Homeಮುಖಪುಟಬೀದರ್ ಜಿಲ್ಲೆಯ ಮೊದಲ ಕಾದಂಬರಿಕಾರ ಸುಬ್ಬಣ್ಣ

ಬೀದರ್ ಜಿಲ್ಲೆಯ ಮೊದಲ ಕಾದಂಬರಿಕಾರ ಸುಬ್ಬಣ್ಣ

ಕಾದಂಬರಿ ಮನುಷ್ಯನ ಸಾಮಾಜಿಕ ಪಲ್ಲಟ

- Advertisement -
- Advertisement -

| ಭೀಮಾಶಂಕರ ಬಿರಾದಾರ |

ಕಾದಂಬರಿ ಮನುಷ್ಯನ ಸಾಮಾಜಿಕ ಪಲ್ಲಟ ಹಾಗೂ ಸಮಷ್ಟಿಯ ಬದುಕಿನ ವಿಶ್ಲೇಷಣೆಯ ಕಲಾತ್ಮಕ ಬರಹ. ಸಂಕೀರ್ಣವಾದ ಕಥಾ ಸಂವಿಧಾನವೂ ಹಾಗೂ ವಾಸ್ತವಿಕ ಘಟನೆಗಳನ್ನು ಚಿತ್ರಿಸುವ ದೀರ್ಘ ಕಥನ. ಪ್ರಜಾಪ್ರಭುತ್ವದ ಮೌಲ್ಯ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯವು ಕಾದಂಬರಿಯ ಜಾಯಮಾನ. ನಾವೆಲ್‍ಗೆ ಸಂವಾದಿ ರೂಪ ಕನ್ನಡದಲ್ಲಿನ ಕಾದಂಬರಿ. 1899ರಲ್ಲಿ ಪ್ರಕಟಗೊಂಡ ಗುಲ್ವಾಡಿಯವರ ‘ಇಂದಿರಾಬಾಯಿ’ ಕನ್ನಡದ ಮೊದಲ ಸಾಮಾಜಿಕ ಕಾದಂಬರಿ. ಸಾಮ್ರಾಜ್ಯಶಾಹಿ, ವಸಾಹತು ಚಿಂತನೆ, ಇಂಗ್ಲಿಷ್ ಶಿಕ್ಷಣ, ಭಾರತೀಯ ಸಮಾಜದ ಮೇಲೆ ಒಡ್ಡುತ್ತಿರುವ ಆಧುನಿಕತೆ ಎಂಬ ಸಾಂಸ್ಕೃತಿಕ ಮತ್ತು ಬೌದ್ಧಿಕ ಯಜಮಾನ್ಯ, ಮನುಷ್ಯ ಸಂಬಂಧಗಳು ಆಕ್ರಮಿಸಿಕೊಂಡು ವ್ಯವಹಾರವಾಗಿಸಿದ ಜಾಗತೀಕರಣ ಇಂಥ ಅನೇಕ ಆಲೋಚನೆಗಳು ಮತ್ತು ಚಿಂತನೆಗಳು ಕನ್ನಡ ಕಾದಂಬರಿ ಪರಂಪರೆ ಒಂದು ಶತಮಾನಕ್ಕೂ ಹೆಚ್ಚುಕಾಲ ನಿರಂತರವಾಗಿ ಕಟ್ಟುತ್ತ ಬಂದಿದೆ. ಬೀದರ ಜಿಲ್ಲೆಯಲ್ಲಿ ಕಾದಂಬರಿ ಪ್ರಕಾರ ಸೃಷ್ಟಿಯಾದದ್ದು 1973ರಲ್ಲಿ. `ಸಿಂದಿ ಬನದಲ್ಲಿ ಸಿಕ್ಕವಳು’ ಕಾದಂಬರಿ ಬರೆಯುವ ಮೂಲಕ ಸುಬ್ಬಣ್ಣ ಅಂಬೆಸಂಗೆ ಜಿಲ್ಲೆಯ ಮೊದಲ ಕಾದಂಬರಿಕಾರರಾಗಿದ್ದಾರೆ. ಎಮ್.ಜಿ. ದೇಶಪಾಂಡೆ, ಯಶೋದಮ್ಮ ಸಿದ್ದಬಟ್ಟೆ, ಸುನಿತಾ ಬಿರಾದಾರ, ಗಣಪತಿ ಭೂರೆ, ಡಾ. ಜಯದೇವಿ ಗಾಯಕವಾಡ ಹೀಗೆ ಕೆಲವರು ಮಾತ್ರ ಜಿಲ್ಲೆಯಲ್ಲಿ ಕಾದಂಬರಿ ವಿನ್ಯಾಸ ಕಟ್ಟಿದ್ದಾರೆ. ಸುಬ್ಬಣ್ಣ ಅಂಬೆಸಂಗೆಯವರು ಸೃಜನಶೀಲ ಬರಹಗಾರರಾಗಿ ಕಾದಂಬರಿ, ಕಥೆ ಬರೆದಂತೆ ಭಾಷಾ ಚಿಂತಕರಾಗಿಯೂ ಗಮನ ಸೆಳೆಯುತ್ತಾರೆ.

ಭಾಲ್ಕಿ ತಾಲೂಕಿನ ಎಕಲಾಸಪೂರದ ಸುಬ್ಬಣ್ಣನವರು 1950 ಜೂನ್ 15ರಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿ, ಪ್ರೌಢಶಾಲಾ ಶಿಕ್ಷಕರಾಗಿ, ಕಾಲೇಜು ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸದ್ಯ ಬೇಸಾಯದಲ್ಲಿ ತೊಡಗಿದ್ದಾರೆ. ಸುಬ್ಬಣ್ಣನವರ ‘ಸಿಂದಿಬನದಲ್ಲಿ ಸಿಕ್ಕವಳು’ ಕಾದಂಬರಿ ಸ್ತ್ರೀ ಕೇಂದ್ರೀತ ದುರಂತ ವಸ್ತುವನ್ನೊಳಗೊಂಡಿದೆ. ಕಥನ ವಿನ್ಯಾಸ ಸರಳವಾಗಿದ್ದರೂ ಒಂದು ಕಾಲದ ಸಾಮಾಜಿಕ ಮತ್ತು ಚಾರಿತ್ರಿಕ ಸಂದರ್ಭವನ್ನು ನೆನಪಿಸುತ್ತದೆ. ಕಾದಂಬರಿಗಳು ಭೂತ ಮತ್ತು ವರ್ತಮಾನಗಳೆರಡನ್ನು ತನ್ನ ಒಡಲೊಳಗಿಟ್ಟಿಕೊಂಡು ಭವಿಷ್ಯದ ಮರುವಿಶ್ಲೇಷಣೆಗೆ ಎಡೆಮಾಡಿಕೊಡುತ್ತವೆ. ಈ ಪ್ರದೇಶದ ಪ್ರಕ್ಷುಬ್ಧ ಕಾಲವೊಂದರ ಕ್ರೂರ ಸಂಗತಿಗಳನ್ನೂ ಇವರ ಕಾದಂಬರಿ ಕಥನಿಸುತ್ತದೆ. ಜತೆಗೆ ಧಾರ್ಮಿಕ ಮೂಲಭೂತವಾದಿತನ, ಪ್ರಭುತ್ವದ ಹಪಾಹಪಿತನ, ಸ್ತ್ರೀ ಅನುಭವಿಸಬಹುದಾದ ದೌರ್ಜನ್ಯದ ದುರಂತ, ಈ ಎಲ್ಲ ಬರ್ಬರತೆಗಳು ಒಳಗೊಂಡ ಸಮಾಜವೊಂದರ ಚಿತ್ರಣ ನೀಡುತ್ತದೆ. ಅಧಿಕಾರ ಕೇಂದ್ರೀತ ಸಿದ್ಧಾಂತಗಳು ಸೃಷ್ಟಿಸಿದ ದಮನಕಾರಿ ವ್ಯವಸ್ಥೆಯ ನಿಲುವುಗಳು ಸಮಾಜ, ಕುಟುಂಬ, ವ್ಯಕ್ತಿ ಮುಖ್ಯವಾಗಿ ಮಹಿಳೆಯ ಮೇಲೆ ಮಾಡುವ ಆಕ್ರಮಣಗಳು ಕಾದಂಬರಿಕಾರ ಖಚಿತವಾಗಿ ದಾಖಲಿಸಿದ್ದಾರೆ. ಪ್ರಭುತ್ವ ಮತ್ತು ಜನರ ನಡುವಿನ ಸೈದ್ಧಾಂತಿಕ ಭಿನ್ನತೆಗಳು, ಅದರಿಂದ ಉಂಟಾದ ದಂಗೆಗಳು ಮತ್ತು ದಂಗೆಗಳು ತಂದೊಡ್ಡುವ ವಿನಾಶಗಳು, ಮಹಿಳೆಯ ಅಸ್ತಿತ್ವದ ಮೇಲಿನ ಅಲೆಯಾಗಿವೆ. ಹೆಣ್ಣಿನ ಅನಿವಾರ್ಯತೆ ಮತ್ತು ಅಸಹಾಯಕ ಸ್ಥಿತಿಯಲ್ಲಿ ಜಾಗೃತಗೊಂಡ ಕೆಲವರ ‘ಪುರುಷತನ’ವು ಅವಳನ್ನು ಮುಕ್ಕುವಂತಾಗಿಸುವ ಅಂಶಗಳು ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ.

ಸುಬ್ಬಣ್ಣನವರು ‘ಅರಳು’, ‘ಚೇತನ’, ‘ಕಾಡಿನಲ್ಲಿ ಹಿಡಿದ ಗ್ರಹಣ ಗಂಗೆಯಲ್ಲಿ ಬಿಟ್ಟಿತು’, ‘ಬಳ್ಳಿಯ ಹೂ ಬಾಡದಿರಲಿ’ ಕಥಾ ಸಂಕಲನಗಳು ಪ್ರಕಟಿಸುವ ಮೂಲಕ ಜಿಲ್ಲೆಯ ಮುಖ್ಯ ಕಥೆಗಾರರಾಗಿದ್ದಾರೆ. ಆರಂಭದಲ್ಲಿ ನವೋದಯದ ದಟ್ಟ ಪ್ರಭಾವಕ್ಕೆ ಒಳಗಾಗಿದ್ದರೂ ನಂತರ ಹೆಚ್ಚು ಸಮಾಜ ಮತ್ತು ಸಮುದಾಯ ಕೇಂದ್ರಿತ ಕತೆಗಳು ಬರೆದಿದ್ದಾರೆ. ಪ್ರೀತಿ, ಪ್ರೇಮ, ಹತಾಶೆ, ನೆನಪುಗಳು ಒಂದೆಡೆಯಾದರೆ, ವೃದ್ಧಾಪ್ಯದಲ್ಲಿ ದುಡಿಯುವ, ದುಡಿದು ಬದುಕುವ ಅನಿವಾರ್ಯತೆ ಮತ್ತು ಜೀವನದ ಕ್ರೌರ್ಯ ಇವರ ಕತೆಗಳಲ್ಲಿ ಚಿತ್ರಿತಗೊಂಡಿವೆ. ಇವರ ಬಹುತೇಕ ಕತೆಗಳು ಮನೋವಿಶ್ಲೇಷಣಾ ಸಿದ್ಧಾಂತದ ನೆಲೆಯಲ್ಲಿ ರಚನೆಯಾಗಿವೆ. ಸಂಕೀರ್ಣಗೊಂಡ ಧಾರ್ಮಿಕತೆ ಮತ್ತು ಅದರ ಆಚರಣೆಗಳ ಭ್ರಷ್ಟತೆಯನ್ನು ನೇರವಾಗಿ ಪ್ರತಿರೋಧಿಸುವ ಮಟ್ಟದ ಪಾತ್ರಗಳು ಅವರ ಕತೆಗಳಲ್ಲಿ ಕಾಣುವುದಿಲ್ಲ. ಮನೋರೋಗಗಳು ಮೌಢ್ಯದ ರೂಪವಾಗಿ ದೇವರೆದುರಿಗೆ ಅನಾವರಣಗೊಳ್ಳುವ ಬಗೆಯನ್ನು ಮಾತ್ರ ಚಿತ್ರಿಸುವುದು ಕತೆಗಾರರಿಗೆ ಮುಖ್ಯವಾದದ್ದು ಕಾಣುತ್ತದೆ. ಹೀಗೆ ಸುಬ್ಬಣ್ಣನವರ ಕತೆಗಳು ಸಮಾಜದಲ್ಲಿ ಸಂಭವಿಸುವ ಸಂಗತಿಗಳ ಬಗೆಗೆ ನೇರವಾಗಿ ಮಾತನಾಡುತ್ತವೆ.

‘ಬೀದರ ಜಿಲ್ಲೆಯ ಕನ್ನಡ ಭಾಷಾ ಕುಸುಮ’ (1996) ಮತ್ತು ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗ ಪ್ರಕಟಿಸಿದ ‘ಗಡಿನಾಡು ಭಾಷಾ ಸಮಸ್ಯೆ’ ಕೃತಿ ಬರೆದ ಸುಬ್ಬಣ್ಣನವರು ಜಿಲ್ಲೆಯ ಮೊದಲ ಭಾಷಾ ಚಿಂತಕ. ಬೀದರ ಕನ್ನಡ ಭಾಷಾ ಅಧ್ಯಯನಕ್ಕೆ ಈ ಎರಡು ಕೃತಿಗಳು ಪ್ರಧಾನ ಮಾರ್ಗಗಳಾಗುತ್ತವೆ. ಬೀದರ ಕನ್ನಡ ಭಾಷೆಯ ರಚನೆ ಮತ್ತು ಅನ್ಯ ಭಾಷೆಗಳ ಪ್ರಭಾವ ಕುರಿತು ಸೂಕ್ಷ್ಮ ಚಿಂತನೆ ನಡೆಸಿ, ಕ್ಷೇತ್ರ ಕಾರ್ಯ ಕೈಗೊಂಡು ಅಧ್ಯಯನ ಪೂರ್ಣ ಕೃತಿಗಳು ಬರೆದಿದ್ದಾರೆ.

ಆಡುಮಾತಿನಿಂದ ಹಿಡಿದು ವ್ಯವಹಾರ, ಮಾರುಕಟ್ಟೆ, ಆಡಳಿತ, ಗ್ರಂಥಸ್ಥ, ಜನಪದ ಮೊದಲಾದ ಕ್ಷೇತ್ರಗಳಲ್ಲಿ ಬಳಕೆಯಾಗುವ ಭಾಷಾ ಭಿನ್ನತೆಯನ್ನು ಗುರುತಿಸಿ ನಿದರ್ಶನ ಸಹಿತ ವಿವರಿಸಿದ್ದಾರೆ. ಬೀದರ ಕನ್ನಡದ ಮೇಲೆ ಪ್ರಭಾವ ಬೀರಿದ ಪೋರ್ಚುಗೀಸ್, ಅರಬ್ಬಿ, ಉರ್ದು, ಇಂಗ್ಲೀಷ್, ಹಿಂದಿ, ಮರಾಠಿ, ತೆಲಗು ಭಾಷೆಗಳು ಇಲ್ಲಿನ ಕನ್ನಡದೊಂದಿಗೆ ಬೆರೆತ ಕ್ರಮವನ್ನು ವಿವೇಚಿಸಿದ್ದಾರೆ. ಅನ್ಯ ಭಾಷೆ ಬೆರೆಸಿ ಮಾತಾಡುವ ಈ ಪ್ರದೇಶದ ಜನರ ಆಡು ನುಡಿಯಲ್ಲಿ ಕನ್ನಡ ಅಸ್ಮಿತೆಯ ಹುಡುಕಾಟಕ್ಕೆ ತೊಡಗಿದ್ದಾರೆ.

ಡಾ.ಚನ್ನಬಸವ ಪಟ್ಟದ್ದೇವರ ಕುರಿತು ಲೇಖನಗಳ ಸಂಗ್ರಹ ‘ವಿನಯ ಭಂಡಾರಿ’ ಹಾಗೂ ‘ನೀನೊಲಿದರೆ ಕೊರಡು ಕೊನರುವುದಯ್ಯ’ ಕೃತಿಗಳು, ‘ಗುರುತು’, ‘ಅಡ್ಡಗೋಡೆಯ ಮೇಲಿನ ದೀಪ’, ‘ವಿಚಾರಗಳಿಂದ ಸಹಾಯಗಳಿಲ್ಲ’ ಎಂಬ ಪ್ರಬಂಧ ಮತ್ತು ರೇಡಿಯೋ ಚಿಂತನಗಳ ಸಂಗ್ರಹ ಬರೆವ ಮೂಲಕ ಬದುಕಿನ ಪ್ರೀತಿ ಮತ್ತು ಸಾಮಾಜಿಕ ಪ್ರಜ್ಞೆಯ ಬರಹಗಾರರಾಗಿ ನಿಲ್ಲುತ್ತಾರೆ. ಸುಬ್ಬಣ್ಣನವರ ಕತೆಗಳಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಸಾರಾಂಗದ ಜಯತೀರ್ಥ ರಾಜಪುರೋಹಿತ ದತ್ತಿ ಕಥಾ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳು ದೊರೆತಿವೆ. ಭಾಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಇವರು ಕೃಷಿಕರಾಗಿ, ಅಧ್ಯಾಪಕರಾಗಿ, ಕಾದಂಬರಿಕಾರರಾಗಿ, ಭಾಷಾ ಚಿಂತಕರಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....