Homeಅಂಕಣಗಳುಮಲೆನಾಡಿನ ವೈವಿಧ್ಯಮಯ ಬೆಳೆಗಳು ಮತ್ತು ಅವುಗಳ ವಿಶೇಷಗಳು

ಮಲೆನಾಡಿನ ವೈವಿಧ್ಯಮಯ ಬೆಳೆಗಳು ಮತ್ತು ಅವುಗಳ ವಿಶೇಷಗಳು

- Advertisement -
- Advertisement -

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ -17

ಕೊನೆಗೂ ಉಳಿದು ಕೊಳ್ಳುವ ಪ್ರಶ್ನೆ ಕಾಫಿಯನ್ನು ಜನರು ಯಾಕೆ ಕುಡಿಯಬೇಕು ಎಂಬುದು. ಹೌದು ಅದು ಜನರ ಆಯ್ಕೆ. ಚಹಾ ಕುಡಿಯಬೇಕೆ? ಅಡಿಕೆ ಜಗಿಯಬೇಕೆ?ತಂಬಾಕು, ಗಾಂಜಾ ಮುಂತಾದವನ್ನು ಹೊರತು ಪಡಿಸಿ,

ಮದ್ಯವನ್ನು ಕುಡಿಯಬೇಕೇ ಬೇಡವೇ? ಕುಡಿದರೆ ಎಷ್ಟು ಕುಡಿಯಬೇಕು? ಮದ್ಯಪಾನ ಸಂಸ್ಕೃತಿಯಿರುವ ನಮ್ಮ ಅನೇಕ ಜನಪದಗಳಿದ್ದಾವಲ್ಲ (ಕುಡುಕರಲ್ಲ) ಅವರೇನು ಮಾಡಬೇಕು ?

ಕಾಫಿ, ಕೋಕೋ, ಬಾಳೆ, ಮೆಣಸು ಗಳ ಮಿಶ್ರ ಬೆಳೆ

ಕಾಫಿ ಬೆಳೆಗಾರರು, ಬೇರೆ ಬೆಳೆಯನ್ನು ಯಾಕೆ ಬೆಳೆಯಬಾರದು? ಕಾಫಿ ಅಹಾರ ಬೆಳೆಯೇನಲ್ಲ, ಜನರು ಕಾಫಿ ಕುಡಿಯದಿದ್ದರೂ ನಡೆಯುತ್ತದೆ. ಇತ್ಯಾದಿ ಮಾತುಗಳಿವೆ. ಹೌದು ಖಂಡಿತ ಇದೇ ಪ್ರಶ್ನೆಯನ್ನು ಅನೇಕ ವಾಣಿಜ್ಯ ಬೆಳೆಗಳಿಗೂ ಕೇಳಬಹುದು. ಟೀ, ಕೋಕೋ, ಅಡಿಕೆ, ಚಿಕೊರಿ (ಹೌದು ಚಿಕೊರಿಯನ್ನೂ ಭಾರತದಲ್ಲಿ ಬೆಳೆಯುತ್ತಾರೆ) ಮುಂತಾದ ಬೆಳೆಗಳು ಈ ಸಾಲಿಗೆ ಸೇರುತ್ತವೆ. ರಬ್ಬರ್ ವಾಣಿಜ್ಯ ಬೆಳೆಯಾದರೂ ಅದು ಇಂದು ಅನಿವಾರ್ಯ ಬೆಳೆ. ನಮ್ಮ ಕೈಗಾರಿಕೆ ಮತ್ತು ವೈದ್ಯಕೀಯ ಬಳಕೆಗಾಗಿಯಾದರೂ ರಬ್ಬರ್ ಬೇಕೇ ಬೇಕು. ಇನ್ನು ನಮ್ಮ ಸಾಂಬಾರ ಬೆಳೆಗಳು ಮತ್ತು ಕಬ್ಬು ಇವು ಅರೆ ವಾಣಿಜ್ಯ ಬೆಳೆಗಳು. ಇವುಗಳಲ್ಲಿ ಏಲಕ್ಕಿ ಮತ್ತು ಮೆಣಸು ಸೇರಿದೆ. ಇವುಗಳೆಲ್ಲವೂ ಆಹಾರದಲ್ಲಿ ಬಳಕೆಯಾದರೂ ವಾಣಿಜ್ಯದಲ್ಲೂ ಪ್ರಮುಖ ಪಾತ್ರ ಹೊಂದಿವೆ. ಶುದ್ಧ ಆಹಾರ ಬೆಳೆಗಳಾದ ಭತ್ತ, ಗೋಧಿ, ರಾಗಿ, ಜೋಳ, ಹಣ್ಣು-ತರಕಾರಿಗಳು ಮುಂತಾದವು. ಇವುಗಳೂ ಅಲ್ಲದೆ ಅಪಾಯಕಾರಿಯಾದ ಆದರೆ ವೈದ್ಯಕೀಯ ಮತ್ತು ಕೈಗಾರಿಕಾ ಬಳಕೆಗಾಗಿಯಾದರೂ ಅನಿವಾರ್ಯವಾಗಿ ಮತ್ತು ನಿಯಂತ್ರಿತವಾಗಿ ಬೆಳೆಯಬೇಕಾದ ಹೊಗೆಸೊಪ್ಪ, ಅಫೀಮು, ಗಾಂಜಾ ದಂತಹ ಬೆಳೆಗಳು. ಇದರೊಂದಿಗೆ  ವೈದ್ಯಕೀಯದಲ್ಲಿ, ಸುಗಂಧ ದ್ಯವ್ಯಗಳ ತಯಾರಿಕೆಯಲ್ಲಿ ಮತ್ತು ಅಲಂಕಾರಕ್ಕೆ ಬಳಕೆಯಾಗುವ ಹೂವಿನ ಬೆಳೆಗಳು.

ಕಾಫಿ ಯಾಲಕ್ಕಿ ಮಿಶ್ರ ಬೆಳೆ

ಮೇಲಿನ ಅಷ್ಟೂ ಬೆಳೆಗಳಲ್ಲಿ ಎರಡು ಮುಖ್ಯ ವಿಭಾಗಗಳಿವೆ. ಗುಡ್ಡ ಮತ್ತು ಕಾಡುಗಳಲ್ಲಿ ಬೆಳೆಯುವ ಬೆಳೆಗಳು ಮತ್ತು ಬಯಲಿನಲ್ಲಿ ಬೆಳೆಯುವ ಬೆಳೆಗಳು. ಕಾಫಿ, ಟೀ, ಕೋಕೊ, ರಬ್ಬರ್, ಏಲಕ್ಕಿ, ಮೆಣಸು ಇವು ಬೆಟ್ಟಗಳ ಬೆಳೆ ಮೆಣಸನ್ನು ಸ್ವಲ್ಪ ಮಟ್ಟಿಗೆ ಬಯಲಿನಲ್ಲೂ ಬೆಳೆಯುತ್ತಾರೆ. ಕಾಫಿ, ಟೀ, ಕೋಕೊ ಮುಂತಾದವನ್ನು ಬಯಲಿನಲ್ಲಿ ಬೆಳೆಯಲು ಪ್ರಯತ್ನಿಸಿದರೂ ಅವೆಲ್ಲ ಸಣ್ಣ ಪ್ರಯತ್ನಗಳು ಅಷ್ಟೆ. ಬಯಲಿನಲ್ಲಿ ಬೆಳೆದಾಗ ಅವುಗಳ ಗುಣಮಟ್ಟವೂ ತುಂಬ ಕಡಿಮೆಯಿರುತ್ತದೆ.

ಬಾಕಿ ಎಲ್ಲಾ ಬೆಳೆಗಳು ಬಯಲಿನ ಬೆಳೆಗಳು. ಇವುಗಳನ್ನು ಬೆಟ್ಟಸೀಮೆಯಲ್ಲಿ ಸಣ್ಣ ಪ್ರಮಾಣದಲ್ಲಿ ಬೆಳೆದರೂ, ಬೆಟ್ಟದ ತಪ್ಪಲಿನ ಬಯಲಿನಲ್ಲಿ ಬೆಳೆಯುತ್ತಾರೆ. ಉದಾ ಗದ್ದೆಗಳಲ್ಲಿ ಅಡಿಕೆ ತೋಟಗಳು ಗದ್ದೆಗಳೇ.

ಕಾಫಿ, ಟೀ, ರಬ್ಬರ್, ಏಲಕ್ಕಿ ಬೆಳೆಯುವ ಪ್ರದೇಶ ಬೆಟ್ಟ ಸೀಮೆ. ಹಿಂದೆ ಅಲ್ಪಪ್ರಮಾಣದಲ್ಲಿ ಬೆಳೆಯುತ್ತಿದ್ದ ಕಾಫಿಯನ್ನು ವಿದೇಶಿ ವಿನಿಮಯ ತರುವ ಬೆಳೆಯಾಗಿ ಮಾಡಿ ವಿಸ್ತರಿಸಿದವರು ಬ್ರಿಟಿಷರು. ಟೀಯನ್ನೂ ಮತ್ತು ರಬ್ಬರನ್ನೂ ಕೂಡಾ ಅವರೇ ಮೊದಲು ಭಾರತದಲ್ಲಿ ವಾಣಿಜ್ಯ ಉದ್ದೇಶದಿಂದ ಬೆಳೆದರು.

ಜತ್ರೋಪ ಬೆಳೆ ಪ್ರಯತ್ನದ ಪಳೆಯುಳಿಕೆ

ಆದರೆ ಬ್ರಿಟಿಷರಲ್ಲಿ ಒಂದು ವೈಜ್ಞಾನಿಕವಾದ ಪರಿಸರ ಪ್ರಜ್ಞೆಯೂ ಇತ್ತು ನಾವು ಬ್ರಿಟಿಷರ ಕಾಲದ ಯಾವುದೇ ಪ್ಲಾಂಟೇಷನ್ ಬೆಳಗಳನ್ನು ನೋಡಿ. ಬೆಟ್ಟದ ಕೆಳಭಾಗದಿಂದ ಸುಮಾರಾಗಿ ಬೆಟ್ಟದ ಅರ್ಧ ಭಾಗದವರೆಗೆ ಮಾತ್ರ ಕೃಷಿಮಾಡಿ ಮೇಲಿನ ಭಾಗದ ಕಾಡನ್ನು ಮುಟ್ಟದೆ ಹಾಗೆಯೇ ಬಿಟ್ಟಿರುತ್ತಿದ್ದರು. ಇದಕ್ಕೆ ಎರಡು ಕಾರಣಗಳಿದ್ದವು. ಕೆಳಗೆ ಬೆಳೆಯುತ್ತಿದ್ದ ಬೆಳೆಗೆ ಮೇಲಿನ ಭಾಗದ ಸಹಜ ಕಾಡಿನ ಸಾರಾಂಶ ಮಳೆನೀರಿನ ಮೂಲಕ ಇಳಿದು ಬಂದು ಏಕ ಬೆಳೆಯಿಂದ (ಮೋನೋ ಕಲ್ಚರ್) ಆಗುವ ಮಣ್ಣಿನ ಹಾನಿಯನ್ನು ಕಡಿಮೆ  ಮಾಡುತ್ತಿತ್ತು. ಹಾಗೇಯೇ ಭೂ ಸವಕಳಿ ಮತ್ತು ಕುಸಿತವನ್ನು ತಡೆಯುತ್ತಿತ್ತು. ವರ್ಷವಿಡೀ ಭೂಮಿಯನ್ನು ತಂಪಾಗಿಡುತ್ತಿತ್ತು. ಇದನ್ನೆಲ್ಲ ಬಿಟ್ಟು ಬೆಟ್ಟದ ತುದಿಯವರೆಗೆ ನಾವು ಕೃಷಿಮಾಡಿದ ಪರಿಣಾಮವನ್ನು ಈಗ ಅನುಭವಿಸುತ್ತಿದ್ದೇವೆ.

ಇವೆಲ್ಲ ಬೇರೆ ಬೇರೆ ವಿಚಾರಗಳು. ಈಗ ಕಾಫಿ ಬೆಳೆ ವಿಚಾರಕ್ಕೆ ಬಂದರೆ, ಕಾಫಿ ಬೆಳೆಯುವುದು ಸಮುದ್ರ ಮಟ್ಟದಿಂದ 2500 ಅಡಿಗಳಿಂದ ಸುಮಾರು 4500 ಅಡಿಗಳ ವರೆಗಿನ ಬೆಟ್ಟಗಳಲ್ಲಿ ಈ ಎತ್ತರದ ಪ್ರದೇಶ ಮಾತ್ರ ಕಾಫಿ ಬೆಳೆಗೆ ಸೂಕ್ತವಾದುದು. ಹೆಚ್ಚೂ ಕಡಿಮೆ ಏಲಕ್ಕಿ ಬೆಳಗೂ ಅಷ್ಟೆ. ಟೀ ಇನ್ನೂ ಎತ್ತರದಲ್ಲಿಯೂ ಬೆಳೆದರೆ ರಬ್ಬರ್ ಬೆಳಗೆ 1000 ರಿಂದ 1500 ಅಡಿಗಳ ಪ್ರದೇಶ ಒಳ್ಳೆಯದು. ಇವುಗಳಲ್ಲಿ ಒಂದು ಮುಖ್ಯ ವ್ಯತ್ಯಾಸವೆಂದರೆ ರಬ್ಬರ್ ಮತ್ತು ಟೀ ಮೋನೋ ಕಲ್ಚರ್ ಬೆಳೆಗಳು. ಕಾಫಿ ಏಲಕ್ಕಿ ಮರಗಿಡಗಳ ಮಧ್ಯೆ ಬೆಳೆಯುತ್ತದೆ.

ಕಾಫಿ ಬೆಳೆಯುವ ಪ್ರದೇಶದಲ್ಲಿ ಬೆಳೆಯಲು ಸಾಧ್ಯವಿರುವುದು, ಅಂದರೆ 2500 ರಿಂದ 4500 ಅಡಿ ಎತ್ತರದ ಬೆಟ್ಟಪ್ರದೇಶದಲ್ಲಿ ಕಾಫಿ, ಏಲಕ್ಕಿ ಮತ್ತು ಸ್ವಲ್ಪ ಮಟ್ಟಿಗೆ ಕಿತ್ತಳೆ ಮಾತ್ರ. ಇನ್ನು ಒಂದಷ್ಟು ಬಾಳೆ, ಅಡಿಕೆಯನ್ನು ಇಲ್ಲಿಯೂ ಬೆಳೆಯುತ್ತಾರೆ ಇವೆಲ್ಲ ಬೆಟ್ಟದ ತಗ್ಗಿನಲ್ಲಿ ಮತ್ತು ಕೆಳಗಿನ ಬಯಲಿನಲ್ಲಿ ಮಾತ್ರ ಉಳಿದಂತೆ ನಗಣ್ಯ.

ಬಾಳೆ ಬೆಳೆ ಈಗ ಆನೆಗಳಿಗೆ ಆಹ್ವಾನ

ಏಲಕ್ಕಿಯಂತೂ ಈಗ ನಾಮಾವಶೇಷದ ಸ್ಥಿತಿ ತಲುಪಿದೆ ಇದಕ್ಕೆ ಕಾರಣಗಳು ಹಲವಾರು. ಅರಣ್ಯನಾಶ, ಪ್ರಾಣಿಗಳ ಕಾಟ, ಹಲವು ರೋಗಗಳು ಮತ್ತು ವಾತಾವರಣದಲ್ಲಿ ಆದ ಬದಲಾವಣೆ ಇವುಗಳಲ್ಲಿ ಕೆಲವು. ಹಾಗಾಗಿ ಹೆಚ್ಚಿನ ಏಲಕ್ಕಿ ತೋಟಗಳು ಇಂದು ಕಾಫಿ ತೋಟಗಳಾಗಿವೆ.

ಹೌದು ಕಾಫಿಯನ್ನು ಅಂತರ ಬೆಳೆಯಾಗಿ ಬೆಳೆಯಬಾರದೇ ಎಂಬುದೊಂದು ಪ್ರಶ್ನೆ. ಹೌದು ಇಂದು ಕಾಫಿ ಹೆಚ್ಚೂ ಕಡಿಮೆ ಅಂತರ ಬೆಳೆಯಾಗಿದೆ ಯಾಕೆಂದರೆ ಹಲವಾರು ಕಾಫಿತೋಟಗಳನ್ನು ನೋಡಿದರೆ ಮೆಣಸಿನ ತೋಟದ ಮಧ್ಯೆ ಕಾಫಿ ಬೆಳೆದಂತೆಯೇ ಕಾಣಿಸುತ್ತದೆ. ಹಾಗಾದರೆ ಮೆಣಸನ್ನೇ ಮುಖ್ಯ ಬೆಳೆಯಾಗಿ ಬೆಳೆಯಬಹುದಲ್ಲ?  ಇನ್ನೂ ಕೃಷಿಕ ಕಾಫಿಯನ್ನು ನಂಬಿಕೊಂಡಿರುವುದೇಕೆಂದರೆ. ಮೆಣಸು ಅನಿಶ್ಚಿತ ಬೆಳೆ. ಒಂದೇ ಒಂದು ವರ್ಷದಲ್ಲಿ ಸೊರಗು ರೋಗ ಇಡೀ ತೋಟವನ್ನೇ ನಾಶ ಮಾಡಬಲ್ಲದು. ಈ ವರ್ಷ ಬಂಪರ್ ಬೆಳೆ ನೀಡಿದ ತೋಟದಲ್ಲಿ ಮುಂದಿನ ವರ್ಷ ಮುಂದಿನ ವರ್ಷ ಹೊಸದಾಗಿ ಗಿಡ ನೆಡಬೇಕಾದ ಪರಿಸ್ಥಿತಿ. ಮತ್ತೆ ಫಸಲಿಗೆ ಆರೇಳು ವರ್ಷ ಕಾಯಬೇಕು. ಹಾಗಾಗಿ ಬಹುವಾರ್ಷಿಕ ಅದರಲ್ಲೂ ಕಡಿಮೆ ರೋಗಗಳಿರುವ ರೋಬಸ್ಟ ಕಾಫಿ ಬೆಳೆ ಇಂದು ಕಾಫಿ ಬೆಳಗಾರರನ ಅನಿವಾರ್ಯ ಆಯ್ಕೆ. ಇದರಿಂದ ನೂರಾರು ಅರೆಬಿಕಾ ಕಾಫಿತೋಟಗಳು ರೊಬಸ್ಟಕ್ಕೆ ಬದಲಾಯಿಸುತ್ತಿವೆ. ಕಾಫಿ ಬೆಳೆಯೇ(ಏಲಕ್ಕಿ ಕೂಡಾ) ಒಂದು ರೀತಿಯ ಅಂತರ ಬೆಳೆಯೇ, ಯಾಕೆಂದರೆ ಇದು ಮರಗಳ ನೆರಳಿನಲ್ಲಿ ಬೆಳಯುತ್ತದೆ. ಕೊಡಗಿನಿಂದ ಚಿಕ್ಕಮಗಳೂರಿನವರೆಗೆ ಇಂದು ಮರಗಿಡಗಿಡಗಳು ದೊಡ್ಡ ಪ್ರಮಾಣದಲ್ಲಿ ಉಳಿದಿದ್ದರೆ ಅದಕ್ಕೆ ಪ್ರಮುಖ ಕಾರಣವೇ ಕಾಫಿ ಬೆಳೆ. ಕಾಫಿ ಇಲ್ಲದಿರುತ್ತಿದ್ದರೆ ಎಲ್ಲವೂ ಬೋಳು ಗುಡ್ಡಗಳಾಗಿರುತ್ತಿದ್ದವು. ಇಲ್ಲವೇ ಅಕೇಸಿಯಾ ತೋಪುಗಳಾಗುತ್ತಿದ್ದವು.

ಕಾಫಿ ಕೃಷಿಕರು ಪರ್ಯಾಯವಾಗಿ ಏನೇನು ಬೆಳೆಯಬಹುದೋ ಎಲ್ಲವನ್ನೂ ಪ್ರಯತ್ನಿಸಿ ನೋಡಿದ್ದಾರೆ. ವೆನಿಲ್ಲಾ, ಪಚೋಲಿ, ಜತ್ರೋಪಾ, ಹಣ್ಣಿನ ಗಿಡಗಳು, ಅಗರ್ ವುಡ್, ಎಲ್ಲವನ್ನೂ ಪ್ರಯೋಗ ಮಾಡಿದ್ದಾರೆ. ಮತ್ತೆ ಕೊನೆಗೂ ಈ ಪ್ರದೇಶದಲ್ಲಿ ಅವರ ಕೈಹಿಡಿಯುವುದು. ಕಾಫಿ ಮೆಣಸು ಏಲಕ್ಕಿ ಒಂದಷ್ಟು ಬಾಳೆ ಮಾತ್ರ. ಹಾಗಾಗಿ ಬೇರೆ ಬೆಳೆ ಬೆಳೆಯುವುದು ಸಧ್ಯದಲ್ಲಿ ಕಾಣುತ್ತಿಲ್ಲ.

ಬೆಟ್ಟದ ನೆತ್ತಿಯವರೆಗಿನ ಕೃಷಿ ಭೂಕುಸಿತಕ್ಕೆ ಆಹ್ವಾನ

ಹೌದು ಕಾಫಿ ಬೆಳೆಗಾರರು ಭೂಮಿ ಒತ್ತುವರಿ ಮಾಡಿದ್ದಾರೆ. ಆದರೆ ಮೀಸಲು ಅರಣ್ಯವನ್ನು ಅಲ್ಲ ಮೀಸಲು ಅರಣ್ಯವನ್ನು ಹಾಳುಮಾಡಿದ್ದು ನಮ್ಮ ಅಭಿವೃದ್ಧಿ ಯೋಜನೆಗಳು. ರೆವಿನ್ಯೂ ನೆಲವನ್ನು ದೊಡ್ಡ ಪ್ರಮಾಣದಲ್ಲಿಯೇ ಒತ್ತುವರಿ ಮಾಡಿದ್ದಾರೆ. ಆದರೆ ಅದು ಕಾಡು ಮಾತ್ರವಲ್ಲ ದೀಣೆ ಎಂದು ಕರೆಯುವ ಬೋಳು ಗುಡ್ಡಗಳೂ ದೊಡ್ಡ ಪ್ರಮಾಣದಲ್ಲಿವೆ. ಇವೆಲ್ಲ ಇಂದು ಕಾಫಿ ಬೆಳೆಯಿಂದಾಗಿ ಮರಗಿಡಗಳಿಂದ ತುಂಬಿವೆ, ಬ್ರಿಟಿಷರು ದಟ್ಟ ಕಾಡಿದ್ದ ಜಾಗಗಳಲ್ಲಿ ಮಾತ್ರ ಕಾಫಿ ಬೆಳೆದಿದ್ದರು. ಆದರೆ ಇಂದು ಸ್ವಂತ ಹಿಡುವಳಿಗಳಲ್ಲಿದ್ದ ದೀಣೆಗಳೂ  ತೋಟಗಳಾಗಿ ಮರಗಳಿಂದ ತುಂಬಿವೆ.

ಕಾಫಿಬೆಳೆಯಿಂದಾಗಿಯೇ ಮರಗಿಡಗಳು ಉಳಿದಿರುವ ಪ್ರದೇಶ ಇಂದು ಲಕ್ಷ ಎಕರೆಗಳಿಗೂ ಹೆಚ್ಚು. ಪರಿಸರದ ವಿಚಾರದಲ್ಲಿ ಹೇಳುವುದಾದರೂ ಕಾಫಿ ಅತ್ಯಂತ ಹೆಚ್ಚು ಪರಿಸರ ಸ್ನೇಹಿ ಬೆಳೆ ಬರಿಯ ಮರಗಿಡಗಳ ಕಾರಣಕ್ಕಾಗಿ ಮಾತ್ರವಲ್ಲ. ರೊಬಸ್ಟ ಕಾಫಿ ಎಲ್ಲ ಬೆಳೆಗಳಿಗಿಂತಲೂ ಕಡಿಮೆ ರಾಸಾಯನಿಕ ಪಯೋಗಿಸುವ ಬೆಳೆ ರಾಸಾಯನಿಕ ಗೊಬ್ಬರವೊಂದನ್ನು ಬಳಸದಿದ್ದರೆ ಅದು ಶೇ.100 ಸಾವಯವ ಕೃಷಿ. ಅದಕ್ಕೆ ಬೇರೆ ಯಾವುದೇ ವಿಷವನ್ನೂ ಬಳಸುವುದಿಲ್ಲ. ಕೆಲವು ಕಾಲ ಬೆರ್ರಿ ಬೋರರ್ ಹೆಚ್ಚಾಗಿದ್ದಾಗ ಕೆಲವರು ಕೀಟನಾಶಕವನ್ನು ಬಳಸತೊಡಗಿದವರೂ ನಂತರ ಅದನ್ನು ನಿಲ್ಲಿಸಿದ್ದಾರೆ ಹಾಗೆಯೇ ಕೆಲಸಗಾರರ ಅಭಾವದಿಂದ  ಕಳೆನಾಶಕ ಬಳಸತೊಡಗಿದ್ದವರೂ ಅದರಿಂದಾಗುವ ಹಾನಿ ಅರಿತು ಈಗ ಯಂತ್ರ ಬಳಸತೊಡಗಿದ್ದಾರೆ. ಅರೇಬಿಕ ಕಾಫಿಯಲ್ಲಿ ಕಾಂಡ ಕೊರಕ ಹುಳಗಳ ನಿಯಂತ್ರಣಕ್ಕಾಗಿ ಕೀಟನಾಶಕ ಬಳಸುತ್ತಾರೆ, ಆದರೆ ಇತರ ಪ್ಲಾಂಟೇಷನ್ ಬೆಳೆಗಳಲ್ಲಿ ಅಪಾರ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸುತ್ತಾರೆ.

ಬೆಟ್ಟ ಪ್ರದೇಶವನ್ನೆಲ್ಲ ಖಾಲಿ ಮಾಡಿ ಅರಣ್ಯವನ್ನಾಗಿಸಬೇಕು, ಎಂಬ ಮಾತೂ ಇದೆ, ಅದು ನಮ್ಮ ಸಧ್ಯದ ಪರಿಸ್ಥಿತಿಯಲ್ಲಿ ದೂರದ ಮಾತು. ಒಂದು ವೇಳೆ ಹಾಗೇನಾದರೂ ಅದರೆ ನಂತರ ಆ ಪ್ರದೇಶವನ್ನು ನಮ್ಮ ಸರ್ಕಾರಗಳು ಏನು ಮಾಡಿಯಾವು ಊಹಿಸಿ.

* ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಾಫಿ, ಯಾಲಕ್ಕಿ, ಮೆಣಸು, ವೆನಿಲ್ಲಾ, ಶುಂಠಿಯಂತಹ ಬೆಳೆ ಬದಲಾವಣೆಗಳು ಮತ್ತು ಕಷ್ಟನಷ್ಟಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...