Homeಮುಖಪುಟನೋಟು ಬಂದಿಯಿಂದ ರೈತರ ಜೀವನ ಬರ್ಬಾದ್: ಒಪ್ಪಿಕೊಂಡ ಮೋದಿ ಸರ್ಕಾರ

ನೋಟು ಬಂದಿಯಿಂದ ರೈತರ ಜೀವನ ಬರ್ಬಾದ್: ಒಪ್ಪಿಕೊಂಡ ಮೋದಿ ಸರ್ಕಾರ

ನೋಟು ಬಂದಿ ತರುವಾಯ ಲಕ್ಷಾಂತರ ರೈತರು ಸಂಕಷ್ಟ ಅನುಭವಿಸಿದ್ದಾರೆ ಎಂದು ಮೋದಿ ಸರ್ಕಾರದ ಕೃಷಿ ಇಲಾಖೆ ಒಪ್ಪಿಕೊಂಡಿದೆ!!

- Advertisement -
- Advertisement -

| ಕೆ.ಪಿ ಸುರೇಶ್ |

ನೋಟು ಬಂದಿ ತರುವಾಯ ಲಕ್ಷಾಂತರ ರೈತರು ಸಂಕಷ್ಟ ಅನುಭವಿಸಿದ್ದಾರೆ ಎಂದು ಮೋದಿ ಸರ್ಕಾರದ ಕೃಷಿ ಇಲಾಖೆ ಒಪ್ಪಿಕೊಂಡಿದೆ!! ಸಂಸತ್ತಿನ ಆರ್ಥಿಕ ಸ್ಥಾಯಿ ಸಮಿತಿಗೆ ನೀಡಿದ ವರದಿಯಲ್ಲಿ ಕೃಷಿ ಇಲಾಖೆ ಈ ತಪ್ಪೊಪ್ಪಿಗೆ ವರದಿ ನೀಡಿದೆ. ವ್ಯಂಗ್ಯವೆಂದರೆ ಪ್ರಧಾನ ಚೌಕೀದಾರರು “ಕಾಳ ಧನ ಹತ್ತಿಕ್ಕಲು ನೋಟು ಬಂದಿಯಂಥಾ ಕಹಿ ಗುಳಿಗೆ ಪ್ರಯೋಗಿಸಿದೆ” ಎಂದು ಬೊಗಳೆ ಭಾಷಣ ಮಾಡುತ್ತಿದ್ದ ದಿನವೇ ಈ ವರದಿ ಬಹಿರಂಗವಾಗಿದೆ. ಈ ವರದಿ ಇಂದಿನದ್ದಲ್ಲ!! ಕಳೆದ ವರ್ಷದ ನವಂಬರ್ 20ರದ್ದು!! ಮೂರು ರಾಜ್ಯಗಳ ಚುನಾವಣಾ ಸಂದರ್ಭದಲ್ಲಿ ಮೋದಿ ಬೂಸಿ ಭಾಷಣ ಮಾಡುವಾಗ ಈ ವರದಿ ಬಂದಿದ್ದು ಗಮನಾರ್ಹ.

ರೈತರು ಮುಂಗಾರು ಬೆಳೆ ಮಾರಿ ಹಿಂಗಾರು ಬೆಳೆಗೆ ತಯಾರಿ ನಡೆಸುವ ಸಂಕ್ರಮಣ ಘಟ್ಟದಲ್ಲಿ ಬಿದ್ದ ಈ ಹೊಡೆತದಿಂದಾಗಿ ನಗದು ಅಭಾವ ಅನುಭವಿಸಿದ ರೈತರು ಅಪಾರ ಸಂಕಷ್ಟ ಅನುಭವಿಸಬೇಕಾಯಿತು. ದೇಶದ 27 ಕೋಟಿ ರೈತಾಪಿ ವರ್ಗ ಬಹುತೇಕ ನಗದು ಮೂಲಕವೇ ವ್ಯವಹರಿಸುತ್ತಿದ್ದು ಬೀಜ, ಗೊಬ್ಬರ ಕೊಳ್ಳುವುದರಿಂದ ಹಿಡಿದು ಬೇಸಾಯದ ಎಲ್ಲಾ ಕಾರ್ಯಗಳಲ್ಲೂ ತೊಂದರೆ ಅನುಭವಿಸಿದರು. ದೊಡ್ಡ ಜಮೀನುದಾರರೂ ಕೂಲಿ ಸಂಬಳ ಕೊಡಲು ನಗದು ಅಭಾವ ಅನುಭವಿಸಿದರು.

ರಾಷ್ಟ್ರೀಯ ಬೀಜ ನಿಗಮ 1.38 ಲಕ್ಷ ಕ್ವಿಂಟಾಲುಗಳಷ್ಟು ಬಿತ್ತನೆ ಗೋಧಿ ಬೀಜ ಮಾರಾಟ ಮಾಡಲಾರದೇ ಸೋತಿತು. ಹಳೇ ನೋಟು ಬಳಸಬಹುದು ಎಂದು ಸರ್ಕಾರ ಹೇಳಿದ ಮೇಲೂ ಮಾರಾಟ ಹೆಚ್ಚಲಿಲ್ಲ.

ಬೇಸಾಯ ಕುಂಟಿದ ಬಗ್ಗೆ ಕೃಷಿ ಇಲಾಖೆ ವರದಿಯಲ್ಲಿ ಹೇಳಿದೆ. ಆದರೆ ಇದರ ಸಾಮಾಜಿಕ ಪರಿಣಾಮದ ಬಗ್ಗೆ ಅದು ಹೇಳಿಲ್ಲ. ಅತ್ತ ಕಾರ್ಮಿಕ ಸಚಿವಾಲಯ ನೋಟು ಬಂದಿಯಿಂದ ಕಷ್ಟ-ನಷ್ಟ ಉಂಟಾಗಲಿಲ್ಲ ಎಂದು ಹೇಳಿ ಈ ಸಮಿತಿಯಿಂದ ಉಗಿಸಿಕೊಂಡಿದೆ.

ಇದನ್ನು ಓದಿ: ನೋಟು ರದ್ದತಿ : ಬಿಜೆಪಿಯ `ಕ್ಯಾಶ್ ಲೆಸ್’ ಸುಳ್ಳೂ ಇದೀಗ ಬಯಲಾಯ್ತು

ಕೃಷಿ ಕ್ಷೇತ್ರ ಸತತವಾಗಿ ಒಂದೆರಡು ದಶಕಗಳಿಂದ ಕುಂಟುತ್ತಿರುವುದು ಸರ್ಕಾರಕ್ಕೆ ಗೊತ್ತು. ಅಂಥಾ ಸಂದರ್ಭದಲ್ಲಿ ಈ ತಲೆ ಮೇಲೆ ಚಪ್ಪಡಿ ಎಳೆಯುವ ಕೆಲಸ ಮಾಡಿದ ಮೋದಿ ಇಂದಿಗೂ ಈ ಪ್ರಮಾದವನ್ನು ಒಪ್ಪಿಕೊಳ್ಳುತ್ತಿಲ್ಲ. ಗಾಯದ ಮೇಲೆ ಉಪ್ಪು ಸವರಿದ ಹಾಗೆ ರೈತರ ಆದಾಯ ದ್ವಿಗುಣ ಎಂಬ ಬೂಸಿಯನ್ನು ದೇಶದ ಮೇಲೆ ಹೇರುತ್ತಾ ಮೊನ್ನೆ ಮೊನ್ನೆ ವರೆಗೂ ಓಡಾಡುತ್ತಿದ್ದ ಈ ಬೊಗಳೆ ಪ್ರಧಾನಿ ಲೋಕಸಭಾ ಚುನಾವಣೆಯಲ್ಲಿ ಈ ಯಾವ ವಿಷಯವನ್ನೂ ಪ್ರಸ್ತಾಪಿಸದೇ ಕೂತಿದ್ದಾರೆ.

ನಮ್ಮ ದುರಂತವೆಂದರೆ ಎದುರಾಳಿ ಪಕ್ಷಗಳೂ ನಿರುದ್ಯೋಗ, ರೈತ ಸಂಕಷ್ಟದಂಥಾ ವಿಷಯಗಳನ್ನು ಮುಂದೊತ್ತದೇ ಮೋದಿಯೊಬ್ಬರನ್ನೇ ಟಾರ್ಗೆಟ್ ಮಾಡುವ ರಾಜಕೀಯ ಮಾಡುತ್ತಿದ್ದಾರೆ. ಅಷ್ಟೇಕೆ ಮೋದಿ ಸೃಷ್ಟಿಸಿದ ಮರಣಾಂತಿಕ ಗಾಯಗಳಿಗೆ ಪರಿಹಾರ ಏನು ಎಂಬ ನಕಾಶೆಯೂ ಇವರಲ್ಲಿ ಇಲ್ಲ. ಮೇವಿಲ್ಲದ ಹಸುಗಳು ಕೂತಲ್ಲೇ ತೂಕಡಿಸಿ ಒದ್ದಾಡಿ ಸಾಯುತ್ತವೆ. ಪ್ರಾಣಿ ಸಹಜ ಅಸಹಾಯಕತೆ ಅದು. ಒಂದು ವರ್ಗದ ರೈತರು ಈ ಅಸಹಾಯಕತೆಯಲ್ಲಿದ್ದರೆ, ಇನ್ನೊಂದು ವರ್ಗ ಇರುವ ರಾಜಕೀಯ ಪಕ್ಷಗಳ ಮೇಲಾಟವನ್ನೇ ಸಂಭ್ರಮಿಸುತ್ತಾ ಕೂತಿರುವಂತಿದೆ.

ಜಿಂಕೆಯೊಂದು ಹುಲಿಗೆ ಬಲಿಯಾದರೆ ಹಿಂಡಿನ ಉಳಿದ ಜಿಂಕೆಗಳು ಹೋರಾಡಿದ್ದಿಲ್ಲ. ಒಮ್ಮೆ ನೋಡಿ ಮತ್ತೆ ಮೇಯತೊಡಗುತ್ತವೆ. ರೈತರೂ ಇಂಥಾ ಪಶು ಸಹಜ ಮಟ್ಟಕ್ಕೆ ಬಂದಿದ್ದಾರೆ. ಈ ರೂಪಾಂತರಕ್ಕೆ ಮೋದಿಯ ಕೊಡುಗೆ ದೊಡ್ಡದು!

(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)

ನೋಟು ರದ್ದತಿಯ ಸಂದರ್ಭದಲ್ಲಿ 35-40% ಕಮೀಷನ್‍ ಪಡೆದ ಅಮಿತ್‍ಷಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...