Homeಮುಖಪುಟಜಸ್ಟ್ ಆಸ್ಕಿಂಗ್: ಹಿಂದೆ ಅಮಿತ್ ‍ಶಾರನ್ನು ಕಸ್ಟಡಿಗೆ ಕಳುಹಿಸಿದ್ದ ಜಸ್ಟೀಸ್ ಖುರೇಷಿಯವರಿಗೆ ಪದೋನ್ನತಿ ಇಲ್ಲ!

ಜಸ್ಟ್ ಆಸ್ಕಿಂಗ್: ಹಿಂದೆ ಅಮಿತ್ ‍ಶಾರನ್ನು ಕಸ್ಟಡಿಗೆ ಕಳುಹಿಸಿದ್ದ ಜಸ್ಟೀಸ್ ಖುರೇಷಿಯವರಿಗೆ ಪದೋನ್ನತಿ ಇಲ್ಲ!

ಅಂದರೆ... ಮತ್ತೊಮ್ಮೆ ಮೋದಿ ಸರ್ಕಾರದ ಒತ್ತಡಕ್ಕೆ ಉನ್ನತ ನ್ಯಾಯಾಂಗ ಮಣಿಯಿತೇ?

- Advertisement -
- Advertisement -

ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನಿನ್ನೆ ಶಿಫಾರಸ್ಸುಗೊಂಡಿರುವ ನ್ಯಾಯಾಧೀಶರುಗಳಿಗಿಂತ ಹಿರಿಯರಾದ ತ್ರಿಪುರ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ಜಸ್ಟೀಸ್ ಖುರೇಷಿ ಯವರನ್ನು ಏಕೆ ಸುಪ್ರೀಂ ನ್ಯಾಯಮೂರ್ತಿಯಾಗಿ ಆಯ್ಕೆ ಮಾಡಲಿಲ್ಲ?

ಮೋದಿ ಸರ್ಕಾರ ಪೆಗಾಸಸ್ ಬೇಹು ತಂತ್ರಜ್ಞಾನ ಖರೀದಿಸಿತ್ತೋ ಇಲ್ಲವೋ ಎಂದು ಉತ್ತರಿಸುವುದು ರಾಷ್ಟ್ರ ಭದ್ರತೆಯ ವಿಷಯವೇ?

ಜಸ್ಟೀಸ್ NV ರಮಣ ಅವರು ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೋದಿ ಸರ್ಕಾರದ ಮುಲಾಜಿಲ್ಲದೆ ಕೊಟ್ಟ ಕೆಲವು ಸ್ವತಂತ್ರ ತೀರ್ಮಾನಗಳು ಉನ್ನತ ನ್ಯಾಯಾಂಗದ ಬಗ್ಗೆ ಮತ್ತೆ ಭರವಸೆಗಳನ್ನು ಮೂಡಿಸಿತ್ತಷ್ಟೇ..

ಆದರೆ ಸುಪ್ರೀಂ ಕೋರ್ಟಿನ ಹಾಗೂ ದೇಶದ ಭವಿಷ್ಯದ ದಿಕ್ಕಿನ ಮೇಲೆ ಪ್ರಭಾವ ಬೀರಬಹುದಾದ ಎರಡು ಪ್ರಮುಖ ನಿರ್ಣಯಗಳಲ್ಲಿ ಮತ್ತೆ ಮೋದಿ ಸರ್ಕಾರದ ಕರಾಳ ನೆರಳುಗಳು ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸುವಂತಿದೆ.

1. ತ್ರಿಪುರಾದ ಮುಖ್ಯ ನ್ಯಾಯಮೂರ್ತಿ ಖುರೇಷಿಯವರನ್ನು ಸುಪ್ರೀಂ ಕೋರ್ಟಿಗೆ ಪದೋನ್ನತಿಗೆ ಪರಿಗಣಿಸದಿರುವುದರ ಹಿಂದಿನ ಕಾರಣವೇನು?

– ಕಳೆದ 22 ತಿಂಗಳಿಂದ ಸುಪ್ರೀಂ ಕೋರ್ಟಿಗೆ ಹೊಸ ನ್ಯಾಯಾಧೀಶರಾರು ನೇಮಕವಾಗಿರಲಿಲ್ಲ. ಏಕೆಂದರೆ ಅದರ ಬಗ್ಗೆ ಶಿಫಾರಸ್ಸು ಮಾಡಬೇಕಿದ್ದ ಸುಪ್ರೀಂ ಕೋರ್ಟಿನ ಐವರು ಅತಿ ಹಿರಿಯ ನ್ಯಾಯಾಧೀಶರ ಕೊಲಿಜಿಯಂ ನಲ್ಲಿ ಒಂದು ಹೆಸರಿನ ಬಗ್ಗೆ ಏಕಾಭಿಪ್ರಾಯವಿರಲಿಲ್ಲ.

ಆ ಹೆಸರು ಈಗ ತ್ರಿಪುರಾದ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿರುವ ನ್ಯಾಯಾಧೀಶ ಅಖಿಲ್ ಖುರೇಷಿಯವರದ್ದು.

ಈಗ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿರುವ ಒಂಭತ್ತು ನ್ಯಾಯಾಧೀಶರಲ್ಲಿ ಬಹುಪಾಲು ನ್ಯಾಯಮೂರ್ತಿಗಳಿಗಿಂತ ಖುರೇಷಿಯವರು ಹಿರಿಯರು. ಆದರೂ ಅವರಿಗ್ಯಾಕೆ ಬಡ್ತಿ ಕೊಡಲಿಲ್ಲ?

ಕಾರಣ ನಿಗೂಢವೇನಲ್ಲ. ಖುರೇಷಿಯವರು ಬಾಂಬೆ ಹೈಕೋರ್ಟಿನ ಹಿರಿಯ ನ್ಯಾಯಾಧೀಶರಾಗಿದ್ದಾಗ ಗುಜರಾತಿನಲ್ಲಿ ಶೊಹ್ರಾಬುದ್ದೀನ್ ಏನ್ಕೌಂಟರ್ ಪ್ರಕರಣದಲ್ಲಿ ಆಪಾದಿತರಾಗಿದ್ದ ಈಗಿನ ಗೃಹಮಂತ್ರಿ ಅಮಿತ್ ಷಾ ರವರನ್ನು ವಿಚಾರಣೆಗೆಂದು ಸಿಬಿಐ ಕಸ್ಟಡಿಗೆ ಒಪ್ಪಿಸಿದ್ದರು.

2014ರಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬಂದ ನಂತರ ಈ ಸೇಡನ್ನು ಕಾಪಿಟ್ಟುಕೊಂಡಿದ್ದ ಮೋದಿ-ಶಾ ಸರ್ಕಾರ ಎಲ್ಲ ಹಂತದಲ್ಲೂ ಖುರೇಷಿಯವರಿಗೆ ತೊಂದರೆ ಕೊಡಲು ಪ್ರಾರಂಭಿಸಿತು.

2019ರಲ್ಲಿ ಖುರೇಷಿಯರನ್ನು 40 ನ್ಯಾಯಾಧೀಶರಿರುವ ಮಧ್ಯಪ್ರದೇಶದ ಹೈಕೋರ್ಟಿಗೆ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ವರ್ಗಾವಣೆ ಮಾಡಿ ಕೊಲಿಜಿಯಂ ಕಳಿಸಿದ್ದ ಶಿಪಾರಸ್ಸನ್ನು ಮೋದಿ ಸರ್ಕಾರ ಒಪ್ಪಿಕೊಳ್ಳಲೇ ಇಲ್ಲ.

ಆ ನಂತರ ಮೋದಿ ಸರ್ಕಾರದ ಒತ್ತಡಕ್ಕೆ ಮಣಿದ ಸುಪ್ರೀಂಕೋರ್ಟ್ ಖುರೇಷಿಯವರನ್ನು ಕೇವಲ 4 ನ್ಯಾಯಾಧೀಶರಿರುವ ತ್ರಿಪುರಾದ ಹೈಕೋರ್ಟಿಗೆ ಮುಖ್ಯ ನ್ಯಾಯಾಧೀಶರಾಗಿ ವರ್ಗಾವಣೆ ಮಾಡಿತು.

ನಂತರ 2020ರಲ್ಲಿ ಸುಪ್ರೀಂ ಕೋರ್ಟಿಗೆ ಹೈಕೋರ್ಟಿನಿಂದ ಪದೋನ್ನತಿ ಪಡೆಯಬೇಕಾದ ಮುಖ್ಯ ನ್ಯಾಯಾಧೀಶರ ಪಟ್ಟಿಯಲ್ಲಿ ಯಾವಾಗಲೂ ಖುರೇಷಿಯವರ ಹೆಸರೇ ಪ್ರಥಮವಾಗಿರುತ್ತಿತ್ತು.

ಆದರೆ ಆಗಿನ ಮುಖ್ಯ ನ್ಯಾಯಾಧೀಶರಾಗಿದ್ದ ಬೋಬಡೆಯವರು ನ್ಯಾಯದ ಪ್ರತಿನಿಧಿಯಾಗದೆ ಮೋದಿಯ ಪ್ರತಿನಿಧಿಯಾಗಿ ವರ್ತಿಸುತ್ತಾ ಖುರೇಷಿಯವರ ಹೆಸರನ್ನು ಕೈಬಿಟ್ಟು ಉಳಿದವರನ್ನು ಸೂಚಿಸುತ್ತಿದ್ದರು.

ಆದರೆ the wire ನಂತ ಕೆಲವು ಪತ್ರಿಕೆಗಳ ಅಧ್ಯಯನ ವರದಿಗಳು ಸೂಚಿಸುವಂತೆ, ಆಗ ಸುಪ್ರೀಂ ಕೋರ್ಟಿನ ಕೊಲಿಜಿಯಂನಲ್ಲಿದ್ದ ನ್ಯಾಯಮೂರ್ತಿ ರೊಹಿಂಗ್ಟನ್ ನಾರಿಮನ್ ಅವರು ಈ ಅನ್ಯಾಯವನ್ನು ಖಡಾಖಂಡಿತವಾಗಿ ವಿರೋಧಿಸುತ್ತ ಬಂದಿದ್ದರು.

ಹೀಗಾಗಿ ನಾರಿಮನ್ ಅವರು ಕೊಲಿಜಿಯಂನಲ್ಲಿ ಇರುವ ತನಕ ಖುರೇಶಿಯವರ ಜೊತೆಗೆ ಯಾರ ಪದೋನ್ನತಿಯೂ ಆಗಿರಲಿಲ್ಲ. ಮೊನ್ನೆ ಆಗಸ್ಟ್ 12 ರಂದು ನಾರಿಮನ್ ಅವರು ನಿವೃತ್ತರಾದರು.

ಅವರ ನಿವೃತ್ತಿಯೊಂದಿಗೆ ಮುಖ್ಯ ನ್ಯಾಯಮೂರ್ತಿ ರಮಣ, ನ್ಯಾಯಮೂರ್ತಿ ಕಾನ್ವಿಲ್ಕರ್, ಲಲಿತ್, ಚಂದ್ರಚೂಡ್, ಮತ್ತು ನಾಗೇಶ್ವರರಾವ್ ಅವರನ್ನೊಳಗೊಂಡ ಹೊಸ ಕೊಲಿಜಿಯಂ ರೂಪುಗೊಂಡಿತು.

ನ್ಯಾಯಮೂರ್ತಿ ನಾರಿಮನ್ ಇಲ್ಲದ ಹೊಸ ಕೊಲಿಜಿಯಂನ ಮೊತ್ತ ಮೊದಲ ಸಭೆಯಲ್ಲೇ ಅತ್ಯಂತ ಹಿರಿಯರಾದ ನ್ಯಾಯಮೂರ್ತಿ ಖುರೇಷಿಯವರನ್ನು ಕೈಬಿಟ್ಟು ಅವರಿಗಿಂತ ಕಿರಿಯರಾದ ಒಂಭತ್ತು ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟಿಗೆ ಆಯ್ಕೆ ಮಾಡಲಾಗಿದೆ.

ನ್ಯಾಯಮೂರ್ತಿ ಖುರೇಷಿಯವರನ್ನು ಕೈಬಿಟ್ಟಿರುವುದಕ್ಕೆ ಯಾವ ಕಾರಣವನ್ನು ಈವರೆಗೆ ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶರ ಕೊಲಿಜಿಯಂ ಒದಗಿಸಿಲ್ಲ.

ಅಂದರೆ… ಮತ್ತೊಮ್ಮೆ ಮೋದಿ ಸರ್ಕಾರದ ಒತ್ತಡಕ್ಕೆ ಉನ್ನತ ನ್ಯಾಯಾಂಗ ಮಣಿಯಿತೇ?

2. ಪೆಗಾಸಸ್ ಅನ್ನು ಭಾರತ ಸರ್ಕಾರ ಖರೀದಿಸಿದೆಯೇ ಇಲ್ಲವೇ ಎಂಬ ಮಾಹಿತಿ ದೇಶದ ಭದ್ರತೆಯ ವಿಷಯವೇ?

– ಪೆಗಾಸಸ್ ಗೂಢಚರ್ಯೆ ಪ್ರಕರಣ ಹೇಗೆ ಈ ದೇಶದ ಸಾರ್ವಭೌಮತೆ ಯನ್ನೂ ಹಾಗು ಈ ದೇಶದ ಮಾಧ್ಯಮ ಹಾಗೂ ಭಿನ್ನಮತದ ಸ್ವಾತಂತ್ರ್ಯವನ್ನು ಉಲ್ಲಂಘಿಸಿದೆ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ .

ಈಗ ಆ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿ ರಮಣ ಅವರ ಪೀಠದ ಮುಂದಿದೆ.

ಮೋದಿ ಸರ್ಕಾರ ಈ ಪ್ರಕರಣದಲ್ಲಿ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ.

ಏಕೆಂದರೆ ಈಗಾಗಲೇ ಪೆಗಾಸಸ್ ಅನ್ನು ಬಳಸಿ ಕೆಲವು ಪತ್ರಕರ್ತರ ಮೇಲೆ ಬೇಹುಗಾರಿಕೆ ನಡೆಸಿರುವುದಕ್ಕೆ ನಿರಾಕರಿಸಲಾಗದ ಪುರಾವೆಗಳು ಸಿಕ್ಕಿದೆ. ಮತ್ತೊಂದು ಕಡೆ ಪೆಗಾಸಸ್ ಮಾರುವ ಇಸ್ರೇಲಿನ NSO ಕಂಪನಿ ಅದನ್ನು ಸರ್ಕಾರಗಳಿಗೆ ಮಾತ್ರವೇ ಮಾರಿರುವುದಾಗಿ ಸ್ಪಷ್ಟಪಡಿಸಿದೆ.

ಹೀಗಾಗಿ ಭಾರತದಲ್ಲಿ ಪೆಗಾಸಸ್ ಬಳಕೆಯಾಗಿದೆ ಎಂದರೆ ಅದನ್ನು ಭಾರತ ಸರ್ಕಾರವೇ ಖರೀದಿಸಿರಬೇಕು. ಹೀಗಾಗಿ ಪತ್ರಕರ್ತರ ಮೇಲೆ ಬೇಹುಗಾರಿಕೆ ನಡೆಸಲು ಸರ್ಕಾರವೇ ಬಳಸಿರಬೇಕು.

ಆದರೆ ಇದಕ್ಕೆ ಯಾವುದೇ ಕಾನೂನಿನ ಬೆಂಬಲವಿಲ್ಲ. ಹೀಗಾಗಿ ಸರ್ಕಾರ ಮಾಡಿದ್ದರೆ ಅದು ಕಾನೂನು ಬಾಹಿರ, ಸಂವಿಧಾನ ವಿರೋಧಿ…

ಹೀಗಾಗಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿರುವ ಅರ್ಜಿದಾರರು ಭಾರತ ಸರ್ಕಾರವು ಪೆಗಾಸಸ್ ಅನ್ನು ಖರೀದಿಸಿದೆಯೋ ಇಲ್ಲವೋ ಎಂಬ ಸರಳ ಪ್ರಶ್ನೆಗೆ ಮೋದಿ ಸರ್ಕಾರದಿಂದ ಉತ್ತರ ಬಯಸುತ್ತಿದ್ದಾರೆ…

ಆದರೆ ಸರ್ಕಾರ ಆ ಮಾಹಿತಿ ದೇಶದ ಭದ್ರತೆಗೆ ಸಂಬಂಧಪಟ್ಟ ವಿಷಯವಾದ್ದರಿಂದ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಜಾರಿಕೊಳ್ಳುತ್ತಿದೆ.

ಈ ಬಗ್ಗೆ ಪ್ರಶ್ನಿಸುವ ಅಧಿಕಾರ ಹೊಂದಿರುವ ಸದನದ ಸಮಿತಿಯ ಮುಂದೆ ಅಧಿಕಾರಿಗಳು ಹಾಜರಾಗದಂತೆ ತಡೆಯುತ್ತಿದೆ. ಮತ್ತೊಂದು ಕಡೆ ಬೇಕಿದ್ದರೆ ಈ ವಿಷಯದ ಬಗ್ಗೆ ತನಿಖೆ ಮಾಡಲು ಸಿದ್ಧ ಎಂದು ಹೇಳುತ್ತಿದೆ.

ಅಂದರೆ ತಾನು ಮಾಡಿರಬಹುದಾದ ಅಪರಾಧದ ಬಗ್ಗೆ ತಾನೇ ‘ಆತ್ಮನಿರ್ಭರ’ ತನಿಖೆ ಮಾಡಿಕೊಳ್ಳುವುದು! ಈ ವಾದ ಮೋದಿ ಸರ್ಕಾರ ಎದುರಾಗಿರುವ ಕುತ್ತಿನಿಂದ ಬಚಾವಾಗಲು ಬಳಸುತ್ತಿರುವ ತಂತ್ರ ಎಂದು ಎಂಬುದು ಸ್ಪಷ್ಟ.

ಹೀಗಾಗಿ ದೇಶದ ಸಾರ್ವಭೌಮತೆಗೆ ಸಂಬಂಧಪಟ್ಟ ಈ ವಿಷಯದಲ್ಲಿ ಸುಪ್ರೀಂಕೋರ್ಟ್ ಸರ್ಕಾರದ ಬಗ್ಗೆ ಕಠಿಣ ನಿಲುವು ತಳೆಯಬಹುದು ಎಂದು ನಿರೀಕ್ಷಿಸಲಾಗಿತ್ತು.

ಆದರೆ ಮುಖ್ಯ ನ್ಯಾಯಮೂರ್ತಿಗಳ ಪೀಠ ಈ ಬಗ್ಗೆ ಸರ್ಕಾರ ಮುಂದಿಟ್ಟಿರುವ ಆಳವಾದ ತನಿಖೆಯ ಪ್ರಸ್ತಾಪದಿಂದ ತೃಪ್ತವಾದಂತೆ ಕಾಣುತ್ತಿದೆ.

ಹಾಗೂ “ದೇಶದ ಭದ್ರತೆಗೆ ಸಂಬಂಧಪಟ್ಟ ವಿಷಯದ ಬಗ್ಗೆ ಯಾವುದೇ ಮಾಹಿತಿಯನ್ನು ಕೊಡಬೇಕೆಂದು ಕೋರ್ಟು ಕಡ್ಡಾಯ ಮಾಡುವುದಿಲ್ಲ” ವೆಂದು ಭರವಸೆಯನ್ನೂ ನೀಡಿದೆ.

ಆ ಮೂಲಕ, ಮೋದಿ ಸರ್ಕಾರ ದೇಶದ ಭದ್ರತೆಯ ವಿಷಯದಲ್ಲಿ ಮಾಡಿರಬಹುದಾದ ಅಪರಾಧದಿಂದ ಬಚಾವಾಗಲು ಸುಪ್ರೀಂ ಕೋರ್ಟು ಅವಕಾಶ ಕೊಟ್ಟಂತಾಗಲಿಲ್ಲವೇ?

ಪೆಗಾಸಸ್ ಅನ್ನು ಬಳಸಿ ಯಾರ್ಯಾರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ವಿವರ ಹೇಳುವುದು ದೇಶದ ಭದ್ರತೆಗೆ ಸಂಬಂಧಪಟ್ಟ ವಿಷಯವಾಗಬಹುದಾಗಲೀ, ಪೆಗಾಸಸ್ ಅನ್ನು ದೇಶ ಕೊಂಡಿದೆಯೋ ಇಲ್ಲವೋ ಎಂಬುದು ಹೇಗೆ ದೇಶ ಭದ್ರತೆಯ ವಿಷಯವಾದೀತು?

ಅದರಲ್ಲೂ ಮೋದಿ ನಿಲುವುಗಳನ್ನು ವಿರೋಧಿಸುವ ಪತ್ರಕರ್ತರ ಮೇಲೆ ನಡೆಸುವ ಬೇಹುಗಾರಿಕೆ ದೇಶರಕ್ಷಣೆಯ ವಿಷಯ ಹೇಗಾದೀತು?

ಇತ್ತೀಚಿನ ಈ ಎರಡು ಪ್ರಕರಣಗಳು ಏನಾದರೂ ಸಂದೇಶ ಕೊಡುತ್ತಿವೆಯೇ?

ಮುಖ್ಯ ನ್ಯಾಯಮೂರ್ತಿ ರಮಣ ಹಾಗೂ ನ್ಯಾಯಮೂರ್ತಿ ಚಂದ್ರಚೂಡರ ಸ್ವತಂತ್ರ ನ್ಯಾಯ ನಿರ್ಣಯಗಳು ಸುಪ್ರೀಂಕೋರ್ಟಿನ ಬಗ್ಗೆ ಹುಟ್ಟಿಸಿದ್ದ ಭರವಸೆಗಳು ಉತ್ಪ್ರೇಕ್ಷಿತವಾಗಿದ್ದವೇ?

ಶಿವಸುಂದರ್


ಇದನ್ನೂ ಓದಿ: ಇತಿಹಾಸ ಮತ್ತು ಪ್ರಸ್ತುತದ ಹಲವು ’ಹಾರರ್‌’ಗಳ ನಡುವೆ ಬದುಕುತ್ತಿರುವ ನಾವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...