Homeಅಂಕಣಗಳುಡೇಟಾಖೋಲಿ: ಮಾಧ್ಯಮ ನಲ್ಲರು - ಯಾರ ಕೆಲಸ ಏನು?

ಡೇಟಾಖೋಲಿ: ಮಾಧ್ಯಮ ನಲ್ಲರು – ಯಾರ ಕೆಲಸ ಏನು?

- Advertisement -
- Advertisement -

ಈ ವಾರ ಇಡೀ ಜಗತ್ತು ಶಾಂತಿ ಹಾಗೂ ಸಮೃದ್ಧಿಯಿಂದ ತುಂಬಿ ತುಳುಕುತ್ತಿದ್ದಾಗ ಒಂದು ಸುದ್ದಿ ಬಂತು. ಈಗಿನ ಕಾಲದ ಎಲ್ಲ ಒಳ್ಳೆ-ಕೆಟ್ಟ ಸುದ್ದಿಗಳಂತೆ ಅದು ಕೆಲವೇ ನಿಮಿಷದಾಗ ವೈರಲ್ ಆಗಿ ಹೋತು.

ಅದು ಯಾವುದಪಾ ಅಂದರ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ನಡುವೆ ಜಗಳ ಆಗಿ, ಅದರಾಗ ಕಿರಿಯ ಅಧಿಕಾರಿ ಒಬ್ಬರು ರಾಜೀನಾಮೆ ಕೊಟ್ಟು, ಕಡಿಕೆ ರಾಜ್ಯ ಸರಕಾರ ಇಬ್ಬರನ್ನೂ ವರ್ಗಾವಣೆ ಮಾಡಿದ ಸುದ್ದಿ.

ಅದರಾಗ ಹಿರಿಯ ಅಧಿಕಾರಿ, ’ಇದರ ಹಿಂದೆ ದೊಡ್ಡ ಪಿತೂರಿ ಐತಿ. ರಿಯಲ್ ಎಸ್ಟೇಟ್ ಮಾಫಿಯಾ ಎಲ್ಲ ಇದಕ್ಕ ಕಾರಣ. ನಮ್ಮ ನಡುವಿನ ಭಿನ್ನಾಭಿಪ್ರಾಯ ಎಲ್ಲ ಸಣ್ಣದು ಆಷ್ಟ. ಅದನ್ನ ನೆವ ಮಾಡಿಕೊಂಡು ನಮ್ಮನ್ನ ಇಲ್ಲಿಂದ ಹೊರಗ ಹಾಕಿದರು’ ಅನ್ನೋ ಅರ್ಥ ಬಾರೋ ಹಂಗ ಪ್ರತಿಕ್ರಿಯೆ ಕೊಟ್ಟರು.

ಅಲ್ಲಿಗೆ ಆ ಕತಿ ಮುಗೀತು. ಆದರ ಅದರಗಿಂತ ಕುತೂಹಲಕಾರಿಯಾಗಿದ್ದು ಯಾವುದು ಅಂದರ ಈ ವಿಷಯಕ್ಕ ಸಂಬಂಧ ಪಡದೇ ಇರುವ ಒಬ್ಬ ಐಪಿಎಸ್ಸು ಅಧಿಕಾರಿ ತಮ್ಮ ಫೇಸ್ಬುಕ್ ಗೋಡೆ ಮೇಲೆ ಒಂದು ಬರಹ ಬರದು ಹಾಕಿದರು. ಅದರಾಗ ಅವರು ಏನು ಹೇಳಿದರು ಅಂದರ ಕೆಲವು ಅಧಿಕಾರಿಗಳು ತಾವು ಸಿಂಗಮ್, ಸಿಂಹಿಣಿ ಅಂತ ಎಲ್ಲಾ ಪ್ರಚಾರ ಮಾಡಿಕೊಳತಾರ. ಇದು ಸರಿಯಲ್ಲ. ತಮ್ಮ ಕೆಲಸ ತಾವು ಸುಮ್ಮನೇ ಮಾಡಬೇಕು, ರಾಜಕೀಯದಿಂದ ಅವರು ದೂರ ಇರಬೇಕು, ಒಳ್ಳೆ ಕೆಲಸ ಮಾಡಿದರ ತಮ್ಮ ತಂಡಕ್ಕೆ ಅದರ ಶ್ರೇಯಸ್ಸು ಕೊಡಬೇಕು, ಕೆಟ್ಟ ಕೆಲಸ ಮಾಡಿದರ ಅದರ ತಪ್ಪು ಹೊರಲಿಕ್ಕೆ ತಯಾರು ಇರಬೇಕು, ಅನ್ನುವ ಮಾತು ಹೇಳಿದರು. ಮಜಾ ಅಂದರ ಈ ಅಧಿಕಾರಿ ಹುಬ್ಬಳ್ಳಿ- ಬೆಳಗಾವಿಯೊಳಗ ಕೆಲಸ ಮಾಡಿದಾಗ ಇದೆ ರೀತಿಯ ಮಾಧ್ಯಮ ಪ್ರಚಾರದ ಅನುಕೂಲ ಪಡೆದುಕೊಂಡಿದ್ರು. ಆ ಮಾತು ಬ್ಯಾರೆ.

ಇಲ್ಲಿ ಮುಖ್ಯವಾದ ವಿಷಯ ಏನು ಅಂದರ ನಮ್ಮ ಭವ್ಯ ಭಾರತದ ಮಾನ್ಯ ಮತದಾರ ಬಂಧುಗಳಿಗೆ ನಮ್ಮ ಘನ ಸರಕಾರದ ಒಳಗ ಯಾರಿಗೆ ಯಾವ ಕೆಲಸ, ಯಾವ ಜವಾಬುದಾರಿ ಅನ್ನೋದು ಸರಿಯಾಗಿ ಗೊತ್ತಿಲ್ಲ. ರಾಜಕಾರಣಿಯ ಕೆಲಸ ಏನು, ಅಧಿಕಾರಿಗಳ ಕೆಲಸ ಏನು ಅನ್ನೋದು ಗೊತ್ತಿಲ್ಲ.

PC : Wikipedia, (ಪ್ರತಾಪ್ ಸಿಂಗ್ ಖೈರೋಂ)

ಇದರ ಬಗ್ಗೆ ಒಂದು ರಸವತ್ತಾದ ಕತೆ ಇದೆ. ಪ್ರತಾಪ್ ಸಿಂಗ್ ಖೈರೋಂ ಅವರು 50ನೇ ದಶಕದೊಳಗ ಪಂಜಾಬ್‌ನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಆಗ ಒಬ್ಬ ದಕ್ಷಿಣ ಭಾರತ ಮೂಲದ ಐಎಎಸ್ ಅಧಿಕಾರಿ ಪಂಜಾಬಿನ ಮುಖ್ಯ ಕಾರ್ಯದರ್ಶಿ ಆಗಿದ್ದರು. ಮುಖ್ಯಮಂತ್ರಿ ಅವರು ಮುಖ್ಯ ಕಾರ್ಯದರ್ಶಿಯನ್ನು ಕೇಳಿದರಂತ – ಅಲ್ರೀ, ನಿಮ್ಮ ಕೆಲಸ ಏನು, ನನ್ನ ಕೆಲಸ ಏನು? ಅಂತ. ಆಗ ಆ ಐಎಎಸ್ ಅಧಿಕಾರಿ ಸರ್, ನಿಮ್ಮ ಕೆಲಸ ಸರಕಾರದ ಕಾನೂನು, ನೀತಿನಿಯಮ ರೂಪಿಸುವುದು. ನನ್ನ ಕೆಲಸ ದಿನನಿತ್ಯದ ಆಡಳಿತ ನಿರ್ವಹಣೆ ಮಾಡೋದು, ಅಂತ. ಹೌದಾ, ಹಂಗಾರ ನಾಳೆಯಿಂದ ನನ್ನ ಕೆಲಸ ನೀವು ಮಾಡ್ರಿ, ನಿಮ್ಮ ಕೆಲಸ ನಾನು ಮಾಡತೆನಿ ಅಂತ ಮುಖ್ಯಮಂತ್ರಿ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಹೇಳಿದರಂತ.

ಖೈರೋಂ ಅವರು ಪ್ರಾಮಾಣಿಕರು, ಸರಳ ಮನುಷ್ಯರು. ಹಿಂಗಾಗಿ ಅವರು ಅಧಿಕಾರಿನ ಕರೆದು ಮಾತಾಡಿದರು. ಬ್ಯಾರೆ ರಾಜಕಾರಣಿಗಳು ಸಹಿತ ಇದೆ ಕೆಲಸ ಮಾಡ್ತಾ ಇದಾರೆ, ಅದರ ಅದನ್ನ ಮುಕ್ತವಾಗಿ ಒಪ್ಪಿಕೊಳ್ಳೋದಿಲ್ಲ.

ಈಗ ಮತ್ತ ನಮ್ಮ ರಾಜ್ಯದ ಅಧಿಕಾರಿಗಳಿಗೆ ಬರೋಣ. ಮೈಸೂರಿನ ಇಬ್ಬರು ಅಧಿಕಾರಿಗಳು ಜಗಳ ಅಡಿದರ, ಮೈಸೂರಿನ ಜಿಲ್ಲಾಧಿಕಾರಿ ಹಾಗೂ ಚಾಮರಾಜನಗರದ ಜಿಲ್ಲಾಧಿಕಾರಿಗೆ ಭಿನ್ನಾಭಿಪ್ರಾಯ ಬಂದರ, ಅವರ ಮ್ಯಾಲೆ ಒಬ್ಬ ಪ್ರಾದೇಶಿಕ ಆಯುಕ್ತ ಅಂತ ಒಬ್ಬ ಅಧಿಕಾರಿ ಇದ್ದ ಇರತಾನ. ಆ ಪುಣ್ಯಾತ್ಮ ಈ ಅಧಿಕಾರಿಗಳ ಮೇಲೆ ನಿಗರಾಣಿ ವಹಿಸಿ ಅವರು ಸರಿಯಾಗಿ ಕೆಲಸ ಮಾಡುವ ಹಂಗ ಯಾಕ್ ಮಾಡಲಿಲ್ಲ ಅಂತ ಯಾವ ಮಾಧ್ಯಮದವರು ಕೇಳಲಿಲ್ಲ, ರಾಜಕಾರಣಿನು ಕೇಳಲಿಲ್ಲ.

ಯಾಕೆ ಅಂದ್ರ ಮಾಧ್ಯಮದವರಿಗೆ ಸಹಿತ ಯಾರದ್ದು ಯಾವ ಕೆಲಸ ಅಂತ ಹೇಳಿ ಸರಿಯಾಗಿ ಗೊತ್ತಿಲ್ಲ. ಅಥವಾ ಗೊತ್ತಿದರೂ, ಟಿಆರ್‌ಪಿ ಆಸೆಗೆ, ಮಾರುಕಟ್ಟೆ, ಜಾಹೀರಾತು ಆಸೆಗೆ, ಅವರು ಬಹು ಚರ್ಚಿತ ವಿಷಯಗಳನ್ನ ತೋರಿಸ್ತಾರ ಹೊರತು, ಕೇಳಲೇಬೇಕಾದ ಪ್ರಶ್ನೆ ಕೇಳಿ, ಸರಿಯಾದ ಉತ್ತರ ಹುಡುಕುವ ಪ್ರಯತ್ನ ಮಾಡೋದಿಲ್ಲ.

ಈ ರೀತಿಯ ಸುದ್ದಿ ಅಥವಾ ಚರ್ಚೆ, ಜನರಿಗೆ ಬೇಕೋ ಬೇಡವೋ? ಪ್ರತಿ ದಿನ ಮುಂಜಾನೆದೊಳಗಿನ ಸುದ್ದಿಯ ಹೆಡ್‌ಲೈನ್ ಓದಿ ಪೇಪರ್ ಮುಚ್ಚಿ ಇಡುವ ನಮ್ಮ ಜನರಿಗೆ ಸುದ್ದಿಯ ಅಳಕ್ಕೆ ಹೋಗೋದು ಬೇಕೋ ಬ್ಯಾಡವೋ?

ಇದರಾಗ ನಾಯಕರ ತಪ್ಪೂ ಐತಿ. ಈಗಿನ ನಾಯಕರು ಮುಂದಿನ ಚುನಾವಣೆ ಬಗ್ಗೆ ಮಾತ್ರ ವಿಚಾರ ಮಾಡತಾರ ಹೊರತು ಅವರಿಗೆ ಬೇರೆ ಮುಂದಾಲೋಚನೆ, ದೂರದೃಷ್ಟಿತ್ವ ಅನ್ನೋದು ಇರೋದಿಲ್ಲ.

ಬಹಳ ಹಿಂದೆ ರಾಮಚಂದ್ರಪ್ಪ ಅಂತ ಬೆಂಗಳೂರಿನ ಮೇಯರ್ ಇದ್ದರು. ಅವರು ಜಾಸ್ತಿ ಓದಿರಲಿಲ್ಲ, ಆದ್ದರಿಂದ ಅವರನ್ನ ಬೆಂಗಳೂರಿನ ಕೆಲವು ಪತ್ರಕರ್ತರು ಮೇಯರ್ ಮುತ್ತಣ್ಣ ಅಂತ ಕರಿತಿದ್ದರು. ಅವರು ಬಹಳ ಸರಳ ಭಾಷೆಯೊಳಗ ಭಾಷಣ ಮಾಡ್ತಿದ್ದರು. ಪಾಲಿಕೆಯ ಆಯುಕ್ತರು ಬದಲಾವಣೆ ಆದಾಗ ಅವರು ಒಂದು ಸ್ವಾಗತ ಭಾಷಣ ಮಾಡಿದ್ದರು. ಅದರಲ್ಲಿ ಒಂದು ಮರೆಯಲಾರದಂತಹ ಮಾತು ಹೇಳಿದರು.

’ನೋಡಿ ಸ್ವಾಮಿ, ನಮ್ಮ ಅಧಿಕಾರಿಗಳು ಕುದುರೆಗಳು ಇದ್ದಂತೆ. ಅವರು ಯಾವ ದಿಕ್ಕಿನಲ್ಲಿ ಓಡುತ್ತಾರೆ ಅನ್ನುವುದು ಅವರನ್ನು ಓಡಿಸುವ ಸವಾರರ ಮೇಲೆ ಇರುತ್ತದೆ. ಆಯುಕ್ತರು ಸವಾರರು ಇದ್ದಂತೆ. ನೀವು ಒಳ್ಳೆಯವರಾದರೆ, ಅವರು ಒಳ್ಳೆಯವರು’, ಅಂತ ಹೇಳಿ ಮಾತು ಮುಗಿಸಿದ್ದರು.

ಈ ರೀತಿಯ ಸ್ಪಷ್ಟತೆ ಈಗಿನ ನಾಯಕರಲ್ಲಿ ಬಂದರೆ, ಅದು ಜನರಿಗೆ ತಿಳಿದರೆ, ಆಡಳಿತ ಅನ್ನುವುದು ಸರಿಯಾದ ದಾರಿಯಲ್ಲಿ ನಡೆದೀತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...