Homeಮುಖಪುಟಭಯೋತ್ಪಾದನೆಯ ಹಿಂದಿರುವುದು ಧರ್ಮವೋ... ತೈಲವೋ....? - ರಾಂ‌ ಪುನಿಯಾನಿ ಭಾಷಣ

ಭಯೋತ್ಪಾದನೆಯ ಹಿಂದಿರುವುದು ಧರ್ಮವೋ… ತೈಲವೋ….? – ರಾಂ‌ ಪುನಿಯಾನಿ ಭಾಷಣ

ಜಗತ್ತಿನಲ್ಲಿ ಭಯೋತ್ಪಾದನೆಯಿಂದಾಗಿ ಅತೀ ಹೆಚ್ಚು ಸಾಯುತ್ತಿರುವುದು ಹಿಂದೂಗಳೋ, ಕ್ರೈಸ್ತರೋ ಅಲ್ಲ. ಬದಲಾಗಿ ಮುಸಲ್ಮಾನರೇ ಆಗಿದ್ದಾರೆ.

- Advertisement -
- Advertisement -

ಮೂಲ : ರಾಂ‌ ಪುನಿಯಾನಿ
ಕನ್ನಡಕ್ಕೆ : ಇಸ್ಮತ್ ಪಜೀರ್

ಒಂದು ವೇಳೆ ಇಸ್ಲಾಮಿನ ಕಾರಣಕ್ಕೆ ಭಯೋತ್ಪಾದನಾ ಕೃತ್ಯಗಳಾಗುತ್ತಿದ್ದರೆ ಯಾವ ದೇಶದಲ್ಲಿ ಅತೀ ಹೆಚ್ಚು ಭಯೋತ್ಪಾದಕರಿರಬೇಕಿತ್ತು…?
ಇಂಡೋನೇಶ್ಯಾದಲ್ಲಿರಬೇಕಿತ್ತು. ಯಾಕೆಂದರೆ ಜಗತ್ತಿನಲ್ಲಿ ಅತೀ ಹೆಚ್ಚು ಮುಸ್ಲಿಮರಿರುವ ರಾಷ್ಟ್ರ ಇಂಡೋನೇಶ್ಯಾ.. ಆದರೆ ಅಲ್ಲಿಂದ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ವರದಿಯಾಗುತ್ತಿಲ್ಲ. ಆದರೆ ಇಸ್ಲಾಮನ್ನು ಭಯೋತ್ಪಾದನೆಯೊಂದಿಗೆ ದುರುದ್ದೇಶಪೂರ್ವಕವಾಗಿ ಚಿತ್ರಿಸಲಾಗುತ್ತಿದೆ. ಜಗತ್ತಿನಲ್ಲಿ ಭಯೋತ್ಪಾದನೆಯಿಂದಾಗಿ ಅತೀ ಹೆಚ್ಚು ಸಾಯುತ್ತಿರುವುದು ಹಿಂದೂಗಳೋ, ಕ್ರೈಸ್ತರೋ ಅಲ್ಲ. ಬದಲಾಗಿ ಸ್ವತಃ ಮುಸಲ್ಮಾನರೇ ಆಗಿದ್ದಾರೆ.

ಜಗತ್ತಿನ ಅತೀ ಹೆಚ್ಚು ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿರುವುದು ಪಶ್ಚಿಮ ಏಷ್ಯಾದಲ್ಲಿ. ಆ ಪ್ರದೇಶದ ಮೂರು ಮುಖ್ಯ ವಿಚಾರಗಳನ್ನು ತಮ್ಮ ಮುಂದಿಡಬಯಸುತ್ತೇ‌ನೆ.

1. ಪಶ್ಚಿಮ ಏಷ್ಯಾದಲ್ಲಿ ಮುಸ್ಲಿಮರು ಹೆಚ್ಚಿದ್ದಾರೆ.
2. ಪಶ್ಚಿಮ ಏಷ್ಯಾದಲ್ಲಿ ಅತೀ ಹೆಚ್ಚು ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿರುತ್ತವೆ.
3. ಇದೇ ಪಶ್ಚಿಮ ಏಷ್ಯಾದಲ್ಲಿ ಇಂಧನದ ಖಜಾನೆಯೇ ಇದೆ.
ಈಗ ಹೇಳಿ ಭಯೋತ್ಪಾದನೆ ಯಾವ ಕಾರಣಕ್ಕೆ ನಡೆಯುತ್ತಿದೆ.. ಇಂಧನದ ಕಾರಣಕ್ಕೋ… ಇಸ್ಲಾಮಿನ ಕಾರಣಕ್ಕೋ..?

ಇಂಧನದ ಕಾರಣಕ್ಕಾಗಿ ನಡೆಯುತ್ತಿದೆ ಎನ್ನುವುದು ಸ್ಪಷ್ಟ. ಈ ಇಂಧನದ
ಯಜಮಾನಿಕೆಯನ್ನು ಯಾವ ಶಕ್ತಿ ಪಡೆಯ ಬಯಸುತ್ತದೋ ಆ ಶಕ್ತಿ ವಾಷಿಂಗ್ಟನ್‌ನಲ್ಲಿ ಕೂತು ಇಡೀ ಜಗತ್ತನ್ನು ತನ್ನ ಕಿರುಬೆರಳಲ್ಲಿ‌ ಆಟವಾಡಿಸುತ್ತದೆ. ಒಟ್ಟಿನಲ್ಲಿ ದುಷ್ಕೃತ್ಯಗಳನ್ನು ಎಸಗುವವರು ಯಾರೋ… ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲ್ಪಡುವವರು ಇನ್ಯಾರೋ…

ಇದೆಲ್ಲಾ ಹೇಗೆ ಮತ್ತು ಎಲ್ಲಿಂದ ಪ್ರಾರಂಭವಾಗಿದೆ ಎನ್ನುವುದನ್ನೂ ನಾವು ಅರ್ಥೈಸಲೇಬೇಕಾಗುತ್ತದೆ.

ಮೇಲ್ನೋಟಕ್ಕೆ ಈ ಚಟುವಟಿಕೆಗಳೆಲ್ಲಾ ಅಲ್ ಖಾಯಿದಾದ ಮದ್ರಸಾಗಳಿಂದ ಆರಂಭವಾಗುತ್ತದೆ. ಅಲ್ ಖಾಯಿದಾದ ಮದ್ರಸಾಗಳಲ್ಲಿ ಭಯೋತ್ಪಾದನಾ ತರಭೇತಿ ನೀಡಲಾಗುತ್ತದೆ. ಆದರೆ ಇದರ ಹಿಂದಿರುವ ಶಕ್ತಿ ಇದೇ ಅಮೆರಿಕಾ. ಇದಕ್ಕಾಗಿ ಅಮೆರಿಕಾ ಎಂಟು ಸಾವಿರ ಮಿಲಿಯನ್ ಡಾಲರ್ ದುಡ್ಡು ಮತ್ತು ಏಳು ಸಾವಿರ ಟನ್ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿತು. ದುಡ್ಡು ಮತ್ತು ಶಸ್ತ್ರಾಸ್ತ್ರ ಸರಬರಾಜು ಮಾಡಿ ಅವರ ಬ್ರೈನ್ ವಾಶ್ ಮಾಡಲಾಯಿತು. ಅದಕ್ಕಾಗಿ ಅವರು ಇಸ್ಲಾಮಿನ ಎರಡು ಮಹತ್ವಪೂರ್ಣ ಶಬ್ಧಗಳ ವ್ಯಾಖ್ಯಾನವನ್ನು ತಿರುಚಿದರು.
1.ಜಿಹಾದ್
2.ಕಾಫಿರ್

ಈ ಜಿಹಾದ್‌ನಲ್ಲಿ ಎರಡು ವಿಧಗಳಿವೆ.
1. ಜಿಹಾದ್- ಎ-ಅಕ್ಬರ್ (ಹಿರಿ ಜಿಹಾದ್)
2. ಜಿಹಾದ್-ಎ-ಅಕ್ಸರ್ (ಕಿರಿ‌ ಜಿಹಾದ್)

ಜಿಹಾದ್-ಎ-ಅಕ್ಬರ್ ಎಂದರೆ ತನ್ನ ಸ್ವಶರೀರವು ಕೆಡುಕುಗಳತ್ತ ಹೋಗುವುದರ ವಿರುದ್ಧ ಅದರೊಂದಿಗೆ ಹೋರಾಡುವುದು.
ಜಿಹಾದ್-ಎ-ಅಕ್ಸರ್ ಎಂದರೆ ಸಮಾಜದ ಕೆಡುಕಗಳ ವಿರುದ್ದ ಹೋರಾಡುವುದು. ಆದರೆ ಇವುಗಳ ಅರ್ಥ ಮತ್ತು ವ್ಯಾಖ್ಯಾನಗಳನ್ನು ಸಂಪೂರ್ಣವಾಗಿ ತಿರುಚಲಾಯಿತು. ನಿಮಗೆ ಯಾರ ಬಗ್ಗೆ ಸಹಮಿತವಿಲ್ಲವೋ ಮೊದಲು ಅವರಿಗೆ ಕಾಫಿರ್ ಎಂಬ ಹಣೆಪಟ್ಟಿ ಹಚ್ಚುವುದು ಮತ್ತು ಅವರನ್ನು ಕೊಲ್ಲುವುದು. ಇಂತಹ ತರಭೇತಿಗಳನ್ನು ಯಾವ ಅಲ್- ಖಾಯಿದಾದ ಮದ್ರಸಾಗಳಲ್ಲಿ‌ ನೀಡಲಾಗುತ್ತದೋ ಅವರಿಗೆ ಅಮೆರಿಕಾ ದುಡ್ಡನ್ನೂ ನೀಡಿತು, ಮಾತ್ರವಲ್ಲ ಸ್ವತಃ ಅಮೆರಿಕಾವೇ ಅವರಿಗೆ ಪಠ್ಯ ವಸ್ತುಗಳನ್ನೂ ಒದಗಿಸಿತು. ಅಲ್ ಖಾಯಿದಾದ ಮದ್ರಸಾಗಳಲ್ಲಿ ಯಾವ ತರಭೇತಿಗಳನ್ನು ನೀಡಲಾಗುತ್ತದೋ ಅದರ ಪಠ್ಯಕ್ರಮಗಳನ್ನು ವಾಷಿಂಗ್ಟನ್‌‌ನಲ್ಲಿ ತಯಾರಿಸಲಾಗುತ್ತದೆ…!!

ನೀವು ಯೂ‌ ಟ್ಯೂಬ್‌‌ನಲ್ಲಿ “ಹಿಲರಿ ಕ್ಲಿಂಟನ್, ಅಲ್- ಖಾಯಿದಾ ಮತ್ತು ಅಮೆರಿಕಾ” ಎಂಬ ಮೂರು ಪದಗಳನ್ನು ಟೈಪ್ ಮಾಡಿ ಸರ್ಚ್ ಕೊಟ್ಟರೆ ಅದರಲ್ಲಿ ನಾಲ್ಕೂವರೆ ನಿಮಿಷಗಳ ಒಂದು ವೀಡಿಯೋ ಇದೆ. (2016 ರವರೆಗೆ ಯೂಟ್ಯೂಬ್‌ನಲ್ಲಿದ್ದ ಆ ವೀಡಿಯೋವನ್ನು ಹಿಂದೆಗೆಯಲಾಗಿದೆ) ಅದರಲ್ಲಿ ಹಿಲರಿ ಕ್ಲಿಂಟನ್ ಹೇಳುತ್ತಾರೆ. “ನಮಗೆ ರಶ್ಯಾದ ವಿರುದ್ಧ ಹೋರಾಡಬೇಕಿತ್ತು. ನಮ್ಮ ಸೈನಿಕರು ವಿಯೆಟ್ನಾಂ‌ನಲ್ಲಿ ಸೋತು ಸುಸ್ತಾಗಿ ಬಂದಿದ್ದರು. ನಾವು ಏಶ್ಯಾದ ಮುಸ್ಲಿಂ ಯುವಕರ ಭುಜಗಳಲ್ಲಿ ಬಂದೂಕುಗಳನ್ನಿಟ್ಟು ಗುಂಡು ಹಾರಿಸಿದೆವು. ನಾವು ಅಲ್ ಖಾಯಿದಾ ಸೃಷ್ಟಿಸಿದೆವು. ನಮ್ಮ ಕೆಲಸಗಳನ್ನು ಅನೂಚಾನವಾಗಿ ಮಾಡಿದೆವು. ಆ ಬಳಿಕ ನಮ್ಮ ಕೈಗಳನ್ನು ತೊಳೆದು ಮರಳಿದೆವು. ಅರ್ಥಾತ್ ಕ್ಯಾನ್ಸರಿನ ಬೀಜ ಬಿತ್ತಿದೆವು. ನಾವು ನಮ್ಮ ದೇಶದಲ್ಲಿ ಸುರಕ್ಷಿತರಾಗಿದ್ದೇವೆ. ಪರಿಣಾಮವೇನಿದ್ದರೂ ಏಷ್ಯಾದ ಜನತೆ ಉಣ್ಣುತ್ತಾರೆ. ಅದರಲ್ಲೂ‌ ಪಶ್ಚಿಮ ಏಷ್ಯಾದ ಜನತೆ ಉಣ್ಣುತ್ತಾರೆ..”

ಅದರ ಜೊತೆಗೆ 9/11ರ ಬಳಿಕ ಅಮೆರಿಕಾದ ಮಾಧ್ಯಮಗಳು ಅತೀ ದೊಡ್ಡ ಕುಕೃತ್ಯಗಳನ್ನೆಸಗಿತು. ಅದು ಮಾನವ ಜನಾಂಗದ ಇತಿಹಾಸದಲ್ಲೇ ಅತ್ಯಂತ ಅಮಾನವೀಯ ದುಷ್ಕೃತ್ಯ. The most antihuman act in the history of Mankind. ಇಸ್ಲಾಮನ್ನು ಭಯೋತ್ಪಾದನೆಯ ಜೊತೆ ಥಳುಕು ಹಾಕಲಾಯಿತು.. ಯಾವ ಧರ್ಮ ಮನುಷ್ಯನಿಗೆ ಪ್ರೀತಿಯನ್ನು ಕಲಿಸುತ್ತದೋ, ಯಾವ ಧರ್ಮ ಮನುಷ್ಯನಿಗೆ ಮನುಷ್ಯನಾಗಲು ಬೋಧಿಸುತ್ತದೋ ಅದನ್ನು ಭಯೋತ್ಪಾದನೆಯೊಂದಿಗೆ ಥಳುಕು ಹಾಕಿ ಮೊದಲ ಬಾರಿಗೆ ಇಸ್ಲಾಮಿಕ್ ಟೆರರಿಸಂ ಎಂಬ ಪದವನ್ನು ಸೃಷ್ಟಿಸಿತು.

ನೆನಪಿರಲಿ ಜಗತ್ತಿನಲ್ಲಿ ಹಿಂದೆಯೂ ಭಯೋತ್ಪಾದನಾ ಕೃತ್ಯಗಳು ನಡೆದಿವೆ. ನೆನಪಿಟ್ಕೊಳ್ಳಿ ಐರಿಶ್ ರಿಪಬ್ಲಿಕನ್ ಆರ್ಮಿ, ಖಲಿಸ್ತಾನ್ ಮೂವ್‌ಮೆಂಟ್, ನಾಥೂರಾಂ ಗೋಡ್ಸೆ ಮಾಡಿದ ಗಾಂಧೀಜಿಯ ಹತ್ಯೆ, ಇಂದಿರಾ ಗಾಂಧಿಯ ಹತ್ಯೆ, ಎಲ್ಟಿಟಿ‌ಇ ಮಾಡಿದ ರಾಜೀವ್ ಗಾಂಧಿಯ ಹತ್ಯೆ.. ಹೀಗೆ ಸಂಘಟಿತ ಭಯೋತ್ಪಾದನಾ ಚಟುವಟಿಕೆಗಳು ಹಿಂದೆಯೂ ಇತ್ತು. ಆದರೆ ಅವ್ಯಾವುವನ್ನೂ ಆ ಕೃತ್ಯಗಳನ್ನೆಸಗಿದವರ ಧರ್ಮದ ಜೊತೆಗೆ ಥಳುಕು ಹಾಕಲಾಗುತ್ತಿರಲಿಲ್ಲ. ಆದರೆ ಅಲ್ ಖಾಯಿದಾ ಮಾಡಿದ ದುಷ್ಕೃತ್ಯಗಳಿಗೆ ಅಮೆರಿಕಾ ಕೊಟ್ಟ ಹೆಸರು ಇಸ್ಲಾಮಿಕ್ ಟೆರರಿಸಂ..!! ಇದರ ಹಿಂದೆ ಇಸ್ಲಾಮ್ ಧರ್ಮದ ಯಾವುದೇ ಕೈವಾಡವಿರಲಿಲ್ಲ.

ಜಿಹಾದ್ ಮತ್ತು ಕಾಫಿರ್ ಎಂಬ ಪದಗಳ ಅರ್ಥ ಮತ್ತು ವ್ಯಾಖ್ಯಾನವನ್ನು ತಿರುಚಲಾಯಿತು. ಆ ಮೂಲಕ ಮಾನವ ಜನಾಂಗದ ಮೆದುಳು ತೊಳೆಯುವ ಕೆಲಸ ಆರಂಭಿಸಲಾಯಿತು. ಈ ಪ್ರಕ್ರಿಯೆ ಒಂದು ವಿಧದ ಕ್ಯಾನ್ಸರ್. ನನಗೆ ಸ್ವಲ್ಪ ವೈದ್ಯಕೀಯ ಹಿನ್ನೆಲೆಯಿದೆ. ಆದುದರಿಂದ ಕ್ಯಾನ್ಸರ್ ಎಂದರೇನೆಂದು ನಾನು ಚೆನ್ನಾಗಿ ಬಲ್ಲೆ. ಕ್ಯಾನ್ಸರ್‌ಗೆ ಮೊದಲ ಹಂತದಲ್ಲಿ ಚಿಕಿತ್ಸೆ ನೀಡಬಹುದು. ಆದರೆ ಫೈನಲ್ ಹಂತ ತಲುಪಿದರೆ ಅದು ಮಾನವನ ಇಡೀ ದೇಹವನ್ನು ನಾಶಪಡಿಸುವಂತೆ, ಈ ಕ್ಯಾನ್ಸರ್ ಜಗತ್ತನ್ನೇ ನಾಶಪಡಿಸುತ್ತದೆ. ಅಲ್ ಖಾಯಿದಾ ಎಂದರೆ ಅದೇ ಕ್ಯಾನ್ಸರ್. ಅಲ್ ಖಾಯಿದಾದ ಪ್ರಯೋಗದ ಮೂಲಕ ಅಮೆರಿಕಾ ಹರಡಿದ್ದು ಮನುಕುಲಕ್ಕೆ ಮಾರಕವಾದ ಕ್ಯಾನ್ಸರನ್ನಾಗಿದೆ.

ವಿಷಯ ಇಷ್ಟಕ್ಕೇ ಮುಗಿಯುವುದಿಲ್ಲ. ಇಂಧನ ದಾಹ ಯಾವುದೇ ದಾಹಕ್ಕಿಂತ ದೊಡ್ಡದು. ನಮಗೆಲ್ಲಾ ಗೊತ್ತಿದೆ ಭಾರತ ಇನ್ನೂರು ವರ್ಷಗಳ ಕಾಲ ಇಂಗ್ಲೆಂಡಿನ ಗುಲಾಮಗಿರಿ ಅನುಭವಿಸಿದೆ. ಯಾತಕ್ಕಾಗಿ ಅವರು ನಮ್ಮನ್ನು ಗುಲಾಮಗಿರಿಗೆ ತಳ್ಳಿದರು..? ಅವರಿಗೆ ಇಲ್ಲಿನ ಸಂಪತ್ತನ್ನು ದೋಚಬೇಕಿತ್ತು. ಅದು ವಸಾಹತುಶಾಹಿತ್ವ.

ವಸಾಹತುಶಾಹಿತ್ವದ ಬಳಿಕ ಅಸ್ತಿತ್ವಕ್ಕೆ ಬಂದುದಾಗಿದೆ ಸಾಮ್ರಾಜ್ಯಶಾಹಿತ್ವ (imperialism). ಸಾಮ್ರಾಜ್ಯಶಾಹಿತ್ವವು ಜಗತ್ತಿನಾದ್ಯಂತದ ಸಂಪತ್ತನ್ನು ದೋಚುತ್ತದೆ ಅಥವಾ ಅದರ ಮೇಲೆ ಯಜಮಾನಿಕೆ ಸಾಧಿಸುತ್ತದೆ. ಇದಕ್ಕಾಗಿ ಅಮೆರಿಕಾ ಎಸಗಿದ ಇನ್ನೊಂದು‌ ದುಷ್ಕೃತ್ಯ ಇರಾಕಿನ ಮೇಲಿನ ದಾಳಿ. ಇರಾಕಿನ ಮೇಲೆ ನಡೆಸಲಾದ ಯುದ್ಧ ಏಕಾಏಕಿ ಮಾಡಿದ್ದೇನಲ್ಲ. ಮೊದಲು ದಾಳಿ ಮಾಡುವ ಕುರಿತು ತೀರ್ಮಾನಿಸಿದರು. ಆ ಬಳಿಕ ಅದಕ್ಕೆ ಸಮರ್ಥನೆಗಳನ್ನು ಹುಡುಕಿದರು. ಇರಾಕಿನ ಬಳಿ ಸಮೂಹ ನಾಶಕ ಶಸ್ತ್ರಾಸ್ತ್ರಗಳಿವೆ ಎಂದು ಜಗತ್ತಿನಾದ್ಯಂತ ಎಲ್ಲೆಡೆಗೂ ಸಮೂಹ ನಾಶಕ ಅಸ್ತ್ರಗಳನ್ನು ಸರಬರಾಜು ಮಾಡುವ ಅಮೆರಿಕಾವೇ ಬೊಬ್ಬಿರಿಯತೊಡಗಿತು. ಈ ಚರ್ಚೆ ದೀರ್ಘ ಕಾಲ ಅದೇ ಹಾದಿಯಲ್ಲಿ ಸಾಗುವಂತೆ ನೋಡಿಕೊಳ್ಳಲಾಯಿತು.

ವಿಶ್ವಸಂಸ್ಥೆಯೇನಿದೆಯೋ ಅದು ಅಮೆರಿಕಾದ ಜೇಬಿನಲ್ಲೇ ಇದೆ. ಅದನ್ನು ಅಮೆರಿಕಾ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತದೆ. ಅದರ ಮೌನ ಸಮ್ಮತಿಯೊಂದಿಗೆ ಅಮೆರಿಕಾ ಇರಾಕ್ ಮೇಲೆ ಎರಗಿ ಬಿತ್ತು. ಇರಾಕಿನ ಮೇಲೆ ಅಮೆರಿಕಾ ಎರಗಿ ಬಿದ್ದ ಕಾರಣ ಅಲ್ಲಿನ ಸೇನಾ ಸ್ವರೂಪ ಗಲಿಬಿಲಿಗೊಳಗಾಯಿತು. ಒಂದೆಡೆ ಅಲ್- ಖಾಯಿದಾದ ಐಡಿಯಾಲಜಿಯೂ ಅದಾಗಲೇ ಬಲಿಷ್ಠವಾಗಿ ಬೇರೂರಿತ್ತು. ಇವೆರಡನ್ನೂ ಸೇರಿಸಿ ಐಸಿಸ್‌ಗೆ ಭದ್ರ ಬುನಾದಿ ಹಾಕಿತು. ಇಂದು ಇಸ್ಲಾಮಿನ ಹೆಸರಲ್ಲಿ ಜಗತ್ತಿನಾದ್ಯಂತ ಏನೆಲ್ಲಾ ಭಯೋತ್ಪಾದನಾ ಕೃತ್ಯಗಳು ನಡೆಯುತ್ತಿವೆಯೋ, ವಾಸ್ತವದಲ್ಲಿ‌ ಅದು “ಜಗತ್ತಿನ ಇಂಧನ ಸಂಪನ್ಮೂಲಗಳ ಮೇಲೆ ನಿಯಂತ್ರಣ ಸಾಧಿಸಿ ತನ್ನ ಯಜಮಾನಿಕೆ ಸ್ಥಾಪಿಸಲು ಸಾಮ್ರಾಜ್ಯಶಾಹಿ ಸೃಷ್ಟಿಸಿದ ಅತ್ಯಂತ ನೀಚ ಕೃತ್ಯವಾಗಿದೆ..”

  • ದೇಶದ ಪ್ರಮುಖ ಬುದ್ಧಿಜೀವಿ ಚಿಂತಕರಲ್ಲೊಬ್ಬರಾದ ರಾಂ ಪುನಿಯಾನಿ 2016ರಲ್ಲಿ ಮಾಡಿದ ಭಾಷಣವೊಂದರ ಕನ್ನಡಾನುವಾದವಿದು

ಕನ್ನಡಕ್ಕೆ : ಇಸ್ಮತ್ ಪಜೀರ್

(ಮಂಗಳೂರಿನ ಯುವ ಲೇಖಕರಾದ ಇಸ್ಮತ್ ಪಜೀರ್ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿದ್ದರು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಾರರ ಮೇಲಿನ ಹಲ್ಲೆ ಖಂಡಿಸಿ ಅದಕ್ಕೆ ರಾಜೀನಾಮೆ ನೀಡಿ ಹೊರಬಂದವರು. ತಮ್ಮದೇ ಆದ ಪಾಲಿಕ್ಲಿನಿಕ್ ನಡೆಸುತ್ತಿದ್ದಾರೆ.)


ಇದನ್ನೂ ಓದಿ: ಭೂ ಹಂಚಿಕೆ ಏಕೆ ಮಾಡಬೇಕೆಂದರೆ?: ದೇವರಾಜ ಅರಸು ಭಾಷಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಫ್ಘಾನಿಸ್ಥಾನದ ಇಂದಿನ ವಾಸ್ತವದ ಬಗ್ಗೆ ರಾಂ ಪುನಿಯಾನಿ ಭಾಷಣದ ಕನ್ನಡ ಅನುವಾದ ನೋಡಿದೆ. ಅದು ಏಕಮುಖವಾಗಿದೆ ಮತ್ತು ಭಾಗಶಃ ಸರಿ ಅಷ್ಟೇ. ಎಂಬತ್ತರ ದಶಕದಲ್ಲಿ ರಶಿಯಾ ಮತ್ತು, ಕಳೆದ ಇಪ್ಪತ್ತು ವರ್ಷಗಳಲ್ಲಿ ಅಮೆರಿಕಾ, ರುದ್ರ ನರ್ತನ ಮಾಡಿವೆ ನಿಜ. ಆದರೆ, ಅವರನ್ನು ಹೊರಗಟ್ಟಲು, ಅಫ್ಘಾನಿಸ್ಥಾನದ ಜನರು ಒಕ್ಕಟ್ಟಾಗಿ ಪ್ರಯತ್ನ ಮಾಡಲಿಲ್ಲ. ಪಾಶ್ಚಾತ್ಯರ ಪ್ರಾಬಲ್ಯದಿಂದ ದೇಶ ವಿಮೋಚನೆಗೆ ಬದಲು,ಬುಡಕಟ್ಟುಗಳು ತಮ್ಮತಮ್ಮಲ್ಲಿ ಬಡಿದಾಡುವ, ಶಕ್ತಿ ಪ್ರದರ್ಶಿಸುವ ಮತ್ತು ಅಧಿಕಾರ ಮೆರೆಯುವ ತಾಣವಾಗಿ ಅಫ್ಘಾನ್ ಪರಿವರ್ತಿತವಾಗಿದೆ. ಇದಕ್ಕೆ, ಕನಿಷ್ಠ ತಾರತಮ್ಯ ಜ್ಞಾನವು ಇಲ್ಲದ ಅಫ್ಘಾನ್ ಜನರೇ ನೇರವಾಗಿ ಕಾರಣ ವಿನಾ, ಪರದೇಶಗಳೇ ಪೂರ್ಣ ಹೊಣೆ ಅಲ್ಲ. ಅದರೊಂದಿಗೆ ಧರ್ಮ ತಳಕು ಹಾಕಿಕೊಂಡರೆ, ಪರಿಣಾಮ ಏನು ಎಂಬುದನ್ನು ನಾವು ಇಂದು ನೋಡುತ್ತಿದ್ದೇವೆ. ಇದು ಮನುಕುಲದ ದುರಂತ!

LEAVE A REPLY

Please enter your comment!
Please enter your name here

- Advertisment -

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...