Homeಅಂಕಣಗಳುಬೆಂಗಾವಲೂರು ಎಂಬೋ ದಂಡು ಪ್ರದೇಶದ ಪಾಳೇಗಾರರಲ್ಲಿ ಬಡಪಾಯಿ ಕನ್ನಡಿಗರ ಬಿನ್ನವತ್ತಲೆ

ಬೆಂಗಾವಲೂರು ಎಂಬೋ ದಂಡು ಪ್ರದೇಶದ ಪಾಳೇಗಾರರಲ್ಲಿ ಬಡಪಾಯಿ ಕನ್ನಡಿಗರ ಬಿನ್ನವತ್ತಲೆ

- Advertisement -
- Advertisement -

ಮಾನ್ಯರೇ,

ತಾವು ನಮ್ಮ ವೋಟು ಪಡೆದು ಟಾಟಾ ಬೈ ಬೈ ಹೇಳಿ ನಮ್ಮ ಸುಂಕದ ಹಣದಿಂದ ಖರೀದಿ ಮಾಡಿದ ಪುಷ್ಪಕ ವಿಮಾನ ಹತ್ತಿ ಬೆಂಗಾವಲು ಊರಿಗೆ ಹೋದಮೇಲೆ ನಮ್ಮ ನಿಮ್ಮ ಭೇಟಿ ಇಲ್ಲ. ಒಂದು ಪತ್ರ ಇಲ್ಲ, ಈಮೇಲೂ ಇಲ್ಲ, ಎಸ್‌ಎಂಎಸ್‌ಗೆ ಉತ್ತರ ಇಲ್ಲ. ವಾಟ್ಸ್‌ಅಪ್ ಸಂದೇಶಕ್ಕೆ ಬ್ಲೂ ಟಿಕ್‌ನ ಪರತ್ ಪಾವತಿ ಸಹಿತ ಸಿಗಲಿಲ್ಲ. ವೋಟು ಕೇಳುವ ಮುನ್ನ ನೀವೇ ನಮ್ಮನ್ನು ಹುಡುಕಿಕೊಂಡು ಬಂದಿರಿ. ಆದರೆ ವೋಟು ಎಣಿಕೆ ನಂತರ ನೀವು ಅಂತರ್ದಾನವಾಗಿಬಿಟ್ಟಿರಿ. ನಮ್ಮ ಓಣಿಯಲ್ಲಿ ಪಿಕ್‌ಪಾಕೆಟ್ ಮಾಡಿ ಜೈಲಿಗೆ ಹೋಗಿದ್ದ, ನಿಮ್ಮ ಆಶೀರ್ವಾದದಿಂದ ಹೊರಗೆಬಂದಿದ್ದ ಕಳ್ಳ ಕಿಟ್ಯಾ ಈಗ ಕೆ. ಕೃಷ್ಣ ಕುಮಾರ್ ಆಗಿ ಬಿಟ್ಟಿದ್ದಾನೆ. ಅವನು ಈಗ ತಮ್ಮ ಪಿಎ ಆಗಿದ್ದೇನೆ ಎಂದೂ, ತಮ್ಮ ಸ್ವಯಂ ಘೋಷಿತ ಸಲಹೆಗಾರನಾಗಿಬಿಟ್ಟಿದ್ದಾನೆ ಎಂದೂ ಹೇಳಿಕೊಂಡಿದ್ದಾನೆ. ನನ್ನಂಥ ಬಡಪಾಯಿಗಳ ಪಾಲಿಗೆ ಅವನೇ ಮುಖ್ಯಮಂತ್ರಿಯಾಗಿ ಬಿಟ್ಟಿದ್ದಾನೆ.

ನಮಗೆ ಅವನ ಭೇಟಿಯೇ ದೇವ ದುರ್ಲಭವಾಗಿಬಿಟ್ಟಿದೆ. ಇನ್ನು ನಿಮ್ಮಂಥವರ ಮಾತು ಕೇವಲ ಆಕಾಶವಾಣಿಯಲ್ಲಿ ಕೇಳುತ್ತಿದೆ. ನೀವು ನಮ್ಮನ್ನು ಬಂದು ಭೇಟಿ ಆಗುವುದು ಇನ್ನು ಐದು ವರ್ಷದ ನಂತರ ಇದ್ದೇ ಇದೆ ಅಂತ ನಾವು ಸುಮ್ಮನೆ ಇದ್ದು ಬಿಡುತ್ತೇವೆ. ನೀವು ನಮ್ಮ ಊರನ್ನು ಉದ್ಧಾರ ಮಾಡ್ತೀರಿ ಅಂತ ಆಶ್ವಾಸನೆ ನೀಡಿದ್ದರೂ ಸಹಿತ ಮಾಡಿಲ್ಲ. ನಿಮ್ಮ ಊರಿನ ಮೇಲೆ ನಿಮಗೆ ಎಷ್ಟು ಪ್ರೀತಿ ಎಂದರೆ ನಿಮ್ಮ ಬಾಲ್ಯದಾಗ ನೀವು ಬಿಟ್ಟು ಹೋದಾಗ ಅದು ಹೆಂಗ ಇತ್ತೋ ಹಾಂಗೆ ಇರಬೇಕು ಅಂತ ನೀವು ಏನೂ ಬದಲಾವಣೆ ಮಾಡಿಲ್ಲ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ. ಇರಲಿ.

ಇದು ಎಲ್ಲಾ ಹೆಂಗ ಐತಿ ಅಂದರ, ಜಗಜಿತ್ ಸಿಂಗ್ ಅವರ ಗಜಲ್‌ನ ಸಾಲಿನ ಹಂಗ ಐತಿ.

“ಈ ವರ್ಷ ಬಹಳ ಮಳೆ ಆಗ್ತದ, ಬೆಳೆ ಬರ್ತದ, ಎಲ್ಲಾ ಛಲೋ ಆಗ್ತೆತಿ,

ಹಿಂಗ ಆಗ್ತದೋ, ಇಲ್ಲೋ, ಗೊತ್ತಿಲ್ಲ,

ಆದರ ಹಿಂಗ ಆಗ್ತದ ಅನ್ನುವ ಕನಸು ಮಾತ್ರ ಭಾರಿ ಛಲೋ ಐತಿ”.

ಇದೆಲ್ಲಾ ಐತಿ. ಇರಲಿ, ಆದರೂ ಉಭಯ ಕುಶಲೋಪರಿ ಸಾಂಪ್ರತ. ಇನ್ನು ನಮ್ಮ ಊರಿನವರ ಕಡೆಯಿಂದ ನಿಮಗೆ ಒಂದು ಮೂಕ ಅರ್ಜಿ.

ಮೆಹರ್‌ಬಾನ್ ಸಾಹೇಬರೇ,

ರಾಜ್ಯ ಸರಕಾರ ನೇಮಿಸಿದ ವಿಜಯ ಭಾಸ್ಕರ ಸಮಿತಿ ಆಡಳಿತ ಸುಧಾರಣೆ ಬಗ್ಗೆ ಕೆಲವು ಶಿಫಾರಸುಗಳನ್ನು ಮಾಡಿದೆ. ಮೊದಲ ಹಂತದಲ್ಲಿ ಕಂದಾಯ, ಆಹಾರ ಹಾಗೂ ರಸ್ತೆ ಸಾರಿಗೆ ಇಲಾಖೆಗಳ ಬಗ್ಗೆ ಸಲಹೆಗಳನ್ನು ನೀಡಿದೆ. ಇವುಗಳಲ್ಲಿ ಕೆಲವು ಜನಪರ ಸಲಹೆಗಳಾಗಿದ್ದು ಅವುಗಳನ್ನು ನಾವು ಸ್ವಾಗತ ಮಾಡುತ್ತೇವೆ. ಇನ್ನು ಕೆಲವು ವಿಷಯಗಳನ್ನು ನಾವು ಸಕಾರಣವಾಗಿ ವಿರೋಧಿಸುತ್ತೇವೆ.

ಅವುಗಳು ಇಂತಿವೆ:

ಸರಕಾರದ 800ಕ್ಕೂ ಹೆಚ್ಚು ಸೇವೆಗಳನ್ನು ಸೇವಾಸಿಂಧು ಎನ್ನುವ ಒಂದೇ ಜಾಲತಾಣ ಹಾಗೂ ತಂತ್ರಾಂಶದ ಮೂಲಕ ನೀಡುವುದು ಸ್ವಾಗತಾರ್ಹ. ಈ ಸೇವೆಗಳನ್ನು ಜನರಿಗೆ ದೊರಕಿಸಲು ನಗರಗಳಲ್ಲಿ ಕರ್ನಾಟಕ-ಒನ್ ಹಾಗೂ ಅಟಲ್‌ಜಿ ಜನಸ್ನೇಹಿ ಕೇಂದ್ರ ಹಾಗೂ ಹಳ್ಳಿಗಳಲ್ಲಿ ಗ್ರಾಮ ಪಂಚಾಯತ್ ಬಾಪೂಜಿ ಸೇವಾ ಕೇಂದ್ರಗಳನ್ನು ಏಕ ಗವಾಕ್ಷಿಗಳಾಗಿ ಬಳಸುವ ಯೋಜನೆ ಸಹಿತ ಸ್ವಾಗತಾರ್ಹ. ಇದರಿಂದ ಜನ ಅನೇಕ ಕಚೇರಿಗಳಿಗೆ ಅನಗತ್ಯವಾಗಿ ಎಡತಾಕುವುದು ತಪ್ಪುತ್ತದೆ.

PC : mandya.nic.in

ಆಹಾರ ಧಾನ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಸಹಿತ ಬಹಳ ಅನುಕೂಲಕರವಾದದು. ಆದರೆ ಇದಕ್ಕಾಗಿ ಜನರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವುದು ಒಳ್ಳೆಯದಲ್ಲ. ಇದರಿಂದ ಬಡವರ ಹೊಟ್ಟೆಯ ಮೇಲೆ ಹೊಡೆದಂತೆ ಆಗುತ್ತದೆ. ಇದರ ಇನ್ನೊಂದು ಅಪಾಯಕಾರಿ ಸಾಧ್ಯತೆ ಏನು ಎಂದರೆ, ಈ ರೀತಿಯ ನಿಯಮ ಜಾರಿಗೆ ಬಂದರೆ, ಹಳ್ಳಿಗಳಲ್ಲಿ ಮನೆಗೆ ಆಹಾರ ಧಾನ್ಯ ತಂದು ಕೊಡುವ ಏಜೆಂಟ್‌ಗಳು ಹುಟ್ಟಿಕೊಳ್ಳಬಹುದು. ಆಹಾರ ಧಾನ್ಯಗಳನ್ನು ಮನೆಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಆರಂಭವಾದರೆ ಸರಕಾರಕ್ಕೆ ವಿವಿಧ ಮಟ್ಟದ ಮಧ್ಯವರ್ತಿಗಳ ಲಾಭ ಹಾಗೂ ಅವರ ಕಮಿಷನ್ ಹಣದ ಹಣ ಉಳಿತಾಯವಾಗುತ್ತದೆ. ಇದೆ ಹಣವನ್ನು ಮನೆ ಬಾಗಿಲಿಗೆ ತಲುಪಿಸುವ ಖರ್ಚಿಗೆ ಬಳಸಬಹುದು.

ಜನಸಂಖ್ಯೆ, ರಹವಾಸ, ಬೆಲೆ ಹಾಗೂ ರೈತಾಪಿ ಕುಟುಂಬದ ಪ್ರಮಾಣಪತ್ರಗಳು ಅನವಶ್ಯಕ ಎಂದು ಹೇಳಿ ಅವುಗಳನ್ನು ರದ್ದುಮಾಡಬೇಕು ಎನ್ನುವ ಶಿಫಾರಸು ಮಾಡಲಾಗಿದೆ. ಇದನ್ನು ಇನ್ನೊಮ್ಮೆ ಪರಿಶೀಲಿಸಬೇಕು. ಇದನ್ನು ಕೇವಲ ಆಡಳಿತಾತ್ಮಕ ಅನುಕೂಲಕತೆ ದೃಷ್ಟಿಯಿಂದ ನೋಡದೆ, ನಾಳೆ ಜನರಿಗೆ ಈ ಪ್ರಮಾಣ ಪತ್ರಗಳನ್ನು ನ್ಯಾಯಾಲಯಗಳ ಮುಂದೆ ಹಾಜರು ಪಡಿಸಲಿಕ್ಕೆ ಬರಬೇಕಾಗುವುದೋ ಬೇಡವೋ ಅನ್ನುವುದನ್ನು ನೋಡಿ ನಿರ್ಧಾರ ಮಾಡಬೇಕು. ಹಾಗೆ ರದ್ದುಮಾಡುವುದೇ ಆದಲ್ಲಿ, ಅವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡ ಬಳಿಕವಷ್ಟೇ ರದ್ದುಮಾಡಬೇಕು.

ರಸ್ತೆ ಸಾರಿಗೆ ಅಧಿಕಾರಿಗಳು ಜಫ್ತಿ ಮಾಡಿದ ವಾಹನಗಳನ್ನು ಮಾರಾಟ ಮಾಡಲು ನ್ಯಾಯಾಲಯದ ಅನುಮತಿಗೆ ಕಾಯುವುದು ಬೇಡ ಎನ್ನುವ ಶಿಫಾರಸು ಇದರಲ್ಲಿ ಇದೆ.

ಇದನ್ನು ಜಾರಿಮಾಡುವ ಮುನ್ನ, ರಸ್ತೆ ಸಾರಿಗೆ ಇಲಾಖೆಯ ವಿವಿಧ ವಿಷಯಗಳಿಗೆ ಅನ್ವಯವಾಗುವಂತೆ, ವಿದ್ಯುತ್ ಪ್ರಾಧಿಕಾರ, ವಿಮೆ ಪ್ರಾಧಿಕಾರ, ಆಹಾರ ಪದಾರ್ಥ ಗುಣಮಟ್ಟ ನಿಯಂತ್ರಣ ಪ್ರಾಧಿಕಾರದ
ಮಾದರಿಯಲ್ಲಿ ಸಾರಿಗೆ ಪ್ರಾಧಿಕಾರ ಸ್ಥಾಪಿಸಬೇಕು.

ಈ ಸಮಿತಿಯ ಅತಿ ಮುಖ್ಯ ಶಿಫಾರಸು ಎಂದರೆ ಪ್ರಾದೇಶಿಕ ಆಯುಕ್ತರ ಕಚೆರಿಗಳನ್ನು ರದ್ದು ಮಾಡುವುದು. ಇದನ್ನು ನಾವು ವಿರೋಧಿಸುತ್ತೇವೆ. ಇದು ಅತ್ಯಂತ ಅಪಾಯಕಾರಿ. ಇದು ಭಾರತದ ಸಂವಿಧಾನದ ಮೂಲ ತತ್ವವಾದ ವಿಕೇಂದ್ರೀಕರಣ ವಿರೋಧಿ ಬೆಳವಣಿಗೆ. ಇದು ರಾಜ್ಯದ ಜನರಿಗಾಗಲಿ, ಅಭಿವೃದ್ಧಿ-ಸುಶಾಸನಕ್ಕಾಗಲಿ ಅನುಕೂಲಕರವಾದದ್ದಲ್ಲ. ಕೆಲವು ಜನ ಹಿರಿಯ ಐಎಎಸ್ ಅಧಿಕಾರಿಗಳು ಬೆಂಗಳೂರು ಬಿಟ್ಟುಹೋಗಲು ಮನಸು ಮಾಡುವುದಿಲ್ಲ ಎನ್ನುವ ಕಾರಣಕ್ಕೆ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದು ಮಾಡುವುದು ಸಾಧುವಲ್ಲ.

ರಾಜ್ಯದ 350 ಐಎಎಸ್ ಅಧಿಕಾರಿಗಳಲ್ಲಿ 60 ಜನ ಮಾತ್ರ ಬೆಂಗಾವಲು ಊರು ಬಿಟ್ಟು ಹೊರಗೆ ಇದ್ದಾರೆ. ಅವರಲ್ಲಿ ಮೂರು ಜನ ಪ್ರಾದೇಶಿಕ ಆಯುಕ್ತರು ಮಾತ್ರ ವಿಭಾಗ ಮಟ್ಟದಲ್ಲಿ ಇದ್ದಾರೆ. ಆ ಮೂರು ಹುದ್ದೆಗಳ ಸಲುವಾಗಿ ನೀವು ಆರು ಕೋಟಿ ಕನ್ನಡಿಗರ ಎದುರು ಕಣ್ಕಟ್ಟು ಆಡಬಾರದು ಎಂದು ನಮ್ಮ ಅಂಬೋಣ.

ನಿಜವಾಗಿ ಬೇಕಾಗಿರುವುದು ಏನು ಎಂದರೆ,

ಅ) ರಾಜ್ಯದಲ್ಲಿ ಈಗ ಇರುವ ನಾಲ್ಕು ಕಂದಾಯ ವಿಭಾಗಗಳನ್ನು ಎಂಟು ವಿಭಾಗಗಳನ್ನಾಗಿ ಮಾಡಬೇಕು. ಪ್ರತಿ ವಿಭಾಗಕ್ಕೆ ಈಗ 7-8 ಜಿಲ್ಲೆಗಳು ಬರುತ್ತವೆ. ಪ್ರತಿ ವಿಭಾಗಕ್ಕೆ 3-4 ಜಿಲ್ಲೆಗಳು ಬರುವಂತೆ ಮಾಡಿ ಮರುಹಂಚಿಕೆ ಮಾಡಬೇಕು.

ಆ) ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ಹಿಂದಿನಂತೆ ವಿಭಾಗೀಯ ಅಧಿಕಾರಿಗಳ ಕಚೇರಿಗಳಾಗಿ ಉನ್ನತೀಕರಣ ಮಾಡಬೇಕು. ಅವರಿಗೆ ಜಿಲ್ಲಾಧಿಕಾರಿಗಳ ಮೇಲೆ ಮೇಲು ಉಸ್ತುವಾರಿ ಹಾಗೂ ಜಿಲ್ಲೆ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ ಹಾಗೂ ಜವಾಬುದಾರಿ ನೀಡಬೇಕು.

ಇ) ಪ್ರಾದೇಶಿಕ ಆಯುಕ್ತರಿಗೆ ಅಭಿವೃದ್ಧಿಯ ಜವಾಬುದಾರಿಯನ್ನು ಸಹಿತ ಕೊಡಬೇಕು. ಅವರಿಗೆ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯತಿ ಹಾಗೂ ನಗರಪಾಲಿಕೆ-ನಗರಸಭೆಗಳು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳ ಮೇಲೆ ವಿಚಕ್ಷಣೆ ಹಾಗೂ ಮೇಲು ಉಸ್ತುವಾರಿ ನಡೆಸುವ ಅಧಿಕಾರ ನೀಡಬೇಕು.

ಈ) ವಿಭಾಗಾಧಿಕಾರಿ ಮಟ್ಟದಲ್ಲಿ ಕಂದಾಯ ನ್ಯಾಯಾಲಯ ಸ್ಥಾಪಿಸಬೇಕು. ಇದರಿಂದ ಜನ ತಮ್ಮ ಕಂದಾಯ ಪ್ರಕರಣಗಳ ಸಲುವಾಗಿ ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ.

ಉ) ವಿಭಾಗಾಧಿಕಾರಿಗಳಿಗೆ ಸಾರ್ವಜನಿಕ ಕುಂದುಕೊರತೆಗಳನ್ನು ಸ್ವೀಕರಿಸುವ ಹಾಗೂ ಅವುಗಳನ್ನು ಪರಿಹರಿಸುವ ಅಧಿಕಾರ ಹಾಗೂ ಜವಾಬುದಾರಿ ಕೊಡಬೇಕು. ಜನಸಾಮಾನ್ಯರು ಜಿಲ್ಲಾ ಮಟ್ಟದ ಯಾವುದೇ ಅಧಿಕಾರಿಗಳ ವಿರುದ್ಧ ದೂರು ಕೊಟ್ಟರೆ ಅವುಗಳ ವಿಚಾರಣೆ ವಿಭಾಗ ಮಟ್ಟದಲ್ಲಿ ನಡೆಯಬೇಕು.

ಊ) ವಿಭಾಗಾಧಿಕಾರಿಗಳನ್ನು ಸಕಾಲ ಯೋಜನೆಯ ನಿಯಂತ್ರಣ ಪ್ರಾಧಿಕಾರಿಯನ್ನಾಗಿ ಮಾಡಬೇಕು. ಸಕಾಲ ಯೋಜನೆಯಲ್ಲಿನ ಕೆಲಸಗಳು ಸರಿಯಾದ ಸಮಯಕ್ಕೆ ಆಗದೆ ಹೋದರೆ, ಆ ಕಾಲಹರಣದ ಬಗ್ಗೆ ತನಿಖೆ ನಡೆಸುವ ಅಧಿಕಾರ ಕೊಡಬೇಕು.

ಎ) ಈ ಎಲ್ಲಾ ಜವಾಬುದಾರಿಗಳನ್ನು ಸರಿಯಾಗಿ ನಿರ್ವಹಿಸಲು ವಿಭಾಗಾಧಿಕಾರಿಗಳಿಗೆ ಸೂಕ್ತ ಸಿಬ್ಬಂದಿಗಳನ್ನು ನೀಡಬೇಕು. ಅವರ ಕಚೇರಿಗೆ ಪ್ರಮುಖ ಇಲಾಖೆಗಳ ಜಂಟಿ ನಿರ್ದೇಶಕರ ಮಟ್ಟದ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು. ಜಿಲ್ಲೆ ಹಾಗೂ ಪ್ರದೇಶ ಮಟ್ಟದ ಯಾವುದೇ ಕೆಲಸಗಳು ಆಯಾ ಜಿಲ್ಲೆ ಹಾಗೂ ಪ್ರದೇಶ ಮಟ್ಟದಲ್ಲಿ ಆಗಬೇಕು. ಇಂತಹ ಎಲ್ಲಾ ಕೆಲಸಗಳಿಗೆ ಜನರು ಬೆಂಗಳೂರಿಗೆ ಅಲೆದಾಡುವ ಅನಿವಾರ್ಯತೆಯನ್ನು ತಪ್ಪಿಸಬೇಕು.

ನಮ್ಮ ಸಲಹೆಗಳನ್ನು ಪರಿಗಣಿಸಬೇಕು, ನೀವು ಮುಂದಿನ ಬಾರಿ ಬರುವಾಗ ಇದನ್ನು ಮರೆಯಬಾರದು ಎಂದು ನಮ್ಮ ಎಲ್ಲಾ ಬಡಪಾಯಿಗಳ ಕೋರಿಕೆ.


ಇದನ್ನೂ ಓದಿ: ಸುದ್ದಿಯೇನೇ ಮನೋಲ್ಲಾಸಿನಿ; ಮಾಧ್ಯಮ ನಲ್ಲರು – ರಾಜಧಾನಿ ಎಂಬ ಮಾಯಾಮೋಹಿನಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...