Homeಅಂಕಣಗಳುಬಹುಜನ ಭಾರತ; ಫಿರೋಜ್ ಗಾಂಧೀ ಎಂಬ ನೆಹರೂ ಅಳಿಯ ಹೀಗಿದ್ದರು...

ಬಹುಜನ ಭಾರತ; ಫಿರೋಜ್ ಗಾಂಧೀ ಎಂಬ ನೆಹರೂ ಅಳಿಯ ಹೀಗಿದ್ದರು…

- Advertisement -
- Advertisement -

ಆಗಸ್ಟ್ 20 ದಿವಂಗತ ಪ್ರಧಾನಿ ರಾಜೀವ್ ಗಾಂಧೀ ಅವರು ಹುಟ್ಟಿದ ದಿನ. ಅಲ್ಲಿಂದಾಚೆ ಇಪ್ಪತ್ತು ದಿನಗಳ ಅಂತರದಲ್ಲಿ ಎದುರಾಗುವುದು ಸೆಪ್ಟಂಬರ್ 12. ರಾಜೀವ್ ಅವರ ತಂದೆ ಮತ್ತು ಕಾಂಗ್ರೆಸ್ ಪಕ್ಷದ ಗಣ್ಯ ನಾಯಕರಲ್ಲಿ ಒಬ್ಬರಾಗಿದ್ದ ಫಿರೋಜ್ ಗಾಂಧೀ ಜನಿಸಿದ ದಿನ ಅದು. ಅವರು ಗತಿಸಿದ ದಿನ ಕೂಡ ಸೆಪ್ಟಂಬರ್ ಎಂಟು. ಈ ಎರಡೂ ದಿನಗಳು ವರ್ಷವರ್ಷವೂ ಹೇಳ ಹೆಸರಿಲ್ಲದೆ ಸರಿದುಹೋಗುತ್ತವೆ. ನೆಹರೂ ಅಳಿಯನ ಸರಳ ಸಾರ್ವಜನಿಕ ಸ್ಮರಣೆಯೂ ಕಾಂಗ್ರೆಸ್ಸಿಗೆ ಬೇಕಿಲ್ಲ.

ನೆಹರೂ ಮನೆತನಕ್ಕೆ ಗಾಂಧೀ ಎಂಬ ಕುಲನಾಮ ಅಥವಾ ಕುಟುಂಬನಾಮವು ಬಲು ದೊಡ್ಡ ಆಸ್ತಿ. ಈ ಆಸ್ತಿಯ ಕಾರಣಪುರುಷ ಫಿರೋಜ್ ಗಾಂಧೀ. ಇಂದಿರಾ ಪ್ರಿಯದರ್ಶಿನಿ ಎಂಬ ಗಟ್ಟಿಗಿತ್ತಿ ಇಂದಿರಾಗಾಂಧೀ ಎನಿಸಿಕೊಂಡದ್ದು, ಆಕೆಯ ಮಕ್ಕಳು, ಮೊಮ್ಮಕ್ಕಳಾದ ರಾಜೀವ್, ಸಂಜಯ್, ರಾಹುಲ್, ಪ್ರಿಯಾಂಕಾ, ವರುಣ್, ಸೊಸೆಯಂದಿರಾದ ಸೋನಿಯಾ ಮತ್ತು ಮೇನಕಾ ಅವರು ಹೆಸರುಗಳಿಗೆ ಗಾಂಧೀ ಎಂಬ ಕುಟುಂಬನಾಮ ಸೇರಿಕೊಂಡಿರುವ ಕಾರಣ ಫಿರೋಜ್ ಗಾಂಧಿಯೇ.

ಪಾಕಿಸ್ತಾನದ ಪ್ರಮುಖ ರಾಜಕೀಯ ಕುಟುಂಬದ ಅಳಿಯ ಆಸೀಫ್ ಅಲಿ ಜರ್ದಾರಿ. ಹತ್ಯೆಗೀಡಾಗುವ ಮುನ್ನ ಆ ದೇಶದ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ ಅವರ ಪತಿ. ಬೆನಜೀರ್ ಹತ್ಯೆಯ ನಂತರ ಪಾಕಿಸ್ತಾನದ ಪ್ರಧಾನಿಯಾಗಿ ಮೆರೆದರು. ಚಾಣಾಕ್ಷ ಚಂದ್ರಬಾಬು ನಾಯ್ಡು ಮಗಳ ಕೊಟ್ಟ ಮಾವ ಎನ್.ಟಿ.ಆರ್. ಅವರನ್ನೇ ನುಂಗಿ ನೀರು ಕುಡಿದು ಅಧಿಕಾರದ ಗದ್ದುಗೆಯನ್ನು ಕೈವಶ ಮಾಡಿಕೊಂಡವರು. ಶಿವಸೇನೆಯ ಮನೋಹರ ಜೋಷಿ ಅವರ ರಾಜಕೀಯ ಭವಿಷ್ಯಕ್ಕೆ ಬೆಂಕಿ ಇಕ್ಕಿದ್ದವರು ಅವರ ರಿಯಲ್ ಎಸ್ಟೇಟ್ ಉದ್ಯಮಿ ಆಳಿಯನ ಹೆಸರು ಗಿರೀಶ್ ವ್ಯಾಸ್. ಬಿಜೆಪಿಯ ಅಂತಃಪುರದಲ್ಲಿ ಗುಸುಗುಸುವಿಗೆ ಕಾರಣರಾಗಿದ್ದವರು ಅಟಲ್ ಬಿಹಾರಿ ವಾಜಪೇಯಿ ಅಳಿಯ ರಂಜನ್ ಭಟ್ಟಾಚಾರ್ಯ ಅವರು. ದೇವರಾಜ ಅರಸು ಅವರ ಅಳಿಯ ಎಂ.ಡಿ.ನಟರಾಜ್ ಮತ್ತು ರಾಮಕೃಷ್ಣ ಹೆಗಡೆ ಅಳಿಯ ಮನು ನಿಚ್ಚಾನಿ ಒಂದು ಕಾಲದಲ್ಲಿ ಸುದ್ದಿ ಮಾಡಿದ್ದ ರಾಜಕೀಯ ಕುಟುಂಬಗಳ ಅಳಿಯಂದಿರು. ಸೋನಿಯಾ ಗಾಂಧೀ ಅವರ ಅಳಿಯ ರಾಬರ್ಟ್ ವಾಡ್ರಾ ಅವರೂ ವಿವಾದದ ರಾಡಿ ಎಬ್ಬಿಸಿದ್ದವರೇ.

ಅಳಿಯಂದಿರು ರಾಜಕಾರಣದ ಕನಸು ಕಾಣುವುದನ್ನು ತಪ್ಪೆಂದು ಹೇಳಲಾಗದು. ನೆಲದ ಕಾನೂನೂ ಅದಕ್ಕೆ ಅಡ್ಡಬಾರದು. ಆದರೆ ರಾಜಕೀಯ ಅಧಿಕಾರವು ಉಳ್ಳವರಲ್ಲೇ ಹೆಪ್ಪುಗಟ್ಟಿರುವ ಪರಂಪರೆಯೊಂದು ಈ ದೇಶದಲ್ಲಿದೆ. ದೊಡ್ಡವೂ ಸಣ್ಣವೂ ಸೇರಿ 100-200 ಕುಟುಂಬಗಳೇ ಈ ದೇಶವನ್ನು ಆಳುತ್ತಿವೆ ಎಂಬುದು ಸಮೀಕ್ಷೆಯೊಂದರಿಂದ ಹೊರಬಿದ್ದಿರುವ ಸಂಗತಿ. ಜನತಂತ್ರದ ಹೆಸರಿನಲ್ಲಿ ನಡೆಯುತ್ತಿರುವ ಕುಚೋದ್ಯ. ಬಿಜೆಪಿ ಸೇರಿದಂತೆ ಯಾವ ಪಕ್ಷವೂ ಈ ಮಾತಿಗೆ ಹೊರತಲ್ಲ. ಒಂದು ಪಕ್ಷ ಹೆಚ್ಚು ಅಪರಾಧಿ ಇದ್ದೀತು, ಮತ್ತೊಂದು ಕಡಿಮೆ ಇದ್ದೀತು. ಆದರೆ ಎಲ್ಲ ಪಕ್ಷಗಳೂ ಅಪರಾಧಿಗಳೇ. ಸ್ನಾನದ ಕೋಣೆಯಲ್ಲಿ ಎಲ್ಲರೂ ಬೆತ್ತಲೆ (ಹಮಾಮ್ ಮೇಂ ಸಬ್ ನಂಗಾ) ಎಂಬ ಗಾದೆ ಮಾತಿನಂತೆ.

ವಂಶಪಾರಂಪರ್ಯ ರಾಜಕಾರಣದ ಈ ಅನಿಷ್ಟ ದಿಲ್ಲಿಯಿಂದ ಹಳ್ಳಿಯತನಕ ಬೇರು ಬಿಟ್ಟಿದೆ. ಹೇರಳ ಹಣಗಳಿಸಲು ರಾಜಕಾರಣವೇ ರಾಜಮಾರ್ಗ ಎಂಬುದು ಜನಜನಿತ ಸಂಗತಿ. ಈ ಕಾರಣದಿಂದಾಗಿಯೇ ರಾಜಕಾರಣವು ಕೌಟುಂಬಿಕ ವ್ಯಾಪಾರ-ವ್ಯವಹಾರದ ರೂಪ ತಳೆದಿದೆ.

ಅಳಿಯಂದಿರ ಮಾತಿಗೆ ಮರಳೋಣ. ಮೇಲೆ ಹೇಳಿದ ಅಳಿಯಂದಿರ ಸಾಲಿನಲ್ಲಿ ಭಿನ್ನವಾಗಿ ನಿಲ್ಲುವವರು ಜವಾಹರಲಾಲ್ ನೆಹರೂ ಅವರ ಅಳಿಯ ಫಿರೋಜ್ ಗಾಂಧೀ. ಇಂದಿರಾ ಪ್ರಿಯದರ್ಶಿನಿ ಅವರ ಪತಿ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. 1930ರಲ್ಲಿ ಫೈಜಾಬಾದ್ ಜೈಲಿನಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರೊಂದಿಗೆ 19 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದರು (ಯೋಗಿ ಆದಿತ್ಯನಾಥ್ ಸರ್ಕಾರ ಫೈಜಾಬಾದನ್ನು ಅಯೋಧ್ಯೆ ಎಂದು ಮರುನಾಮಕರಣ ಮಾಡಿದೆ). ಇಂದಿರಾ ಪ್ರಿಯದರ್ಶಿನಿ ಅವರೊಡನೆ ವಿವಾಹದ ನಂತರ ಸ್ವತಂತ್ರ ಭಾರತದ ಲೋಕಸಭೆಯ ಸದಸ್ಯರಾಗಿ ಆರಿಸಿ ಬಂದಿದ್ದರು. ನೆಹರೂ ನೇತೃತ್ವದ ಸರ್ಕಾರದ ಹಣಕಾಸು ಮಂತ್ರಿ ಟಿ.ಟಿ.ಕೃಷ್ಣಮಾಚಾರಿ ಅವರ ಮೇಲೆ ಆರ್ಥಿಕ ಅವ್ಯವಹಾರದ ಆಪಾದನೆಗಳನ್ನು ಮಾಡಿ ಅಲ್ಲೋಲಕಲ್ಲೋಲ ಉಂಟು ಮಾಡಿದ್ದರು. ಲೋಕಸಭೆ ಬೆಕ್ಕಸ ಬೆರಗಾಗಿತ್ತು. ಕೃಷ್ಣಮಾಚಾರಿ ಅವರು ರಾಜೀನಾಮೆ ನೀಡಬೇಕಾಗಿ ಬರುತ್ತದೆ.

ಉತ್ತರಪ್ರದೇಶದ ರಾಯಬರೇಲಿಯಿಂದ ಕಾಂಗ್ರೆಸ್ ಸಂಸದನಾಗಿ 1952ರಲ್ಲಿ ಆರಿಸಿ ಬರುವ ಫಿರೋಜ್ ಗಾಂಧೀ ಮೊದಲ ಕೆಲವು ವರ್ಷಗಳ ಕಾಲ ಹಿಂದಿನ ಬೆಂಚಿನ ಸದಸ್ಯರಾಗಿ ಕಾಲ ಕಳೆಯುತ್ತಾರೆ. 1956 ಮತ್ತು 1957ರಲ್ಲಿ ಭ್ರಷ್ಟಾಚಾರ ವಿರೋಧೀ ಆಂದೋಲನದ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಆಗ ತಾನೇ ಕಣ್ಣು ಬಿಟ್ಟಿದ್ದ ಸರ್ಕಾರಿ ಸಂಸ್ಥೆ ಭಾರತೀಯ ಜೀವವಿಮಾ ನಿಗಮ ತನ್ನ ಐವತ್ತೈದು ಲಕ್ಷ ಪಾಲಿಸಿದಾರರ ಹಣದ ದುರುಪಯೋಗದ ಹಗರಣದ ಕೇಂದ್ರಬಿಂದು ಆಗುತ್ತದೆ. ಷೇರು ಮಾರುಕಟ್ಟೆ ಜೂಜು ಷೋಕಿಗೆ ಕುಖ್ಯಾತನಾಗಿದ್ದ ಹರಿದಾಸ್ ಮುಂಧ್ರಾ ಎಂಬಾತನ ಕಂಪನಿಗಳ ಷೇರುಗಳನ್ನು ಮಾರುಕಟ್ಟೆ ದರಕ್ಕಿಂತಲೂ ಹೆಚ್ಚು ದರ ತೆತ್ತು ಖರೀದಿಸಲು ಎಲ್‌ಐಸಿ ಪಾಲಿಸಿದಾರರ ಕಂತುಗಳ ಹಣವಾದ 144 ಲಕ್ಷ ರುಪಾಯಿಯನ್ನು ಬಳಸಲಾಗುತ್ತದೆ.

ಆಡಳಿತ ಪಕ್ಷದ ಸದಸ್ಯನಾಗಿ ಫಿರೋಜ್ ಲೋಕಸಭೆಯಲ್ಲಿ ನಿಂತು ತಮ್ಮ ಮಾವನ ಸರ್ಕಾರದ ಹುಳುಕನ್ನು ಬಯಲಿಗೆಳೆಯುತ್ತಾರೆ. ಈ ಹಗರಣ ಸಾರ್ವಜನಿಕ ಗದ್ದಲ ಆಗುವುದು ನೆಹರೂಗೆ ಬೇಕಿರಲಿಲ್ಲ. ಸರ್ಕಾರದ ವರ್ಚಸ್ಸಿಗೆ ಹೊಡೆತ ಬೀಳುತ್ತದೆಂಬ ಆಶಂಕೆ ಅವರದು. ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ಸಿ.ಛಾಗ್ಲಾ ಬಹಿರಂಗ ಬೈಠಕ್ಕುಗಳಲ್ಲಿ ನಡೆಸುವ ನ್ಯಾಯಾಂಗ ತನಿಖೆಯನ್ನು ನೋಡಲು ಜನ ದೊಡ್ಡ ಸಂಖ್ಯೆಯಲ್ಲಿ ನೆರೆಯುತ್ತಾರೆ. 1958ರಲ್ಲಿ ಹಗರಣದ ಆಪಾದನೆಗಳು ಸಾಬೀತಾಗುತ್ತವೆ. ಅಂದಿನ ಹಣಕಾಸು ಸಚಿವ ಟಿ.ಟಿ.ಕೃಷ್ಣಮಾಚಾರಿ ರಾಜೀನಾಮೆ ಕೊಡಬೇಕಾಗುತ್ತದೆ. ಹರಿದಾಸ್ ಮುಂಧ್ರಾನನ್ನು ದಿಲ್ಲಿಯ ಪ್ರತಿಷ್ಠಿತ ಹೊಟೆಲ್ ಕ್ಲ್ಯಾರಿಡ್ಜಸ್‌ನ ವಿಲಾಸೀ ಕೋಣೆಯಿಂದ ಬಂಧಿಸಿ ಕಾರಾಗೃಹಕ್ಕೆ ಕಳಿಸಲಾಗುತ್ತದೆ.

ಇಂದಿರಾ-ಫಿರೋಜ್ ಬದುಕಿನಲ್ಲಿ ಆ ವೇಳೆಗಾಗಲೇ ಬಿರುಕುಗಳು ಹಿರಿದಾಗಿರುತ್ತವೆ. ಪರಸ್ಪರರ ನಿಷ್ಠೆಯ ಕುರಿತು ಒಡಕು ಮಾತುಗಳು ದಿಲ್ಲಿ ರಾಜಕಾರಣದ ಮೊಗಸಾಲೆಯಲ್ಲಿ ಆ ಹೊತ್ತಿಗಾಗಲೆ ಗಡಚಿಕ್ಕತೊಡಗಿರುತ್ತವೆ. ಫಿರೋಜ್ ಅವರನ್ನು ನೆಹರೂ ಮತ್ತು ಇಂದಿರಾ ದೂರವೇ ಇಟ್ಟಿದ್ದು ಜನಜನಿತ.

ಫಿರೋಜ್ ಗಾಂಧೀ ಹುಟ್ಟಿದ್ದು ಮುಂಬಯಿಯಲ್ಲಿ. 1912ರ ಸೆಪ್ಟಂಬರ್ 12ರಂದು. ಗುಜರಾತೀ ಅಡ್ಡಹೆಸರಿದ್ದ ಜಹಾಂಗೀರ್ ಫೆರಾದೂನ್ ಗಾಂಧೀ ಮತ್ತು ರತ್ತೀಮಾಯಿ ಗಾಂಧೀ ಫಿರೋಜ್ ತಂದೆ ತಾಯಿ. ನಾಲ್ಕು ಮಕ್ಕಳ ತಂದೆ ಫೆರಾದೂನ್ ನೌಕಾವಿಷಯದ ಎಂಜಿನಿಯರ್. ಅಕಾಲ ಮರಣಕ್ಕೆ ತುತ್ತಾಗುತ್ತಾರೆ. ಅನಾಥ ಕುಟುಂಬ ಅಲಹಾಬಾದಿನಲ್ಲಿದ್ದ ಫೆರಾದೂನ್ ಗಾಂಧೀಯ ಚಿಕ್ಕಮ್ಮನ ಆಶ್ರಯಕ್ಕೆ ಸರಿಯುತ್ತದೆ. ಅಲ್ಲಿ ಬೆಳೆಯುವ ಫಿರೋಜ್ ಮತ್ತು ಇಂದಿರಾ ಪ್ರೀತಿಸಿ ಮದುವೆ ಆಗುತ್ತಾರೆ. ಅದು 1942ರ ಮಾರ್ಚ್ 26. ರಾಮನವಮಿಯ ದಿನ. (ಯೋಗಿ ಆದಿತ್ಯನಾಥ್ ಅವರ ಸರ್ಕಾರ ಅಲಹಾಬಾದಿನ ಹೆಸರನ್ನು ಪ್ರಯಾಗರಾಜ ಎಂದು ಬದಲಾಯಿಸಿದೆ).

ಮಹಾತ್ಮಾಗಾಂಧೀ ಮುಂದೆ ನಿಂತು ಈ ಮದುವೆ ಮಾಡಿಸುತ್ತಾರೆ. ಗಾಂಧೀಜಿ ಪ್ರಭಾವಕ್ಕೊಳಗಾಗುವ ಫಿರೋಜ್ ಗಾಂಧೀ ತಮ್ಮ ಕುಲನಾಮದ ಕಾಗುಣಿತವನ್ನು Gandhyಗೆ ಬದಲಾಗಿ Gandhi ಎಂದು ಬದಲಾಯಿಸಿಕೊಳ್ಳುತ್ತಾರೆ.

ಫಿರೋಜ್ ಹೃದಯಾಘಾತದಿಂದ 1960ರ ಸೆಪ್ಟಂಬರ್ ಎಂಟರಂದು ಕಡೆಯುಸಿರೆಳೆಯುತ್ತಾರೆ. ಆಗ ಅವರಿಗೆ ವಯಸ್ಸು 48 ಕೂಡ ಆಗಿರುವುದಿಲ್ಲ. ಮೂರು ದಿನ ಬಾಕಿ ಇರುತ್ತವೆ. ಅವರ ಅಂತ್ಯಸಂಸ್ಕಾರ ಪಾರ್ಸಿ ಮತ್ತು ಹಿಂದೂ ಪದ್ಧತಿಗಳ ಪ್ರಕಾರ ನಡೆಯುತ್ತದೆ. ದಿಲ್ಲಿಯ ನಿಗಮಬೋಧ್ ಘಾಟ್‌ನಲ್ಲಿ ತಂದೆಯ ಚಿತೆಗೆ ಕೊಳ್ಳಿ ತಗುಲಿಸುತ್ತಾರೆ ಎಳೆಯ ರಾಜೀವಗಾಂಧೀ. ಚಿತಾಭಸ್ಮದ ಅರ್ಧದಷ್ಟನ್ನು ಅಲಹಾಬಾದಿನ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಿದರೆ ಇನ್ನರ್ಧವನ್ನು ಅದೇ ನಗರದ ಪಾರ್ಸೀ ರುದ್ರಭೂಮಿಯಲ್ಲಿ ಹುಗಿದು ಕಟ್ಟಿದ ಸಮಾಧಿಯನ್ನು ಈಗಲೂ ಕಾಣಬಹುದು.

ನೆಹರೂ- ಗಾಂಧೀ ವಂಶದ ಮೂಲ ನೆಲೆ ಅಲಹಾಬಾದಿನ ’ಆನಂದಭವನ’. ಫಿರೋಜ್ ಗಾಂಧೀ ಸಮಾಧಿಗೆ ಅಲ್ಲಿಂದ ಕೆಲವೇ ಕಿಲೋಮೀಟರುಗಳ ದೂರ. ಈ ಸಂಗತಿ ಆನಂದಭವನಕ್ಕೆ ಹರಿಯುವ ಬಹುತೇಕ ಪ್ರವಾಸಿಗಳಿಗೆ ತಿಳಿಯದು. ತಿಳಿಯುವಂತೆ ಮಾಡುವ ಪ್ರಯತ್ನವನ್ನು ನೆಹರೂ-ಗಾಂಧೀ ಮನೆತನ ಮಾಡಿಲ್ಲ.


ಇದನ್ನೂ ಓದಿ: ಸರ್ಕಾರಿ ದರೋಡೆಗೆ ತೆರಿಗೆ ಎಂದು ಹೆಸರು: ಬೆಲೆ ಏರಿಕೆಗೆ ಕಾಂಗ್ರೆಸ್‌ ಕಿಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...