Homeಕರ್ನಾಟಕಕಾರವಾರ ಕಿಮ್ಸ್‌ ವಿಧಿ ವಿಜ್ಞಾನ ವಿಭಾಗದಲ್ಲಿ ಅಕ್ರಮ ನೇಮಕಾತಿ; ವೈದ್ಯಕೀಯ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿರುವುದೇಕೆ?

ಕಾರವಾರ ಕಿಮ್ಸ್‌ ವಿಧಿ ವಿಜ್ಞಾನ ವಿಭಾಗದಲ್ಲಿ ಅಕ್ರಮ ನೇಮಕಾತಿ; ವೈದ್ಯಕೀಯ ಶಿಕ್ಷಣ ಇಲಾಖೆ ಕಣ್ಮುಚ್ಚಿ ಕುಳಿತಿರುವುದೇಕೆ?

- Advertisement -
- Advertisement -

ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕಿಮ್ಸ್‌ನಲ್ಲಿ ಅಕ್ರಮ ನೇಮಕಾತಿ, ಅವ್ಯವಹಾರ ಎಡೆಬಿಡದೆ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಡಾ. ಗಜಾನನ ನಾಯಕ್ ಡೀನ್ ಕಮ್ ಡೈರೆಕ್ಟರ್ ಆಗಿಬಂದ ನಂತರ ಕಿಮ್ಸ್‌ನಲ್ಲಿ ಆರ್ಥಿಕ ಅನುದಾನ ದುರ್ಬಳಕೆ ಮಿತಿ ಮೀರಿದೆಯೆಂದು ಅದೇ ಸಂಸ್ಥೆಯಲ್ಲಿ ಅಧೀಕ್ಷಕಿಯಾಗಿದ್ದ ವೀಣಾ ಪಾಟೀಲ್ ಜಿಲ್ಲಾಧಿಕಾರಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಬರೋಬ್ಬರಿ ಏಳು ಪುಟಗಳ ದೂರು ಕೊಟ್ಟಿದ್ದೂ ಆಗಿದೆ.

ಅಕ್ರಮ ನೇಮಕಾತಿ ಮನಸೋ ಇಚ್ಚೆ ಡೈರೆಕ್ಟರ್ ಸಾಹೇಬರು ಮಾಡಿಮುಗಿಸಿದ್ದಾರೆಂದು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ. ಸುಮಾರು 100 ತಾಂತ್ರಿಕ ಸಿಬ್ಬಂದಿ ಕಿಮ್ಸ್‌ಗೆ ಅತೀ ಜರೂರ್ ಇರುವಾಗ ಲಾಭದಾಯಕವಾದ ತಾತ್ಕಾಲಿಕ ಸ್ವಚ್ಚತಾಗಾರ, ಕಾವಲುಗಾರ ನೇಮಕಾತಿ ಮಾಡಿಕೊಳ್ಳಲಾಗಿದೆ. 80 ಸ್ವಚ್ಛತಾ ಕರ್ಮಚಾರಿಗಳು ಮತ್ತು 30 ಕಾವಲುಗಾರರು ಇದ್ದರೂ ಸಹ ಸುಮಾರು 90 ಅನಾವಶ್ಯಕ ನೇಮಕಾತಿ ನಡೆದಿದೆ. 2021ರ ಜನವರಿಯಲ್ಲಿ ನೇಮಕವಾಗಿರುವ ಈ ಅನರ್ಹರಿಗೆ 2019ರ ಅಕ್ಟೋಬರ್‌ನಿಂದ ಪೂರ್ವಾನ್ವಯವಾಗುವಂತೆ ಸಂಬಳ ನೀಡಲಾಗಿದೆ. ಈ ಮೂರು ತಿಂಗಳ ವೇತವೇ ಹತ್ತಿರತ್ತಿರ 75 ಲಕ್ಷ. ಇದು ಸರ್ಕಾರಿ ಬೊಕ್ಕಸಕ್ಕೆ ಹೊರೆಯೆಂದು ದೂರಲಾಗಿದೆ.

ಡೀನ್ ಡಾ. ಗಜಾನನ ನಾಯಕ್ ಮಾಡಿರುವ ಹಲವು ನೇಮಕಾತಿಗಳಿಗೆ ಹಣಕಾಸು ಇಲಾಖೆಯಿಂದಾಗಲಿ, ಇನ್ನಿತರ ಸಕ್ಷಮ ಪ್ರಾಧಿಕಾರದ್ದಾಗಲಿ ಅನುಮತಿ ಇಲ್ಲ. ತಾತ್ಕಾಲಿಕ ಮತ್ತು ಖಾಯಂ ಬೊಧಕ ಸಿಬ್ಬಂದಿ ನೇಮಕಾತಿ ಎಲ್ಲ ನೀತಿ-ನಿಯಮ ಉಲ್ಲಂಘಿಸಿ ನಡೆಸಲಾಗುತ್ತಿದೆ. ಸರ್ಕಾರದಿಂದ ಮಂಜೂರಾತಿಯಿಲ್ಲದ ಹುದ್ದೆಗಳನ್ನು ಹುಟ್ಟು ಹಾಕುವುದರಲ್ಲಿ ಈ ಡೈರೆಕ್ಟರ್ ನಿಸ್ಸೀಮನೆನ್ನುವ ಅಧೀಕ್ಷಕಿ ವೀಣಾ ಪಾಟೀಲ್ ತಾನು ಡೀನ್ ಹೇಳಿದಂತೆ ಕೇಳುವುದಿಲ್ಲವೆಂಬ ಕಾರಣಕ್ಕೆ ತನ್ನ ಕೈಲಿದ್ದ ಆರ್ಥಿಕ ವ್ಯವಹಾರ ಮತ್ತು ನಗದು ವಿಭಾಗ ಬೇರೆಯವರಿಗೆ ವಹಿಸಿದ್ದಾರೆ; ಅಷ್ಟೇ ಅಲ್ಲ, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿಲ್ಲದ ’ಹಿರಿಯ ಕಚೇರಿ ಅಧೀಕ್ಷಕಿ’ ಎಂಬ ಬಿರುದು ದಯಪಾಲಿಸಿದ್ದಾರೆಂದು ಆರೋಪಿಸಿದ್ದಾರೆ.

ಡೀನ್ ಡಾ. ಗಜಾನನ ನಾಯಕ್

ಡೀನ್ ಡಾ. ನಾಯಕ್ ತಮ್ಮ ಪರಮಾಪ್ತ ಶಿಷ್ಯೆ ಡಾ.ಮಹಾಲಕ್ಷ್ಮಿ ಕರ್ಲವಾಡ್‌ರನ್ನು ಮೀಸಲಾತಿ ಹಾಗು ನೇಮಕಾತಿ ನಿಯಮಗಳನ್ನೆಲ್ಲ ಧಿಕ್ಕರಿಸಿ ವಿಧಿ ವಿಜ್ಞಾನ ಶಾಸ್ತ್ರ [ಫಾರೆನ್ಸಿಕ್ ಸೈನ್ಸ್] ವಿಭಾಗದ ಸಹಾಯಕ ಅಧ್ಯಾಪಕಿಯಾಗಿ ನೇಮಿಸಿರುವುದು ದೊಡ್ಡ ವಿವಾದ ಹುಟ್ಟು ಹಾಕಿದೆ. ಫೊರೆನ್ಸಿಕ್ ವಿಭಾಗದಲ್ಲಿ ಹುದ್ದೆ ಖಾಲಿಯಿಲ್ಲದಿದ್ದರೂ, ಅವಶ್ಯಕತೆಯಿಲ್ಲದಿದ್ದರೂ ಈ ನೇಮಕಾತಿ ಮಾಡಿಕೊಳ್ಳಲಾಗಿದೆಯೆಂದು ಹೆಸರು ಹೇಳಿಕೊಳ್ಳದ ನೌಕರರು ಹೇಳುತ್ತಾರೆ. ಕೆಲವು ತಿಂಗಳ ಹಿಂದೆ ಆ ಅಧ್ಯಾಪಕಿಗೆ ಯಾವುದೇ ನಿಯಮ ಬದ್ದ ಪ್ರಕಿಯೆಯಿಲ್ಲದೆ ಖಾಯಂ ಮಾಡಿ ಲಕ್ಷಗಟ್ಟಲೆ ಸಂಬಳ ಬರುವಂತೆ ನೋಡಿಕೊಳ್ಳಲಾಗಿದೆ!

ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ ಖಾಯಂ ಅಧ್ಯಾಪಕರ ನೇಮಿಸುವಾಗ ವೈದ್ಯಕೀಯ ಶಿಕ್ಷಣ ಇಲಾಖೆಯ ಅನುಮತಿ, ಅನುಮೋದನೆ ಮತ್ತು ಆದೇಶವಿರಲೇಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ಆದರೆ ಡಾ.ಮಹಾಲಕ್ಷ್ಮಿ ಕರ್ಲವಾಡ್‌ರ ನೇಮಕಾತಿಯಲ್ಲಿ ಈ ನಿಯಮಗಳ್ಯಾವುದನ್ನು ಪ್ರಜ್ಞಾಪೂರ್ವಕವಾಗೆ ಪಾಲಿಸಿಲ್ಲ ಎನ್ನಲಾಗಿದೆ. ತರಾತುರಿಯಲ್ಲಿ ಈ ನೇಮಕಾತಿ ನಡೆಸಲಾಗಿದ್ದು, ಡಾ.ನಾಯಕ್ ಕಿಮ್ಸ್ ನಿರ್ದೇಶಕರಾಗಿ ಬಂದ ಒಂದೇ ತಿಂಗಳಲ್ಲಿ ಅಂದರೆ 07-02-2020ರಂದು ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಫೊರೆನ್ಸಿಕ್ ಸೈನ್ಸ್ ವಿಭಾಗದಲ್ಲಿ ಪರಿಶಿಷ್ಟ ಪಂಗಡದ ಮಹಿಳೆಗೆ ಬ್ಯಾಕ್‌ಲಾಗ್‌ನಲ್ಲಿ ಒಂದು ಸಹಾಯಕ ಪ್ರಾಧ್ಯಾಪಕಿ ಹುದ್ದಗೆ ಅರ್ಜಿ ಕರೆಯಲಾಗಿದೆ. ವಾಸ್ತವಿಕವಾಗಿ ಕಿಮ್ಸ್‌ನಲ್ಲಿ ಇಂತದೊಂದು ಹುದ್ದೆ ಖಾಲಿಯಿರುವುದಿಲ್ಲ.

ಹಿಂದಿನ ನೇಮಕಾತಿ ಪ್ರಕಟಣೆಯಲ್ಲಿ ಸೂಚಿಸಿದ್ದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹುದ್ದೆಗಳು ಭರ್ತಿಯಾಗದಿದ್ದರಷ್ಟೇ ಅದನ್ನು ಮುಂದಿನ ಅಧಿಸೂಚನೆಯಲ್ಲಿ ಬ್ಯಾಕ್‌ಲಾಗ್ ಎಂದು ಪರಿಗಣಿಸಲಾಗುತ್ತದೆ. ಆದರೆ 8-8-2019 ಮತ್ತು 12-12-2019ರ ನೇಮಕಾತಿ ಪ್ರಕಟಣೆಯಲ್ಲಿ ಸದ್ರಿ ಹುದ್ದೆಯ ಪ್ರಸ್ತಾಪವೇ ಇಲ್ಲ. ಆದರೂ ಫೊರೆನ್ಸಿಕ್ ಸೈನ್ಸ್ -ಅಸಿಸ್ಟೆಂಟ್ ಪ್ರೊಫೆಸರ್ ಎಸ್‌ಟಿ ಲೇಡಿ ಬ್ಯಾಕ್ ಲಾಗ್ ಎಂದು ಸುಳ್ಳು ನಮೂದಿಸಲಾಗಿದೆ! ಕಿಮ್ಸ್‌ನಲ್ಲಿ ಒಟ್ಟೂ 49 ಸಹಾಯಕ ಅಧ್ಯಾಪಕ ಹುದ್ದೆಗಳಿವೆ. ಮೀಸಲಾತಿ ಅನುಪಾತದಂತೆ ಇದರಲ್ಲಿ ಎಸ್‌ಟಿ ವರ್ಗಕ್ಕೆ ಎರಡು ಹುದ್ದೆ ಮೀಸಲಿರಬೇಕು. ಡಾ.ಆಂಜನೇಯ ಎಸ್‌ಟಿ ಪುರುಷ ಮತ್ತು ಭಾಗ್ಯ ಶ್ರೀ ಬೋಯರ್ ಎಸ್‌ಟಿ ಮಹಿಳೆ ಕೋಟಾದಲ್ಲಿ ಆಯ್ಕೆಯಾಗಿದ್ದಾರೆ. ಹೀಗಾಗಿ ಸಧ್ಯ ಎಸ್‌ಟಿ ಪ್ರವರ್ಗದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅವಕಾಶವಿಲ್ಲ. ವಿಧಿವಿಜ್ಞಾನ ವಿಭಾಗಕ್ಕೆ ಮಂಜೂರಾಗಿರುವುದು ಒಂದೇ ಒಂದು ಸಹಾಯಕ ಪ್ರಾಧ್ಯಾಪಕ ಸ್ಥಾನ. ಇದೂ ಕೂಡ ಭರ್ತಿಯಾಗಿದೆ. ಆದ್ದರಿಂದ ಮತ್ತೊಂದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆ ನಡೆಸುವಂತಿಲ್ಲ.

ಇದೆಲ್ಲ ಮರೆಮಾಚಿ ನೇಮಕಾತಿಗೆ ರಹಸ್ಯ ಅಧಿಸೂಚನೆ ಹೊರಡಿಸಲಾಗಿದೆ. ಇದೊಂದು ರಾಜ್ಯ ಮಟ್ಟದ ಆಯ್ಕೆಯಾದ್ದರಿಂದ ರಾಜ್ಯ ಮಟ್ಟದ ಎರಡು ದಿನ ಪತ್ರಿಕೆ [ಒಂದು ಕನ್ನಡ ಮತ್ತೊಂದು ಇಂಗ್ಲಿಷ್] ಎಲ್ಲಾ ಆವೃತ್ತಿಯಲ್ಲಿ ಜಾಹೀರಾತು ನೀಡಬೇಕು. ಆದರೆ ಸ್ಥಳೀಯ ಪತ್ರಿಕೆಯಲ್ಲಷ್ಟೇ ಪ್ರಕಟಣೆ ಬರುವಂತೆ ನೋಡಿಕೊಳ್ಳಲಾಗಿದೆ. ಹೈದರಾಬಾದ್ ಕರ್ನಾಟಕ ಪ್ರದೇಶದವರಿಗೆ ನೀಡಬೇಕಾದ 371 [ಜೆ]ದಂತೆ ಶೇ.8 ಮೀಸಲಾತಿಗೂ ಆಸ್ಪದ ಕೊಡದೆ ಸರ್ಕಾರಿ ಆದೇಶ ಧಿಕ್ಕರಿಸಲಾಗಿದೆ.

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ ನಂತರ ಆಕ್ಷೇಪಗಳಿಗೆ ಕನಿಷ್ಟ 15 ದಿನ ಕಾಲಾವಕಾಶ ಕೊಡಬೇಕು. ಅಂತಿಮ ಆಯ್ಕೆ ಪಟ್ಟಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಅನುಮೋದನೆ ಪಡೆದು ನೇಮಕಾತಿ ಆದೇಶ ಕೊಡಬೇಕು. ಆದರೆ ಕಿಮ್ಸ್‌ನ ಫೊರೆನ್ಸಿಕ್ ಪ್ರಾಧ್ಯಾಪಕಿ ನೇಮಕಾತಿ ಪ್ರಹಸನದಲ್ಲಿ 17-02-2020ರಂದು ಸಂದರ್ಶನ ನಡೆಸಿದಂತೆ ದಾಖಲೆ ಸೃಷ್ಟಿಸಲಾಗಿದೆ. 20-07-2020ರಂದು ಡಾ.ಮಹಾಲಕ್ಷ್ಮಿ ಕರ್ಲವಾಡ್‌ಗೆ ನೇಮಕಾತಿ ಆದೇಶ ಸಿಕ್ಕಿಬಿಟ್ಟಿದೆ! ತಾತ್ಕಾಲಿಕ ಪಟ್ಟಿ ಪ್ರಕಟವಾದಂದೇ ನೇಮಕಾತಿಯೂ ನಡೆದುಹೋಗಿದೆ!! ಆಕ್ಷೇಪಣೆಗೆ ಯಾವ ಅವಕಾಶವು ಕೊಟ್ಟಿಲ್ಲ. ಈ ಆದೇಶಕ್ಕೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಅನುಮೋದನೆಯೂ ಇಲ್ಲ. ಹಾಗಾಗಿ ಈ ನೇಮಕಾತಿಗೆ ಯಾವುದೆ ಸಿಂಧುತ್ವವಿಲ್ಲ. ಇಡೀ ಖೋಟಾ ಪ್ರಕ್ರಿಯೆಯಲ್ಲಿ ಕಿಮ್ಸ್ ನಿರ್ದೇಶಕ ಡಾ.ನಾಯಕ್ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಿಲ್‌ಕುಮಾರ್‌ರನ್ನು ಯಾಮಾರಿಸಿದರೋ? ಅಥವಾ ಅನಿಲ್‌ಕುಮಾರ್ ಗೊತ್ತಿದ್ದೂ ಸುಮ್ಮನಿದ್ದಾರೋ ಅರ್ಥವಾಗುವುದಿಲ್ಲವೆಂದು ಕಿಮ್ಸ್‌ನಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ.

ವೈದ್ಯಕೀಯ ಶಿಕ್ಷಣ ಇಲಾಖೆಯ ಮಂತ್ರಿ ಡಾ.ಸುಧಾಕರ್‌ಗೆ ಕಿಮ್ಸ್‌ನ ಅಕ್ರಮ ನೇಮಕಾತಿ ಬಗ್ಗೆ ತಿಳಿದಿದೆಯೇ? ಇನ್ನಾದರು ಸಂಬಂಧಿಸಿದವರು ಎಚ್ಚೆತ್ತು ಪರಿಶಿಷ್ಟ ಪಂಗಡ ಅರ್ಹರಿಗಾದ ಅನ್ಯಾಯ ಸರಿಪಡಿಸುವರಾ? ಅನುದಾನಗಳು ಪೋಲಾಗುತ್ತಿರುವುದು, ಆಗುತ್ತಿರುವ ಆಧ್ವಾನಗಳ ತನಿಖೆ ನಡೆಸುವರಾ? ಕಾದು ನೋಡಬೇಕು.


ಇದನ್ನೂ ಓದಿ: ಕಾರವಾರ: ಕಾಂಗ್ರೆಸ್ ಕಾರ್ಯಕರ್ತನಿಗೆ PSIನಿಂದ ಥಳಿತ ಆರೋಪ – ಠಾಣೆಗೆ ಮುತ್ತಿಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...