Homeಅಂಕಣಗಳುಸುದ್ದಿಯೇನೇ ಮನೋಲ್ಲಾಸಿನಿ; ಮಾಧ್ಯಮ ನಲ್ಲರು - ರಾಜಧಾನಿ ಎಂಬ ಮಾಯಾಮೋಹಿನಿ

ಸುದ್ದಿಯೇನೇ ಮನೋಲ್ಲಾಸಿನಿ; ಮಾಧ್ಯಮ ನಲ್ಲರು – ರಾಜಧಾನಿ ಎಂಬ ಮಾಯಾಮೋಹಿನಿ

- Advertisement -
- Advertisement -

ಮೊನ್ನೆ ಭಾರತಮಾತೆಯ ಅನೇಕ ಸುಪುತ್ರರು, ‘ವಿಕೇಂದ್ರೀಕರಣ ವಿನಾಶಕ್ಕೆ ದಾರಿ’, ‘ಒಕ್ಕೂಟ ಸರಕಾರ ಒಡೆದು ಹಾಕೀತು’, ‘ರಾಜ್ಯ ಸರಕಾರಗಳು ರಜೆಯ ಮೇಲೆ ಹೋಗಲಿ’, ‘ಒಂದು ದೇಶ, ಒಂದು ಸರಕಾರ’ ಅಂತೆಲ್ಲಾ ಸೋಷಿಯಲ್ ಮೀಡಿಯಾದಾಗ ಬರಕೊಂಡರು. ಅದು ಲಸಿಕೆ ಪೂರೈಕೆಗೆ ಸಂಬಂಧಪಟ್ಟ ಗೊಂದಲದ ಸಲುವಾಗಿ.

ಅವರ ಪ್ರಕಾರ ಭಾರತ ಎಂಬೊ ಉಪಖಂಡಕ್ಕ ದೆಹಲಿ ಎಂಬ ದೂರದ ಊರಿನಲ್ಲಿ ಒಂದು ಸರಕಾರ ಅಂತ ಇದ್ದರೆ ಸಾಕು. ದೇಶದ ಇತರ ರಾಜ್ಯಗಳು, ಅವುಗಳ ರಾಜಧಾನಿಗಳು, ಕೇವಲ ಭಾರತದ ಭೂಪಟದ ಮೇಲಿನ ಬಿಂದುಗಳು ಅಷ್ಟೇ ಮತ್ತು ದೆಹಲಿಯ ಸುಲ್ತಾನರು ನೀಡುವ ಭಿಕ್ಷೆಯಲ್ಲಿ ಬದುಕುವ ಭಿಕಾರಿಗಳು ಎಂಬಂತಾಗಿತ್ತು.

ಇದನ್ನ ನಾವು ಭಾವನಾತ್ಮಕವಾಗಿ ನೋಡದೆ, ಲಭ್ಯ ದತ್ತಾಂಶಗಳ ಮೂಲಕ ನೋಡೋಣ. ಉದಾಹರಣೆಗೆ ಒಕ್ಕೂಟ ಸರಕಾರದ ಕೇಂದ್ರ ಸ್ಥಾನ ದೆಹಲಿ ಒಳಗ 55 ಇಲಾಖೆಗಳ ಸುಮಾರು 1335 ಕಚೇರಿಗಳು ಅದಾವು. ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ’ ಅಂದರ ‘ಬರೆ ದೆಹಲಿಗೆ ಬಂತು’ ಅಂದಂಗ ಆಗೇದ. ಸುಮಾರು 130 ಕೋಟಿ ಜನ ಇರುವ, 30 ರಾಜ್ಯಗಳ, 600 ಜಿಲ್ಲೆಗಳ, 200 ಸ್ಮಾರ್ಟ್ ಸಿಟಿಗಳ, 30 ಲಕ್ಷ ಕಿಲೋಮೀಟರ್ ಚದುರ ಕಿಲೋಮೀಟರ್ ವ್ಯಾಪ್ತಿಯ, ಈ ದೇಶದ ಒಳಗ ಕೆಲವು ಕಚೇರಿಗಳನ್ನ ಆದರೂ ದೆಹಲಿಯಿಂದ ದೂರ ತೊಗೊಂಡು ಹೋಗಬೇಕು ಅಂತ ಇಲ್ಲಿಯವರೆಗಿನ 14 ಪ್ರಧಾನ ಮಂತ್ರಿಗಳಿಗೆ, ಅವರು ನಡೆಸಿದ ಸರಕಾರಗಳಿಗೆ ಅವಶ್ಯಕ ಅನ್ನಿಸಲಿಲ್ಲ. ಅದು ಹೋಗಲಿ, 545 ಲೋಕಸಭಾ ಕ್ಷೇತ್ರಗಳಿಂದ ನಮ್ಮ ವೋಟು ತೊಗೊಂಡು, ನಮ್ಮ ಸುಂಕದ ಹಣದಿಂದ ಬಿಂಕ ಮಾಡಿ ಮೆರೆಯುವ ಸಂಸತ್ತು ಸದಸ್ಯರಿಗೂ ಅನ್ನಿಸಲಿಲ್ಲ. ಸ್ವಾತಂತ್ರ ಬಂದು 75 ವರ್ಷ ಆಗಲಿಕ್ಕೆ ಬಂದರೂ ಈ ಹಣೆಬಾರ ಐತಿ ಅಂದರ, ಇನ್ನು ಮುಂದೆ ಅದು ಬದಲು ಆಗತದೋ ಇಲ್ಲೋ ಖಾತ್ರಿ ಇಲ್ಲ.

ಹಂಗ ಅಂತ ಅದು ಬರಿಯ ದೆಹಲಿಗೆ ಸೀಮಿತವಾದ ಭಾವ ಅಂತ ಅಂದುಕೋ ಬ್ಯಾಡ್ರಿ. ಇದೇ ಭಾವ ಇತರರಲ್ಲೂ ಕಾಣತದ. ಇನ್ನು ಬೆಂಗಳೂರಿಗೆ ಬಂದರ, ಅಲ್ಲಿಯೂ ಇದೆ ಹಣೆಬಾರ.

ರಾಜ್ಯ ವಿಧಾನಸಭಾ ಅಧಿವೇಶನ: ಸಭಾಧ್ಯಕ್ಷರಿಂದ ವ್ಯವಸ್ಥೆಗಳ ಪರಿಶೀಲನೆ

ವರ್ಷಕ್ಕೆ ಎರಡು ಬಾರಿ ಯಾವುದೋ ಹೆಸರು ಕೇಳದ ಪ್ರವಾಸೋದ್ಯಮ ಪತ್ರಿಕೆಯವರು ಮಾಡಿದ ಸರ್ವೇಪ್ರಕಾರ ಇಡೀ ದೇಶದಾಗ ವಾಸಕ್ಕ ಅತ್ಯಂತ ಸೂಕ್ತವಾದ ನಗರ ‘ನಮ್ಮ ಬೆಂಗಳೂರು’ ಅಂತ ಸೋಶಿಯಲ್ ಮೀಡಿಯಾದಾಗ ಚೀರಿಕೊಳ್ಳುವ ಅನೇಕ ಕನ್ನಡಿಗರ ಕಣ್ಣಿಗೆ ಇತರ ಜಿಲ್ಲೆ, ನಗರ, ಹಳ್ಳಿಗಳು ಕಾಣೋದ ಇಲ್ಲ. ಇದು ಮಕ್ಕಳ ಕೂಟ ಒಂದನೇ ಕ್ರಾಸ್‌ನಲ್ಲಿ ಹುಟ್ಟಿ, ಬಸವನಗುಡಿ ಕಾಲೇಜಿಗೆ ಹೋಗಿ, ಮಲ್ಲೇಶ್ವರದಲ್ಲಿ ಮನೆ ಮಾಡಿ, ಪಕ್ಕದ ಕ್ರಾಸ್ ಅಂಕಲ್ ಅವರ ಮಗಳನ್ನು ಮದುವೆ ಮಾಡಿಕೊಂಡು ರಾಜಾಜಿನಗರದಲ್ಲಿ ಅಂತಿಮ ಯಾತ್ರೆ ಮುಗಿಸಿದ ‘ಸೆವೆಂತ್ ಜನರೇಷನ್ ಬ್ಯಾಂಗಲೋರಿಯನ್ಸ್’ ಕತೆ ಅಷ್ಟೇ ಅಲ್ಲ. ಕೂಗನಹಳ್ಳಿ ಎಂಬೊ ಕುಗ್ರಾಮದಲ್ಲಿ ಹುಟ್ಟಿ ಹೊಟ್ಟೆಪಾಡಿಗೆ ರಾಜಧಾನಿಯ ಸಿಂಗಲ್ ರೂಮಿನಲ್ಲಿ ಬೆಂದಕಾಳೂರು ತಿಂದು ಬದುಕಿದ ಉತ್ತರ ಕರ್ನಾಟಕದ ವೀರ ಕನ್ನಡಿಗರ ಕತೆಯೂ ಹೌದು.

ಮೂಲ ಇಲಾಖೆಗಳು ಹೋಗಲಿ, ರಾಜ್ಯದ ವಿವಿಧ ಭೂಭಾಗಗಳಿಗೆ ಸಂಬಂಧಿಸಿದ ಅನೇಕ ಕಚೇರಿಗಳು ಬೆಂಗಳೂರಿನಾಗ ಮುರಕೊಂಡು ಬಿದ್ದಾವು. ಉದಾಹರಣೆಗೆ ಬಯಲುಸೀಮೆ ಅಭಿವೃದ್ಧಿ ಮಂಡಳಿ, ಪಶ್ಚಿಮಘಟ್ಟ ಕಾವಲು ಸಮಿತಿ, ಮೀನುಗಾರಿಕೆ ನಿಗಮ, ಕಾಫಿ ಬೋರ್ಡು, ತೊಗರಿ ಬೋರ್ಡು, ಹರಳೆಣ್ಣೆ ಬೋರ್ಡು ಮುಂತಾದ ಕಚೇರಿಯ ಅದಕ್ಷ ಅಧ್ಯಕ್ಷರು, ಅದರ ಮೇಲೂ – ಕೆಳಗೂ ಜವಾಬುದಾರಿ ಇಲ್ಲದ ಮೇಲುಸ್ತುವಾರಿ ಅಧಿಕಾರಿಗಳು, ಅವರ ರಕ್ಷಕರು, ಭಕ್ಷಕರು, ಚಪರಾಸಿಗಳು, ಚಾಲಕರು, ಏಜೆಂಟ್ರು ಎಲ್ಲರೂ ಬೆಂಗಳೂರಿನಾಗ, ಅಲ್ಲಿನ ಹೆಚ್ಚುವರಿ ಭತ್ತೆ ಮತ್ತು ಇತರ ಆನುಷಿಂಗಿಕ ಫಲಗಳನ್ನು ಅನುಭೋಗಿಸುತ್ತಾ ಇದ್ದಾರ.

ಹಿಂದೊಮ್ಮೆ ವಿಧಾನಪರಿಷತ್ತಿನ ಸದಸ್ಯರೊಬ್ಬರು “ರಾಜ್ಯದ 350 ಜನ ಐಎಎಸ್ಸು ಅಧಿಕಾರಿಗಳ ಪೈಕಿ 300 ಜನ ಬರೆ ಬೆಂಗಳೂರಿನಲ್ಲಿ ಅದಾರ. ಇದು ಅನವಶ್ಯಕ, ಅವರನ್ನ ಜಿಲ್ಲೆಗಳಿಗೆ ಕಳಿಸಿರಿ”, ಅಂತ ಕೇಳಿದಾಗ, ಹಳೆ ಮೈಸೂರಿನ ಕೆಲ ಹಳೆ ತಲೆಗಳು ಆಕ್ಷೇಪಿಸಿದರು. “ಯಾಕೆ ನಂ ಬ್ಯಾಂಗಲೋರ್‌ಗೆ ಒಳ್ಳೆ ಆಫೀಸರ್ಸ್ ಬೇಡವಾ?” ಅಂತ ತರಲೆ ಮಾಡಿದರು.

ಘನ ರಾಜ್ಯ ಸರಕಾರ ಪ್ರತಿ ಜಿಲ್ಲೆಗೆ ಒಂದು ಉಸ್ತುವಾರಿ ಕಾರ್ಯದರ್ಶಿ ಅಂತ ಇಟಗೊಂಡದ. ಇವರಲ್ಲಿ ಕೆಲ ಪುಣ್ಯಾತರು ಮತ್ತು ಪುಣ್ಯಾತಗಿತ್ತಿಯರು ವಿಕ್ಟೋರಿಯಾ ರಾಣಿಯ ದತ್ತು ಪುತ್ರರು. ವಿಕ್ಟೋರಿಯಾ ರಾಣಿಯ ಕೆಲಸದ ಅವಧಿ ಬೆಳಿಗ್ಗೆ 11ರಿಂದ ಸಂಜೆ 5 ಆಗಿತ್ತಲ್ಲಾ, ಹಿಂಗಾಗಿ ಇವರೆಲ್ಲ, ಅದನ್ನು ಚಾಚೂತಪ್ಪದೆ ಪಾಲಿಸುವರು. ಆ ಜಿಲ್ಲೆಗೆ ಫ್ಲಯಿಟ್ ಇದೆಯಾ ಅಂತ ಕೇಳಿ, ತಿಳಕೊಂಡ ಮ್ಯಾಲೆನೆ ಆ ಜವಾಬುದಾರಿ ಒಪ್ಪಿಕೊಂಡವರು. ಬೆಳಿಗ್ಗೆ 11 ಗಂಟೆ ಫ್ಲಯಿಟ್‌ಗೆ ಬಂದು ಒಂದು ಮೀಟಿಂಗ್ ಮಾಡಿ, ಎಲ್ಲರ ಕಡೆಯಿಂದ ‘ಯಸ್ ಸರ್’, ‘ಓಕೆ ಸಾರ್’ ಅನ್ನಿಸಿಕೊಂಡು, ಯಾವಾಗ ಸಂಜೆ 5 ಗಂಟೆ ಆದೀತೋ, ಯಾವಾಗ ಫ್ಲಯಿಟ್ ಹಿಡಕೊಂಡು ವಾಪಸ್ ಬೆಂಗಳೂರಿಗೆ ಹೋದೆನೋ ಅಂತ ಓಡಿ ಹೋಗತಾರ. ಅಲ್ಲಿ ಏನು ಗಂಟು ಇಟ್ಟಿರತಾರೋ, ರಾತ್ರಿ ಮನಿಗೆ ಹೋಗಲಿಲ್ಲ ಅಂದ್ರ ಯಾವ ದರೊಡೆಕೋರರು ದೋಚಿಕೊಂಡು ಹೋಗತಾರೋ ಗೊತ್ತಿಲ್ಲ.

ಇದು ಬರೆ ಬೀದರ್- ಗುಲ್ಬರ್ಗದ ಕತಿ ಅಲ್ಲ. ಚಾಮರಾಜನಗರ, ಚಿತ್ರದುರ್ಗದ ಕತಿನೂ ಹೌದು. ಕೇವಲ ಹಿಂದಿ ಮಾತಾಡುವ ಕಾಶ್ಮೀರಿ ಲಾಲಾಗಳ ಸ್ವಭಾವ ಅಲ್ಲ. ಇಲ್ಲೇ ಬಳ್ಳಾರಿಯ ಹಳ್ಳಿಯಲ್ಲಿ ಹುಟ್ಟಿ ಐಎಎಸ್ಸು ಪಾಸಾಗಿ ಬೆಂಗಳೂರಿಗೆ ಹೋದಮ್ಯಾಲೆ ತನ್ನೂರು ಮರೆತವನ ಕತಿನೂ ಹೌದು.

ಬೆಳಗಾವಿಯ ಹೊರಗ ಒಂದು ಕಲ್ಲು ಹೃದಯದ ಕಟ್ಟಡ ಅದ. ಸುಮಾರು 400 ಕೋಟಿ ರೂಪಾಯಿಯಲ್ಲಿ ಲೋಕೋ ಗೈರು ಉಪಯೋಗಿ ಇಲಾಖೆಯವರು ಕಟ್ಟಿದ ಈ ಅನಗತ್ಯ ಆಲಯಕ್ಕೆ ಸುವರ್ಣಸೌಧ ಅಂತ ಹೆಸರು. ಈ ಬಿಳಿಯಾನೆಯನ್ನು ಸ್ವಚ್ಛ ಮಾಡಿ, ಮೈ ತೊಳದು, ಹುಲ್ಲು ತಿನಿಸಲಿಕ್ಕೆ ವರ್ಷಕ್ಕೆ 2-3 ಕೋಟಿ ಖರ್ಚು ಆಗತದ. ಬೆಂಗಳೂರು ಎಂಬೊ ದಂತಗೋಪುರದ ಮುತ್ತುಗದ ಕುರ್ಚಿಗಳ ಮ್ಯಾಲೆ ಫೆವಿಕಾಲ್ ಮೆತ್ತಿ ಕೂತಿರುವ ಪುಢಾರಿ ಹಾಗೂ ಅಧಿಕಾರಿಗಳಿಗೆ ಇಲ್ಲಿಯೂ ಸದನ ನಡೆಸಬಹುದು ಅಂತ ಅನ್ನಿಸಿ ನಾಲ್ಕು ವರ್ಷ ಆತು.

“ವಿಕೇಂದ್ರೀಕರಣ ಇರಲೇಬೇಕು, ಆದರ ಬರೆ ನನ್ನ ಲೆವೆಲ್ ತನಕ ಆಷ್ಟ ಇರಬೇಕು. ನನ್ನ ಕೆಳಗಿನ ಎಲ್ಲ ಅಧಿಕಾರವೂ ನನ್ನಲ್ಲೇ ಕೇಂದ್ರೀಕೃತ ಆಗಿರಬೇಕು” ಅನ್ನೋದು ಪುಢಾರಿ-ಅಧಿಕಾರಿಗಳ ಬಯಕೆ, ಅಂತ ಒಂದು ಹಳೆ ಜೋಕು ಐತಿ. ಇದೆ ಲಾಜಿಕ್ ಜಿಲ್ಲೆ, ತಾಲೂಕ, ಗ್ರಾಮ ಪಂಚಾಯತಿವರೆಗೂ ಅನ್ವಯ ಆಗತದ. ರಾಜಧಾನಿ ರಾಜಕೀಯ ಅನ್ನೋದು ಸದ್ಯದ ಮಟ್ಟಿಗೆ ಐದು ಅಂಕದ ನಾಟಕ.

ಸಂಸತ್ತು ಅಧಿವೇಶನದ ಪ್ರಶ್ನೆಯ ಅವಧಿ ರದ್ದುಗೊಳಿಸಿದ ಕೇಂದ್ರ: ಖಂಡಿಸಿ ಪತ್ರಬರೆದ 800 ತಜ್ಞರು
PC: Jagran Josh

ಅಂದಹಂಗ ದೆಹಲಿ ಅಂದರೆ ಪರ್ಷಿಯನ್, ಉರ್ದು ಭಾಷೆಯಲ್ಲಿ ಮೆಟ್ಟಿಲು. ದೇಹಲವಿ ಅನ್ನೋದು ಉರ್ದು ಭಾಷೆಯ ಇನ್ನೊಂದು ಹೆಸರು. ಆದರ ನಮಗ ಎಲ್ಲರಿಗೂ ಗೊತ್ತಿರೋ ಹಂಗ, ಮನಿ ಅನ್ನೋದು ಮೆಟ್ಟಿಲಿನಿಂದ ಶುರು ಆಗಬೇಕೇ ಹೊರತು ಅಲ್ಲಿಗೆ ಮುಗದು ಹೋಗಬಾರದು. ಇನ್ನು ದೆಹಲಿಯ ದೊರೆಗಳು ಗೆದ್ದ ದಕ್ಷಿಣದ ಮೊದಲ ನಗರ ಔರಂಗಾಬಾದ್. ಇದರ ಮೂಲ ಹೆಸರು ‘TIQ’, ಅಂದ್ರ ದಕ್ಷಿಣದ ಕಿಡಕಿ. ಕಿಡಕಿಯಿಂದ ಹೊರ ಜಗತ್ತು ತೆರೀಬೇಕು ಆಷ್ಟ, ಮುಚ್ಚಬಾರದು.

ಶರ್ಲಾಕ್ ಹೋಮ್ಸ್, ಡಾ. ವಾಟ್ಸನ್ ಎನ್ನುವ ಅಜರಾಮರ ಪಾತ್ರಗಳನ್ನು ಸೃಷ್ಟಿಸಿ ಜಗತ್ತನ್ನೇ ದಂಗುಬಡಿಸಿದ. ಮನುಕುಲ ಮರೆಯಲಾರದ ಪತ್ತೇದಾರಿ ಬರಹಗಾರ ಆರ್ಥರ್ ಕೋನಾನ್ ಡಾಯ್ಲನ ಒಂದು ಮಾತು ಇಲ್ಲೇ ನೆನಪು ಆಗತದ: “ಈ ಲಂಡನ್ ಅನ್ನುವುದು ಒಂದು ಮಹಾನ್ ಕಸದ ಗುಂಡಿ. ಈ ಸಾಮ್ರಾಜ್ಯದ ಎಲ್ಲ
ಸೋಮಾರಿಗಳು ಹಾಗೂ ಕೂತು ತಿನ್ನುವವರು ಇದರ ಆಕರ್ಷಣೆ ತಪ್ಪಿಸಿಕೊಳ್ಳಲಾರದೆ ಇಲ್ಲಿ ಬಂದು ಬೀಳುತ್ತಾರೆ. ಅಂತೆಯೇ ನಾನೂ ಇಲ್ಲಿಗೆ ಬಂದು ಬಿದ್ದೆ.”

ಹುಟ್ಟಿನಿಂದ ಲಂಡನ್‌ನವನಾಗಿರದ, ವೃತ್ತಿಯಿಂದ ವೈದ್ಯನಾಗಿ, ಬರಹದಿಂದ ಜನಪ್ರಿಯತೆ ಪಡೆದ ಡಾ. ಡಾಯ್ಲ, ತನ್ನದೇ ಪ್ರತಿಬಿಂಬವಾದ ಡಾ. ವಾಟ್ಸನ್‌ನ ಬಾಯಿಯಿಂದ ಈ ಮಾತು ಹೇಳಿಸಿದ. ಇದು ವಿಶ್ವದ ಪ್ರತಿ ನಾಗರಿಕತೆಗೆ, ಅನಾದಿಕಾಲದವರೆಗೂ ಅನ್ವಯ ಆಗತದ ಅಂತ ಅನ್ನಸತದ.

ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಡೇಟಾಖೋಲಿ: ಮಾಧ್ಯಮ ನಲ್ಲರು – ಯಾರ ಕೆಲಸ ಏನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...