Homeಡೇಟಾ ಖೋಲಿಡೇಟಾ ಖೋಲಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-2

ಡೇಟಾ ಖೋಲಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-2

- Advertisement -
- Advertisement -

ಅರಿಸ್ಟಾಟಲ್ ಅಂತ್ ಒಬ್ಬ ಇದ್ದ. ಸುಮಾರು 2370 ವರ್ಷದ ಹಿಂದೆ. ಆ ಪುಣ್ಯಾತ್ಮ ಒಂದು ಮಾತು ಹೇಳಿ ಹೋದ. “ಅನೇಕ ಸಣ್ಣ ಸಣ್ಣ ವಸ್ತುಗಳು ಒಂದಕ್ಕೊಂದು ಸೇರುವುದರಿಂದ ಒಂದು ದೊಡ್ಡ ವಸ್ತು ಆಗಿರುತ್ತದೆ. ಆದರೆ ತನ್ನೊಳಗಿನ ಭಾಗಗಳಿಂದ ಆದ ಆ ದೊಡ್ಡ ವಸ್ತು, ತನ್ನ ಸಣ್ಣ ಸಣ್ಣ ಭಾಗಗಳ ಒಟ್ಟು ಮೊತ್ತಕ್ಕಿಂತ ಭಿನ್ನವಾಗಿರುತ್ತದೆ” ಎಂದು.

ಆದ್ರ ಆನಂತರ ಬಂದ ಕೆಲ ಮಹಾನುಭಾವರು ಅದನ್ನ ಬದಲು ಮಾಡಿದರು: “ಆ ದೊಡ್ಡ ವಸ್ತು, ತನ್ನ ಸಣ್ಣ ಸಣ್ಣ ಭಾಗಗಳ ಒಟ್ಟು ಮೊತ್ತಕ್ಕಿಂತ ದೊಡ್ಡದಾಗಿರುತ್ತದೆ” ಅಂತ. ಕೇವಲ ಒಂದು ಪದ ಬದಲಿ ಮಾಡಿದ್ರ ಎಷ್ಟು ಅಪಾರ್ಥ ಆಗತಾದ ಅನ್ನೋದು ಇದರಿಂದಾ ಗೊತ್ತಾಗ್ತದ.

ಇದನ್ನ ಗೆಸ್ಟಾಲ್ಟ್ ನಿಯಮ ಅಂತ ಕರೆದರು. ಗೆಸ್ಟಾಲ್ಟ್ ಅನ್ನೋದಕ್ಕ ಕನ್ನಡದೊಳಗ ರೂಪ, ಆಕಾರ ಅಂತ ಕರಿಯಬಹುದು.

ಹಂಗಾರ 20ನೆ ಶತಮಾನದ ಮರಿ ಅರಿಸ್ಟಾಟಲ್‌ಗಳು ರೂಪಿಸಿದ ‘ಗೆಸ್ಟಾಲ್ಟ್ ಥೆರಪಿ’ ಅಥವ ‘ಆಕಾರ ಸಿದ್ಧಾಂಥದ ರೋಗ ನಿದಾನ’ದ ಅರ್ಥ ಏನು? ಸರಳವಾಗಿ ಹೇಳೋದಾದರ, ಒಬ್ಬ ಮನುಷ್ಯನ ವ್ಯಕ್ತಿತ್ವ ತನ್ನ ದೇಹ-ಮನಸ್ಸು-ಸ್ವಂತ ವಿಚಾರ, ಹೊರಗಿನ ಪ್ರಭಾವ, ಸುತ್ತಲಿನ ಪರಿಸ್ಥಿತಿ, ಎಲ್ಲಾ ಸೇರಿ ಆಗಿರ್ತದ. ಈ ರೀತಿ ರೂಪುಗೊಂಡಿರುವುದನ್ನ ವ್ಯಕ್ತಿತ್ವ ಅನ್ನುವುದು. ಒಬ್ಬನ ಸ್ವಭಾವದ ಭಾಗಗಳಾದ ದೇಹ, ಮನಸ್ಸು, ವಿಚಾರ, ಪ್ರಭಾವ, ಪರಿಸ್ಥಿತಿ ಮುಂತಾದವುಗಳ ಒಟ್ಟು ಮೊತ್ತಕ್ಕಿಂತ ಅದು ದೊಡ್ಡದು ಅಂತ ಅವರು ವಾದಿಸಿದರು. ಆ ಮನೋವಿಜ್ಞಾನಿಗಳ ಗುಂಪಿನಲ್ಲಿ ವಿಲ್ಲ್ಹೆಲ್ಮ್ ಉಂಟ್, ಕರ್ಟ್ ಕೊಫ್ಕಾ, ಮ್ಯಾಕ್ಸ್
ವೆರ್ಥೆಮೆರ್, ಫ್ರಿಟ್ಸ್ ಪೆರ್ಲ್ಸ್, ವೂಲ್ಫ್‌ಗ್ಯಾಂಗ್ ಕೊಹ್ಲರ್, ಇತ್ಯಾದಿಗಳು ಇದ್ದರು.
ಅವರು ಪಾಪ ತಮ್ಮ ಕ್ಷೇತ್ರಕ್ಕ ತಮ್ಮ ಕೊಡುಗೆ ಕೊಟ್ಟರು, ಹೋದರು. ಆ ಸಿದ್ಧಾಂತ ಪಾಲಿಸೋ ವಿದ್ವಾಂಸರು ಈಗಲೂ ಇದ್ದಾರ.

ಆದರ ಪ್ರಾಚೀನ ಕಾಲದಿಂದಲೂ ನಮ್ಮ ಕಣ್ಣಿಗೆ ಕಾಣುವ ಜಗತ್ತಿನ ವಿಶ್ವ ಗುರು ಆಗಿರುವ ಭಾರತದ ಕೆಲವು ತಜ್ಞರು ಈ ಗೆಸ್ಟಾಲ್ಟ್ ಸಿದ್ಧಾಂತವನ್ನು ಹೊಸ ಕಣ್ಣಿನಿಂದ ನೋಡಿದರು. ಅದು ಅನ್ವಯ ಆಗುವುದು ನಮ್ಮ ದೇಹಕ್ಕೆ ಅಲ್ಲಾ, ನಮ್ಮ ದೇಶಕ್ಕೆ ಅಂತ ಚೀರಿ ಹೇಳಿದರು.

ಅವ್ರ ಪ್ರಕಾರ ಭಾರತ ಎಂಬೋ ರಾಷ್ಟ್ರ, ಎಲ್ಲಾ ರಾಜ್ಯಗಳ ಒಟ್ಟು ಮೊತ್ತಕ್ಕಿಂತಲೂ ದೊಡ್ಡದು, ಭವ್ಯವಾದದ್ದು. ಭಾರತ ಅನ್ನುವುದು ಕೇವಲ ರಾಜ್ಯಗಳ ಸಮೂಹ ಅಲ್ಲ, ಅದು ಅದಕ್ಕಿಂತಲೂ ದೊಡ್ಡದು, ಭಿನ್ನವಾದದ್ದು, ಭವ್ಯವಾದದ್ದು. ಒಟ್ಟಿನಲ್ಲಿ ಇದು ಒಕ್ಕೂಟ ಅಲ್ಲ, ಸಂಯುಕ್ತ ಸಂಘ ಅಲ್ಲ, ಕೇವಲ ರಾಜ್ಯಗಳ ಒಂದು ಗುಂಪು. ಹೀಗಾಗಿ, ದೇಶದ ಅಸ್ಮಿತೆ ಅನ್ನೋದು ದೊಡ್ಡದು. ರಾಜ್ಯಗಳ ಅನನ್ಯತೆ ಅಥವಾ ತನ್ನತನ ಅನ್ನೋದು ಯಾವ ಲೆಕ್ಕಕ್ಕೂ ಇಲ್ಲ.

ಈ ಪೀಠಿಕೆಯ ನಂತರ ನಮ್ಮ ವಿಷಯಕ್ಕ ಬರೋಣ. ಅದು ಮಾಧ್ಯಮ ನಲ್ಲರ ಬಗ್ಗೆ. ಈ ಹೊತ್ತಿನ ಮಾಧ್ಯಮ ನಲ್ಲರು ಯಾರು ಅಂದರ ಸದಾ ಸುದ್ದಿಯಲ್ಲಿ ಇರುವ ಕೆಲ ರಾಜ್ಯದ ಮುಖ್ಯ ಮಂತ್ರಿಗಳು. ಸುದ್ದಿ ಎನ್ನುವುದು ನಮ್ಮ ದೇಶದಾಗ ಬಹಳ ತಟಸ್ಥ ಹಾಗೂ ಯಾವ ಪಕ್ಷಕ್ಕೂ ಸೇರದೆ ಇರೋದರಿಂದ ಅವರು ಒಳ್ಳೆ ಕೆಲಸ ಮಾಡಿದಾಗ ಅಥವ ಕೆಟ್ಟ ಕೆಲಸ ಮಾಡಿದಾಗ ಅವರು ಸುದ್ದಿ ಮಾಡ್ತಾರ.

ಅದರೊಳಗ ಕೆಲವು ಹೆಸರು – ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಪಿನರಾಯಿ ವಿಜಯನ್, ಹೇಮಂತ್ ಸೊರೆನ್, ಅಜಯ್ ಸಿಂಗ್ ಬಿಸ್ಟ್ ಅಲಿಯಾಸ್ ಯೋಗಿ ಆದಿತ್ಯನಾಥ್, ಬಿ ಎಸ್ ಯಡಿಯೂರಪ್ಪ, ಇತ್ಯಾದಿ. ಇವರು ಜಾಸ್ತಿ ಹೆಸರು ಮಾಡಿದಾಗಲೆಲ್ಲಾ ಪಂಥ ಪ್ರಧಾನ ಸೇವಕರ ಹೆಸರು ಮರೆ ಆಗಲಿಕ್ಕೆ ಸುರು ಆಗೇದ ಅಂತ ಕೆಲವರಿಗೆ ಚಡಪಡಿಕೆ ಆಗಲಿಕ್ಕೆ ಸುರು ಆಗ್ತದ. ಅವರು ಏನು ಸಣ್ಣ ಸಣ್ಣವರಿಗೆಲ್ಲಾ ಪ್ರಾಮುಖ್ಯತೆ ಕೊಡೋದು? ದೊಡ್ಡವರನ್ನ ಮರೆತರೆ ಹೆಂಗ? ಅಂತ ಜೋರಾಗಿ ಹೇಳ್ತಾರ, “ನಿನ್ನ ಬಿಟ್ಟು ಬೇರೆ ದೇವರನ್ನು ಪೂಜಿಸಿದೊಡೆ ಎಂತಯ್ಯಾ?” ಅಂತ ಗೋಳಾಡುತ್ತಾರೆ. ಅವರ ಮನಸ್ಸಿನಾಗ ಎರಡು ತಪ್ಪು ಕಲ್ಪನೆಗಳು ಇರಬಹುದು. ಒಂದು ಪ್ರಧಾನಿ ಪಟ್ಟ ಅನ್ನೋದು ಸರ್ವ ಪ್ರಥಮ ಪ್ರಮುಖ ಅನ್ನೋದು, ಇನ್ನೊಂದು ರಾಜ್ಯಗಳು ಕನಿಷ್ಠ, ದೇಶ ಶ್ರೇಷ್ಠ ಅನ್ನೋದು. ಅವರೆಲ್ಲ ನಮ್ಮ ಕಾಲದ ಗೆಸ್ಟಾಲ್ಟ್ ನಂಬಿಕಸ್ಥರು.

ಅವರ ನಂಬಿಕೆ ತಪ್ಪು. ಅದಕ್ಕೆ ಯಾವುದೇ ಸಾಮಾಜಿಕ ವಿಜ್ಞಾನದ ಆಧಾರ ಇಲ್ಲ. ಮನೋವಿಜ್ಞಾನದ ಒಳಗ ಈ ವಿಚಾರಕ್ಕೆ ಮನ್ನಣೆ ಇರಬಹುದು. ಅದರಿಂದ ಬಹಳ ಜನ ಗುಣ ಆಗಿರಬಹುದು. ಆದರ ರಾಜ್ಯಶಾಸ್ತ್ರದೊಳಗ ಇದಕ್ಕೆ ಮನ್ನಣೆ ಇಲ್ಲ. ಇದು ಬಹು ಚರ್ಚಿತ ವಿಷಯ ಅಷ್ಟೇ ಅಲ್ಲ, ಬಹಳ ಜನ ಪಂಡಿತರಿಂದ ಟೀಕೆ-ನಿಂದನೆಗೆ ಒಳಗಾದ ವಿಷಯ. ರಾಜ್ಯಗಳ ಅನನ್ಯತೆ ಅನ್ನೋದು, ದೇಶದ ಅಸ್ಮಿತೆಗಿಂತ ದೊಡ್ಡದು. ರಾಜ್ಯಗಳಿಂದ ದೇಶಕ್ಕ ಪ್ರಾಮುಖ್ಯತೆ ಬರ್ತದ. ಉಲ್ಟಾ ಅಲ್ಲಾ.

ಇದಕ್ಕೆ ಒಂದು ಉದಾಹರಣೆ ಕೊಡೋಣ. 2015ರಲ್ಲಿ ಭಾರತದಿಂದ ಕಿರಿಯ ಐಪಿಎಸ್ ಅಧಿಕಾರಿಗಳ ತಂಡ ಅಮೆರಿಕ ದೇಶದ ಅಧ್ಯಯನ ಪ್ರವಾಸಕ್ಕ ಹೋಗಿತ್ತು. ಅವಾಗ ಅವರು ಅಲ್ಲಿನ ಕೆಲವು ಕೇಂದ್ರ ಪೊಲೀಸು ಪಡೆಗಳಾದ ಸಿಐಎ, ಎಫ್‌ಬಿಐ, ಐಆರ್‌ಎಸ್‌ಗಳ ಕಚೇರಿಗೆ ಕರಕೊಂಡು ಹೋದರು. ಆಮ್ಯಾಲೆ ಲಾಸ್ ಎಂಜಲಿಸ್, ಫ್ಲೋರಿಡಾ, ಕೆಂಟಕಿ, ನ್ಯುಯಾರ್ಕ್, ವಾಶಿಂಗ್‌ಟನ್ ಇತ್ಯಾದಿ ರಾಜ್ಯಗಳ ಪೊಲೀಸು ಅಧಿಕಾರಿಗಳ ಜೊತೆ ಭೇಟಿ ಮಾಡಿಸಿದರು.

ಅವಾಗ ಭಾರತೀಯ ಅಧಿಕಾರಿಗಳು ನಂಬಲಿಕ್ಕೆ ಸಾಧ್ಯವಿಲ್ಲದ ಎರಡು ವಿಷಯ ಅವರಿಗೆ ಗೊತ್ತಾತು. ಒಂದು ಅಲ್ಲಿ ಐಪಿಎಸ್ಸು-ಐಎಎಸ್ಸು ಅನ್ನೋದು ಇಲ್ಲ್ಲ.

ಇನ್ನೊಂದು ಅದು ಏನು ಅಂದರ ಅಮೆರಿಕ ದೇಶದಲ್ಲಿ ಕೇವಲ ಒಂದು ಪೊಲೀಸು ವ್ಯವಸ್ಥೆ ಇಲ್ಲ. ಅಲ್ಲೇ ಸುಮಾರು 19,000 ವಿವಿಧ ವ್ಯವಸ್ಥೆಗಳು ಇವೆ. ನಮ್ಮ ಊರಿನಲ್ಲಿ ಪೊಲೀಸು ಕೆಲಸ ಹೆಂಗ ಮಾಡಬೇಕು ಅನ್ನೋದು ನನಗೆ ಚನ್ನಾಗಿ ಗೊತ್ತಿರುತ್ತದೆ. ನನ್ನ ಊರಿಗೆ ಭೇಟಿಯೇ ನೀಡದ ವಾಶಿಂಗ್‌ಟನ್‌ನ ಹಿರಿಯ ಅಧಿಕಾರಿಗೆ ಏನು ಗೊತ್ತಿರ್ತದ ಮಣ್ಣು ಅಂತ ಅಲ್ಲಿನ ಪುಟ್ಟ ನಗರದ ಪೊಲೀಸು ಅಧಿಕಾರಿ ಒಬ್ಬ
ಇವರಿಗೆ ಹೇಳಿದ.

ಇದನ್ನ ಜೀರ್ಣಿಸಿಕೊಳ್ಳಲಿಕ್ಕೆ ಈಸ್ಟ್ ಇಂಡಿಯಾ ಕಂಪನಿಯ ಪಳೆಯುಳಿಕೆಗಳಾದ ನಮ್ಮ ಐಪಿಎಸ್ಸು ಅಧಿಕಾರಿಗಳಿಗೆ ಸಾಧ್ಯ ಆಗಲಿಲ್ಲ. ಅದು ಹೇಗೆ ಸಾಧ್ಯ, ನೀವು ನಮಗೆ ಸುಳ್ಳು ಹೇಳುತ್ತಿದ್ದೀರಿ ಅಂತ ಹೇಳಿ ಜೋರಾಗಿ ಜಗಳ ಮಾಡಿದರು. ಆಮ್ಯಾಲೆ ಅಲ್ಲಿಯೇ ನೆಲೆಸಿದ್ದ ಭಾರತಿಯ ಮೂಲದ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರನ್ನ ಅಲ್ಲಿಯ ಪೊಲೀಸರು ಕರೆಸಿದರು. ಅವರು ಇವರಿಗೆ ತಿಳಿಸಿ ಹೇಳಿದರು. ನಿಮಗೆ ಸುಳ್ಳು ಹೇಳಿ ಇವರಿಗೆ ಯಾವ ಲಾಭವೂ ಇಲ್ಲ. ಇಲ್ಲೇ ಇರುವುದು ನೈಜ ಒಕ್ಕೂಟ ವ್ಯವಸ್ಥೆ. ಭಾರತದ ಒಕ್ಕೂಟ ವ್ಯವಸ್ಥೆ ಇರೋದು ಬರೀ ಕಾಗದದ ಮೇಲೆ ಅಂತ ಅವರು ತಿಳಿ ಹೇಳುವಾಗ ರಾತ್ರಿ ಆಗಿತ್ತು. ಎಲ್ಲರೂ ಊಟ ಮಾಡಿ ತಲೆನೋವಿನ ಮಾತ್ರೆ ತೊಗೊಂಡು ಮಲಗಿಕೊಂಡರು. ಅವರು ಮರಳಿ ಭಾರತಕ್ಕೆ ಬಂದರೂ ಕೂಡ ಅವರಿಗೆ ಅಲ್ಲಿನ ಪೊಲೀಸು ವ್ಯವಸ್ಥೆ ಅರ್ಥ ಅಗಲಿಲ್ಲ.

ಈ ಕಳೆದ ಐದಾರು ವರ್ಷದೊಳಗ ಎರಡು ಶಬ್ದ ಮತ್ತ ಮತ್ತ ಬಳಕೆ ಆಗಲಿಕ್ಕೆ ಹತ್ತಿದ್ದಾವು. ಅವು ಯಾವಪಾ ಅಂದ್ರ – ವಿಕೇಂದ್ರೀಕರಣ ಮತ್ತು ಒಕ್ಕೂಟ ವ್ಯವಸ್ಥೆ. ಅವು ನಮಗ ಈಗ ಎಷ್ಟು ಮುಖ್ಯ ಅಗ್ಯಾವು ಅನ್ನೋದು ನಾವು ತಿಳಕೊಬೇಕು. ಆ ದಿಕ್ಕಿನಾಗ ಇದು ಒಕ್ಕೂಟ ವ್ಯವಸ್ಥೆಯ ಪರಿಚಯದ ಪ್ರಯತ್ನ. ಉಳಿದದ್ದು ಮುಂದ ನೋಡೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...