Homeಕರೋನಾ ತಲ್ಲಣಹಳ್ಳಿಗಳಲ್ಲಿ ದಾಖಲಾಗದ ಕೋವಿಡ್ ಸಾವುಗಳು: ಸಾಲುತ್ತಿಲ್ಲ ಕರ್ನಾಟಕದ ಆರೋಗ್ಯ ವ್ಯವಸ್ಥೆ..

ಹಳ್ಳಿಗಳಲ್ಲಿ ದಾಖಲಾಗದ ಕೋವಿಡ್ ಸಾವುಗಳು: ಸಾಲುತ್ತಿಲ್ಲ ಕರ್ನಾಟಕದ ಆರೋಗ್ಯ ವ್ಯವಸ್ಥೆ..

- Advertisement -
- Advertisement -

‘ನಮ್ಮ ರಾಜ್ಯದ ಆರೋಗ್ಯ ವ್ಯವಸ್ಥೇಯೇ ಹಳ್ಳ ಹಿಡಿದಿದೆ ಎಂಬುದು ಸಾಬೀತಾಗುತ್ತಿದೆ’ ಎಂದು ಅದೇ ತಾನೇ ಕೋವಿಡ್ ಕೇರ್ ಸೆಂಟರ್‌ನಿಂದ ಹೊರಬಂದ ಧಾರವಾಡದ ಸರ್ಕಾರಿ ವೈದ್ಯರೊಬ್ಬರು ತುಂಬ ಕಳವಳದಲ್ಲಿ ನಾನುಗೌರಿ.ಕಾಂಗೆ ಹೇಳಿದರು.

ಈಗ ಕೋವಿಡ್ ಎರಡನೇ ಅಲೆ ಹಳ್ಳಿಗಳಿಗೆ ದಾಳಿ ಇಟ್ಟಿದೆ. ಇದೇನೂ ಅನಿರೀಕ್ಷಿತವಲ್ಲ. ನಮ್ಮ ಪ್ರಭುತ್ವ ತೋರಿದ ಹೊಣೆಗೇಡಿತನವೇ ಇದಕ್ಕೆ ಕಾರಣ. ಉತ್ತರಪ್ರದೇಶ, ಬಿಹಾರ್ ರಾಜ್ಯಗಳ ಕೋವಿಡ್ ಶವಗಳು ಗಂಗೆಯಲ್ಲಿ ತೇಲಿ ಹೋಗಿದ್ದು ಕಣ್ಣಿಗೆ ರಾಚಿ ಹೋದ ದೃಶ್ಯಗಳಾಗಿದ್ದವು. ಪ್ರಧಾನಿ ಕೂಡ ಅತ್ತಂತೆ ಮಾಡಿದರು. ಆದರೆ ಇಲ್ಲಿ ಕರ್ನಾಟಕದ ಹಳ್ಳಿಗಳಲ್ಲಿ ಕೋವಿಡ್ ಸಾವುಗಳು ವರದಿಯಾಗದೇ ಹೋಗುತ್ತಿವೆ.

ಕಲಬುರಗಿ ಜಿಲ್ಲೆಯ ಹಳ್ಳಿ ಹಳ್ಳಿಗಳನ್ನು ಸುತ್ತಿದ ಪ್ರಜಾವಾಣಿ ವರದಿಗಾರ ಮನೋಜ್ ಕುಮಾರ್ ಗುದ್ದಿ, ‘ಹಳ್ಳಿಗಳಲ್ಲಿ ಪರೀಕ್ಷೆಯೇ ಆಗ್ತಿಲ್ಲ. ಲಸಿಕೆಯಂತೂ ದೂರದ ಮಾತು. ಕೋವಿಡ್‌ಗೆ ಅಪ್ಪ ಸತ್ತರೆ ಅಂತ್ಯಸಂಸ್ಕಾರ ಮಾಡಲು ಮಗನಿಲ್ಲ. ಏಕೆಂದರೆ ಆತನೂ ಕೋವಿಡ್ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಒಂದೇ ಕುಟುಂಬದಲ್ಲಿ 3-4 ಕೋವಿಡ್ ಸಾವು ಸಂಭವಿಸುತ್ತಿವೆ. ಪರಿಸ್ಥಿತಿ ಭೀಕರವಾಗಿದೆ’ ಎಂದು ನಾನುಗೌರಿ. ಕಾಂಗೆ ತಿಳಿಸಿದರು.

ಇತ್ತೀಚೆಗೆ ಪ್ರಮುಖ ದಿನಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ಉಲ್ಲೇಖಿಸಿದ ಧಾರವಾಡದ ಸರ್ಕಾರಿ ವೈದ್ಯರು, ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಕಳೆದ 15 ದಿನಗಳಲ್ಲಿ 60 ಸಾವು ಸಂಭವಿಸಿವೆ. ಇದರಲ್ಲಿ ಕೇವಲ 4 ಸಾವುಗಳನ್ನು ಕೋವಿಡ್ ಸಾವುಗಳು ಎಂದು ದಾಖಲಿಸಲಾಗಿದೆ. ಇದನ್ನು ನಂಬಲಾಗುತ್ತದೆಯೇ? ಕೋವಿಡ್ ಸಂಬಂಧಕ್ಕೇ ಹೃದಯಾಘಾತ ಹೊಂದಿದವರ ಸಾವನ್ನು ಹೃದಯಾಘಾತ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ತಮ್ಮ ತಮ್ಮ ಜವಾಬ್ದಾರಿಗಳನ್ನು ಮರೆತ ವೈದ್ಯ ಸಿಬ್ದಂದಿ ಅಸಹಾಯಕವಾಗಿದೆಯೋ ಅಥವಾ ದಾರಿ ತಪ್ಪಿಸುತ್ತಿದೆಯೋ ಗೊತ್ತಾಗುತ್ತಿಲ್ಲ’ ಎನ್ನುತ್ತಾರೆ.

ಕಲಬುರ್ಗಿ ಕತೆ

ನಿತ್ಯ ದುಡಿದು ಮನೆಯನ್ನು ನಡೆಸುವ ಯುವಕರು, ಚಿಕ್ಕವರಿಗೆ ಮಾರ್ಗದರ್ಶನ ಮಾಡುತ್ತಿದ್ದ ಹಿರಿಯರು, ಮೊಮ್ಮಕ್ಕಳಿಗೆ ಚಂದಮಾಮನ ಕಥೆ ಹೇಳಿ ರಂಜಿಸುತ್ತಿದ್ದ ಅಜ್ಜ, ಅಜ್ಜಿ ಹೀಗೆ ಮನೆಗೆ, ಗ್ರಾಮಗಳಿಗೆ ಊರುಗೋಲಾಗಿದ್ದವರನ್ನೇ ಕೊರೋನಾದ ಎರಡನೇ ಅಲೆ ಆಪೋಶನ ತೆಗೆದುಕೊಂಡಿದೆ. ಅವರ ಬದುಕನ್ನು ನುಂಗಿ ನೀರು ಕುಡಿದಿದೆ ಎಂದು ಪ್ರಜಾವಾಣಿಯ ಮನೋಜ್ ಬರೆಯುತ್ತಾರೆ. ಹಲವಾರಿ ಹಳ್ಳಿಗಳನ್ನು ಸುತ್ತಿ ವಿಡಿಯೋ ವರದಿ ಮಾಡಿದ ಮನೋಜ್, ನಾನುಗೌರಿಯೊಂದಿಗೆ ಮಾತನಾಡುತ್ತ, 20ನೇ ಶತಮಾನದಲ್ಲಿ ಕಾಣಿಸಿಕೊಂಡ ಪ್ಲೇಗ್ ಮಹಾಮಾರಿ, 1970ರ ದಶಕದಲ್ಲಿ ಉತ್ತರ ಕರ್ನಾಟಕದಲ್ಲಿ ಕಾಣಿಸಿಕೊಂಡ ‘ಡೌಗಿ’ ಬರದ ಬಳಿಕ ಕೊರೋನಾ ಹಾವಳಿಯಿಂದಾಗಿ ಇಷ್ಟೊಂದು ಸಾವುಗಳು ಸಂಭವಿಸಿದ್ದರಿಂದ ಗ್ರಾಮಗಳು ಅಕ್ಷರಶಃ ತತ್ತರಿಸಿ ಹೋಗಿವೆ’ ಎನ್ನುತ್ತಾರೆ.

ಆಳಂದ ತಾಲ್ಲೂಕಿನ ಗಡಿ ಗ್ರಾಮಗಳಾದ ಆಳಂಗಾ, ಖಜೂರಿ, ಅಫಜಲಪುರ ತಾಲ್ಲೂಕಿನ ಬಂದರವಾಡ, ಗೊಬ್ಬುರ (ಬಿ), ಚೌಡಾಪುರ, ಕಲಬುರ್ಗಿ ತಾಲ್ಲೂಕಿನ ಸಣ್ಣೂರ, ಹಾಗರಗಾ, ದಾರ್ಯ ನಾಯಕ ತಾಂಡಾ, ಖಾಜಾ ಕೋಟನೂರ, ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ, ಮಾಡಬೂಳ, ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಸೇಡಂ ತಾಲ್ಲೂಕಿನ ಮಳಖೇಡ, ರಾಜಶ್ರೀ ಸಿಮೆಂಟ್ ಕಾರ್ಖಾನೆಗೆ ಹೊಂದಿಕೊಂಡಂತಿರುವ ಹೂಡಾ (ಬಿ) ಸೇರಿದಂತೆ ಹಲವು ಗ್ರಾಮಗಳಲ್ಲಿ ತಮ್ಮ ಸಂಬಂಧಿಕರು, ನೆರೆ ಹೊರೆಯವರನ್ನು ಕಳೆದುಕೊಂಡ ದುಃಖ, ಬೇಸರ ಕುದಿ ಮೌನದ ರೂಪದಲ್ಲಿದೆ ಎಂದು ಮನೋಜ್ ನಮಗೆ ತಿಳಿಸಿದರು.

ವಿಚಿತ್ರ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಕೋವಿಡ್‌ನಿಂದ ಮೃತಪಟ್ಟ ತಂದೆಗೆ ಅಂತ್ಯಸಂಸ್ಕಾರ ಮಾಡಬೇಕಿದ್ದ ಮಗ ಆಸ್ಪತ್ರೆಯಲ್ಲಿ ಅದೇ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾನೆ. ಪತಿ ಸತ್ತ ಸುದ್ದಿ ಪಕ್ಕದ ಕೋವಿಡ್ ವಾರ್ಡ್ನಲ್ಲಿರುವ ಪತ್ನಿಗೂ ತಿಳಿಸಲಾಗದೇ ಅಂತ್ಯಸಂಸ್ಕಾರ ಮಾಡುವ ಅನಿವಾರ್ಯತೆ ಎದುರಾಗಿದೆ ಈಗ.
3 ಸಾವಿರ ಜನಸಂಖ್ಯೆ ಹೊಂದಿರುವ ಪುಟ್ಟ ಊರಲ್ಲಿ ಒಂದೇ ದಿನ ನಾಲ್ಕು ಜನ ತೀರಿಕೊಂಡ, ಬೆಳಿಗ್ಗೆ ತಂದೆ, ಸಂಜೆ ಮಗ ತೀರಿಕೊಂಡ, ಸ್ವತಃ ವೈದ್ಯ ಪತಿಯ ಕಣ್ಣೆದುರೇ ಉಸಿರುಗಟ್ಟಿ ಅಪಾರ ಯಾತನೆಯಿಂದ ಪತ್ನಿ ಮೃತಪಟ್ಟ ಉದಾಹರಣೆಗಳೂ ಇವೆ ಎನ್ನುತ್ತಾರೆ ಮನೋಜ್.

ಮಾರ್ಚ್ ಕೊನೆಯ ಹಾಗೂ ಏಪ್ರಿಲ್ ಮೊದಲ ವಾರದಲ್ಲಿ ಜಿಲ್ಲೆಯ ಗ್ರಾಮಗಳಿಗೆ ಹರಡಿದ ಕೊರೋನಾ ಸೋಂಕು ಸದ್ದಿಲ್ಲದೇ ಜನರ ಸಾವಿಗೆ ಕಾರಣವಾಯಿತು. ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಆಳಂದ, ಅಫಜಲಪುರ ತಾಲ್ಲೂಕುಗಳಲ್ಲಿ ಚೆಕ್ ಪೋಸ್ಟ್ ಆರಂಭಿಸಲಾಯಿತಾದರೂ ಕಟ್ಟುನಿಟ್ಟಿನ ತಪಾಸಣೆ ನಡೆಯಲಿಲ್ಲ. ಕೊರೊನಾ ನೆಗೆಟಿವ್ ಪ್ರಮಾಣಪತ್ರವನ್ನು ಪರಿಶೀಲಿಸದೆಯೇ ಎಷ್ಟೋ ಸಂದರ್ಭಗಳಲ್ಲಿ ಜಿಲ್ಲೆಗೆ ಪ್ರವೇಶ ನೀಡಲಾಯಿತು.

ಅಲ್ಲಿ ಏರುಗತಿ, ಇಲ್ಲಿ ಚೆಕಿಂಗ್ ಇಲ್ಲ!

ಕಲಬುರಗಿ ಜಿಲ್ಲೆಯ ಕೆಲಭಾಗ ಮಹಾರಾಷ್ಟ್ರದ ಗಡಿಗಳಿಗೆ ಹೊಂದಿಕೊಂಡಿದೆ ಮತ್ತು ಎರಡೂ ಕಡೆ ಕೊಡಕೊಳ್ಳುವ ಸಂಬಂಧವಿದೆ. ಇಲ್ಲಿಯವರು ಅಲ್ಲಿ, ಅಲ್ಲಿನವರು ಇಲ್ಲಿ ಕೆಲಸ ಮಾಡುತ್ತಾರೆ. ಜೊತೆಗೆ ವೈವಾಹಿಕ ಸಂಬಂಧಗಳಂತೂ ಸಹಜವಾಗಿವೆ. ಮಹಾರಾಷ್ಟ್ರದಲ್ಲಿ ಪ್ರಕರಣಗಳು ಏರುಗತಿಯಲ್ಲಿದ್ದ ಸಂದರ್ಭದಲ್ಲಿಯೂ ಕಲಬುರ್ಗಿ ಜಿಲ್ಲೆಗೆ ಬರುವ ಮಹಾರಾಷ್ಟ್ರ ಸಾರಿಗೆ ಬಸ್ ಹಾಗೂ ಇಲ್ಲಿಂದ ಪ್ರಯಾಣ ಆರಂಭಿಸಿ ವಾಪಸ್ ಜಿಲ್ಲೆಗೆ ಮುಂಬೈ, ಪುಣೆಯಲ್ಲಿದ್ದ ಜನರನ್ನು ಕರೆತಂದ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ತಪಾಸಣೆ ಮಾಡಲೇ ಇಲ್ಲ.
ಆಳಂದ ತಾಲ್ಲೂಕಿನ ಗಡಿ ಗ್ರಾಮ ಖಜೂರಿ ಚೆಕ್‌ಪೋಸ್ಟ್‌ನಲ್ಲಿ ಹೇಳಿಕೊಳ್ಳುವಂಥ ಕಟ್ಟುನಿಟ್ಟು ಕಂಡು ಬರಲೇ ಇಲ್ಲ.

ಧಾರವಾಡ ಮತ್ತು ಬೆಳಗಾವಿ ಕೂಡ ಮಹಾರಾಷ್ಟ್ರದ ಜೊತೆ ಗಡಿ ಹಂಚಿಕೊಂಡಿವೆ ಮತ್ತು ಆಪ್ತ ಸಂಬಂಧಗಳನ್ನು ಹೊಂದಿವೆ ಎಂಬುದನ್ನು ಇಲ್ಲಿ ನೆನಪಿಡಬೇಕು. ಹತ್ತು ದಿನಗಳ ಹಿಂದೆ ಮುಂಬೈ ಕರ್ನಾಟಕದಲ್ಲಿ ಸುತ್ತಾಡಿ ಹೋದ ಆರೋಗ್ಯ ಸಚಿವರಿಗೆ ಈ ಖಬರು ಇಲ್ಲವೇ ಇಲ್ಲ.
ಇದು ಕೇವಲ ಧಾರವಾಡ, ಕಲಬುರಗಿ ವಿಷಯವಷ್ಟೇ ಅಲ್ಲ, ರಾಜ್ಯದ ಬಹುಪಾಲು ಜಿಲ್ಲೆಗಳ ಹಳ್ಳಿಗಳಿಗೆ ಕೋವಿಡ್ ಎರಡನೇ ಅಲೆ ದಾಳಿ ಇಟ್ಟಿದೆ. ಹಳ್ಳಿಗಳಲ್ಲಿ ಸಂಭವಿಸುತ್ತಿರುವ ಸಾವುಗಳು ಕೋವಿಡ್ ಸಾವು ಎಂದು ಕೌಂಟ್ ಆಗುತ್ತಿಲ್ಲ. ಒಮ್ಮಿಂದೊಮ್ಮೇಲೆ ಒಂದು ಹಳ್ಳಿಯಲ್ಲಿ ಸಾವಿನ ಸಂಖ್ಯೆ ಏರತೊಡಗಿದರೆ, ಅದು ಕೋವಿಡ್ಡೋ ಅಥವಾ ಇನ್ನೊಂದೋ ಆಗಿರಲಿ, ಸರ್ಕಾರದ ಆರೋಗ್ಯ ವ್ಯವಸ್ಥೆ ಗಮನ ಹರಿಸಬೇಕಲ್ಲವೇ?

ಜನರೇ ಜಾಗೃತರಾಗಬೇಕು. ಈ ಕೊಳಕು ವ್ಯವಸ್ಥೆಯಿಂದ ಮೂರನೇ ಅಲೆಯೂ ಬರಲಿದೆ, ನಮ್ಮ ಮಕ್ಕಳನ್ನಾದರೂ ಕಾಪಾಡಿಕೊಳ್ಳೋಣ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ:ಲಾಕ್‌ಡೌನ್‌ನ ನೀರವ ಮೌನ ಮತ್ತು ಸಾಂಕ್ರಾಮಿಕದ ಶೋಕ ಗೀತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...