Homeಕರ್ನಾಟಕಶ್ರದ್ಧಾಂಜಲಿ; ಕೃಷ್ಣ ಹೆಸರಿನ ಧರ್ಮರಾಯ!

ಶ್ರದ್ಧಾಂಜಲಿ; ಕೃಷ್ಣ ಹೆಸರಿನ ಧರ್ಮರಾಯ!

- Advertisement -
- Advertisement -

ಕೆ.ಆರ್ ಪೇಟೆಯ ಕೃಷ್ಣ ನಿಧನರಾಗಿದ್ದಾರೆ. ಈ ತಲೆಮಾರಿನ ರಾಜಕಾರಣಿಗಳು ಅನುಸರಿಸಲಾಗದ ಕೆಲವು ಮೌಲ್ಯಗಳನ್ನು ಬಿಟ್ಟುಹೋಗಿದ್ದಾರೆ. ಕೃಷ್ಣ ಮಂಡ್ಯ ಜಿಲ್ಲೆ ಕಂಡ ಅಪರೂಪದ ರಾಜಕಾರಣಿಗಳಾದ ಕೆ.ವಿ ಶಂಕರೇಗೌಡರು, ಎಚ್.ಟಿ ಕೃಷ್ಣಪ್ಪ, ಬಂಡಿ ಸಿದ್ದೇಗೌಡ, ಪಾಂಡವಪುರದ ಕೆಂಪಣ್ಣ, ಎಸ್.ಎಂ ಲಿಂಗಪ್ಪ ಇಂತಹವರ ಸಾಲಿಗೆ ಸೇರಿದವರು ಕೃಷ್ಣ. ಅವರು ಮೊದಲು ಮೇಷ್ಟರಾಗಿದ್ದವರು. ಆ ಹುದ್ದೆ ತೊರೆದು ರಾಜಕಾರಣಕ್ಕೆ ಬಂದರೂ ಕಡೆಯವರೆಗೂ ಬಡ ಮೇಷ್ಟರಂತೆಯೇ ಕಾಣುತ್ತಿದ್ದರು. ಅವರನ್ನು ಭೇಟಿಯಾಗಲು ಬಂದವರು ಹೇಳುವುದನ್ನ ಪೂರ್ಣ ಕೇಳಿಸಿಕೊಳ್ಳುವುದು, ಹೇಳಿದ್ದರಲ್ಲಿ ತಪ್ಪಾಗಿದ್ದರೆ ತಿದ್ದಿ ಬುದ್ಧಿ ಹೇಳುವ ಮೇಷ್ಟರ ಗುಣವನ್ನು ಬಿಡಲೇ ಇಲ್ಲ. ಅವರು 1983ರ ಕಾಂಗ್ರೆಸ್ ವಿರೋಧಿ ಅಲೆಯಿಂದ ಗೆದ್ದು ಬಂದವರು. ಆದರೆ ಕೆ.ಆರ್ ಪೇಟೆ ಜನಮನಗೆದ್ದು ಮೂರು ಬಾರಿ ಶಾಸಕರಾಗಿ, ಒಮ್ಮೆ ಮಂತ್ರಿಯಾಗಿ, ಲೋಕಸಭಾ ಸದಸ್ಯರಾಗಿ, ಕಡೆಗೆ ವಿಧಾನಸಭೆಯ ಸ್ಪೀಕರ್ ಆದರೂ ಸರಳ ಸಜ್ಜನಿಕೆಯ ಮೇಷ್ಟರಾಗಿ ಉಳಿದರು. ಕೃಷ್ಣರಿಗೆ ಎಲ್ಲ ಅವಕಾಶಗಳೂ ಒದಗಿಬರುವಂತೆ ಮಾಡಿದ ದೇವೇಗೌಡರು ಕೃಷ್ಣ ಅಲಂಕರಿಸಿದ್ದ ಸ್ಪೀಕರ್ ಸ್ಥಾನವನ್ನು ಬಹಳ ಚೆನ್ನಾಗಿ ಬಳಸಿಕೊಂಡರು. ಸ್ಪೀಕರ್ ಸ್ಥಾನದಲ್ಲಿ ಕುಳಿತು ಸಂವಿಧಾನಾತ್ಮಕವಾಗಿ ನಡೆದುಕೊಳ್ಳಲಾರದ ಯಾತನೆ ಅವರಿಗೆ ಕಡೆಯವರೆಗೂ ಉಳಿದಿತ್ತು. ಸಜ್ಜನ ರಾಜಕಾರಣಿಗಳಿಗೆ ಮುಖ ತೋರದಂತ ಕೀಳರಿಮೆ ಅನುಭವಿಸಿದ್ದರು.

ಜನಾಭಿಪ್ರಾಯವಿಲ್ಲದ ನಾಯಕನನ್ನು ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪಿಸುವ ಸಮಯದಲ್ಲಿ ಕೃಷ್ಣ, ದೇವೇಗೌಡರ ಸೂಚನೆಯಂತೆ ನಡೆದುಕೊಂಡರು. ಇದರ ಫಲವಾಗಿ ಆ ಮುಂದಿನ ಚುನಾವಣೆಯಲ್ಲಿ ಸೋತರು. 2013ರಲ್ಲಿ ಮತ್ತೆ ಚುನಾವಣೆ ಎದುರಾದಾಗ ಜೆಡಿಎಸ್ ವರಿಷ್ಠರು ಟಿಕೆಟ್ ನೀಡಲಿಲ್ಲ. ನಿಜಕ್ಕೂ ಕೃಷ್ಣ ಮಾಡಿದ ಉಪಕಾರಕ್ಕೆ ಜೆಡಿಎಸ್ ಕಡೆಯವರೆಗೂ ಅವರಿಗೆ ಟಿಕೆಟ್ ನೀಡಬೇಕಿತ್ತು. ಆದರೆ ಆ ಸಮಯಕ್ಕಾಗಲೇ ಅವರು ಉಪಯೋಗಿಸಿ ಬಿಸಾಕಿದ ವಸ್ತುವಿನಂತಾಗಿದ್ದರು. ಏಕೆಂದರೆ ಬಾಂಬೆಯಿಂದ ಸೂಟ್‌ಕೇಸ್ ಹಿಡಿದು ಬಂದ ನಾರಾಯಣಗೌಡರು ಆಗಲೇ ಲಕಲಕ ಹೊಳೆಯುತ್ತಿದ್ದರು. ಇಂತಹವರ ಎದುರು ನಿವೃತ್ತ ಉಪಾಧ್ಯಾಯನಂತೆ ಕಾಣುವ ಕೃಷ್ಣ ಯಾರಿಗೆ ಬೇಕು! ಈ ಮೊದಲು ಅವರು ಚುನಾವಣೆಗೆ ನಿಂತಾಗ ಜನಗಳೇ ಚಂದಾ ಎತ್ತಿ ಚುನಾವಣೆಯಲ್ಲಿ ಗೆಲ್ಲಿಸಿದ್ದರು. ಆದರೆ ಈಗ ಅಂತಹ ಮೌಲ್ಯಗಳೇ ಪತನಗೊಂಡು ಮತದಾರನೆ ರಾಜಕಾರಣಿ ಕೈಯಿಂದ ಚಂದಾ ವಸೂಲಿಗಿಳಿಯುತ್ತಿದ್ದಾನೆ. ಆದ್ದರಿಂದ ಕೃಷ್ಣ ಮೂಲೆಗುಂಪಾದರು. ಅವರು ಕಡೆಯಲ್ಲಿ ಕಾಂಗ್ರೆಸ್ ಸೇರಿದರೂ ನಾರಾಯಣಗೌಡರೆದುರಿಗೆ ನಿಲ್ಲಲಾಗಲಿಲ್ಲ. ಕೃಷ್ಣರಂತಹ ಸಜ್ಜನ ರಾಜಕಾರಣಿಯನ್ನ ಬೆಂಬಲಿಸಿದ್ದ ಕೆ.ಆರ್ ಪೇಟೆ ಈಗ ಬಿಜೆಪಿ ಪಾಲಾಗಿದೆ. ಈ ಅನಾಹುತಕ್ಕೆ ಕಾರಣ ಕೃಷ್ಣರನ್ನ ದುರುಪಯೋಗಪಡಿಸಿಕೊಂಡವರು.

ಕೃಷ್ಣ ಅಜಾತಶತ್ರು. ಅವರನ್ನ ಟೀಕಿಸಲು ಮತ್ತು ವಿರೋಧಿಸಲು ಕಾರಣಗಳೇ ಇಲ್ಲದಂತೆ ಬದುಕಿದವರು. ಅವರೊಮ್ಮೆ ನಾಗಮಂಗಲ ಐಬಿಗೆ ಬಂದಾಗ ಜನತಾದಳದ ಕಾರ್ಯಕರ್ತನೊಬ್ಬ ಕೇಳಿಸಿಕೊಳ್ಳಲು ಅಸಹ್ಯವಾಗುವ ಬೈಗುಳದಿಂದ ಬೈದ. ಕೃಷ್ಣ ನಗುತ್ತಲೇ ಅದನ್ನ ಸಹಿಸಿಕೊಂಡರು. ಅಂತಹ ಅಸಮಾನ್ಯ ತಾಳ್ಮೆ ಹೊಂದಿದ್ದರು. ಆದರೆ, ಸಾವಿರಾರು ರೂಪಾಯಿ ಸಂಬಳ ಎಣಿಸುವ ಅಧಿಕಾರಿಗಳು ಜನಗಳ ಕೆಲಸ ಮಾಡಿಕೊಡದಿದ್ದರೆ ಅಧಿಕಾರಿಗೆ ಭೂತ ಬಿಡಿಸುತ್ತಿದ್ದರು. ಇದು ಯಾರಿಗೂ ಗೊತ್ತಾಗುತ್ತಿರಲಿಲ್ಲ, ಯಾಕೆಂದರೆ ಅಧಿಕಾರಿಯನ್ನು ತಮ್ಮ ಛೇಂಬರಿಗೆ ಕರೆದು, ಬಾಗಿಲು ಹಾಕಿಕೊಂಡು, ಏರುದನಿಯಲ್ಲಿ ಬೈಯ್ಯುತ್ತಾ, “ಜನಗಳನ್ನು ನನ್ನವರೆಗೂ ಬುಟ್ಟಿದ್ದೀಯಾ, ನೀನ್ಯಾಕ್ಲ ಇರದು? ವಸಿ ಸಂಬ್ಳ ತಗತಿಯೇನೂ” ಎಂದು ಮಂಗಳಾರತಿ ಮಾಡಿ, ಎಚ್ಚರಿಸಿ, ರಿಪೇರಿ ಕೆಲಸ ಮುಗಿಸಿದಂತೆ ಈಚೆ ಬಂದು, ನಂತರ ಎಂದಿನ ಪ್ರಸನ್ನತೆ ಮತ್ತು ಸಮಾಧಾನದಿಂದ “ಸಾಯಬ್ರಿಗೇಳಿದ್ದೀನಿ, ಅವುರು ಮಾಡಿಕೊಡ್ತಾರೆ ಹೋಗ್ರಪ್ಪ ಎಂದು ಕಳಿಸುತ್ತಿದ್ದರು. ಇದು ಈ ಲೋಕಕ್ಕೆ ಗೊತ್ತಿಲ್ಲದಂತೆ ನಡೆದ ವ್ಯವಹಾರ.

ಕೃಷ್ಣ ಶಾಸಕ, ಮಂತ್ರಿ, ಸ್ಪೀಕರ್ ಹೀಗೆ ಹಲವಾರು ಹುದ್ದೆ ನಿಭಾಯಿಸಿದವರು. ದುಡ್ಡು ಮಾಡಿದವರಲ್ಲ. ಅದಾಗಿ ಬಂದುದನ್ನು ಬಡವರಿಗೆ, ಅನಾರೋಗ್ಯದವರಿಗೆ ಹಂಚುತ್ತಿದ್ದರು. ಮಹಾರಾಜ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದ ಪತ್ನಿ ಇಂದಿರಮ್ಮ ಮತ್ತು ಸಾಕುಮಗಳು ಮಂಜುಳ ಇದಿಷ್ಟೆ ಅವರ ಸಂಸಾರವಾಗಿದ್ದರೂ ಇಡೀ ತಾಲೂಕನ್ನೇ ಬಂಧು ಬಳಗವಾಗಿ ಪರಿಗಣಿಸಿದ್ದರು. ಸಾಮಾನ್ಯರಂತೆ ಸರಕಾರಿ ಬಸ್ಸಿನಲ್ಲಿ, ಆಟೋದಲ್ಲಿ ಓಡಾಡುತ್ತಿದ್ದರು. ಸದ್ಯಕ್ಕೆ ಈ ತರಹ ರಾಜಕಾರಣಿ ಮಂಡ್ಯ ಜಿಲ್ಲೆಯಲ್ಲಿ ಯಾರೂ ಇಲ್ಲ ಎಂಬುದೇ ನೋವಿನ ಸಂಗತಿ.


ಇದನ್ನೂ ಓದಿ: ಶ್ರದ್ಧಾಂಜಲಿ; ಗಾಂಧಿವಾದಿ ಚಳುವಳಿಯ ಪಿತಾಮಹ ಎಚ್ ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...

ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಯ ಜೊತೆಯಲ್ಲೆ ಸುಪ್ರೀಂ ಕೋರ್ಟ್‌ಗೆ ಹೋಗಲು ಕರ್ನಾಟಕ ಸಜ್ಜು

ಕೇಂದ್ರ ಸರ್ಕಾರದ ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ‘ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ)’ (VB-G RAM G) ಕಾಯ್ದೆಯ ಹಲವು ನಿಯಮಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ...

ಉತ್ತರ ಪ್ರದೇಶ: ಮದುವೆ ರಿಸೆಪ್ಷನ್‌ನಲ್ಲಿ ಗೋಮಾಂಸ ಬಡಿಸಿದ ಆರೋಪ; ವರನ ತಂದೆ ಸೇರಿ ಏಳು ಮಂದಿ ಬಂಧನ, ಮಂಟಪ ಸೀಲ್

ಶಾಮ್ಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾ ಪಟ್ಟಣದಲ್ಲಿ ನಡೆದ ಮದುವೆ ಆರತಕ್ಷತೆ (ವಲೀಮಾ) ಸಮಾರಂಭವೊಂದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಮಾರಂಭದಲ್ಲಿ ಅತಿಥಿಗಳಿಗೆ ಗೋಮಾಂಸವನ್ನು ಬೇಯಿಸಿ ಬಡಿಸಲಾಗಿದೆ ಎಂಬ...

ರಾಮ ಮಂದಿರ ದೇಣಿಗೆ ವಿವಾದ: ಎಫ್‌ಐಆರ್ ದಾಖಲಿಸಿ ತ್ವರಿತ ನ್ಯಾಯಾಲಯದ ವಿಚಾರಣೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ

ರಾಮ ದೇಣಿಗೆ ವಿವಾದ ದುರುಪಯೋಗ ಕುರಿತು ಎಸ್‌ಐಟಿ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದ ಕೂಡಲೇ, ಬಲಪಂಥೀಯ ಹಿಂದುತ್ವ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದೆ. ವಿಎಚ್‌ಪಿ ಅಂತರರಾಷ್ಟ್ರೀಯ...

ಪಾಸ್‌ಪೋರ್ಟ್ ಪೌರತ್ವದ ದಾಖಲೆಯಲ್ಲ: ವಿದೇಶಾಂಗ ಸಚಿವಾಲಯ

ಪಾಸ್‌ಪೋರ್ಟ್ ಒಂದು ಪ್ರಯಾಣದ ದಾಖಲೆಯಾಗಿದೆಯೇ ಹೊರತು, ಪೌರತ್ವದ ದಾಖಲೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಅಧಿಕಾರಿಗಳು ಬುಧವಾರ (ಜೂನ್ 24) ತಿಳಿಸಿದ್ದಾರೆ. ಈ ಮೂಲಕ ಅವರು ಭಾರತೀಯ ಪೌರತ್ವವನ್ನು ಖಚಿತವಾಗಿ ಸಾಬೀತುಪಡಿಸುವ...

90 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಆದರೆ ಪ್ರಧಾನ್ ತಮ್ಮ ಕುರ್ಚಿಗೆ ಅಂಟಿಕೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್' (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿವೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ...

2023ರಿಂದ 20 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನ್ ಮಕ್ಕಳನ್ನು ಹತ್ಯೆಗೈದ ಇಸ್ರೇಲ್; ಉದ್ದೇಶಪೂರ್ವಕ ‘ನರಮೇಧ’ ಎಂದ ವರದಿ

ಪ್ಯಾಲೆಸ್ತೀನ್ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಮೂಲಕ ಇಸ್ರೇಲ್‌ ಸೇನೆ ನರಮೇಧ ನಡೆಸಿದೆ ಎಂದು ವಿಶ್ವಸಂಸ್ಥೆಯ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗ ಮಂಗಳವಾರ (ಜೂ.23) ತಿಳಿಸಿದೆ. ಇಸ್ರೇಲ್ ಪಡೆಗಳು ಅಕ್ಟೋಬರ್ 2023ರಿಂದ ಈವರೆಗೆ...

ಮೀಸಲಾತಿ ರದ್ದುಗೊಳಿಸಲು ಬಿಜೆಪಿ ಮೂರನೇ ಎರಡರಷ್ಟು ಬಹುಮತ ಬಯಸುತ್ತಿದೆ: ಜೈರಾಮ್‌ ರಮೇಶ್‌

ಲೋಕಸಭೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತಕ್ಕಾಗಿ ಶ್ರಮಿಸುತ್ತಿದೆ. ಏಕೆಂದರೆ, ಮೀಸಲಾತಿಯನ್ನು ಕೊನೆಗೊಳಿಸಲು ಸಂವಿಧಾನವನ್ನು ತಿದ್ದುಪಡಿ ಮಾಡುವುದು ಅದರ ನಿಜವಾದ ಮತ್ತು ಅಂತಿಮ ಗುರಿಯಾಗಿದೆ ಎಂದು ಕಾಂಗ್ರೆಸ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್...