Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ-3: ಶಂಖದ ಹುಳುವಿನ ಮಾಮೇರಿ ಸೈನ್ಯದ ಬಗ್ಗೆ ನಿಮಗೆ ಗೊತ್ತೆ?

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-3: ಶಂಖದ ಹುಳುವಿನ ಮಾಮೇರಿ ಸೈನ್ಯದ ಬಗ್ಗೆ ನಿಮಗೆ ಗೊತ್ತೆ?

- Advertisement -
- Advertisement -

ಮಾರ್ಚ್‌ ಏಪ್ರಿಲ್‌ ತಿಂಗಳಲ್ಲಿ ನಿಮಗೆ ನಮ್ಮ ತೋಟದಲ್ಲಿ ಹುಡುಕಿದರೂ ಒಂದು ಶಂಖದ ಹುಳು ಸಿಕ್ಕುವುದಿಲ್ಲ. ಅವು ಇದ್ದ ಕುರುಹಾಗಿ ಅಲ್ಲಿ ಇಲ್ಲಿ ಬಿದ್ದ ಅವುಗಳ ಚಿಪ್ಪುಗಳು ಸಿಕ್ಕಿದರೆ ಸಿಕ್ಕಬಹುದು ಅಷ್ಟೆ.

ಜೂನ್‌ ಜುಲೈ ಹೊತ್ತಿಗೆ ಅಲ್ಲೊಂದು ಇಲ್ಲೊಂದು ಬೀಜರೂಪವಾಗಿ ಕಾಣಿಸಿಕೊಳ್ಳುತ್ತವೆ. ಹಿಂಗಾರು ಮಳೆ ಆರಂಭವಾಗಿ ನೆಲ ತೇವಗೊಂಡು ಜೀವ ಸಂಚಾರದ ವೇಗ ಹೆಚ್ಚುತ್ತದೆ. ಆಗಸ್ಟ್‌ ಸೆಪ್ಟೆಂಬರ್‌ ಹೊತ್ತಿಗೆ ಎಲ್ಲಿ ಕಾಲಿಟ್ಟರೂ ಈ ಶಂಖದ ಹುಳುವಿನ ಮೇಲೆ ಇಡಬೇಕಾಗುತ್ತದೆ. ಈಗ್ಗೆ ಹತ್ತು ವರ್ಷಗಳ ಹಿಂದೆ ಹೀಗಿರಲಿಲ್ಲ. ಆಗ ಅವು ತುಂಬಾ ವಿರಳವಾಗಿದ್ದವು. ಅವು ಎಲ್ಲಿದ್ದವೋ ಏನೋ ಗೊತ್ತಿಲ್ಲ, ವರ್ಷಗಳೆರಡು ಕಳೆದಂತೆ ಅವುಗಳ ಸಂಖ್ಯೆ ಲಕ್ಷದ ಲೆಕ್ಕದಲ್ಲಿ ಹೆಚ್ಚಿದವು. ಈಗ ಪ್ರತಿ ವರ್ಷ ಸೆಪ್ಟೆಂಬರ್‌, ಶಂಖದ ಹುಳುವಿನ ತಿಂಗಳಾಗಿ ಪರಿವರ್ತನೆಯಾಗಿದೆ. ಆಗಸ್ಟ್‌ ತಿಂಗಳಲ್ಲಿ ನಿಮಗೆ ಒಂಟಿ ಹುಳ ಕಾಣುವುದೇ ಇಲ್ಲ, ಏನಿದ್ದರೂ ಜಂಟಿ ಹುಳುಗಳೇ. ನಂತರದ ಒಂದು ತಿಂಗಳ ಅವಧಿಯಲ್ಲಿ ಎಲ್ಲಿ ನೋಡಿದರೂ ಹೆಸರು ಕಾಳು ಗಾತ್ರದ ಹಳದಿ ಮೊಟ್ಟೆಗಳ ಪುಟ್ಟ ಪುಟ್ಟ ರಾಶಿಗಳನ್ನು ನೋಡಬಹುದು. ಇವು ಸುಮಾರು ಮುವತ್ತರಿಂದ ನಲವತ್ತು ಮೊಟ್ಟೆಗಳನ್ನು ಇಡುತ್ತವೆ. ಯಾವ ಪ್ರತಿರೋಧದ ದರಕಾರವೂ ಇಲ್ಲದೆ ತಾಯಿ ಹುಳುದ ಕಾವೂ ಇಲ್ಲದೆ ಮರಿಯಾಗುತ್ತವೆ. ಆ ಮೊಟ್ಟೆಗಳನ್ನು ಇತರ ಯಾವ ಜೀವಿಗಳೂ ತಿಂದಂತೆ ಕಾಣುವುದಿಲ್ಲ. ಹೀಗಾಗಿ ಅವುಗಳ ಸಂಖ್ಯೆ ಲಕ್ಷ ಲಕ್ಷವಾಗಿ ಹಬ್ಬುತ್ತದೆ. ತೋಟವೆಲ್ಲಾ ಶಂಖದ ಹುಳುಗಳಿಂದ ಅಲಂಕೃತವಾಗುತ್ತದೆ. ಕಾಲಿಟ್ಟ ಕಡೆಯೆಲ್ಲಾ ಮಾರಣಹೋಮವೂ ನಡೆಯುತ್ತಿರುತ್ತದೆ. ನರಿಗ್‌ ನರಿಗ್‌ ಎಂಬ ಶಬ್ಧ ಮಾರ್ದನಸುತ್ತದೆ.

ಶಂಖದ ಹುಳುಗಳು ಕೊಳೆತ ಕಸ ಕಡ್ಡಿ, ತಿಂದು ಜೀವಿಸುತ್ತವೆ. ಅವುಗಳಿಗೆ ಹಸಿರು ಸೊಪ್ಪು ವರ್ಜ್ಯವಲ್ಲ. ಅದಕ್ಕೆ ಹೊಲದ ರೈತರಿಗೆ ಈ ಶಂಖದ ಹುಳು ಆಗಿಬರುವುದಿಲ್ಲ. ಅವು ಹೊಲದಲ್ಲಿನ ಎಳೆ ಬೆಳೆಯನ್ನು ನಗ್ಗುಯ್ಯುತ್ತವೆ, ರೇಷ್ಮೆಹುಳು ಬೇಕು ಇವು ಬೇಡ, ನೆಲಸಮ ಮಾಡಿಬಿಡುತ್ತವೆ. ಅವುಗಳನ್ನು ನಿಯಂತ್ರಿಸಲು ರೈತರು ನಾನಾ ಬಗೆಯ ಕಸರತ್ತು ನಡೆಸುತ್ತಾರೆ. ಆದರೆ ನಮ್ಮಂತಹ ಉಳುಮೆ ಇಲ್ಲದ ತೋಟಗಳು ಅವಕ್ಕೆ ಕ್ಷೇಮಸ್ವರ್ಗ. ಯಾರ ಭಯವೂ ಇಲ್ಲದೇ ನಮ್ಮಲ್ಲಿಗೆ ಬಂದು ಇದ್ದು ಮರಿಮಾಡಿಕೊಂಡು ಬೆಳೆದು ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುವ ಹೊತ್ತಿಗೆ ತಮ್ಮ ಆಟ ಮುಗಿಸಿ ಕಣ್ಮರೆಯಾಗುತ್ತವೆ.

ಆ ಲಕ್ಷ ಲಕ್ಷ ಜೀವಿಗಳು ವಿಸರ್ಜಿಸಿದ ಮಲ ಮೂತ್ರದ ಪಾತ್ರ ಗಿಡಮರಗಳಲ್ಲಿ ಫಲದ ರೂಪದಲ್ಲಿ ಪಲ್ಲವಿಸತೊಡಿಗಿರುತ್ತದೆ. ಅಷ್ಟೇ ಅಲ್ಲದೆ ಅವು ತಮ್ಮನ್ನು ತಾವು ಇಲ್ಲಿಯೆ ವಿಸರ್ಜಿಸಿಕೊಳ್ಳುವ ಕಾರಣ ಅವು ಋಣಮುಕ್ತವಾಗುತ್ತವೆ.

ತೋಟಕ್ಕೆ ಬಂದವರು ಹೇಳುತ್ತಾರೆ “ನಿಮ್ಮ ತೋಟ ಚೆನ್ನಾಗಿದೆ”. ಅವರು ಮುಂದುವರಿಸುತ್ತಾರೆ, ನಿಮ್ಮ ತೋಟದಲ್ಲಿ ಶಂಖದ ಹುಳುಗಳು ಅತಿಯಾಗಿವೆ. ಎರಡೂ ನಿಜವೇ. ಅವು ಅತಿಯಾಗಿರಲು ಅವಕ್ಕೆ ಇಲ್ಲಿ ತಾಣವಿದೆ, ಆಹಾರವಿದೆ, ಅವಕ್ಕೆ ಗಟ್ಟಿಯಾದ ಚಿಪ್ಪಿನ ಕವಚವಿದೆ.

ಸಾಂಬಾರ್ಗಾಗೆಗಳು ಈ ಶಂಖದ ಹುಳುಗಳನ್ನು ತಿನ್ನುತ್ತವಾದರೂ ಅಷ್ಟು ಇಷ್ಟಪಟ್ಟು ತಿನ್ನುವುದಿಲ್ಲ, ನವಿಲುಗಳು ಏನೂ ಆಹಾರ ಸಿಕ್ಕದಿದ್ದಾಗ ಮಾತ್ರ ಹಾಗೊಂದು ಹೀಗೊಂದು ಈ ಶಂಖದ ಹುಳುಗಳನ್ನು ಸೇವಿಸುವ ಪರಿಪಾಠ ಇಟ್ಟುಕೊಂಡಿವೆ. ಮಿಕ್ಕಂತೆ ಇವುಗಳಿಗೆ ಇನ್ನಾರ ಭಯವೂ ಇರುವಂತಿಲ್ಲ. ನಮ್ಮಲ್ಲಿನ ಕೆಲವು ಜನ ಒಮ್ಮೊಮ್ಮೆ ಐವತ್ತರಿಂದ ನೂರು ಗ್ರಾಮ್‌ ತೂಗುವ ಈ ಶಂಖದ ಹುಳುಗಳನ್ನು ನೋಡಿ ತಿನ್ನುವ ಆಸೆ ವ್ಯಕ್ತಪಡಿಸಿದರೂ ಇನ್ನು ಅದು ಅವರಿಗೆ (ನನ್ನನ್ನೂ ಒಳಗೊಂಡು) ಸಾಧ್ಯವಾಗಿಲ್ಲ.

PC : Freepik

ಏನೇ ಆಗಲಿ ಈ ಶಂಖದ ಹುಳುಗಳ ಬೆಳೆ ನಮ್ಮ ತೋಟಕ್ಕೆ ಬಲು ಒಳ್ಳೆಯದು ಮಾಡಿದೆ. ಇವು ಇಡುವ ಮಿಲಿ ಗ್ರಾಮ್‌ ಲೆಕ್ಕದ ಹಿಕ್ಕೆಗೆ ಬೆಲೆ ಕಟ್ಟಲಾಗದು. ಅದು ತೂಕಕ್ಕಾಗಲಿ ಲೆಕ್ಕಕ್ಕಾಗಲಿ ಸಿಗುವಂತಾದ್ದಲ್ಲ. ಅದು ಅನೂಹ್ಯ, ಆದರೆ ಲೆಕ್ಕ ಮಾಡುವವರಿಗೆ ಒಳ್ಳೆಯ ವಸ್ತು.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ: ಕೋಟಿ ಕೀಟಗಳ ಉಳುಮೆ, ಹುಲ್ಲು ಬೇರಿನ ಮಹಿಮೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಶಂಖದ ಹುಳುಗಳು ಅಡಿಕೆಗೆ ಆಗಿ ಬರುವುದಿಲ್ಲ. ಹಗಲುಹೊತ್ತು ಮರದ ಬುಡ ಸೇರುವ ಅವು ಸಂಜೆಯಾದಂತೆ ಮರ ಏರಿ ಎಳೆಯ ಸಿಂಗಾರದ (ಹೂ ಗೊಂಚಲು) ಬುಡದ ತಿರುಳನ್ನು ತಿಂದು ಇಡೀ ಗೊನೆಯನ್ನು ಹಾಳುಮಾಡುತ್ತವೆ. ಆದ್ರಿಂದ, ಅಡಿಕೆ ತೋಟದಲ್ಲಿ ಅವು ಅನಪೇಕ್ಷಿತ ಅತಿಥಿಗಳು.

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...