Homeಡೇಟಾ ಖೋಲಿಡೇಟಾ ಖೋಲಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-2

ಡೇಟಾ ಖೋಲಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-2

- Advertisement -
- Advertisement -

ಅರಿಸ್ಟಾಟಲ್ ಅಂತ್ ಒಬ್ಬ ಇದ್ದ. ಸುಮಾರು 2370 ವರ್ಷದ ಹಿಂದೆ. ಆ ಪುಣ್ಯಾತ್ಮ ಒಂದು ಮಾತು ಹೇಳಿ ಹೋದ. “ಅನೇಕ ಸಣ್ಣ ಸಣ್ಣ ವಸ್ತುಗಳು ಒಂದಕ್ಕೊಂದು ಸೇರುವುದರಿಂದ ಒಂದು ದೊಡ್ಡ ವಸ್ತು ಆಗಿರುತ್ತದೆ. ಆದರೆ ತನ್ನೊಳಗಿನ ಭಾಗಗಳಿಂದ ಆದ ಆ ದೊಡ್ಡ ವಸ್ತು, ತನ್ನ ಸಣ್ಣ ಸಣ್ಣ ಭಾಗಗಳ ಒಟ್ಟು ಮೊತ್ತಕ್ಕಿಂತ ಭಿನ್ನವಾಗಿರುತ್ತದೆ” ಎಂದು.

ಆದ್ರ ಆನಂತರ ಬಂದ ಕೆಲ ಮಹಾನುಭಾವರು ಅದನ್ನ ಬದಲು ಮಾಡಿದರು: “ಆ ದೊಡ್ಡ ವಸ್ತು, ತನ್ನ ಸಣ್ಣ ಸಣ್ಣ ಭಾಗಗಳ ಒಟ್ಟು ಮೊತ್ತಕ್ಕಿಂತ ದೊಡ್ಡದಾಗಿರುತ್ತದೆ” ಅಂತ. ಕೇವಲ ಒಂದು ಪದ ಬದಲಿ ಮಾಡಿದ್ರ ಎಷ್ಟು ಅಪಾರ್ಥ ಆಗತಾದ ಅನ್ನೋದು ಇದರಿಂದಾ ಗೊತ್ತಾಗ್ತದ.

ಇದನ್ನ ಗೆಸ್ಟಾಲ್ಟ್ ನಿಯಮ ಅಂತ ಕರೆದರು. ಗೆಸ್ಟಾಲ್ಟ್ ಅನ್ನೋದಕ್ಕ ಕನ್ನಡದೊಳಗ ರೂಪ, ಆಕಾರ ಅಂತ ಕರಿಯಬಹುದು.

ಹಂಗಾರ 20ನೆ ಶತಮಾನದ ಮರಿ ಅರಿಸ್ಟಾಟಲ್‌ಗಳು ರೂಪಿಸಿದ ‘ಗೆಸ್ಟಾಲ್ಟ್ ಥೆರಪಿ’ ಅಥವ ‘ಆಕಾರ ಸಿದ್ಧಾಂಥದ ರೋಗ ನಿದಾನ’ದ ಅರ್ಥ ಏನು? ಸರಳವಾಗಿ ಹೇಳೋದಾದರ, ಒಬ್ಬ ಮನುಷ್ಯನ ವ್ಯಕ್ತಿತ್ವ ತನ್ನ ದೇಹ-ಮನಸ್ಸು-ಸ್ವಂತ ವಿಚಾರ, ಹೊರಗಿನ ಪ್ರಭಾವ, ಸುತ್ತಲಿನ ಪರಿಸ್ಥಿತಿ, ಎಲ್ಲಾ ಸೇರಿ ಆಗಿರ್ತದ. ಈ ರೀತಿ ರೂಪುಗೊಂಡಿರುವುದನ್ನ ವ್ಯಕ್ತಿತ್ವ ಅನ್ನುವುದು. ಒಬ್ಬನ ಸ್ವಭಾವದ ಭಾಗಗಳಾದ ದೇಹ, ಮನಸ್ಸು, ವಿಚಾರ, ಪ್ರಭಾವ, ಪರಿಸ್ಥಿತಿ ಮುಂತಾದವುಗಳ ಒಟ್ಟು ಮೊತ್ತಕ್ಕಿಂತ ಅದು ದೊಡ್ಡದು ಅಂತ ಅವರು ವಾದಿಸಿದರು. ಆ ಮನೋವಿಜ್ಞಾನಿಗಳ ಗುಂಪಿನಲ್ಲಿ ವಿಲ್ಲ್ಹೆಲ್ಮ್ ಉಂಟ್, ಕರ್ಟ್ ಕೊಫ್ಕಾ, ಮ್ಯಾಕ್ಸ್
ವೆರ್ಥೆಮೆರ್, ಫ್ರಿಟ್ಸ್ ಪೆರ್ಲ್ಸ್, ವೂಲ್ಫ್‌ಗ್ಯಾಂಗ್ ಕೊಹ್ಲರ್, ಇತ್ಯಾದಿಗಳು ಇದ್ದರು.
ಅವರು ಪಾಪ ತಮ್ಮ ಕ್ಷೇತ್ರಕ್ಕ ತಮ್ಮ ಕೊಡುಗೆ ಕೊಟ್ಟರು, ಹೋದರು. ಆ ಸಿದ್ಧಾಂತ ಪಾಲಿಸೋ ವಿದ್ವಾಂಸರು ಈಗಲೂ ಇದ್ದಾರ.

ಆದರ ಪ್ರಾಚೀನ ಕಾಲದಿಂದಲೂ ನಮ್ಮ ಕಣ್ಣಿಗೆ ಕಾಣುವ ಜಗತ್ತಿನ ವಿಶ್ವ ಗುರು ಆಗಿರುವ ಭಾರತದ ಕೆಲವು ತಜ್ಞರು ಈ ಗೆಸ್ಟಾಲ್ಟ್ ಸಿದ್ಧಾಂತವನ್ನು ಹೊಸ ಕಣ್ಣಿನಿಂದ ನೋಡಿದರು. ಅದು ಅನ್ವಯ ಆಗುವುದು ನಮ್ಮ ದೇಹಕ್ಕೆ ಅಲ್ಲಾ, ನಮ್ಮ ದೇಶಕ್ಕೆ ಅಂತ ಚೀರಿ ಹೇಳಿದರು.

ಅವ್ರ ಪ್ರಕಾರ ಭಾರತ ಎಂಬೋ ರಾಷ್ಟ್ರ, ಎಲ್ಲಾ ರಾಜ್ಯಗಳ ಒಟ್ಟು ಮೊತ್ತಕ್ಕಿಂತಲೂ ದೊಡ್ಡದು, ಭವ್ಯವಾದದ್ದು. ಭಾರತ ಅನ್ನುವುದು ಕೇವಲ ರಾಜ್ಯಗಳ ಸಮೂಹ ಅಲ್ಲ, ಅದು ಅದಕ್ಕಿಂತಲೂ ದೊಡ್ಡದು, ಭಿನ್ನವಾದದ್ದು, ಭವ್ಯವಾದದ್ದು. ಒಟ್ಟಿನಲ್ಲಿ ಇದು ಒಕ್ಕೂಟ ಅಲ್ಲ, ಸಂಯುಕ್ತ ಸಂಘ ಅಲ್ಲ, ಕೇವಲ ರಾಜ್ಯಗಳ ಒಂದು ಗುಂಪು. ಹೀಗಾಗಿ, ದೇಶದ ಅಸ್ಮಿತೆ ಅನ್ನೋದು ದೊಡ್ಡದು. ರಾಜ್ಯಗಳ ಅನನ್ಯತೆ ಅಥವಾ ತನ್ನತನ ಅನ್ನೋದು ಯಾವ ಲೆಕ್ಕಕ್ಕೂ ಇಲ್ಲ.

ಈ ಪೀಠಿಕೆಯ ನಂತರ ನಮ್ಮ ವಿಷಯಕ್ಕ ಬರೋಣ. ಅದು ಮಾಧ್ಯಮ ನಲ್ಲರ ಬಗ್ಗೆ. ಈ ಹೊತ್ತಿನ ಮಾಧ್ಯಮ ನಲ್ಲರು ಯಾರು ಅಂದರ ಸದಾ ಸುದ್ದಿಯಲ್ಲಿ ಇರುವ ಕೆಲ ರಾಜ್ಯದ ಮುಖ್ಯ ಮಂತ್ರಿಗಳು. ಸುದ್ದಿ ಎನ್ನುವುದು ನಮ್ಮ ದೇಶದಾಗ ಬಹಳ ತಟಸ್ಥ ಹಾಗೂ ಯಾವ ಪಕ್ಷಕ್ಕೂ ಸೇರದೆ ಇರೋದರಿಂದ ಅವರು ಒಳ್ಳೆ ಕೆಲಸ ಮಾಡಿದಾಗ ಅಥವ ಕೆಟ್ಟ ಕೆಲಸ ಮಾಡಿದಾಗ ಅವರು ಸುದ್ದಿ ಮಾಡ್ತಾರ.

ಅದರೊಳಗ ಕೆಲವು ಹೆಸರು – ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಪಿನರಾಯಿ ವಿಜಯನ್, ಹೇಮಂತ್ ಸೊರೆನ್, ಅಜಯ್ ಸಿಂಗ್ ಬಿಸ್ಟ್ ಅಲಿಯಾಸ್ ಯೋಗಿ ಆದಿತ್ಯನಾಥ್, ಬಿ ಎಸ್ ಯಡಿಯೂರಪ್ಪ, ಇತ್ಯಾದಿ. ಇವರು ಜಾಸ್ತಿ ಹೆಸರು ಮಾಡಿದಾಗಲೆಲ್ಲಾ ಪಂಥ ಪ್ರಧಾನ ಸೇವಕರ ಹೆಸರು ಮರೆ ಆಗಲಿಕ್ಕೆ ಸುರು ಆಗೇದ ಅಂತ ಕೆಲವರಿಗೆ ಚಡಪಡಿಕೆ ಆಗಲಿಕ್ಕೆ ಸುರು ಆಗ್ತದ. ಅವರು ಏನು ಸಣ್ಣ ಸಣ್ಣವರಿಗೆಲ್ಲಾ ಪ್ರಾಮುಖ್ಯತೆ ಕೊಡೋದು? ದೊಡ್ಡವರನ್ನ ಮರೆತರೆ ಹೆಂಗ? ಅಂತ ಜೋರಾಗಿ ಹೇಳ್ತಾರ, “ನಿನ್ನ ಬಿಟ್ಟು ಬೇರೆ ದೇವರನ್ನು ಪೂಜಿಸಿದೊಡೆ ಎಂತಯ್ಯಾ?” ಅಂತ ಗೋಳಾಡುತ್ತಾರೆ. ಅವರ ಮನಸ್ಸಿನಾಗ ಎರಡು ತಪ್ಪು ಕಲ್ಪನೆಗಳು ಇರಬಹುದು. ಒಂದು ಪ್ರಧಾನಿ ಪಟ್ಟ ಅನ್ನೋದು ಸರ್ವ ಪ್ರಥಮ ಪ್ರಮುಖ ಅನ್ನೋದು, ಇನ್ನೊಂದು ರಾಜ್ಯಗಳು ಕನಿಷ್ಠ, ದೇಶ ಶ್ರೇಷ್ಠ ಅನ್ನೋದು. ಅವರೆಲ್ಲ ನಮ್ಮ ಕಾಲದ ಗೆಸ್ಟಾಲ್ಟ್ ನಂಬಿಕಸ್ಥರು.

ಅವರ ನಂಬಿಕೆ ತಪ್ಪು. ಅದಕ್ಕೆ ಯಾವುದೇ ಸಾಮಾಜಿಕ ವಿಜ್ಞಾನದ ಆಧಾರ ಇಲ್ಲ. ಮನೋವಿಜ್ಞಾನದ ಒಳಗ ಈ ವಿಚಾರಕ್ಕೆ ಮನ್ನಣೆ ಇರಬಹುದು. ಅದರಿಂದ ಬಹಳ ಜನ ಗುಣ ಆಗಿರಬಹುದು. ಆದರ ರಾಜ್ಯಶಾಸ್ತ್ರದೊಳಗ ಇದಕ್ಕೆ ಮನ್ನಣೆ ಇಲ್ಲ. ಇದು ಬಹು ಚರ್ಚಿತ ವಿಷಯ ಅಷ್ಟೇ ಅಲ್ಲ, ಬಹಳ ಜನ ಪಂಡಿತರಿಂದ ಟೀಕೆ-ನಿಂದನೆಗೆ ಒಳಗಾದ ವಿಷಯ. ರಾಜ್ಯಗಳ ಅನನ್ಯತೆ ಅನ್ನೋದು, ದೇಶದ ಅಸ್ಮಿತೆಗಿಂತ ದೊಡ್ಡದು. ರಾಜ್ಯಗಳಿಂದ ದೇಶಕ್ಕ ಪ್ರಾಮುಖ್ಯತೆ ಬರ್ತದ. ಉಲ್ಟಾ ಅಲ್ಲಾ.

ಇದಕ್ಕೆ ಒಂದು ಉದಾಹರಣೆ ಕೊಡೋಣ. 2015ರಲ್ಲಿ ಭಾರತದಿಂದ ಕಿರಿಯ ಐಪಿಎಸ್ ಅಧಿಕಾರಿಗಳ ತಂಡ ಅಮೆರಿಕ ದೇಶದ ಅಧ್ಯಯನ ಪ್ರವಾಸಕ್ಕ ಹೋಗಿತ್ತು. ಅವಾಗ ಅವರು ಅಲ್ಲಿನ ಕೆಲವು ಕೇಂದ್ರ ಪೊಲೀಸು ಪಡೆಗಳಾದ ಸಿಐಎ, ಎಫ್‌ಬಿಐ, ಐಆರ್‌ಎಸ್‌ಗಳ ಕಚೇರಿಗೆ ಕರಕೊಂಡು ಹೋದರು. ಆಮ್ಯಾಲೆ ಲಾಸ್ ಎಂಜಲಿಸ್, ಫ್ಲೋರಿಡಾ, ಕೆಂಟಕಿ, ನ್ಯುಯಾರ್ಕ್, ವಾಶಿಂಗ್‌ಟನ್ ಇತ್ಯಾದಿ ರಾಜ್ಯಗಳ ಪೊಲೀಸು ಅಧಿಕಾರಿಗಳ ಜೊತೆ ಭೇಟಿ ಮಾಡಿಸಿದರು.

ಅವಾಗ ಭಾರತೀಯ ಅಧಿಕಾರಿಗಳು ನಂಬಲಿಕ್ಕೆ ಸಾಧ್ಯವಿಲ್ಲದ ಎರಡು ವಿಷಯ ಅವರಿಗೆ ಗೊತ್ತಾತು. ಒಂದು ಅಲ್ಲಿ ಐಪಿಎಸ್ಸು-ಐಎಎಸ್ಸು ಅನ್ನೋದು ಇಲ್ಲ್ಲ.

ಇನ್ನೊಂದು ಅದು ಏನು ಅಂದರ ಅಮೆರಿಕ ದೇಶದಲ್ಲಿ ಕೇವಲ ಒಂದು ಪೊಲೀಸು ವ್ಯವಸ್ಥೆ ಇಲ್ಲ. ಅಲ್ಲೇ ಸುಮಾರು 19,000 ವಿವಿಧ ವ್ಯವಸ್ಥೆಗಳು ಇವೆ. ನಮ್ಮ ಊರಿನಲ್ಲಿ ಪೊಲೀಸು ಕೆಲಸ ಹೆಂಗ ಮಾಡಬೇಕು ಅನ್ನೋದು ನನಗೆ ಚನ್ನಾಗಿ ಗೊತ್ತಿರುತ್ತದೆ. ನನ್ನ ಊರಿಗೆ ಭೇಟಿಯೇ ನೀಡದ ವಾಶಿಂಗ್‌ಟನ್‌ನ ಹಿರಿಯ ಅಧಿಕಾರಿಗೆ ಏನು ಗೊತ್ತಿರ್ತದ ಮಣ್ಣು ಅಂತ ಅಲ್ಲಿನ ಪುಟ್ಟ ನಗರದ ಪೊಲೀಸು ಅಧಿಕಾರಿ ಒಬ್ಬ
ಇವರಿಗೆ ಹೇಳಿದ.

ಇದನ್ನ ಜೀರ್ಣಿಸಿಕೊಳ್ಳಲಿಕ್ಕೆ ಈಸ್ಟ್ ಇಂಡಿಯಾ ಕಂಪನಿಯ ಪಳೆಯುಳಿಕೆಗಳಾದ ನಮ್ಮ ಐಪಿಎಸ್ಸು ಅಧಿಕಾರಿಗಳಿಗೆ ಸಾಧ್ಯ ಆಗಲಿಲ್ಲ. ಅದು ಹೇಗೆ ಸಾಧ್ಯ, ನೀವು ನಮಗೆ ಸುಳ್ಳು ಹೇಳುತ್ತಿದ್ದೀರಿ ಅಂತ ಹೇಳಿ ಜೋರಾಗಿ ಜಗಳ ಮಾಡಿದರು. ಆಮ್ಯಾಲೆ ಅಲ್ಲಿಯೇ ನೆಲೆಸಿದ್ದ ಭಾರತಿಯ ಮೂಲದ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರನ್ನ ಅಲ್ಲಿಯ ಪೊಲೀಸರು ಕರೆಸಿದರು. ಅವರು ಇವರಿಗೆ ತಿಳಿಸಿ ಹೇಳಿದರು. ನಿಮಗೆ ಸುಳ್ಳು ಹೇಳಿ ಇವರಿಗೆ ಯಾವ ಲಾಭವೂ ಇಲ್ಲ. ಇಲ್ಲೇ ಇರುವುದು ನೈಜ ಒಕ್ಕೂಟ ವ್ಯವಸ್ಥೆ. ಭಾರತದ ಒಕ್ಕೂಟ ವ್ಯವಸ್ಥೆ ಇರೋದು ಬರೀ ಕಾಗದದ ಮೇಲೆ ಅಂತ ಅವರು ತಿಳಿ ಹೇಳುವಾಗ ರಾತ್ರಿ ಆಗಿತ್ತು. ಎಲ್ಲರೂ ಊಟ ಮಾಡಿ ತಲೆನೋವಿನ ಮಾತ್ರೆ ತೊಗೊಂಡು ಮಲಗಿಕೊಂಡರು. ಅವರು ಮರಳಿ ಭಾರತಕ್ಕೆ ಬಂದರೂ ಕೂಡ ಅವರಿಗೆ ಅಲ್ಲಿನ ಪೊಲೀಸು ವ್ಯವಸ್ಥೆ ಅರ್ಥ ಅಗಲಿಲ್ಲ.

ಈ ಕಳೆದ ಐದಾರು ವರ್ಷದೊಳಗ ಎರಡು ಶಬ್ದ ಮತ್ತ ಮತ್ತ ಬಳಕೆ ಆಗಲಿಕ್ಕೆ ಹತ್ತಿದ್ದಾವು. ಅವು ಯಾವಪಾ ಅಂದ್ರ – ವಿಕೇಂದ್ರೀಕರಣ ಮತ್ತು ಒಕ್ಕೂಟ ವ್ಯವಸ್ಥೆ. ಅವು ನಮಗ ಈಗ ಎಷ್ಟು ಮುಖ್ಯ ಅಗ್ಯಾವು ಅನ್ನೋದು ನಾವು ತಿಳಕೊಬೇಕು. ಆ ದಿಕ್ಕಿನಾಗ ಇದು ಒಕ್ಕೂಟ ವ್ಯವಸ್ಥೆಯ ಪರಿಚಯದ ಪ್ರಯತ್ನ. ಉಳಿದದ್ದು ಮುಂದ ನೋಡೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...