Homeಅಂಕಣಗಳುಸುದ್ದಿಯೇನೇ ಮನೋಲ್ಲಾಸಿನಿ; ಮಾಧ್ಯಮ ನಲ್ಲರು - ರಾಜಧಾನಿ ಎಂಬ ಮಾಯಾಮೋಹಿನಿ

ಸುದ್ದಿಯೇನೇ ಮನೋಲ್ಲಾಸಿನಿ; ಮಾಧ್ಯಮ ನಲ್ಲರು – ರಾಜಧಾನಿ ಎಂಬ ಮಾಯಾಮೋಹಿನಿ

- Advertisement -
- Advertisement -

ಮೊನ್ನೆ ಭಾರತಮಾತೆಯ ಅನೇಕ ಸುಪುತ್ರರು, ‘ವಿಕೇಂದ್ರೀಕರಣ ವಿನಾಶಕ್ಕೆ ದಾರಿ’, ‘ಒಕ್ಕೂಟ ಸರಕಾರ ಒಡೆದು ಹಾಕೀತು’, ‘ರಾಜ್ಯ ಸರಕಾರಗಳು ರಜೆಯ ಮೇಲೆ ಹೋಗಲಿ’, ‘ಒಂದು ದೇಶ, ಒಂದು ಸರಕಾರ’ ಅಂತೆಲ್ಲಾ ಸೋಷಿಯಲ್ ಮೀಡಿಯಾದಾಗ ಬರಕೊಂಡರು. ಅದು ಲಸಿಕೆ ಪೂರೈಕೆಗೆ ಸಂಬಂಧಪಟ್ಟ ಗೊಂದಲದ ಸಲುವಾಗಿ.

ಅವರ ಪ್ರಕಾರ ಭಾರತ ಎಂಬೊ ಉಪಖಂಡಕ್ಕ ದೆಹಲಿ ಎಂಬ ದೂರದ ಊರಿನಲ್ಲಿ ಒಂದು ಸರಕಾರ ಅಂತ ಇದ್ದರೆ ಸಾಕು. ದೇಶದ ಇತರ ರಾಜ್ಯಗಳು, ಅವುಗಳ ರಾಜಧಾನಿಗಳು, ಕೇವಲ ಭಾರತದ ಭೂಪಟದ ಮೇಲಿನ ಬಿಂದುಗಳು ಅಷ್ಟೇ ಮತ್ತು ದೆಹಲಿಯ ಸುಲ್ತಾನರು ನೀಡುವ ಭಿಕ್ಷೆಯಲ್ಲಿ ಬದುಕುವ ಭಿಕಾರಿಗಳು ಎಂಬಂತಾಗಿತ್ತು.

ಇದನ್ನ ನಾವು ಭಾವನಾತ್ಮಕವಾಗಿ ನೋಡದೆ, ಲಭ್ಯ ದತ್ತಾಂಶಗಳ ಮೂಲಕ ನೋಡೋಣ. ಉದಾಹರಣೆಗೆ ಒಕ್ಕೂಟ ಸರಕಾರದ ಕೇಂದ್ರ ಸ್ಥಾನ ದೆಹಲಿ ಒಳಗ 55 ಇಲಾಖೆಗಳ ಸುಮಾರು 1335 ಕಚೇರಿಗಳು ಅದಾವು. ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’ ಅಂದರ ‘ಬರೆ ದೆಹಲಿಗೆ ಬಂತು’ ಅಂದಂಗ ಆಗೇದ. ಸುಮಾರು 130 ಕೋಟಿ ಜನ ಇರುವ, 30 ರಾಜ್ಯಗಳ, 600 ಜಿಲ್ಲೆಗಳ, 200 ಸ್ಮಾರ್ಟ್ ಸಿಟಿಗಳ, 30 ಲಕ್ಷ ಕಿಲೋಮೀಟರ್ ಚದುರ ಕಿಲೋಮೀಟರ್ ವ್ಯಾಪ್ತಿಯ, ಈ ದೇಶದ ಒಳಗ ಕೆಲವು ಕಚೇರಿಗಳನ್ನ ಆದರೂ ದೆಹಲಿಯಿಂದ ದೂರ ತೊಗೊಂಡು ಹೋಗಬೇಕು ಅಂತ ಇಲ್ಲಿಯವರೆಗಿನ 14 ಪ್ರಧಾನ ಮಂತ್ರಿಗಳಿಗೆ, ಅವರು ನಡೆಸಿದ ಸರಕಾರಗಳಿಗೆ ಅವಶ್ಯಕ ಅನ್ನಿಸಲಿಲ್ಲ. ಅದು ಹೋಗಲಿ, 545 ಲೋಕಸಭಾ ಕ್ಷೇತ್ರಗಳಿಂದ ನಮ್ಮ ವೋಟು ತೊಗೊಂಡು, ನಮ್ಮ ಸುಂಕದ ಹಣದಿಂದ ಬಿಂಕ ಮಾಡಿ ಮೆರೆಯುವ ಸಂಸತ್ತು ಸದಸ್ಯರಿಗೂ ಅನ್ನಿಸಲಿಲ್ಲ. ಸ್ವಾತಂತ್ರ ಬಂದು 75 ವರ್ಷ ಆಗಲಿಕ್ಕೆ ಬಂದರೂ ಈ ಹಣೆಬಾರ ಐತಿ ಅಂದರ, ಇನ್ನು ಮುಂದೆ ಅದು ಬದಲು ಆಗತದೋ ಇಲ್ಲೋ ಖಾತ್ರಿ ಇಲ್ಲ.

ಹಂಗ ಅಂತ ಅದು ಬರಿಯ ದೆಹಲಿಗೆ ಸೀಮಿತವಾದ ಭಾವ ಅಂತ ಅಂದುಕೋ ಬ್ಯಾಡ್ರಿ. ಇದೇ ಭಾವ ಇತರರಲ್ಲೂ ಕಾಣತದ. ಇನ್ನು ಬೆಂಗಳೂರಿಗೆ ಬಂದರ, ಅಲ್ಲಿಯೂ ಇದೆ ಹಣೆಬಾರ.

ರಾಜ್ಯ ವಿಧಾನಸಭಾ ಅಧಿವೇಶನ: ಸಭಾಧ್ಯಕ್ಷರಿಂದ ವ್ಯವಸ್ಥೆಗಳ ಪರಿಶೀಲನೆ

ವರ್ಷಕ್ಕೆ ಎರಡು ಬಾರಿ ಯಾವುದೋ ಹೆಸರು ಕೇಳದ ಪ್ರವಾಸೋದ್ಯಮ ಪತ್ರಿಕೆಯವರು ಮಾಡಿದ ಸರ್ವೇಪ್ರಕಾರ ಇಡೀ ದೇಶದಾಗ ವಾಸಕ್ಕ ಅತ್ಯಂತ ಸೂಕ್ತವಾದ ನಗರ ‘ನಮ್ಮ ಬೆಂಗಳೂರು’ ಅಂತ ಸೋಶಿಯಲ್ ಮೀಡಿಯಾದಾಗ ಚೀರಿಕೊಳ್ಳುವ ಅನೇಕ ಕನ್ನಡಿಗರ ಕಣ್ಣಿಗೆ ಇತರ ಜಿಲ್ಲೆ, ನಗರ, ಹಳ್ಳಿಗಳು ಕಾಣೋದ ಇಲ್ಲ. ಇದು ಮಕ್ಕಳ ಕೂಟ ಒಂದನೇ ಕ್ರಾಸ್‌ನಲ್ಲಿ ಹುಟ್ಟಿ, ಬಸವನಗುಡಿ ಕಾಲೇಜಿಗೆ ಹೋಗಿ, ಮಲ್ಲೇಶ್ವರದಲ್ಲಿ ಮನೆ ಮಾಡಿ, ಪಕ್ಕದ ಕ್ರಾಸ್ ಅಂಕಲ್ ಅವರ ಮಗಳನ್ನು ಮದುವೆ ಮಾಡಿಕೊಂಡು ರಾಜಾಜಿನಗರದಲ್ಲಿ ಅಂತಿಮ ಯಾತ್ರೆ ಮುಗಿಸಿದ ‘ಸೆವೆಂತ್ ಜನರೇಷನ್ ಬ್ಯಾಂಗಲೋರಿಯನ್ಸ್’ ಕತೆ ಅಷ್ಟೇ ಅಲ್ಲ. ಕೂಗನಹಳ್ಳಿ ಎಂಬೊ ಕುಗ್ರಾಮದಲ್ಲಿ ಹುಟ್ಟಿ ಹೊಟ್ಟೆಪಾಡಿಗೆ ರಾಜಧಾನಿಯ ಸಿಂಗಲ್ ರೂಮಿನಲ್ಲಿ ಬೆಂದಕಾಳೂರು ತಿಂದು ಬದುಕಿದ ಉತ್ತರ ಕರ್ನಾಟಕದ ವೀರ ಕನ್ನಡಿಗರ ಕತೆಯೂ ಹೌದು.

ಮೂಲ ಇಲಾಖೆಗಳು ಹೋಗಲಿ, ರಾಜ್ಯದ ವಿವಿಧ ಭೂಭಾಗಗಳಿಗೆ ಸಂಬಂಧಿಸಿದ ಅನೇಕ ಕಚೇರಿಗಳು ಬೆಂಗಳೂರಿನಾಗ ಮುರಕೊಂಡು ಬಿದ್ದಾವು. ಉದಾಹರಣೆಗೆ ಬಯಲುಸೀಮೆ ಅಭಿವೃದ್ಧಿ ಮಂಡಳಿ, ಪಶ್ಚಿಮಘಟ್ಟ ಕಾವಲು ಸಮಿತಿ, ಮೀನುಗಾರಿಕೆ ನಿಗಮ, ಕಾಫಿ ಬೋರ್ಡು, ತೊಗರಿ ಬೋರ್ಡು, ಹರಳೆಣ್ಣೆ ಬೋರ್ಡು ಮುಂತಾದ ಕಚೇರಿಯ ಅದಕ್ಷ ಅಧ್ಯಕ್ಷರು, ಅದರ ಮೇಲೂ – ಕೆಳಗೂ ಜವಾಬುದಾರಿ ಇಲ್ಲದ ಮೇಲುಸ್ತುವಾರಿ ಅಧಿಕಾರಿಗಳು, ಅವರ ರಕ್ಷಕರು, ಭಕ್ಷಕರು, ಚಪರಾಸಿಗಳು, ಚಾಲಕರು, ಏಜೆಂಟ್ರು ಎಲ್ಲರೂ ಬೆಂಗಳೂರಿನಾಗ, ಅಲ್ಲಿನ ಹೆಚ್ಚುವರಿ ಭತ್ತೆ ಮತ್ತು ಇತರ ಆನುಷಿಂಗಿಕ ಫಲಗಳನ್ನು ಅನುಭೋಗಿಸುತ್ತಾ ಇದ್ದಾರ.

ಹಿಂದೊಮ್ಮೆ ವಿಧಾನಪರಿಷತ್ತಿನ ಸದಸ್ಯರೊಬ್ಬರು “ರಾಜ್ಯದ 350 ಜನ ಐಎಎಸ್ಸು ಅಧಿಕಾರಿಗಳ ಪೈಕಿ 300 ಜನ ಬರೆ ಬೆಂಗಳೂರಿನಲ್ಲಿ ಅದಾರ. ಇದು ಅನವಶ್ಯಕ, ಅವರನ್ನ ಜಿಲ್ಲೆಗಳಿಗೆ ಕಳಿಸಿರಿ”, ಅಂತ ಕೇಳಿದಾಗ, ಹಳೆ ಮೈಸೂರಿನ ಕೆಲ ಹಳೆ ತಲೆಗಳು ಆಕ್ಷೇಪಿಸಿದರು. “ಯಾಕೆ ನಂ ಬ್ಯಾಂಗಲೋರ್‌ಗೆ ಒಳ್ಳೆ ಆಫೀಸರ್ಸ್ ಬೇಡವಾ?” ಅಂತ ತರಲೆ ಮಾಡಿದರು.

ಘನ ರಾಜ್ಯ ಸರಕಾರ ಪ್ರತಿ ಜಿಲ್ಲೆಗೆ ಒಂದು ಉಸ್ತುವಾರಿ ಕಾರ್ಯದರ್ಶಿ ಅಂತ ಇಟಗೊಂಡದ. ಇವರಲ್ಲಿ ಕೆಲ ಪುಣ್ಯಾತರು ಮತ್ತು ಪುಣ್ಯಾತಗಿತ್ತಿಯರು ವಿಕ್ಟೋರಿಯಾ ರಾಣಿಯ ದತ್ತು ಪುತ್ರರು. ವಿಕ್ಟೋರಿಯಾ ರಾಣಿಯ ಕೆಲಸದ ಅವಧಿ ಬೆಳಿಗ್ಗೆ 11ರಿಂದ ಸಂಜೆ 5 ಆಗಿತ್ತಲ್ಲಾ, ಹಿಂಗಾಗಿ ಇವರೆಲ್ಲ, ಅದನ್ನು ಚಾಚೂತಪ್ಪದೆ ಪಾಲಿಸುವರು. ಆ ಜಿಲ್ಲೆಗೆ ಫ್ಲಯಿಟ್ ಇದೆಯಾ ಅಂತ ಕೇಳಿ, ತಿಳಕೊಂಡ ಮ್ಯಾಲೆನೆ ಆ ಜವಾಬುದಾರಿ ಒಪ್ಪಿಕೊಂಡವರು. ಬೆಳಿಗ್ಗೆ 11 ಗಂಟೆ ಫ್ಲಯಿಟ್‌ಗೆ ಬಂದು ಒಂದು ಮೀಟಿಂಗ್ ಮಾಡಿ, ಎಲ್ಲರ ಕಡೆಯಿಂದ ‘ಯಸ್ ಸರ್’, ‘ಓಕೆ ಸಾರ್’ ಅನ್ನಿಸಿಕೊಂಡು, ಯಾವಾಗ ಸಂಜೆ 5 ಗಂಟೆ ಆದೀತೋ, ಯಾವಾಗ ಫ್ಲಯಿಟ್ ಹಿಡಕೊಂಡು ವಾಪಸ್ ಬೆಂಗಳೂರಿಗೆ ಹೋದೆನೋ ಅಂತ ಓಡಿ ಹೋಗತಾರ. ಅಲ್ಲಿ ಏನು ಗಂಟು ಇಟ್ಟಿರತಾರೋ, ರಾತ್ರಿ ಮನಿಗೆ ಹೋಗಲಿಲ್ಲ ಅಂದ್ರ ಯಾವ ದರೊಡೆಕೋರರು ದೋಚಿಕೊಂಡು ಹೋಗತಾರೋ ಗೊತ್ತಿಲ್ಲ.

ಇದು ಬರೆ ಬೀದರ್- ಗುಲ್ಬರ್ಗದ ಕತಿ ಅಲ್ಲ. ಚಾಮರಾಜನಗರ, ಚಿತ್ರದುರ್ಗದ ಕತಿನೂ ಹೌದು. ಕೇವಲ ಹಿಂದಿ ಮಾತಾಡುವ ಕಾಶ್ಮೀರಿ ಲಾಲಾಗಳ ಸ್ವಭಾವ ಅಲ್ಲ. ಇಲ್ಲೇ ಬಳ್ಳಾರಿಯ ಹಳ್ಳಿಯಲ್ಲಿ ಹುಟ್ಟಿ ಐಎಎಸ್ಸು ಪಾಸಾಗಿ ಬೆಂಗಳೂರಿಗೆ ಹೋದಮ್ಯಾಲೆ ತನ್ನೂರು ಮರೆತವನ ಕತಿನೂ ಹೌದು.

ಬೆಳಗಾವಿಯ ಹೊರಗ ಒಂದು ಕಲ್ಲು ಹೃದಯದ ಕಟ್ಟಡ ಅದ. ಸುಮಾರು 400 ಕೋಟಿ ರೂಪಾಯಿಯಲ್ಲಿ ಲೋಕೋ ಗೈರು ಉಪಯೋಗಿ ಇಲಾಖೆಯವರು ಕಟ್ಟಿದ ಈ ಅನಗತ್ಯ ಆಲಯಕ್ಕೆ ಸುವರ್ಣಸೌಧ ಅಂತ ಹೆಸರು. ಈ ಬಿಳಿಯಾನೆಯನ್ನು ಸ್ವಚ್ಛ ಮಾಡಿ, ಮೈ ತೊಳದು, ಹುಲ್ಲು ತಿನಿಸಲಿಕ್ಕೆ ವರ್ಷಕ್ಕೆ 2-3 ಕೋಟಿ ಖರ್ಚು ಆಗತದ. ಬೆಂಗಳೂರು ಎಂಬೊ ದಂತಗೋಪುರದ ಮುತ್ತುಗದ ಕುರ್ಚಿಗಳ ಮ್ಯಾಲೆ ಫೆವಿಕಾಲ್ ಮೆತ್ತಿ ಕೂತಿರುವ ಪುಢಾರಿ ಹಾಗೂ ಅಧಿಕಾರಿಗಳಿಗೆ ಇಲ್ಲಿಯೂ ಸದನ ನಡೆಸಬಹುದು ಅಂತ ಅನ್ನಿಸಿ ನಾಲ್ಕು ವರ್ಷ ಆತು.

“ವಿಕೇಂದ್ರೀಕರಣ ಇರಲೇಬೇಕು, ಆದರ ಬರೆ ನನ್ನ ಲೆವೆಲ್ ತನಕ ಆಷ್ಟ ಇರಬೇಕು. ನನ್ನ ಕೆಳಗಿನ ಎಲ್ಲ ಅಧಿಕಾರವೂ ನನ್ನಲ್ಲೇ ಕೇಂದ್ರೀಕೃತ ಆಗಿರಬೇಕು” ಅನ್ನೋದು ಪುಢಾರಿ-ಅಧಿಕಾರಿಗಳ ಬಯಕೆ, ಅಂತ ಒಂದು ಹಳೆ ಜೋಕು ಐತಿ. ಇದೆ ಲಾಜಿಕ್ ಜಿಲ್ಲೆ, ತಾಲೂಕ, ಗ್ರಾಮ ಪಂಚಾಯತಿವರೆಗೂ ಅನ್ವಯ ಆಗತದ. ರಾಜಧಾನಿ ರಾಜಕೀಯ ಅನ್ನೋದು ಸದ್ಯದ ಮಟ್ಟಿಗೆ ಐದು ಅಂಕದ ನಾಟಕ.

ಸಂಸತ್ತು ಅಧಿವೇಶನದ ಪ್ರಶ್ನೆಯ ಅವಧಿ ರದ್ದುಗೊಳಿಸಿದ ಕೇಂದ್ರ: ಖಂಡಿಸಿ ಪತ್ರಬರೆದ 800 ತಜ್ಞರು
PC: Jagran Josh

ಅಂದಹಂಗ ದೆಹಲಿ ಅಂದರೆ ಪರ್ಷಿಯನ್, ಉರ್ದು ಭಾಷೆಯಲ್ಲಿ ಮೆಟ್ಟಿಲು. ದೇಹಲವಿ ಅನ್ನೋದು ಉರ್ದು ಭಾಷೆಯ ಇನ್ನೊಂದು ಹೆಸರು. ಆದರ ನಮಗ ಎಲ್ಲರಿಗೂ ಗೊತ್ತಿರೋ ಹಂಗ, ಮನಿ ಅನ್ನೋದು ಮೆಟ್ಟಿಲಿನಿಂದ ಶುರು ಆಗಬೇಕೇ ಹೊರತು ಅಲ್ಲಿಗೆ ಮುಗದು ಹೋಗಬಾರದು. ಇನ್ನು ದೆಹಲಿಯ ದೊರೆಗಳು ಗೆದ್ದ ದಕ್ಷಿಣದ ಮೊದಲ ನಗರ ಔರಂಗಾಬಾದ್. ಇದರ ಮೂಲ ಹೆಸರು ‘TIQ’, ಅಂದ್ರ ದಕ್ಷಿಣದ ಕಿಡಕಿ. ಕಿಡಕಿಯಿಂದ ಹೊರ ಜಗತ್ತು ತೆರೀಬೇಕು ಆಷ್ಟ, ಮುಚ್ಚಬಾರದು.

ಶರ್ಲಾಕ್ ಹೋಮ್ಸ್, ಡಾ. ವಾಟ್ಸನ್ ಎನ್ನುವ ಅಜರಾಮರ ಪಾತ್ರಗಳನ್ನು ಸೃಷ್ಟಿಸಿ ಜಗತ್ತನ್ನೇ ದಂಗುಬಡಿಸಿದ. ಮನುಕುಲ ಮರೆಯಲಾರದ ಪತ್ತೇದಾರಿ ಬರಹಗಾರ ಆರ್ಥರ್ ಕೋನಾನ್ ಡಾಯ್ಲನ ಒಂದು ಮಾತು ಇಲ್ಲೇ ನೆನಪು ಆಗತದ: “ಈ ಲಂಡನ್ ಅನ್ನುವುದು ಒಂದು ಮಹಾನ್ ಕಸದ ಗುಂಡಿ. ಈ ಸಾಮ್ರಾಜ್ಯದ ಎಲ್ಲ
ಸೋಮಾರಿಗಳು ಹಾಗೂ ಕೂತು ತಿನ್ನುವವರು ಇದರ ಆಕರ್ಷಣೆ ತಪ್ಪಿಸಿಕೊಳ್ಳಲಾರದೆ ಇಲ್ಲಿ ಬಂದು ಬೀಳುತ್ತಾರೆ. ಅಂತೆಯೇ ನಾನೂ ಇಲ್ಲಿಗೆ ಬಂದು ಬಿದ್ದೆ.”

ಹುಟ್ಟಿನಿಂದ ಲಂಡನ್‌ನವನಾಗಿರದ, ವೃತ್ತಿಯಿಂದ ವೈದ್ಯನಾಗಿ, ಬರಹದಿಂದ ಜನಪ್ರಿಯತೆ ಪಡೆದ ಡಾ. ಡಾಯ್ಲ, ತನ್ನದೇ ಪ್ರತಿಬಿಂಬವಾದ ಡಾ. ವಾಟ್ಸನ್‌ನ ಬಾಯಿಯಿಂದ ಈ ಮಾತು ಹೇಳಿಸಿದ. ಇದು ವಿಶ್ವದ ಪ್ರತಿ ನಾಗರಿಕತೆಗೆ, ಅನಾದಿಕಾಲದವರೆಗೂ ಅನ್ವಯ ಆಗತದ ಅಂತ ಅನ್ನಸತದ.

ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಡೇಟಾಖೋಲಿ: ಮಾಧ್ಯಮ ನಲ್ಲರು – ಯಾರ ಕೆಲಸ ಏನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ನಾಟಕ SIR | ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಬಗ್ಗೆ ತುಟಿ ಬಿಚ್ಚದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಆಗಸ್ಟ್ 7ರಂದು ಚುನಾವಣಾ ಆಯೋಗ ಹೊರಡಿಸಿದ ಪ್ರಕಟಣೆಯ ಪ್ರಕಾರ, ಗಣತಿ ನಮೂನೆ ಅಥವಾ ಎನ್ಯುಮರೇಶನ್ ಫಾರಂ ಸಲ್ಲಿಕೆ ದಿನಾಂಕ ಆಗಸ್ಟ್...

‘ಆಹಾರ ಸುರಕ್ಷತೆ – ಔಷಧ ಆಡಳಿತ ಇಲಾಖೆ’ಯಿಂದ ಹೋಟೆಲ್‌ಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿ; ಹೊಸ ಮಾರ್ಗಸೂಚಿ ಪ್ರಕಟ

ರಾಜ್ಯದ ಹೋಟೆಲ್‌ಗಳು, ಡಾಬಾಗಳು ಹಾಗೂ ಆಹಾರ ಸೇವಾ ಸಂಸ್ಥೆಗಳು ಪಾಲಿಸಬೇಕಾದ 'ಆಹಾರ ಸುರಕ್ಷತಾ ಮತ್ತು ನೈರ್ಮಲ್ಯ ನಿಯಮಗಳ'ನ್ನು 'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧ ಆಡಳಿತ ಇಲಾಖೆ' ಆಯುಕ್ತರು ಪ್ರಕಟಿಸಿದ್ದಾರೆ. ಕಳೆದ ಮೂರ್ನಾಲ್ಕು...

ಕರ್ನಾಟಕದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪಾದನೆ ಮತ್ತು ಮಾರಾಟ 1 ವರ್ಷ ನಿಷೇಧ: ರಾಜ್ಯ ಸರ್ಕಾರದ ಮಹತ್ವದ ಆದೇಶ

ಬೆಂಗಳೂರು: ಸಾರ್ವಜನಿಕ ಆರೋಗ್ಯ ಮತ್ತು ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ತಂಬಾಕು ಹಾಗೂ ನಿಕೋಟಿನ್ ಅಂಶ ಹೊಂದಿರುವ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ಇತರ ಅಪಾಯಕಾರಿ ಉತ್ಪನ್ನಗಳ ಮೇಲೆ ಸಂಪೂರ್ಣ...

ಲೋಕಸಭೆ ಬಲ 543 ರಲ್ಲೇ ಶಾಶ್ವತವಾಗಿ ಮುಂದುವರಿಸಲು ಕೇಂದ್ರಕ್ಕೆ ಆಗ್ರಹ: ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ಸಿ. ಜೋಸೆಫ್ ವಿಜಯ್ ನಿರ್ಣಯ ಮಂಡನೆ

ಚೆನ್ನೈ: ಕೇಂದ್ರ ಸರ್ಕಾರವು ಲೋಕಸಭೆಯ ಒಟ್ಟು ಸ್ಥಾನಗಳ ಬಲವನ್ನು ಪ್ರಸ್ತುತ ಇರುವ 543 ರಲ್ಲೇ ಶಾಶ್ವತವಾಗಿ ಕಾಯ್ದುಕೊಳ್ಳಬೇಕು ಮತ್ತು ರಾಜ್ಯಗಳ ನಡುವಿನ ಪ್ರಾತಿನಿಧ್ಯದ ಅನುಪಾತವನ್ನು ಬದಲಾಯಿಸಬಾರದು ಎಂದು ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಸಿ....

ಯುಪಿಯಲ್ಲಿ ಅಮಾನವೀಯ ಘಟನೆ: ಮೊಬೈಲ್ ಕದ್ದ ಆರೋಪ ಹೊರಿಸಿ ಒಬಿಸಿ ಯುವಕನ ತಲೆ ಬೋಳಿಸಿ ಮೆರವಣಿಗೆ; ಮೇಲ್ಜಾತಿಯ ತಂದೆ-ಮಗನ ಬಂಧನ

ಉನ್ನಾವೋ: ಉತ್ತರ ಪ್ರದೇಶದಲ್ಲಿ ಇದುವರೆಗೆ ದಲಿತ ಸಮುದಾಯಗಳ ಮೇಲೆ ವ್ಯಾಪಕವಾಗಿ ನಡೆಯುತ್ತಿದ್ದ ಜಾತಿ ಆಧಾರಿತ ದೌರ್ಜನ್ಯ ಮತ್ತು ಸಾರ್ವಜನಿಕ ಅವಮಾನದಂತಹ ಅಮಾನವೀಯ ಕೃತ್ಯಗಳು, ಈಗ ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನರ ಮೇಲೆಯೂ...

SIR 3ನೇ ಹಂತ: 12 ರಾಜ್ಯಗಳು-ಕೇಂದ್ರಾಡಳಿತ ಪ್ರದೇಶಗಳ 1.58 ಕೋಟಿ ಮತದಾರರ ಹೆಸರು ಕರಡು ಪಟ್ಟಿಯಿಂದ ಡಿಲೀಟ್

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಮೂರನೇ ಹಂತದಲ್ಲಿ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಿಂದ ಸುಮಾರು 1.58 ಕೋಟಿ ಹೆಸರುಗಳನ್ನು ಅಳಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ 3ನೇ ಹಂತದ ವ್ಯಾಪ್ತಿಗೆ ಒಳಪಡುವ 16 ರಾಜ್ಯಗಳಲ್ಲಿ...

ಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣಗಳ ನಿರ್ಧಾರಗಳಿಗೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

‘ಎಸ್‌ಐಆರ್‌’ನಿಂದ ಹೆಸರು ಡಿಲೀಟ್‌ ಆದವರಿಗೆ ‘ಹೊಸ ಮತದಾರರ ನೋಂದಣಿ’ ಯಾಕೆ?

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ ನಮೂನೆ ಸಂಖ್ಯೆ 6 ಅನ್ನು (Form No. 6) ಸಲ್ಲಿಸಿ ಎಂದು ಜುಲೈ 22 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ...

ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ : ಸಭಾತ್ಯಾಗ ಮಾಡಿದ ಬಿಜೆಪಿಯ ಏಕೈಕ ಶಾಸಕ

ತಮಿಳುನಾಡು ವಿಧಾನಸಭೆಯು ಮಂಗಳವಾರ (ಆ.11) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ...

‘ಬಹುಸಂಖ್ಯಾತ ಭಾವನೆಯು ಸಾಂವಿಧಾನಿಕ ಹಕ್ಕುಗಳನ್ನು ಮರೆಮಾಡಲು ಸಾಧ್ಯವಿಲ್ಲ’: ಇಸ್ಲಾಂ ಧರ್ಮ ಸ್ವೀಕರಿಸಿದ್ದ ಸಹೋದರಿಯರ ಅಕ್ರಮ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತೀವ್ರ ತರಾಟೆ

ಹಿಂದೂ ಧರ್ಮದಿಂದ ಸ್ವಯಂಪ್ರೇರಿತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ, ಸ್ವಂತ ತಂದೆ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರದ ಅಕ್ರಮ ಹಸ್ತಕ್ಷೇಪದಿಂದಾಗಿ ವರ್ಷಗಳ ಕಾಲ ತಮ್ಮ ಮೂಲಭೂತ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದ ಇಬ್ಬರು ವಯಸ್ಕ...