Homeಕರ್ನಾಟಕಕಾರವಾರ ಕಿಮ್ಸ್‌ ವಿಧಿ ವಿಜ್ಞಾನ ವಿಭಾಗದಲ್ಲಿ ಅಕ್ರಮ ನೇಮಕಾತಿ; ವೈದ್ಯಕೀಯ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿರುವುದೇಕೆ?

ಕಾರವಾರ ಕಿಮ್ಸ್‌ ವಿಧಿ ವಿಜ್ಞಾನ ವಿಭಾಗದಲ್ಲಿ ಅಕ್ರಮ ನೇಮಕಾತಿ; ವೈದ್ಯಕೀಯ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿರುವುದೇಕೆ?

- Advertisement -
- Advertisement -

ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಿಮ್ಸ್‌ನಲ್ಲಿ ಅಕ್ರಮ ನೇಮಕಾತಿ, ಅವ್ಯವಹಾರ ಎಡೆಬಿಡದೆ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಡಾ. ಗಜಾನನ ನಾಯಕ್ ಡೀನ್ ಕಮ್ ಡೈರೆಕ್ಟರ್ ಆಗಿಬಂದ ನಂತರ ಕಿಮ್ಸ್‌ನಲ್ಲಿ ಆರ್ಥಿಕ ಅನುದಾನ ದುರ್ಬಳಕೆ ಮಿತಿ ಮೀರಿದೆಯೆಂದು ಅದೇ ಸಂಸ್ಥೆಯಲ್ಲಿ ಅಧೀಕ್ಷಕಿಯಾಗಿದ್ದ ವೀಣಾ ಪಾಟೀಲ್ ಜಿಲ್ಲಾಧಿಕಾರಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಬರೋಬ್ಬರಿ ಏಳು ಪುಟಗಳ ದೂರು ಕೊಟ್ಟಿದ್ದೂ ಆಗಿದೆ.

ಅಕ್ರಮ ನೇಮಕಾತಿ ಮನಸೋ ಇಚ್ಚೆ ಡೈರೆಕ್ಟರ್ ಸಾಹೇಬರು ಮಾಡಿಮುಗಿಸಿದ್ದಾರೆಂದು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ. ಸುಮಾರು 100 ತಾಂತ್ರಿಕ ಸಿಬ್ಬಂದಿ ಕಿಮ್ಸ್‌ಗೆ ಅತೀ ಜರೂರ್ ಇರುವಾಗ ಲಾಭದಾಯಕವಾದ ತಾತ್ಕಾಲಿಕ ಸ್ವಚ್ಚತಾಗಾರ, ಕಾವಲುಗಾರ ನೇಮಕಾತಿ ಮಾಡಿಕೊಳ್ಳಲಾಗಿದೆ. 80 ಸ್ವಚ್ಛತಾ ಕರ್ಮಚಾರಿಗಳು ಮತ್ತು 30 ಕಾವಲುಗಾರರು ಇದ್ದರೂ ಸಹ ಸುಮಾರು 90 ಅನಾವಶ್ಯಕ ನೇಮಕಾತಿ ನಡೆದಿದೆ. 2021ರ ಜನವರಿಯಲ್ಲಿ ನೇಮಕವಾಗಿರುವ ಈ ಅನರ್ಹರಿಗೆ 2019ರ ಅಕ್ಟೋಬರ್‌ನಿಂದ ಪೂರ್ವಾನ್ವಯವಾಗುವಂತೆ ಸಂಬಳ ನೀಡಲಾಗಿದೆ. ಈ ಮೂರು ತಿಂಗಳ ವೇತವೇ ಹತ್ತಿರತ್ತಿರ 75 ಲಕ್ಷ. ಇದು ಸರ್ಕಾರಿ ಬೊಕ್ಕಸಕ್ಕೆ ಹೊರೆಯೆಂದು ದೂರಲಾಗಿದೆ.

ಡೀನ್ ಡಾ. ಗಜಾನನ ನಾಯಕ್ ಮಾಡಿರುವ ಹಲವು ನೇಮಕಾತಿಗಳಿಗೆ ಹಣಕಾಸು ಇಲಾಖೆಯಿಂದಾಗಲಿ, ಇನ್ನಿತರ ಸಕ್ಷಮ ಪ್ರಾಧಿಕಾರದ್ದಾಗಲಿ ಅನುಮತಿ ಇಲ್ಲ. ತಾತ್ಕಾಲಿಕ ಮತ್ತು ಖಾಯಂ ಬೊಧಕ ಸಿಬ್ಬಂದಿ ನೇಮಕಾತಿ ಎಲ್ಲ ನೀತಿ-ನಿಯಮ ಉಲ್ಲಂಘಿಸಿ ನಡೆಸಲಾಗುತ್ತಿದೆ. ಸರ್ಕಾರದಿಂದ ಮಂಜೂರಾತಿಯಿಲ್ಲದ ಹುದ್ದೆಗಳನ್ನು ಹುಟ್ಟು ಹಾಕುವುದರಲ್ಲಿ ಈ ಡೈರೆಕ್ಟರ್ ನಿಸ್ಸೀಮನೆನ್ನುವ ಅಧೀಕ್ಷಕಿ ವೀಣಾ ಪಾಟೀಲ್ ತಾನು ಡೀನ್ ಹೇಳಿದಂತೆ ಕೇಳುವುದಿಲ್ಲವೆಂಬ ಕಾರಣಕ್ಕೆ ತನ್ನ ಕೈಲಿದ್ದ ಆರ್ಥಿಕ ವ್ಯವಹಾರ ಮತ್ತು ನಗದು ವಿಭಾಗ ಬೇರೆಯವರಿಗೆ ವಹಿಸಿದ್ದಾರೆ; ಅಷ್ಟೇ ಅಲ್ಲ, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿಲ್ಲದ ’ಹಿರಿಯ ಕಚೇರಿ ಅಧೀಕ್ಷಕಿ’ ಎಂಬ ಬಿರುದು ದಯಪಾಲಿಸಿದ್ದಾರೆಂದು ಆರೋಪಿಸಿದ್ದಾರೆ.

ಡೀನ್ ಡಾ. ಗಜಾನನ ನಾಯಕ್

ಡೀನ್ ಡಾ. ನಾಯಕ್ ತಮ್ಮ ಪರಮಾಪ್ತ ಶಿಷ್ಯೆ ಡಾ.ಮಹಾಲಕ್ಷ್ಮಿ ಕರ್ಲವಾಡ್‌ರನ್ನು ಮೀಸಲಾತಿ ಹಾಗು ನೇಮಕಾತಿ ನಿಯಮಗಳನ್ನೆಲ್ಲ ಧಿಕ್ಕರಿಸಿ ವಿಧಿ ವಿಜ್ಞಾನ ಶಾಸ್ತ್ರ [ಫಾರೆನ್ಸಿಕ್ ಸೈನ್ಸ್] ವಿಭಾಗದ ಸಹಾಯಕ ಅಧ್ಯಾಪಕಿಯಾಗಿ ನೇಮಿಸಿರುವುದು ದೊಡ್ಡ ವಿವಾದ ಹುಟ್ಟು ಹಾಕಿದೆ. ಫೊರೆನ್ಸಿಕ್ ವಿಭಾಗದಲ್ಲಿ ಹುದ್ದೆ ಖಾಲಿಯಿಲ್ಲದಿದ್ದರೂ, ಅವಶ್ಯಕತೆಯಿಲ್ಲದಿದ್ದರೂ ಈ ನೇಮಕಾತಿ ಮಾಡಿಕೊಳ್ಳಲಾಗಿದೆಯೆಂದು ಹೆಸರು ಹೇಳಿಕೊಳ್ಳದ ನೌಕರರು ಹೇಳುತ್ತಾರೆ. ಕೆಲವು ತಿಂಗಳ ಹಿಂದೆ ಆ ಅಧ್ಯಾಪಕಿಗೆ ಯಾವುದೇ ನಿಯಮ ಬದ್ದ ಪ್ರಕಿಯೆಯಿಲ್ಲದೆ ಖಾಯಂ ಮಾಡಿ ಲಕ್ಷಗಟ್ಟಲೆ ಸಂಬಳ ಬರುವಂತೆ ನೋಡಿಕೊಳ್ಳಲಾಗಿದೆ!

ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ ಖಾಯಂ ಅಧ್ಯಾಪಕರ ನೇಮಿಸುವಾಗ ವೈದ್ಯಕೀಯ ಶಿಕ್ಷಣ ಇಲಾಖೆಯ ಅನುಮತಿ, ಅನುಮೋದನೆ ಮತ್ತು ಆದೇಶವಿರಲೇಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ಆದರೆ ಡಾ.ಮಹಾಲಕ್ಷ್ಮಿ ಕರ್ಲವಾಡ್‌ರ ನೇಮಕಾತಿಯಲ್ಲಿ ಈ ನಿಯಮಗಳ್ಯಾವುದನ್ನು ಪ್ರಜ್ಞಾಪೂರ್ವಕವಾಗೆ ಪಾಲಿಸಿಲ್ಲ ಎನ್ನಲಾಗಿದೆ. ತರಾತುರಿಯಲ್ಲಿ ಈ ನೇಮಕಾತಿ ನಡೆಸಲಾಗಿದ್ದು, ಡಾ.ನಾಯಕ್ ಕಿಮ್ಸ್ ನಿರ್ದೇಶಕರಾಗಿ ಬಂದ ಒಂದೇ ತಿಂಗಳಲ್ಲಿ ಅಂದರೆ 07-02-2020ರಂದು ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಫೊರೆನ್ಸಿಕ್ ಸೈನ್ಸ್ ವಿಭಾಗದಲ್ಲಿ ಪರಿಶಿಷ್ಟ ಪಂಗಡದ ಮಹಿಳೆಗೆ ಬ್ಯಾಕ್‌ಲಾಗ್‌ನಲ್ಲಿ ಒಂದು ಸಹಾಯಕ ಪ್ರಾಧ್ಯಾಪಕಿ ಹುದ್ದಗೆ ಅರ್ಜಿ ಕರೆಯಲಾಗಿದೆ. ವಾಸ್ತವಿಕವಾಗಿ ಕಿಮ್ಸ್‌ನಲ್ಲಿ ಇಂತದೊಂದು ಹುದ್ದೆ ಖಾಲಿಯಿರುವುದಿಲ್ಲ.

ಹಿಂದಿನ ನೇಮಕಾತಿ ಪ್ರಕಟಣೆಯಲ್ಲಿ ಸೂಚಿಸಿದ್ದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹುದ್ದೆಗಳು ಭರ್ತಿಯಾಗದಿದ್ದರಷ್ಟೇ ಅದನ್ನು ಮುಂದಿನ ಅಧಿಸೂಚನೆಯಲ್ಲಿ ಬ್ಯಾಕ್‌ಲಾಗ್ ಎಂದು ಪರಿಗಣಿಸಲಾಗುತ್ತದೆ. ಆದರೆ 8-8-2019 ಮತ್ತು 12-12-2019ರ ನೇಮಕಾತಿ ಪ್ರಕಟಣೆಯಲ್ಲಿ ಸದ್ರಿ ಹುದ್ದೆಯ ಪ್ರಸ್ತಾಪವೇ ಇಲ್ಲ. ಆದರೂ ಫೊರೆನ್ಸಿಕ್ ಸೈನ್ಸ್ -ಅಸಿಸ್ಟೆಂಟ್ ಪ್ರೊಫೆಸರ್ ಎಸ್‌ಟಿ ಲೇಡಿ ಬ್ಯಾಕ್ ಲಾಗ್ ಎಂದು ಸುಳ್ಳು ನಮೂದಿಸಲಾಗಿದೆ! ಕಿಮ್ಸ್‌ನಲ್ಲಿ ಒಟ್ಟೂ 49 ಸಹಾಯಕ ಅಧ್ಯಾಪಕ ಹುದ್ದೆಗಳಿವೆ. ಮೀಸಲಾತಿ ಅನುಪಾತದಂತೆ ಇದರಲ್ಲಿ ಎಸ್‌ಟಿ ವರ್ಗಕ್ಕೆ ಎರಡು ಹುದ್ದೆ ಮೀಸಲಿರಬೇಕು. ಡಾ.ಆಂಜನೇಯ ಎಸ್‌ಟಿ ಪುರುಷ ಮತ್ತು ಭಾಗ್ಯ ಶ್ರೀ ಬೋಯರ್ ಎಸ್‌ಟಿ ಮಹಿಳೆ ಕೋಟಾದಲ್ಲಿ ಆಯ್ಕೆಯಾಗಿದ್ದಾರೆ. ಹೀಗಾಗಿ ಸಧ್ಯ ಎಸ್‌ಟಿ ಪ್ರವರ್ಗದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅವಕಾಶವಿಲ್ಲ. ವಿಧಿವಿಜ್ಞಾನ ವಿಭಾಗಕ್ಕೆ ಮಂಜೂರಾಗಿರುವುದು ಒಂದೇ ಒಂದು ಸಹಾಯಕ ಪ್ರಾಧ್ಯಾಪಕ ಸ್ಥಾನ. ಇದೂ ಕೂಡ ಭರ್ತಿಯಾಗಿದೆ. ಆದ್ದರಿಂದ ಮತ್ತೊಂದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆ ನಡೆಸುವಂತಿಲ್ಲ.

ಇದೆಲ್ಲ ಮರೆಮಾಚಿ ನೇಮಕಾತಿಗೆ ರಹಸ್ಯ ಅಧಿಸೂಚನೆ ಹೊರಡಿಸಲಾಗಿದೆ. ಇದೊಂದು ರಾಜ್ಯ ಮಟ್ಟದ ಆಯ್ಕೆಯಾದ್ದರಿಂದ ರಾಜ್ಯ ಮಟ್ಟದ ಎರಡು ದಿನ ಪತ್ರಿಕೆ [ಒಂದು ಕನ್ನಡ ಮತ್ತೊಂದು ಇಂಗ್ಲಿಷ್] ಎಲ್ಲಾ ಆವೃತ್ತಿಯಲ್ಲಿ ಜಾಹೀರಾತು ನೀಡಬೇಕು. ಆದರೆ ಸ್ಥಳೀಯ ಪತ್ರಿಕೆಯಲ್ಲಷ್ಟೇ ಪ್ರಕಟಣೆ ಬರುವಂತೆ ನೋಡಿಕೊಳ್ಳಲಾಗಿದೆ. ಹೈದರಾಬಾದ್ ಕರ್ನಾಟಕ ಪ್ರದೇಶದವರಿಗೆ ನೀಡಬೇಕಾದ 371 [ಜೆ]ದಂತೆ ಶೇ.8 ಮೀಸಲಾತಿಗೂ ಆಸ್ಪದ ಕೊಡದೆ ಸರ್ಕಾರಿ ಆದೇಶ ಧಿಕ್ಕರಿಸಲಾಗಿದೆ.

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ ನಂತರ ಆಕ್ಷೇಪಗಳಿಗೆ ಕನಿಷ್ಟ 15 ದಿನ ಕಾಲಾವಕಾಶ ಕೊಡಬೇಕು. ಅಂತಿಮ ಆಯ್ಕೆ ಪಟ್ಟಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಅನುಮೋದನೆ ಪಡೆದು ನೇಮಕಾತಿ ಆದೇಶ ಕೊಡಬೇಕು. ಆದರೆ ಕಿಮ್ಸ್‌ನ ಫೊರೆನ್ಸಿಕ್ ಪ್ರಾಧ್ಯಾಪಕಿ ನೇಮಕಾತಿ ಪ್ರಹಸನದಲ್ಲಿ 17-02-2020ರಂದು ಸಂದರ್ಶನ ನಡೆಸಿದಂತೆ ದಾಖಲೆ ಸೃಷ್ಟಿಸಲಾಗಿದೆ. 20-07-2020ರಂದು ಡಾ.ಮಹಾಲಕ್ಷ್ಮಿ ಕರ್ಲವಾಡ್‌ಗೆ ನೇಮಕಾತಿ ಆದೇಶ ಸಿಕ್ಕಿಬಿಟ್ಟಿದೆ! ತಾತ್ಕಾಲಿಕ ಪಟ್ಟಿ ಪ್ರಕಟವಾದಂದೇ ನೇಮಕಾತಿಯೂ ನಡೆದುಹೋಗಿದೆ!! ಆಕ್ಷೇಪಣೆಗೆ ಯಾವ ಅವಕಾಶವು ಕೊಟ್ಟಿಲ್ಲ. ಈ ಆದೇಶಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಅನುಮೋದನೆಯೂ ಇಲ್ಲ. ಹಾಗಾಗಿ ಈ ನೇಮಕಾತಿಗೆ ಯಾವುದೆ ಸಿಂಧುತ್ವವಿಲ್ಲ. ಇಡೀ ಖೋಟಾ ಪ್ರಕ್ರಿಯೆಯಲ್ಲಿ ಕಿಮ್ಸ್ ನಿರ್ದೇಶಕ ಡಾ.ನಾಯಕ್ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಿಲ್‌ಕುಮಾರ್‌ರನ್ನು ಯಾಮಾರಿಸಿದರೋ? ಅಥವಾ ಅನಿಲ್‌ಕುಮಾರ್ ಗೊತ್ತಿದ್ದೂ ಸುಮ್ಮನಿದ್ದಾರೋ ಅರ್ಥವಾಗುವುದಿಲ್ಲವೆಂದು ಕಿಮ್ಸ್‌ನಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ಮಂತ್ರಿ ಡಾ.ಸುಧಾಕರ್‌ಗೆ ಕಿಮ್ಸ್‌ನ ಅಕ್ರಮ ನೇಮಕಾತಿ ಬಗ್ಗೆ ತಿಳಿದಿದೆಯೇ? ಇನ್ನಾದರು ಸಂಬಂಧಿಸಿದವರು ಎಚ್ಚೆತ್ತು ಪರಿಶಿಷ್ಟ ಪಂಗಡ ಅರ್ಹರಿಗಾದ ಅನ್ಯಾಯ ಸರಿಪಡಿಸುವರಾ? ಅನುದಾನಗಳು ಪೋಲಾಗುತ್ತಿರುವುದು, ಆಗುತ್ತಿರುವ ಆಧ್ವಾನಗಳ ತನಿಖೆ ನಡೆಸುವರಾ? ಕಾದು ನೋಡಬೇಕು.


ಇದನ್ನೂ ಓದಿ: ಕಾರವಾರ: ಕಾಂಗ್ರೆಸ್ ಕಾರ್ಯಕರ್ತನಿಗೆ PSIನಿಂದ ಥಳಿತ ಆರೋಪ – ಠಾಣೆಗೆ ಮುತ್ತಿಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...