Homeಡೇಟಾ ಖೋಲಿಡೇಟಾ ಖೋಲಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-2

ಡೇಟಾ ಖೋಲಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-2

- Advertisement -
- Advertisement -

ಅರಿಸ್ಟಾಟಲ್ ಅಂತ್ ಒಬ್ಬ ಇದ್ದ. ಸುಮಾರು 2370 ವರ್ಷದ ಹಿಂದೆ. ಆ ಪುಣ್ಯಾತ್ಮ ಒಂದು ಮಾತು ಹೇಳಿ ಹೋದ. “ಅನೇಕ ಸಣ್ಣ ಸಣ್ಣ ವಸ್ತುಗಳು ಒಂದಕ್ಕೊಂದು ಸೇರುವುದರಿಂದ ಒಂದು ದೊಡ್ಡ ವಸ್ತು ಆಗಿರುತ್ತದೆ. ಆದರೆ ತನ್ನೊಳಗಿನ ಭಾಗಗಳಿಂದ ಆದ ಆ ದೊಡ್ಡ ವಸ್ತು, ತನ್ನ ಸಣ್ಣ ಸಣ್ಣ ಭಾಗಗಳ ಒಟ್ಟು ಮೊತ್ತಕ್ಕಿಂತ ಭಿನ್ನವಾಗಿರುತ್ತದೆ” ಎಂದು.

ಆದ್ರ ಆನಂತರ ಬಂದ ಕೆಲ ಮಹಾನುಭಾವರು ಅದನ್ನ ಬದಲು ಮಾಡಿದರು: “ಆ ದೊಡ್ಡ ವಸ್ತು, ತನ್ನ ಸಣ್ಣ ಸಣ್ಣ ಭಾಗಗಳ ಒಟ್ಟು ಮೊತ್ತಕ್ಕಿಂತ ದೊಡ್ಡದಾಗಿರುತ್ತದೆ” ಅಂತ. ಕೇವಲ ಒಂದು ಪದ ಬದಲಿ ಮಾಡಿದ್ರ ಎಷ್ಟು ಅಪಾರ್ಥ ಆಗತಾದ ಅನ್ನೋದು ಇದರಿಂದಾ ಗೊತ್ತಾಗ್ತದ.

ಇದನ್ನ ಗೆಸ್ಟಾಲ್ಟ್ ನಿಯಮ ಅಂತ ಕರೆದರು. ಗೆಸ್ಟಾಲ್ಟ್ ಅನ್ನೋದಕ್ಕ ಕನ್ನಡದೊಳಗ ರೂಪ, ಆಕಾರ ಅಂತ ಕರಿಯಬಹುದು.

ಹಂಗಾರ 20ನೆ ಶತಮಾನದ ಮರಿ ಅರಿಸ್ಟಾಟಲ್‌ಗಳು ರೂಪಿಸಿದ ‘ಗೆಸ್ಟಾಲ್ಟ್ ಥೆರಪಿ’ ಅಥವ ‘ಆಕಾರ ಸಿದ್ಧಾಂಥದ ರೋಗ ನಿದಾನ’ದ ಅರ್ಥ ಏನು? ಸರಳವಾಗಿ ಹೇಳೋದಾದರ, ಒಬ್ಬ ಮನುಷ್ಯನ ವ್ಯಕ್ತಿತ್ವ ತನ್ನ ದೇಹ-ಮನಸ್ಸು-ಸ್ವಂತ ವಿಚಾರ, ಹೊರಗಿನ ಪ್ರಭಾವ, ಸುತ್ತಲಿನ ಪರಿಸ್ಥಿತಿ, ಎಲ್ಲಾ ಸೇರಿ ಆಗಿರ್ತದ. ಈ ರೀತಿ ರೂಪುಗೊಂಡಿರುವುದನ್ನ ವ್ಯಕ್ತಿತ್ವ ಅನ್ನುವುದು. ಒಬ್ಬನ ಸ್ವಭಾವದ ಭಾಗಗಳಾದ ದೇಹ, ಮನಸ್ಸು, ವಿಚಾರ, ಪ್ರಭಾವ, ಪರಿಸ್ಥಿತಿ ಮುಂತಾದವುಗಳ ಒಟ್ಟು ಮೊತ್ತಕ್ಕಿಂತ ಅದು ದೊಡ್ಡದು ಅಂತ ಅವರು ವಾದಿಸಿದರು. ಆ ಮನೋವಿಜ್ಞಾನಿಗಳ ಗುಂಪಿನಲ್ಲಿ ವಿಲ್ಲ್ಹೆಲ್ಮ್ ಉಂಟ್, ಕರ್ಟ್ ಕೊಫ್ಕಾ, ಮ್ಯಾಕ್ಸ್
ವೆರ್ಥೆಮೆರ್, ಫ್ರಿಟ್ಸ್ ಪೆರ್ಲ್ಸ್, ವೂಲ್ಫ್‌ಗ್ಯಾಂಗ್ ಕೊಹ್ಲರ್, ಇತ್ಯಾದಿಗಳು ಇದ್ದರು.
ಅವರು ಪಾಪ ತಮ್ಮ ಕ್ಷೇತ್ರಕ್ಕ ತಮ್ಮ ಕೊಡುಗೆ ಕೊಟ್ಟರು, ಹೋದರು. ಆ ಸಿದ್ಧಾಂತ ಪಾಲಿಸೋ ವಿದ್ವಾಂಸರು ಈಗಲೂ ಇದ್ದಾರ.

ಆದರ ಪ್ರಾಚೀನ ಕಾಲದಿಂದಲೂ ನಮ್ಮ ಕಣ್ಣಿಗೆ ಕಾಣುವ ಜಗತ್ತಿನ ವಿಶ್ವ ಗುರು ಆಗಿರುವ ಭಾರತದ ಕೆಲವು ತಜ್ಞರು ಈ ಗೆಸ್ಟಾಲ್ಟ್ ಸಿದ್ಧಾಂತವನ್ನು ಹೊಸ ಕಣ್ಣಿನಿಂದ ನೋಡಿದರು. ಅದು ಅನ್ವಯ ಆಗುವುದು ನಮ್ಮ ದೇಹಕ್ಕೆ ಅಲ್ಲಾ, ನಮ್ಮ ದೇಶಕ್ಕೆ ಅಂತ ಚೀರಿ ಹೇಳಿದರು.

ಅವ್ರ ಪ್ರಕಾರ ಭಾರತ ಎಂಬೋ ರಾಷ್ಟ್ರ, ಎಲ್ಲಾ ರಾಜ್ಯಗಳ ಒಟ್ಟು ಮೊತ್ತಕ್ಕಿಂತಲೂ ದೊಡ್ಡದು, ಭವ್ಯವಾದದ್ದು. ಭಾರತ ಅನ್ನುವುದು ಕೇವಲ ರಾಜ್ಯಗಳ ಸಮೂಹ ಅಲ್ಲ, ಅದು ಅದಕ್ಕಿಂತಲೂ ದೊಡ್ಡದು, ಭಿನ್ನವಾದದ್ದು, ಭವ್ಯವಾದದ್ದು. ಒಟ್ಟಿನಲ್ಲಿ ಇದು ಒಕ್ಕೂಟ ಅಲ್ಲ, ಸಂಯುಕ್ತ ಸಂಘ ಅಲ್ಲ, ಕೇವಲ ರಾಜ್ಯಗಳ ಒಂದು ಗುಂಪು. ಹೀಗಾಗಿ, ದೇಶದ ಅಸ್ಮಿತೆ ಅನ್ನೋದು ದೊಡ್ಡದು. ರಾಜ್ಯಗಳ ಅನನ್ಯತೆ ಅಥವಾ ತನ್ನತನ ಅನ್ನೋದು ಯಾವ ಲೆಕ್ಕಕ್ಕೂ ಇಲ್ಲ.

ಈ ಪೀಠಿಕೆಯ ನಂತರ ನಮ್ಮ ವಿಷಯಕ್ಕ ಬರೋಣ. ಅದು ಮಾಧ್ಯಮ ನಲ್ಲರ ಬಗ್ಗೆ. ಈ ಹೊತ್ತಿನ ಮಾಧ್ಯಮ ನಲ್ಲರು ಯಾರು ಅಂದರ ಸದಾ ಸುದ್ದಿಯಲ್ಲಿ ಇರುವ ಕೆಲ ರಾಜ್ಯದ ಮುಖ್ಯ ಮಂತ್ರಿಗಳು. ಸುದ್ದಿ ಎನ್ನುವುದು ನಮ್ಮ ದೇಶದಾಗ ಬಹಳ ತಟಸ್ಥ ಹಾಗೂ ಯಾವ ಪಕ್ಷಕ್ಕೂ ಸೇರದೆ ಇರೋದರಿಂದ ಅವರು ಒಳ್ಳೆ ಕೆಲಸ ಮಾಡಿದಾಗ ಅಥವ ಕೆಟ್ಟ ಕೆಲಸ ಮಾಡಿದಾಗ ಅವರು ಸುದ್ದಿ ಮಾಡ್ತಾರ.

ಅದರೊಳಗ ಕೆಲವು ಹೆಸರು – ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಪಿನರಾಯಿ ವಿಜಯನ್, ಹೇಮಂತ್ ಸೊರೆನ್, ಅಜಯ್ ಸಿಂಗ್ ಬಿಸ್ಟ್ ಅಲಿಯಾಸ್ ಯೋಗಿ ಆದಿತ್ಯನಾಥ್, ಬಿ ಎಸ್ ಯಡಿಯೂರಪ್ಪ, ಇತ್ಯಾದಿ. ಇವರು ಜಾಸ್ತಿ ಹೆಸರು ಮಾಡಿದಾಗಲೆಲ್ಲಾ ಪಂಥ ಪ್ರಧಾನ ಸೇವಕರ ಹೆಸರು ಮರೆ ಆಗಲಿಕ್ಕೆ ಸುರು ಆಗೇದ ಅಂತ ಕೆಲವರಿಗೆ ಚಡಪಡಿಕೆ ಆಗಲಿಕ್ಕೆ ಸುರು ಆಗ್ತದ. ಅವರು ಏನು ಸಣ್ಣ ಸಣ್ಣವರಿಗೆಲ್ಲಾ ಪ್ರಾಮುಖ್ಯತೆ ಕೊಡೋದು? ದೊಡ್ಡವರನ್ನ ಮರೆತರೆ ಹೆಂಗ? ಅಂತ ಜೋರಾಗಿ ಹೇಳ್ತಾರ, “ನಿನ್ನ ಬಿಟ್ಟು ಬೇರೆ ದೇವರನ್ನು ಪೂಜಿಸಿದೊಡೆ ಎಂತಯ್ಯಾ?” ಅಂತ ಗೋಳಾಡುತ್ತಾರೆ. ಅವರ ಮನಸ್ಸಿನಾಗ ಎರಡು ತಪ್ಪು ಕಲ್ಪನೆಗಳು ಇರಬಹುದು. ಒಂದು ಪ್ರಧಾನಿ ಪಟ್ಟ ಅನ್ನೋದು ಸರ್ವ ಪ್ರಥಮ ಪ್ರಮುಖ ಅನ್ನೋದು, ಇನ್ನೊಂದು ರಾಜ್ಯಗಳು ಕನಿಷ್ಠ, ದೇಶ ಶ್ರೇಷ್ಠ ಅನ್ನೋದು. ಅವರೆಲ್ಲ ನಮ್ಮ ಕಾಲದ ಗೆಸ್ಟಾಲ್ಟ್ ನಂಬಿಕಸ್ಥರು.

ಅವರ ನಂಬಿಕೆ ತಪ್ಪು. ಅದಕ್ಕೆ ಯಾವುದೇ ಸಾಮಾಜಿಕ ವಿಜ್ಞಾನದ ಆಧಾರ ಇಲ್ಲ. ಮನೋವಿಜ್ಞಾನದ ಒಳಗ ಈ ವಿಚಾರಕ್ಕೆ ಮನ್ನಣೆ ಇರಬಹುದು. ಅದರಿಂದ ಬಹಳ ಜನ ಗುಣ ಆಗಿರಬಹುದು. ಆದರ ರಾಜ್ಯಶಾಸ್ತ್ರದೊಳಗ ಇದಕ್ಕೆ ಮನ್ನಣೆ ಇಲ್ಲ. ಇದು ಬಹು ಚರ್ಚಿತ ವಿಷಯ ಅಷ್ಟೇ ಅಲ್ಲ, ಬಹಳ ಜನ ಪಂಡಿತರಿಂದ ಟೀಕೆ-ನಿಂದನೆಗೆ ಒಳಗಾದ ವಿಷಯ. ರಾಜ್ಯಗಳ ಅನನ್ಯತೆ ಅನ್ನೋದು, ದೇಶದ ಅಸ್ಮಿತೆಗಿಂತ ದೊಡ್ಡದು. ರಾಜ್ಯಗಳಿಂದ ದೇಶಕ್ಕ ಪ್ರಾಮುಖ್ಯತೆ ಬರ್ತದ. ಉಲ್ಟಾ ಅಲ್ಲಾ.

ಇದಕ್ಕೆ ಒಂದು ಉದಾಹರಣೆ ಕೊಡೋಣ. 2015ರಲ್ಲಿ ಭಾರತದಿಂದ ಕಿರಿಯ ಐಪಿಎಸ್ ಅಧಿಕಾರಿಗಳ ತಂಡ ಅಮೆರಿಕ ದೇಶದ ಅಧ್ಯಯನ ಪ್ರವಾಸಕ್ಕ ಹೋಗಿತ್ತು. ಅವಾಗ ಅವರು ಅಲ್ಲಿನ ಕೆಲವು ಕೇಂದ್ರ ಪೊಲೀಸು ಪಡೆಗಳಾದ ಸಿಐಎ, ಎಫ್‌ಬಿಐ, ಐಆರ್‌ಎಸ್‌ಗಳ ಕಚೇರಿಗೆ ಕರಕೊಂಡು ಹೋದರು. ಆಮ್ಯಾಲೆ ಲಾಸ್ ಎಂಜಲಿಸ್, ಫ್ಲೋರಿಡಾ, ಕೆಂಟಕಿ, ನ್ಯುಯಾರ್ಕ್, ವಾಶಿಂಗ್‌ಟನ್ ಇತ್ಯಾದಿ ರಾಜ್ಯಗಳ ಪೊಲೀಸು ಅಧಿಕಾರಿಗಳ ಜೊತೆ ಭೇಟಿ ಮಾಡಿಸಿದರು.

ಅವಾಗ ಭಾರತೀಯ ಅಧಿಕಾರಿಗಳು ನಂಬಲಿಕ್ಕೆ ಸಾಧ್ಯವಿಲ್ಲದ ಎರಡು ವಿಷಯ ಅವರಿಗೆ ಗೊತ್ತಾತು. ಒಂದು ಅಲ್ಲಿ ಐಪಿಎಸ್ಸು-ಐಎಎಸ್ಸು ಅನ್ನೋದು ಇಲ್ಲ್ಲ.

ಇನ್ನೊಂದು ಅದು ಏನು ಅಂದರ ಅಮೆರಿಕ ದೇಶದಲ್ಲಿ ಕೇವಲ ಒಂದು ಪೊಲೀಸು ವ್ಯವಸ್ಥೆ ಇಲ್ಲ. ಅಲ್ಲೇ ಸುಮಾರು 19,000 ವಿವಿಧ ವ್ಯವಸ್ಥೆಗಳು ಇವೆ. ನಮ್ಮ ಊರಿನಲ್ಲಿ ಪೊಲೀಸು ಕೆಲಸ ಹೆಂಗ ಮಾಡಬೇಕು ಅನ್ನೋದು ನನಗೆ ಚನ್ನಾಗಿ ಗೊತ್ತಿರುತ್ತದೆ. ನನ್ನ ಊರಿಗೆ ಭೇಟಿಯೇ ನೀಡದ ವಾಶಿಂಗ್‌ಟನ್‌ನ ಹಿರಿಯ ಅಧಿಕಾರಿಗೆ ಏನು ಗೊತ್ತಿರ್ತದ ಮಣ್ಣು ಅಂತ ಅಲ್ಲಿನ ಪುಟ್ಟ ನಗರದ ಪೊಲೀಸು ಅಧಿಕಾರಿ ಒಬ್ಬ
ಇವರಿಗೆ ಹೇಳಿದ.

ಇದನ್ನ ಜೀರ್ಣಿಸಿಕೊಳ್ಳಲಿಕ್ಕೆ ಈಸ್ಟ್ ಇಂಡಿಯಾ ಕಂಪನಿಯ ಪಳೆಯುಳಿಕೆಗಳಾದ ನಮ್ಮ ಐಪಿಎಸ್ಸು ಅಧಿಕಾರಿಗಳಿಗೆ ಸಾಧ್ಯ ಆಗಲಿಲ್ಲ. ಅದು ಹೇಗೆ ಸಾಧ್ಯ, ನೀವು ನಮಗೆ ಸುಳ್ಳು ಹೇಳುತ್ತಿದ್ದೀರಿ ಅಂತ ಹೇಳಿ ಜೋರಾಗಿ ಜಗಳ ಮಾಡಿದರು. ಆಮ್ಯಾಲೆ ಅಲ್ಲಿಯೇ ನೆಲೆಸಿದ್ದ ಭಾರತಿಯ ಮೂಲದ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರನ್ನ ಅಲ್ಲಿಯ ಪೊಲೀಸರು ಕರೆಸಿದರು. ಅವರು ಇವರಿಗೆ ತಿಳಿಸಿ ಹೇಳಿದರು. ನಿಮಗೆ ಸುಳ್ಳು ಹೇಳಿ ಇವರಿಗೆ ಯಾವ ಲಾಭವೂ ಇಲ್ಲ. ಇಲ್ಲೇ ಇರುವುದು ನೈಜ ಒಕ್ಕೂಟ ವ್ಯವಸ್ಥೆ. ಭಾರತದ ಒಕ್ಕೂಟ ವ್ಯವಸ್ಥೆ ಇರೋದು ಬರೀ ಕಾಗದದ ಮೇಲೆ ಅಂತ ಅವರು ತಿಳಿ ಹೇಳುವಾಗ ರಾತ್ರಿ ಆಗಿತ್ತು. ಎಲ್ಲರೂ ಊಟ ಮಾಡಿ ತಲೆನೋವಿನ ಮಾತ್ರೆ ತೊಗೊಂಡು ಮಲಗಿಕೊಂಡರು. ಅವರು ಮರಳಿ ಭಾರತಕ್ಕೆ ಬಂದರೂ ಕೂಡ ಅವರಿಗೆ ಅಲ್ಲಿನ ಪೊಲೀಸು ವ್ಯವಸ್ಥೆ ಅರ್ಥ ಅಗಲಿಲ್ಲ.

ಈ ಕಳೆದ ಐದಾರು ವರ್ಷದೊಳಗ ಎರಡು ಶಬ್ದ ಮತ್ತ ಮತ್ತ ಬಳಕೆ ಆಗಲಿಕ್ಕೆ ಹತ್ತಿದ್ದಾವು. ಅವು ಯಾವಪಾ ಅಂದ್ರ – ವಿಕೇಂದ್ರೀಕರಣ ಮತ್ತು ಒಕ್ಕೂಟ ವ್ಯವಸ್ಥೆ. ಅವು ನಮಗ ಈಗ ಎಷ್ಟು ಮುಖ್ಯ ಅಗ್ಯಾವು ಅನ್ನೋದು ನಾವು ತಿಳಕೊಬೇಕು. ಆ ದಿಕ್ಕಿನಾಗ ಇದು ಒಕ್ಕೂಟ ವ್ಯವಸ್ಥೆಯ ಪರಿಚಯದ ಪ್ರಯತ್ನ. ಉಳಿದದ್ದು ಮುಂದ ನೋಡೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...