Homeಮುಖಪುಟಬೀದರ್ ಜಿಲ್ಲೆಯ ಮೊದಲ ಕಾದಂಬರಿಕಾರ ಸುಬ್ಬಣ್ಣ

ಬೀದರ್ ಜಿಲ್ಲೆಯ ಮೊದಲ ಕಾದಂಬರಿಕಾರ ಸುಬ್ಬಣ್ಣ

ಕಾದಂಬರಿ ಮನುಷ್ಯನ ಸಾಮಾಜಿಕ ಪಲ್ಲಟ

- Advertisement -
- Advertisement -

| ಭೀಮಾಶಂಕರ ಬಿರಾದಾರ |

ಕಾದಂಬರಿ ಮನುಷ್ಯನ ಸಾಮಾಜಿಕ ಪಲ್ಲಟ ಹಾಗೂ ಸಮಷ್ಟಿಯ ಬದುಕಿನ ವಿಶ್ಲೇಷಣೆಯ ಕಲಾತ್ಮಕ ಬರಹ. ಸಂಕೀರ್ಣವಾದ ಕಥಾ ಸಂವಿಧಾನವೂ ಹಾಗೂ ವಾಸ್ತವಿಕ ಘಟನೆಗಳನ್ನು ಚಿತ್ರಿಸುವ ದೀರ್ಘ ಕಥನ. ಪ್ರಜಾಪ್ರಭುತ್ವದ ಮೌಲ್ಯ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯವು ಕಾದಂಬರಿಯ ಜಾಯಮಾನ. ನಾವೆಲ್‍ಗೆ ಸಂವಾದಿ ರೂಪ ಕನ್ನಡದಲ್ಲಿನ ಕಾದಂಬರಿ. 1899ರಲ್ಲಿ ಪ್ರಕಟಗೊಂಡ ಗುಲ್ವಾಡಿಯವರ ‘ಇಂದಿರಾಬಾಯಿ’ ಕನ್ನಡದ ಮೊದಲ ಸಾಮಾಜಿಕ ಕಾದಂಬರಿ. ಸಾಮ್ರಾಜ್ಯಶಾಹಿ, ವಸಾಹತು ಚಿಂತನೆ, ಇಂಗ್ಲಿಷ್ ಶಿಕ್ಷಣ, ಭಾರತೀಯ ಸಮಾಜದ ಮೇಲೆ ಒಡ್ಡುತ್ತಿರುವ ಆಧುನಿಕತೆ ಎಂಬ ಸಾಂಸ್ಕೃತಿಕ ಮತ್ತು ಬೌದ್ಧಿಕ ಯಜಮಾನ್ಯ, ಮನುಷ್ಯ ಸಂಬಂಧಗಳು ಆಕ್ರಮಿಸಿಕೊಂಡು ವ್ಯವಹಾರವಾಗಿಸಿದ ಜಾಗತೀಕರಣ ಇಂಥ ಅನೇಕ ಆಲೋಚನೆಗಳು ಮತ್ತು ಚಿಂತನೆಗಳು ಕನ್ನಡ ಕಾದಂಬರಿ ಪರಂಪರೆ ಒಂದು ಶತಮಾನಕ್ಕೂ ಹೆಚ್ಚುಕಾಲ ನಿರಂತರವಾಗಿ ಕಟ್ಟುತ್ತ ಬಂದಿದೆ. ಬೀದರ ಜಿಲ್ಲೆಯಲ್ಲಿ ಕಾದಂಬರಿ ಪ್ರಕಾರ ಸೃಷ್ಟಿಯಾದದ್ದು 1973ರಲ್ಲಿ. `ಸಿಂದಿ ಬನದಲ್ಲಿ ಸಿಕ್ಕವಳು’ ಕಾದಂಬರಿ ಬರೆಯುವ ಮೂಲಕ ಸುಬ್ಬಣ್ಣ ಅಂಬೆಸಂಗೆ ಜಿಲ್ಲೆಯ ಮೊದಲ ಕಾದಂಬರಿಕಾರರಾಗಿದ್ದಾರೆ. ಎಮ್.ಜಿ. ದೇಶಪಾಂಡೆ, ಯಶೋದಮ್ಮ ಸಿದ್ದಬಟ್ಟೆ, ಸುನಿತಾ ಬಿರಾದಾರ, ಗಣಪತಿ ಭೂರೆ, ಡಾ. ಜಯದೇವಿ ಗಾಯಕವಾಡ ಹೀಗೆ ಕೆಲವರು ಮಾತ್ರ ಜಿಲ್ಲೆಯಲ್ಲಿ ಕಾದಂಬರಿ ವಿನ್ಯಾಸ ಕಟ್ಟಿದ್ದಾರೆ. ಸುಬ್ಬಣ್ಣ ಅಂಬೆಸಂಗೆಯವರು ಸೃಜನಶೀಲ ಬರಹಗಾರರಾಗಿ ಕಾದಂಬರಿ, ಕಥೆ ಬರೆದಂತೆ ಭಾಷಾ ಚಿಂತಕರಾಗಿಯೂ ಗಮನ ಸೆಳೆಯುತ್ತಾರೆ.

ಭಾಲ್ಕಿ ತಾಲೂಕಿನ ಎಕಲಾಸಪೂರದ ಸುಬ್ಬಣ್ಣನವರು 1950 ಜೂನ್ 15ರಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿ, ಪ್ರೌಢಶಾಲಾ ಶಿಕ್ಷಕರಾಗಿ, ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸದ್ಯ ಬೇಸಾಯದಲ್ಲಿ ತೊಡಗಿದ್ದಾರೆ. ಸುಬ್ಬಣ್ಣನವರ ‘ಸಿಂದಿಬನದಲ್ಲಿ ಸಿಕ್ಕವಳು’ ಕಾದಂಬರಿ ಸ್ತ್ರೀ ಕೇಂದ್ರೀತ ದುರಂತ ವಸ್ತುವನ್ನೊಳಗೊಂಡಿದೆ. ಕಥನ ವಿನ್ಯಾಸ ಸರಳವಾಗಿದ್ದರೂ ಒಂದು ಕಾಲದ ಸಾಮಾಜಿಕ ಮತ್ತು ಚಾರಿತ್ರಿಕ ಸಂದರ್ಭವನ್ನು ನೆನಪಿಸುತ್ತದೆ. ಕಾದಂಬರಿಗಳು ಭೂತ ಮತ್ತು ವರ್ತಮಾನಗಳೆರಡನ್ನು ತನ್ನ ಒಡಲೊಳಗಿಟ್ಟಿಕೊಂಡು ಭವಿಷ್ಯದ ಮರುವಿಶ್ಲೇಷಣೆಗೆ ಎಡೆಮಾಡಿಕೊಡುತ್ತವೆ. ಈ ಪ್ರದೇಶದ ಪ್ರಕ್ಷುಬ್ಧ ಕಾಲವೊಂದರ ಕ್ರೂರ ಸಂಗತಿಗಳನ್ನೂ ಇವರ ಕಾದಂಬರಿ ಕಥನಿಸುತ್ತದೆ. ಜತೆಗೆ ಧಾರ್ಮಿಕ ಮೂಲಭೂತವಾದಿತನ, ಪ್ರಭುತ್ವದ ಹಪಾಹಪಿತನ, ಸ್ತ್ರೀ ಅನುಭವಿಸಬಹುದಾದ ದೌರ್ಜನ್ಯದ ದುರಂತ, ಈ ಎಲ್ಲ ಬರ್ಬರತೆಗಳು ಒಳಗೊಂಡ ಸಮಾಜವೊಂದರ ಚಿತ್ರಣ ನೀಡುತ್ತದೆ. ಅಧಿಕಾರ ಕೇಂದ್ರೀತ ಸಿದ್ಧಾಂತಗಳು ಸೃಷ್ಟಿಸಿದ ದಮನಕಾರಿ ವ್ಯವಸ್ಥೆಯ ನಿಲುವುಗಳು ಸಮಾಜ, ಕುಟುಂಬ, ವ್ಯಕ್ತಿ ಮುಖ್ಯವಾಗಿ ಮಹಿಳೆಯ ಮೇಲೆ ಮಾಡುವ ಆಕ್ರಮಣಗಳು ಕಾದಂಬರಿಕಾರ ಖಚಿತವಾಗಿ ದಾಖಲಿಸಿದ್ದಾರೆ. ಪ್ರಭುತ್ವ ಮತ್ತು ಜನರ ನಡುವಿನ ಸೈದ್ಧಾಂತಿಕ ಭಿನ್ನತೆಗಳು, ಅದರಿಂದ ಉಂಟಾದ ದಂಗೆಗಳು ಮತ್ತು ದಂಗೆಗಳು ತಂದೊಡ್ಡುವ ವಿನಾಶಗಳು, ಮಹಿಳೆಯ ಅಸ್ತಿತ್ವದ ಮೇಲಿನ ಅಲೆಯಾಗಿವೆ. ಹೆಣ್ಣಿನ ಅನಿವಾರ್ಯತೆ ಮತ್ತು ಅಸಹಾಯಕ ಸ್ಥಿತಿಯಲ್ಲಿ ಜಾಗೃತಗೊಂಡ ಕೆಲವರ ‘ಪುರುಷತನ’ವು ಅವಳನ್ನು ಮುಕ್ಕುವಂತಾಗಿಸುವ ಅಂಶಗಳು ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ.

ಸುಬ್ಬಣ್ಣನವರು ‘ಅರಳು’, ‘ಚೇತನ’, ‘ಕಾಡಿನಲ್ಲಿ ಹಿಡಿದ ಗ್ರಹಣ ಗಂಗೆಯಲ್ಲಿ ಬಿಟ್ಟಿತು’, ‘ಬಳ್ಳಿಯ ಹೂ ಬಾಡದಿರಲಿ’ ಕಥಾ ಸಂಕಲನಗಳು ಪ್ರಕಟಿಸುವ ಮೂಲಕ ಜಿಲ್ಲೆಯ ಮುಖ್ಯ ಕಥೆಗಾರರಾಗಿದ್ದಾರೆ. ಆರಂಭದಲ್ಲಿ ನವೋದಯದ ದಟ್ಟ ಪ್ರಭಾವಕ್ಕೆ ಒಳಗಾಗಿದ್ದರೂ ನಂತರ ಹೆಚ್ಚು ಸಮಾಜ ಮತ್ತು ಸಮುದಾಯ ಕೇಂದ್ರಿತ ಕತೆಗಳು ಬರೆದಿದ್ದಾರೆ. ಪ್ರೀತಿ, ಪ್ರೇಮ, ಹತಾಶೆ, ನೆನಪುಗಳು ಒಂದೆಡೆಯಾದರೆ, ವೃದ್ಧಾಪ್ಯದಲ್ಲಿ ದುಡಿಯುವ, ದುಡಿದು ಬದುಕುವ ಅನಿವಾರ್ಯತೆ ಮತ್ತು ಜೀವನದ ಕ್ರೌರ್ಯ ಇವರ ಕತೆಗಳಲ್ಲಿ ಚಿತ್ರಿತಗೊಂಡಿವೆ. ಇವರ ಬಹುತೇಕ ಕತೆಗಳು ಮನೋವಿಶ್ಲೇಷಣಾ ಸಿದ್ಧಾಂತದ ನೆಲೆಯಲ್ಲಿ ರಚನೆಯಾಗಿವೆ. ಸಂಕೀರ್ಣಗೊಂಡ ಧಾರ್ಮಿಕತೆ ಮತ್ತು ಅದರ ಆಚರಣೆಗಳ ಭ್ರಷ್ಟತೆಯನ್ನು ನೇರವಾಗಿ ಪ್ರತಿರೋಧಿಸುವ ಮಟ್ಟದ ಪಾತ್ರಗಳು ಅವರ ಕತೆಗಳಲ್ಲಿ ಕಾಣುವುದಿಲ್ಲ. ಮನೋರೋಗಗಳು ಮೌಢ್ಯದ ರೂಪವಾಗಿ ದೇವರೆದುರಿಗೆ ಅನಾವರಣಗೊಳ್ಳುವ ಬಗೆಯನ್ನು ಮಾತ್ರ ಚಿತ್ರಿಸುವುದು ಕತೆಗಾರರಿಗೆ ಮುಖ್ಯವಾದದ್ದು ಕಾಣುತ್ತದೆ. ಹೀಗೆ ಸುಬ್ಬಣ್ಣನವರ ಕತೆಗಳು ಸಮಾಜದಲ್ಲಿ ಸಂಭವಿಸುವ ಸಂಗತಿಗಳ ಬಗೆಗೆ ನೇರವಾಗಿ ಮಾತನಾಡುತ್ತವೆ.

‘ಬೀದರ ಜಿಲ್ಲೆಯ ಕನ್ನಡ ಭಾಷಾ ಕುಸುಮ’ (1996) ಮತ್ತು ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗ ಪ್ರಕಟಿಸಿದ ‘ಗಡಿನಾಡು ಭಾಷಾ ಸಮಸ್ಯೆ’ ಕೃತಿ ಬರೆದ ಸುಬ್ಬಣ್ಣನವರು ಜಿಲ್ಲೆಯ ಮೊದಲ ಭಾಷಾ ಚಿಂತಕ. ಬೀದರ ಕನ್ನಡ ಭಾಷಾ ಅಧ್ಯಯನಕ್ಕೆ ಈ ಎರಡು ಕೃತಿಗಳು ಪ್ರಧಾನ ಮಾರ್ಗಗಳಾಗುತ್ತವೆ. ಬೀದರ ಕನ್ನಡ ಭಾಷೆಯ ರಚನೆ ಮತ್ತು ಅನ್ಯ ಭಾಷೆಗಳ ಪ್ರಭಾವ ಕುರಿತು ಸೂಕ್ಷ್ಮ ಚಿಂತನೆ ನಡೆಸಿ, ಕ್ಷೇತ್ರ ಕಾರ್ಯ ಕೈಗೊಂಡು ಅಧ್ಯಯನ ಪೂರ್ಣ ಕೃತಿಗಳು ಬರೆದಿದ್ದಾರೆ.

ಆಡುಮಾತಿನಿಂದ ಹಿಡಿದು ವ್ಯವಹಾರ, ಮಾರುಕಟ್ಟೆ, ಆಡಳಿತ, ಗ್ರಂಥಸ್ಥ, ಜನಪದ ಮೊದಲಾದ ಕ್ಷೇತ್ರಗಳಲ್ಲಿ ಬಳಕೆಯಾಗುವ ಭಾಷಾ ಭಿನ್ನತೆಯನ್ನು ಗುರುತಿಸಿ ನಿದರ್ಶನ ಸಹಿತ ವಿವರಿಸಿದ್ದಾರೆ. ಬೀದರ ಕನ್ನಡದ ಮೇಲೆ ಪ್ರಭಾವ ಬೀರಿದ ಪೋರ್ಚುಗೀಸ್, ಅರಬ್ಬಿ, ಉರ್ದು, ಇಂಗ್ಲೀಷ್, ಹಿಂದಿ, ಮರಾಠಿ, ತೆಲಗು ಭಾಷೆಗಳು ಇಲ್ಲಿನ ಕನ್ನಡದೊಂದಿಗೆ ಬೆರೆತ ಕ್ರಮವನ್ನು ವಿವೇಚಿಸಿದ್ದಾರೆ. ಅನ್ಯ ಭಾಷೆ ಬೆರೆಸಿ ಮಾತಾಡುವ ಈ ಪ್ರದೇಶದ ಜನರ ಆಡು ನುಡಿಯಲ್ಲಿ ಕನ್ನಡ ಅಸ್ಮಿತೆಯ ಹುಡುಕಾಟಕ್ಕೆ ತೊಡಗಿದ್ದಾರೆ.

ಡಾ.ಚನ್ನಬಸವ ಪಟ್ಟದ್ದೇವರ ಕುರಿತು ಲೇಖನಗಳ ಸಂಗ್ರಹ ‘ವಿನಯ ಭಂಡಾರಿ’ ಹಾಗೂ ‘ನೀನೊಲಿದರೆ ಕೊರಡು ಕೊನರುವುದಯ್ಯ’ ಕೃತಿಗಳು, ‘ಗುರುತು’, ‘ಅಡ್ಡಗೋಡೆಯ ಮೇಲಿನ ದೀಪ’, ‘ವಿಚಾರಗಳಿಂದ ಸಹಾಯಗಳಿಲ್ಲ’ ಎಂಬ ಪ್ರಬಂಧ ಮತ್ತು ರೇಡಿಯೋ ಚಿಂತನಗಳ ಸಂಗ್ರಹ ಬರೆವ ಮೂಲಕ ಬದುಕಿನ ಪ್ರೀತಿ ಮತ್ತು ಸಾಮಾಜಿಕ ಪ್ರಜ್ಞೆಯ ಬರಹಗಾರರಾಗಿ ನಿಲ್ಲುತ್ತಾರೆ. ಸುಬ್ಬಣ್ಣನವರ ಕತೆಗಳಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ಜಯತೀರ್ಥ ರಾಜಪುರೋಹಿತ ದತ್ತಿ ಕಥಾ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳು ದೊರೆತಿವೆ. ಭಾಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಇವರು ಕೃಷಿಕರಾಗಿ, ಅಧ್ಯಾಪಕರಾಗಿ, ಕಾದಂಬರಿಕಾರರಾಗಿ, ಭಾಷಾ ಚಿಂತಕರಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ : 16 ವರ್ಷದ ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 14 ವರ್ಷದ ದಲಿತ ಬಾಲಕಿಯ ಭೀಕರ ಅತ್ಯಾಚಾರ, ಕೊಲೆ ನಡೆದಿದ್ದು, ಈ ಸಂಬಂಧ 16 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ (ಜ.15) ಬೆಳಿಗ್ಗೆ ಶಾಲೆಗೆ ಹೋದ...

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತದೆ: ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ನಡೆಸಿದ್ದಾರೆ. ಪೌರತ್ವ ಕಾಯ್ದೆ ಮತ್ತು ಹೊಸ ವಕ್ಫ್ ಕಾಯ್ದೆಯಂತಹ ಅದರ ವಿವಿಧ ಕಾನೂನುಗಳು ಮತ್ತು ನೀತಿಗಳು...

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: 114 ಸ್ಥಾನಗಳೊಂದಿಗೆ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದ ಎಐಎಂಐಎಂ

ಮಹಾರಾಷ್ಟ್ರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಖಿಲ ಭಾರತ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷವು (ಎಐಎಂಐಎಂ) 114 ಸ್ಥಾನಗಳನ್ನು ಗೆದ್ದು, 2017 ರ ಸ್ಥಳೀಯ ಸಂಸ್ಥೆ ಚುನಾವಣೆಗಳಿಗಿಂತ ತನ್ನ ಸಂಖ್ಯೆಯನ್ನು ತೀವ್ರವಾಗಿ ಹೆಚ್ಚಿಸಿಕೊಂಡಿದೆ....

ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಅನೈತಿಕ ಪೊಲೀಸ್‌ಗಿರಿ : ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಬಂಧನ

ವಲಸೆ ಕಾರ್ಮಿಕರ ಶೆಡ್‌ಗಳಿಗೆ ತೆರಳಿ ಅವರ ಗೌಪ್ಯ ದಾಖಲೆಗಳನ್ನು ಪಡೆದು ಪೌರತ್ವ ಪರಿಶೀಲಿಸುವ ಮೂಲಕ ಅನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸರು ಶುಕ್ರವಾರ (ಜ.16) ತಡರಾತ್ರಿ ಬಂಧಿಸಿದ್ದಾರೆ...

ಬಳ್ಳಾರಿ| ಬಂಡಿಹಟ್ಟಿ-ದಾನಪ್ಪ ಬೀದಿ ಬಡರೈತರ ಮೇಲೆ ದೌರ್ಜನ್ಯ; ಪ್ರತಾಪರೆಡ್ಡಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಬಳ್ಳಾರಿ ಜಿಲ್ಲೆಯ ಬಂಡಿಹಟ್ಟಿ-ದಾನಪ್ಪ ಬೀದಿಯ ಬಡರೈತರ ಮೇಲೆ ದೌರ್ಜನ್ಯ ಎಸಗುತ್ತಿರುವ ಎನ್‌.ಪ್ರತಾಪ ರೆಡ್ಡಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು 'ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ' ಮುಖಂಡರು ಆಗ್ರಹಿಸಿದರು....

ರೋಹಿತ್ ವೇಮುಲಾ 10ನೇ ಶಹಾದತ್ ದಿನ: ಜ.17ರಂದು ಹೈದರಾಬಾದ್ ವಿವಿಯಲ್ಲಿ ರೋಹಿತ್ ಕಾಯ್ದೆಯ ‘ಜನತಾ ಕರಡು’ ಅನಾವರಣ

ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದಲ್ಲಿ ದಲಿತ ಸಂಶೋಧನಾ ವಿದ್ವಾಂಸ ಮತ್ತು ಅಂಬೇಡ್ಕರ್ ವಿದ್ಯಾರ್ಥಿ ಸಂಘದ (ASA) ನಾಯಕ ರೋಹಿತ್ ವೇಮುಲ ಅವರ ಮರಣದ ಹತ್ತು ವರ್ಷಗಳ ನಂತರ, ವಿದ್ಯಾರ್ಥಿ ಗುಂಪುಗಳು ಮತ್ತು ಸಾಮಾಜಿಕ ನ್ಯಾಯ...

ಮಹಾರಾಷ್ಟ್ರವು ಪ್ರಧಾನಿ ಮೋದಿಯನ್ನು ಹೆಚ್ಚು ಅವಲಂಬಿಸಿದೆ: ಸಿಎಂ ಫಡ್ನವೀಸ್

ನಗರ ಪಾಲಿಕೆ ಚುನಾವಣೆಯಲ್ಲಿ ಮಹಾಯುತಿ ಭರ್ಜರಿ ಜಯ ಸಾಧಿಸಿದ ನಂತರ ಮಹಾರಾಷ್ಟ್ರದ ಜನರಿಗೆ ಧನ್ಯವಾದ ಅರ್ಪಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ವಿಜಯವನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರಿಗೆ ಅರ್ಪಿಸಿದರು. ರಾಜ್ಯವು ಪ್ರಧಾನಿ...

ಮೆಹುಲ್ ಚೋಕ್ಸಿ ಪುತ್ರ ಕೂಡ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ: ಜಾರಿ ನಿರ್ದೇಶನಾಲಯ

ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧದ ಹಣ ವರ್ಗಾವಣೆ ಪ್ರಕರಣದಲ್ಲಿ, ಅವರ ಮಗ ರೋಹನ್ ಚೋಕ್ಸಿ ಕೂಡ ಈ ಅಪರಾಧದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಮೊದಲ ಬಾರಿಗೆ ಹೇಳಿಕೊಂಡಿದೆ....

‘ವೋಟ್ ಚೋರಿ ಒಂದು ರಾಷ್ಟ್ರವಿರೋಧಿ ಕೃತ್ಯ..’; ಬಿಎಂಸಿ ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ಮಹಾರಾಷ್ಟ್ರ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯಲ್ಲಿ ಎಣಿಕೆ ವೇಗ ಪಡೆಯುತ್ತಿದ್ದಂತೆ, ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗವನ್ನು ಗುರಿಯಾಗಿಸಿಕೊಂಡು ತಮ್ಮ ಮೊದಲ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ....

ಪುನರಾಭಿವೃದ್ಧಿ ಹೆಸರಿನಲ್ಲಿ ಮಣಿಕರ್ಣಿಕಾ ಘಾಟ್ ಬಳಿ ದೇಗುಲಗಳ ಧ್ವಂಸ: ಮೋದಿ ವಿರುದ್ಧ ಖರ್ಗೆ ಆಕ್ರೋಶ!

ನವದೆಹಲಿ: ವಾರಣಾಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಪುನರಾಭಿವೃದ್ಧಿ ಕಾರ್ಯದ ಭಾಗವಾಗಿ ಬುಲ್ಡೋಜರ್‌ಗಳನ್ನು ಏಕೆ ಓಡಿಸಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ಪ್ರಧಾನಿಯವರನ್ನು ಪ್ರಶ್ನಿಸಿದ್ದಾರೆ. ಮತ್ತು ಐತಿಹಾಸಿಕ ಪರಂಪರೆಯ ಅನೇಕ ಸ್ಥಳಗಳನ್ನು ಈ...