Homeಮುಖಪುಟಬೀದರ್ ಜಿಲ್ಲೆಯ ಮೊದಲ ಕಾದಂಬರಿಕಾರ ಸುಬ್ಬಣ್ಣ

ಬೀದರ್ ಜಿಲ್ಲೆಯ ಮೊದಲ ಕಾದಂಬರಿಕಾರ ಸುಬ್ಬಣ್ಣ

ಕಾದಂಬರಿ ಮನುಷ್ಯನ ಸಾಮಾಜಿಕ ಪಲ್ಲಟ

- Advertisement -
- Advertisement -

| ಭೀಮಾಶಂಕರ ಬಿರಾದಾರ |

ಕಾದಂಬರಿ ಮನುಷ್ಯನ ಸಾಮಾಜಿಕ ಪಲ್ಲಟ ಹಾಗೂ ಸಮಷ್ಟಿಯ ಬದುಕಿನ ವಿಶ್ಲೇಷಣೆಯ ಕಲಾತ್ಮಕ ಬರಹ. ಸಂಕೀರ್ಣವಾದ ಕಥಾ ಸಂವಿಧಾನವೂ ಹಾಗೂ ವಾಸ್ತವಿಕ ಘಟನೆಗಳನ್ನು ಚಿತ್ರಿಸುವ ದೀರ್ಘ ಕಥನ. ಪ್ರಜಾಪ್ರಭುತ್ವದ ಮೌಲ್ಯ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯವು ಕಾದಂಬರಿಯ ಜಾಯಮಾನ. ನಾವೆಲ್‍ಗೆ ಸಂವಾದಿ ರೂಪ ಕನ್ನಡದಲ್ಲಿನ ಕಾದಂಬರಿ. 1899ರಲ್ಲಿ ಪ್ರಕಟಗೊಂಡ ಗುಲ್ವಾಡಿಯವರ ‘ಇಂದಿರಾಬಾಯಿ’ ಕನ್ನಡದ ಮೊದಲ ಸಾಮಾಜಿಕ ಕಾದಂಬರಿ. ಸಾಮ್ರಾಜ್ಯಶಾಹಿ, ವಸಾಹತು ಚಿಂತನೆ, ಇಂಗ್ಲಿಷ್ ಶಿಕ್ಷಣ, ಭಾರತೀಯ ಸಮಾಜದ ಮೇಲೆ ಒಡ್ಡುತ್ತಿರುವ ಆಧುನಿಕತೆ ಎಂಬ ಸಾಂಸ್ಕೃತಿಕ ಮತ್ತು ಬೌದ್ಧಿಕ ಯಜಮಾನ್ಯ, ಮನುಷ್ಯ ಸಂಬಂಧಗಳು ಆಕ್ರಮಿಸಿಕೊಂಡು ವ್ಯವಹಾರವಾಗಿಸಿದ ಜಾಗತೀಕರಣ ಇಂಥ ಅನೇಕ ಆಲೋಚನೆಗಳು ಮತ್ತು ಚಿಂತನೆಗಳು ಕನ್ನಡ ಕಾದಂಬರಿ ಪರಂಪರೆ ಒಂದು ಶತಮಾನಕ್ಕೂ ಹೆಚ್ಚುಕಾಲ ನಿರಂತರವಾಗಿ ಕಟ್ಟುತ್ತ ಬಂದಿದೆ. ಬೀದರ ಜಿಲ್ಲೆಯಲ್ಲಿ ಕಾದಂಬರಿ ಪ್ರಕಾರ ಸೃಷ್ಟಿಯಾದದ್ದು 1973ರಲ್ಲಿ. `ಸಿಂದಿ ಬನದಲ್ಲಿ ಸಿಕ್ಕವಳು’ ಕಾದಂಬರಿ ಬರೆಯುವ ಮೂಲಕ ಸುಬ್ಬಣ್ಣ ಅಂಬೆಸಂಗೆ ಜಿಲ್ಲೆಯ ಮೊದಲ ಕಾದಂಬರಿಕಾರರಾಗಿದ್ದಾರೆ. ಎಮ್.ಜಿ. ದೇಶಪಾಂಡೆ, ಯಶೋದಮ್ಮ ಸಿದ್ದಬಟ್ಟೆ, ಸುನಿತಾ ಬಿರಾದಾರ, ಗಣಪತಿ ಭೂರೆ, ಡಾ. ಜಯದೇವಿ ಗಾಯಕವಾಡ ಹೀಗೆ ಕೆಲವರು ಮಾತ್ರ ಜಿಲ್ಲೆಯಲ್ಲಿ ಕಾದಂಬರಿ ವಿನ್ಯಾಸ ಕಟ್ಟಿದ್ದಾರೆ. ಸುಬ್ಬಣ್ಣ ಅಂಬೆಸಂಗೆಯವರು ಸೃಜನಶೀಲ ಬರಹಗಾರರಾಗಿ ಕಾದಂಬರಿ, ಕಥೆ ಬರೆದಂತೆ ಭಾಷಾ ಚಿಂತಕರಾಗಿಯೂ ಗಮನ ಸೆಳೆಯುತ್ತಾರೆ.

ಭಾಲ್ಕಿ ತಾಲೂಕಿನ ಎಕಲಾಸಪೂರದ ಸುಬ್ಬಣ್ಣನವರು 1950 ಜೂನ್ 15ರಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿ, ಪ್ರೌಢಶಾಲಾ ಶಿಕ್ಷಕರಾಗಿ, ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸದ್ಯ ಬೇಸಾಯದಲ್ಲಿ ತೊಡಗಿದ್ದಾರೆ. ಸುಬ್ಬಣ್ಣನವರ ‘ಸಿಂದಿಬನದಲ್ಲಿ ಸಿಕ್ಕವಳು’ ಕಾದಂಬರಿ ಸ್ತ್ರೀ ಕೇಂದ್ರೀತ ದುರಂತ ವಸ್ತುವನ್ನೊಳಗೊಂಡಿದೆ. ಕಥನ ವಿನ್ಯಾಸ ಸರಳವಾಗಿದ್ದರೂ ಒಂದು ಕಾಲದ ಸಾಮಾಜಿಕ ಮತ್ತು ಚಾರಿತ್ರಿಕ ಸಂದರ್ಭವನ್ನು ನೆನಪಿಸುತ್ತದೆ. ಕಾದಂಬರಿಗಳು ಭೂತ ಮತ್ತು ವರ್ತಮಾನಗಳೆರಡನ್ನು ತನ್ನ ಒಡಲೊಳಗಿಟ್ಟಿಕೊಂಡು ಭವಿಷ್ಯದ ಮರುವಿಶ್ಲೇಷಣೆಗೆ ಎಡೆಮಾಡಿಕೊಡುತ್ತವೆ. ಈ ಪ್ರದೇಶದ ಪ್ರಕ್ಷುಬ್ಧ ಕಾಲವೊಂದರ ಕ್ರೂರ ಸಂಗತಿಗಳನ್ನೂ ಇವರ ಕಾದಂಬರಿ ಕಥನಿಸುತ್ತದೆ. ಜತೆಗೆ ಧಾರ್ಮಿಕ ಮೂಲಭೂತವಾದಿತನ, ಪ್ರಭುತ್ವದ ಹಪಾಹಪಿತನ, ಸ್ತ್ರೀ ಅನುಭವಿಸಬಹುದಾದ ದೌರ್ಜನ್ಯದ ದುರಂತ, ಈ ಎಲ್ಲ ಬರ್ಬರತೆಗಳು ಒಳಗೊಂಡ ಸಮಾಜವೊಂದರ ಚಿತ್ರಣ ನೀಡುತ್ತದೆ. ಅಧಿಕಾರ ಕೇಂದ್ರೀತ ಸಿದ್ಧಾಂತಗಳು ಸೃಷ್ಟಿಸಿದ ದಮನಕಾರಿ ವ್ಯವಸ್ಥೆಯ ನಿಲುವುಗಳು ಸಮಾಜ, ಕುಟುಂಬ, ವ್ಯಕ್ತಿ ಮುಖ್ಯವಾಗಿ ಮಹಿಳೆಯ ಮೇಲೆ ಮಾಡುವ ಆಕ್ರಮಣಗಳು ಕಾದಂಬರಿಕಾರ ಖಚಿತವಾಗಿ ದಾಖಲಿಸಿದ್ದಾರೆ. ಪ್ರಭುತ್ವ ಮತ್ತು ಜನರ ನಡುವಿನ ಸೈದ್ಧಾಂತಿಕ ಭಿನ್ನತೆಗಳು, ಅದರಿಂದ ಉಂಟಾದ ದಂಗೆಗಳು ಮತ್ತು ದಂಗೆಗಳು ತಂದೊಡ್ಡುವ ವಿನಾಶಗಳು, ಮಹಿಳೆಯ ಅಸ್ತಿತ್ವದ ಮೇಲಿನ ಅಲೆಯಾಗಿವೆ. ಹೆಣ್ಣಿನ ಅನಿವಾರ್ಯತೆ ಮತ್ತು ಅಸಹಾಯಕ ಸ್ಥಿತಿಯಲ್ಲಿ ಜಾಗೃತಗೊಂಡ ಕೆಲವರ ‘ಪುರುಷತನ’ವು ಅವಳನ್ನು ಮುಕ್ಕುವಂತಾಗಿಸುವ ಅಂಶಗಳು ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ.

ಸುಬ್ಬಣ್ಣನವರು ‘ಅರಳು’, ‘ಚೇತನ’, ‘ಕಾಡಿನಲ್ಲಿ ಹಿಡಿದ ಗ್ರಹಣ ಗಂಗೆಯಲ್ಲಿ ಬಿಟ್ಟಿತು’, ‘ಬಳ್ಳಿಯ ಹೂ ಬಾಡದಿರಲಿ’ ಕಥಾ ಸಂಕಲನಗಳು ಪ್ರಕಟಿಸುವ ಮೂಲಕ ಜಿಲ್ಲೆಯ ಮುಖ್ಯ ಕಥೆಗಾರರಾಗಿದ್ದಾರೆ. ಆರಂಭದಲ್ಲಿ ನವೋದಯದ ದಟ್ಟ ಪ್ರಭಾವಕ್ಕೆ ಒಳಗಾಗಿದ್ದರೂ ನಂತರ ಹೆಚ್ಚು ಸಮಾಜ ಮತ್ತು ಸಮುದಾಯ ಕೇಂದ್ರಿತ ಕತೆಗಳು ಬರೆದಿದ್ದಾರೆ. ಪ್ರೀತಿ, ಪ್ರೇಮ, ಹತಾಶೆ, ನೆನಪುಗಳು ಒಂದೆಡೆಯಾದರೆ, ವೃದ್ಧಾಪ್ಯದಲ್ಲಿ ದುಡಿಯುವ, ದುಡಿದು ಬದುಕುವ ಅನಿವಾರ್ಯತೆ ಮತ್ತು ಜೀವನದ ಕ್ರೌರ್ಯ ಇವರ ಕತೆಗಳಲ್ಲಿ ಚಿತ್ರಿತಗೊಂಡಿವೆ. ಇವರ ಬಹುತೇಕ ಕತೆಗಳು ಮನೋವಿಶ್ಲೇಷಣಾ ಸಿದ್ಧಾಂತದ ನೆಲೆಯಲ್ಲಿ ರಚನೆಯಾಗಿವೆ. ಸಂಕೀರ್ಣಗೊಂಡ ಧಾರ್ಮಿಕತೆ ಮತ್ತು ಅದರ ಆಚರಣೆಗಳ ಭ್ರಷ್ಟತೆಯನ್ನು ನೇರವಾಗಿ ಪ್ರತಿರೋಧಿಸುವ ಮಟ್ಟದ ಪಾತ್ರಗಳು ಅವರ ಕತೆಗಳಲ್ಲಿ ಕಾಣುವುದಿಲ್ಲ. ಮನೋರೋಗಗಳು ಮೌಢ್ಯದ ರೂಪವಾಗಿ ದೇವರೆದುರಿಗೆ ಅನಾವರಣಗೊಳ್ಳುವ ಬಗೆಯನ್ನು ಮಾತ್ರ ಚಿತ್ರಿಸುವುದು ಕತೆಗಾರರಿಗೆ ಮುಖ್ಯವಾದದ್ದು ಕಾಣುತ್ತದೆ. ಹೀಗೆ ಸುಬ್ಬಣ್ಣನವರ ಕತೆಗಳು ಸಮಾಜದಲ್ಲಿ ಸಂಭವಿಸುವ ಸಂಗತಿಗಳ ಬಗೆಗೆ ನೇರವಾಗಿ ಮಾತನಾಡುತ್ತವೆ.

‘ಬೀದರ ಜಿಲ್ಲೆಯ ಕನ್ನಡ ಭಾಷಾ ಕುಸುಮ’ (1996) ಮತ್ತು ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗ ಪ್ರಕಟಿಸಿದ ‘ಗಡಿನಾಡು ಭಾಷಾ ಸಮಸ್ಯೆ’ ಕೃತಿ ಬರೆದ ಸುಬ್ಬಣ್ಣನವರು ಜಿಲ್ಲೆಯ ಮೊದಲ ಭಾಷಾ ಚಿಂತಕ. ಬೀದರ ಕನ್ನಡ ಭಾಷಾ ಅಧ್ಯಯನಕ್ಕೆ ಈ ಎರಡು ಕೃತಿಗಳು ಪ್ರಧಾನ ಮಾರ್ಗಗಳಾಗುತ್ತವೆ. ಬೀದರ ಕನ್ನಡ ಭಾಷೆಯ ರಚನೆ ಮತ್ತು ಅನ್ಯ ಭಾಷೆಗಳ ಪ್ರಭಾವ ಕುರಿತು ಸೂಕ್ಷ್ಮ ಚಿಂತನೆ ನಡೆಸಿ, ಕ್ಷೇತ್ರ ಕಾರ್ಯ ಕೈಗೊಂಡು ಅಧ್ಯಯನ ಪೂರ್ಣ ಕೃತಿಗಳು ಬರೆದಿದ್ದಾರೆ.

ಆಡುಮಾತಿನಿಂದ ಹಿಡಿದು ವ್ಯವಹಾರ, ಮಾರುಕಟ್ಟೆ, ಆಡಳಿತ, ಗ್ರಂಥಸ್ಥ, ಜನಪದ ಮೊದಲಾದ ಕ್ಷೇತ್ರಗಳಲ್ಲಿ ಬಳಕೆಯಾಗುವ ಭಾಷಾ ಭಿನ್ನತೆಯನ್ನು ಗುರುತಿಸಿ ನಿದರ್ಶನ ಸಹಿತ ವಿವರಿಸಿದ್ದಾರೆ. ಬೀದರ ಕನ್ನಡದ ಮೇಲೆ ಪ್ರಭಾವ ಬೀರಿದ ಪೋರ್ಚುಗೀಸ್, ಅರಬ್ಬಿ, ಉರ್ದು, ಇಂಗ್ಲೀಷ್, ಹಿಂದಿ, ಮರಾಠಿ, ತೆಲಗು ಭಾಷೆಗಳು ಇಲ್ಲಿನ ಕನ್ನಡದೊಂದಿಗೆ ಬೆರೆತ ಕ್ರಮವನ್ನು ವಿವೇಚಿಸಿದ್ದಾರೆ. ಅನ್ಯ ಭಾಷೆ ಬೆರೆಸಿ ಮಾತಾಡುವ ಈ ಪ್ರದೇಶದ ಜನರ ಆಡು ನುಡಿಯಲ್ಲಿ ಕನ್ನಡ ಅಸ್ಮಿತೆಯ ಹುಡುಕಾಟಕ್ಕೆ ತೊಡಗಿದ್ದಾರೆ.

ಡಾ.ಚನ್ನಬಸವ ಪಟ್ಟದ್ದೇವರ ಕುರಿತು ಲೇಖನಗಳ ಸಂಗ್ರಹ ‘ವಿನಯ ಭಂಡಾರಿ’ ಹಾಗೂ ‘ನೀನೊಲಿದರೆ ಕೊರಡು ಕೊನರುವುದಯ್ಯ’ ಕೃತಿಗಳು, ‘ಗುರುತು’, ‘ಅಡ್ಡಗೋಡೆಯ ಮೇಲಿನ ದೀಪ’, ‘ವಿಚಾರಗಳಿಂದ ಸಹಾಯಗಳಿಲ್ಲ’ ಎಂಬ ಪ್ರಬಂಧ ಮತ್ತು ರೇಡಿಯೋ ಚಿಂತನಗಳ ಸಂಗ್ರಹ ಬರೆವ ಮೂಲಕ ಬದುಕಿನ ಪ್ರೀತಿ ಮತ್ತು ಸಾಮಾಜಿಕ ಪ್ರಜ್ಞೆಯ ಬರಹಗಾರರಾಗಿ ನಿಲ್ಲುತ್ತಾರೆ. ಸುಬ್ಬಣ್ಣನವರ ಕತೆಗಳಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ಜಯತೀರ್ಥ ರಾಜಪುರೋಹಿತ ದತ್ತಿ ಕಥಾ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳು ದೊರೆತಿವೆ. ಭಾಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಇವರು ಕೃಷಿಕರಾಗಿ, ಅಧ್ಯಾಪಕರಾಗಿ, ಕಾದಂಬರಿಕಾರರಾಗಿ, ಭಾಷಾ ಚಿಂತಕರಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...