Homeನಿಜವೋ ಸುಳ್ಳೋ‘ರಿಪಬ್ಲಿಕ್’ ಆಫ್ ಮೋದಿ, ಮೀಡಿಯಾ ಆ್ಯಂಡ್ ಪಿಆರ್‍ಒಸ್:  ಓಟು, ಟಿಆರ್‍ಪಿಗಾಗಿ ಯಾವ ಮಟ್ಟಕ್ಕೂ.....

‘ರಿಪಬ್ಲಿಕ್’ ಆಫ್ ಮೋದಿ, ಮೀಡಿಯಾ ಆ್ಯಂಡ್ ಪಿಆರ್‍ಒಸ್:  ಓಟು, ಟಿಆರ್‍ಪಿಗಾಗಿ ಯಾವ ಮಟ್ಟಕ್ಕೂ…..

ನ್ಯೂಸ್ 18 ಕನ್ನಡ ಹಿನ್ನೆಲೆಯಲ್ಲಿ ಒಂದು ಭಕ್ತಿಯ ಹಾಡಿನ ಸಂಗೀತ ತೇಲಿಬಿಟ್ಟು ಪಾವನವಾಯಿತು. ಸಕಲ ಸೌಲಭ್ಯಗಳ ಆ ಕೃತಕ ಗುಹೆಯಲ್ಲಿ ಮೋದಿಯ ಕೃತಕ ಧ್ಯಾನದ ಬಗ್ಗೆ ಇವರಾರೂ ಚಕಾರ ಎತ್ತಲಿಲ್ಲ.

- Advertisement -
- Advertisement -

ಚುನಾವಣಾ ಪ್ರಚಾರ ಅಂತ್ಯವಾದ ನಂತರವೂ, ಮತದಾರರ ಮೇಲೆ ಪ್ರಭಾವ ಬೀರಲು ‘ಭಕ್ತಿ’ಯನ್ನೂ ಒಂದು ಸರಕಾಗಿಸಿದ ಮೋದಿ, ಮೀಡಿಯಾ ಮತ್ತು ಪಿಆರ್‍ಒಗಳ ರಿಪಬ್ಲಿಕ್ ಕಳೆದ ಐದು ವರ್ಷ ಇಂತಹ ಜನದ್ರೋಹ ಕೆಲಸದಲ್ಲೇ ನಿರತವಾಗಿತ್ತಲ್ಲವೇ?

ಆಯ್ತು, ಪ್ರಧಾನಿ ನರೇಂದ್ರ ಮೋದಿಯವರಿಗೆ ಭಕ್ತಿ ಉಕ್ಕಿ ಬಂದಿತ್ತು, ಅವರು ಕೇದಾರನಾಥಕ್ಕೆ ಹೋದರು. ಆದರೆ ಇದಿಷ್ಟನ್ನು ಜನರಿಗೆ ತಿಳಿಸಿಬಿಟ್ಟಿದ್ದರೆ ಮೀಡಿಯಾ ಕೆಲಸ ಮುಗಿದಿರೋದು. ಆದರೆ, ಬಹುಪಾಲು ದೃಶ್ಯ ಮಾಧ್ಯಮಗಳು ಇದನ್ನೊಂದು ತಪ್ಪಸ್ಸಿನಂತೆ ಬಿಂಬಿಸಿ, ಜನರನ್ನು ದಾರಿ ತಪ್ಪಿಸಲು ಯತ್ನಿಸಿದ್ದು ಅಸಹ್ಯವಾಗಿತ್ತು. ಪ್ರಧಾನಿ ಸಾಹೇಬರ ಪಿಆರ್‍ಒ ಟೀಮ್ ಅಂತೂ ಪ್ರಧಾನಿಯನ್ನು ಫ್ಯಾನ್ಸಿ ಡ್ರೆಸ್ ಮಾಡೆಲ್ ಮಟ್ಟಕ್ಕೆ ಇಳಿಸಿದೆ. ಮೋದಿ-ಮೀಡಿಯಾ-ಪಿಆರ್‍ಒ ‘ರಿಪಬ್ಲಿಕ್’ ಓಟು ಮತ್ತು ಟಿಆರ್‍ಪಿಗಾಗಿ ಯಾವ ಮಟ್ಟಕ್ಕೂ ಇಳಿಯಬಲ್ಲದು. ಆದರೆ, ಪಾಪ, ಈ ಸಲ ಏರಿದ್ದಾರೆ, ಕೇದಾರ ಬೆಟ್ಟ ಏರಿದ್ದಾರೆ! ಸೋ, ಯಾವ ಮಟ್ಟಕ್ಕಾದರೂ ಏರಬಲ್ಲರು ಅಂತ ಬೇಕಾದರೆ ಓದಿಕೊಳ್ಳಿ!

‘ಮುಂಜಾನೆಯೇ ಮೋದಿ ‘ಪರಿಕ್ರಮ’ ಮುಗಿಸಿ, 16 ಪೂಜಾವಿಧಾನಗಳನ್ನೂ ಮುಗಿಸಿ 2 ಕಿ.ಮೀ ಟ್ರೆಕ್ಕಿಂಗ್ ಮಾಡಿ ಗುಹೆ ತಲುಪಿ ಧ್ಯಾನಾಸಕ್ತರಾದರು. ಈ ವಯಸ್ಸಲ್ಲಿ ಇದೆಂತಹ ಶೃದ್ಧೆ, ಭಕ್ತಿ …ಅವರ ದೇಹಕ್ಕೆ ಸುಸ್ತೇ ಇಲ್ಲವೇನೋ?’ –ರಿಪಬ್ಲಿಕ್ ಟಿವಿಯ ನ್ಯೂಸ್ ಎಡಿಟರ್ ವಿವೇಕ್ ಶಾಂಡಿಲ್ಯನ ಸ್ಪಾಟ್ ವರದಿಯಿದು. ಪ್ರೈಮ್ ನ್ಯೂಸ್ ವರದಿ. ರಾತ್ರಿನೂ ಇತ್ತು. ಅದು ಅಲ್ಲದೇ ಇವತ್ತು ಸ್ಪೇಷಲ್ ಸ್ಟೋರಿ ಬೇರೆ ಐತಂತೆ!

‘ಮೋದಿ ಅಧಿಕಾರಿಗಳೊಂದಿಗೆ ಕೇದಾರನಾಥ ಪುನರ್‍ನಿರ್ಮಾಣದ ಕಾಮಗಾರಿ ಕುರಿತು ಚರ್ಚಿಸಿದರು.. ದುರ್ಗಮ ಹಾದಿಯಲ್ಲಿ ಕೋಲು ಹಿಡಿದು ಬೆಟ್ಟ ಏರಿದರು. ಆಗ ಅವರ ಮುಖದಲ್ಲಿ ಬೆವರಿತ್ತು’…-ಸೂಪರ್ ಇದಪ್ಪ ರಿಪೋರ್ಟಿಂಗ್ ಅಂದ್ರೆ!

ನ್ಯೂಸ್ 18 ಕನ್ನಡ ಹಿನ್ನೆಲೆಯಲ್ಲಿ ಒಂದು ಭಕ್ತಿಯ ಹಾಡಿನ ಸಂಗೀತ ತೇಲಿಬಿಟ್ಟು ಪಾವನವಾಯಿತು. ಸಕಲ ಸೌಲಭ್ಯಗಳ ಆ ಕೃತಕ ಗುಹೆಯಲ್ಲಿ ಮೋದಿಯ ಕೃತಕ ಧ್ಯಾನದ ಬಗ್ಗೆ ಇವರಾರೂ ಚಕಾರ ಎತ್ತಲಿಲ್ಲ. ಇದನ್ನು ಗೋದಿ ಮೀಡಿಯಾ ಎನ್ನದೆ ಬೇರೆ ಎನನ್ನಬೇಕು.

ಇದಕ್ಕೆ ವ್ಯತಿರಿಕ್ತವಾಗಿ ನೀವು ಸೋಷಿಯಲ್ ಮೀಡಿಯಾದಲ್ಲಿ ಕಣ್ಣಾಯಿಸಿದರೆ ಬರೀ ಮೋದಿ ಮೇಲಿನ ಟ್ರೋಲ್ ಗಳೇ ಕಾಣುತ್ತಿವೆ. ಕಳೆದೊಂದು ವಾರದಿಂದ ರಾಡಾರ್ ಮೋಡ, ಕವನ, ಸ್ಕ್ರಿಪ್ಟೆಡ್ ಸಂದರ್ಶನ, ಪ್ರಶ್ನೆಗಳಿಲ್ಲದ ಪತ್ರಿಕಾಗೋಷ್ಟಿ, ಈಗ ಐಟೆಕ್ ಧ್ಯಾನ ಸೇರಿದಂತೆ ಎಲ್ಲವೂ ವ್ಯಾಪಕ ಟೀಕೆಗೆ ಟ್ರೋಲ್ ಗೆ ಒಳಗಾಗಿವೆ. ಕಾರ್ಟೂನ್‍ಗಳಂತೂ ಒಂದನ್ನೊಂದು ಮೀರಿಸುವಷ್ಟು ಸೃಜನಶೀಲತೆಯಿಂದ ಕೂಡಿವೆ. ಆಡಳಿತ ಪಕ್ಷದ ನೀತಿಗಳು ಕುರಿತು ಹೀಗೆ ನಡೆದುಕೊಳ್ಳುವುದೇ ಪ್ರಜಾತಂತ್ರ. ಇದರಲ್ಲಿ ಮಾಧ್ಯಮಗಳು ನಡೆ ಪ್ರಜಾತಂತ್ರ ವಿರೋಧಿಯಾಗಿದೆ. ಆದರೆ ನೆಟ್ಟಿಗರು ಮಾತ್ರ ಟ್ರೋಲ್ ಮಾಡುವುದನ್ನು ಬಿಟ್ಟಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...