ಬಳಸುವ ಭಾಷೆ ನನಗೆ ವಿಭಿನ್ನವಾಗಿ ಕಂಡರೂ ಅವರು ಪಾತ್ರಗಳನ್ನು, ಸಂದರ್ಭಗಳನ್ನು ಮತ್ತು ಸನ್ನಿವೇಶಗಳನ್ನು ಸಮಗ್ರವಾಗಿ ಚಿತ್ರಿಸುವಲ್ಲಿ ಎಷ್ಟು ಯಶಸ್ವಿಯಾಗುತ್ತಾರೆಂದರೆ ಅವರ ಕೃತಿಗಳು ಸುಲಭವಾಗಿ ಓದಿಸಿಕೊಂಡು ಹೋಗುತ್ತವೆ. ಅಂತಹ ಕೃತಿಗಳಲ್ಲಿ ಅವರ `ಗೃಹಭಂಗ’ ಒಂದು. ಇತ್ತೀಚೆಗೆ ನಾನು ಮತ್ತೊಮ್ಮೆ ಇದನ್ನು ಓದಿದಾಗ ಬೆರಗಾಗಿದ್ದೆ. ಇಂತಹ ಉತ್ತಮ ಕೃತಿ ಬರೆದ ಭೈರಪ್ಪನವರು ಅದು ಹೇಗೆ `ಕವಲು’ ತರಹದ ಕೆಟ್ಟ ಕಾದಂಬರಿ ಬರೆಯಲು ಸಾಧ್ಯ ಎಂದು ನನಗೆ ಅಚ್ಚರಿ ಆಗಿತ್ತು.

ಇರಲಿ, ಭೈರಪ್ಪನವರ ಸಮಗ್ರ ಸಾಹಿತ್ಯಕ್ಕೆ ಬರುವುದಾದರೆ ಅವರ ಕೃತಿಗಳನ್ನು ಓದಿ ಮುಗಿಸಿದನಂತರ ಸಾಮಾನ್ಯ ಓದುಗರಲ್ಲಿ ಒಂದು ಒಳ್ಳೆಯ ಕತೆಯನ್ನು ಓದಿದ ಅನುಭವವಾಗುತ್ತದೆಯೇ ಹೊರತು ಆ ಕತೆಯ ಆಳದಲ್ಲಿ ಅಡಗಿರುವ ಅವರ ಜನವಿರೋಧಿ ಮತ್ತು ಮಹಿಳಾ ವಿರೋಧಿ ನಿಲುವುಗಳಾಗಲಿ ಅಥವಾ ಪುರೋಹಿತಶಾಹಿಯನ್ನು ಎತ್ತಿಹಿಡಿಯುವ ಅವರ ಸಿದ್ಧಾಂತವಾಗಲಿ ಓದುಗರ ಗ್ರಹಿಕೆಗೆ ಸಿಗುವುದಿಲ್ಲ. ಅದಕ್ಕೆ ಉತ್ತಮ ಉದಾಹರಣೆ `ವಂಶವೃಕ್ಷ.’
`ವಂಶವೃಕ್ಷ’ ಕಾದಂಬರಿಯಲ್ಲಿ `ಕವಲು’ ಕಾದಂಬರಿಯಲ್ಲಿರುವಂತಹ ಪೇಲವ ಪಾತ್ರಗಳಾಗಲಿ, ಅಸೂಕ್ಷ್ಮ ಭಾವಸಂಬಂಧಗಳಾಗಲಿ, ಸರಳ ರೇಖೆಯಂಥ ಕಾರ್ಡ್‍ಬೋರ್ಡ್ ವ್ಯಕ್ತಿತ್ವಗಳಾಗಲೀ ಇಲ್ಲ. ಆದ್ದರಿಂದ ಮೇಲುನೋಟಕ್ಕೆ ಇದೊಂದು ಒಳ್ಳೆಯ ಕೃತಿಯಂತೆ ಸಾಮಾನ್ಯ ಓದುಗರಿಗೆ ಭಾಸವಾಗುತ್ತದೆ. ಅದರಲ್ಲೂ ಕಾತ್ಯಾಯಿನಿ ಎಂಬ ಯುವ ವಿಧವೆ ಬ್ರಾಹ್ಮಣೀಯ ಕಟ್ಟುಪಾಡುಗಳನ್ನು ವಿರೋಧಿಸಿ ಹೊಸ ಬದುಕು ಕಂಡುಕೊಳ್ಳುವ ಪ್ರಯತ್ನವೂ ಕ್ರಾಂತಿಕಾರಿಯಾಗಿಯೇ ಕಾಣಿಸುತ್ತದೆ. ಅಷ್ಟೇ ಮುಖ್ಯವಾಗಿ ಕಾದಂಬರಿಯ ಅಂತ್ಯದಲ್ಲಿ ಆಕೆಯ ಸಂಪ್ರದಾಯಸ್ಥ ಮಾವ ಶ್ರೋತ್ರಿಗೇ ತನ್ನ ಹುಟ್ಟು ಪರಿಶುದ್ಧವಾಗಿರಲಿಲ್ಲವಾದ್ದರಿಂದ ವಂಶ ಎಂಬ ವೃಕ್ಷದ ಪವಿತ್ರತೆಯೆ ಅರ್ಥಹೀನವಾಗಿ ಕಾಣಿಸುವುದೂ ಚಾರಿತ್ರಿಕವಾಗಿ ಭಾಸವಾಗುತ್ತದೆ. ಆದರೆ ಆಳದಲ್ಲಿ `ವಂಶವೃಕ್ಷ’ ಕಾದಂಬರಿ ಏನನ್ನು ಹೇಳುತ್ತಿದೆ ಎಂದು ನೋಡುವುದು ಮುಖ್ಯವಾಗುತ್ತದೆ, ಯಾಕೆಂದರೆ ಬ್ರಾಹ್ಮಣಿಕೆಯ ಕಟ್ಟುಪಾಡುಗಳನ್ನು ವಿರೋಧಿಸುವ ಕಾತ್ಯಾಯಿನಿ `ಸತತ ಗರ್ಭಪಾತಕ್ಕೆ’ ತುತ್ತಾಗುತ್ತಾಳೆ; ತಾನು ತಪ್ಪು ಮಾಡಿದೆ, ಪಾಪ ಮಾಡಿದೆ ಎಂಬ ಕೊರಗಿನಲ್ಲೇ ಸಾಯುತ್ತಾಳೆ. ಅದರರ್ಥ, ಮಹಿಳೆಯರು ಸಂಪ್ರದಾಯವನ್ನು ಮುರಿದರೆ, ಕಟ್ಟುಪಾಡುಗಳನ್ನು ವಿರೋಧಿಸಿದರೆ ಅವರು ಎಂದೂ ಸಂತೋಷದಿಂದಿರಲು ಸಾಧ್ಯವಿಲ್ಲ ಎಂಬ ನಿಲುವನ್ನು ಭೈರಪ್ಪ ಚೆಂದವಾಗಿ ರೂಪಿಸಿದ್ದಾರೆ ಎಂದಲ್ಲವೆ?

ಹಾಗೆಯೇ ಆಕೆಯ ಮಾವ ಶ್ರೋತ್ರಿಗೆ ತಾನು ಕಾತ್ಯಾಯಿನಿಗೆ ಅನ್ಯಾಯ ಮಾಡಿದೆ ಎಂಬ ಭಾವನೆ ಕಾಡುತ್ತದೆಯೇ ಹೊರತು ಸಂಪ್ರದಾಯ, ವಂಶದ ಪವಿತ್ರತೆ, ಕಟ್ಟುಪಾಡುಗಳೆಲ್ಲ ನಿರುಪಯುಕ್ತ ಎಂದೆನಿಸುವುದೇ ಇಲ್ಲ. ಯಾಕೆಂದರೆ ಅವನು ಅದ್ಯಾವುಗಳನ್ನು ವಿರೋಧಿಸುವ ಗೋಜಿಗೇ ಹೋಗುವುದಿಲ್ಲ. ಬದಲಾಗಿ ಅದೇ ಸಂಪ್ರದಾಯಕ್ಕೆ ಕಟ್ಟುಬಿದ್ದು ಸಾಯುವ ಹೊಸ್ತಿಲಲ್ಲಿರುವ ಕಾತ್ಯಾಯಿನಿಯ ಬಾಯಿಗೆ ಗಂಗಾಜಲವನ್ನು ಹಾಕಿಸುತ್ತಾನೆ ಮತ್ತು ಸನ್ಯಾಸವನ್ನು ಅರಸುತ್ತಾ ಅದ್ಯಾವುದೋ `ಪುಣ್ಯ’ ಕ್ಷೇತ್ರಕ್ಕೆ ಹೊರಡುತ್ತಾನೆ. ಅಂದರೆ ಕಾತ್ಯಾಯಿನಿ ಮತ್ತು ಶ್ರೋತ್ರಿ- ಇಬ್ಬರಲ್ಲೂ ಬ್ರಾಹ್ಮಣಿಕೆ ಕಟ್ಟುಪಾಡುಗಳನ್ನು ಮೀರಿದ್ದಕ್ಕೆ ಪಾಪಪ್ರಜ್ಞೆ ಹುಟ್ಟುತ್ತದೆಯೇ ವಿನಃ ವಿಮೋಚನಾ ಭಾವವಲ್ಲ. ಆದ್ದರಿಂದ ಸಾಹಿತ್ಯಿಕವಾಗಿ `ವಂಶವೃಕ್ಷ’ ಕುರಿತ ವಿಮರ್ಶೆ ಏನೇ ಇದ್ದರೂ ಅದರ ತಾತ್ವಿಕ ದರ್ಶನ ಈ ಬ್ರಾಹ್ಮಣೀಯ ಕಟ್ಟುಪಾಡನ್ನು ಮೀರುವುದರಿಂದ ಉಂಟಾಗುವ `ಪಾಪಪ್ರಜ್ಞೆ’ಯೇ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.

ಈ ಬ್ರಾಹ್ಮಣಿಕೆಯ ಎತ್ತಿಹಿಡಿಯುವಿಕೆ ಕೇವಲ `ವಂಶವೃಕ್ಷ’ದಲ್ಲಿ ಮಾತ್ರ ಸಂಭವಿಸುವುದಿಲ್ಲ. ಭೈರಪ್ಪನವರ `ದಾಟು’ ಕಾದಂಬರಿಯಲ್ಲೂ ಅಬ್ರಾಹ್ಮಣನನ್ನು ಸತ್ಯಭಾಮೆ ಪ್ರೀತಿಸಿದ್ದಕ್ಕೆ ಇಡೀ ಹಳ್ಳಿಯೇ ಸರ್ವನಾಶವಾಗುತ್ತದೆ. `ತಬ್ಬಲಿಯು ನೀನಾದೆ ಮಗನೆ’ಯಲ್ಲೂ ನಾಯಕ ತಬ್ಬಲಿಯಾಗುವುದು ಹಿಂದೂ ಧರ್ಮದ ಕಟ್ಟಳೆಯನ್ನು ಮೀರಿದ್ದಕ್ಕೆ. ಹೀಗೆ ಭೈರಪ್ಪನವರು ಕಾತ್ಯಾಯಿನಿಯರ ಮತ್ತು ಸತ್ಯಭಾಮೆಯರ `ಮಹಿಳಾ ಪ್ರಜ್ಞೆ’ಯನ್ನು ಸೋಲಿಸುತ್ತಾ ಬ್ರಾಹ್ಮಣಿಕೆಯ ವಿಜಯದ ಕಥೆಗಳನ್ನೇ ಹೇಳುತ್ತಾ ಬಂದಿದ್ದಾರೆ.

ಭೈರಪ್ಪನವರು ಹಲವಾರು ಬಾರಿ ಸಾಹಿತ್ಯ ಸೃಷ್ಟಿಯ ಬಗ್ಗೆ ಮಾತನಾಡುವಾಗ ತಾವು ಸಿದ್ಧಾಂತಕ್ಕಿಂತ `ಸತ್ಯ ಮತ್ತು ಸೌಂದರ್ಯ’ಕ್ಕೆ ಬದ್ಧ ಎಂದು ಹೇಳಿದ್ದಾರೆ. ಮಾತ್ರವಲ್ಲ ಲೇಖಕ ಸಿದ್ಧಾಂತಕ್ಕೆ ಬದ್ಧನಾದಾಗ ಉತ್ತಮ ಸಾಹಿತ್ಯ ಸೃಷ್ಟಿಯಾಗುವುದಿಲ್ಲ ಎಂದೆಲ್ಲ ಪ್ರತಿಪಾದಿಸಿದ್ದಾರೆ.
ಆದರೆ ಭೈರಪ್ಪನವರು `ಗೃಹಭಂಗ’ ಮತ್ತು `ಪರ್ವ’ ಎಂಬ ಎರಡು ಕೃತಿಗಳನ್ನು ಬಿಟ್ಟರೆ ಮಿಕ್ಕಂತೆ ಬರೆದಿರುವುದೆಲ್ಲ ತಾವು ನಂಬಿರುವ ಸಿದ್ಧಾಂತದ ಪ್ರಚಾರಕ್ಕಾಗಿಯೇ. ಆದ್ದರಿಂದಲೇ ಅವೆಲ್ಲ ಕೆಟ್ಟ ಕೃತಿಗಳಾಗಿವೆ. ಆರೆಸ್ಸೆಸ್ ಸಿದ್ಧಾಂತ ಮಾತ್ರವಲ್ಲದೆ ಆ ಸಂಘಟನೆಯ ವೈಭವೀಕರಣವನ್ನೇ ವಸ್ತುವಾಗಿಟ್ಟುಕೊಂಡ ಅವರ ಮೊದಲ ಕಾದಂಬರಿಯಾದ `ಗೃಹಶ್ರೀ’ಯಿಂದ ಹಿಡಿದು ಇತ್ತೀಚೆಗೆ ಮುಸ್ಲಿಮರನ್ನು ತುಚ್ಛವಾಗಿ ಚಿತ್ರಿಸಲೆಂದೇ ಬರೆದ `ಆವರಣ’ ಮತ್ತು ಸ್ವಾಭಿಮಾನಿ ಮಹಿಳೆಯರ ಬಗ್ಗೆ ಬ್ರಾಹ್ಮಣೀಯ ಪುರುಷಾಧಿಪತ್ಯದ ತಿರಸ್ಕಾರದಿಂದ ಹುಟ್ಟಿಕೊಂಡ `ಕವಲು’ ಎಲ್ಲವೂ ಅವರು ನಂಬಿರುವ ಹಿಂದೂತ್ವ ಸಿದ್ಧಾಂತಹ ಕರಪತ್ರಗಳಷ್ಟೇ ಎಂದರೆ ತಪ್ಪಾಗಲಾರದು.

ಭೈರಪ್ಪನವರ ಈ ಮತಾಂಧಕ್ಕೆ ಕಾರಣ ಇಲ್ಲದಿಲ್ಲ. ಅವರು ತಮ್ಮ ಬದುಕು ಮತ್ತು ಅನುಭವಕ್ಕೆ ನಿಷ್ಠರಾಗಿ ಬರೆದಾಗ `ಗೃಹಭಂಗ’ ಸೃಷ್ಟಿಯಾಗುತ್ತದೆ. ಯಾವಾಗ ಅವರು ಬದುಕು ಮತ್ತು ಅನುಭವಕ್ಕೆ ನಿಷ್ಠರಾಗದೆ ತಮ್ಮ ಮೆದುಳು ಮತ್ತು ಹೃದಯದಲ್ಲಿ ಇರುವ ಮನು ಮಹರ್ಷಿಯನ್ನು ಆವಾಹಿಸಿಕೊಳ್ಳುತ್ತಾರೋ (ಅನಂತಮೂರ್ತಿಯವರು ಹೇಳಿದ್ದಂತೆ) ಹೈಸ್ಕೂಲ್ ಮಟ್ಟದ ಡಿಬೆಟ್ ತರಹ ಬಾಲಿಶ ಸ್ವರೂಪದ, ಯಾವುದೇ ಸಾಹಿತ್ಯಿಕ ಮೌಲ್ಯವನ್ನು ಹೊಂದಿರದ ಕೃತಿಗಳನ್ನು ಸೃಷ್ಟಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...