Homeಕರ್ನಾಟಕಕಾರವಾರ ಕಿಮ್ಸ್‌ ವಿಧಿ ವಿಜ್ಞಾನ ವಿಭಾಗದಲ್ಲಿ ಅಕ್ರಮ ನೇಮಕಾತಿ; ವೈದ್ಯಕೀಯ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿರುವುದೇಕೆ?

ಕಾರವಾರ ಕಿಮ್ಸ್‌ ವಿಧಿ ವಿಜ್ಞಾನ ವಿಭಾಗದಲ್ಲಿ ಅಕ್ರಮ ನೇಮಕಾತಿ; ವೈದ್ಯಕೀಯ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿರುವುದೇಕೆ?

- Advertisement -
- Advertisement -

ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಿಮ್ಸ್‌ನಲ್ಲಿ ಅಕ್ರಮ ನೇಮಕಾತಿ, ಅವ್ಯವಹಾರ ಎಡೆಬಿಡದೆ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಡಾ. ಗಜಾನನ ನಾಯಕ್ ಡೀನ್ ಕಮ್ ಡೈರೆಕ್ಟರ್ ಆಗಿಬಂದ ನಂತರ ಕಿಮ್ಸ್‌ನಲ್ಲಿ ಆರ್ಥಿಕ ಅನುದಾನ ದುರ್ಬಳಕೆ ಮಿತಿ ಮೀರಿದೆಯೆಂದು ಅದೇ ಸಂಸ್ಥೆಯಲ್ಲಿ ಅಧೀಕ್ಷಕಿಯಾಗಿದ್ದ ವೀಣಾ ಪಾಟೀಲ್ ಜಿಲ್ಲಾಧಿಕಾರಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಬರೋಬ್ಬರಿ ಏಳು ಪುಟಗಳ ದೂರು ಕೊಟ್ಟಿದ್ದೂ ಆಗಿದೆ.

ಅಕ್ರಮ ನೇಮಕಾತಿ ಮನಸೋ ಇಚ್ಚೆ ಡೈರೆಕ್ಟರ್ ಸಾಹೇಬರು ಮಾಡಿಮುಗಿಸಿದ್ದಾರೆಂದು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ. ಸುಮಾರು 100 ತಾಂತ್ರಿಕ ಸಿಬ್ಬಂದಿ ಕಿಮ್ಸ್‌ಗೆ ಅತೀ ಜರೂರ್ ಇರುವಾಗ ಲಾಭದಾಯಕವಾದ ತಾತ್ಕಾಲಿಕ ಸ್ವಚ್ಚತಾಗಾರ, ಕಾವಲುಗಾರ ನೇಮಕಾತಿ ಮಾಡಿಕೊಳ್ಳಲಾಗಿದೆ. 80 ಸ್ವಚ್ಛತಾ ಕರ್ಮಚಾರಿಗಳು ಮತ್ತು 30 ಕಾವಲುಗಾರರು ಇದ್ದರೂ ಸಹ ಸುಮಾರು 90 ಅನಾವಶ್ಯಕ ನೇಮಕಾತಿ ನಡೆದಿದೆ. 2021ರ ಜನವರಿಯಲ್ಲಿ ನೇಮಕವಾಗಿರುವ ಈ ಅನರ್ಹರಿಗೆ 2019ರ ಅಕ್ಟೋಬರ್‌ನಿಂದ ಪೂರ್ವಾನ್ವಯವಾಗುವಂತೆ ಸಂಬಳ ನೀಡಲಾಗಿದೆ. ಈ ಮೂರು ತಿಂಗಳ ವೇತವೇ ಹತ್ತಿರತ್ತಿರ 75 ಲಕ್ಷ. ಇದು ಸರ್ಕಾರಿ ಬೊಕ್ಕಸಕ್ಕೆ ಹೊರೆಯೆಂದು ದೂರಲಾಗಿದೆ.

ಡೀನ್ ಡಾ. ಗಜಾನನ ನಾಯಕ್ ಮಾಡಿರುವ ಹಲವು ನೇಮಕಾತಿಗಳಿಗೆ ಹಣಕಾಸು ಇಲಾಖೆಯಿಂದಾಗಲಿ, ಇನ್ನಿತರ ಸಕ್ಷಮ ಪ್ರಾಧಿಕಾರದ್ದಾಗಲಿ ಅನುಮತಿ ಇಲ್ಲ. ತಾತ್ಕಾಲಿಕ ಮತ್ತು ಖಾಯಂ ಬೊಧಕ ಸಿಬ್ಬಂದಿ ನೇಮಕಾತಿ ಎಲ್ಲ ನೀತಿ-ನಿಯಮ ಉಲ್ಲಂಘಿಸಿ ನಡೆಸಲಾಗುತ್ತಿದೆ. ಸರ್ಕಾರದಿಂದ ಮಂಜೂರಾತಿಯಿಲ್ಲದ ಹುದ್ದೆಗಳನ್ನು ಹುಟ್ಟು ಹಾಕುವುದರಲ್ಲಿ ಈ ಡೈರೆಕ್ಟರ್ ನಿಸ್ಸೀಮನೆನ್ನುವ ಅಧೀಕ್ಷಕಿ ವೀಣಾ ಪಾಟೀಲ್ ತಾನು ಡೀನ್ ಹೇಳಿದಂತೆ ಕೇಳುವುದಿಲ್ಲವೆಂಬ ಕಾರಣಕ್ಕೆ ತನ್ನ ಕೈಲಿದ್ದ ಆರ್ಥಿಕ ವ್ಯವಹಾರ ಮತ್ತು ನಗದು ವಿಭಾಗ ಬೇರೆಯವರಿಗೆ ವಹಿಸಿದ್ದಾರೆ; ಅಷ್ಟೇ ಅಲ್ಲ, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿಲ್ಲದ ’ಹಿರಿಯ ಕಚೇರಿ ಅಧೀಕ್ಷಕಿ’ ಎಂಬ ಬಿರುದು ದಯಪಾಲಿಸಿದ್ದಾರೆಂದು ಆರೋಪಿಸಿದ್ದಾರೆ.

ಡೀನ್ ಡಾ. ಗಜಾನನ ನಾಯಕ್

ಡೀನ್ ಡಾ. ನಾಯಕ್ ತಮ್ಮ ಪರಮಾಪ್ತ ಶಿಷ್ಯೆ ಡಾ.ಮಹಾಲಕ್ಷ್ಮಿ ಕರ್ಲವಾಡ್‌ರನ್ನು ಮೀಸಲಾತಿ ಹಾಗು ನೇಮಕಾತಿ ನಿಯಮಗಳನ್ನೆಲ್ಲ ಧಿಕ್ಕರಿಸಿ ವಿಧಿ ವಿಜ್ಞಾನ ಶಾಸ್ತ್ರ [ಫಾರೆನ್ಸಿಕ್ ಸೈನ್ಸ್] ವಿಭಾಗದ ಸಹಾಯಕ ಅಧ್ಯಾಪಕಿಯಾಗಿ ನೇಮಿಸಿರುವುದು ದೊಡ್ಡ ವಿವಾದ ಹುಟ್ಟು ಹಾಕಿದೆ. ಫೊರೆನ್ಸಿಕ್ ವಿಭಾಗದಲ್ಲಿ ಹುದ್ದೆ ಖಾಲಿಯಿಲ್ಲದಿದ್ದರೂ, ಅವಶ್ಯಕತೆಯಿಲ್ಲದಿದ್ದರೂ ಈ ನೇಮಕಾತಿ ಮಾಡಿಕೊಳ್ಳಲಾಗಿದೆಯೆಂದು ಹೆಸರು ಹೇಳಿಕೊಳ್ಳದ ನೌಕರರು ಹೇಳುತ್ತಾರೆ. ಕೆಲವು ತಿಂಗಳ ಹಿಂದೆ ಆ ಅಧ್ಯಾಪಕಿಗೆ ಯಾವುದೇ ನಿಯಮ ಬದ್ದ ಪ್ರಕಿಯೆಯಿಲ್ಲದೆ ಖಾಯಂ ಮಾಡಿ ಲಕ್ಷಗಟ್ಟಲೆ ಸಂಬಳ ಬರುವಂತೆ ನೋಡಿಕೊಳ್ಳಲಾಗಿದೆ!

ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ ಖಾಯಂ ಅಧ್ಯಾಪಕರ ನೇಮಿಸುವಾಗ ವೈದ್ಯಕೀಯ ಶಿಕ್ಷಣ ಇಲಾಖೆಯ ಅನುಮತಿ, ಅನುಮೋದನೆ ಮತ್ತು ಆದೇಶವಿರಲೇಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ಆದರೆ ಡಾ.ಮಹಾಲಕ್ಷ್ಮಿ ಕರ್ಲವಾಡ್‌ರ ನೇಮಕಾತಿಯಲ್ಲಿ ಈ ನಿಯಮಗಳ್ಯಾವುದನ್ನು ಪ್ರಜ್ಞಾಪೂರ್ವಕವಾಗೆ ಪಾಲಿಸಿಲ್ಲ ಎನ್ನಲಾಗಿದೆ. ತರಾತುರಿಯಲ್ಲಿ ಈ ನೇಮಕಾತಿ ನಡೆಸಲಾಗಿದ್ದು, ಡಾ.ನಾಯಕ್ ಕಿಮ್ಸ್ ನಿರ್ದೇಶಕರಾಗಿ ಬಂದ ಒಂದೇ ತಿಂಗಳಲ್ಲಿ ಅಂದರೆ 07-02-2020ರಂದು ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಫೊರೆನ್ಸಿಕ್ ಸೈನ್ಸ್ ವಿಭಾಗದಲ್ಲಿ ಪರಿಶಿಷ್ಟ ಪಂಗಡದ ಮಹಿಳೆಗೆ ಬ್ಯಾಕ್‌ಲಾಗ್‌ನಲ್ಲಿ ಒಂದು ಸಹಾಯಕ ಪ್ರಾಧ್ಯಾಪಕಿ ಹುದ್ದಗೆ ಅರ್ಜಿ ಕರೆಯಲಾಗಿದೆ. ವಾಸ್ತವಿಕವಾಗಿ ಕಿಮ್ಸ್‌ನಲ್ಲಿ ಇಂತದೊಂದು ಹುದ್ದೆ ಖಾಲಿಯಿರುವುದಿಲ್ಲ.

ಹಿಂದಿನ ನೇಮಕಾತಿ ಪ್ರಕಟಣೆಯಲ್ಲಿ ಸೂಚಿಸಿದ್ದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹುದ್ದೆಗಳು ಭರ್ತಿಯಾಗದಿದ್ದರಷ್ಟೇ ಅದನ್ನು ಮುಂದಿನ ಅಧಿಸೂಚನೆಯಲ್ಲಿ ಬ್ಯಾಕ್‌ಲಾಗ್ ಎಂದು ಪರಿಗಣಿಸಲಾಗುತ್ತದೆ. ಆದರೆ 8-8-2019 ಮತ್ತು 12-12-2019ರ ನೇಮಕಾತಿ ಪ್ರಕಟಣೆಯಲ್ಲಿ ಸದ್ರಿ ಹುದ್ದೆಯ ಪ್ರಸ್ತಾಪವೇ ಇಲ್ಲ. ಆದರೂ ಫೊರೆನ್ಸಿಕ್ ಸೈನ್ಸ್ -ಅಸಿಸ್ಟೆಂಟ್ ಪ್ರೊಫೆಸರ್ ಎಸ್‌ಟಿ ಲೇಡಿ ಬ್ಯಾಕ್ ಲಾಗ್ ಎಂದು ಸುಳ್ಳು ನಮೂದಿಸಲಾಗಿದೆ! ಕಿಮ್ಸ್‌ನಲ್ಲಿ ಒಟ್ಟೂ 49 ಸಹಾಯಕ ಅಧ್ಯಾಪಕ ಹುದ್ದೆಗಳಿವೆ. ಮೀಸಲಾತಿ ಅನುಪಾತದಂತೆ ಇದರಲ್ಲಿ ಎಸ್‌ಟಿ ವರ್ಗಕ್ಕೆ ಎರಡು ಹುದ್ದೆ ಮೀಸಲಿರಬೇಕು. ಡಾ.ಆಂಜನೇಯ ಎಸ್‌ಟಿ ಪುರುಷ ಮತ್ತು ಭಾಗ್ಯ ಶ್ರೀ ಬೋಯರ್ ಎಸ್‌ಟಿ ಮಹಿಳೆ ಕೋಟಾದಲ್ಲಿ ಆಯ್ಕೆಯಾಗಿದ್ದಾರೆ. ಹೀಗಾಗಿ ಸಧ್ಯ ಎಸ್‌ಟಿ ಪ್ರವರ್ಗದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅವಕಾಶವಿಲ್ಲ. ವಿಧಿವಿಜ್ಞಾನ ವಿಭಾಗಕ್ಕೆ ಮಂಜೂರಾಗಿರುವುದು ಒಂದೇ ಒಂದು ಸಹಾಯಕ ಪ್ರಾಧ್ಯಾಪಕ ಸ್ಥಾನ. ಇದೂ ಕೂಡ ಭರ್ತಿಯಾಗಿದೆ. ಆದ್ದರಿಂದ ಮತ್ತೊಂದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆ ನಡೆಸುವಂತಿಲ್ಲ.

ಇದೆಲ್ಲ ಮರೆಮಾಚಿ ನೇಮಕಾತಿಗೆ ರಹಸ್ಯ ಅಧಿಸೂಚನೆ ಹೊರಡಿಸಲಾಗಿದೆ. ಇದೊಂದು ರಾಜ್ಯ ಮಟ್ಟದ ಆಯ್ಕೆಯಾದ್ದರಿಂದ ರಾಜ್ಯ ಮಟ್ಟದ ಎರಡು ದಿನ ಪತ್ರಿಕೆ [ಒಂದು ಕನ್ನಡ ಮತ್ತೊಂದು ಇಂಗ್ಲಿಷ್] ಎಲ್ಲಾ ಆವೃತ್ತಿಯಲ್ಲಿ ಜಾಹೀರಾತು ನೀಡಬೇಕು. ಆದರೆ ಸ್ಥಳೀಯ ಪತ್ರಿಕೆಯಲ್ಲಷ್ಟೇ ಪ್ರಕಟಣೆ ಬರುವಂತೆ ನೋಡಿಕೊಳ್ಳಲಾಗಿದೆ. ಹೈದರಾಬಾದ್ ಕರ್ನಾಟಕ ಪ್ರದೇಶದವರಿಗೆ ನೀಡಬೇಕಾದ 371 [ಜೆ]ದಂತೆ ಶೇ.8 ಮೀಸಲಾತಿಗೂ ಆಸ್ಪದ ಕೊಡದೆ ಸರ್ಕಾರಿ ಆದೇಶ ಧಿಕ್ಕರಿಸಲಾಗಿದೆ.

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ ನಂತರ ಆಕ್ಷೇಪಗಳಿಗೆ ಕನಿಷ್ಟ 15 ದಿನ ಕಾಲಾವಕಾಶ ಕೊಡಬೇಕು. ಅಂತಿಮ ಆಯ್ಕೆ ಪಟ್ಟಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಅನುಮೋದನೆ ಪಡೆದು ನೇಮಕಾತಿ ಆದೇಶ ಕೊಡಬೇಕು. ಆದರೆ ಕಿಮ್ಸ್‌ನ ಫೊರೆನ್ಸಿಕ್ ಪ್ರಾಧ್ಯಾಪಕಿ ನೇಮಕಾತಿ ಪ್ರಹಸನದಲ್ಲಿ 17-02-2020ರಂದು ಸಂದರ್ಶನ ನಡೆಸಿದಂತೆ ದಾಖಲೆ ಸೃಷ್ಟಿಸಲಾಗಿದೆ. 20-07-2020ರಂದು ಡಾ.ಮಹಾಲಕ್ಷ್ಮಿ ಕರ್ಲವಾಡ್‌ಗೆ ನೇಮಕಾತಿ ಆದೇಶ ಸಿಕ್ಕಿಬಿಟ್ಟಿದೆ! ತಾತ್ಕಾಲಿಕ ಪಟ್ಟಿ ಪ್ರಕಟವಾದಂದೇ ನೇಮಕಾತಿಯೂ ನಡೆದುಹೋಗಿದೆ!! ಆಕ್ಷೇಪಣೆಗೆ ಯಾವ ಅವಕಾಶವು ಕೊಟ್ಟಿಲ್ಲ. ಈ ಆದೇಶಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಅನುಮೋದನೆಯೂ ಇಲ್ಲ. ಹಾಗಾಗಿ ಈ ನೇಮಕಾತಿಗೆ ಯಾವುದೆ ಸಿಂಧುತ್ವವಿಲ್ಲ. ಇಡೀ ಖೋಟಾ ಪ್ರಕ್ರಿಯೆಯಲ್ಲಿ ಕಿಮ್ಸ್ ನಿರ್ದೇಶಕ ಡಾ.ನಾಯಕ್ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಿಲ್‌ಕುಮಾರ್‌ರನ್ನು ಯಾಮಾರಿಸಿದರೋ? ಅಥವಾ ಅನಿಲ್‌ಕುಮಾರ್ ಗೊತ್ತಿದ್ದೂ ಸುಮ್ಮನಿದ್ದಾರೋ ಅರ್ಥವಾಗುವುದಿಲ್ಲವೆಂದು ಕಿಮ್ಸ್‌ನಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ಮಂತ್ರಿ ಡಾ.ಸುಧಾಕರ್‌ಗೆ ಕಿಮ್ಸ್‌ನ ಅಕ್ರಮ ನೇಮಕಾತಿ ಬಗ್ಗೆ ತಿಳಿದಿದೆಯೇ? ಇನ್ನಾದರು ಸಂಬಂಧಿಸಿದವರು ಎಚ್ಚೆತ್ತು ಪರಿಶಿಷ್ಟ ಪಂಗಡ ಅರ್ಹರಿಗಾದ ಅನ್ಯಾಯ ಸರಿಪಡಿಸುವರಾ? ಅನುದಾನಗಳು ಪೋಲಾಗುತ್ತಿರುವುದು, ಆಗುತ್ತಿರುವ ಆಧ್ವಾನಗಳ ತನಿಖೆ ನಡೆಸುವರಾ? ಕಾದು ನೋಡಬೇಕು.


ಇದನ್ನೂ ಓದಿ: ಕಾರವಾರ: ಕಾಂಗ್ರೆಸ್ ಕಾರ್ಯಕರ್ತನಿಗೆ PSIನಿಂದ ಥಳಿತ ಆರೋಪ – ಠಾಣೆಗೆ ಮುತ್ತಿಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....