Homeನ್ಯಾಯ ಪಥಬೆಳ್ಳಿಚುಕ್ಕಿ: ಆಗಸದ ಬಾಲಾಂಕೃತ ಅತಿಥಿಗಳು; ಹ್ಯಾಲಿ, ಶೂಮೇಕರ್ ಇತ್ಯಾದಿ..

ಬೆಳ್ಳಿಚುಕ್ಕಿ: ಆಗಸದ ಬಾಲಾಂಕೃತ ಅತಿಥಿಗಳು; ಹ್ಯಾಲಿ, ಶೂಮೇಕರ್ ಇತ್ಯಾದಿ..

- Advertisement -
- Advertisement -

ನಿಮೆಗೆ ತಿಳಿದಿರುವ ಕೆಲವು ಬಾಲವಿರುವ ಪ್ರಾಣಿಗಳನ್ನು ನೆನಪಿಸಿಕೊಳ್ಳಿ. ಅರೆ ಏನಿದು? ಬೆಳ್ಳಿಚುಕ್ಕಿ ಅಂಕಣದಲ್ಲಿ ಬಾಲವಿರುವ ಪ್ರಾಣಿಗಳ ಬಗ್ಗೆ ಏಕೆ ಚರ್ಚೆ ಅಂತಾನಾ? ಇರ್ಲಿ ಪರ್ವಾಗಿಲ್ಲಾ ಒಮ್ಮೆ ಯೋಚಿಸಿ. ಅಬ್ಬಬ್ಬಾ! ನೆನಪಿಗೆ ಬರುವ ಬಹುತೇಕ ಎಲ್ಲ ಪ್ರಾಣಿಗಳಿಗೆ ಬಾಲವಿದೆ ಅಲ್ಲವಾ? ಹೌದು ಸಾಮಾನ್ಯವಾಗಿ ನಮಗೆಲ್ಲರಿಗೆ ತಿಳಿದಿರುವ ಪ್ರಾಣಿಗಳಲ್ಲಿ ಬಾಲವಿದ್ದೇ ಇದೆ. ಮಾನವನಿಗೆ ಈಗ ಬಾಲವಿಲ್ಲ ಆದರೆ ತನ್ನ ಜೀವವಿಕಾಸದ ಹಾದಿಯಲ್ಲಿ ಆತನಿಗೂ ಹಿಂದೊಮ್ಮೆ ಬಾಲ ಇತ್ತು ಎನ್ನುವುದನ್ನು ಗ್ರಹಿಸಲಾಗಿದೆ. ಇರಲಿ ನಾವಿಂದು ಮಾನವನ ಬಾಲದ ಬಗ್ಗೆಯೇನು ಚರ್ಚಿಸುತ್ತಿಲ್ಲ. ಆಕಾಶದಲ್ಲಿ ಕಾಣುವ ಬಾಲಾಂಕೃತ ಅತಿಥಿಗಳು ಇಂದಿನ ನಮ್ಮ ವಿಷಯ. ಬಾಲ ಹೊಂದಿರುವ ಆಕಾಶಕಾಯಗಳನ್ನು ನೀವೆಂದಾದರೂ ನೋಡಿದ್ದೀರಾ?

ಈಗಾಗಲೇ ಕೆಲವರು ಊಹಿಸಿರಬಹುದು, ಬಾಲವಿರುವ ಆಕಾಶಕಾಯ ಅಂದರೆ ಧೂಮಕೇತು ಅಲ್ಲವಾ ಎಂದು! ನಿಮ್ಮ ಊಹೆ ಸರಿಯಾಗಿದೆ. ಧೂಮಕೇತು ಅಥವಾ ಇಂಗ್ಲಿಷ್‌ನಲ್ಲಿ Comet ಅಂತ ಇದನ್ನು ಕರೆಯುತ್ತಾರೆ. ಆಕಾಶದಲ್ಲಿ ಪೊರಕೆಯ ರೀತಿಯಲ್ಲಿ ಕಾಣಿಸಿಕೊಂಡು ಕುತೂಹಲ ಕೆರಳಿಸುವ ಕಾಯಗಳೇ ಧೂಮಕೇತುಗಳು. ಅನಾದಿಕಾಲದಿಂದಲೂ ಹಲವಾರು ಕಾರಣಗಳಿಗೆ ಈ ಧೂಮಕೇತುಗಳು ಮನುಷ್ಯನಿಗೆ ಚಿರಪರಿಚಿತ. ಧೂಮಕೇತು ಎಂಬ ಶಬ್ದದಲ್ಲಿ ಧೂಮ ಎಂದರೆ ಹೊಗೆ; ಹೊಗೆಯ ಹಾಗೆ ಕಾಣುವ, ಬಾಲ ಇರುವ ಕಾಯ ‘ಧೂಮಕೇತು’. ಇದಕ್ಕ ಬಾಲಚುಕ್ಕಿ ಎಂಬ ಹೆಸರೂ ಇದೆ. ಆದರೆ ಇದು ನಕ್ಷತ್ರವಲ್ಲ.

ಸೌರಮಂಡಲದ ಹೊರವಲಯದಲ್ಲಿರುವ ಊರ್ಟ್ ಮೋಡಗಳು ಅಂತ ಕರೆಯುವ ಸಣ್ಣ ಸಣ್ಣ ಲಕ್ಷಾಂತರ ಆಕಾಶಕಾಯಗಳು ಸೂರ್ಯನ ಸುತ್ತ ತಮ್ಮ ತಮ್ಮ ಕಕ್ಷೆಗಳಲ್ಲಿ ಸುತ್ತುತ್ತಿವೆ. ಈ ಊರ್ಟ್ ಮೋಡಗಳಿಂದ ಕೆಲವೊಂದು ಕಾಯಗಳು ಸೂರ್ಯನ ಗುರುತ್ವ ಬಲಕ್ಕೆ ಒಳಗಾಗಿ, ಸೂರ್ಯನ ದಿಕ್ಕಿಗೆ ಅಂಡಾಕಾರದ ಕಕ್ಷೆಯಲ್ಲಿ ಸುತ್ತುಲು ಬರುತ್ತವೆ. ಹೀಗೆ ಆಕಾಶಕಾಯಗಳು ಸೂರ್ಯನ ಹತ್ತಿರ ಬಂದಾಗ ಅವಕ್ಕೆ ಬಾಲ ಸೃಷ್ಟಿಯಾಗಿ ಧೂಮಕೇತುಗಳಾಗುತ್ತವೆ. ಭೂಮಿಯಿಂದ ಇದನ್ನು ನೋಡಿದಾಗಿ ಬಾಲಚುಕ್ಕಿಯಾಗಿ ಗೋಚರಿಸುತ್ತವೆ.

ಈ ಧೂಮಕೇತುಗಳನ್ನು ಸಣ್ಣ ಬಂಡೆಗಳ ಒಂದು ಉಂಡೆಗೆ ಹೋಲಿಸಬಹುದು. ಈ ಬಂಡೆಯನ್ನು ನ್ಯೂಕ್ಲಿಯಸ್ ಎಂದು ಕರೆಯುತ್ತಾರೆ. ಧೂಮಕೇತುವು ಸೂರ್ಯನ ಹತ್ತಿರ ಬರುತ್ತಿರುವಂತೆ ನ್ಯೂಕ್ಲಿಯಸ್‌ನಲ್ಲಿರುವ ವಸ್ತುವು ಆವಿಯಾಗಲು ಪ್ರಾರಂಭಿಸುತ್ತದೆ. ಇದು ನ್ಯೂಕ್ಲಿಯಸ್ ಸುತ್ತಲು ಸೇರಿಕೊಳ್ಳುತ್ತದೆ. ಇದನ್ನು ಕೋಮಾ ಎಂದು ಕರೆಯುತ್ತಾರೆ. ಹೀಗೆ ಆವಿಯಾದ ವಸ್ತುವು ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಸೌರ ಮಾರುತದಿಂದ ತಳ್ಳಲ್ಪಟ್ಟು ಬಾಲವಾಗಿ ಹರಡಿಕೊಳ್ಳುತ್ತದೆ.

ಧೂಮಕೇತುವಿಗೆ ಒಂದಲ್ಲ ಎರಡು ಬಾಲವಿರುತ್ತದೆ. ಒಂದು ಅನಿಲದಿಂದ ಕೂಡಿರುವ ಬಾಲ, ಇನ್ನೊಂದು ಧೂಳಿನ ಬಾಲ. ಧೂಮಕೇತು ಸೂರ್ಯುನ ಹತ್ತಿರ ಬಂದಾಗ ಅನಿಲದ ಬಾಲ ರೂಪುಗಳ್ಳುತ್ತದೆ. ಅನಿಲದ ಬಾಲ ಸೂರ್ಯ ಇರುವ ದಿಕ್ಕಿಗೆ ವಿರುದ್ಧವಾಗಿದ್ದರೆ, ಧೂಳಿನ ಬಾಲ, ಧೂಮಕೇತು ಚಲಿಸುವ ದಿಕ್ಕಿಗೆ ವಿರುದ್ಧವಾಗಿರುತ್ತದೆ. ಏಕೆಂದರೆ, ಅನಿಲದ ಬಾಲದಲ್ಲಿ ಐಯಾನ್‌ಗಳಿರುವುದರಿಂದ, ಸೂರ್ಯನ ಅಯಸ್ಕಾಂತೀಯ ಬಲದ ಪ್ರಭಾವದಿಂದ ಸೂರ್ಯನ ದಿಕ್ಕಿನ ವಿರುದ್ಧ ದಿಕ್ಕಿನಲ್ಲಿ ನೇರವಾಗಿರುತ್ತದೆ. ಆದರೆ ಧೂಳಿನ ಬಾಲ ಧೂಮಕೇತು ಚಲಿಸುವ ದಿಕ್ಕಿಗೆ ವಿರುದ್ಧವಾಗಿದ್ದು, ಬಾಗಿರುತ್ತದೆ.

ಸಾಮಾನ್ಯವಾಗಿ ಧೂಮಕೇತು ಸೂರ್ಯನಿಂದ ಬಹು ದೂರವಾಗಿದ್ದಾಗ, ಆಕಾಶದಲ್ಲಿ ಚುಕ್ಕಿಯ ಹಾಗೆ ಕಾಣಿಸುತ್ತದೆ. ಆಗ ಆ ಚುಕ್ಕಿಯನ್ನು ಧೂಮಕೇತು ಎಂದು ಗುರುತಿಸುವುದು ಹವ್ಯಾಸಿ ಆಕಾಶ ವೀಕ್ಷಣಾಗಾರರಿಗೆ ಕಷ್ಟವಾಗಿರುತ್ತದೆ. ದಿನದಿಂದ ದಿನಕ್ಕೆ ಆಕಾಶದಲ್ಲಿ ಅದರ ಚಲನೆಯನ್ನು ನೋಡಿ ಅದನ್ನು ಸೌರಮಂಡಲದ ಕಾಯ ಅಂದರೆ, ಸೂರ್ಯನ ಗುರುತ್ವ ಬಲದ ಪ್ರಭಾವದ ಪರಿಧಿಯ ಒಳಗೇ ಇರುವ ಕಾಯ ಎಂದು ಗ್ರಹಿಸಬಹುದು. ಇದು ನಕ್ಷತ್ರವಾಗುವುದಿಲ್ಲ ಏಕೆಂದರೆ, ಸೌರ ಮಂಡಲದ ಕಾಯಗಳು ಆಕಾಶದಲ್ಲಿ ದಿನದಿಂದ ದಿನಕ್ಕೆ ಚಲಿಸುತ್ತವೆ, ನಕ್ಷತ್ರಗಳು ಚಲಿಸುವುದಿಲ್ಲ.

ಹೀಗೆ ಸೌರಮಂಡಲದ ತುದಿಯಲ್ಲಿರುವ ಊರ್ಟ್ ಮೋಡಗಳಿಂದ ಹೊಮ್ಮುವ ಧೂಮಕೇತುವು ಗುರು ಗ್ರಹದ ಕಕ್ಷೆಯ ಬಳಿ ಬಂದಾಗ, ಚುಕ್ಕೆಯ ಸ್ವರೂಪ ಬದಲಾಗಿ, ಧೂಮಕೇತುವಿನಲ್ಲಿರು ವಸ್ತುವು ಸೂರ್ಯನ ಶಾಖದಿಂದ ಆವಿಯಾಗಿ ಮೋಡದಂತೆ ಕಾಣುತ್ತದೆ. ಧೂಮಕೇತುವು ಸೂರ್ಯನ ದಿಕ್ಕಿನತ್ತ ಚಲಿಸಿದಂತೆ, ಅದರ ಬಾಲವೂ ಉದ್ದವಾಗಿ, ವಿಸ್ತಾರವಾಗುತ್ತದೆ. ಕೆಲವು ಧೂಮಕೇತುಗಳು ಹೆಚ್ಚು ಪ್ರಕಾಶಮಾನವಾಗುವುದರಿಂದ, ಅಂತಹ ಸಂದರ್ಭದಲ್ಲಿ ರಾತ್ರಿಯ ಆಕಾಶದಲ್ಲಿ ಬರಿಗಣ್ಣಿಗೇ ಅವು ಗೋಚರಿಸುತ್ತವೆ. ಹೀಗೆ ಬಾಲ ವಿಸ್ತಾರವಾಗಿ ಹರಡಿರುವ ಧೂಮಕೇತು ಆಕಾಶದಲ್ಲಿ ಅದ್ಭುತ ಲೋಕವನ್ನೇ ತೆರೆದಿಡುತ್ತದೆ. ಇಂತಹ ಸಂದರ್ಭ ಮತ್ತು ಅವಕಾಶ ಆಕಾಶ ವೀಕ್ಷಣಾಗಾರರಿಗಂತೂ ಹಬ್ಬ. ಧೂಮಕೇತುವನ್ನು ರಾತ್ರಿಯ ಆಕಾಶದಲ್ಲಿ ನೋಡುವುದೇ ಒಂದು ರೋಮಾಂಚನ.

ಮೊದಲೇ ಹೇಳಿದ ಹಾಗೆ, ಧೂಮಕೇತುಗಳನ್ನು ಆಧುನಿಕ ಯುಗದಲ್ಲೇನು ಕಂಡುಹಿಡಿದಿದ್ದಲ್ಲ. ಪ್ರಪಂಚದ ಎಲ್ಲ ನಾಗರಿಕತೆಗಳೂ ಧೂಮಕೇತುಗಳ ಬಗ್ಗೆ ದಾಖಲಿಸಿವೆ ಮತ್ತು ಇದಕ್ಕೆ ಸಂಬಂಧಿಸಿದ ಅನೇಕ ಕತೆಗಳು ನಮಗೆ ತಿಳಿದಿವೆ. ಎಷ್ಟೋ ನಾಗರಿಕತೆಗಳಲ್ಲಿ ಕಾಲವನ್ನು ಅವರು ದಾಖಲಿಸಿದ ಧೂಮಕೇತುಗಳ ವಿವರಣೆಯಿಂದಲೂ ಲೆಕ್ಕ ಹಾಕಲಾಗಿದೆ. ಅಲ್ಲದೆ, ಪೌರಾಣಿಕ ಕತೆಗಳಲ್ಲಿ ಪುರಾಣ ಪ್ರಸಿದ್ಧ ಮಹಾಕಾವ್ಯಗಳಲ್ಲಿ, ಧೂಮಕೇತು ಇದ್ದೇ ಇರುತ್ತೆ. ಹೆಚ್ಚಾಗಿ ಧೂಮಕೇತುಗಳನ್ನು ಚಿತ್ರಿಸಿರುವುದೇ ವಿನಾಶ ಕಾಲದ ಸನಿಹವನ್ನು ಸೂಚಿಸಲಿಕ್ಕೆ! ಧೂಮಕೇತು ಕಂಡ ದೇಶದ ರಾಜ ಸಾಯುತ್ತಾನೆಂದು, ಕೇಡುಗಾಲ ಬರುವುದೆಂದು, ಅನಿಷ್ಠ ಸೂಚಕಗಳೆಂಬ ಅನೇಕ ಕಾಲಗಳ ಕಲ್ಪನೆಗಳು ಮತ್ತು ಕಟ್ಟುಕತೆಗಳು ಯಥೆಚ್ಛವಾಗಿವೆ. ಕಾಕತಾಳಿಯ ಎಂಬಂತೆ ಇಂತಹ ಸಂದರ್ಭದಲ್ಲಿ ಹಲವು ತೊಂದರೆಗಳು-ಸಮಸ್ಯೆಗಳು ಬಂದಿರಬಹುದು ಅಥವಾ ಆ ಭಯದಲ್ಲಿ ತಾವೇ ಆಹ್ವಾನಿಸಿಕೊಂಡಿರಬಹುದು.

ಆದರೆ, ವಿಜ್ಞಾನ ಬೆಳೆದಂತೆ, ಧೂಮಕೇತುವಿನ ವೀಕ್ಷಣೆ ಮತ್ತು ಅದರ ಬಗೆಗಿನ ಸಂಶೋಧನೆ ಮುಂದುವರೆದಂತೆ ಈ ಯಾವುದೇ ನಂಬಿಕೆಗಳಿಗೆ ಯಾವ ವೈಜ್ಞಾನಿಕ ಪುರಾವೆಗಳು ಇಲ್ಲದಿರುವುದನ್ನು ನಾವು ಕಾಣಬಹುದು. ಈಗ ಈ ನಂಬಿಕೆಗಳು ಮೂಢನಂಬಿಕೆಗಳಾಗಿವೆ.

ಪ್ರಸಿದ್ಧವಾದ ಧೂಮಕೇತುಗಳು

ಹ್ಯಾಲಿ ಧೂಮಕೇತುವಿನ ಹೆಸರು ಎಲ್ಲರೂ ಕೇಳಿರಬೇಕು ಅಥವಾ! ಹ್ಯಾಲಿ ಅತ್ಯಂತ ಪ್ರಸಿದ್ಧವಾದ ಧೂಮಕೇತು. ಇದು ಪ್ರತಿ 75ರಿಂದ 76 ವರ್ಷಗಳಿಗೊಮ್ಮೆ ಸೂರ್ಯನನ್ನು ಸುತ್ತು ಹಾಕುವಾಗ ಭೂಮಿಯ ಬಳಿ ಬರುತ್ತದೆ. ಆಗಸದಲ್ಲಿ ಕಾಣುವ ಇದರ ನೋಟ ಅದ್ಭುತ. ಐಸಾಕ್ ನ್ಯೂಟನ್ ಸ್ನೇಹಿತ ಎಡ್ಮಂಡ್ ಹ್ಯಾಲಿ ಎನ್ನುವ ಖಗೋಳ ವಿಜ್ಞಾನಿ ಮತ್ತು ಗಣಿತಜ್ಞ ಮೊದಲ ಬಾರಿಗೆ ಈ ಧೂಮಕೇತುವನ್ನು ಗುರುತಿಸಿದ. 1682ರಲ್ಲಿ ಆಕಾಶದಲ್ಲಿ ಒಂದು ಆಕಾಶಕಾಯವನ್ನು ಹ್ಯಾಲಿ ನೋಡಿದ. ಈ ಹಿಂದೆ ದಾಖಲಾಗಿದ್ದ ಕೆಲವು ಧೂಮಕೇತುಗಳ ಪಟ್ಟಿಗಳೊಂದಿಗೆ ಹೋಲಿಕೆ ಮಾಡಿ ನೋಡಿದಾಗ, 1531, 1607 ಹಾಗೂ ತಾನು 1682ರಲ್ಲಿ ಕಂಡಿದ್ದ ಧೂಮಕೇತು ಒಂದೇ ಎಂದು ಗ್ರಹಿಸಿದ. ನಂತರ ಈ ಧೂಮಕೇತು 1758ರಲ್ಲಿ ಮತ್ತೊಮ್ಮೆ ಭೂಮಿಯಿಂದ ಕಾಣುತ್ತದೆ ಎಂದು, ಧೂಮಕೇತುವಿನ ಮುಂದಿನ ಆಗಮನವನ್ನು ಮೊದಲ ಬಾರಿಗೆ ಊಹಿಸಿದ. 1758ರಲ್ಲಿ ಹ್ಯಾಲಿ ಬದುಕಿರಲಿಲ್ಲ, ಆದರೆ ಧೂಮಕೇತು ಮಾತ್ರ ಹ್ಯಾಲಿ ಹೇಳಿದ ದಿನದಂದೇ ಆಕಾಶದಲ್ಲಿ ಕಂಡಿತು. ಇದಕ್ಕಾಗಿ ಆ ಧೂಮಕೇತುವಿಗೆ ಹ್ಯಾಲಿ ಧೂಮಕೇತು ಎಂದೇ ಹೆಸರಿಸಲಾಗಿದೆ. 20ನೇ ಶತಮಾನದಲ್ಲಿ, 1910 ಮತ್ತು 1986ರಲ್ಲಿ ಈ ಧೂಮಕೇತು ಆಕಾಶದಲ್ಲಿ ಕಂಡಿದೆ. 1986ರಲ್ಲಿ ಕಂಡಾಗ, ಹಲವು ವ್ಯೋಮ ನೌಕೆಗಳು ಧೂಮಕೇತುವಿನ ಬಳಿ ತೆರಳಿ, ಅದರ ಬಂಡೆಯ ಮಾದರಿಯನ್ನು ಸಂಗ್ರಹಿಸಿವೆ ಮತ್ತು ಅಂದದ ಚಿತ್ರಗಳನ್ನು ತೆಗೆಯಲಾಗಿದೆ. ಮತ್ತೆ 2061ಕ್ಕೆ ಹ್ಯಾಲಿ ಧೂಮಕೇತುವನ್ನು ನಾವು ನೋಡಬಹುದಾಗಿದೆ.

ಶೂಮೇಕರ್ ಲೆವಿ-9 ಧೂಮಕೇತು. ಇದು ಶೂಮೇಕರ್ ಮತ್ತು ಲೆವಿ ಎಂಬ ಇಬ್ಬರು ಖಗೋಳ ವಿಜ್ಞಾನಿಗಳು 1993ರಲ್ಲಿ ಗುರುತಿಸಿದ ಧೂಮಕೇತು. ಇದು, ಆ ಕಾಲಕ್ಕೆ ಪ್ರಪಂಚದಾದ್ಯಂತ ಅತ್ಯಂತ ಪ್ರಸಿದ್ಧಿ ಪಡೆದ ಧೂಮಕೇತು. 1994ರಲ್ಲಿ ಈ ಧೂಮಕೇತು ಗುರು ಗ್ರಹದ ಬಳಿ ಬರುತ್ತಿರುವಾಗ, ಅದರ ಬಂಡೆಯು ಒಡೆದು ಚೂರುಚೂರಾಯಿತು. ನಂತರ ಗುರು ಗ್ರಹದ ಗುರುತ್ವ ಬಲವು ಈ ಧೂಮಕೇತುವಿನ ಪಥವನ್ನು ಬದಲಿಸಿ, ತನ್ನ ಬಳಿಗೆ ಎಳೆದುಕೊಂಡಿತು. ಶೂಮೇಕರ್ ಲೆವಿ-9 ಧೂಮಕೇತುವಿನ ಹಲವು ಚೂರುಗಳು ಗುರು ಗ್ರಹಕ್ಕೆ ನೇರವಾಗಿ ಬಡಿದು ಅಪ್ಪಳಿಸಿದವು. ಅಂದಿನ ಖಗೋಳ ವಿಜ್ಞಾನಿಗಳು ಮತ್ತು ಹವ್ಯಾಸಿ ಖಗೋಳ ವೀಕ್ಷಕರು ತಾವಿರುವ ಸ್ಥಳದಿಂದಲೇ ದೂರದರ್ಶಕದ ಮೂಲಕ ಇಂತಹ ಅತೀ ವಿರಳವಾದ ಖಗೋಳೀಯ ವಿದ್ಯಮಾನವನ್ನು ನೈಜವಾಗಿ ಕಂಡು, ಚಿತ್ರಗಳನ್ನು ತೆಗೆದರು. ಈ ಘಟನೆ ಅಂದಿನ ಮಾಧ್ಯಮದ ಗಮನವನ್ನು ಸೆಳೆದು, ಎಲ್ಲೆಲ್ಲೂ ಚರ್ಚೆಗಳು ನಡೆಯುತ್ತಿದ್ದವು. ಹ್ಯಾಲಿ ಧೂಮಕೇತುವಿನ ನಂತರ ಶೂಮೇಕರ್ ಲೆವಿ-9 ಧೂಮಕೇತು ಜನಸಾಮಾನ್ಯರ ಮಧ್ಯೆ ಪ್ರಸಿದ್ಧಿ ಪಡೆಯಿತು.

ಆಕಾಶದಲ್ಲಿ ಬರಿಗಣ್ಣಿಗೆ ಕಾಣುವ ಧೂಮಕೇತುಗಳು ಕಡಿಮೆ ಇದ್ದರೂ, ದೂರದರ್ಶಕದಿಂದ ಕಾಣುವ ಧೂಮಕೇತುಗಳು ಬಹಳಷ್ಟಿರುತ್ತವೆ. ಇವುಗಳನ್ನು ಪ್ರತಿ ದಿನವು ಖಗೋಳ ವಿಜ್ಞಾನಿಗಳು ಅಧ್ಯಯನ ಮಾಡುತ್ತಲೆ ಇರುತ್ತಾರೆ. ಶುಭ್ರ ಆಕಾಶದಲ್ಲಿ ಬರಿಗಣ್ಣಿನಲ್ಲಿ ಬಾಲಚುಕ್ಕಿಯನ್ನು ನೋಡುವ ಅವಕಾಶ ಸಿಕ್ಕೆರೆ ಅದನ್ನು ಕಳೆದುಕೊಳ್ಳಬೇಡಿ. ಅದನ್ನು ನೋಡುವುದೇ ಒಂದು ಚಂದದ ಅನುಭವ. ನೀವು ನೋಡಿ, ನಿಮ್ಮ ಕುಟುಂಬದವರಿಗೆ, ಸ್ನೇಹಿತರಿಗೂ ತೋರಿಸಿ. ಮೂಢ ನಂಬಿಕೆಗಳಿಂದ ದೂರವಾಗಿರಿ.


ಇದನ್ನು ಓದಿ: ಬೆಳ್ಳಿಚುಕ್ಕಿ: ಸೌರ ಮಂಡಲದಲ್ಲಿ ಅತ್ಯಂತ ವೇಗವಾಗಿ ಸೂರ್ಯನ ಸುತ್ತ ಸುತ್ತವ ಗ್ರಹ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...