Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ-3: ಶಂಖದ ಹುಳುವಿನ ಮಾಮೇರಿ ಸೈನ್ಯದ ಬಗ್ಗೆ ನಿಮಗೆ ಗೊತ್ತೆ?

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-3: ಶಂಖದ ಹುಳುವಿನ ಮಾಮೇರಿ ಸೈನ್ಯದ ಬಗ್ಗೆ ನಿಮಗೆ ಗೊತ್ತೆ?

- Advertisement -
- Advertisement -

ಮಾರ್ಚ್‌ ಏಪ್ರಿಲ್‌ ತಿಂಗಳಲ್ಲಿ ನಿಮಗೆ ನಮ್ಮ ತೋಟದಲ್ಲಿ ಹುಡುಕಿದರೂ ಒಂದು ಶಂಖದ ಹುಳು ಸಿಕ್ಕುವುದಿಲ್ಲ. ಅವು ಇದ್ದ ಕುರುಹಾಗಿ ಅಲ್ಲಿ ಇಲ್ಲಿ ಬಿದ್ದ ಅವುಗಳ ಚಿಪ್ಪುಗಳು ಸಿಕ್ಕಿದರೆ ಸಿಕ್ಕಬಹುದು ಅಷ್ಟೆ.

ಜೂನ್‌ ಜುಲೈ ಹೊತ್ತಿಗೆ ಅಲ್ಲೊಂದು ಇಲ್ಲೊಂದು ಬೀಜರೂಪವಾಗಿ ಕಾಣಿಸಿಕೊಳ್ಳುತ್ತವೆ. ಹಿಂಗಾರು ಮಳೆ ಆರಂಭವಾಗಿ ನೆಲ ತೇವಗೊಂಡು ಜೀವ ಸಂಚಾರದ ವೇಗ ಹೆಚ್ಚುತ್ತದೆ. ಆಗಸ್ಟ್‌ ಸೆಪ್ಟೆಂಬರ್‌ ಹೊತ್ತಿಗೆ ಎಲ್ಲಿ ಕಾಲಿಟ್ಟರೂ ಈ ಶಂಖದ ಹುಳುವಿನ ಮೇಲೆ ಇಡಬೇಕಾಗುತ್ತದೆ. ಈಗ್ಗೆ ಹತ್ತು ವರ್ಷಗಳ ಹಿಂದೆ ಹೀಗಿರಲಿಲ್ಲ. ಆಗ ಅವು ತುಂಬಾ ವಿರಳವಾಗಿದ್ದವು. ಅವು ಎಲ್ಲಿದ್ದವೋ ಏನೋ ಗೊತ್ತಿಲ್ಲ, ವರ್ಷಗಳೆರಡು ಕಳೆದಂತೆ ಅವುಗಳ ಸಂಖ್ಯೆ ಲಕ್ಷದ ಲೆಕ್ಕದಲ್ಲಿ ಹೆಚ್ಚಿದವು. ಈಗ ಪ್ರತಿ ವರ್ಷ ಸೆಪ್ಟೆಂಬರ್‌, ಶಂಖದ ಹುಳುವಿನ ತಿಂಗಳಾಗಿ ಪರಿವರ್ತನೆಯಾಗಿದೆ. ಆಗಸ್ಟ್‌ ತಿಂಗಳಲ್ಲಿ ನಿಮಗೆ ಒಂಟಿ ಹುಳ ಕಾಣುವುದೇ ಇಲ್ಲ, ಏನಿದ್ದರೂ ಜಂಟಿ ಹುಳುಗಳೇ. ನಂತರದ ಒಂದು ತಿಂಗಳ ಅವಧಿಯಲ್ಲಿ ಎಲ್ಲಿ ನೋಡಿದರೂ ಹೆಸರು ಕಾಳು ಗಾತ್ರದ ಹಳದಿ ಮೊಟ್ಟೆಗಳ ಪುಟ್ಟ ಪುಟ್ಟ ರಾಶಿಗಳನ್ನು ನೋಡಬಹುದು. ಇವು ಸುಮಾರು ಮುವತ್ತರಿಂದ ನಲವತ್ತು ಮೊಟ್ಟೆಗಳನ್ನು ಇಡುತ್ತವೆ. ಯಾವ ಪ್ರತಿರೋಧದ ದರಕಾರವೂ ಇಲ್ಲದೆ ತಾಯಿ ಹುಳುದ ಕಾವೂ ಇಲ್ಲದೆ ಮರಿಯಾಗುತ್ತವೆ. ಆ ಮೊಟ್ಟೆಗಳನ್ನು ಇತರ ಯಾವ ಜೀವಿಗಳೂ ತಿಂದಂತೆ ಕಾಣುವುದಿಲ್ಲ. ಹೀಗಾಗಿ ಅವುಗಳ ಸಂಖ್ಯೆ ಲಕ್ಷ ಲಕ್ಷವಾಗಿ ಹಬ್ಬುತ್ತದೆ. ತೋಟವೆಲ್ಲಾ ಶಂಖದ ಹುಳುಗಳಿಂದ ಅಲಂಕೃತವಾಗುತ್ತದೆ. ಕಾಲಿಟ್ಟ ಕಡೆಯೆಲ್ಲಾ ಮಾರಣಹೋಮವೂ ನಡೆಯುತ್ತಿರುತ್ತದೆ. ನರಿಗ್‌ ನರಿಗ್‌ ಎಂಬ ಶಬ್ಧ ಮಾರ್ದನಸುತ್ತದೆ.

ಶಂಖದ ಹುಳುಗಳು ಕೊಳೆತ ಕಸ ಕಡ್ಡಿ, ತಿಂದು ಜೀವಿಸುತ್ತವೆ. ಅವುಗಳಿಗೆ ಹಸಿರು ಸೊಪ್ಪು ವರ್ಜ್ಯವಲ್ಲ. ಅದಕ್ಕೆ ಹೊಲದ ರೈತರಿಗೆ ಈ ಶಂಖದ ಹುಳು ಆಗಿಬರುವುದಿಲ್ಲ. ಅವು ಹೊಲದಲ್ಲಿನ ಎಳೆ ಬೆಳೆಯನ್ನು ನಗ್ಗುಯ್ಯುತ್ತವೆ, ರೇಷ್ಮೆಹುಳು ಬೇಕು ಇವು ಬೇಡ, ನೆಲಸಮ ಮಾಡಿಬಿಡುತ್ತವೆ. ಅವುಗಳನ್ನು ನಿಯಂತ್ರಿಸಲು ರೈತರು ನಾನಾ ಬಗೆಯ ಕಸರತ್ತು ನಡೆಸುತ್ತಾರೆ. ಆದರೆ ನಮ್ಮಂತಹ ಉಳುಮೆ ಇಲ್ಲದ ತೋಟಗಳು ಅವಕ್ಕೆ ಕ್ಷೇಮಸ್ವರ್ಗ. ಯಾರ ಭಯವೂ ಇಲ್ಲದೇ ನಮ್ಮಲ್ಲಿಗೆ ಬಂದು ಇದ್ದು ಮರಿಮಾಡಿಕೊಂಡು ಬೆಳೆದು ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುವ ಹೊತ್ತಿಗೆ ತಮ್ಮ ಆಟ ಮುಗಿಸಿ ಕಣ್ಮರೆಯಾಗುತ್ತವೆ.

ಆ ಲಕ್ಷ ಲಕ್ಷ ಜೀವಿಗಳು ವಿಸರ್ಜಿಸಿದ ಮಲ ಮೂತ್ರದ ಪಾತ್ರ ಗಿಡಮರಗಳಲ್ಲಿ ಫಲದ ರೂಪದಲ್ಲಿ ಪಲ್ಲವಿಸತೊಡಿಗಿರುತ್ತದೆ. ಅಷ್ಟೇ ಅಲ್ಲದೆ ಅವು ತಮ್ಮನ್ನು ತಾವು ಇಲ್ಲಿಯೆ ವಿಸರ್ಜಿಸಿಕೊಳ್ಳುವ ಕಾರಣ ಅವು ಋಣಮುಕ್ತವಾಗುತ್ತವೆ.

ತೋಟಕ್ಕೆ ಬಂದವರು ಹೇಳುತ್ತಾರೆ “ನಿಮ್ಮ ತೋಟ ಚೆನ್ನಾಗಿದೆ”. ಅವರು ಮುಂದುವರಿಸುತ್ತಾರೆ, ನಿಮ್ಮ ತೋಟದಲ್ಲಿ ಶಂಖದ ಹುಳುಗಳು ಅತಿಯಾಗಿವೆ. ಎರಡೂ ನಿಜವೇ. ಅವು ಅತಿಯಾಗಿರಲು ಅವಕ್ಕೆ ಇಲ್ಲಿ ತಾಣವಿದೆ, ಆಹಾರವಿದೆ, ಅವಕ್ಕೆ ಗಟ್ಟಿಯಾದ ಚಿಪ್ಪಿನ ಕವಚವಿದೆ.

ಸಾಂಬಾರ್ಗಾಗೆಗಳು ಈ ಶಂಖದ ಹುಳುಗಳನ್ನು ತಿನ್ನುತ್ತವಾದರೂ ಅಷ್ಟು ಇಷ್ಟಪಟ್ಟು ತಿನ್ನುವುದಿಲ್ಲ, ನವಿಲುಗಳು ಏನೂ ಆಹಾರ ಸಿಕ್ಕದಿದ್ದಾಗ ಮಾತ್ರ ಹಾಗೊಂದು ಹೀಗೊಂದು ಈ ಶಂಖದ ಹುಳುಗಳನ್ನು ಸೇವಿಸುವ ಪರಿಪಾಠ ಇಟ್ಟುಕೊಂಡಿವೆ. ಮಿಕ್ಕಂತೆ ಇವುಗಳಿಗೆ ಇನ್ನಾರ ಭಯವೂ ಇರುವಂತಿಲ್ಲ. ನಮ್ಮಲ್ಲಿನ ಕೆಲವು ಜನ ಒಮ್ಮೊಮ್ಮೆ ಐವತ್ತರಿಂದ ನೂರು ಗ್ರಾಮ್‌ ತೂಗುವ ಈ ಶಂಖದ ಹುಳುಗಳನ್ನು ನೋಡಿ ತಿನ್ನುವ ಆಸೆ ವ್ಯಕ್ತಪಡಿಸಿದರೂ ಇನ್ನು ಅದು ಅವರಿಗೆ (ನನ್ನನ್ನೂ ಒಳಗೊಂಡು) ಸಾಧ್ಯವಾಗಿಲ್ಲ.

PC : Freepik

ಏನೇ ಆಗಲಿ ಈ ಶಂಖದ ಹುಳುಗಳ ಬೆಳೆ ನಮ್ಮ ತೋಟಕ್ಕೆ ಬಲು ಒಳ್ಳೆಯದು ಮಾಡಿದೆ. ಇವು ಇಡುವ ಮಿಲಿ ಗ್ರಾಮ್‌ ಲೆಕ್ಕದ ಹಿಕ್ಕೆಗೆ ಬೆಲೆ ಕಟ್ಟಲಾಗದು. ಅದು ತೂಕಕ್ಕಾಗಲಿ ಲೆಕ್ಕಕ್ಕಾಗಲಿ ಸಿಗುವಂತಾದ್ದಲ್ಲ. ಅದು ಅನೂಹ್ಯ, ಆದರೆ ಲೆಕ್ಕ ಮಾಡುವವರಿಗೆ ಒಳ್ಳೆಯ ವಸ್ತು.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ: ಕೋಟಿ ಕೀಟಗಳ ಉಳುಮೆ, ಹುಲ್ಲು ಬೇರಿನ ಮಹಿಮೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಶಂಖದ ಹುಳುಗಳು ಅಡಿಕೆಗೆ ಆಗಿ ಬರುವುದಿಲ್ಲ. ಹಗಲುಹೊತ್ತು ಮರದ ಬುಡ ಸೇರುವ ಅವು ಸಂಜೆಯಾದಂತೆ ಮರ ಏರಿ ಎಳೆಯ ಸಿಂಗಾರದ (ಹೂ ಗೊಂಚಲು) ಬುಡದ ತಿರುಳನ್ನು ತಿಂದು ಇಡೀ ಗೊನೆಯನ್ನು ಹಾಳುಮಾಡುತ್ತವೆ. ಆದ್ರಿಂದ, ಅಡಿಕೆ ತೋಟದಲ್ಲಿ ಅವು ಅನಪೇಕ್ಷಿತ ಅತಿಥಿಗಳು.

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...