Homeಅಂಕಣಗಳುಬಹುಜನ ಭಾರತ; ಫಿರೋಜ್ ಗಾಂಧೀ ಎಂಬ ನೆಹರೂ ಅಳಿಯ ಹೀಗಿದ್ದರು...

ಬಹುಜನ ಭಾರತ; ಫಿರೋಜ್ ಗಾಂಧೀ ಎಂಬ ನೆಹರೂ ಅಳಿಯ ಹೀಗಿದ್ದರು…

- Advertisement -
- Advertisement -

ಆಗಸ್ಟ್ 20 ದಿವಂಗತ ಪ್ರಧಾನಿ ರಾಜೀವ್ ಗಾಂಧೀ ಅವರು ಹುಟ್ಟಿದ ದಿನ. ಅಲ್ಲಿಂದಾಚೆ ಇಪ್ಪತ್ತು ದಿನಗಳ ಅಂತರದಲ್ಲಿ ಎದುರಾಗುವುದು ಸೆಪ್ಟಂಬರ್ 12. ರಾಜೀವ್ ಅವರ ತಂದೆ ಮತ್ತು ಕಾಂಗ್ರೆಸ್ ಪಕ್ಷದ ಗಣ್ಯ ನಾಯಕರಲ್ಲಿ ಒಬ್ಬರಾಗಿದ್ದ ಫಿರೋಜ್ ಗಾಂಧೀ ಜನಿಸಿದ ದಿನ ಅದು. ಅವರು ಗತಿಸಿದ ದಿನ ಕೂಡ ಸೆಪ್ಟಂಬರ್ ಎಂಟು. ಈ ಎರಡೂ ದಿನಗಳು ವರ್ಷವರ್ಷವೂ ಹೇಳ ಹೆಸರಿಲ್ಲದೆ ಸರಿದುಹೋಗುತ್ತವೆ. ನೆಹರೂ ಅಳಿಯನ ಸರಳ ಸಾರ್ವಜನಿಕ ಸ್ಮರಣೆಯೂ ಕಾಂಗ್ರೆಸ್ಸಿಗೆ ಬೇಕಿಲ್ಲ.

ನೆಹರೂ ಮನೆತನಕ್ಕೆ ಗಾಂಧೀ ಎಂಬ ಕುಲನಾಮ ಅಥವಾ ಕುಟುಂಬನಾಮವು ಬಲು ದೊಡ್ಡ ಆಸ್ತಿ. ಈ ಆಸ್ತಿಯ ಕಾರಣಪುರುಷ ಫಿರೋಜ್ ಗಾಂಧೀ. ಇಂದಿರಾ ಪ್ರಿಯದರ್ಶಿನಿ ಎಂಬ ಗಟ್ಟಿಗಿತ್ತಿ ಇಂದಿರಾಗಾಂಧೀ ಎನಿಸಿಕೊಂಡದ್ದು, ಆಕೆಯ ಮಕ್ಕಳು, ಮೊಮ್ಮಕ್ಕಳಾದ ರಾಜೀವ್, ಸಂಜಯ್, ರಾಹುಲ್, ಪ್ರಿಯಾಂಕಾ, ವರುಣ್, ಸೊಸೆಯಂದಿರಾದ ಸೋನಿಯಾ ಮತ್ತು ಮೇನಕಾ ಅವರು ಹೆಸರುಗಳಿಗೆ ಗಾಂಧೀ ಎಂಬ ಕುಟುಂಬನಾಮ ಸೇರಿಕೊಂಡಿರುವ ಕಾರಣ ಫಿರೋಜ್ ಗಾಂಧಿಯೇ.

ಪಾಕಿಸ್ತಾನದ ಪ್ರಮುಖ ರಾಜಕೀಯ ಕುಟುಂಬದ ಅಳಿಯ ಆಸೀಫ್ ಅಲಿ ಜರ್ದಾರಿ. ಹತ್ಯೆಗೀಡಾಗುವ ಮುನ್ನ ಆ ದೇಶದ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ ಅವರ ಪತಿ. ಬೆನಜೀರ್ ಹತ್ಯೆಯ ನಂತರ ಪಾಕಿಸ್ತಾನದ ಪ್ರಧಾನಿಯಾಗಿ ಮೆರೆದರು. ಚಾಣಾಕ್ಷ ಚಂದ್ರಬಾಬು ನಾಯ್ಡು ಮಗಳ ಕೊಟ್ಟ ಮಾವ ಎನ್.ಟಿ.ಆರ್. ಅವರನ್ನೇ ನುಂಗಿ ನೀರು ಕುಡಿದು ಅಧಿಕಾರದ ಗದ್ದುಗೆಯನ್ನು ಕೈವಶ ಮಾಡಿಕೊಂಡವರು. ಶಿವಸೇನೆಯ ಮನೋಹರ ಜೋಷಿ ಅವರ ರಾಜಕೀಯ ಭವಿಷ್ಯಕ್ಕೆ ಬೆಂಕಿ ಇಕ್ಕಿದ್ದವರು ಅವರ ರಿಯಲ್ ಎಸ್ಟೇಟ್ ಉದ್ಯಮಿ ಆಳಿಯನ ಹೆಸರು ಗಿರೀಶ್ ವ್ಯಾಸ್. ಬಿಜೆಪಿಯ ಅಂತಃಪುರದಲ್ಲಿ ಗುಸುಗುಸುವಿಗೆ ಕಾರಣರಾಗಿದ್ದವರು ಅಟಲ್ ಬಿಹಾರಿ ವಾಜಪೇಯಿ ಅಳಿಯ ರಂಜನ್ ಭಟ್ಟಾಚಾರ್ಯ ಅವರು. ದೇವರಾಜ ಅರಸು ಅವರ ಅಳಿಯ ಎಂ.ಡಿ.ನಟರಾಜ್ ಮತ್ತು ರಾಮಕೃಷ್ಣ ಹೆಗಡೆ ಅಳಿಯ ಮನು ನಿಚ್ಚಾನಿ ಒಂದು ಕಾಲದಲ್ಲಿ ಸುದ್ದಿ ಮಾಡಿದ್ದ ರಾಜಕೀಯ ಕುಟುಂಬಗಳ ಅಳಿಯಂದಿರು. ಸೋನಿಯಾ ಗಾಂಧೀ ಅವರ ಅಳಿಯ ರಾಬರ್ಟ್ ವಾಡ್ರಾ ಅವರೂ ವಿವಾದದ ರಾಡಿ ಎಬ್ಬಿಸಿದ್ದವರೇ.

ಅಳಿಯಂದಿರು ರಾಜಕಾರಣದ ಕನಸು ಕಾಣುವುದನ್ನು ತಪ್ಪೆಂದು ಹೇಳಲಾಗದು. ನೆಲದ ಕಾನೂನೂ ಅದಕ್ಕೆ ಅಡ್ಡಬಾರದು. ಆದರೆ ರಾಜಕೀಯ ಅಧಿಕಾರವು ಉಳ್ಳವರಲ್ಲೇ ಹೆಪ್ಪುಗಟ್ಟಿರುವ ಪರಂಪರೆಯೊಂದು ಈ ದೇಶದಲ್ಲಿದೆ. ದೊಡ್ಡವೂ ಸಣ್ಣವೂ ಸೇರಿ 100-200 ಕುಟುಂಬಗಳೇ ಈ ದೇಶವನ್ನು ಆಳುತ್ತಿವೆ ಎಂಬುದು ಸಮೀಕ್ಷೆಯೊಂದರಿಂದ ಹೊರಬಿದ್ದಿರುವ ಸಂಗತಿ. ಜನತಂತ್ರದ ಹೆಸರಿನಲ್ಲಿ ನಡೆಯುತ್ತಿರುವ ಕುಚೋದ್ಯ. ಬಿಜೆಪಿ ಸೇರಿದಂತೆ ಯಾವ ಪಕ್ಷವೂ ಈ ಮಾತಿಗೆ ಹೊರತಲ್ಲ. ಒಂದು ಪಕ್ಷ ಹೆಚ್ಚು ಅಪರಾಧಿ ಇದ್ದೀತು, ಮತ್ತೊಂದು ಕಡಿಮೆ ಇದ್ದೀತು. ಆದರೆ ಎಲ್ಲ ಪಕ್ಷಗಳೂ ಅಪರಾಧಿಗಳೇ. ಸ್ನಾನದ ಕೋಣೆಯಲ್ಲಿ ಎಲ್ಲರೂ ಬೆತ್ತಲೆ (ಹಮಾಮ್ ಮೇಂ ಸಬ್ ನಂಗಾ) ಎಂಬ ಗಾದೆ ಮಾತಿನಂತೆ.

ವಂಶಪಾರಂಪರ್ಯ ರಾಜಕಾರಣದ ಈ ಅನಿಷ್ಟ ದಿಲ್ಲಿಯಿಂದ ಹಳ್ಳಿಯತನಕ ಬೇರು ಬಿಟ್ಟಿದೆ. ಹೇರಳ ಹಣಗಳಿಸಲು ರಾಜಕಾರಣವೇ ರಾಜಮಾರ್ಗ ಎಂಬುದು ಜನಜನಿತ ಸಂಗತಿ. ಈ ಕಾರಣದಿಂದಾಗಿಯೇ ರಾಜಕಾರಣವು ಕೌಟುಂಬಿಕ ವ್ಯಾಪಾರ-ವ್ಯವಹಾರದ ರೂಪ ತಳೆದಿದೆ.

ಅಳಿಯಂದಿರ ಮಾತಿಗೆ ಮರಳೋಣ. ಮೇಲೆ ಹೇಳಿದ ಅಳಿಯಂದಿರ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವವರು ಜವಾಹರಲಾಲ್ ನೆಹರೂ ಅವರ ಅಳಿಯ ಫಿರೋಜ್ ಗಾಂಧೀ. ಇಂದಿರಾ ಪ್ರಿಯದರ್ಶಿನಿ ಅವರ ಪತಿ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. 1930ರಲ್ಲಿ ಫೈಜಾಬಾದ್ ಜೈಲಿನಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರೊಂದಿಗೆ 19 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದರು (ಯೋಗಿ ಆದಿತ್ಯನಾಥ್ ಸರ್ಕಾರ ಫೈಜಾಬಾದನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದೆ). ಇಂದಿರಾ ಪ್ರಿಯದರ್ಶಿನಿ ಅವರೊಡನೆ ವಿವಾಹದ ನಂತರ ಸ್ವತಂತ್ರ ಭಾರತದ ಲೋಕಸಭೆಯ ಸದಸ್ಯರಾಗಿ ಆರಿಸಿ ಬಂದಿದ್ದರು. ನೆಹರೂ ನೇತೃತ್ವದ ಸರ್ಕಾರದ ಹಣಕಾಸು ಮಂತ್ರಿ ಟಿ.ಟಿ.ಕೃಷ್ಣಮಾಚಾರಿ ಅವರ ಮೇಲೆ ಆರ್ಥಿಕ ಅವ್ಯವಹಾರದ ಆಪಾದನೆಗಳನ್ನು ಮಾಡಿ ಅಲ್ಲೋಲಕಲ್ಲೋಲ ಉಂಟು ಮಾಡಿದ್ದರು. ಲೋಕಸಭೆ ಬೆಕ್ಕಸ ಬೆರಗಾಗಿತ್ತು. ಕೃಷ್ಣಮಾಚಾರಿ ಅವರು ರಾಜೀನಾಮೆ ನೀಡಬೇಕಾಗಿ ಬರುತ್ತದೆ.

ಉತ್ತರಪ್ರದೇಶದ ರಾಯಬರೇಲಿಯಿಂದ ಕಾಂಗ್ರೆಸ್ ಸಂಸದನಾಗಿ 1952ರಲ್ಲಿ ಆರಿಸಿ ಬರುವ ಫಿರೋಜ್ ಗಾಂಧೀ ಮೊದಲ ಕೆಲವು ವರ್ಷಗಳ ಕಾಲ ಹಿಂದಿನ ಬೆಂಚಿನ ಸದಸ್ಯರಾಗಿ ಕಾಲ ಕಳೆಯುತ್ತಾರೆ. 1956 ಮತ್ತು 1957ರಲ್ಲಿ ಭ್ರಷ್ಟಾಚಾರ ವಿರೋಧೀ ಆಂದೋಲನದ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಆಗ ತಾನೇ ಕಣ್ಣು ಬಿಟ್ಟಿದ್ದ ಸರ್ಕಾರಿ ಸಂಸ್ಥೆ ಭಾರತೀಯ ಜೀವವಿಮಾ ನಿಗಮ ತನ್ನ ಐವತ್ತೈದು ಲಕ್ಷ ಪಾಲಿಸಿದಾರರ ಹಣದ ದುರುಪಯೋಗದ ಹಗರಣದ ಕೇಂದ್ರಬಿಂದು ಆಗುತ್ತದೆ. ಷೇರು ಮಾರುಕಟ್ಟೆ ಜೂಜು ಷೋಕಿಗೆ ಕುಖ್ಯಾತನಾಗಿದ್ದ ಹರಿದಾಸ್ ಮುಂಧ್ರಾ ಎಂಬಾತನ ಕಂಪನಿಗಳ ಷೇರುಗಳನ್ನು ಮಾರುಕಟ್ಟೆ ದರಕ್ಕಿಂತಲೂ ಹೆಚ್ಚು ದರ ತೆತ್ತು ಖರೀದಿಸಲು ಎಲ್‌ಐಸಿ ಪಾಲಿಸಿದಾರರ ಕಂತುಗಳ ಹಣವಾದ 144 ಲಕ್ಷ ರುಪಾಯಿಯನ್ನು ಬಳಸಲಾಗುತ್ತದೆ.

ಆಡಳಿತ ಪಕ್ಷದ ಸದಸ್ಯನಾಗಿ ಫಿರೋಜ್ ಲೋಕಸಭೆಯಲ್ಲಿ ನಿಂತು ತಮ್ಮ ಮಾವನ ಸರ್ಕಾರದ ಹುಳುಕನ್ನು ಬಯಲಿಗೆಳೆಯುತ್ತಾರೆ. ಈ ಹಗರಣ ಸಾರ್ವಜನಿಕ ಗದ್ದಲ ಆಗುವುದು ನೆಹರೂಗೆ ಬೇಕಿರಲಿಲ್ಲ. ಸರ್ಕಾರದ ವರ್ಚಸ್ಸಿಗೆ ಹೊಡೆತ ಬೀಳುತ್ತದೆಂಬ ಆಶಂಕೆ ಅವರದು. ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ಸಿ.ಛಾಗ್ಲಾ ಬಹಿರಂಗ ಬೈಠಕ್ಕುಗಳಲ್ಲಿ ನಡೆಸುವ ನ್ಯಾಯಾಂಗ ತನಿಖೆಯನ್ನು ನೋಡಲು ಜನ ದೊಡ್ಡ ಸಂಖ್ಯೆಯಲ್ಲಿ ನೆರೆಯುತ್ತಾರೆ. 1958ರಲ್ಲಿ ಹಗರಣದ ಆಪಾದನೆಗಳು ಸಾಬೀತಾಗುತ್ತವೆ. ಅಂದಿನ ಹಣಕಾಸು ಸಚಿವ ಟಿ.ಟಿ.ಕೃಷ್ಣಮಾಚಾರಿ ರಾಜೀನಾಮೆ ಕೊಡಬೇಕಾಗುತ್ತದೆ. ಹರಿದಾಸ್ ಮುಂಧ್ರಾನನ್ನು ದಿಲ್ಲಿಯ ಪ್ರತಿಷ್ಠಿತ ಹೊಟೆಲ್ ಕ್ಲ್ಯಾರಿಡ್ಜಸ್‌ನ ವಿಲಾಸೀ ಕೋಣೆಯಿಂದ ಬಂಧಿಸಿ ಕಾರಾಗೃಹಕ್ಕೆ ಕಳಿಸಲಾಗುತ್ತದೆ.

ಇಂದಿರಾ-ಫಿರೋಜ್ ಬದುಕಿನಲ್ಲಿ ಆ ವೇಳೆಗಾಗಲೇ ಬಿರುಕುಗಳು ಹಿರಿದಾಗಿರುತ್ತವೆ. ಪರಸ್ಪರರ ನಿಷ್ಠೆಯ ಕುರಿತು ಒಡಕು ಮಾತುಗಳು ದಿಲ್ಲಿ ರಾಜಕಾರಣದ ಮೊಗಸಾಲೆಯಲ್ಲಿ ಆ ಹೊತ್ತಿಗಾಗಲೆ ಗಡಚಿಕ್ಕತೊಡಗಿರುತ್ತವೆ. ಫಿರೋಜ್ ಅವರನ್ನು ನೆಹರೂ ಮತ್ತು ಇಂದಿರಾ ದೂರವೇ ಇಟ್ಟಿದ್ದು ಜನಜನಿತ.

ಫಿರೋಜ್ ಗಾಂಧೀ ಹುಟ್ಟಿದ್ದು ಮುಂಬಯಿಯಲ್ಲಿ. 1912ರ ಸೆಪ್ಟಂಬರ್ 12ರಂದು. ಗುಜರಾತೀ ಅಡ್ಡಹೆಸರಿದ್ದ ಜಹಾಂಗೀರ್ ಫೆರಾದೂನ್ ಗಾಂಧೀ ಮತ್ತು ರತ್ತೀಮಾಯಿ ಗಾಂಧೀ ಫಿರೋಜ್ ತಂದೆ ತಾಯಿ. ನಾಲ್ಕು ಮಕ್ಕಳ ತಂದೆ ಫೆರಾದೂನ್ ನೌಕಾವಿಷಯದ ಎಂಜಿನಿಯರ್. ಅಕಾಲ ಮರಣಕ್ಕೆ ತುತ್ತಾಗುತ್ತಾರೆ. ಅನಾಥ ಕುಟುಂಬ ಅಲಹಾಬಾದಿನಲ್ಲಿದ್ದ ಫೆರಾದೂನ್ ಗಾಂಧೀಯ ಚಿಕ್ಕಮ್ಮನ ಆಶ್ರಯಕ್ಕೆ ಸರಿಯುತ್ತದೆ. ಅಲ್ಲಿ ಬೆಳೆಯುವ ಫಿರೋಜ್ ಮತ್ತು ಇಂದಿರಾ ಪ್ರೀತಿಸಿ ಮದುವೆ ಆಗುತ್ತಾರೆ. ಅದು 1942ರ ಮಾರ್ಚ್ 26. ರಾಮನವಮಿಯ ದಿನ. (ಯೋಗಿ ಆದಿತ್ಯನಾಥ್ ಅವರ ಸರ್ಕಾರ ಅಲಹಾಬಾದಿನ ಹೆಸರನ್ನು ಪ್ರಯಾಗರಾಜ ಎಂದು ಬದಲಾಯಿಸಿದೆ).

ಮಹಾತ್ಮಾಗಾಂಧೀ ಮುಂದೆ ನಿಂತು ಈ ಮದುವೆ ಮಾಡಿಸುತ್ತಾರೆ. ಗಾಂಧೀಜಿ ಪ್ರಭಾವಕ್ಕೊಳಗಾಗುವ ಫಿರೋಜ್ ಗಾಂಧೀ ತಮ್ಮ ಕುಲನಾಮದ ಕಾಗುಣಿತವನ್ನು Gandhyಗೆ ಬದಲಾಗಿ Gandhi ಎಂದು ಬದಲಾಯಿಸಿಕೊಳ್ಳುತ್ತಾರೆ.

ಫಿರೋಜ್ ಹೃದಯಾಘಾತದಿಂದ 1960ರ ಸೆಪ್ಟಂಬರ್ ಎಂಟರಂದು ಕಡೆಯುಸಿರೆಳೆಯುತ್ತಾರೆ. ಆಗ ಅವರಿಗೆ ವಯಸ್ಸು 48 ಕೂಡ ಆಗಿರುವುದಿಲ್ಲ. ಮೂರು ದಿನ ಬಾಕಿ ಇರುತ್ತವೆ. ಅವರ ಅಂತ್ಯಸಂಸ್ಕಾರ ಪಾರ್ಸಿ ಮತ್ತು ಹಿಂದೂ ಪದ್ಧತಿಗಳ ಪ್ರಕಾರ ನಡೆಯುತ್ತದೆ. ದಿಲ್ಲಿಯ ನಿಗಮಬೋಧ್ ಘಾಟ್‌ನಲ್ಲಿ ತಂದೆಯ ಚಿತೆಗೆ ಕೊಳ್ಳಿ ತಗುಲಿಸುತ್ತಾರೆ ಎಳೆಯ ರಾಜೀವಗಾಂಧೀ. ಚಿತಾಭಸ್ಮದ ಅರ್ಧದಷ್ಟನ್ನು ಅಲಹಾಬಾದಿನ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಿದರೆ ಇನ್ನರ್ಧವನ್ನು ಅದೇ ನಗರದ ಪಾರ್ಸೀ ರುದ್ರಭೂಮಿಯಲ್ಲಿ ಹುಗಿದು ಕಟ್ಟಿದ ಸಮಾಧಿಯನ್ನು ಈಗಲೂ ಕಾಣಬಹುದು.

ನೆಹರೂ- ಗಾಂಧೀ ವಂಶದ ಮೂಲ ನೆಲೆ ಅಲಹಾಬಾದಿನ ’ಆನಂದಭವನ’. ಫಿರೋಜ್ ಗಾಂಧೀ ಸಮಾಧಿಗೆ ಅಲ್ಲಿಂದ ಕೆಲವೇ ಕಿಲೋಮೀಟರುಗಳ ದೂರ. ಈ ಸಂಗತಿ ಆನಂದಭವನಕ್ಕೆ ಹರಿಯುವ ಬಹುತೇಕ ಪ್ರವಾಸಿಗಳಿಗೆ ತಿಳಿಯದು. ತಿಳಿಯುವಂತೆ ಮಾಡುವ ಪ್ರಯತ್ನವನ್ನು ನೆಹರೂ-ಗಾಂಧೀ ಮನೆತನ ಮಾಡಿಲ್ಲ.


ಇದನ್ನೂ ಓದಿ: ಸರ್ಕಾರಿ ದರೋಡೆಗೆ ತೆರಿಗೆ ಎಂದು ಹೆಸರು: ಬೆಲೆ ಏರಿಕೆಗೆ ಕಾಂಗ್ರೆಸ್‌ ಕಿಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...