Homeಮುಖಪುಟಭಯೋತ್ಪಾದನೆಯ ಹಿಂದಿರುವುದು ಧರ್ಮವೋ... ತೈಲವೋ....? - ರಾಂ‌ ಪುನಿಯಾನಿ ಭಾಷಣ

ಭಯೋತ್ಪಾದನೆಯ ಹಿಂದಿರುವುದು ಧರ್ಮವೋ… ತೈಲವೋ….? – ರಾಂ‌ ಪುನಿಯಾನಿ ಭಾಷಣ

ಜಗತ್ತಿನಲ್ಲಿ ಭಯೋತ್ಪಾದನೆಯಿಂದಾಗಿ ಅತೀ ಹೆಚ್ಚು ಸಾಯುತ್ತಿರುವುದು ಹಿಂದೂಗಳೋ, ಕ್ರೈಸ್ತರೋ ಅಲ್ಲ. ಬದಲಾಗಿ ಮುಸಲ್ಮಾನರೇ ಆಗಿದ್ದಾರೆ.

- Advertisement -
- Advertisement -

ಮೂಲ : ರಾಂ‌ ಪುನಿಯಾನಿ
ಕನ್ನಡಕ್ಕೆ : ಇಸ್ಮತ್ ಪಜೀರ್

ಒಂದು ವೇಳೆ ಇಸ್ಲಾಮಿನ ಕಾರಣಕ್ಕೆ ಭಯೋತ್ಪಾದನಾ ಕೃತ್ಯಗಳಾಗುತ್ತಿದ್ದರೆ ಯಾವ ದೇಶದಲ್ಲಿ ಅತೀ ಹೆಚ್ಚು ಭಯೋತ್ಪಾದಕರಿರಬೇಕಿತ್ತು…?
ಇಂಡೋನೇಶ್ಯಾದಲ್ಲಿರಬೇಕಿತ್ತು. ಯಾಕೆಂದರೆ ಜಗತ್ತಿನಲ್ಲಿ ಅತೀ ಹೆಚ್ಚು ಮುಸ್ಲಿಮರಿರುವ ರಾಷ್ಟ್ರ ಇಂಡೋನೇಶ್ಯಾ.. ಆದರೆ ಅಲ್ಲಿಂದ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ವರದಿಯಾಗುತ್ತಿಲ್ಲ. ಆದರೆ ಇಸ್ಲಾಮನ್ನು ಭಯೋತ್ಪಾದನೆಯೊಂದಿಗೆ ದುರುದ್ದೇಶಪೂರ್ವಕವಾಗಿ ಚಿತ್ರಿಸಲಾಗುತ್ತಿದೆ. ಜಗತ್ತಿನಲ್ಲಿ ಭಯೋತ್ಪಾದನೆಯಿಂದಾಗಿ ಅತೀ ಹೆಚ್ಚು ಸಾಯುತ್ತಿರುವುದು ಹಿಂದೂಗಳೋ, ಕ್ರೈಸ್ತರೋ ಅಲ್ಲ. ಬದಲಾಗಿ ಸ್ವತಃ ಮುಸಲ್ಮಾನರೇ ಆಗಿದ್ದಾರೆ.

ಜಗತ್ತಿನ ಅತೀ ಹೆಚ್ಚು ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿರುವುದು ಪಶ್ಚಿಮ ಏಷ್ಯಾದಲ್ಲಿ. ಆ ಪ್ರದೇಶದ ಮೂರು ಮುಖ್ಯ ವಿಚಾರಗಳನ್ನು ತಮ್ಮ ಮುಂದಿಡಬಯಸುತ್ತೇ‌ನೆ.

1. ಪಶ್ಚಿಮ ಏಷ್ಯಾದಲ್ಲಿ ಮುಸ್ಲಿಮರು ಹೆಚ್ಚಿದ್ದಾರೆ.
2. ಪಶ್ಚಿಮ ಏಷ್ಯಾದಲ್ಲಿ ಅತೀ ಹೆಚ್ಚು ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿರುತ್ತವೆ.
3. ಇದೇ ಪಶ್ಚಿಮ ಏಷ್ಯಾದಲ್ಲಿ ಇಂಧನದ ಖಜಾನೆಯೇ ಇದೆ.
ಈಗ ಹೇಳಿ ಭಯೋತ್ಪಾದನೆ ಯಾವ ಕಾರಣಕ್ಕೆ ನಡೆಯುತ್ತಿದೆ.. ಇಂಧನದ ಕಾರಣಕ್ಕೋ… ಇಸ್ಲಾಮಿನ ಕಾರಣಕ್ಕೋ..?

ಇಂಧನದ ಕಾರಣಕ್ಕಾಗಿ ನಡೆಯುತ್ತಿದೆ ಎನ್ನುವುದು ಸ್ಪಷ್ಟ. ಈ ಇಂಧನದ
ಯಜಮಾನಿಕೆಯನ್ನು ಯಾವ ಶಕ್ತಿ ಪಡೆಯ ಬಯಸುತ್ತದೋ ಆ ಶಕ್ತಿ ವಾಷಿಂಗ್ಟನ್‌ನಲ್ಲಿ ಕೂತು ಇಡೀ ಜಗತ್ತನ್ನು ತನ್ನ ಕಿರುಬೆರಳಲ್ಲಿ‌ ಆಟವಾಡಿಸುತ್ತದೆ. ಒಟ್ಟಿನಲ್ಲಿ ದುಷ್ಕೃತ್ಯಗಳನ್ನು ಎಸಗುವವರು ಯಾರೋ… ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲ್ಪಡುವವರು ಇನ್ಯಾರೋ…

ಇದೆಲ್ಲಾ ಹೇಗೆ ಮತ್ತು ಎಲ್ಲಿಂದ ಪ್ರಾರಂಭವಾಗಿದೆ ಎನ್ನುವುದನ್ನೂ ನಾವು ಅರ್ಥೈಸಲೇಬೇಕಾಗುತ್ತದೆ.

ಮೇಲ್ನೋಟಕ್ಕೆ ಈ ಚಟುವಟಿಕೆಗಳೆಲ್ಲಾ ಅಲ್ ಖಾಯಿದಾದ ಮದ್ರಸಾಗಳಿಂದ ಆರಂಭವಾಗುತ್ತದೆ. ಅಲ್ ಖಾಯಿದಾದ ಮದ್ರಸಾಗಳಲ್ಲಿ ಭಯೋತ್ಪಾದನಾ ತರಭೇತಿ ನೀಡಲಾಗುತ್ತದೆ. ಆದರೆ ಇದರ ಹಿಂದಿರುವ ಶಕ್ತಿ ಇದೇ ಅಮೆರಿಕಾ. ಇದಕ್ಕಾಗಿ ಅಮೆರಿಕಾ ಎಂಟು ಸಾವಿರ ಮಿಲಿಯನ್ ಡಾಲರ್ ದುಡ್ಡು ಮತ್ತು ಏಳು ಸಾವಿರ ಟನ್ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿತು. ದುಡ್ಡು ಮತ್ತು ಶಸ್ತ್ರಾಸ್ತ್ರ ಸರಬರಾಜು ಮಾಡಿ ಅವರ ಬ್ರೈನ್ ವಾಶ್ ಮಾಡಲಾಯಿತು. ಅದಕ್ಕಾಗಿ ಅವರು ಇಸ್ಲಾಮಿನ ಎರಡು ಮಹತ್ವಪೂರ್ಣ ಶಬ್ಧಗಳ ವ್ಯಾಖ್ಯಾನವನ್ನು ತಿರುಚಿದರು.
1.ಜಿಹಾದ್
2.ಕಾಫಿರ್

ಈ ಜಿಹಾದ್‌ನಲ್ಲಿ ಎರಡು ವಿಧಗಳಿವೆ.
1. ಜಿಹಾದ್- ಎ-ಅಕ್ಬರ್ (ಹಿರಿ ಜಿಹಾದ್)
2. ಜಿಹಾದ್-ಎ-ಅಕ್ಸರ್ (ಕಿರಿ‌ ಜಿಹಾದ್)

ಜಿಹಾದ್-ಎ-ಅಕ್ಬರ್ ಎಂದರೆ ತನ್ನ ಸ್ವಶರೀರವು ಕೆಡುಕುಗಳತ್ತ ಹೋಗುವುದರ ವಿರುದ್ಧ ಅದರೊಂದಿಗೆ ಹೋರಾಡುವುದು.
ಜಿಹಾದ್-ಎ-ಅಕ್ಸರ್ ಎಂದರೆ ಸಮಾಜದ ಕೆಡುಕಗಳ ವಿರುದ್ದ ಹೋರಾಡುವುದು. ಆದರೆ ಇವುಗಳ ಅರ್ಥ ಮತ್ತು ವ್ಯಾಖ್ಯಾನಗಳನ್ನು ಸಂಪೂರ್ಣವಾಗಿ ತಿರುಚಲಾಯಿತು. ನಿಮಗೆ ಯಾರ ಬಗ್ಗೆ ಸಹಮಿತವಿಲ್ಲವೋ ಮೊದಲು ಅವರಿಗೆ ಕಾಫಿರ್ ಎಂಬ ಹಣೆಪಟ್ಟಿ ಹಚ್ಚುವುದು ಮತ್ತು ಅವರನ್ನು ಕೊಲ್ಲುವುದು. ಇಂತಹ ತರಭೇತಿಗಳನ್ನು ಯಾವ ಅಲ್- ಖಾಯಿದಾದ ಮದ್ರಸಾಗಳಲ್ಲಿ‌ ನೀಡಲಾಗುತ್ತದೋ ಅವರಿಗೆ ಅಮೆರಿಕಾ ದುಡ್ಡನ್ನೂ ನೀಡಿತು, ಮಾತ್ರವಲ್ಲ ಸ್ವತಃ ಅಮೆರಿಕಾವೇ ಅವರಿಗೆ ಪಠ್ಯ ವಸ್ತುಗಳನ್ನೂ ಒದಗಿಸಿತು. ಅಲ್ ಖಾಯಿದಾದ ಮದ್ರಸಾಗಳಲ್ಲಿ ಯಾವ ತರಭೇತಿಗಳನ್ನು ನೀಡಲಾಗುತ್ತದೋ ಅದರ ಪಠ್ಯಕ್ರಮಗಳನ್ನು ವಾಷಿಂಗ್ಟನ್‌‌ನಲ್ಲಿ ತಯಾರಿಸಲಾಗುತ್ತದೆ…!!

ನೀವು ಯೂ‌ ಟ್ಯೂಬ್‌‌ನಲ್ಲಿ “ಹಿಲರಿ ಕ್ಲಿಂಟನ್, ಅಲ್- ಖಾಯಿದಾ ಮತ್ತು ಅಮೆರಿಕಾ” ಎಂಬ ಮೂರು ಪದಗಳನ್ನು ಟೈಪ್ ಮಾಡಿ ಸರ್ಚ್ ಕೊಟ್ಟರೆ ಅದರಲ್ಲಿ ನಾಲ್ಕೂವರೆ ನಿಮಿಷಗಳ ಒಂದು ವೀಡಿಯೋ ಇದೆ. (2016 ರವರೆಗೆ ಯೂಟ್ಯೂಬ್‌ನಲ್ಲಿದ್ದ ಆ ವೀಡಿಯೋವನ್ನು ಹಿಂದೆಗೆಯಲಾಗಿದೆ) ಅದರಲ್ಲಿ ಹಿಲರಿ ಕ್ಲಿಂಟನ್ ಹೇಳುತ್ತಾರೆ. “ನಮಗೆ ರಶ್ಯಾದ ವಿರುದ್ಧ ಹೋರಾಡಬೇಕಿತ್ತು. ನಮ್ಮ ಸೈನಿಕರು ವಿಯೆಟ್ನಾಂ‌ನಲ್ಲಿ ಸೋತು ಸುಸ್ತಾಗಿ ಬಂದಿದ್ದರು. ನಾವು ಏಶ್ಯಾದ ಮುಸ್ಲಿಂ ಯುವಕರ ಭುಜಗಳಲ್ಲಿ ಬಂದೂಕುಗಳನ್ನಿಟ್ಟು ಗುಂಡು ಹಾರಿಸಿದೆವು. ನಾವು ಅಲ್ ಖಾಯಿದಾ ಸೃಷ್ಟಿಸಿದೆವು. ನಮ್ಮ ಕೆಲಸಗಳನ್ನು ಅನೂಚಾನವಾಗಿ ಮಾಡಿದೆವು. ಆ ಬಳಿಕ ನಮ್ಮ ಕೈಗಳನ್ನು ತೊಳೆದು ಮರಳಿದೆವು. ಅರ್ಥಾತ್ ಕ್ಯಾನ್ಸರಿನ ಬೀಜ ಬಿತ್ತಿದೆವು. ನಾವು ನಮ್ಮ ದೇಶದಲ್ಲಿ ಸುರಕ್ಷಿತರಾಗಿದ್ದೇವೆ. ಪರಿಣಾಮವೇನಿದ್ದರೂ ಏಷ್ಯಾದ ಜನತೆ ಉಣ್ಣುತ್ತಾರೆ. ಅದರಲ್ಲೂ‌ ಪಶ್ಚಿಮ ಏಷ್ಯಾದ ಜನತೆ ಉಣ್ಣುತ್ತಾರೆ..”

ಅದರ ಜೊತೆಗೆ 9/11ರ ಬಳಿಕ ಅಮೆರಿಕಾದ ಮಾಧ್ಯಮಗಳು ಅತೀ ದೊಡ್ಡ ಕುಕೃತ್ಯಗಳನ್ನೆಸಗಿತು. ಅದು ಮಾನವ ಜನಾಂಗದ ಇತಿಹಾಸದಲ್ಲೇ ಅತ್ಯಂತ ಅಮಾನವೀಯ ದುಷ್ಕೃತ್ಯ. The most antihuman act in the history of Mankind. ಇಸ್ಲಾಮನ್ನು ಭಯೋತ್ಪಾದನೆಯ ಜೊತೆ ಥಳುಕು ಹಾಕಲಾಯಿತು.. ಯಾವ ಧರ್ಮ ಮನುಷ್ಯನಿಗೆ ಪ್ರೀತಿಯನ್ನು ಕಲಿಸುತ್ತದೋ, ಯಾವ ಧರ್ಮ ಮನುಷ್ಯನಿಗೆ ಮನುಷ್ಯನಾಗಲು ಬೋಧಿಸುತ್ತದೋ ಅದನ್ನು ಭಯೋತ್ಪಾದನೆಯೊಂದಿಗೆ ಥಳುಕು ಹಾಕಿ ಮೊದಲ ಬಾರಿಗೆ ಇಸ್ಲಾಮಿಕ್ ಟೆರರಿಸಂ ಎಂಬ ಪದವನ್ನು ಸೃಷ್ಟಿಸಿತು.

ನೆನಪಿರಲಿ ಜಗತ್ತಿನಲ್ಲಿ ಹಿಂದೆಯೂ ಭಯೋತ್ಪಾದನಾ ಕೃತ್ಯಗಳು ನಡೆದಿವೆ. ನೆನಪಿಟ್ಕೊಳ್ಳಿ ಐರಿಶ್ ರಿಪಬ್ಲಿಕನ್ ಆರ್ಮಿ, ಖಲಿಸ್ತಾನ್ ಮೂವ್‌ಮೆಂಟ್, ನಾಥೂರಾಂ ಗೋಡ್ಸೆ ಮಾಡಿದ ಗಾಂಧೀಜಿಯ ಹತ್ಯೆ, ಇಂದಿರಾ ಗಾಂಧಿಯ ಹತ್ಯೆ, ಎಲ್ಟಿಟಿ‌ಇ ಮಾಡಿದ ರಾಜೀವ್ ಗಾಂಧಿಯ ಹತ್ಯೆ.. ಹೀಗೆ ಸಂಘಟಿತ ಭಯೋತ್ಪಾದನಾ ಚಟುವಟಿಕೆಗಳು ಹಿಂದೆಯೂ ಇತ್ತು. ಆದರೆ ಅವ್ಯಾವುವನ್ನೂ ಆ ಕೃತ್ಯಗಳನ್ನೆಸಗಿದವರ ಧರ್ಮದ ಜೊತೆಗೆ ಥಳುಕು ಹಾಕಲಾಗುತ್ತಿರಲಿಲ್ಲ. ಆದರೆ ಅಲ್ ಖಾಯಿದಾ ಮಾಡಿದ ದುಷ್ಕೃತ್ಯಗಳಿಗೆ ಅಮೆರಿಕಾ ಕೊಟ್ಟ ಹೆಸರು ಇಸ್ಲಾಮಿಕ್ ಟೆರರಿಸಂ..!! ಇದರ ಹಿಂದೆ ಇಸ್ಲಾಮ್ ಧರ್ಮದ ಯಾವುದೇ ಕೈವಾಡವಿರಲಿಲ್ಲ.

ಜಿಹಾದ್ ಮತ್ತು ಕಾಫಿರ್ ಎಂಬ ಪದಗಳ ಅರ್ಥ ಮತ್ತು ವ್ಯಾಖ್ಯಾನವನ್ನು ತಿರುಚಲಾಯಿತು. ಆ ಮೂಲಕ ಮಾನವ ಜನಾಂಗದ ಮೆದುಳು ತೊಳೆಯುವ ಕೆಲಸ ಆರಂಭಿಸಲಾಯಿತು. ಈ ಪ್ರಕ್ರಿಯೆ ಒಂದು ವಿಧದ ಕ್ಯಾನ್ಸರ್. ನನಗೆ ಸ್ವಲ್ಪ ವೈದ್ಯಕೀಯ ಹಿನ್ನೆಲೆಯಿದೆ. ಆದುದರಿಂದ ಕ್ಯಾನ್ಸರ್ ಎಂದರೇನೆಂದು ನಾನು ಚೆನ್ನಾಗಿ ಬಲ್ಲೆ. ಕ್ಯಾನ್ಸರ್‌ಗೆ ಮೊದಲ ಹಂತದಲ್ಲಿ ಚಿಕಿತ್ಸೆ ನೀಡಬಹುದು. ಆದರೆ ಫೈನಲ್ ಹಂತ ತಲುಪಿದರೆ ಅದು ಮಾನವನ ಇಡೀ ದೇಹವನ್ನು ನಾಶಪಡಿಸುವಂತೆ, ಈ ಕ್ಯಾನ್ಸರ್ ಜಗತ್ತನ್ನೇ ನಾಶಪಡಿಸುತ್ತದೆ. ಅಲ್ ಖಾಯಿದಾ ಎಂದರೆ ಅದೇ ಕ್ಯಾನ್ಸರ್. ಅಲ್ ಖಾಯಿದಾದ ಪ್ರಯೋಗದ ಮೂಲಕ ಅಮೆರಿಕಾ ಹರಡಿದ್ದು ಮನುಕುಲಕ್ಕೆ ಮಾರಕವಾದ ಕ್ಯಾನ್ಸರನ್ನಾಗಿದೆ.

ವಿಷಯ ಇಷ್ಟಕ್ಕೇ ಮುಗಿಯುವುದಿಲ್ಲ. ಇಂಧನ ದಾಹ ಯಾವುದೇ ದಾಹಕ್ಕಿಂತ ದೊಡ್ಡದು. ನಮಗೆಲ್ಲಾ ಗೊತ್ತಿದೆ ಭಾರತ ಇನ್ನೂರು ವರ್ಷಗಳ ಕಾಲ ಇಂಗ್ಲೆಂಡಿನ ಗುಲಾಮಗಿರಿ ಅನುಭವಿಸಿದೆ. ಯಾತಕ್ಕಾಗಿ ಅವರು ನಮ್ಮನ್ನು ಗುಲಾಮಗಿರಿಗೆ ತಳ್ಳಿದರು..? ಅವರಿಗೆ ಇಲ್ಲಿನ ಸಂಪತ್ತನ್ನು ದೋಚಬೇಕಿತ್ತು. ಅದು ವಸಾಹತುಶಾಹಿತ್ವ.

ವಸಾಹತುಶಾಹಿತ್ವದ ಬಳಿಕ ಅಸ್ತಿತ್ವಕ್ಕೆ ಬಂದುದಾಗಿದೆ ಸಾಮ್ರಾಜ್ಯಶಾಹಿತ್ವ (imperialism). ಸಾಮ್ರಾಜ್ಯಶಾಹಿತ್ವವು ಜಗತ್ತಿನಾದ್ಯಂತದ ಸಂಪತ್ತನ್ನು ದೋಚುತ್ತದೆ ಅಥವಾ ಅದರ ಮೇಲೆ ಯಜಮಾನಿಕೆ ಸಾಧಿಸುತ್ತದೆ. ಇದಕ್ಕಾಗಿ ಅಮೆರಿಕಾ ಎಸಗಿದ ಇನ್ನೊಂದು‌ ದುಷ್ಕೃತ್ಯ ಇರಾಕಿನ ಮೇಲಿನ ದಾಳಿ. ಇರಾಕಿನ ಮೇಲೆ ನಡೆಸಲಾದ ಯುದ್ಧ ಏಕಾಏಕಿ ಮಾಡಿದ್ದೇನಲ್ಲ. ಮೊದಲು ದಾಳಿ ಮಾಡುವ ಕುರಿತು ತೀರ್ಮಾನಿಸಿದರು. ಆ ಬಳಿಕ ಅದಕ್ಕೆ ಸಮರ್ಥನೆಗಳನ್ನು ಹುಡುಕಿದರು. ಇರಾಕಿನ ಬಳಿ ಸಮೂಹ ನಾಶಕ ಶಸ್ತ್ರಾಸ್ತ್ರಗಳಿವೆ ಎಂದು ಜಗತ್ತಿನಾದ್ಯಂತ ಎಲ್ಲೆಡೆಗೂ ಸಮೂಹ ನಾಶಕ ಅಸ್ತ್ರಗಳನ್ನು ಸರಬರಾಜು ಮಾಡುವ ಅಮೆರಿಕಾವೇ ಬೊಬ್ಬಿರಿಯತೊಡಗಿತು. ಈ ಚರ್ಚೆ ದೀರ್ಘ ಕಾಲ ಅದೇ ಹಾದಿಯಲ್ಲಿ ಸಾಗುವಂತೆ ನೋಡಿಕೊಳ್ಳಲಾಯಿತು.

ವಿಶ್ವಸಂಸ್ಥೆಯೇನಿದೆಯೋ ಅದು ಅಮೆರಿಕಾದ ಜೇಬಿನಲ್ಲೇ ಇದೆ. ಅದನ್ನು ಅಮೆರಿಕಾ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತದೆ. ಅದರ ಮೌನ ಸಮ್ಮತಿಯೊಂದಿಗೆ ಅಮೆರಿಕಾ ಇರಾಕ್ ಮೇಲೆ ಎರಗಿ ಬಿತ್ತು. ಇರಾಕಿನ ಮೇಲೆ ಅಮೆರಿಕಾ ಎರಗಿ ಬಿದ್ದ ಕಾರಣ ಅಲ್ಲಿನ ಸೇನಾ ಸ್ವರೂಪ ಗಲಿಬಿಲಿಗೊಳಗಾಯಿತು. ಒಂದೆಡೆ ಅಲ್- ಖಾಯಿದಾದ ಐಡಿಯಾಲಜಿಯೂ ಅದಾಗಲೇ ಬಲಿಷ್ಠವಾಗಿ ಬೇರೂರಿತ್ತು. ಇವೆರಡನ್ನೂ ಸೇರಿಸಿ ಐಸಿಸ್‌ಗೆ ಭದ್ರ ಬುನಾದಿ ಹಾಕಿತು. ಇಂದು ಇಸ್ಲಾಮಿನ ಹೆಸರಲ್ಲಿ ಜಗತ್ತಿನಾದ್ಯಂತ ಏನೆಲ್ಲಾ ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿವೆಯೋ, ವಾಸ್ತವದಲ್ಲಿ‌ ಅದು “ಜಗತ್ತಿನ ಇಂಧನ ಸಂಪನ್ಮೂಲಗಳ ಮೇಲೆ ನಿಯಂತ್ರಣ ಸಾಧಿಸಿ ತನ್ನ ಯಜಮಾನಿಕೆ ಸ್ಥಾಪಿಸಲು ಸಾಮ್ರಾಜ್ಯಶಾಹಿ ಸೃಷ್ಟಿಸಿದ ಅತ್ಯಂತ ನೀಚ ಕೃತ್ಯವಾಗಿದೆ..”

  • ದೇಶದ ಪ್ರಮುಖ ಬುದ್ಧಿಜೀವಿ ಚಿಂತಕರಲ್ಲೊಬ್ಬರಾದ ರಾಂ ಪುನಿಯಾನಿ 2016ರಲ್ಲಿ ಮಾಡಿದ ಭಾಷಣವೊಂದರ ಕನ್ನಡಾನುವಾದವಿದು

ಕನ್ನಡಕ್ಕೆ : ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)


ಇದನ್ನೂ ಓದಿ: ಭೂ ಹಂಚಿಕೆ ಏಕೆ ಮಾಡಬೇಕೆಂದರೆ?: ದೇವರಾಜ ಅರಸು ಭಾಷಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಫ್ಘಾನಿಸ್ಥಾನದ ಇಂದಿನ ವಾಸ್ತವದ ಬಗ್ಗೆ ರಾಂ ಪುನಿಯಾನಿ ಭಾಷಣದ ಕನ್ನಡ ಅನುವಾದ ನೋಡಿದೆ. ಅದು ಏಕಮುಖವಾಗಿದೆ ಮತ್ತು ಭಾಗಶಃ ಸರಿ ಅಷ್ಟೇ. ಎಂಬತ್ತರ ದಶಕದಲ್ಲಿ ರಶಿಯಾ ಮತ್ತು, ಕಳೆದ ಇಪ್ಪತ್ತು ವರ್ಷಗಳಲ್ಲಿ ಅಮೆರಿಕಾ, ರುದ್ರ ನರ್ತನ ಮಾಡಿವೆ ನಿಜ. ಆದರೆ, ಅವರನ್ನು ಹೊರಗಟ್ಟಲು, ಅಫ್ಘಾನಿಸ್ಥಾನದ ಜನರು ಒಕ್ಕಟ್ಟಾಗಿ ಪ್ರಯತ್ನ ಮಾಡಲಿಲ್ಲ. ಪಾಶ್ಚಾತ್ಯರ ಪ್ರಾಬಲ್ಯದಿಂದ ದೇಶ ವಿಮೋಚನೆಗೆ ಬದಲು,ಬುಡಕಟ್ಟುಗಳು ತಮ್ಮತಮ್ಮಲ್ಲಿ ಬಡಿದಾಡುವ, ಶಕ್ತಿ ಪ್ರದರ್ಶಿಸುವ ಮತ್ತು ಅಧಿಕಾರ ಮೆರೆಯುವ ತಾಣವಾಗಿ ಅಫ್ಘಾನ್ ಪರಿವರ್ತಿತವಾಗಿದೆ. ಇದಕ್ಕೆ, ಕನಿಷ್ಠ ತಾರತಮ್ಯ ಜ್ಞಾನವು ಇಲ್ಲದ ಅಫ್ಘಾನ್ ಜನರೇ ನೇರವಾಗಿ ಕಾರಣ ವಿನಾ, ಪರದೇಶಗಳೇ ಪೂರ್ಣ ಹೊಣೆ ಅಲ್ಲ. ಅದರೊಂದಿಗೆ ಧರ್ಮ ತಳಕು ಹಾಕಿಕೊಂಡರೆ, ಪರಿಣಾಮ ಏನು ಎಂಬುದನ್ನು ನಾವು ಇಂದು ನೋಡುತ್ತಿದ್ದೇವೆ. ಇದು ಮನುಕುಲದ ದುರಂತ!

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...