Homeಮುಖಪುಟಮತೀಯ ಸಂಕೇತಗಳಿಗೆ ಎನ್‌ಎಸ್‌ಡಿ ಇನ್‌ಸ್ಟಾಗ್ರಾಮ್‌ ಖಾತೆ ದುರ್ಬಳಕೆ: 272 ಜೀವಪರರ ಬಹಿರಂಗ ಪತ್ರ

ಮತೀಯ ಸಂಕೇತಗಳಿಗೆ ಎನ್‌ಎಸ್‌ಡಿ ಇನ್‌ಸ್ಟಾಗ್ರಾಮ್‌ ಖಾತೆ ದುರ್ಬಳಕೆ: 272 ಜೀವಪರರ ಬಹಿರಂಗ ಪತ್ರ

- Advertisement -
- Advertisement -

ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಡಿ)ಯ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯು ಮತಧರ್ಮೀಯವಾದ ಸಂದೇಶಗಳನ್ನು ಬಿತ್ತರಿಸಿ ತುಂಬ ತಪ್ಪು ಮಾಡುತ್ತಿದೆ ಎಂದು ಆಕ್ಷೇಪಿಸಿ 272 ಕಲಾವಿದರು ಎನ್‌ಎಸ್‌ಡಿಯ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ರಾಷ್ಟ್ರೀಯ ನಾಟಕಶಾಲೆಯ ಅಧಿಕೃತ ಇನ್‍ಸ್ಟಾಗ್ರಾಮ್ ಖಾತೆಯು ಮತಧರ್ಮೀಯವಾದ ಹಬ್ಬಗಳನ್ನು ಎತ್ತಿಹಿಡಿಯುತ್ತಿದೆ. ಮತಧರ್ಮೀಯವಾದ ಚಿತ್ರಗಳು ಹಾಗೂ ಪ್ರತಿಮಾ ಸಂಕೇತಗಳನ್ನು ಪ್ರದರ್ಶಿಸಲು ತೊಡಗಿದೆ ಎಂದು 272 ಮಂದಿ ಕಲಾವಿದ-ಕಲಾವಿದೆಯರು, ಸಾಹಿತಿಗಳು, ಅಧ್ಯಾಪಕ-ಅಧ್ಯಾಪಿಕೆಯರು, ಸಂಸ್ಕೃತಿ ಕ್ಷೇತ್ರದ ಕಾಯಕದವರು, ಮತ್ತು ಆ ಶಾಲೆಯ ಪದವೀಧರರು, ಪದವೀಧರೆಯರು ಹಾಗೂ ಈ ಶಾಲೆಯಲ್ಲಿ ಈ ಹಿಂದೆ ಪಾಠ ಮಾಡಿದವರು ಬಹಿರಂಗ ಪತ್ರಬರೆದಿದ್ದು, “ಇದನ್ನು ಬಹಳ ಆತಂಕದಿಂದ ಗಮನಿಸಿದ್ದೇವೆ” ಎಂದಿದ್ದಾರೆ.

“ಯಾವುದೇ ಮತಧರ್ಮಕ್ಕೆ ಸೇರಿದ ಯಾವುದೇ ಬಗೆಯ ಸಂದೇಶ ಚಿತ್ರ ಹಾಗೂ ಪ್ರತಿಮಾ ಸಂಕೇತಗಳನ್ನು ಸರ್ಕಾರವು ನಡೆಸುವ ಸಾರ್ವಜನಿಕ ಸಂಸ್ಥೆಗಳು ಬಿತ್ತರಿಸುವುದು ಆ ಸಂಸ್ಥೆಗಳ ಕರ್ತವ್ಯಧರ್ಮಕ್ಕೆ ಹೊರತಾದುದು. ಈ ವಿಷಯವನ್ನು ನಾವು, ಈ ಮೂಲಕ, ರಾಷ್ಟ್ರೀಯ ನಾಟಕಶಾಲೆಯ ಅಧಿಕಾರಿಗಳಾದ ತಮ್ಮ ಗಮನಕ್ಕೆ ತಂದು, ಇಂಥ ಕೆಲಸವು ಈಗಿಂದೀಗ ನಿಲ್ಲುವಂತೆ ನೋಡಿಕೊಳ್ಳಬೇಕು” ಎಂದು ಜೀವಪರ ಮನಸ್ಸುಗಳು ಆಗ್ರಹಿಸಿವೆ.

ಇದನ್ನೂ ಓದಿರಿ: ತ್ರಿಪುರಾ: VHP ರ್‍ಯಾಲಿ ವೇಳೆ ಮಸೀದಿ ಧ್ವಂಸ, ಎರಡು ಅಂಗಡಿಗಳಿಗೆ ಬೆಂಕಿ

ರಾಷ್ಟ್ರೀಯ ನಾಟಕ ಶಾಲೆಯು ಮತಧರ್ಮೀಯವಾದ ಹಬ್ಬಗಳ ಆಚರಣೆಯನ್ನು ಎತ್ತಿಹಿಡಿಯುವ ಸಂದೇಶಗಳನ್ನು ಬಿತ್ತರಿಸುವುದರಿಂದಾಗಿ, ಕಲಾಬೋಧನೆಯ ತನ್ನ ಅಸಲು ಕರ್ತವ್ಯವನ್ನು ಕಡೆಗಣಿಸಿ, ತನ್ನ ಘನತೆಗೌರವಗಳಿಗೆ ಧಕ್ಕೆ ಉಂಟುಮಾಡಿಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ಸಾರ್ವಜನಿಕ ಸಂಪರ್ಕತೆಗೆ ಬೇಕಾದ ಕುಶಲತೆಯ ವಿಷಯದಲ್ಲಿ ನಿಮಗೆ, ಒಂದು ವೇಳೆ, ನೆರವು ಬೇಕಾದಲ್ಲಿ, ದಯವಿಟ್ಟು, ಶಾಲೆಯಲ್ಲಿ ಈ ಹಿಂದೆ ಪಾಠ ಮಾಡುತ್ತಿದ್ದ ಅಧ್ಯಾಪಕರನ್ನು, ಅಧ್ಯಾಪಿಕೆಯರನ್ನು ಕೇಳಿ; ಕಲೆ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ಕೇಳಿ; ಅಧ್ಯಾಪನ ಕ್ಷೇತ್ರದ ಧೀಮಂತರನ್ನು ಕೇಳಿ; ಈ ನಮ್ಮ ಶಾಲೆಯ ಪದವೀಧರರಲ್ಲಿ ಸಮರ್ಥರಾದವರನ್ನು ಕೇಳಿ. ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾದ ಈ ಸಂಸ್ಥೆಯು ತನ್ನ ಚಹರೆ ಗುರುತುಗಳನ್ನು ಉಳಿಸಿ, ಬೆಳೆಸಿಕೊಳ್ಳಲು ಅವರು ನಿಮಗೆ ಸಂತಸದಿಂದ ನೆರವಾಗುತ್ತಾರೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಎನ್‌ಎಸ್‌ಡಿಯ ಅಧಿಕಾರಿವರ್ಗದ ಮುಂದೆ ಇಡಲಾಗಿರುವ ಬೇಡಿಕೆಗಳು

“ರಾಷ್ಟ್ರೀಯ ನಾಟಕಶಾಲೆಯ ಸಾಮಾಜಿಕ ಸಂಪರ್ಕದ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ಸಂಪರ್ಕದ ಅದರ ಮತ್ತೆಲ್ಲ ವಹಿವಾಟಿನಲ್ಲಿ ಈಗ ಕಾಣಿಸಿಕೊಂಡಿರುವ ಮತ್ತು ಕಾಣಿಸಿಕೊಳ್ಳುತ್ತಿರುವ ಮತಧರ್ಮೀಯವಾದ ಎಲ್ಲ ಸಂದೇಶ, ಒಕ್ಕಣೆ ಹಾಗೂ ಚಿತ್ರಗಳನ್ನು ತಾವು ಈಗಿಂದೀಗ ಹಿಂದಕ್ಕೆ ಪಡೆದು, ಅಳಿಸಿಹಾಕಬೇಕು” ಎಂದು ಸಹಿ ಮಾಡಿರುವ ಎಲ್ಲ ಪ್ರಜ್ಞಾವಂತರು ಆಗ್ರಹಿಸಿದ್ದಾರೆ.

“ರಾಷ್ಟ್ರೀಯ ನಾಟಕ ಶಾಲೆಯ ಸಾಮಾಜಿಕ ಸಂಪರ್ಕದ ಜಾಲತಾಣಗಳಲ್ಲಿ ಕಾಣಿಸಿಕೊಳ್ಳಬೇಕಾದದ್ದು ರಂಗಭೂಮಿ, ಕಲೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸಂದೇಶ ಮತ್ತು ಒಕ್ಕಣೆಗಳು ಮಾತ್ರ. ನಮ್ಮ ಈ ಸಂಸ್ಥೆಯ ಘನತೆ ಗೌರವಗಳನ್ನು, ಇದರ ಉನ್ನತ ಮಾನದಂಡಗಳನ್ನು ಉಳಿಸಿ, ಬೆಳೆಸುವಲ್ಲಿ ಹೆಚ್ಚಿನ ಮುತುವರ್ಜಿ ಕಾಣಿಸಿಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಎನ್‌ಎಸ್‌ಡಿಗೆ ಪತ್ರ ಬರೆದಿರುವವರು (ಪ್ರಾತಿನಿಧಿಕ ಹೆಸರುಗಳು)
ಎನ್‌ಎಸ್‌ಡಿಗೆ ಪತ್ರ ಬರೆದಿರುವವರು (ಪ್ರಾತಿನಿಧಿಕ ಹೆಸರುಗಳು)

ಖ್ಯಾತ ಕವಿ-ನಾಟಕಕಾರ-ರಂಗನಿರ್ದೇಶಕ ರಘುನಂದನ ಅವರು ದೆಹಲಿಯ ರಾಷ್ಟ್ರೀಯ ನಾಟಕಶಾಲೆ (ಎನ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಎಸ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಡಿ)ಯಲ್ಲಿ ಓದಿದವರು. ರಂಗಾಯಣ, ನೀನಾಸಮ್, ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಹಲವು ದಶಕಗಳಿಂದ ಕೆಲಸಮಾಡುವುದರ ಜೊತೆಗೆ ಅನೇಕ ವರ್ಷಗಳ ಕಾಲ ದೆಹಲಿಯ ಆ ನಾಟಕಶಾಲೆಗೆ ಅತಿಥಿ ಪ್ರಾಧ್ಯಾಪಕ ಹಾಗೂ ರಂಗನಿರ್ದೇಶಕರಾಗಿ ಹೋಗಿಬರುತ್ತಿದ್ದವರು. ಅಲ್ಲಿನ ಶೈಕ್ಷಣಿಕ ಮಂಡಳಿಯ ಸದಸ್ಯರಾಗಿದ್ದವರು.

ಅವರು ‘ನಾನುಗೌರಿ.ಕಾಂ’ನೊಂದಿಗೆ ಮಾತನಾಡಿ, “ಎನ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಎಸ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಡಿ ಶುರುವಾದದ್ದು 1957-58ರಲ್ಲಿ. ಈ ಶಾಲೆಗೆ ಬುನಾದಿ ಹಾಕಿ ಕಟ್ಟಿದವರಲ್ಲಿ ಇಬ್ರಾಹಿಂ ಅಲ್ಕಾಜಿ಼ ಮತ್ತು ಬಿ. ವಿ. ಕಾರಂತ ಥರದ ಮಹಾನ್‌ ವ್ಯಕ್ತಿತ್ವಗಳಿವೆ. ನಿತ್ಯವೂ ಅವರನ್ನು ನೆನೆಯಬೇಕು. ನಿಜವಾದ ಅರ್ಥದಲ್ಲಿ ಅಲ್ಕಾಜಿ಼ ಅವರು ದೇಶಪ್ರೇಮಿಯಾಗಿದ್ದರು, ದೇಶ ಕಟ್ಟುವ ಕೆಲಸ ಮಾಡಿದರು. ಪ್ರಧಾನಿ ನೆಹರೂ ಅವರಿಗೆ ಅಲ್ಕಾಜಿ಼ ಅವರ ಮೇಲೆ ಅಪಾರ ನಂಬಿಕೆ ಇತ್ತು. ಎನ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಎಸ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಡಿಯಲ್ಲಿನ ತಮ್ಮ ಕೆಲಸದ ಮೂಲಕ ನಮ್ಮ ದೇಶವು ಸೆಕ್ಯೂಲರಿಸಮ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ ಕಡೆಗೆ ಸಾಗುವುದರತ್ತ ತಮ್ಮ ಪಾಲು ನೀಡಿದವರು. ನಂತರದಲ್ಲಿ ಬಂದ ಕಾರಂತರು ಈ ಆಶಯವನ್ನು ಮತ್ತಷ್ಟು ವಿಸ್ತರಿಸಿದರು, ಆಳಗೊಳಿಸಿದರು. ಶಾಲೆಯ ಇತಿಹಾಸದಲ್ಲಿ ಏಳುಬೀಳುಗಳಿದ್ದರೂ ಎಲ್ಲರನ್ನೂ ಒಳಗೊಳ್ಳುವ ಬಂಧುತ್ವವನ್ನು ಕಾಪಾಡಿಕೊಂಡು ಬರುತ್ತಿತ್ತು. ಆದರೆ ಈಗ ಉಲ್ಟಾ ಆಗಿದೆ” ಎಂದು ವಿಷಾದಿಸಿದರು.

ಎನ್‌ಎಸ್‌ಡಿ ಮತೀಯ ವಿಚಾರಗಳಿಗೆ ಎಂದಿಗೂ ತಲೆ ಹಾಕಿರಲಿಲ್ಲ. ಈಗ ಹಾಕುತ್ತಿದೆ. ಈಗ ಆಯಾಕಟ್ಟಿನ ಜಾಗದಲ್ಲಿ ಕುಳಿತಿರುವವರು ಕಲಾವಿದರಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, “ಕಡವಾ ಚೌತ್‌ ಆಚರಣೆಯ ಪೋಸ್ಟ್‌ ಹಾಕಲಾಗಿದೆ. ಅದು ಪತಿ ಪೂಜೆಯನ್ನು ಪ್ರತಿಪಾದಿಸುತ್ತದೆ. ಹೆಂಡತಿ ದಿನಪೂರ್ತಿ ಉಪವಾಸ ಇರಬೇಕು, ಗಂಡನಿಗೆ ಬಾಯಿತುತ್ತು ತಿನಿಸಬೇಕು, ಜರಡಿ ಹಿಡಿದು ಗಂಡನ ಮುಖ ನೋಡಬೇಕು. ಇದು ಉತ್ತರಭಾರತದಲ್ಲಿ ಆಚರಣೆಯಲ್ಲಿದೆ. ಅಷ್ಟೇ ಅಲ್ಲದೆ ಗಂಡಾಳ್ವಿಕೆಯನ್ನು ಪ್ರತಿನಿಧಿಸುವ ಆಚರಣೆ ಕಡವಾ ಚೌತ್‌. ಇದನ್ನು ಆಚರಿಸಿ ಎಂದು ಪ್ರಚಾರ ಮಾಡುವುದು ಸರಿಯೇ? ಹೆಣ್ಣು ಮಕ್ಕಳು ಗಂಡನ ಪಾದ ಪೂಜೆ ಮಾಡಿ ಆತನಿಗೆ ಅಧೀನವಾಗಿ ಇರಬೇಕಾ? ರಾಷ್ಟ್ರೀಯ ನಾಟಕ ಶಾಲೆ ಏನನ್ನು ಹೇಳಲು ಹೊರಟಿದೆ” ಎಂದು ಪ್ರಶ್ನಿಸಿದರು.


ಇದನ್ನೂ ಓದಿರಿ: ಲೆಸ್ಬಿಯನ್ ಜೋಡಿ ‘ಕರ್ವಾ ಚೌತ್‌’ ಆಚರಿಸುವ ಜಾಹೀರಾತು ಹಿಂಪಡೆದ ಡಾಬರ್‌!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...