Homeಚಳವಳಿಮಾಂಟೋನ ಈ ಕಥೆಗಳನ್ನು ಓದಿದರೆ, ನೀವು ಬೆಚ್ಚುತ್ತೀರಿ. ಓದಿ ನೋಡಿ

ಮಾಂಟೋನ ಈ ಕಥೆಗಳನ್ನು ಓದಿದರೆ, ನೀವು ಬೆಚ್ಚುತ್ತೀರಿ. ಓದಿ ನೋಡಿ

ಇವತ್ತು ವಿಭಜನೆ ಸೃಷ್ಟಿಸಿದ ವಿಲಕ್ಷಣ ಕಥೆಗಾರ ಹಸನ್ ಸಾದತ್ ಮಾಂಟೋ ಜನ್ಮದಿನ.

- Advertisement -
- Advertisement -

| ಪುನೀತ್ ಅಪ್ಪು |

ಇವತ್ತು ವಿಭಜನೆ ಸೃಷ್ಟಿಸಿದ ವಿಲಕ್ಷಣ ಕಥೆಗಾರ ಹಸನ್ ಸಾದತ್ ಮಾಂಟೋ ಜನ್ಮದಿನ. ದೇಶ ವಿಭಜನೆಯ ಆಘಾತವನ್ನು ತಡೆದುಕೊಳ್ಳಲಾರದೆ ಕೊನೆಯ ಕ್ಷಣದವರೆಗೂ ಭಾರತ ಮತ್ತು ಪಾಕಿಸ್ಥಾನದ ಬಡ, ದಮನಿತ ಮತ್ತು ನಿಕೃಷ್ಟ ಜನರಿಗೋಸ್ಕರ ಮರುಗಿದ, ಭಾರತದ ಕನವರಿಕೆಯಲ್ಲಿಯೇ ಪ್ರಾಣ ತ್ಯಜಿಸಿದ ಮಾಂಟೋ ಬರಿಯ ಕಥೆಗಾರನಲ್ಲ, ಆತನ ಬದುಕೇ ಒಂದು ರೂಪಕ. ಆತನ ಸಾವು ಇನ್ನೂ ವಿಚಿತ್ರ. ಮಾಂಟೋ ಯಾರು ಎಂದು ಯಾರಾದರೂ ಕೇಳಿದರೆ ಮಾಂಟೋ ಅಂದರೆ ಕಳ್ಳಭಟ್ಟಿ ಸಾರಾಯಿ ಎನ್ನಬಯಸುತ್ತೇನೆ. ಮಾಂಟೋನ ಕಥೆಗಳು ಕೂಡಾ ಆ ಸಾರಾಯಿಯಂತೆ ಸುಡುತ್ತಲೇ ಒಳಗಿಳಿಯುತ್ತವೆ. ಆದರೆ ಅದನ್ನು ಮೋಹಿಸಿದವನಿಗೆ ಮಾತ್ರ ಗೊತ್ತು ಅದರ ಮತ್ತು ಮತ್ತು ಗತ್ತು. ಬದುಕಬೇಕೆಂದು ಯಾರೂ ಅದನ್ನು ಕುಡಿಯುವುದಿಲ್ಲ. ಇದು ಸತ್ತವರ ಕಥೆ. ಬದುಕಿದವರು ಕಥೆಯಾಗುವುದಿಲ್ಲ. ನಾನು ಕುಡಿದರೂ ಸಾಯುತ್ತೇನೆ, ಕುಡಿಯದಿದ್ದರೂ ಸಾಯುತ್ತೇನೆ, ಅಮೇರಿಕಾದಿಂದ ಆಮದಾಗುವ ಈ ಗೋದಿಯ ಬೆಲೆ ನೋಡಿದರೆ ಮಾನ ಮರ್ಯಾದೆ ಇಲ್ಲದವರು ಮಾತ್ರ ಬದುಕಲು ಸಾಧ್ಯ ಎಂದಿದ್ದ ಮಾಂಟೋ.

ಸಾದತ್ ಹಸನ್ ಮಾಂಟೋ

ಮಾಂಟೋನ ಕೆಲವು ಸಣ್ಣ ಸಾಲುಗಳನ್ನು ಇಲ್ಲಿ ಕೊಟ್ಟಿರುವೆ.

1. ಶಾಶ್ವತ ರಜೆ.

.ಗಲಭೆಕೋರರ ಒಂದು ಗುಂಪು ಗಣಿಯತ್ತ ತೆರಳಿತು. ಸಿಕ್ಕಿ ಸಿಕ್ಕಿದವರನ್ನು ಹೊಡೆದು ಸಾಯಿಸ ತೊಡಗಿತು. ಒಬ್ಬ ಕಾರ್ಮಿಕ ಕೂಗಿಕೊಂಡ, ” ಅಯ್ಯೋ ನನ್ನ ಕೊಲ್ಲಬೇಡಿ, ನಾನು ರಜೆಯಲ್ಲಿ ಊರಿಗೆ ತೆರಳುತಿರುವೆ”.

2. ಪಠಾಣಿಸ್ತಾನ್

ಗಲಭೆಕೋರರ ತಂಡ ಒಬ್ಬನನ್ನು ತಡೆದು ನಿಲ್ಲಿಸಿತು.
“ಏಯ್ ಯಾರು ನೀನು ಇಂದೂವ ಅಥವಾ ಮುಸ್ಲಮೀನಾ”?
ವ್ಯಕ್ತಿ : ” ಹ್ಞಾಂ ಹ್ಞಾ.. ಮುಸ್ಲಮೀನ್ ಮುಸ್ಲಮೀನ್”
ತಂಡ : “ಓಹೋ ಹಾಗಾದರೆ ನಿನ್ನ ಪ್ರವಾದಿ ಯಾರು ಹೇಳು ನೋಡೋಣ”.
ವ್ಯಕ್ತಿ: “ಹ್ಞಾಂ? …. ಮಹಮ್ಮದ್ ಖಾನ್”
ತಂಡ : ” ಸರಿ, ಈತನನ್ನು ಬಿಟ್ಟು ಬಿಡೋಣ”.

3. ರೇಡಿಯೋ ವಾರ್ತೆ:

” ಪಂಜಾಬ್, ಗ್ವಾಲಿಯರ್ ಮತ್ತು ಮುಂಬಯಿಯ ಕೆಲವು ಗಲ್ಲಿಗಳಲ್ಲಿ ಜನರು ಸಿಹಿ ಹಂಚುತ್ತಿದ್ದಾರೆ. ಮಹಾತ್ಮಾ ಗಾಂಧಿಯವರ ಹತ್ಯೆಯಾಗಿದೆ”.

4. ಮೂರ್ಖ.

ಆತನ ಆತ್ಮಹತ್ಯೆಯ ಬಗ್ಗೆ ಆತನ ಸ್ನೇಹಿತ ಹೀಗೆ ಹೇಳಿದ್ದ, ‘ ಎಂತಹಾ ಮೂರ್ಖ! ನಾನು ಅವನಲ್ಲಿ ಹೇಳುತ್ತಲೆ ಇದ್ದೆ, ಆ ಉದ್ದನೆಯ ಗಡ್ಡವನ್ನು ಬೋಳಿಸಿ, ಕೂದಲಿಗೆ ಕತ್ತರಿ ಹಾಕಿದ ಕೂಡಲೇ ಆತನೇನು ಧರ್ಮಭ್ರಷ್ಟನಾಗೋದಿಲ್ಲ. ನಮ್ಮ ಸಚ್ಚೇ ಗುರುವಿಗೆ ಶರಣಾಗಿ ಆತನ ಅನುಗ್ರಹವಿದ್ದರೆ ಆತ ತನ್ನ ಮೊದಲ ಸ್ವರೂಪಕ್ಕೆ ಬದಲಾಗಿ ಬಿಡುತ್ತಿದ್ದ’.

5. ಧೃಡತೆ.

‘ಯಾವ ಕಾರಣಕ್ಕೂ ನಾನು ಸಿಖ್ ಆಗಿ ಮತಾಂತರವಾಗಲಾರೆ, ಮರ್ಯಾದೆಯಿಂದ ನನ್ನ ಕ್ಷೌರಕತ್ತಿ ವಾಪಾಸ್ ಕೊಡಿ’

5. ಮಾನವೀಯತೆ.

‘ ಅಯ್ಯೋ ದಯವಿಟ್ಟು ನನ್ನ ಮಗಳನ್ನು ನನ್ನ ಕಣ್ಣೆದುರಿನಲ್ಲೇ ಕೊಲ್ಲದಿರಿ’.
‘ಸರಿ, ಸರಿ, ಆಕೆಯ ಬಟ್ಟೆ ಬಿಚ್ಚಿ ಓಡಿಸಿ’.

6. ದೇವರು ದೊಡ್ಡವನು !

ಆ ಸಂಜೆ ಕೊನೆಗೂ ಮುಗಿಯಿತು ಮತ್ತು ಆ ಮುಜ್ರಾ ನರ್ತಕಿಯ ಗಿರಾಕಿಗಳು ಒಬ್ಬೊಬ್ಬರೇ ಮನೆಗೆ ತೆರಳಿದರು.

ಮುಜ್ರಾವನ್ನು ವ್ಯವಸ್ಥೆ ಮಾಡಿದ್ದ ಮುದುಕ ನಿಟ್ಟುಸಿರುಬಿಟ್ಟ, ‘ ಆ ದೇಶದಲ್ಲಿ ಎಲ್ಲವನ್ನೂ ಕಳೆದುಕೊಂಡು ಇಲ್ಲಿಗೆ ಬಂದೆವು, ಆದರೂ ಅಲ್ಲಾಹ್ ಕೈ ಬಿಡಲಿಲ್ಲ. ಕೆಲವೇ ದಿನಗಳಲ್ಲಿ ನಮಗೆ ಒಳ್ಳೆಯ ದಿನಗಳು ಲಭಿಸಿದವು’.

7.ವಿಶ್ರಾಂತಿ.

‘ನೋಡು ಅವನಿನ್ನೂ ಸತ್ತಿಲ್ಲ. ಜೀವ ಇದ್ದ ಹಾಗೆ ಕಾಣ್ತಾ ಇದೆ’.
‘ ಏಯ್ ಇರ್ಲಿ ಬಿಡೊ, ನನಗೂ ಕೈ ನೋಯ್ರಾ ಇದೆ’.

8. ನ್ಯಾಯ.

‘ನೋಡು ಇದು ಅನ್ಯಾಯ. ಕಾಳಸಂತೆ ಬೆಲೆಯಲ್ಲಿ ಕಳಪೆ ಪೆಟ್ರೋಲ್ ಮಾರಾಟ ಮಾಡಿದ್ದೀಯ ನೀನು, ಒಂದೇ ಒಂದು ಅಂಗಡಿಯನ್ನು ಸುಡೋಕಾಗಿಲ್ಲ’.

9. ಅದೃಷ್ಟ.

‘ಏನ್ ದುರಾದೃಷ್ಟ ನೋಡೋ ನಂದು, ಅಷ್ಟೆಲ್ಲಾ ಕಷ್ಟಪಟ್ಟು ನನಗೆ ಸಿಕ್ಕಿದ್ದು ಈ ಒಂದು ಪೆಟ್ಟಿಗೆ ಮಾತ್ರ…. ಅದರಲ್ಲಿ ಕೂಡಾ ಸಿಕ್ಕಿದ್ದು ಹಂದಿ ಮಾಂಸ’.

10. ಕೇಳೋರೇ ಇಲ್ಲ

‘ಎಂತಹಾ ದರಿದ್ರ ಜನಗಳಪ್ಪಾ ಇವ್ರು, ಮಸೀದಿಯೊಳಗೆ ಬಿಸಾಡೋಕೆ ಅಂತ ಕಷ್ಟ ಪಟ್ಟು ಒಂದೈವತ್ತು ಹಂದಿಗಳನ್ನು ಕಡ್ದು ಕಾಯ್ತಾ ಇದ್ದೀನಿ, ಒಂದೇ ಒಂದು ಗಿರಾಕಿ ಸಿಗ್ತಾ ಇಲ್ಲ, ಗಡಿಯಾಚೆ ನೋಡು, ಅಲ್ಲಿನ ಜನ ದನದ ಮಾಂಸಕ್ಕೊಸ್ಕರ ಕ್ಯೂ ನಿಂತಿದ್ದಾರೆ, ಇಲ್ಲಿ ಹಂದಿ ಮಾಂಸನ ಕೇಳೋರೇ ಇಲ್ಲ’.

11. ತಪ್ಪನ್ನು ತಿದ್ದಲಾಯಿತು.

‘ಯಾರಯ್ಯ ನೀನು’

‘ಹರ್ ಹರ್ ಮಹಾದೇವ್, ಹರ್ ಹರ್ ಮಹದೇವ್, ಹರ್ ಹರ್ ಮಹಾದೇವ್’!
‘ನೀನು ಅದೇ ಎಂದು ಹೇಳೋದಕ್ಕೆ ಸಾಕ್ಷಿ ಏನಿದೆ’
‘ನನ್ನ ಹೆಸರು ಧರಮ್ ಚಂದ್’
‘ಅದು ಸಾಕ್ಷಿಯಾಗೋದಿಲ್ಲ’
‘ಸರಿ ಸರಿ, ನನಗೆ ನಾಲಕ್ಕು ವೇದಗಳೂ ಬಾಯಿಪಾಠ ಬರುತ್ತವೆ, ಬೇಕಿದ್ದರೆ ಪರೀಕ್ಷಿಸಿ’
‘ನಮಗೆ ವೇದ ಗೀದ ಎಲ್ಲಾ ಬರೋದಿಲ್ಲ, ಸಾಕ್ಷಿ ಕೊಡು’
‘ಏನೂ?!’
‘ನಿನ್ನ ಪೈಜಾಮ ಕೆಳಗೆ ಮಾಡು’
ಆತ ತನ್ನ ಪೈಜಾಮ ಕೆಳಗೆ ಜಾರಿಸಿದ ತಕ್ಷಣ ಅಲ್ಲೊಂದು ಬೊಬ್ಬೆ ಕೇಳಿಸಿತು,’ಕೊಲ್ಲಿ ಕೊಲ್ಲಿ ಆತನನ್ನು’.
‘ಅಯ್ಯೋ ದಯವಿಟ್ಟು ನಿಲ್ಲಿ, ನಾನು ನಿಮ್ಮ ಸಹೋದರ, ದೇವರಾಣೆಗೂ..’
‘ಹಾಗಾದರೆ ಇದೇನು?’
‘ನಾನು ಹಾದು ಬರಬೇಕಾಗಿದ್ದ ಆ ದಾರಿ ಶತ್ರುಗಳ ನಿಯಂತ್ರಣದಲ್ಲಿತ್ತು, ನಾನು ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು ಅದಿಕ್ಕೆ ಇದೊಂದೇ ತಪ್ಪು ನಾನು ಮಾಡಿದ್ದು ನಮ್ಮ ಜೀವ ಉಳಿಸುವುದಕ್ಕೋಸ್ಕರ, ಮತ್ತೆಲ್ಲವೂ ಸರಿ ಇದೆ, ಇದೊಂದೇ ತಪ್ಪು ನಾನು ಮಾಡಿದ್ದು’.
‘ಸರಿ, ತಪ್ಪನ್ನು ತಿದ್ದಿ ಬಿಡಿ’.
ಹಾಗೆ, ತಪ್ಪು ನಿವಾರಿಸಲ್ಪಟ್ಟಿತು, ಜೊತೆಗೆ ಧರಮ್ ಚಂದನು ಕೂಡಾ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...