Homeಮುಖಪುಟಎಕ್ಸಿಟ್ ಪೋಲ್ (ಮತಗಟ್ಟೆ ಸಮೀಕ್ಷೆ): ಇವೆಷ್ಟು ನಿಖರ? ಎಷ್ಟು ಸಲ ಫೇಲಾದವು?

ಎಕ್ಸಿಟ್ ಪೋಲ್ (ಮತಗಟ್ಟೆ ಸಮೀಕ್ಷೆ): ಇವೆಷ್ಟು ನಿಖರ? ಎಷ್ಟು ಸಲ ಫೇಲಾದವು?

‘ದೇಶದಲ್ಲಿ ಹಿಂದಿನ ಎಕ್ಸಿಟ್ ಪೋಲ್‍ಗಳು ಅಪರೂಪಕ್ಕೊಮ್ಮೆ ನಿಖರವಾಗಿವೆ!

- Advertisement -
- Advertisement -

ಇದನ್ನು ನೀವು ಓದುವ ಹೊತ್ತಿಗಾಗಲೇ ಎಕ್ಸಿಟ್ ಪೋಲ್ ಅಂದರೆ ಚುನಾವಣೆ ನಂತರದ ಸಮೀಕ್ಷೆಗಳು ಹೊರಬೀಳಲು ಶುರು ಮಾಡಿರುತ್ತವೆ. ಭಾರತದಲ್ಲಿ ಇವತ್ತು ಹಲವಾರು ಸಂಸ್ಥೆಗಳು ಹಲವು ಚಾನೆಲ್‍ಗಳ ಸಹಭಾಗಿತ್ವದಲ್ಲಿ ಈ ಸಮೀಕ್ಷೆ ಮಾಡುತ್ತಿವೆ. ಇದರಲ್ಲಿ ಯಾರು ಹೆಚ್ಚು ವಿಶ್ವಾಸಾರ್ಹರು? ಅವುಗಳ ಹಿಂದಿನ ಸಾಧನೆಯನ್ನು ನೋಡಿದರೆ, ಒಂದು ನಿಖರ ಉತ್ತರ ಸಿಗಬಹುದು. ಆ ಪ್ರಯತ್ನ ಇಲ್ಲಿದೆ…

ಈ ಮೊದಲ ವಾಕ್ಯ ಓದಿ: ‘ದೇಶದಲ್ಲಿ ಹಿಂದಿನ ಎಕ್ಸಿಟ್ ಪೋಲ್‍ಗಳು ಅಪರೂಪಕ್ಕೊಮ್ಮೆ ನಿಖರವಾಗಿವೆ!
ಇದು ಒಟ್ಟಾಗಿ ಎಲ್ಲ ಎಕ್ಸಿಟ್ ಪೋಲ್‍ಗಳನ್ನು ಸಮೀಕರಿಸಿ ನೀಡಿದ ತೀರ್ಮಾನ. ಆದರೂ ಚುನಾವಣಾ ಪೂರ್ವ ಸಮೀಕ್ಷೆಗಳಿಗಿಂತ ಈ ಚುನಾವಣೋತ್ತರ ಸಮೀಕ್ಷೆಗಳೇ ( ಎಕ್ಸಿಟ್ ಪೋಲ್ಸ್) ಆದಷ್ಟು ಹತ್ತಿರ ಹತ್ತಿರದ ಸಂಖ್ಯೆಗಳನ್ನು ಕೊಡುತ್ತ ಬಂದಿವೆ.

ಎಕ್ಸಿಟ್ ಪೋಲ್ ನಡೆಸುವ ಬಹುಪಾಲು ಸಂಸ್ಥೆಗಳು ತಮ್ಮದು ನಿಖರ, ವಿಶ್ವಾಸಾರ್ಹ ಎನ್ನುತ್ತವೆ. ಈ ನಿಟ್ಟಿನಲ್ಲಿ ಕೆಲವು ಪ್ರಮುಖ ಸಮೀಕ್ಷಾ ಸಂಸ್ಥೆಗಳ ಟ್ರ್ಯಾಕ್ ರೆಕಾರ್ಡ್ ಏನು ಎಂದುದನ್ನು ನೋಡೋಣ…

• ಭಾರತದಲ್ಲಿ ಎಕ್ಸಿಟ್ ಪೋಲ್ ವಿಷಯಕ್ಕೆ ಬಂದರೆ 1996 ಮಹತ್ವದ ವರ್ಷ. ಆಗ ದೂರದರ್ಶನವು ‘ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವೆಲಪಿಂಗ್ ಸೊಸೈಟೀಸ್ ( ಸಿಎಸ್‍ಡಿಎಸ್)ಗೆ ಚುನಾವಣಾ ಸಮೀಕ್ಷೆ ಮಾಡಿಕೊಡಲು ಕೇಳಿತು. ( ಇದು ಯೋಗೇಂದ್ರ ಯಾದವ್ ಮತ್ತು ಸ್ನೇಹಿತರು ಹುಟ್ಟು ಹಾಕಿದ ಸಂಸ್ಥೆ). ಅದು ಅನೌಪಚಾರಿಕ ಸಮೀಕ್ಷೆಯಾಗಿದ್ದು, ಸಂಪೂರ್ಣ ಬಹುಮತದ ಕೊರತೆ, ಪ್ರಧಾನಿ ಅಭ್ಯರ್ಥಿ ಆಯ್ಕೆಯಲ್ಲಿ ಇಲ್ಲದ ಒಮ್ಮತದ ಕಾರಣದಿಂದಾಗಿ 1999ರವರೆಗೆ ದೇಶವು ಹಲವು ಚುನಾವಣೆಗಳನ್ನು ಕಾಣಲಿದೆ ಎಂದು ಈ ಸಮೀಕ್ಷೆ ಹೇಳಿತ್ತು.
ಆಗ ಸಿಎಸ್‍ಡಿಎಸ್ ಸಮೀಕ್ಷೆ ಸಾರಾಂಶದಲ್ಲಿ ನಿಜವಾಗಿತ್ತು. ಅತಂತ್ರ ಫಲಿತಾಂಶ ಬಂದು, ಆಗ ಲೋಕಸಭೆಯಲ್ಲಿ ದೊಡ್ಡ ಪಾರ್ಟಿಯಾದ ಬಿಜೆಪಿ ವಾಜಪೇಯಿ ನೇತೃತ್ವದಲ್ಲಿ ಎನ್‍ಡಿಎ ಸರ್ಕಾರ ರಚಿಸಿತ್ತು, ಅದರ ಆಯುಷ್ಯ 13 ದಿನವಾಗಿತ್ತು.

• 1998ರಲ್ಲಿ ದೇಶ ಮತ್ತೆ ಚುನಾವಣೆ ಎದುರಿಸಿದಾಗ ಎಲ್ಲ ಎಕ್ಸಿಟ್ ಪೋಲ್‍ಗಳು ಎನ್‍ಡಿಎ ಅಧಿಕಾರಕ್ಕೆ ಬರುವುದಾಗಿ ಭವಿಷ್ಯ ನುಡಿದಿದ್ದವು. ಇಂಡಿಯಾ ಟುಡೇ/ಸಿಎಸ್‍ಡಿಎಸ್, ಡಿಆರ್‍ಎಸ್, ಔಟ್‍ಲುಕ್/ ಎ.ಸಿ. ನೆಲ್ಸನ್ ಮತ್ತು ಫ್ರಂಟ್‍ಲೈನ್/ಸಿಎಂಎಸ್- ಈ ನಾಲ್ಕೂ ಪ್ರಮುಖ ಸಮೀಕ್ಷಾ ಕೂಟಗಳು ವಾಜಪೇಯಿ ನೇತೃತ್ವದಲ್ಲಿ ಎನ್‍ಡಿಎ ಸರಳ ಬಹುಮತ ದಾಟಿ ಆರಾಮಾಗಿ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದ್ದವು. ಆದರೆ, ವಾಜಪೇಯಿ ನೇತೃತ್ವದ ಕೂಟ 252 ಸೀಟು ಪಡೆದು ಬಹುಮತದ ಕೊರತೆ ಎದುರಿಸಿದರೆ, ಕಾಂಗ್ರೆಸ್ 166 ಸೀಟು ಪಡೆದಿತ್ತು.

• 1999ರಲ್ಲಿ ಕಾರ್ಗಿಲ್ ‘ಯುದ್ಧ’ದ ನಂತರ ಭಾರತ ಮತ್ತೆ ಹೊಸ ಪ್ರಧಾನಿಯ ಆಯ್ಕೆಗೆ ಹೋಗಿತ್ತು. ಆ ಚುನಾವಣೆಯಲ್ಲಿ ಎಲ್ಲ ಎಕ್ಸಿಟ್ ಪೋಲ್‍ಗಳು ಎನ್‍ಡಿಎಗೆ ಸ್ಪಷ್ಟ ಬಹುಮತ, 300ಕ್ಕೂ ಹೆಚ್ಚು ಸೀಟು ಎಂದಿದ್ದವು. ಕೊನೆಗೆ ಎನ್‍ಡಿಎಗೆ 296 ಸೀಟು ಸಿಕ್ಕಿದ್ದವು. ಕಾಂಗ್ರೆಸ್ಸೇತರ ಪಕ್ಷಗಳಿಗೆ 113 ಸೀಟು ಸಿಕ್ಕಿದ್ದವು.

• 2004ರ ಚುನಾವಣೆಯಲ್ಲಿ ವಾಜಪೇಯಿ ‘ಸಾಧನೆ’ ಇಟ್ಟಕೊಂಡು ‘ಇಂಡಿಯಾ ಶೈನಿಂಗ್’ ಪ್ರಚಾರ ಶುರುವಾಗಿತ್ತು. ಮತ್ತೆ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರ ಎಂದು ಎಲ್ಲ ಎಕ್ಸಿಟ್ ಪೋಲ್‍ಗಳು ಹೇಳಿದ್ದವು. ಆದರೆ, ಇದರಲ್ಲಿ ಫಲಿತಾಂಶ ಉಲ್ಟಾ ಹೊಡೆದಿತ್ತು, ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ದೊಡ್ಡ ಪಾರ್ಟಿಯಾಗಿ, ಯುಪಿಎ ಅಧಿಕಾರಕ್ಕೆ ಬಂದಿತ್ತು.

• 2004ರಿಂದ 2009ರವರೆಗೆ ಮನಮೋಹನಸಿಂಗ್ ಸರ್ಕಾರ. 2009ರಲ್ಲಿ ಮತ್ತೆ ಚುನಾವಣೆ. 2004ರಲ್ಲಿ ಮಾಡಿದ್ದ ತಪ್ಪು ನೆನಪಿಸಿಕೊಂಡ ಸಮೀಕ್ಷಾ ಕಂಪನಿಗಳು, ಆ ಸಲ ಯುಪಿಎ ಮತ್ತು ಎನ್‍ಡಿಎ ನಡುವೆ ನೆಕ್-ಟು-ನೆಕ್ ಸ್ಪರ್ಧೆ ಎಂದು ಹೇಳಿದ್ದವು. ಆದರೆ ಫಲಿತಾಂಶ ಅವುಗಳ ಪಾಲಿಗೆ ಮತ್ತೆ ಉಲ್ಟಾ ಹೊಡೆದಿತ್ತು. ಎ.ಸಿ. ನೆಲ್ಸನ್ ಸಮೀಕ್ಷೆ ಎನ್‍ಡಿಎಗೆ 197, ಯುಪಿಎಗೆ 199 ಸೀಟು ಎಂದು ಹೇಳಿತ್ತು. ಆದರೆ ಫಲಿತಾಂಶದಲ್ಲಿ ಯುಪಿಎಗೆ 262 ಸೀಟು, ಎನ್‍ಡಿಎಗೆ 159 ಸೀಟು ದಕ್ಕಿದ್ದವು. ಕಾಂಗ್ರೆಸ್ 2004ರಲ್ಲಿ ಗೆದ್ದಿದ್ದಕ್ಕಿಂತ 80 ಸೀಟು ಹೆಚ್ಚು ಗೆದ್ದಿದ್ದರೆ, ಎನ್‍ಡಿಎ 30 ಸೀಟು ಕಡಿಮೆ ಗೆದ್ದಿತ್ತು.

• 2014ರಲ್ಲಿ ಯುಪಿಎ ಭ್ರಷ್ಟಾಚಾರ ಮತ್ತು ಮೋದಿ ಹವಾ ಮುಖ್ಯ ವಸ್ತು ಆಗಿದ್ದವು. ಆಗ ಎಲ್ಲ ಎಕ್ಸಿಟ್ ಪೋಲ್‍ಗಳು ಹೇಳಿದಂತೆ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದಿತು. ಆದರೆ ಆಗ ಎರಡು ಸರ್ವೆ ಮಾತ್ರ ಬಿಜೆಪಿಗೆ 280ರಷ್ಟು ಸೀಟು ಬರುವುದನ್ನು ಹೇಳಿದ್ದವು. ಹಾಗೆಯೇ ಕಾಂಗ್ರೆಸ್ 50ರ ಕೆಳಗೆ ಕುಸಿಯಬಹುದು ಎಂಬುದನ್ನು ಯಾವ ಸರ್ವೆಯೂ ಹೇಳಿರಲಿಲ್ಲ.

• ಒಟ್ಟಿನಲ್ಲಿ ಎಕ್ಸಿಟ್ ಪೋಲ್‍ಗಳು ಪಕ್ಕಾ ನಿಖರ ಫಲಿತಾಂಶ ಕೊಟ್ಟಿದ್ದು ಕಡಿಮೆ. ವಿವಿಧ ರಾಜ್ಯಗಳ ಚುನಾವಣಾ ಸಮೀಕ್ಷೆಗಳಲ್ಲೂ ಇದು ವ್ಯಕ್ತವಾಗಿದೆ. ಹಾಗಾಗಿ, ಈ ಎಕ್ಸಿಟ್ ಪೋಲ್‍ಗಳು ಫೈನಲ್ ಅಲ್ಲ, ಅವು ಅಪರೂಪಕ್ಕೊಮ್ಮೆ ನಿಖರ ಆಗಿವೆ. ಆದರೆ ಟ್ರೆಂಡ್ ಗುರುತಿಸಲು ಕೆಲವೊಮ್ಮೆ ಸಹಾಯವಾಗಿರಬಹುದು.

ಜನಪ್ರಿಯ ಅನಿಸಿಕೆ ಅಥವಾ ಪಾಪುಲರ್ ಮೂಡ್ ಆಧಾರದಲ್ಲಿ ಈ ಸಮೀಕ್ಷೆಗಳು ತಮ್ಮ ಸಂಖ್ಯೆಗಳನ್ನು ನೀಡುತ್ತ ಬಂದಿವೆಯಾ? ಹಾಗಿದ್ದಲ್ಲಿ ಇವತ್ತೂ ಅದನ್ನೇ ಹೇಳಿವೆಯಾ? ಯಾವುದಕ್ಕೂ ಮೇ 23ರ ಫಲಿತಾಂಶವೇ ಫೈನಲ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...