Homeಮುಖಪುಟಎಕ್ಸಿಟ್ ಪೋಲ್ (ಮತಗಟ್ಟೆ ಸಮೀಕ್ಷೆ): ಇವೆಷ್ಟು ನಿಖರ? ಎಷ್ಟು ಸಲ ಫೇಲಾದವು?

ಎಕ್ಸಿಟ್ ಪೋಲ್ (ಮತಗಟ್ಟೆ ಸಮೀಕ್ಷೆ): ಇವೆಷ್ಟು ನಿಖರ? ಎಷ್ಟು ಸಲ ಫೇಲಾದವು?

‘ದೇಶದಲ್ಲಿ ಹಿಂದಿನ ಎಕ್ಸಿಟ್ ಪೋಲ್‍ಗಳು ಅಪರೂಪಕ್ಕೊಮ್ಮೆ ನಿಖರವಾಗಿವೆ!

- Advertisement -
- Advertisement -

ಇದನ್ನು ನೀವು ಓದುವ ಹೊತ್ತಿಗಾಗಲೇ ಎಕ್ಸಿಟ್ ಪೋಲ್ ಅಂದರೆ ಚುನಾವಣೆ ನಂತರದ ಸಮೀಕ್ಷೆಗಳು ಹೊರಬೀಳಲು ಶುರು ಮಾಡಿರುತ್ತವೆ. ಭಾರತದಲ್ಲಿ ಇವತ್ತು ಹಲವಾರು ಸಂಸ್ಥೆಗಳು ಹಲವು ಚಾನೆಲ್‍ಗಳ ಸಹಭಾಗಿತ್ವದಲ್ಲಿ ಈ ಸಮೀಕ್ಷೆ ಮಾಡುತ್ತಿವೆ. ಇದರಲ್ಲಿ ಯಾರು ಹೆಚ್ಚು ವಿಶ್ವಾಸಾರ್ಹರು? ಅವುಗಳ ಹಿಂದಿನ ಸಾಧನೆಯನ್ನು ನೋಡಿದರೆ, ಒಂದು ನಿಖರ ಉತ್ತರ ಸಿಗಬಹುದು. ಆ ಪ್ರಯತ್ನ ಇಲ್ಲಿದೆ…

ಈ ಮೊದಲ ವಾಕ್ಯ ಓದಿ: ‘ದೇಶದಲ್ಲಿ ಹಿಂದಿನ ಎಕ್ಸಿಟ್ ಪೋಲ್‍ಗಳು ಅಪರೂಪಕ್ಕೊಮ್ಮೆ ನಿಖರವಾಗಿವೆ!
ಇದು ಒಟ್ಟಾಗಿ ಎಲ್ಲ ಎಕ್ಸಿಟ್ ಪೋಲ್‍ಗಳನ್ನು ಸಮೀಕರಿಸಿ ನೀಡಿದ ತೀರ್ಮಾನ. ಆದರೂ ಚುನಾವಣಾ ಪೂರ್ವ ಸಮೀಕ್ಷೆಗಳಿಗಿಂತ ಈ ಚುನಾವಣೋತ್ತರ ಸಮೀಕ್ಷೆಗಳೇ ( ಎಕ್ಸಿಟ್ ಪೋಲ್ಸ್) ಆದಷ್ಟು ಹತ್ತಿರ ಹತ್ತಿರದ ಸಂಖ್ಯೆಗಳನ್ನು ಕೊಡುತ್ತ ಬಂದಿವೆ.

ಎಕ್ಸಿಟ್ ಪೋಲ್ ನಡೆಸುವ ಬಹುಪಾಲು ಸಂಸ್ಥೆಗಳು ತಮ್ಮದು ನಿಖರ, ವಿಶ್ವಾಸಾರ್ಹ ಎನ್ನುತ್ತವೆ. ಈ ನಿಟ್ಟಿನಲ್ಲಿ ಕೆಲವು ಪ್ರಮುಖ ಸಮೀಕ್ಷಾ ಸಂಸ್ಥೆಗಳ ಟ್ರ್ಯಾಕ್ ರೆಕಾರ್ಡ್ ಏನು ಎಂದುದನ್ನು ನೋಡೋಣ…

• ಭಾರತದಲ್ಲಿ ಎಕ್ಸಿಟ್ ಪೋಲ್ ವಿಷಯಕ್ಕೆ ಬಂದರೆ 1996 ಮಹತ್ವದ ವರ್ಷ. ಆಗ ದೂರದರ್ಶನವು ‘ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವೆಲಪಿಂಗ್ ಸೊಸೈಟೀಸ್ ( ಸಿಎಸ್‍ಡಿಎಸ್)ಗೆ ಚುನಾವಣಾ ಸಮೀಕ್ಷೆ ಮಾಡಿಕೊಡಲು ಕೇಳಿತು. ( ಇದು ಯೋಗೇಂದ್ರ ಯಾದವ್ ಮತ್ತು ಸ್ನೇಹಿತರು ಹುಟ್ಟು ಹಾಕಿದ ಸಂಸ್ಥೆ). ಅದು ಅನೌಪಚಾರಿಕ ಸಮೀಕ್ಷೆಯಾಗಿದ್ದು, ಸಂಪೂರ್ಣ ಬಹುಮತದ ಕೊರತೆ, ಪ್ರಧಾನಿ ಅಭ್ಯರ್ಥಿ ಆಯ್ಕೆಯಲ್ಲಿ ಇಲ್ಲದ ಒಮ್ಮತದ ಕಾರಣದಿಂದಾಗಿ 1999ರವರೆಗೆ ದೇಶವು ಹಲವು ಚುನಾವಣೆಗಳನ್ನು ಕಾಣಲಿದೆ ಎಂದು ಈ ಸಮೀಕ್ಷೆ ಹೇಳಿತ್ತು.
ಆಗ ಸಿಎಸ್‍ಡಿಎಸ್ ಸಮೀಕ್ಷೆ ಸಾರಾಂಶದಲ್ಲಿ ನಿಜವಾಗಿತ್ತು. ಅತಂತ್ರ ಫಲಿತಾಂಶ ಬಂದು, ಆಗ ಲೋಕಸಭೆಯಲ್ಲಿ ದೊಡ್ಡ ಪಾರ್ಟಿಯಾದ ಬಿಜೆಪಿ ವಾಜಪೇಯಿ ನೇತೃತ್ವದಲ್ಲಿ ಎನ್‍ಡಿಎ ಸರ್ಕಾರ ರಚಿಸಿತ್ತು, ಅದರ ಆಯುಷ್ಯ 13 ದಿನವಾಗಿತ್ತು.

• 1998ರಲ್ಲಿ ದೇಶ ಮತ್ತೆ ಚುನಾವಣೆ ಎದುರಿಸಿದಾಗ ಎಲ್ಲ ಎಕ್ಸಿಟ್ ಪೋಲ್‍ಗಳು ಎನ್‍ಡಿಎ ಅಧಿಕಾರಕ್ಕೆ ಬರುವುದಾಗಿ ಭವಿಷ್ಯ ನುಡಿದಿದ್ದವು. ಇಂಡಿಯಾ ಟುಡೇ/ಸಿಎಸ್‍ಡಿಎಸ್, ಡಿಆರ್‍ಎಸ್, ಔಟ್‍ಲುಕ್/ ಎ.ಸಿ. ನೆಲ್ಸನ್ ಮತ್ತು ಫ್ರಂಟ್‍ಲೈನ್/ಸಿಎಂಎಸ್- ಈ ನಾಲ್ಕೂ ಪ್ರಮುಖ ಸಮೀಕ್ಷಾ ಕೂಟಗಳು ವಾಜಪೇಯಿ ನೇತೃತ್ವದಲ್ಲಿ ಎನ್‍ಡಿಎ ಸರಳ ಬಹುಮತ ದಾಟಿ ಆರಾಮಾಗಿ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದ್ದವು. ಆದರೆ, ವಾಜಪೇಯಿ ನೇತೃತ್ವದ ಕೂಟ 252 ಸೀಟು ಪಡೆದು ಬಹುಮತದ ಕೊರತೆ ಎದುರಿಸಿದರೆ, ಕಾಂಗ್ರೆಸ್ 166 ಸೀಟು ಪಡೆದಿತ್ತು.

• 1999ರಲ್ಲಿ ಕಾರ್ಗಿಲ್ ‘ಯುದ್ಧ’ದ ನಂತರ ಭಾರತ ಮತ್ತೆ ಹೊಸ ಪ್ರಧಾನಿಯ ಆಯ್ಕೆಗೆ ಹೋಗಿತ್ತು. ಆ ಚುನಾವಣೆಯಲ್ಲಿ ಎಲ್ಲ ಎಕ್ಸಿಟ್ ಪೋಲ್‍ಗಳು ಎನ್‍ಡಿಎಗೆ ಸ್ಪಷ್ಟ ಬಹುಮತ, 300ಕ್ಕೂ ಹೆಚ್ಚು ಸೀಟು ಎಂದಿದ್ದವು. ಕೊನೆಗೆ ಎನ್‍ಡಿಎಗೆ 296 ಸೀಟು ಸಿಕ್ಕಿದ್ದವು. ಕಾಂಗ್ರೆಸ್ಸೇತರ ಪಕ್ಷಗಳಿಗೆ 113 ಸೀಟು ಸಿಕ್ಕಿದ್ದವು.

• 2004ರ ಚುನಾವಣೆಯಲ್ಲಿ ವಾಜಪೇಯಿ ‘ಸಾಧನೆ’ ಇಟ್ಟಕೊಂಡು ‘ಇಂಡಿಯಾ ಶೈನಿಂಗ್’ ಪ್ರಚಾರ ಶುರುವಾಗಿತ್ತು. ಮತ್ತೆ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರ ಎಂದು ಎಲ್ಲ ಎಕ್ಸಿಟ್ ಪೋಲ್‍ಗಳು ಹೇಳಿದ್ದವು. ಆದರೆ, ಇದರಲ್ಲಿ ಫಲಿತಾಂಶ ಉಲ್ಟಾ ಹೊಡೆದಿತ್ತು, ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ದೊಡ್ಡ ಪಾರ್ಟಿಯಾಗಿ, ಯುಪಿಎ ಅಧಿಕಾರಕ್ಕೆ ಬಂದಿತ್ತು.

• 2004ರಿಂದ 2009ರವರೆಗೆ ಮನಮೋಹನಸಿಂಗ್ ಸರ್ಕಾರ. 2009ರಲ್ಲಿ ಮತ್ತೆ ಚುನಾವಣೆ. 2004ರಲ್ಲಿ ಮಾಡಿದ್ದ ತಪ್ಪು ನೆನಪಿಸಿಕೊಂಡ ಸಮೀಕ್ಷಾ ಕಂಪನಿಗಳು, ಆ ಸಲ ಯುಪಿಎ ಮತ್ತು ಎನ್‍ಡಿಎ ನಡುವೆ ನೆಕ್-ಟು-ನೆಕ್ ಸ್ಪರ್ಧೆ ಎಂದು ಹೇಳಿದ್ದವು. ಆದರೆ ಫಲಿತಾಂಶ ಅವುಗಳ ಪಾಲಿಗೆ ಮತ್ತೆ ಉಲ್ಟಾ ಹೊಡೆದಿತ್ತು. ಎ.ಸಿ. ನೆಲ್ಸನ್ ಸಮೀಕ್ಷೆ ಎನ್‍ಡಿಎಗೆ 197, ಯುಪಿಎಗೆ 199 ಸೀಟು ಎಂದು ಹೇಳಿತ್ತು. ಆದರೆ ಫಲಿತಾಂಶದಲ್ಲಿ ಯುಪಿಎಗೆ 262 ಸೀಟು, ಎನ್‍ಡಿಎಗೆ 159 ಸೀಟು ದಕ್ಕಿದ್ದವು. ಕಾಂಗ್ರೆಸ್ 2004ರಲ್ಲಿ ಗೆದ್ದಿದ್ದಕ್ಕಿಂತ 80 ಸೀಟು ಹೆಚ್ಚು ಗೆದ್ದಿದ್ದರೆ, ಎನ್‍ಡಿಎ 30 ಸೀಟು ಕಡಿಮೆ ಗೆದ್ದಿತ್ತು.

• 2014ರಲ್ಲಿ ಯುಪಿಎ ಭ್ರಷ್ಟಾಚಾರ ಮತ್ತು ಮೋದಿ ಹವಾ ಮುಖ್ಯ ವಸ್ತು ಆಗಿದ್ದವು. ಆಗ ಎಲ್ಲ ಎಕ್ಸಿಟ್ ಪೋಲ್‍ಗಳು ಹೇಳಿದಂತೆ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದಿತು. ಆದರೆ ಆಗ ಎರಡು ಸರ್ವೆ ಮಾತ್ರ ಬಿಜೆಪಿಗೆ 280ರಷ್ಟು ಸೀಟು ಬರುವುದನ್ನು ಹೇಳಿದ್ದವು. ಹಾಗೆಯೇ ಕಾಂಗ್ರೆಸ್ 50ರ ಕೆಳಗೆ ಕುಸಿಯಬಹುದು ಎಂಬುದನ್ನು ಯಾವ ಸರ್ವೆಯೂ ಹೇಳಿರಲಿಲ್ಲ.

• ಒಟ್ಟಿನಲ್ಲಿ ಎಕ್ಸಿಟ್ ಪೋಲ್‍ಗಳು ಪಕ್ಕಾ ನಿಖರ ಫಲಿತಾಂಶ ಕೊಟ್ಟಿದ್ದು ಕಡಿಮೆ. ವಿವಿಧ ರಾಜ್ಯಗಳ ಚುನಾವಣಾ ಸಮೀಕ್ಷೆಗಳಲ್ಲೂ ಇದು ವ್ಯಕ್ತವಾಗಿದೆ. ಹಾಗಾಗಿ, ಈ ಎಕ್ಸಿಟ್ ಪೋಲ್‍ಗಳು ಫೈನಲ್ ಅಲ್ಲ, ಅವು ಅಪರೂಪಕ್ಕೊಮ್ಮೆ ನಿಖರ ಆಗಿವೆ. ಆದರೆ ಟ್ರೆಂಡ್ ಗುರುತಿಸಲು ಕೆಲವೊಮ್ಮೆ ಸಹಾಯವಾಗಿರಬಹುದು.

ಜನಪ್ರಿಯ ಅನಿಸಿಕೆ ಅಥವಾ ಪಾಪುಲರ್ ಮೂಡ್ ಆಧಾರದಲ್ಲಿ ಈ ಸಮೀಕ್ಷೆಗಳು ತಮ್ಮ ಸಂಖ್ಯೆಗಳನ್ನು ನೀಡುತ್ತ ಬಂದಿವೆಯಾ? ಹಾಗಿದ್ದಲ್ಲಿ ಇವತ್ತೂ ಅದನ್ನೇ ಹೇಳಿವೆಯಾ? ಯಾವುದಕ್ಕೂ ಮೇ 23ರ ಫಲಿತಾಂಶವೇ ಫೈನಲ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...