Homeಅಂಕಣಗಳುಬೆಂಗಾವಲೂರು ಎಂಬೋ ದಂಡು ಪ್ರದೇಶದ ಪಾಳೇಗಾರರಲ್ಲಿ ಬಡಪಾಯಿ ಕನ್ನಡಿಗರ ಬಿನ್ನವತ್ತಲೆ

ಬೆಂಗಾವಲೂರು ಎಂಬೋ ದಂಡು ಪ್ರದೇಶದ ಪಾಳೇಗಾರರಲ್ಲಿ ಬಡಪಾಯಿ ಕನ್ನಡಿಗರ ಬಿನ್ನವತ್ತಲೆ

- Advertisement -
- Advertisement -

ಮಾನ್ಯರೇ,

ತಾವು ನಮ್ಮ ವೋಟು ಪಡೆದು ಟಾಟಾ ಬೈ ಬೈ ಹೇಳಿ ನಮ್ಮ ಸುಂಕದ ಹಣದಿಂದ ಖರೀದಿ ಮಾಡಿದ ಪುಷ್ಪಕ ವಿಮಾನ ಹತ್ತಿ ಬೆಂಗಾವಲು ಊರಿಗೆ ಹೋದಮೇಲೆ ನಮ್ಮ ನಿಮ್ಮ ಭೇಟಿ ಇಲ್ಲ. ಒಂದು ಪತ್ರ ಇಲ್ಲ, ಈಮೇಲೂ ಇಲ್ಲ, ಎಸ್‌ಎಂಎಸ್‌ಗೆ ಉತ್ತರ ಇಲ್ಲ. ವಾಟ್ಸ್‌ಅಪ್ ಸಂದೇಶಕ್ಕೆ ಬ್ಲೂ ಟಿಕ್‌ನ ಪರತ್ ಪಾವತಿ ಸಹಿತ ಸಿಗಲಿಲ್ಲ. ವೋಟು ಕೇಳುವ ಮುನ್ನ ನೀವೇ ನಮ್ಮನ್ನು ಹುಡುಕಿಕೊಂಡು ಬಂದಿರಿ. ಆದರೆ ವೋಟು ಎಣಿಕೆ ನಂತರ ನೀವು ಅಂತರ್ದಾನವಾಗಿಬಿಟ್ಟಿರಿ. ನಮ್ಮ ಓಣಿಯಲ್ಲಿ ಪಿಕ್‌ಪಾಕೆಟ್ ಮಾಡಿ ಜೈಲಿಗೆ ಹೋಗಿದ್ದ, ನಿಮ್ಮ ಆಶೀರ್ವಾದದಿಂದ ಹೊರಗೆಬಂದಿದ್ದ ಕಳ್ಳ ಕಿಟ್ಯಾ ಈಗ ಕೆ. ಕೃಷ್ಣ ಕುಮಾರ್ ಆಗಿ ಬಿಟ್ಟಿದ್ದಾನೆ. ಅವನು ಈಗ ತಮ್ಮ ಪಿಎ ಆಗಿದ್ದೇನೆ ಎಂದೂ, ತಮ್ಮ ಸ್ವಯಂ ಘೋಷಿತ ಸಲಹೆಗಾರನಾಗಿಬಿಟ್ಟಿದ್ದಾನೆ ಎಂದೂ ಹೇಳಿಕೊಂಡಿದ್ದಾನೆ. ನನ್ನಂಥ ಬಡಪಾಯಿಗಳ ಪಾಲಿಗೆ ಅವನೇ ಮುಖ್ಯಮಂತ್ರಿಯಾಗಿ ಬಿಟ್ಟಿದ್ದಾನೆ.

ನಮಗೆ ಅವನ ಭೇಟಿಯೇ ದೇವ ದುರ್ಲಭವಾಗಿಬಿಟ್ಟಿದೆ. ಇನ್ನು ನಿಮ್ಮಂಥವರ ಮಾತು ಕೇವಲ ಆಕಾಶವಾಣಿಯಲ್ಲಿ ಕೇಳುತ್ತಿದೆ. ನೀವು ನಮ್ಮನ್ನು ಬಂದು ಭೇಟಿ ಆಗುವುದು ಇನ್ನು ಐದು ವರ್ಷದ ನಂತರ ಇದ್ದೇ ಇದೆ ಅಂತ ನಾವು ಸುಮ್ಮನೆ ಇದ್ದು ಬಿಡುತ್ತೇವೆ. ನೀವು ನಮ್ಮ ಊರನ್ನು ಉದ್ಧಾರ ಮಾಡ್ತೀರಿ ಅಂತ ಆಶ್ವಾಸನೆ ನೀಡಿದ್ದರೂ ಸಹಿತ ಮಾಡಿಲ್ಲ. ನಿಮ್ಮ ಊರಿನ ಮೇಲೆ ನಿಮಗೆ ಎಷ್ಟು ಪ್ರೀತಿ ಎಂದರೆ ನಿಮ್ಮ ಬಾಲ್ಯದಾಗ ನೀವು ಬಿಟ್ಟು ಹೋದಾಗ ಅದು ಹೆಂಗ ಇತ್ತೋ ಹಾಂಗೆ ಇರಬೇಕು ಅಂತ ನೀವು ಏನೂ ಬದಲಾವಣೆ ಮಾಡಿಲ್ಲ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ. ಇರಲಿ.

ಇದು ಎಲ್ಲಾ ಹೆಂಗ ಐತಿ ಅಂದರ, ಜಗಜಿತ್ ಸಿಂಗ್ ಅವರ ಗಜಲ್‌ನ ಸಾಲಿನ ಹಂಗ ಐತಿ.

“ಈ ವರ್ಷ ಬಹಳ ಮಳೆ ಆಗ್ತದ, ಬೆಳೆ ಬರ್ತದ, ಎಲ್ಲಾ ಛಲೋ ಆಗ್ತೆತಿ,

ಹಿಂಗ ಆಗ್ತದೋ, ಇಲ್ಲೋ, ಗೊತ್ತಿಲ್ಲ,

ಆದರ ಹಿಂಗ ಆಗ್ತದ ಅನ್ನುವ ಕನಸು ಮಾತ್ರ ಭಾರಿ ಛಲೋ ಐತಿ”.

ಇದೆಲ್ಲಾ ಐತಿ. ಇರಲಿ, ಆದರೂ ಉಭಯ ಕುಶಲೋಪರಿ ಸಾಂಪ್ರತ. ಇನ್ನು ನಮ್ಮ ಊರಿನವರ ಕಡೆಯಿಂದ ನಿಮಗೆ ಒಂದು ಮೂಕ ಅರ್ಜಿ.

ಮೆಹರ್‌ಬಾನ್ ಸಾಹೇಬರೇ,

ರಾಜ್ಯ ಸರಕಾರ ನೇಮಿಸಿದ ವಿಜಯ ಭಾಸ್ಕರ ಸಮಿತಿ ಆಡಳಿತ ಸುಧಾರಣೆ ಬಗ್ಗೆ ಕೆಲವು ಶಿಫಾರಸುಗಳನ್ನು ಮಾಡಿದೆ. ಮೊದಲ ಹಂತದಲ್ಲಿ ಕಂದಾಯ, ಆಹಾರ ಹಾಗೂ ರಸ್ತೆ ಸಾರಿಗೆ ಇಲಾಖೆಗಳ ಬಗ್ಗೆ ಸಲಹೆಗಳನ್ನು ನೀಡಿದೆ. ಇವುಗಳಲ್ಲಿ ಕೆಲವು ಜನಪರ ಸಲಹೆಗಳಾಗಿದ್ದು ಅವುಗಳನ್ನು ನಾವು ಸ್ವಾಗತ ಮಾಡುತ್ತೇವೆ. ಇನ್ನು ಕೆಲವು ವಿಷಯಗಳನ್ನು ನಾವು ಸಕಾರಣವಾಗಿ ವಿರೋಧಿಸುತ್ತೇವೆ.

ಅವುಗಳು ಇಂತಿವೆ:

ಸರಕಾರದ 800ಕ್ಕೂ ಹೆಚ್ಚು ಸೇವೆಗಳನ್ನು ಸೇವಾಸಿಂಧು ಎನ್ನುವ ಒಂದೇ ಜಾಲತಾಣ ಹಾಗೂ ತಂತ್ರಾಂಶದ ಮೂಲಕ ನೀಡುವುದು ಸ್ವಾಗತಾರ್ಹ. ಈ ಸೇವೆಗಳನ್ನು ಜನರಿಗೆ ದೊರಕಿಸಲು ನಗರಗಳಲ್ಲಿ ಕರ್ನಾಟಕ-ಒನ್ ಹಾಗೂ ಅಟಲ್‌ಜಿ ಜನಸ್ನೇಹಿ ಕೇಂದ್ರ ಹಾಗೂ ಹಳ್ಳಿಗಳಲ್ಲಿ ಗ್ರಾಮ ಪಂಚಾಯತ್ ಬಾಪೂಜಿ ಸೇವಾ ಕೇಂದ್ರಗಳನ್ನು ಏಕ ಗವಾಕ್ಷಿಗಳಾಗಿ ಬಳಸುವ ಯೋಜನೆ ಸಹಿತ ಸ್ವಾಗತಾರ್ಹ. ಇದರಿಂದ ಜನ ಅನೇಕ ಕಚೇರಿಗಳಿಗೆ ಅನಗತ್ಯವಾಗಿ ಎಡತಾಕುವುದು ತಪ್ಪುತ್ತದೆ.

PC : mandya.nic.in

ಆಹಾರ ಧಾನ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಸಹಿತ ಬಹಳ ಅನುಕೂಲಕರವಾದದು. ಆದರೆ ಇದಕ್ಕಾಗಿ ಜನರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದು ಒಳ್ಳೆಯದಲ್ಲ. ಇದರಿಂದ ಬಡವರ ಹೊಟ್ಟೆಯ ಮೇಲೆ ಹೊಡೆದಂತೆ ಆಗುತ್ತದೆ. ಇದರ ಇನ್ನೊಂದು ಅಪಾಯಕಾರಿ ಸಾಧ್ಯತೆ ಏನು ಎಂದರೆ, ಈ ರೀತಿಯ ನಿಯಮ ಜಾರಿಗೆ ಬಂದರೆ, ಹಳ್ಳಿಗಳಲ್ಲಿ ಮನೆಗೆ ಆಹಾರ ಧಾನ್ಯ ತಂದು ಕೊಡುವ ಏಜೆಂಟ್‌ಗಳು ಹುಟ್ಟಿಕೊಳ್ಳಬಹುದು. ಆಹಾರ ಧಾನ್ಯಗಳನ್ನು ಮನೆಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಆರಂಭವಾದರೆ ಸರಕಾರಕ್ಕೆ ವಿವಿಧ ಮಟ್ಟದ ಮಧ್ಯವರ್ತಿಗಳ ಲಾಭ ಹಾಗೂ ಅವರ ಕಮಿಷನ್ ಹಣದ ಹಣ ಉಳಿತಾಯವಾಗುತ್ತದೆ. ಇದೆ ಹಣವನ್ನು ಮನೆ ಬಾಗಿಲಿಗೆ ತಲುಪಿಸುವ ಖರ್ಚಿಗೆ ಬಳಸಬಹುದು.

ಜನಸಂಖ್ಯೆ, ರಹವಾಸ, ಬೆಲೆ ಹಾಗೂ ರೈತಾಪಿ ಕುಟುಂಬದ ಪ್ರಮಾಣಪತ್ರಗಳು ಅನವಶ್ಯಕ ಎಂದು ಹೇಳಿ ಅವುಗಳನ್ನು ರದ್ದುಮಾಡಬೇಕು ಎನ್ನುವ ಶಿಫಾರಸು ಮಾಡಲಾಗಿದೆ. ಇದನ್ನು ಇನ್ನೊಮ್ಮೆ ಪರಿಶೀಲಿಸಬೇಕು. ಇದನ್ನು ಕೇವಲ ಆಡಳಿತಾತ್ಮಕ ಅನುಕೂಲಕತೆ ದೃಷ್ಟಿಯಿಂದ ನೋಡದೆ, ನಾಳೆ ಜನರಿಗೆ ಈ ಪ್ರಮಾಣ ಪತ್ರಗಳನ್ನು ನ್ಯಾಯಾಲಯಗಳ ಮುಂದೆ ಹಾಜರು ಪಡಿಸಲಿಕ್ಕೆ ಬರಬೇಕಾಗುವುದೋ ಬೇಡವೋ ಅನ್ನುವುದನ್ನು ನೋಡಿ ನಿರ್ಧಾರ ಮಾಡಬೇಕು. ಹಾಗೆ ರದ್ದುಮಾಡುವುದೇ ಆದಲ್ಲಿ, ಅವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡ ಬಳಿಕವಷ್ಟೇ ರದ್ದುಮಾಡಬೇಕು.

ರಸ್ತೆ ಸಾರಿಗೆ ಅಧಿಕಾರಿಗಳು ಜಫ್ತಿ ಮಾಡಿದ ವಾಹನಗಳನ್ನು ಮಾರಾಟ ಮಾಡಲು ನ್ಯಾಯಾಲಯದ ಅನುಮತಿಗೆ ಕಾಯುವುದು ಬೇಡ ಎನ್ನುವ ಶಿಫಾರಸು ಇದರಲ್ಲಿ ಇದೆ.

ಇದನ್ನು ಜಾರಿಮಾಡುವ ಮುನ್ನ, ರಸ್ತೆ ಸಾರಿಗೆ ಇಲಾಖೆಯ ವಿವಿಧ ವಿಷಯಗಳಿಗೆ ಅನ್ವಯವಾಗುವಂತೆ, ವಿದ್ಯುತ್ ಪ್ರಾಧಿಕಾರ, ವಿಮೆ ಪ್ರಾಧಿಕಾರ, ಆಹಾರ ಪದಾರ್ಥ ಗುಣಮಟ್ಟ ನಿಯಂತ್ರಣ ಪ್ರಾಧಿಕಾರದ
ಮಾದರಿಯಲ್ಲಿ ಸಾರಿಗೆ ಪ್ರಾಧಿಕಾರ ಸ್ಥಾಪಿಸಬೇಕು.

ಈ ಸಮಿತಿಯ ಅತಿ ಮುಖ್ಯ ಶಿಫಾರಸು ಎಂದರೆ ಪ್ರಾದೇಶಿಕ ಆಯುಕ್ತರ ಕಚೆರಿಗಳನ್ನು ರದ್ದು ಮಾಡುವುದು. ಇದನ್ನು ನಾವು ವಿರೋಧಿಸುತ್ತೇವೆ. ಇದು ಅತ್ಯಂತ ಅಪಾಯಕಾರಿ. ಇದು ಭಾರತದ ಸಂವಿಧಾನದ ಮೂಲ ತತ್ವವಾದ ವಿಕೇಂದ್ರೀಕರಣ ವಿರೋಧಿ ಬೆಳವಣಿಗೆ. ಇದು ರಾಜ್ಯದ ಜನರಿಗಾಗಲಿ, ಅಭಿವೃದ್ಧಿ-ಸುಶಾಸನಕ್ಕಾಗಲಿ ಅನುಕೂಲಕರವಾದದ್ದಲ್ಲ. ಕೆಲವು ಜನ ಹಿರಿಯ ಐಎಎಸ್ ಅಧಿಕಾರಿಗಳು ಬೆಂಗಳೂರು ಬಿಟ್ಟುಹೋಗಲು ಮನಸು ಮಾಡುವುದಿಲ್ಲ ಎನ್ನುವ ಕಾರಣಕ್ಕೆ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದು ಮಾಡುವುದು ಸಾಧುವಲ್ಲ.

ರಾಜ್ಯದ 350 ಐಎಎಸ್ ಅಧಿಕಾರಿಗಳಲ್ಲಿ 60 ಜನ ಮಾತ್ರ ಬೆಂಗಾವಲು ಊರು ಬಿಟ್ಟು ಹೊರಗೆ ಇದ್ದಾರೆ. ಅವರಲ್ಲಿ ಮೂರು ಜನ ಪ್ರಾದೇಶಿಕ ಆಯುಕ್ತರು ಮಾತ್ರ ವಿಭಾಗ ಮಟ್ಟದಲ್ಲಿ ಇದ್ದಾರೆ. ಆ ಮೂರು ಹುದ್ದೆಗಳ ಸಲುವಾಗಿ ನೀವು ಆರು ಕೋಟಿ ಕನ್ನಡಿಗರ ಎದುರು ಕಣ್ಕಟ್ಟು ಆಡಬಾರದು ಎಂದು ನಮ್ಮ ಅಂಬೋಣ.

ನಿಜವಾಗಿ ಬೇಕಾಗಿರುವುದು ಏನು ಎಂದರೆ,

ಅ) ರಾಜ್ಯದಲ್ಲಿ ಈಗ ಇರುವ ನಾಲ್ಕು ಕಂದಾಯ ವಿಭಾಗಗಳನ್ನು ಎಂಟು ವಿಭಾಗಗಳನ್ನಾಗಿ ಮಾಡಬೇಕು. ಪ್ರತಿ ವಿಭಾಗಕ್ಕೆ ಈಗ 7-8 ಜಿಲ್ಲೆಗಳು ಬರುತ್ತವೆ. ಪ್ರತಿ ವಿಭಾಗಕ್ಕೆ 3-4 ಜಿಲ್ಲೆಗಳು ಬರುವಂತೆ ಮಾಡಿ ಮರುಹಂಚಿಕೆ ಮಾಡಬೇಕು.

ಆ) ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ಹಿಂದಿನಂತೆ ವಿಭಾಗೀಯ ಅಧಿಕಾರಿಗಳ ಕಚೇರಿಗಳಾಗಿ ಉನ್ನತೀಕರಣ ಮಾಡಬೇಕು. ಅವರಿಗೆ ಜಿಲ್ಲಾಧಿಕಾರಿಗಳ ಮೇಲೆ ಮೇಲು ಉಸ್ತುವಾರಿ ಹಾಗೂ ಜಿಲ್ಲೆ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ಹಾಗೂ ಜವಾಬುದಾರಿ ನೀಡಬೇಕು.

ಇ) ಪ್ರಾದೇಶಿಕ ಆಯುಕ್ತರಿಗೆ ಅಭಿವೃದ್ಧಿಯ ಜವಾಬುದಾರಿಯನ್ನು ಸಹಿತ ಕೊಡಬೇಕು. ಅವರಿಗೆ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿ ಹಾಗೂ ನಗರಪಾಲಿಕೆ-ನಗರಸಭೆಗಳು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳ ಮೇಲೆ ವಿಚಕ್ಷಣೆ ಹಾಗೂ ಮೇಲು ಉಸ್ತುವಾರಿ ನಡೆಸುವ ಅಧಿಕಾರ ನೀಡಬೇಕು.

ಈ) ವಿಭಾಗಾಧಿಕಾರಿ ಮಟ್ಟದಲ್ಲಿ ಕಂದಾಯ ನ್ಯಾಯಾಲಯ ಸ್ಥಾಪಿಸಬೇಕು. ಇದರಿಂದ ಜನ ತಮ್ಮ ಕಂದಾಯ ಪ್ರಕರಣಗಳ ಸಲುವಾಗಿ ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ.

ಉ) ವಿಭಾಗಾಧಿಕಾರಿಗಳಿಗೆ ಸಾರ್ವಜನಿಕ ಕುಂದುಕೊರತೆಗಳನ್ನು ಸ್ವೀಕರಿಸುವ ಹಾಗೂ ಅವುಗಳನ್ನು ಪರಿಹರಿಸುವ ಅಧಿಕಾರ ಹಾಗೂ ಜವಾಬುದಾರಿ ಕೊಡಬೇಕು. ಜನಸಾಮಾನ್ಯರು ಜಿಲ್ಲಾ ಮಟ್ಟದ ಯಾವುದೇ ಅಧಿಕಾರಿಗಳ ವಿರುದ್ಧ ದೂರು ಕೊಟ್ಟರೆ ಅವುಗಳ ವಿಚಾರಣೆ ವಿಭಾಗ ಮಟ್ಟದಲ್ಲಿ ನಡೆಯಬೇಕು.

ಊ) ವಿಭಾಗಾಧಿಕಾರಿಗಳನ್ನು ಸಕಾಲ ಯೋಜನೆಯ ನಿಯಂತ್ರಣ ಪ್ರಾಧಿಕಾರಿಯನ್ನಾಗಿ ಮಾಡಬೇಕು. ಸಕಾಲ ಯೋಜನೆಯಲ್ಲಿನ ಕೆಲಸಗಳು ಸರಿಯಾದ ಸಮಯಕ್ಕೆ ಆಗದೆ ಹೋದರೆ, ಆ ಕಾಲಹರಣದ ಬಗ್ಗೆ ತನಿಖೆ ನಡೆಸುವ ಅಧಿಕಾರ ಕೊಡಬೇಕು.

ಎ) ಈ ಎಲ್ಲಾ ಜವಾಬುದಾರಿಗಳನ್ನು ಸರಿಯಾಗಿ ನಿರ್ವಹಿಸಲು ವಿಭಾಗಾಧಿಕಾರಿಗಳಿಗೆ ಸೂಕ್ತ ಸಿಬ್ಬಂದಿಗಳನ್ನು ನೀಡಬೇಕು. ಅವರ ಕಚೇರಿಗೆ ಪ್ರಮುಖ ಇಲಾಖೆಗಳ ಜಂಟಿ ನಿರ್ದೇಶಕರ ಮಟ್ಟದ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು. ಜಿಲ್ಲೆ ಹಾಗೂ ಪ್ರದೇಶ ಮಟ್ಟದ ಯಾವುದೇ ಕೆಲಸಗಳು ಆಯಾ ಜಿಲ್ಲೆ ಹಾಗೂ ಪ್ರದೇಶ ಮಟ್ಟದಲ್ಲಿ ಆಗಬೇಕು. ಇಂತಹ ಎಲ್ಲಾ ಕೆಲಸಗಳಿಗೆ ಜನರು ಬೆಂಗಳೂರಿಗೆ ಅಲೆದಾಡುವ ಅನಿವಾರ್ಯತೆಯನ್ನು ತಪ್ಪಿಸಬೇಕು.

ನಮ್ಮ ಸಲಹೆಗಳನ್ನು ಪರಿಗಣಿಸಬೇಕು, ನೀವು ಮುಂದಿನ ಬಾರಿ ಬರುವಾಗ ಇದನ್ನು ಮರೆಯಬಾರದು ಎಂದು ನಮ್ಮ ಎಲ್ಲಾ ಬಡಪಾಯಿಗಳ ಕೋರಿಕೆ.


ಇದನ್ನೂ ಓದಿ: ಸುದ್ದಿಯೇನೇ ಮನೋಲ್ಲಾಸಿನಿ; ಮಾಧ್ಯಮ ನಲ್ಲರು – ರಾಜಧಾನಿ ಎಂಬ ಮಾಯಾಮೋಹಿನಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...