Homeಮುಖಪುಟಬೀದರ್ ಜಿಲ್ಲೆಯ ಮೊದಲ ಕಾದಂಬರಿಕಾರ ಸುಬ್ಬಣ್ಣ

ಬೀದರ್ ಜಿಲ್ಲೆಯ ಮೊದಲ ಕಾದಂಬರಿಕಾರ ಸುಬ್ಬಣ್ಣ

ಕಾದಂಬರಿ ಮನುಷ್ಯನ ಸಾಮಾಜಿಕ ಪಲ್ಲಟ

- Advertisement -
- Advertisement -

| ಭೀಮಾಶಂಕರ ಬಿರಾದಾರ |

ಕಾದಂಬರಿ ಮನುಷ್ಯನ ಸಾಮಾಜಿಕ ಪಲ್ಲಟ ಹಾಗೂ ಸಮಷ್ಟಿಯ ಬದುಕಿನ ವಿಶ್ಲೇಷಣೆಯ ಕಲಾತ್ಮಕ ಬರಹ. ಸಂಕೀರ್ಣವಾದ ಕಥಾ ಸಂವಿಧಾನವೂ ಹಾಗೂ ವಾಸ್ತವಿಕ ಘಟನೆಗಳನ್ನು ಚಿತ್ರಿಸುವ ದೀರ್ಘ ಕಥನ. ಪ್ರಜಾಪ್ರಭುತ್ವದ ಮೌಲ್ಯ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯವು ಕಾದಂಬರಿಯ ಜಾಯಮಾನ. ನಾವೆಲ್‍ಗೆ ಸಂವಾದಿ ರೂಪ ಕನ್ನಡದಲ್ಲಿನ ಕಾದಂಬರಿ. 1899ರಲ್ಲಿ ಪ್ರಕಟಗೊಂಡ ಗುಲ್ವಾಡಿಯವರ ‘ಇಂದಿರಾಬಾಯಿ’ ಕನ್ನಡದ ಮೊದಲ ಸಾಮಾಜಿಕ ಕಾದಂಬರಿ. ಸಾಮ್ರಾಜ್ಯಶಾಹಿ, ವಸಾಹತು ಚಿಂತನೆ, ಇಂಗ್ಲಿಷ್ ಶಿಕ್ಷಣ, ಭಾರತೀಯ ಸಮಾಜದ ಮೇಲೆ ಒಡ್ಡುತ್ತಿರುವ ಆಧುನಿಕತೆ ಎಂಬ ಸಾಂಸ್ಕೃತಿಕ ಮತ್ತು ಬೌದ್ಧಿಕ ಯಜಮಾನ್ಯ, ಮನುಷ್ಯ ಸಂಬಂಧಗಳು ಆಕ್ರಮಿಸಿಕೊಂಡು ವ್ಯವಹಾರವಾಗಿಸಿದ ಜಾಗತೀಕರಣ ಇಂಥ ಅನೇಕ ಆಲೋಚನೆಗಳು ಮತ್ತು ಚಿಂತನೆಗಳು ಕನ್ನಡ ಕಾದಂಬರಿ ಪರಂಪರೆ ಒಂದು ಶತಮಾನಕ್ಕೂ ಹೆಚ್ಚುಕಾಲ ನಿರಂತರವಾಗಿ ಕಟ್ಟುತ್ತ ಬಂದಿದೆ. ಬೀದರ ಜಿಲ್ಲೆಯಲ್ಲಿ ಕಾದಂಬರಿ ಪ್ರಕಾರ ಸೃಷ್ಟಿಯಾದದ್ದು 1973ರಲ್ಲಿ. `ಸಿಂದಿ ಬನದಲ್ಲಿ ಸಿಕ್ಕವಳು’ ಕಾದಂಬರಿ ಬರೆಯುವ ಮೂಲಕ ಸುಬ್ಬಣ್ಣ ಅಂಬೆಸಂಗೆ ಜಿಲ್ಲೆಯ ಮೊದಲ ಕಾದಂಬರಿಕಾರರಾಗಿದ್ದಾರೆ. ಎಮ್.ಜಿ. ದೇಶಪಾಂಡೆ, ಯಶೋದಮ್ಮ ಸಿದ್ದಬಟ್ಟೆ, ಸುನಿತಾ ಬಿರಾದಾರ, ಗಣಪತಿ ಭೂರೆ, ಡಾ. ಜಯದೇವಿ ಗಾಯಕವಾಡ ಹೀಗೆ ಕೆಲವರು ಮಾತ್ರ ಜಿಲ್ಲೆಯಲ್ಲಿ ಕಾದಂಬರಿ ವಿನ್ಯಾಸ ಕಟ್ಟಿದ್ದಾರೆ. ಸುಬ್ಬಣ್ಣ ಅಂಬೆಸಂಗೆಯವರು ಸೃಜನಶೀಲ ಬರಹಗಾರರಾಗಿ ಕಾದಂಬರಿ, ಕಥೆ ಬರೆದಂತೆ ಭಾಷಾ ಚಿಂತಕರಾಗಿಯೂ ಗಮನ ಸೆಳೆಯುತ್ತಾರೆ.

ಭಾಲ್ಕಿ ತಾಲೂಕಿನ ಎಕಲಾಸಪೂರದ ಸುಬ್ಬಣ್ಣನವರು 1950 ಜೂನ್ 15ರಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿ, ಪ್ರೌಢಶಾಲಾ ಶಿಕ್ಷಕರಾಗಿ, ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸದ್ಯ ಬೇಸಾಯದಲ್ಲಿ ತೊಡಗಿದ್ದಾರೆ. ಸುಬ್ಬಣ್ಣನವರ ‘ಸಿಂದಿಬನದಲ್ಲಿ ಸಿಕ್ಕವಳು’ ಕಾದಂಬರಿ ಸ್ತ್ರೀ ಕೇಂದ್ರೀತ ದುರಂತ ವಸ್ತುವನ್ನೊಳಗೊಂಡಿದೆ. ಕಥನ ವಿನ್ಯಾಸ ಸರಳವಾಗಿದ್ದರೂ ಒಂದು ಕಾಲದ ಸಾಮಾಜಿಕ ಮತ್ತು ಚಾರಿತ್ರಿಕ ಸಂದರ್ಭವನ್ನು ನೆನಪಿಸುತ್ತದೆ. ಕಾದಂಬರಿಗಳು ಭೂತ ಮತ್ತು ವರ್ತಮಾನಗಳೆರಡನ್ನು ತನ್ನ ಒಡಲೊಳಗಿಟ್ಟಿಕೊಂಡು ಭವಿಷ್ಯದ ಮರುವಿಶ್ಲೇಷಣೆಗೆ ಎಡೆಮಾಡಿಕೊಡುತ್ತವೆ. ಈ ಪ್ರದೇಶದ ಪ್ರಕ್ಷುಬ್ಧ ಕಾಲವೊಂದರ ಕ್ರೂರ ಸಂಗತಿಗಳನ್ನೂ ಇವರ ಕಾದಂಬರಿ ಕಥನಿಸುತ್ತದೆ. ಜತೆಗೆ ಧಾರ್ಮಿಕ ಮೂಲಭೂತವಾದಿತನ, ಪ್ರಭುತ್ವದ ಹಪಾಹಪಿತನ, ಸ್ತ್ರೀ ಅನುಭವಿಸಬಹುದಾದ ದೌರ್ಜನ್ಯದ ದುರಂತ, ಈ ಎಲ್ಲ ಬರ್ಬರತೆಗಳು ಒಳಗೊಂಡ ಸಮಾಜವೊಂದರ ಚಿತ್ರಣ ನೀಡುತ್ತದೆ. ಅಧಿಕಾರ ಕೇಂದ್ರೀತ ಸಿದ್ಧಾಂತಗಳು ಸೃಷ್ಟಿಸಿದ ದಮನಕಾರಿ ವ್ಯವಸ್ಥೆಯ ನಿಲುವುಗಳು ಸಮಾಜ, ಕುಟುಂಬ, ವ್ಯಕ್ತಿ ಮುಖ್ಯವಾಗಿ ಮಹಿಳೆಯ ಮೇಲೆ ಮಾಡುವ ಆಕ್ರಮಣಗಳು ಕಾದಂಬರಿಕಾರ ಖಚಿತವಾಗಿ ದಾಖಲಿಸಿದ್ದಾರೆ. ಪ್ರಭುತ್ವ ಮತ್ತು ಜನರ ನಡುವಿನ ಸೈದ್ಧಾಂತಿಕ ಭಿನ್ನತೆಗಳು, ಅದರಿಂದ ಉಂಟಾದ ದಂಗೆಗಳು ಮತ್ತು ದಂಗೆಗಳು ತಂದೊಡ್ಡುವ ವಿನಾಶಗಳು, ಮಹಿಳೆಯ ಅಸ್ತಿತ್ವದ ಮೇಲಿನ ಅಲೆಯಾಗಿವೆ. ಹೆಣ್ಣಿನ ಅನಿವಾರ್ಯತೆ ಮತ್ತು ಅಸಹಾಯಕ ಸ್ಥಿತಿಯಲ್ಲಿ ಜಾಗೃತಗೊಂಡ ಕೆಲವರ ‘ಪುರುಷತನ’ವು ಅವಳನ್ನು ಮುಕ್ಕುವಂತಾಗಿಸುವ ಅಂಶಗಳು ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ.

ಸುಬ್ಬಣ್ಣನವರು ‘ಅರಳು’, ‘ಚೇತನ’, ‘ಕಾಡಿನಲ್ಲಿ ಹಿಡಿದ ಗ್ರಹಣ ಗಂಗೆಯಲ್ಲಿ ಬಿಟ್ಟಿತು’, ‘ಬಳ್ಳಿಯ ಹೂ ಬಾಡದಿರಲಿ’ ಕಥಾ ಸಂಕಲನಗಳು ಪ್ರಕಟಿಸುವ ಮೂಲಕ ಜಿಲ್ಲೆಯ ಮುಖ್ಯ ಕಥೆಗಾರರಾಗಿದ್ದಾರೆ. ಆರಂಭದಲ್ಲಿ ನವೋದಯದ ದಟ್ಟ ಪ್ರಭಾವಕ್ಕೆ ಒಳಗಾಗಿದ್ದರೂ ನಂತರ ಹೆಚ್ಚು ಸಮಾಜ ಮತ್ತು ಸಮುದಾಯ ಕೇಂದ್ರಿತ ಕತೆಗಳು ಬರೆದಿದ್ದಾರೆ. ಪ್ರೀತಿ, ಪ್ರೇಮ, ಹತಾಶೆ, ನೆನಪುಗಳು ಒಂದೆಡೆಯಾದರೆ, ವೃದ್ಧಾಪ್ಯದಲ್ಲಿ ದುಡಿಯುವ, ದುಡಿದು ಬದುಕುವ ಅನಿವಾರ್ಯತೆ ಮತ್ತು ಜೀವನದ ಕ್ರೌರ್ಯ ಇವರ ಕತೆಗಳಲ್ಲಿ ಚಿತ್ರಿತಗೊಂಡಿವೆ. ಇವರ ಬಹುತೇಕ ಕತೆಗಳು ಮನೋವಿಶ್ಲೇಷಣಾ ಸಿದ್ಧಾಂತದ ನೆಲೆಯಲ್ಲಿ ರಚನೆಯಾಗಿವೆ. ಸಂಕೀರ್ಣಗೊಂಡ ಧಾರ್ಮಿಕತೆ ಮತ್ತು ಅದರ ಆಚರಣೆಗಳ ಭ್ರಷ್ಟತೆಯನ್ನು ನೇರವಾಗಿ ಪ್ರತಿರೋಧಿಸುವ ಮಟ್ಟದ ಪಾತ್ರಗಳು ಅವರ ಕತೆಗಳಲ್ಲಿ ಕಾಣುವುದಿಲ್ಲ. ಮನೋರೋಗಗಳು ಮೌಢ್ಯದ ರೂಪವಾಗಿ ದೇವರೆದುರಿಗೆ ಅನಾವರಣಗೊಳ್ಳುವ ಬಗೆಯನ್ನು ಮಾತ್ರ ಚಿತ್ರಿಸುವುದು ಕತೆಗಾರರಿಗೆ ಮುಖ್ಯವಾದದ್ದು ಕಾಣುತ್ತದೆ. ಹೀಗೆ ಸುಬ್ಬಣ್ಣನವರ ಕತೆಗಳು ಸಮಾಜದಲ್ಲಿ ಸಂಭವಿಸುವ ಸಂಗತಿಗಳ ಬಗೆಗೆ ನೇರವಾಗಿ ಮಾತನಾಡುತ್ತವೆ.

‘ಬೀದರ ಜಿಲ್ಲೆಯ ಕನ್ನಡ ಭಾಷಾ ಕುಸುಮ’ (1996) ಮತ್ತು ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗ ಪ್ರಕಟಿಸಿದ ‘ಗಡಿನಾಡು ಭಾಷಾ ಸಮಸ್ಯೆ’ ಕೃತಿ ಬರೆದ ಸುಬ್ಬಣ್ಣನವರು ಜಿಲ್ಲೆಯ ಮೊದಲ ಭಾಷಾ ಚಿಂತಕ. ಬೀದರ ಕನ್ನಡ ಭಾಷಾ ಅಧ್ಯಯನಕ್ಕೆ ಈ ಎರಡು ಕೃತಿಗಳು ಪ್ರಧಾನ ಮಾರ್ಗಗಳಾಗುತ್ತವೆ. ಬೀದರ ಕನ್ನಡ ಭಾಷೆಯ ರಚನೆ ಮತ್ತು ಅನ್ಯ ಭಾಷೆಗಳ ಪ್ರಭಾವ ಕುರಿತು ಸೂಕ್ಷ್ಮ ಚಿಂತನೆ ನಡೆಸಿ, ಕ್ಷೇತ್ರ ಕಾರ್ಯ ಕೈಗೊಂಡು ಅಧ್ಯಯನ ಪೂರ್ಣ ಕೃತಿಗಳು ಬರೆದಿದ್ದಾರೆ.

ಆಡುಮಾತಿನಿಂದ ಹಿಡಿದು ವ್ಯವಹಾರ, ಮಾರುಕಟ್ಟೆ, ಆಡಳಿತ, ಗ್ರಂಥಸ್ಥ, ಜನಪದ ಮೊದಲಾದ ಕ್ಷೇತ್ರಗಳಲ್ಲಿ ಬಳಕೆಯಾಗುವ ಭಾಷಾ ಭಿನ್ನತೆಯನ್ನು ಗುರುತಿಸಿ ನಿದರ್ಶನ ಸಹಿತ ವಿವರಿಸಿದ್ದಾರೆ. ಬೀದರ ಕನ್ನಡದ ಮೇಲೆ ಪ್ರಭಾವ ಬೀರಿದ ಪೋರ್ಚುಗೀಸ್, ಅರಬ್ಬಿ, ಉರ್ದು, ಇಂಗ್ಲೀಷ್, ಹಿಂದಿ, ಮರಾಠಿ, ತೆಲಗು ಭಾಷೆಗಳು ಇಲ್ಲಿನ ಕನ್ನಡದೊಂದಿಗೆ ಬೆರೆತ ಕ್ರಮವನ್ನು ವಿವೇಚಿಸಿದ್ದಾರೆ. ಅನ್ಯ ಭಾಷೆ ಬೆರೆಸಿ ಮಾತಾಡುವ ಈ ಪ್ರದೇಶದ ಜನರ ಆಡು ನುಡಿಯಲ್ಲಿ ಕನ್ನಡ ಅಸ್ಮಿತೆಯ ಹುಡುಕಾಟಕ್ಕೆ ತೊಡಗಿದ್ದಾರೆ.

ಡಾ.ಚನ್ನಬಸವ ಪಟ್ಟದ್ದೇವರ ಕುರಿತು ಲೇಖನಗಳ ಸಂಗ್ರಹ ‘ವಿನಯ ಭಂಡಾರಿ’ ಹಾಗೂ ‘ನೀನೊಲಿದರೆ ಕೊರಡು ಕೊನರುವುದಯ್ಯ’ ಕೃತಿಗಳು, ‘ಗುರುತು’, ‘ಅಡ್ಡಗೋಡೆಯ ಮೇಲಿನ ದೀಪ’, ‘ವಿಚಾರಗಳಿಂದ ಸಹಾಯಗಳಿಲ್ಲ’ ಎಂಬ ಪ್ರಬಂಧ ಮತ್ತು ರೇಡಿಯೋ ಚಿಂತನಗಳ ಸಂಗ್ರಹ ಬರೆವ ಮೂಲಕ ಬದುಕಿನ ಪ್ರೀತಿ ಮತ್ತು ಸಾಮಾಜಿಕ ಪ್ರಜ್ಞೆಯ ಬರಹಗಾರರಾಗಿ ನಿಲ್ಲುತ್ತಾರೆ. ಸುಬ್ಬಣ್ಣನವರ ಕತೆಗಳಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ಜಯತೀರ್ಥ ರಾಜಪುರೋಹಿತ ದತ್ತಿ ಕಥಾ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳು ದೊರೆತಿವೆ. ಭಾಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಇವರು ಕೃಷಿಕರಾಗಿ, ಅಧ್ಯಾಪಕರಾಗಿ, ಕಾದಂಬರಿಕಾರರಾಗಿ, ಭಾಷಾ ಚಿಂತಕರಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...