Homeಮುಖಪುಟನೋಟು ರದ್ದತಿ : ಬಿಜೆಪಿಯ `ಕ್ಯಾಶ್ ಲೆಸ್’ ಸುಳ್ಳೂ ಇದೀಗ ಬಯಲಾಯ್ತು

ನೋಟು ರದ್ದತಿ : ಬಿಜೆಪಿಯ `ಕ್ಯಾಶ್ ಲೆಸ್’ ಸುಳ್ಳೂ ಇದೀಗ ಬಯಲಾಯ್ತು

- Advertisement -
- Advertisement -

ನೋಟು ರದ್ದತಿ ಮಾಡಲು ಹೊರಟಾಗ ಅದರಿಂದ ಕಪ್ಪುಹಣ ಹಿಡಿಯುತ್ತೇವೆಂದು ಹೇಳಿದ್ದರು. 3 ರಿಂದ 4 ಲಕ್ಷ ಕೋಟಿ ಕಪ್ಪುಹಣ ಬ್ಯಾಂಕ್‌ಗಳಿಗೆ ವಾಪಸ್ ಬರಲ್ಲ, ಅದೇ ದೊಡ್ಡ ಸಾಧನೆಯೆಂದು. ಶೇ.99.99ರಷ್ಟು ಹಣ ವಾಪಸ್ ಬಂದಿತು. ಏನೂ ಪ್ರಯೋಜನವಾಗಲಿಲ್ಲ. ಬದಲಿಗೆ ಸರ್ಕಾರವು ಹೊಸ ನೋಟು ಮುದ್ರಿಸಲು ಸಾವಿರಾರು ಕೋಟಿ ರೂ. ವೆಚ್ಚ ಮಾಡಬೇಕಾಯಿತು.

ಖೋಟಾ ನೋಟು ಹಿಡಿಯುತ್ತೇವೆಂದು ಹೇಳಿದ್ದರು. ಅದಕ್ಕಾಗಿ ಇಂತಹ ದೊಡ್ಡ ಸರ್ಕಸ್ ಬೇಕಿಲ್ಲವೆಂದು ತಜ್ಞರು ಹೇಳಿದ್ದರು. ಕೆಲವೇ ದಿನಗಳಲ್ಲಿ ಹೊಸ 2000 ರೂ. ಖೋಟಾ ನೋಟೂ ಪತ್ತೆಯಾಯಿತು.

ಭಯೋತ್ಪಾದನೆ ತಡೆಯುತ್ತೇವೆಂದಿದ್ದರು. ಈ ದೇಶದ ದುರಂತವೆಂದರೆ, ಯಾವ ಪಕ್ಷವೂ ಭಯೋತ್ಪಾದನೆ ನಿರ್ಮೂಲನೆಗೆ ಬೇಕಾದ ಸಮಗ್ರ ಕ್ರಮ ತೆಗೆದುಕೊಳ್ಳುತ್ತಿಲ್ಲ. ನೋಟು ರದ್ದತಿಯ ನಂತರ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾದವೆಂದು ಅಂಕಿ-ಅಂಶ ಹೇಳುತ್ತಿವೆ.

ಇರಲಿ, ಅವೆಲ್ಲಾ ವಿವರಗಳಿಗೆ ಇಲ್ಲಿ ಹೋಗಲ್ಲ.

ನೋಟು ರದ್ದತಿಯಿಂದಾಗುವ ಅನುಕೂಲವೆಂದು ಕಡೆಯಲ್ಲಿ ಹೇಳಿದ ಸುಳ್ಳು ಯಾವುದು ಗೊತ್ತೇ? ಡಿಸೆಂಬರ್ ಹೊತ್ತಿಗೆ ಮಿಕ್ಕವೆಲ್ಲಾ ಸುಳ್ಳು ಎಂದು ಬಯಲಾದ ನಂತರ ಹೊಸೆದ ಹೊಸ ಕಾರಣ ಅದು. ನವೆಂಬರ್ 8ರಂದು ಪ್ರಸ್ತಾಪಿಸಿಯೇ ಇರದಿದ್ದ ಕ್ಯಾಷ್‌ಲೆಸ್/ನಗದು ರಹಿತ ವಹಿವಾಟು ಹೆಚ್ಚಿಸುವುದು. ಹಾಗಾಗಿ ಇನ್ನು ಮುಂದೆ ನೋಟುಗಳ ಚಲಾವಣೆ ಬಹಳ ಕಡಿಮೆ ಇರುತ್ತದೆಂದು ಬಿಜೆಪಿ ಮತ್ತದರ ಪ್ರಚಾರಕರು ಹೇಳುತ್ತಾ ಹೋದರು.

ಇದೀಗ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ವಿವರವಾಗಿ ಬರೆದಿರುವಂತೆ, ವಾಸ್ತವದಲ್ಲಿ ನೋಟುಗಳ ಚಲಾವಣೆ ಹೆಚ್ಚಾಗಿದೆ. ಅಂದರೆ ಆರ್‌ಬಿಐ ನೋಟು ಮುದ್ರಣವನ್ನು ಹೆಚ್ಚಿಸಬೇಕಾಗಿ ಬಂದಿದೆ. 2016 ನವೆಂಬರ್ 4ರಂದು (ಅಂದರೆ ನೋಟು ರದ್ದತಿಗೆ ನಾಲ್ಕು ದಿನ ಮುಂಚೆ ಆರ್‌ಬಿಐ ಬಿಡುಗಡೆ ಮಾಡಿದಂತೆ) ದೇಶದಲ್ಲಿ 17.97 ಲಕ್ಷ ಕೋಟಿಗಳಷ್ಟು ನೋಟು ಚಲಾವಣೆ ಇತ್ತು. ಮಾರ್ಚ್ 15, 2015ರ ಹೊತ್ತಿಗೆ ಭಾರತದ ಆರ್ಥಿಕತೆಯಲ್ಲಿ 21.41 ಲಕ್ಷ ಕೋಟಿಗಳಷ್ಟು ನೋಟುಗಳ ಚಲಾವಣೆ ಆಗುತ್ತಿದೆ. ಇದು ಸ್ವತಃ ಆರ್‌ಬಿಐ ಬಿಡುಗಡೆ ಮಾಡಿದ ಅಂಕಿ-ಅಂಶ ಆಗಿದೆ. ಅಂದರೆ ಶೇ.19ರಷ್ಟು ಹೆಚ್ಚಳ!

ನೋಟು ರದ್ದತಿಯಾದ ತಕ್ಷಣ ಸುಳ್ಳು ಪ್ರಚಾರಕರು ಬ್ಲ್ಯಾಕ್ ಅಂಡ್ ವೈಟ್ ಕಾರ್ಯಕ್ರಮ ಮಾಡಲು ಹೊರಟಿದ್ದರು. ಅದು ಫೇಕ್ ಎಂದು ಸಾಬೀತಾದ ನಂತರ ಕ್ಯಾಷ್‌ಲೆಸ್ ದುನಿಯಾ ಅಂತಹ ಸುಳ್ಳು ಹರಡಲು ಹೊರಟರು. ಈಗ ಕ್ಯಾಷ್‌ಫುಲ್ ಆಗಿದೆ. ಸಾಮಾನ್ಯ ಜನರು ಮಾತ್ರ ಕ್ಯಾಷ್‌ಲೆಸ್ ಆಗಿದ್ದಾರೆ.

ನೋಟು ರದ್ದತಿಯಂತಹ ಒಂದು ಅಪಕ್ವವಾದ, ದುರುದ್ದೇಶಪೂರ್ವಕವಾದ ಕ್ರಮದಿಂದ ಆದ ನಷ್ಟ ಅಗಾಧವಾದದ್ದು. ಅದರಿಂದ ಒಂದೇ ಒಂದು ಲಾಭವೂ ಆಗಲಿಲ್ಲ; ಬದಲಿಗೆ ಜನರಲ್ಲಿ ಹುಟ್ಟಿಸಿದ ಹೆದರಿಕೆಯಿಂದ ಜನರು ಹೆಚ್ಚೆಚ್ಚು ಕ್ಯಾಷ್ ಇಟ್ಟುಕೊಳ್ಳಲು ಆರಂಭಿಸಿರುವುದಷ್ಟೇ ಇದಕ್ಕೆ ಕಾರಣವಲ್ಲ. ಕ್ಯಾಷ್‌ಲೆಸ್ ಮಾಡಲು ಬೇಕಾದ ನಿಧಾನಗತಿಯ ಪ್ರೋತ್ಸಾಹಕರ ಕ್ರಮಗಳ ಮೂಲಕ ಬದಲಾವಣೆ ತರದೇ, ಕೆಟ್ಟ ಆಪರೇಷನ್ ಮಾಡಿದರು. ಕ್ಯಾಷ್‌ಲೆಸ್ ಆಗಲು ಪ್ರೋತ್ಸಾಹ ಕೊಡುವ ಬದಲು, ಜನರು ಕ್ಯಾಷ್‌ಲೆಸ್ ವಹಿವಾಟು ಮಾಡಿದರೆ, ಕಮೀಷನ್ ಕಟ್ ಆಗಲು ಶುರುವಾಯಿತು.

ಹಾಗಾಗಿ ಸುಳ್ಳು ಪ್ರಚಾರಕರು ಭಾಷಣಗಳ ಮುಖಾಂತರ ಮತ್ತು ವಾಟ್ಸಾಪ್ ಫಾರ್ವರ್ಡ್‌ಗಳ ಮೂಲಕ ಜನರನ್ನು ದಿಕ್ಕುತಪ್ಪಿಸಲು ಹೊಸ ಹೊಸ ಸುಳ್ಳುಗಳನ್ನು ಹೆಣೆಯಯುತ್ತಾ ಸಾಗಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಗೆ ನೋಡಿ:

https://indianexpress.com/article/business/economy/cash-in-circulation-jumps-19-1-from-pre-demonetisation-level-5637325/

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....

ವಿಜಯ್ ಹೇಳಿದ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಟಿವಿಕೆ ಶಾಸಕರ ಕ್ರಿಮಿನಲ್ ಹಿನ್ನೆಲೆ

ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು...

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಫಲಿತಾಂಶದ ಬಳಿಕ ಭುಗಿಲೆದ್ದ ಹಿಂಸಾಚಾರ, ಕನಿಷ್ಠ ಐದು ಮಂದಿ ಸಾವು

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಬಾರಿಗೆ ಬೃಹತ್ ಗೆಲುವು ಸಾಧಿಸಿದ್ದು, ರಾಜ್ಯದ 294 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆದ್ದು ಮುಂದಿನ...

ಪಂಚರಾಜ್ಯ ಚುನಾವಣೆಯ ಗೋಜಲುಗಳು

ವಿವಾದಾತ್ಮಕ ಮತ್ತು ಸಂವಿಧಾನ ವಿರೋಧಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಅಡಿಯಲ್ಲಿ ನಡೆದ 2026ರ ಐದು ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಏಕರೂಪದ ಅಭಿಮತವನ್ನು ವ್ಯಕ್ತಪಡಿಸಲಿಲ್ಲ. ಮತ್ತು ಸಂಕೀರ್ಣವಾದ ಫಲಿತಾಂಶ ಕೊಟ್ಟಿದ್ದಾರೆ. ಪಶ್ಚಿಮ...

ಪ್ರಜಾಸತ್ತೆಯ ಉಳಿವಿಗೆ ಇದು ನಿರ್ಣಾಯಕ ಕ್ಷಣ : ಮಹತ್ವದ ಕಣ್ಣೋಟ

ಚುನಾವಣೆಗಳು ಮತ್ತು ನ್ಯಾಯಾಲಯಗಳು ಇನ್ನು ಪರಿಹಾರವಲ್ಲ ಎಂಬ ಅಭಿಪ್ರಾಯಕ್ಕೆ ಜನರು ಬರಲು ಈ ಬಾರಿಯ ವಿಧಾನಸಭಾ ಚುನಾವಣೆಗಳೇ ಕಾರಣವಾಗಿವೆ. ಇಂದು 'ಭಾರತದ ಪರಿಕಲ್ಪನೆ'ಗೆ (Idea of India) ಸಂಚಕಾರ ಬಂದಿದೆ. ಪ್ರಜಾಪ್ರಭುತ್ವವು ಕೇವಲ...