Homeಕರೋನಾ ತಲ್ಲಣಹಳ್ಳಿಗಳಲ್ಲಿ ದಾಖಲಾಗದ ಕೋವಿಡ್ ಸಾವುಗಳು: ಸಾಲುತ್ತಿಲ್ಲ ಕರ್ನಾಟಕದ ಆರೋಗ್ಯ ವ್ಯವಸ್ಥೆ..

ಹಳ್ಳಿಗಳಲ್ಲಿ ದಾಖಲಾಗದ ಕೋವಿಡ್ ಸಾವುಗಳು: ಸಾಲುತ್ತಿಲ್ಲ ಕರ್ನಾಟಕದ ಆರೋಗ್ಯ ವ್ಯವಸ್ಥೆ..

- Advertisement -
- Advertisement -

‘ನಮ್ಮ ರಾಜ್ಯದ ಆರೋಗ್ಯ ವ್ಯವಸ್ಥೇಯೇ ಹಳ್ಳ ಹಿಡಿದಿದೆ ಎಂಬುದು ಸಾಬೀತಾಗುತ್ತಿದೆ’ ಎಂದು ಅದೇ ತಾನೇ ಕೋವಿಡ್ ಕೇರ್ ಸೆಂಟರ್‌ನಿಂದ ಹೊರಬಂದ ಧಾರವಾಡದ ಸರ್ಕಾರಿ ವೈದ್ಯರೊಬ್ಬರು ತುಂಬ ಕಳವಳದಲ್ಲಿ ನಾನುಗೌರಿ.ಕಾಂಗೆ ಹೇಳಿದರು.

ಈಗ ಕೋವಿಡ್ ಎರಡನೇ ಅಲೆ ಹಳ್ಳಿಗಳಿಗೆ ದಾಳಿ ಇಟ್ಟಿದೆ. ಇದೇನೂ ಅನಿರೀಕ್ಷಿತವಲ್ಲ. ನಮ್ಮ ಪ್ರಭುತ್ವ ತೋರಿದ ಹೊಣೆಗೇಡಿತನವೇ ಇದಕ್ಕೆ ಕಾರಣ. ಉತ್ತರಪ್ರದೇಶ, ಬಿಹಾರ್ ರಾಜ್ಯಗಳ ಕೋವಿಡ್ ಶವಗಳು ಗಂಗೆಯಲ್ಲಿ ತೇಲಿ ಹೋಗಿದ್ದು ಕಣ್ಣಿಗೆ ರಾಚಿ ಹೋದ ದೃಶ್ಯಗಳಾಗಿದ್ದವು. ಪ್ರಧಾನಿ ಕೂಡ ಅತ್ತಂತೆ ಮಾಡಿದರು. ಆದರೆ ಇಲ್ಲಿ ಕರ್ನಾಟಕದ ಹಳ್ಳಿಗಳಲ್ಲಿ ಕೋವಿಡ್ ಸಾವುಗಳು ವರದಿಯಾಗದೇ ಹೋಗುತ್ತಿವೆ.

ಕಲಬುರಗಿ ಜಿಲ್ಲೆಯ ಹಳ್ಳಿ ಹಳ್ಳಿಗಳನ್ನು ಸುತ್ತಿದ ಪ್ರಜಾವಾಣಿ ವರದಿಗಾರ ಮನೋಜ್ ಕುಮಾರ್ ಗುದ್ದಿ, ‘ಹಳ್ಳಿಗಳಲ್ಲಿ ಪರೀಕ್ಷೆಯೇ ಆಗ್ತಿಲ್ಲ. ಲಸಿಕೆಯಂತೂ ದೂರದ ಮಾತು. ಕೋವಿಡ್‌ಗೆ ಅಪ್ಪ ಸತ್ತರೆ ಅಂತ್ಯಸಂಸ್ಕಾರ ಮಾಡಲು ಮಗನಿಲ್ಲ. ಏಕೆಂದರೆ ಆತನೂ ಕೋವಿಡ್ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಂದೇ ಕುಟುಂಬದಲ್ಲಿ 3-4 ಕೋವಿಡ್ ಸಾವು ಸಂಭವಿಸುತ್ತಿವೆ. ಪರಿಸ್ಥಿತಿ ಭೀಕರವಾಗಿದೆ’ ಎಂದು ನಾನುಗೌರಿ. ಕಾಂಗೆ ತಿಳಿಸಿದರು.

ಇತ್ತೀಚೆಗೆ ಪ್ರಮುಖ ದಿನಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಉಲ್ಲೇಖಿಸಿದ ಧಾರವಾಡದ ಸರ್ಕಾರಿ ವೈದ್ಯರು, ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಕಳೆದ 15 ದಿನಗಳಲ್ಲಿ 60 ಸಾವು ಸಂಭವಿಸಿವೆ. ಇದರಲ್ಲಿ ಕೇವಲ 4 ಸಾವುಗಳನ್ನು ಕೋವಿಡ್ ಸಾವುಗಳು ಎಂದು ದಾಖಲಿಸಲಾಗಿದೆ. ಇದನ್ನು ನಂಬಲಾಗುತ್ತದೆಯೇ? ಕೋವಿಡ್ ಸಂಬಂಧಕ್ಕೇ ಹೃದಯಾಘಾತ ಹೊಂದಿದವರ ಸಾವನ್ನು ಹೃದಯಾಘಾತ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ತಮ್ಮ ತಮ್ಮ ಜವಾಬ್ದಾರಿಗಳನ್ನು ಮರೆತ ವೈದ್ಯ ಸಿಬ್ದಂದಿ ಅಸಹಾಯಕವಾಗಿದೆಯೋ ಅಥವಾ ದಾರಿ ತಪ್ಪಿಸುತ್ತಿದೆಯೋ ಗೊತ್ತಾಗುತ್ತಿಲ್ಲ’ ಎನ್ನುತ್ತಾರೆ.

ಕಲಬುರ್ಗಿ ಕತೆ

ನಿತ್ಯ ದುಡಿದು ಮನೆಯನ್ನು ನಡೆಸುವ ಯುವಕರು, ಚಿಕ್ಕವರಿಗೆ ಮಾರ್ಗದರ್ಶನ ಮಾಡುತ್ತಿದ್ದ ಹಿರಿಯರು, ಮೊಮ್ಮಕ್ಕಳಿಗೆ ಚಂದಮಾಮನ ಕಥೆ ಹೇಳಿ ರಂಜಿಸುತ್ತಿದ್ದ ಅಜ್ಜ, ಅಜ್ಜಿ ಹೀಗೆ ಮನೆಗೆ, ಗ್ರಾಮಗಳಿಗೆ ಊರುಗೋಲಾಗಿದ್ದವರನ್ನೇ ಕೊರೋನಾದ ಎರಡನೇ ಅಲೆ ಆಪೋಶನ ತೆಗೆದುಕೊಂಡಿದೆ. ಅವರ ಬದುಕನ್ನು ನುಂಗಿ ನೀರು ಕುಡಿದಿದೆ ಎಂದು ಪ್ರಜಾವಾಣಿಯ ಮನೋಜ್ ಬರೆಯುತ್ತಾರೆ. ಹಲವಾರಿ ಹಳ್ಳಿಗಳನ್ನು ಸುತ್ತಿ ವಿಡಿಯೋ ವರದಿ ಮಾಡಿದ ಮನೋಜ್, ನಾನುಗೌರಿಯೊಂದಿಗೆ ಮಾತನಾಡುತ್ತ, 20ನೇ ಶತಮಾನದಲ್ಲಿ ಕಾಣಿಸಿಕೊಂಡ ಪ್ಲೇಗ್ ಮಹಾಮಾರಿ, 1970ರ ದಶಕದಲ್ಲಿ ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡ ‘ಡೌಗಿ’ ಬರದ ಬಳಿಕ ಕೊರೋನಾ ಹಾವಳಿಯಿಂದಾಗಿ ಇಷ್ಟೊಂದು ಸಾವುಗಳು ಸಂಭವಿಸಿದ್ದರಿಂದ ಗ್ರಾಮಗಳು ಅಕ್ಷರಶಃ ತತ್ತರಿಸಿ ಹೋಗಿವೆ’ ಎನ್ನುತ್ತಾರೆ.

ಆಳಂದ ತಾಲ್ಲೂಕಿನ ಗಡಿ ಗ್ರಾಮಗಳಾದ ಆಳಂಗಾ, ಖಜೂರಿ, ಅಫಜಲಪುರ ತಾಲ್ಲೂಕಿನ ಬಂದರವಾಡ, ಗೊಬ್ಬುರ (ಬಿ), ಚೌಡಾಪುರ, ಕಲಬುರ್ಗಿ ತಾಲ್ಲೂಕಿನ ಸಣ್ಣೂರ, ಹಾಗರಗಾ, ದಾರ್ಯ ನಾಯಕ ತಾಂಡಾ, ಖಾಜಾ ಕೋಟನೂರ, ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ, ಮಾಡಬೂಳ, ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಸೇಡಂ ತಾಲ್ಲೂಕಿನ ಮಳಖೇಡ, ರಾಜಶ್ರೀ ಸಿಮೆಂಟ್ ಕಾರ್ಖಾನೆಗೆ ಹೊಂದಿಕೊಂಡಂತಿರುವ ಹೂಡಾ (ಬಿ) ಸೇರಿದಂತೆ ಹಲವು ಗ್ರಾಮಗಳಲ್ಲಿ ತಮ್ಮ ಸಂಬಂಧಿಕರು, ನೆರೆ ಹೊರೆಯವರನ್ನು ಕಳೆದುಕೊಂಡ ದುಃಖ, ಬೇಸರ ಕುದಿ ಮೌನದ ರೂಪದಲ್ಲಿದೆ ಎಂದು ಮನೋಜ್ ನಮಗೆ ತಿಳಿಸಿದರು.

ವಿಚಿತ್ರ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಕೋವಿಡ್‌ನಿಂದ ಮೃತಪಟ್ಟ ತಂದೆಗೆ ಅಂತ್ಯಸಂಸ್ಕಾರ ಮಾಡಬೇಕಿದ್ದ ಮಗ ಆಸ್ಪತ್ರೆಯಲ್ಲಿ ಅದೇ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾನೆ. ಪತಿ ಸತ್ತ ಸುದ್ದಿ ಪಕ್ಕದ ಕೋವಿಡ್ ವಾರ್ಡ್ನಲ್ಲಿರುವ ಪತ್ನಿಗೂ ತಿಳಿಸಲಾಗದೇ ಅಂತ್ಯಸಂಸ್ಕಾರ ಮಾಡುವ ಅನಿವಾರ್ಯತೆ ಎದುರಾಗಿದೆ ಈಗ.
3 ಸಾವಿರ ಜನಸಂಖ್ಯೆ ಹೊಂದಿರುವ ಪುಟ್ಟ ಊರಲ್ಲಿ ಒಂದೇ ದಿನ ನಾಲ್ಕು ಜನ ತೀರಿಕೊಂಡ, ಬೆಳಿಗ್ಗೆ ತಂದೆ, ಸಂಜೆ ಮಗ ತೀರಿಕೊಂಡ, ಸ್ವತಃ ವೈದ್ಯ ಪತಿಯ ಕಣ್ಣೆದುರೇ ಉಸಿರುಗಟ್ಟಿ ಅಪಾರ ಯಾತನೆಯಿಂದ ಪತ್ನಿ ಮೃತಪಟ್ಟ ಉದಾಹರಣೆಗಳೂ ಇವೆ ಎನ್ನುತ್ತಾರೆ ಮನೋಜ್.

ಮಾರ್ಚ್ ಕೊನೆಯ ಹಾಗೂ ಏಪ್ರಿಲ್ ಮೊದಲ ವಾರದಲ್ಲಿ ಜಿಲ್ಲೆಯ ಗ್ರಾಮಗಳಿಗೆ ಹರಡಿದ ಕೊರೋನಾ ಸೋಂಕು ಸದ್ದಿಲ್ಲದೇ ಜನರ ಸಾವಿಗೆ ಕಾರಣವಾಯಿತು. ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಆಳಂದ, ಅಫಜಲಪುರ ತಾಲ್ಲೂಕುಗಳಲ್ಲಿ ಚೆಕ್ ಪೋಸ್ಟ್ ಆರಂಭಿಸಲಾಯಿತಾದರೂ ಕಟ್ಟುನಿಟ್ಟಿನ ತಪಾಸಣೆ ನಡೆಯಲಿಲ್ಲ. ಕೊರೊನಾ ನೆಗೆಟಿವ್ ಪ್ರಮಾಣಪತ್ರವನ್ನು ಪರಿಶೀಲಿಸದೆಯೇ ಎಷ್ಟೋ ಸಂದರ್ಭಗಳಲ್ಲಿ ಜಿಲ್ಲೆಗೆ ಪ್ರವೇಶ ನೀಡಲಾಯಿತು.

ಅಲ್ಲಿ ಏರುಗತಿ, ಇಲ್ಲಿ ಚೆಕಿಂಗ್ ಇಲ್ಲ!

ಕಲಬುರಗಿ ಜಿಲ್ಲೆಯ ಕೆಲಭಾಗ ಮಹಾರಾಷ್ಟ್ರದ ಗಡಿಗಳಿಗೆ ಹೊಂದಿಕೊಂಡಿದೆ ಮತ್ತು ಎರಡೂ ಕಡೆ ಕೊಡಕೊಳ್ಳುವ ಸಂಬಂಧವಿದೆ. ಇಲ್ಲಿಯವರು ಅಲ್ಲಿ, ಅಲ್ಲಿನವರು ಇಲ್ಲಿ ಕೆಲಸ ಮಾಡುತ್ತಾರೆ. ಜೊತೆಗೆ ವೈವಾಹಿಕ ಸಂಬಂಧಗಳಂತೂ ಸಹಜವಾಗಿವೆ. ಮಹಾರಾಷ್ಟ್ರದಲ್ಲಿ ಪ್ರಕರಣಗಳು ಏರುಗತಿಯಲ್ಲಿದ್ದ ಸಂದರ್ಭದಲ್ಲಿಯೂ ಕಲಬುರ್ಗಿ ಜಿಲ್ಲೆಗೆ ಬರುವ ಮಹಾರಾಷ್ಟ್ರ ಸಾರಿಗೆ ಬಸ್ ಹಾಗೂ ಇಲ್ಲಿಂದ ಪ್ರಯಾಣ ಆರಂಭಿಸಿ ವಾಪಸ್ ಜಿಲ್ಲೆಗೆ ಮುಂಬೈ, ಪುಣೆಯಲ್ಲಿದ್ದ ಜನರನ್ನು ಕರೆತಂದ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ತಪಾಸಣೆ ಮಾಡಲೇ ಇಲ್ಲ.
ಆಳಂದ ತಾಲ್ಲೂಕಿನ ಗಡಿ ಗ್ರಾಮ ಖಜೂರಿ ಚೆಕ್‌ಪೋಸ್ಟ್‌ನಲ್ಲಿ ಹೇಳಿಕೊಳ್ಳುವಂಥ ಕಟ್ಟುನಿಟ್ಟು ಕಂಡು ಬರಲೇ ಇಲ್ಲ.

ಧಾರವಾಡ ಮತ್ತು ಬೆಳಗಾವಿ ಕೂಡ ಮಹಾರಾಷ್ಟ್ರದ ಜೊತೆ ಗಡಿ ಹಂಚಿಕೊಂಡಿವೆ ಮತ್ತು ಆಪ್ತ ಸಂಬಂಧಗಳನ್ನು ಹೊಂದಿವೆ ಎಂಬುದನ್ನು ಇಲ್ಲಿ ನೆನಪಿಡಬೇಕು. ಹತ್ತು ದಿನಗಳ ಹಿಂದೆ ಮುಂಬೈ ಕರ್ನಾಟಕದಲ್ಲಿ ಸುತ್ತಾಡಿ ಹೋದ ಆರೋಗ್ಯ ಸಚಿವರಿಗೆ ಈ ಖಬರು ಇಲ್ಲವೇ ಇಲ್ಲ.
ಇದು ಕೇವಲ ಧಾರವಾಡ, ಕಲಬುರಗಿ ವಿಷಯವಷ್ಟೇ ಅಲ್ಲ, ರಾಜ್ಯದ ಬಹುಪಾಲು ಜಿಲ್ಲೆಗಳ ಹಳ್ಳಿಗಳಿಗೆ ಕೋವಿಡ್ ಎರಡನೇ ಅಲೆ ದಾಳಿ ಇಟ್ಟಿದೆ. ಹಳ್ಳಿಗಳಲ್ಲಿ ಸಂಭವಿಸುತ್ತಿರುವ ಸಾವುಗಳು ಕೋವಿಡ್ ಸಾವು ಎಂದು ಕೌಂಟ್ ಆಗುತ್ತಿಲ್ಲ. ಒಮ್ಮಿಂದೊಮ್ಮೇಲೆ ಒಂದು ಹಳ್ಳಿಯಲ್ಲಿ ಸಾವಿನ ಸಂಖ್ಯೆ ಏರತೊಡಗಿದರೆ, ಅದು ಕೋವಿಡ್ಡೋ ಅಥವಾ ಇನ್ನೊಂದೋ ಆಗಿರಲಿ, ಸರ್ಕಾರದ ಆರೋಗ್ಯ ವ್ಯವಸ್ಥೆ ಗಮನ ಹರಿಸಬೇಕಲ್ಲವೇ?

ಜನರೇ ಜಾಗೃತರಾಗಬೇಕು. ಈ ಕೊಳಕು ವ್ಯವಸ್ಥೆಯಿಂದ ಮೂರನೇ ಅಲೆಯೂ ಬರಲಿದೆ, ನಮ್ಮ ಮಕ್ಕಳನ್ನಾದರೂ ಕಾಪಾಡಿಕೊಳ್ಳೋಣ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ:ಲಾಕ್‌ಡೌನ್‌ನ ನೀರವ ಮೌನ ಮತ್ತು ಸಾಂಕ್ರಾಮಿಕದ ಶೋಕ ಗೀತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...

“ದಲಿತ ಮುಖ್ಯಮಂತ್ರಿ” ಅರ್ಹರು ಯಾರಿಲ್ಲಿ?

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ...

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗುವವನಲ್ಲ’: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ

ಹೈಕಮಾಂಡ್ ಯಾವಾಗ ಸೂಚಿಸುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 2026 ಮೇ 28 ರಂದು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...