Homeಕರ್ನಾಟಕಏಕರೂಪಿ ರಾಷ್ಟ್ರೀಯತೆಯ ಅಪಾಯಗಳನ್ನು ಎಚ್ಚರಿಸಿದ ಕರ್ನಾಟಕದ ತುಳುನಾಡಿನ ವೈವಿಧ್ಯತೆ

ಏಕರೂಪಿ ರಾಷ್ಟ್ರೀಯತೆಯ ಅಪಾಯಗಳನ್ನು ಎಚ್ಚರಿಸಿದ ಕರ್ನಾಟಕದ ತುಳುನಾಡಿನ ವೈವಿಧ್ಯತೆ

- Advertisement -
- Advertisement -

ದಕ್ಷಿಣ ಕನ್ನಡದವನು ಎಂದು ಪರಿಚಯಿಕೊಳ್ಳುವಾಗ ಎರಡು ರೀತಿಗಳಲ್ಲಿ ಗುರುತಿಸುತ್ತಾರೆ. ಒಂದು ಬುದ್ಧಿಶಾಲಿ ಜಿಲ್ಲೆಯವನೆಂದು ಮತ್ತೊಂದು ಕೋಮುವಾದದ ತವರಿನವನೆಂದು. ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಂಡಿದ್ದು ವರ್ಷಕ್ಕೊಮ್ಮೆ ಬರುತ್ತಿದ್ದ ಶಾಲಾ ಕಾಲೇಜುಗಳು ಪರೀಕ್ಷಾ ಫಲಿತಾಂಶದ ಕಾರಣಕ್ಕೆ ಮಾತ್ರ ಅಲ್ಲ, ಬದಲಿಗೆ ಈ ಪ್ರದೇಶದ ಜನತೆಯ ಶಿಕ್ಷಣ, ರಾಜಕಾರಣ, ಉದ್ಯಮ, ಬ್ಯಾಂಕಿಂಗ್, ಸಾಹಿತ್ಯ, ವಿದ್ವತ್ ಮೊದಲಾದ ವಲಯಗಳಲ್ಲಿ ಮಾಡಿದ ಸಾಧನೆಗಳಿಂದ. ಇಂದು ಕೋಮುವಾದಿಗಳಾಗಿ ಹೊಸ ಸಮುದಾಯಗಳು ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಬುದ್ಧಿವಂತರಾಗಿ ಉಳಿದಿಲ್ಲ ಎಂಬುದನ್ನೂ ಸ್ಪಷ್ಟವಾಗಿ ಗುರುತಿಸಬಹುದಾಗಿದೆ!

ನನ್ನ ಬಾಲ್ಯದಿಂದಲೇ ’ಹಿಂದುತ್ವ’ದ ವಾತಾವರಣದಲ್ಲಿ ಬೆಳೆದ ಕಾರಣ, ನಾನು ಬರೆಯಬಲ್ಲ ಹಂತಕ್ಕೆ ಬಂದಾಗ ನನ್ನ ಜೊತೆಗಿನ ಎಲ್ಲಾ ಹುಡುಗರ ಹಾಗೆಯೇ ಪೂರ್ಣಪ್ರಮಾಣದ ಹಿಂದುತ್ವವಾದಿಯಾಗಿ ರೂಪುಗೊಂಡಿದ್ದೆ. ಆರ್.ಎಸ್.ಎಸ್ ಶಾಖೆಗಳಿಗೆ ಹೋಗುತ್ತಿದ್ದೆ. ಆದರೆ ನನ್ನ ಓರಗೆಯ ಇತರ ಹುಡುಗರಿಗೂ ನನಗೂ ಇದ್ದ ವ್ಯತ್ಯಾಸ ಎಂದರೆ ನಾನು ಆರ್.ಎಸ್.ಎಸ್ ಮತ್ತು ರಾಷ್ಟ್ರೋತ್ಥಾನದ ಸಾಹಿತ್ಯಗಳನ್ನು ಓದಿದೆ. ಇದು ಸಂಘ ಪರಿವಾರ ಪ್ರಣೀತ ಹಿಂದುತ್ವ ಮತ್ತು ಹಿಂದೂ ಧರ್ಮಕ್ಕೆ ಇರುವ ವ್ಯತ್ಯಾಸಗಳ ಬಗ್ಗೆ ಯೋಚಿಸಲು ಕಾರಣವಾಗಿ ಚಿಂತನೆಗೆ ಹಚ್ಚಿತು.

ಭಾರತೀಯ ಸಂಸ್ಕೃತಿಯನ್ನು ಹಿಂದುತ್ವದ ನೆಲೆಯಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ಎಡವುತ್ತಿದ್ದೆ. ಯಾಕೆಂದರೆ ಹಿಂದುತ್ವ ಯಾವುದನ್ನು ಹಿಂದುತ್ವ ’ಭಾರತ’ ಎಂದು ವ್ಯಾಖ್ಯಾನಿಸುತ್ತದೆಯೋ ಅದು ಅಸ್ತಿತ್ವದಲ್ಲಿಯೇ ಇಲ್ಲ. ಹಿಂದುತ್ವದ ಸಮಸ್ಯೆ ಇರುವುದು ಭಾರತವನ್ನು ಒಂದು ಸೀಮಿತ ಚೌಕಟ್ಟಿನಲ್ಲಿ ಇಟ್ಟು ನೋಡುವುದು!

ಭಾರತ ಒಂದು ಬಹು ಸಾಂಸ್ಕೃತಿಕ ರಾಷ್ಟ್ರ. ಹಿಂದುತ್ವ ಎಂಬ ಒಂದು ಸೈದ್ಧಾಂತಿಕ ಆವರಣದ ಒಳಗಡೆ ಅದನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಇದು ಸಂಸ್ಕೃತಿಯ ಬಗ್ಗೆ ಹೆಚ್ಚೆಚ್ಚು ಓದಲು ತೊಡಗುವಾಗ ಗಟ್ಟಿಗೊಳ್ಳುತ್ತಲೇಹೋಯಿತು. ಇದರ ಸುತ್ತ ನನ್ನ ಸಾಂಸ್ಕೃತಿಕ ಮತ್ತು ರಾಜಕೀಯ ಯೋಚನೆಗಳನ್ನು ಕಟ್ಟಲುತೊಡಗಿದೆ.

ರಾಷ್ಟ್ರೀಯತೆಯ ಬಗ್ಗೆ ಪ್ರಪಂಚದಾದ್ಯಂತ ಚರ್ಚೆಗಳು ನಡೆದಿವೆ. ಇದಕ್ಕಿರುವ ಭಿನ್ನಭಿನ್ನ ವ್ಯಾಖ್ಯಾನಗಳನ್ನು ಚರ್ಚಿಸಲಾಗುತ್ತಿದೆ. ಏಕದೇಶ, ಏಕಭಾಷೆ, ಏಕಧರ್ಮ – ಇವೇ ರಾಷ್ಟ್ರೀಯತೆಗೆ ಇರುವ ಸಾಮಾನ್ಯ ವ್ಯಾಖ್ಯಾನ. ಹಿಂದುತ್ವದ ಪ್ರತಿಪಾದಿಸುವುದು ಕೂಡ ಇದೇ ರಾಷ್ಟ್ರೀಯತೆಯನ್ನು. ಆರ್.ಎಸ್.ಎಸ್‌ನ ಎರಡನೇ ಸರಸಂಚಾಲಕ ಮಾಧವ ಸದಾಶಿವ ಗೋಳ್ವಾಕರ್ ಅವರ ಪ್ರಕಾರ ದೇಶವನ್ನು ರೂಪಿಸುವ ಐದು ಏಕತೆಗಳು ಎಂದರೆ ದೇಶ, ಜನಾಂಗ, ಧರ್ಮ, ಭಾಷೆ ಮತ್ತು ಸಂಸ್ಕೃತಿ. ಅವರೇ ಹೇಳುವಂತೆ ಇವೆಲ್ಲಾ ಅಂಶಗಳೂ ಧರ್ಮಕೇಂದ್ರಿತ. ಯಾಕೆಂದರೆ ಧರ್ಮವೇ ಇವೆಲ್ಲವನ್ನೂ ರೂಪಿಸುತ್ತದೆ!

ಹಾಗಿದ್ದರೆ ಯಾವ ಸಂಸ್ಕೃತಿಯ ಮೂಲಕ ದೇಶವನ್ನು ಮತ್ತು ಹಿಂದೂ ಧರ್ಮವನ್ನು ನಿರ್ಧರಿಸಬೇಕು? ವೈದಿಕ ಸಾಹಿತ್ಯವೇ ಇವೆಲ್ಲವನ್ನೂ ನಿರ್ಧರಿಸುತ್ತದೆ ಎಂದರೆ ನನ್ನ ಊರಿನ ದೈವ ಪಾತ್ರಿ ಒಬ್ಬ ಹಾಡುವ ಪಾಡ್ದನಕ್ಕೆ ಈ ದೇಶದಲ್ಲಿ ಬೆಲೆ ಇಲ್ಲವೇ? ಅಖಿಲ ಭಾರತ ಮಟ್ಟದಲ್ಲಿ ದೈವಾರಾಧನೆ, ಯಕ್ಷಗಾನಕ್ಕೆ ಇರುವ ಸ್ಥಾನ ಏನು? ಕೇವಲ ದೇವರನ್ನೇ ನಂಬುವುದು ದೇಶದ ಸಂಸ್ಕೃತಿ ಎಂದರೆ ದೇವರ ಅಸ್ತಿತ್ವವನ್ನು ಅಲ್ಲಗಳೆದು ಭಾರತೀಯ ತಾತ್ವಿಕ ಪರಂಪರೆಯಲ್ಲಿ ಅತ್ಯುನ್ನತ ಸ್ಥಾನ ಪಡೆದಿರುವ ಲೋಕಾಯತ, ನಾಸ್ತಿಕ, ಚಾರ್ವಾಕ ಮೊದಲಾದವರು ಭಾರತೀಯರೆಲ್ಲವೆ? ವೇದಗಳನ್ನು ತಿರಸ್ಕರಿಸಿ, ಜಾತಿವ್ಯವಸ್ಥೆಯನ್ನು, ವರ್ಣವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ ನಾಥ, ಕಾಳಾಮುಖ, ಸಾಂಖ್ಯ, ಬೌದ್ಧ, ಶರಣ ಮೊದಲಾದ ಪಂಥಗಳು ಭಾರತದಲ್ಲವೇ? ಸಾವಿರಾರು ಭಾಷೆಗಳು ಮತ್ತು ಅವುಗಳ ಸುತ್ತ ಬೆಳೆದಿರುವ ಸಂಸ್ಕೃತಿಗಳು ಭಾರತಕ್ಕೆ ಬೇಡವೇ?

ಹಿಂದುತ್ವವನ್ನು ಪ್ರಶ್ನಿಸಿ ಅದರ ಕೋಮುವಾದಿ ರಾಷ್ಟ್ರೀಯತೆಗೆ ಉತ್ತರ ನೀಡಲು ನಮ್ಮ ಮುಂದೆ ಇರುವದು, ಈ ದೇಶ ಸಾವಿರಾರು ವರ್ಷಗಳಿಂದ ಬೆಳೆಸಿಕೊಂಡು ಬಂದಿರುವ ಬಹುಮುಖಿ ಸಂಸ್ಕೃತಿ. ಇದಕ್ಕೆ ನಾನು ಹುಟ್ಟಿ ಬೆಳೆದ ದಕ್ಷಿಣ ಕನ್ನಡದಲ್ಲಿಯೇ ನೂರಾರು ಉದಾಹರಣೆಗಳಿವೆ.

ಇವುಗಳನ್ನು ತಿರುಗಿ ನೋಡಿದಾಗ, ನನಗೆ ಏಕರೂಪಿ ಸಂಸ್ಕೃತಿಯನ್ನು ಪ್ರಚಾರ ಮಾಡುವ ಹಿಂದುತ್ವದಿಂದ ಬಹುತ್ವದ ಬೇರುಗಳಿಗೆ ದೊಡ್ಡ ಹೊಡೆತ ಬೀಳುತ್ತದೆ ಎಂಬ ಭಯ ಗೋಚರಿಸುತ್ತದೆ. ತುಳುನಾಡಿನ ಸಂಸ್ಕೃತಿ ಒಡೆಯುವುದನ್ನು ಕಲಿಸಿಲ್ಲ. ಹಕ್ಕುಗಳಿಗೆ ಹೋರಾಡುವ ಕೋಟಿ ಚೆನ್ನಯರು, ಸ್ತ್ರೀಮತವನ್ನು ಉದ್ಧರಿಸಲು ತನ್ನ ಪತಿಯನ್ನು ತಿರಸ್ಕರಿಸುವ ಅಕ್ಕೆರಸು ಸಿರಿ, ತನ್ನ ಅರಸನನ್ನು ರಕ್ಷಿಸಲು ಪ್ರಾಣ ನೀಡುವ ಮಾಮ್ಮಾಲಿ ಬ್ಯಾರಿ, ಬಪ್ಪನಾಡಿನ ದುರ್ಗಾಪರಮೇಶ್ವರಿ, ಒಲಿದ ಬಪ್ಪ ಬ್ಯಾರಿ ಮೊದಲಾದ ಜಾನಪದ ನಾಯಕರು ಈ ನೆಲದ ಸಂಸ್ಕೃತಿಯನ್ನು ಕಟ್ಟಿದ್ದಾರೆ.

ಬೊಬ್ಬರ್ಯ ಎಂಬ ಮುಸಲ್ಮಾನ ಬ್ಯಾರಿಯೊಬ್ಬ ಮೀನುಗಾರರ ದೈವವಾಗುವುದು ಜಾನಪದದಿಂದ ಹೊರತು ರಾಜಕೀಯ ಪ್ರೇರಿತ ಮತೀಯತೆಯಿಂದಲ್ಲ. ಹಿಂದುತ್ವ ಹಿಂದೂ ಧರ್ಮವನ್ನು ಸುಧಾರಿಸುವ ಬದಲು ಒಂದು ಕರ್ಮಠ ಮತಧರ್ಮವನ್ನಾಗಿ ಮಾರ್ಪಾಡು ಮಾಡುವಾಗ ನಾವು ಬಹುತ್ವದ ಬಗ್ಗೆ ಹೆಚ್ಚುಹೆಚ್ಚು ಮಾತನಾಡಬೇಕಾಗಿದೆ. ಹಿಂದುತ್ವದಲ್ಲಿ ಬೊಬ್ಬರ್ಯ ದೈವದ ಕಥೆಯನ್ನು ಮಹಾಭಾರತದ ಬಬ್ರುವಾಹನನ ಕಥೆಯೊಂದಿಗೆ ಜೋಡಿಸಿ ತಿರುಚಲು ಯತ್ನಿಸಿದರೆ ಸಾಮಾನ್ಯನೊಬ್ಬ ಹಾಡುವ ಪಾಡ್ದನದಲ್ಲಿ ಅವನು ಒಬ್ಬ ಮುಸಲ್ಮಾನ!

ಹಿಂದುತ್ವದಲ್ಲಿ ಬಹುತ್ವಕ್ಕೆ ಅವಕಾಶ ಇಲ್ಲ. ತುಳುವಿನ ಸಬಲೀಕರಣದ ಬಗ್ಗೆ ಅದು ಮಾತನಾಡಿದರೂ ಅದಕ್ಕೆ ಬೇಕಾದ ಪಠ್ಯವನ್ನು ರೂಪಿಸುವಾಗ ಕೋಮುವಾದವನ್ನು ತರಲಾಗುತ್ತದೆ. ಹೀಗಾಗಿ ತುಳುವಿನ ಬಗೆಗಿನ ವಿದ್ವತ್‌ಪೂರ್ಣ ಚರ್ಚೆ ಕಳೆದ ಎರಡು ದಶಕಗಳಿಂದ ತೀರ ಕಡಿಮೆಯಾಗಿದೆ.

ನಮಗೆ ಬೇಕಾದದ್ದು ನಮ್ಮ ಹಿರಿಯರು ನೀಡಿದ ಎಲ್ಲರನ್ನೂ ಒಳಗೊಳ್ಳುವ ತುಳು ಸಂಸ್ಕೃತಿ. ಇದು ಕೇವಲ ತುಳುವಿನ ವಿಚಾರದಲ್ಲಿ ಮಾತ್ರವಲ್ಲ ಇಡೀ ದೇಶದ ವಿಚಾರದಲ್ಲೂ ಮುಖ್ಯವಾಗುತ್ತದೆ! ನನ್ನ ಮನೆಯ ಸಂಸ್ಕೃತಿಯ ಮೂಲಕ ನನ್ನ ದೇಶವನ್ನು ವ್ಯಾಖ್ಯಾನಿಸಲು ಸಾಧ್ಯವಾದರೆ ಅದೇ ನಿಜವಾದ ದೇಶಪ್ರೇಮ. ಹಾಗಾದಾಗ ಮಾತ್ರ ಭಾರತ ನಮ್ಮ ಒಳಗೆ ಗಟ್ಟಿಯಾಗಿ ನೆಲೆಯೂರಲು ಸಾಧ್ಯ.

ಕೋಮುವಾದದಿಂದ ಅಧಃಪತನಕ್ಕೆ ಹೋಗುತ್ತಿರುವ ಭಾರತವನ್ನು ಉಳಿಸುವ ಜವಾಬ್ದಾರಿ ಕನ್ನಡಿಗರಾದ ನಮ್ಮ ಮೇಲಿದೆ. ಕವಿರಾಜ ಮಾರ್ಗಕಾರ ಹೇಳುವ “ಕನ್ನಡಂಗಳ” ವೈವಿಧ್ಯತೆಯ ಜೊತೆಗೆ ತುಳು, ಕೊರಗ, ಕೊಡವ ಮೊದಲಾದ ಕರ್ನಾಟಕದ ಭಾಷೆಗಳು ತಮ್ಮ ಅಸ್ತಿತ್ವದ ಬಗ್ಗೆ ದನಿ ಎತ್ತಿವೆ. ಈ ಸಂಸ್ಕೃತಿಗಳು ಕನ್ನಡನಾಡನ್ನು ಬೆಳೆಸಿವೆ. ಕನ್ನಡದ ದನಿಗಳು ತುಳುವಿನವೂ, ಕೊಡವ ಭಾಷೆಯದ್ದೂ, ಅಳಿವಿನಂಚಿನಲ್ಲಿ ಇರುವ ಕೊರಗರದ್ದೂ ಆಗಬೇಕು! ಈ ಪ್ರಜ್ಞೆ ಇಡೀ ಕರ್ನಾಟಕವನ್ನು ವ್ಯಾಪಿಸಬೇಕು. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡನ್ನು ಕಟ್ಟಿದ ಈ ಬಹುಮುಖಿ ನೆಲೆಗಳ ಉಳಿವಿನ ಬಗ್ಗೆ ದನಿ ಎತ್ತುವ ಮೂಲಕ ಪತನಮುಖಿ ಭಾರತದ ಚೈತನ್ಯವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ.

ಚರಣ್ ಐವರ್ನಾಡು

ಚರಣ್ ಐವರ್ನಾಡು
ಯುವ ಬರಹಗಾರ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಇತಿಹಾಸ, ಜಾನಪದ, ರಾಜಕೀಯ ಮತ್ತು ಸಬಾಲ್ಟ್ರನ್ ಅಧ್ಯಯನಗಳು ಇವರ ಬರವಣಿಗೆಯ ಕ್ಷೇತ್ರಗಳು.


ಇದನ್ನೂ ಓದಿ: ಭಾಷಾ ರಾಜಕಾರಣ ಮತ್ತು ತುಳು ರಾಜ್ಯದ ಬೇಡಿಕೆ: ಪ್ರೊ. ಪುರುಷೋತ್ತಮ ಬಿಳಿಮಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...