Homeಮುಖಪುಟನೋಟು ರದ್ದತಿ : ಬಿಜೆಪಿಯ `ಕ್ಯಾಶ್ ಲೆಸ್’ ಸುಳ್ಳೂ ಇದೀಗ ಬಯಲಾಯ್ತು

ನೋಟು ರದ್ದತಿ : ಬಿಜೆಪಿಯ `ಕ್ಯಾಶ್ ಲೆಸ್’ ಸುಳ್ಳೂ ಇದೀಗ ಬಯಲಾಯ್ತು

- Advertisement -
- Advertisement -

ನೋಟು ರದ್ದತಿ ಮಾಡಲು ಹೊರಟಾಗ ಅದರಿಂದ ಕಪ್ಪುಹಣ ಹಿಡಿಯುತ್ತೇವೆಂದು ಹೇಳಿದ್ದರು. 3 ರಿಂದ 4 ಲಕ್ಷ ಕೋಟಿ ಕಪ್ಪುಹಣ ಬ್ಯಾಂಕ್‌ಗಳಿಗೆ ವಾಪಸ್ ಬರಲ್ಲ, ಅದೇ ದೊಡ್ಡ ಸಾಧನೆಯೆಂದು. ಶೇ.99.99ರಷ್ಟು ಹಣ ವಾಪಸ್ ಬಂದಿತು. ಏನೂ ಪ್ರಯೋಜನವಾಗಲಿಲ್ಲ. ಬದಲಿಗೆ ಸರ್ಕಾರವು ಹೊಸ ನೋಟು ಮುದ್ರಿಸಲು ಸಾವಿರಾರು ಕೋಟಿ ರೂ. ವೆಚ್ಚ ಮಾಡಬೇಕಾಯಿತು.

ಖೋಟಾ ನೋಟು ಹಿಡಿಯುತ್ತೇವೆಂದು ಹೇಳಿದ್ದರು. ಅದಕ್ಕಾಗಿ ಇಂತಹ ದೊಡ್ಡ ಸರ್ಕಸ್ ಬೇಕಿಲ್ಲವೆಂದು ತಜ್ಞರು ಹೇಳಿದ್ದರು. ಕೆಲವೇ ದಿನಗಳಲ್ಲಿ ಹೊಸ 2000 ರೂ. ಖೋಟಾ ನೋಟೂ ಪತ್ತೆಯಾಯಿತು.

ಭಯೋತ್ಪಾದನೆ ತಡೆಯುತ್ತೇವೆಂದಿದ್ದರು. ಈ ದೇಶದ ದುರಂತವೆಂದರೆ, ಯಾವ ಪಕ್ಷವೂ ಭಯೋತ್ಪಾದನೆ ನಿರ್ಮೂಲನೆಗೆ ಬೇಕಾದ ಸಮಗ್ರ ಕ್ರಮ ತೆಗೆದುಕೊಳ್ಳುತ್ತಿಲ್ಲ. ನೋಟು ರದ್ದತಿಯ ನಂತರ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾದವೆಂದು ಅಂಕಿ-ಅಂಶ ಹೇಳುತ್ತಿವೆ.

ಇರಲಿ, ಅವೆಲ್ಲಾ ವಿವರಗಳಿಗೆ ಇಲ್ಲಿ ಹೋಗಲ್ಲ.

ನೋಟು ರದ್ದತಿಯಿಂದಾಗುವ ಅನುಕೂಲವೆಂದು ಕಡೆಯಲ್ಲಿ ಹೇಳಿದ ಸುಳ್ಳು ಯಾವುದು ಗೊತ್ತೇ? ಡಿಸೆಂಬರ್ ಹೊತ್ತಿಗೆ ಮಿಕ್ಕವೆಲ್ಲಾ ಸುಳ್ಳು ಎಂದು ಬಯಲಾದ ನಂತರ ಹೊಸೆದ ಹೊಸ ಕಾರಣ ಅದು. ನವೆಂಬರ್ 8ರಂದು ಪ್ರಸ್ತಾಪಿಸಿಯೇ ಇರದಿದ್ದ ಕ್ಯಾಷ್‌ಲೆಸ್/ನಗದು ರಹಿತ ವಹಿವಾಟು ಹೆಚ್ಚಿಸುವುದು. ಹಾಗಾಗಿ ಇನ್ನು ಮುಂದೆ ನೋಟುಗಳ ಚಲಾವಣೆ ಬಹಳ ಕಡಿಮೆ ಇರುತ್ತದೆಂದು ಬಿಜೆಪಿ ಮತ್ತದರ ಪ್ರಚಾರಕರು ಹೇಳುತ್ತಾ ಹೋದರು.

ಇದೀಗ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ವಿವರವಾಗಿ ಬರೆದಿರುವಂತೆ, ವಾಸ್ತವದಲ್ಲಿ ನೋಟುಗಳ ಚಲಾವಣೆ ಹೆಚ್ಚಾಗಿದೆ. ಅಂದರೆ ಆರ್‌ಬಿಐ ನೋಟು ಮುದ್ರಣವನ್ನು ಹೆಚ್ಚಿಸಬೇಕಾಗಿ ಬಂದಿದೆ. 2016 ನವೆಂಬರ್ 4ರಂದು (ಅಂದರೆ ನೋಟು ರದ್ದತಿಗೆ ನಾಲ್ಕು ದಿನ ಮುಂಚೆ ಆರ್‌ಬಿಐ ಬಿಡುಗಡೆ ಮಾಡಿದಂತೆ) ದೇಶದಲ್ಲಿ 17.97 ಲಕ್ಷ ಕೋಟಿಗಳಷ್ಟು ನೋಟು ಚಲಾವಣೆ ಇತ್ತು. ಮಾರ್ಚ್ 15, 2015ರ ಹೊತ್ತಿಗೆ ಭಾರತದ ಆರ್ಥಿಕತೆಯಲ್ಲಿ 21.41 ಲಕ್ಷ ಕೋಟಿಗಳಷ್ಟು ನೋಟುಗಳ ಚಲಾವಣೆ ಆಗುತ್ತಿದೆ. ಇದು ಸ್ವತಃ ಆರ್‌ಬಿಐ ಬಿಡುಗಡೆ ಮಾಡಿದ ಅಂಕಿ-ಅಂಶ ಆಗಿದೆ. ಅಂದರೆ ಶೇ.19ರಷ್ಟು ಹೆಚ್ಚಳ!

ನೋಟು ರದ್ದತಿಯಾದ ತಕ್ಷಣ ಸುಳ್ಳು ಪ್ರಚಾರಕರು ಬ್ಲ್ಯಾಕ್ ಅಂಡ್ ವೈಟ್ ಕಾರ್ಯಕ್ರಮ ಮಾಡಲು ಹೊರಟಿದ್ದರು. ಅದು ಫೇಕ್ ಎಂದು ಸಾಬೀತಾದ ನಂತರ ಕ್ಯಾಷ್‌ಲೆಸ್ ದುನಿಯಾ ಅಂತಹ ಸುಳ್ಳು ಹರಡಲು ಹೊರಟರು. ಈಗ ಕ್ಯಾಷ್‌ಫುಲ್ ಆಗಿದೆ. ಸಾಮಾನ್ಯ ಜನರು ಮಾತ್ರ ಕ್ಯಾಷ್‌ಲೆಸ್ ಆಗಿದ್ದಾರೆ.

ನೋಟು ರದ್ದತಿಯಂತಹ ಒಂದು ಅಪಕ್ವವಾದ, ದುರುದ್ದೇಶಪೂರ್ವಕವಾದ ಕ್ರಮದಿಂದ ಆದ ನಷ್ಟ ಅಗಾಧವಾದದ್ದು. ಅದರಿಂದ ಒಂದೇ ಒಂದು ಲಾಭವೂ ಆಗಲಿಲ್ಲ; ಬದಲಿಗೆ ಜನರಲ್ಲಿ ಹುಟ್ಟಿಸಿದ ಹೆದರಿಕೆಯಿಂದ ಜನರು ಹೆಚ್ಚೆಚ್ಚು ಕ್ಯಾಷ್ ಇಟ್ಟುಕೊಳ್ಳಲು ಆರಂಭಿಸಿರುವುದಷ್ಟೇ ಇದಕ್ಕೆ ಕಾರಣವಲ್ಲ. ಕ್ಯಾಷ್‌ಲೆಸ್ ಮಾಡಲು ಬೇಕಾದ ನಿಧಾನಗತಿಯ ಪ್ರೋತ್ಸಾಹಕರ ಕ್ರಮಗಳ ಮೂಲಕ ಬದಲಾವಣೆ ತರದೇ, ಕೆಟ್ಟ ಆಪರೇಷನ್ ಮಾಡಿದರು. ಕ್ಯಾಷ್‌ಲೆಸ್ ಆಗಲು ಪ್ರೋತ್ಸಾಹ ಕೊಡುವ ಬದಲು, ಜನರು ಕ್ಯಾಷ್‌ಲೆಸ್ ವಹಿವಾಟು ಮಾಡಿದರೆ, ಕಮೀಷನ್ ಕಟ್ ಆಗಲು ಶುರುವಾಯಿತು.

ಹಾಗಾಗಿ ಸುಳ್ಳು ಪ್ರಚಾರಕರು ಭಾಷಣಗಳ ಮುಖಾಂತರ ಮತ್ತು ವಾಟ್ಸಾಪ್ ಫಾರ್ವರ್ಡ್‌ಗಳ ಮೂಲಕ ಜನರನ್ನು ದಿಕ್ಕುತಪ್ಪಿಸಲು ಹೊಸ ಹೊಸ ಸುಳ್ಳುಗಳನ್ನು ಹೆಣೆಯಯುತ್ತಾ ಸಾಗಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಗೆ ನೋಡಿ:

https://indianexpress.com/article/business/economy/cash-in-circulation-jumps-19-1-from-pre-demonetisation-level-5637325/

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...