Homeಅಂಕಣಗಳುನೂರರ ನೋಟ: ಎಗ್ಗಿಲ್ಲದೆ ನಡೆಯುತ್ತಿರುವ ’ಬಿಜೆಪಿ ಸೇರಿದರೆ ಆರೋಪಮುಕ್ತವಾಗುವ’ ರಾಜಕಾರಣ

ನೂರರ ನೋಟ: ಎಗ್ಗಿಲ್ಲದೆ ನಡೆಯುತ್ತಿರುವ ’ಬಿಜೆಪಿ ಸೇರಿದರೆ ಆರೋಪಮುಕ್ತವಾಗುವ’ ರಾಜಕಾರಣ

- Advertisement -
- Advertisement -

ಮೋದಿ ಸರ್ಕಾರ ಶಕ್ತಿಶಾಲಿಗಳಾದ ರಾಜಕಾರಣಿಗಳನ್ನು ಬಗ್ಗುಬಡಿದು ತಮ್ಮ ಅಧೀನರನ್ನಾಗಿ ಮಾಡಿಕೊಳ್ಳುತ್ತಿದೆ. ಮಿಥುನ್ ಚಕ್ರವರ್ತಿ ಮತ್ತು ಶತಾಬ್ದಿ ರೇ ಉದಾಹರಣೆಯನ್ನೇ ತೆಗೆದುಕೊಳ್ಳಿ. ಇವರುಗಳ ಹೆಸರು ಪಶ್ಚಿಮ ಬಂಗಾಳದಲ್ಲಿ ಮನೆ ಮಾತಾಗಿತ್ತು. ಇವರು ನಡೆಸುತ್ತಿದ್ದ ಶಾರದಾ ಚಿಟ್ ಫಂಡ್ ಸ್ಕೀಮ್‌ನಲ್ಲಿ 17 ಲಕ್ಷ ಹೂಡಿಕೆದಾರರು 2461 ಕೋಟಿ ರೂಪಾಯಿಗಳನ್ನು ಹೂಡಿದ್ದರು. ಇವರು ಹುಟ್ಟು ಹಾಕಿದ 200 ಖಾಸಗಿ ಕಂಪೆನಿಗಳು ಭಾಗಿಯಾಗಿದ್ದವು. 16000 ನೌಕರರು ಈ ಕಂಪೆನಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿಚಾರಣೆ ನಡೆಯುತ್ತಿದ್ದಂತೆ ಮಿಥುನ್ ಚಕ್ರವರ್ತಿ ಭಾರತೀಯ ಜನತಾ ಪಕ್ಷ ಸೇರಿಕೊಂಡರು. ಶತಾಬ್ದಿ ರೇ ತೃಣಮೂಲ ಕಾಂಗ್ರೆಸ್ಸಿನಲ್ಲೇ ಸದಸ್ಯರಾಗಿ ಉಳಿದುಕೊಂಡರು. ಶತಾಬ್ದಿ ರೇ ಅವರ ಆಸ್ತಿಯನ್ನು ಇ.ಡಿ ವಶಪಡಿಸಿಕೊಂಡಿತು. ಯುಪಿಎ ಸರ್ಕಾರದಲ್ಲಿ ರೈಲ್ವೆ ರಾಜ್ಯ ಸಚಿವರಾಗಿದ್ದ ಮುಕುಲ್ ರಾಯ್ ಹಾಗೂ ಅಸ್ಸಾಂನ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಹಿಮಂತ ಬಿಸ್ವಾ ಶರ್ಮಾ ಅವರುಗಳಿಗೂ ಕೇಂದ್ರ ಬೇಹುಗಾರಿಕೆ ಸಂಸ್ಥೆಯ ತನಿಖಾಧಿಕಾರಿಗಳು ಬಿಸಿ ಮುಟ್ಟಿಸಿದರು. ಈ ಮಧ್ಯ ಅವರಿಬ್ಬರೂ ಬಿಜೆಪಿ ಸೇರಿಕೊಂಡರು. ಅದಾದ ನಂತರ ಅವರ ಮೇಲೆ ಏನೂ ಕ್ರಮ ಕೈಗೊಂಡ ಸುದ್ದಿ ಇಲ್ಲ.

ಈ ಪ್ರಕರಣಗಳು ಒಂದು ಅಂಶವನ್ನು ಹೊರಗೆಡುತ್ತದೆ. ನೀವು ಬಿಜೆಪಿಗೆ ಸೇರಿಬಿಟ್ಟರೆ, ಮೋದಿ ಷಾಗಳ ಪಾದ ಹಿಡಿದುಕೊಂಡುಬಿಟ್ಟರೆ, ನೀವು ಎಂತಹ ಘನಘೋರ ಕೃತ್ಯ ಎಸಗಿದ್ದರೂ ನಿಮಗೆ ರಕ್ಷಣೆ ಸಿಗುತ್ತದೆ. ನೀವು ಅವರಿಗೆ ಶರಣಾಗತರಾಗದಿದ್ದರೆ, ನಿಮ್ಮ ಭವಿಷ್ಯಕ್ಕೇ ಕುತ್ತು ಬರುತ್ತದೆ.

ಅಣ್ಣಾ ಹಜಾರೆ ತಮ್ಮ ನೈತಿಕ ಶಕ್ತಿಯ ಮೇಲೆ ಭರವಸೆ ಇಟ್ಟು ಹೋರಾಟ ಮಾಡುವವರು. ಲೋಕಾಯುಕ್ತ ಮಸೂದೆಯನ್ನು ಜಾರಿಗೆ ತರಲು ಒತ್ತಾಯಿಸಿ ಮನಮೋಹನ ಸಿಂಗ್ ಸರ್ಕಾರದ ವಿರುದ್ಧ, ಕ್ರಿಯಾಹೀನ ಪಾರ್ಲಿಮೆಂಟ್ ಸದಸ್ಯರ ವಿರುದ್ಧ ಸತ್ಯಾಗ್ರಹ ಹೂಡಿದರು. ಪಾರ್ಲಿಮೆಂಟಿನಲ್ಲಿ ಹತ್ತಾರು ವರ್ಷಗಳ ಹಿಂದೆ ಮಂಡಿಸಲಾದ ಲೋಕಾಯುಕ್ತ ಮಸೂದೆಯನ್ನು ಚರ್ಚೆಗೆ ತೆಗೆದುಕೊಳ್ಳದೆ ಕಾಲಹರಣ ಮಾಡಿದ ಲೋಕಸಭಾ ಸದಸ್ಯರನ್ನು ಅಣ್ಣಾಹಜಾರೆ ತರಾಟೆಗೆ ತೆಗೆದುಕೊಂಡಿದ್ದರು. ’ಈ ಸದಸ್ಯರು ತಮ್ಮ ಪಾತ್ರವನ್ನೇ ಯೋಗ್ಯವಾಗಿ ನಿರ್ವಹಿಸಿದ್ದರೆ, ಪ್ರಜೆಯಾದ ನಾನು ಸರ್ಕಾರದ ಬಾಗಿಲು ತಟ್ಟುವ ಕೆಲಸ ಮಾಡುತ್ತಿರಲಿಲ್ಲ. ಆದರೆ ನನ್ನ ಪ್ರತಿನಿಧಿಗಳು ನಿಷ್ಕ್ರಿಯರಾದಾಗ ಅದನ್ನು ಪ್ರಶ್ನಿಸುವ ಹಕ್ಕು ಪ್ರಜೆಯಾದ ನನಗಿದೆ’ ಎಂದು ಅಣ್ಣಾ ಹಜಾರೆ ವಾದ ಮಾಡಿದ ಮೇಲೆ ಪ್ರಧಾನಿಗಳು ಅವರಿಗೆ ಗೌರವಕೊಟ್ಟು ಲೋಕಾಯುಕ್ತ ಮಸೂದೆಯನ್ನು ಮಂಡಿಸಿ ಮಸೂದೆಗೆ ಪಾರ್ಲಿಮೆಂಟಿನ ಅನುಮೋದನೆ ಪಡೆದರು.

ಈ ಬಗೆಯ ನೈತಿಕ ಶಕ್ತಿಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಷಾಗಳಿಗೆ ನಂಬಿಕೆ ಇಲ್ಲ. ಅವರದೇನಿದ್ದರೂ ಕಿರುಕುಳ ಕೊಟ್ಟು ವಿರೋಧಿ ರಾಜಕಾರಣಿಗಳನ್ನು ಶರಣಾಗತರಾಗಿಸುವುದರಲ್ಲೇ ದೃಢವಾದ ನಂಬಿಕೆ. ಅಧಿಕಾರದ ದುರುಪಯೋಗ ಒಂದರಿಂದಲೇ ಸರ್ವಸ್ವವನ್ನೂ ಸಾಧಿಸಿಬಿಡುವೆವೆಂಬ ಅಹಂಕಾರ.
ಯಾರೇ ಮಾಡಬಾರದ್ದನ್ನೆಲ್ಲ ಮಾಡಿದ್ದರೂ, ಅವರು ಯಾವುದೇ ಪಾತಕ ಮಾಡಿದ್ದರೂ, ಅವರು ಬಿಜೆಪಿಗೆ ಶರಣಾಗತರಾದರೆ, ಅದು ಪಾತಕವೇ ಅಲ್ಲ. ಯಾರು ಮೋದಿಯವರನ್ನ ವಿರೋಧಿಸುತ್ತಾರೋ ಶರಣಾಗತರಾಗುವುದಿಲ್ಲವೋ ಅವರು ಮೋದಿ ಷಾಗಳ ದೃಷ್ಟಿಯಲ್ಲಿ ದೇಶದ್ರೋಹಿಗಳು.

ರಫೇಲ್ ಯುದ್ಧ ವಿಮಾನಗಳ ಖರೀದಿಯ ಸಂದರ್ಭದಲ್ಲಿ ಒಬ್ಬ ಖಾಸಗಿ ಭಾರತೀಯ ವ್ಯಕ್ತಿಗೆ ಕೋಟ್ಯಂತರ ರೂಗಳು ಹರಿದುಬರುವಂತೆ ಸರ್ಕಾರ ಮಸಲತ್ತು ಮಾಡಿದೆ ಎಂದು ಒಂದು ಫ್ರೆಂಚ್ ಮೂಲದ ಸುದ್ದಿವಾಹಿನಿ ವರದಿ ಮಾಡಿದೆ.

ರಫೇಲ್ ಯುದ್ಧ ವಿಮಾನಗಳನ್ನು ಕೊಳ್ಳುವ ಜವಾಬ್ದಾರಿಯನ್ನು ಮೊದಲು ಸರ್ಕಾರ ರಕ್ಷಣಾ ಸಚಿವಾಲಯಕ್ಕೆ ವಹಿಸಿತ್ತು. ರಕ್ಷಣಾ ಸಚಿವಾಲಯ ಉನ್ನತ ಸೈನ್ಯಾಧಿಕಾರಿಗಳ ಸಮಿತಿ ರಚಿಸಿ, ಅವರಿಗೆ ರಫೇಲ್ ಕೊಳ್ಳುವ ಬಗೆಗೆ ವ್ಯವಹರಿಸಲು ಅಧಿಕಾರ ನೀಡಿತು. ಅವರು ನಾಲ್ಕಾರು ಸಭೆಗಳನ್ನು ನಡೆಸಿ ವ್ಯವಹಾರ ಕುದುರಿಸುವ ಕೆಲಸ ಮಾಡುತ್ತಿರುವಾಗಲೇ ಮೋದಿಯವರ ಸರ್ಕಾರ ನೇರವಾಗಿ ತಾನೂ ಈ ಡೀಲ್‌ನಲ್ಲಿ ವ್ಯವಹರಿಸಲು ತೊಡಗುತ್ತದೆ. ಬೇಸರಗೊಂಡ ಸೈನ್ಯಾಧಿಕಾರಿಗಳ ಸಮಿತಿ ಬೇಸರಪಟ್ಟುಕೊಂಡು ಇನ್ನು ಮೇಲೆ ಸರ್ಕಾರವೇ ಈ ಸಂಬಂಧ ವ್ಯವಹಾರ ನಡೆಸಲಿ ಎಂದು ಹೇಳಿ ಮಾತುಕತೆಯಲ್ಲಿ ತೊಡಗಿಸಿಕೊಳ್ಳಲು ನಿರಾಕರಿಸಿತು. ಉನ್ನತಾಧಿಕಾರಿಗಳಿಗೆ ವಹಿಸಿದ್ದ ಕೆಲಸದಲ್ಲಿ ಮಧ್ಯೆ ತಲೆಹಾಕಿದ್ದು ತಪ್ಪು ಎಂದು ಮೋದಿಯವರಿಗೆ ಅನಿಸಲೇ ಇಲ್ಲ. ಯುದ್ಧ ವಿಮಾನದ ವಿಚಾರದಲ್ಲಿ ಏನೂ ತಿಳಿವಳಿಕೆ ಇಲ್ಲದ ಅಂಬಾನಿಯ ರಿಲಯನ್ಸ್ ಕಂಪನಿಯನ್ನು ಈ ವ್ಯವಹಾರದಲ್ಲಿ ಒಬ್ಬ ಪಾಲುದಾರರನ್ನಾಗಿಸುವಲ್ಲಿ ಯಶಸ್ವಿಯಾದರು. ವಿಮಾನ ನಿರ್ಮಾಣದಲ್ಲೇ ನಿರತವಾಗಿರುವ ರಕ್ಷಣಾ ಇಲಾಖೆಯ ಭಾಗವಾಗಿರುವ ಹಿಂದೂಸ್ತಾನ್ ಏರ್ ಕ್ರಾಫ್ಟ್‌ನವರು (ಹೆಚ್‌ಎಎಲ್) ತಮಗೆ ಈ ವಿಮಾನಗಳ ನಿರ್ಮಾಣದ ಕೆಲಸವನ್ನು ವಹಿಸುವುದಾದರೆ ಯುದ್ಧ ವಿಮಾನಗಳನ್ನು ತಯಾರಿಸಿಕೊಡುವುದಾಗಿ ನಿವೇದಿಸಿಕೊಂಡರೂ ಅದನ್ನು ಮೋದಿ ಸರ್ಕಾರ ತಳ್ಳಿಹಾಕಿತು.

ಈಗ ಈ ವ್ಯವಹಾರದಲ್ಲಿ ಭಾರತೀಯರೊಬ್ಬರಿಗೆ ಅಪಾರ ಹಣ ದೊರೆಯುವಂತೆ ಹುನ್ನಾರ ಮಾಡಿದೆಯೆಂದು ಆರೋಪಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ.

ಈ ಪ್ರಮುಖ ಪ್ರಕರಣದ ತನಿಖೆಯನ್ನು ಏಪ್ರಿಲ್ 24ರಂದು ನಿವೃತ್ತರಾದ ಮುಖ್ಯನ್ಯಾಯಾಧೀಶರ ನೇತೃತ್ವದ ಪೀಠವೇ ವಿಚಾರಣೆಗೆ ತೆಗೆದುಕೊಂಡಿತ್ತು. ಈಗ ಬೊಬ್ಡೆ ಅವರು ನಿವೃತ್ತರಾಗಿದ್ದು ಮುಂದಿನ ಮುಖ್ಯ ನ್ಯಾಯಮೂರ್ತಿಗಳು ಈ ವಿಚಾರಣೆಯ ನೇತೃತ್ವ ವಹಿಸುತ್ತಾರೆಯೇ ಕಾದು ನೋಡಬೇಕಿದೆ.

(ಇದು ಎಚ್ ಎಸ್ ದೊರೆಸ್ವಾಮಿಯವರು ಮೇ 5ರ ನ್ಯಾಯಪಥ ಸಂಚಿಕೆಗೆ ಬರೆದಿದ್ದ ಅಂಕಣ ಬರಹ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಒಪ್ಪುವುದಿಲ್ಲ : ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...