HomeUncategorizedಕಲಾವಿಭಾಗದ ಟಾಪರುಗಳ ಭವಿಷ್ಯವೇನು?

ಕಲಾವಿಭಾಗದ ಟಾಪರುಗಳ ಭವಿಷ್ಯವೇನು?

ಕಲಾವಿಭಾಗದಲ್ಲಿ ಟಾಪರ್ ಗಳಾದ ನಮ್ಮೂರಿನ ಹುಡುಗಿಯರು ಇಂದು ಏನಾಗಿದ್ದಾರೆ ಗೊತ್ತೇ?

- Advertisement -
- Advertisement -

| ಡಾ.ಅರುಣ್ ಜೋಳದಕೂಡ್ಲಿಗಿ |

ಇಂದು ಶಿಕ್ಷಣ ಪಡೆಯುವುದೇ ಉದ್ಯೋಗಕ್ಕಾಗಿ ಎಂದಾಗಿರುವುದರಿಂದ ಎಸ್.ಎಸ್.ಎಲ್.ಸಿ ನಂತರರ ಓದಿನ ಆಯ್ಕೆಯಲ್ಲಿ ಕಲಾ ವಿಭಾಗಕ್ಕಿಂತ ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯದ ಆಯ್ಕೆಗಳು ಹೆಚ್ಚಾಗುತ್ತಿದೆ. ಅದರಲ್ಲೂ ಕಲಾ ವಿಭಾಗವನ್ನು ಆಯ್ದುಕೊಳ್ಳುವುದೆಂದರೆ ಬಡವರು, ಹಳ್ಳಿಗರು, ಕನ್ನಡ ಮೀಡಿಯಂ ಓದಿದವರು, ಕಡಿಮೆ ಖರ್ಚಿನ ಕೋರ್ಸು, ಓದಿದರೂ ಉದ್ಯೋಗ ಕಷ್ಟ ಎನ್ನುವ ಸಮೀಕರಣವಿದೆ. ಅದಕ್ಕೆ ವಿರುದ್ಧವಾಗಿ ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯದ ಆಯ್ಕೆಯು ಉಳ್ಳವರು, ಇಂಗ್ಲೀಷ್ ಕಲಿತವರು, ನಗರದವರು, ಓದಿನ ಖರ್ಚು ಹೆಚ್ಚು, ಓದಿಗೆ ಉದ್ಯೋಗವಿದೆ ಇತ್ಯಾದಿಗಳು ತಳಕು ಹಾಕಿವೆ. ಇದರಲ್ಲಿ ಕೆಲವು ಸಂಗತಿಗಳು ವಾಸ್ತವ ಕೂಡ. ವ್ಯವಸ್ಥೆಯೂ ಇದಕ್ಕೆ ಪೂರಕವಾಗಿದೆ.ಈ ನಡುವೆ ಕಳೆದ ಒಂದೆರಡು ದಶಕದಲ್ಲಿ ಕಲಾವಿಭಾಗದ ಆಯ್ಕೆಯ ಬದಲಿಗೆ ಇದೇ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗಕ್ಕೆ ಬದಲಾಗುತ್ತಿದ್ದಾರೆ.

ಕುಸುಮ

ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಪಿಯು ಕಾಲೇಜು ಸತತವಾಗಿ 5 ವರ್ಷ ಕಲಾವಿಭಾಗದಲ್ಲಿ ಮೊದಲ ಸ್ಥಾನ ಪಡೆಯುತ್ತಿದೆ. ಇದೊಂದು ರೀತಿಯಲ್ಲಿ ಖಾಸಗಿ ಕಾಲೇಜುಗಳು ವಿಜ್ಞಾನ ವಾಣಿಜ್ಯ ಕಂಪ್ಯೂಟರ್ ವಿಭಾಗವನ್ನು ಹೊತ್ತು ಮೆರೆಸುವಾಗ, ಈ ಕಾಲೇಜಿನ ಕಲಾ ವಿಭಾಗದ ಒಲವು ಮೆಚ್ಚುವಂತಹದ್ದು. ಈ ರ್ಯಾಂಕುಗಳ ಮೂಲಕ ಇಂದು ಕಾಲೇಜು ರಾಜ್ಯದ ಗಮನ ಸೆಳೆದಿದೆ. ಹೀಗಿರುವಾಗಲೂ ಬರೀ ರ್ಯಾಂಕ್‍ಗಳ ಮೂಲಕ ಕಲಾ ವಿಭಾಗದ ಮೌಲ್ಯವನ್ನು ಹೆಚ್ಚಿಸಬಹುದೇ? ಬಹುಶಃ ಸಾಧ್ಯವಿಲ್ಲ. ಬದಲಿಗೆ ರ್ಯಾಂಕಿನ ಅಥವ ಹೆಚ್ಚು ಅಂಕಗಳನ್ನು ಪಡೆದ ಕಲಾ ವಿಭಾಗದ ಪ್ರತಿಭೆಗಳಿಗೆ ತಕ್ಕುನಾದ ಉಜ್ವಲ ಭವಿಷ್ಯ ರೂಪುಗೊಂಡರೆ ಮಾತ್ರ ಕಲಾ ವಿಭಾಗದ ಬಗ್ಗೆ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಒಲವು ಮತ್ತು ಹುರುಪು ಹೆಚ್ಚಬಹುದು.

ಈ ಕಾರಣಕ್ಕೆ ಕೊಟ್ಟೂರಿನ ಇಂದು ಕಾಲೇಜಿನಲ್ಲಿ ಕಳೆದ ಐದು ವರ್ಷ ಮೊದಲ ಟಾಪರ್ ಹುಡುಗಿಯರನ್ನು ಮಾತನಾಡಿಸಿದೆ. ಐದೂ ಜನರೂ ಕೆಳಜಾತಿ ಮತ್ತು ಕೆಳವರ್ಗಕ್ಕೆ ಸೇರಿದವರು. ಇವರೆಲ್ಲಾ ಟಾಪರ್ ಆದಾಗ ಪ್ರತಿಕ್ರಿಯೆಯಾಗಿ ಕೆ.ಎ.ಎಸ್. ಐ.ಎ.ಎಸ್ ಮೊದಲಾದ ಉನ್ನತ ಹುದ್ದೆಗಳ ಕನಸು ಕಂಡಿದ್ದರು. ಆದರೆ ಹೆಚ್ಚುವರಿ ಅಂಕಗಳು ಅವರನ್ನು ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ತಡೆಯೊಡ್ಡಿತು. ಹಾಗಾಗಿ ಈ ವರ್ಷದ ಟಾಪರ್ ಕುಸುಮಾಳನ್ನು (2019 ಪಡೆದ ಅಂಕ 594) ಹೊರತುಪಡಿಸಿ ಉಳಿದ ನೇತ್ರಾವತಿ ಎಂ.ಬಿ (2015/579), ಅನಿತಾ ಪಿ (2016/585), ಚೈತ್ರ.ಬಿ (2017/589) ಸ್ವಾತಿ ಎಸ್. (2018/595) ಈ ನಾಲ್ವರು ವಿಲೇಜ್ ಅಕೌಂಟೆಂಟ್(ವಿ.ಎ) ಆಗಿದ್ದಾರೆ.

ಅನಿತಾ

ಸದ್ಯಕ್ಕೆ ಎಲ್ಲರೂ ದೂರಶಿಕ್ಷಣದಲ್ಲಿ ಬಿ.ಎ ಮಾಡುತ್ತಿದ್ದು ಮುಂದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೆ.ಎ.ಎಸ್ ಅಥವಾ ಐ.ಎ.ಎಸ್ ತೆಗೆದುಕೊಳ್ಳುವುದಾಗಿ ಚೂರು ಮೆಲ್ಲಗೆ ಹೇಳುತ್ತಾರೆ. ಟಾಪರ್ ಆದಾಗ ಪ್ರತಿಕ್ರಿಯಿಸಿದ ಆತ್ಮವಿಶ್ವಾಸ ಇದೀಗ ಕುಗ್ಗಿದೆ. ಇವರೆಲ್ಲಾ ಹೇಳುವ ಕಾರಣ ತಮ್ಮ ಮನೆಗಳ ಬಡತನದ್ದು. ಮುಂದೆ ಓದುವ ಕನಸಿದ್ದರೂ ಬಡತನದ ಕಾರಣ ಉದ್ಯೋಗದ ಮುಂದೆ ಬೇರೆ ಆಯ್ಕೆಯಿಲ್ಲ. ಆದರೆ ವಿಜ್ಞಾನ ತಂತ್ರಜ್ಞಾನ ವಾಣಿಜ್ಯದ ರ್ಯಾಂಕ್ ವಿದ್ಯಾರ್ಥಿಗಳು ಬಹುಪಾಲು ಮುಂದಿನ ವಿದ್ಯಾಭ್ಯಾಸದಲ್ಲಿ ತೊಡಗುವುದು ಹೆಚ್ಚು. ಇವರ ಓದಿಗೆ ಸಾಂಸ್ಥಿಕ ಸಹಾಯ ಸಿಗುವುದಲ್ಲದೆ, ಮುಂದೆ ಒಳ್ಳೆಯ ಸಂಬಳದ ಉದ್ಯೋಗ ಸಿಗುವ ಭರವಸೆ ಕೂಡಾ ಇರುತ್ತದೆ.

ಇಲ್ಲಿ ಮುಖ್ಯವಾಗಿ ಇಂದು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳು ಭಾಷೆಯ ಆಯ್ಕೆಯಲ್ಲಿ ಇಂಗ್ಲೀಷ್ ಬದಲಿಗೆ ಸಂಸ್ಕೃತವನ್ನೂ, ಉಳಿದಂತೆ ಶಿಕ್ಷಣ, ಕಡ್ಡಾಯ ಕನ್ನಡದ ಜತೆ ಐಚ್ಚಿಕ ಕನ್ನಡ, ಇತಿಹಾಸ, ರಾಜ್ಯಶಾಸ್ತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. `ಅತಿಹೆಚ್ಚು ಕಿರುಪರೀಕ್ಷೆಗಳನ್ನು ಆಯೋಜಿಸುವುದು, ನಿರಂತರವಾಗಿ ಹಳೆಯ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವ ತರಬೇತಿ ಕೊಡುವುದು ರ್ಯಾಂಕಿಗೆ ಕಾರಣ’ ಎಂದು ಇಂದು ಕಾಲೇಜಿನ ಪ್ರಾಂಶುಪಾಲರಾದ ಭದ್ರಿನಾಥ ಹೇಳುತ್ತಾರೆ. ಬಹುಶಃ ಈ ಬಗೆಯ ವಿಷಯದ ಆಯ್ಕೆಯೂ ಟಾಪರ್ ಆದವರಿಗೆ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂಗ್ಲೀಷ್ ಭಾಷೆ ತೊಡಕಾಗುವ ಭಯವಿರಬಹುದು. ಇದರಿಂದಾಗಿಯೂ ಪಿಯುನ ಹೆಚ್ಚಿನ ಅಂಕದ ಕಾರಣಕ್ಕೆ ಸಿಕ್ಕ ವಿ.ಎ ಹುದ್ದೆಯನ್ನು ತಿರಸ್ಕರಿಸಲು ಸಾಧ್ಯವಾಗಿಲ್ಲ.

ಚೈತ್ರ

ಇಂದು ಇಡೀ ದೇಶದಲ್ಲಿ ಮಾನವಿಕ ವಿಜ್ಞಾನಗಳು ನಿರುದ್ಯೋಗದ ಕೋರ್ಸ್‍ಗಳೆಂಬಂತೆ ಅಪಮೌಲ್ಯಕ್ಕೆ ಒಳಗಾಗಿವೆ. ಇಂದು ಬಹುಸಂಖ್ಯಾತ ಯುವಜನರು ಸಮಾಜದ ಬಗೆಗೆ ಅರಿವು ಮೂಡಿಸಿಕೊಳ್ಳದೆ, ವಿಜ್ಞಾನ ತಂತ್ರಜ್ಞಾನ ವಾಣಿಜ್ಯದ ಓದಿನ ಆಯ್ಕೆಗೆ ಒಳಗಾದ ಕಾರಣ ಮಕ್ಕಳಿಗೆ ತನ್ನದೇ ಸಮಾಜದ ಸೂಕ್ಷ್ಮ ತಿಳುವಳಿಕೆಯೂ ಇಲ್ಲದಾಗುತ್ತದೆ. ಇಂತಹ ಕಲೆಯೇತರ ಆಯ್ಕೆಗಳು ಹೆಚ್ಚಾದಂತೆ ಅರಾಜಕ ಯುವಜನರೂ ಹೆಚ್ಚುವ ಸಾಧ್ಯತೆಯಿದೆ. ಇದರಿಂದಾಗಿ ಯುವಜನರಲ್ಲಿ ಸಮಾಜದ ಜತೆಗಿನ ಸಾವಯವ ಸಂಬಂಧದ ನಡವಳಿಕೆ ಇಲ್ಲವಾಗಿ, ಉಡಾಫೆಯ ಭಾವವನ್ನು ಬೆಳಸಿಕೊಳ್ಳುವ ಸಾಧ್ಯತೆಯಿದೆ. ಅಂತೆಯೇ ಸಮಾಜದ ಸಮಗ್ರ ಬೆಳವಳಿಗೆಯ ಕಡೆಗಲ್ಲದೆ, ಅಸಮಾನ ಸಮಾಜದ ಬೆಳವಣಿಗೆಯ ಪಾಲುದಾರರಾಗುವ ಸಾಧ್ಯತೆ ಇದೆ.

ಮುಖ್ಯವಾಗಿ ಸರಕಾರಗಳು ಕಲಾವಿಭಾಗಕ್ಕೆ ಹಚ್ಚು ಮೌಲ್ಯ ಪ್ರಾಪ್ತವಾಗುವಂತೆ ಪಠ್ಯಕ್ರಮಗಳನ್ನು ಅಳವಡಿಸುವುದು, ವಿಜ್ಞಾನ ತಂತ್ರಜ್ಞಾನ ವಾಣಿಜ್ಯ ಕೋರ್ಸ್‍ಗಳಲ್ಲಿಯೂ ಕನಿಷ್ಠ ಎರಡು ಮೂರು ಮಾನವಿಕ ವಿಷಯಗಳನ್ನು ಕಡ್ಡಾಯವಾಗಿ ಓದಲೆಬೇಕೆನ್ನುವ ಕಟ್ಟುನಿಟ್ಟಿನ ನಿಯಮ ತರುವುದು. ಜ್ಞಾನ ಪರಂಪರೆಯಲ್ಲಿ ದೇಸಿ ಜ್ಞಾನವೆ ಮೂಲವಾದ ಕಾರಣ ಎಲ್ಲಾ ಕೋರ್ಸುಗಳಲ್ಲಿ ಕಡ್ಡಾಯವಾಗಿ ದೇಸಿಜ್ಞಾನದ ಪಠ್ಯವನ್ನು ಅಳವಡಿಸುವುದು, ಇದಕ್ಕೆ ವಿಶೇಷವಾಗಿ ಜಾನಪದ ಪದವಿ ಪಡೆದವರನ್ನು ಬೋಧಕರನ್ನಾಗಿ ಆಯ್ಕೆ ಮಾಡುವುದು, ಅದಕ್ಕೆ ಪೂರಕವಾದ ಉದ್ಯೋಗಗಳನ್ನು ಸೃಷ್ಠಿಸುವುದು, ಕಲಾವಿಭಾಗದಲ್ಲಿ ರ್ಯಾಂಕ್ ಪಡೆದವರಿಗೆ ವಿಶೇಷ ಕೋಟದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯವನ್ನೂ ಒಳಗೊಂಡಂತೆ ಕಲಾ ವಿಭಾಗವನ್ನು ಮೌಲ್ಯೀಕರಿಸುವ ಕೆಲವು ಕಟ್ಟುನಿಟ್ಟಾದ ಯೋಜನೆಗಳನ್ನು ರೂಪಿಸಿಸಬೇಕಿದೆ. ಹೀಗೆ ಕಲಾವಿಭಾಗಕ್ಕೆ ಉಜ್ಞಲ ಭವಿಷ್ಯದ ದಾರಿಗಳು ತೆರೆದರೆ, ಈ ವಿಭಾಗದ ರ್ಯಾಂಕ್ ವಿದ್ಯಾರ್ಥಿಗಳು ಸಹಜವಾಗಿ ಎತ್ತರದ ಕನಸುಗಳಿಗೆ ರೆಕ್ಕೆ ಕಟ್ಟಿಕೊಂಡು ಹಾರಲು ಸಜ್ಜಾಗುತ್ತಾರೆ.

(ಲೇಖಕರು ಪೋಸ್ಟ್ ಡಾಕ್ಟರಲ್ ಫೆಲೋ, ಕನ್ನಡ ವಿಶ್ವವಿದ್ಯಾಲಯ ಹಂಪಿ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...