Homeಕರ್ನಾಟಕಏಕರೂಪಿ ರಾಷ್ಟ್ರೀಯತೆಯ ಅಪಾಯಗಳನ್ನು ಎಚ್ಚರಿಸಿದ ಕರ್ನಾಟಕದ ತುಳುನಾಡಿನ ವೈವಿಧ್ಯತೆ

ಏಕರೂಪಿ ರಾಷ್ಟ್ರೀಯತೆಯ ಅಪಾಯಗಳನ್ನು ಎಚ್ಚರಿಸಿದ ಕರ್ನಾಟಕದ ತುಳುನಾಡಿನ ವೈವಿಧ್ಯತೆ

- Advertisement -
- Advertisement -

ದಕ್ಷಿಣ ಕನ್ನಡದವನು ಎಂದು ಪರಿಚಯಿಕೊಳ್ಳುವಾಗ ಎರಡು ರೀತಿಗಳಲ್ಲಿ ಗುರುತಿಸುತ್ತಾರೆ. ಒಂದು ಬುದ್ಧಿಶಾಲಿ ಜಿಲ್ಲೆಯವನೆಂದು ಮತ್ತೊಂದು ಕೋಮುವಾದದ ತವರಿನವನೆಂದು. ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಂಡಿದ್ದು ವರ್ಷಕ್ಕೊಮ್ಮೆ ಬರುತ್ತಿದ್ದ ಶಾಲಾ ಕಾಲೇಜುಗಳು ಪರೀಕ್ಷಾ ಫಲಿತಾಂಶದ ಕಾರಣಕ್ಕೆ ಮಾತ್ರ ಅಲ್ಲ, ಬದಲಿಗೆ ಈ ಪ್ರದೇಶದ ಜನತೆಯ ಶಿಕ್ಷಣ, ರಾಜಕಾರಣ, ಉದ್ಯಮ, ಬ್ಯಾಂಕಿಂಗ್, ಸಾಹಿತ್ಯ, ವಿದ್ವತ್ ಮೊದಲಾದ ವಲಯಗಳಲ್ಲಿ ಮಾಡಿದ ಸಾಧನೆಗಳಿಂದ. ಇಂದು ಕೋಮುವಾದಿಗಳಾಗಿ ಹೊಸ ಸಮುದಾಯಗಳು ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಬುದ್ಧಿವಂತರಾಗಿ ಉಳಿದಿಲ್ಲ ಎಂಬುದನ್ನೂ ಸ್ಪಷ್ಟವಾಗಿ ಗುರುತಿಸಬಹುದಾಗಿದೆ!

ನನ್ನ ಬಾಲ್ಯದಿಂದಲೇ ’ಹಿಂದುತ್ವ’ದ ವಾತಾವರಣದಲ್ಲಿ ಬೆಳೆದ ಕಾರಣ, ನಾನು ಬರೆಯಬಲ್ಲ ಹಂತಕ್ಕೆ ಬಂದಾಗ ನನ್ನ ಜೊತೆಗಿನ ಎಲ್ಲಾ ಹುಡುಗರ ಹಾಗೆಯೇ ಪೂರ್ಣಪ್ರಮಾಣದ ಹಿಂದುತ್ವವಾದಿಯಾಗಿ ರೂಪುಗೊಂಡಿದ್ದೆ. ಆರ್.ಎಸ್.ಎಸ್ ಶಾಖೆಗಳಿಗೆ ಹೋಗುತ್ತಿದ್ದೆ. ಆದರೆ ನನ್ನ ಓರಗೆಯ ಇತರ ಹುಡುಗರಿಗೂ ನನಗೂ ಇದ್ದ ವ್ಯತ್ಯಾಸ ಎಂದರೆ ನಾನು ಆರ್.ಎಸ್.ಎಸ್ ಮತ್ತು ರಾಷ್ಟ್ರೋತ್ಥಾನದ ಸಾಹಿತ್ಯಗಳನ್ನು ಓದಿದೆ. ಇದು ಸಂಘ ಪರಿವಾರ ಪ್ರಣೀತ ಹಿಂದುತ್ವ ಮತ್ತು ಹಿಂದೂ ಧರ್ಮಕ್ಕೆ ಇರುವ ವ್ಯತ್ಯಾಸಗಳ ಬಗ್ಗೆ ಯೋಚಿಸಲು ಕಾರಣವಾಗಿ ಚಿಂತನೆಗೆ ಹಚ್ಚಿತು.

ಭಾರತೀಯ ಸಂಸ್ಕೃತಿಯನ್ನು ಹಿಂದುತ್ವದ ನೆಲೆಯಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ಎಡವುತ್ತಿದ್ದೆ. ಯಾಕೆಂದರೆ ಹಿಂದುತ್ವ ಯಾವುದನ್ನು ಹಿಂದುತ್ವ ’ಭಾರತ’ ಎಂದು ವ್ಯಾಖ್ಯಾನಿಸುತ್ತದೆಯೋ ಅದು ಅಸ್ತಿತ್ವದಲ್ಲಿಯೇ ಇಲ್ಲ. ಹಿಂದುತ್ವದ ಸಮಸ್ಯೆ ಇರುವುದು ಭಾರತವನ್ನು ಒಂದು ಸೀಮಿತ ಚೌಕಟ್ಟಿನಲ್ಲಿ ಇಟ್ಟು ನೋಡುವುದು!

ಭಾರತ ಒಂದು ಬಹು ಸಾಂಸ್ಕೃತಿಕ ರಾಷ್ಟ್ರ. ಹಿಂದುತ್ವ ಎಂಬ ಒಂದು ಸೈದ್ಧಾಂತಿಕ ಆವರಣದ ಒಳಗಡೆ ಅದನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಇದು ಸಂಸ್ಕೃತಿಯ ಬಗ್ಗೆ ಹೆಚ್ಚೆಚ್ಚು ಓದಲು ತೊಡಗುವಾಗ ಗಟ್ಟಿಗೊಳ್ಳುತ್ತಲೇಹೋಯಿತು. ಇದರ ಸುತ್ತ ನನ್ನ ಸಾಂಸ್ಕೃತಿಕ ಮತ್ತು ರಾಜಕೀಯ ಯೋಚನೆಗಳನ್ನು ಕಟ್ಟಲುತೊಡಗಿದೆ.

ರಾಷ್ಟ್ರೀಯತೆಯ ಬಗ್ಗೆ ಪ್ರಪಂಚದಾದ್ಯಂತ ಚರ್ಚೆಗಳು ನಡೆದಿವೆ. ಇದಕ್ಕಿರುವ ಭಿನ್ನಭಿನ್ನ ವ್ಯಾಖ್ಯಾನಗಳನ್ನು ಚರ್ಚಿಸಲಾಗುತ್ತಿದೆ. ಏಕದೇಶ, ಏಕಭಾಷೆ, ಏಕಧರ್ಮ – ಇವೇ ರಾಷ್ಟ್ರೀಯತೆಗೆ ಇರುವ ಸಾಮಾನ್ಯ ವ್ಯಾಖ್ಯಾನ. ಹಿಂದುತ್ವದ ಪ್ರತಿಪಾದಿಸುವುದು ಕೂಡ ಇದೇ ರಾಷ್ಟ್ರೀಯತೆಯನ್ನು. ಆರ್.ಎಸ್.ಎಸ್‌ನ ಎರಡನೇ ಸರಸಂಚಾಲಕ ಮಾಧವ ಸದಾಶಿವ ಗೋಳ್ವಾಕರ್ ಅವರ ಪ್ರಕಾರ ದೇಶವನ್ನು ರೂಪಿಸುವ ಐದು ಏಕತೆಗಳು ಎಂದರೆ ದೇಶ, ಜನಾಂಗ, ಧರ್ಮ, ಭಾಷೆ ಮತ್ತು ಸಂಸ್ಕೃತಿ. ಅವರೇ ಹೇಳುವಂತೆ ಇವೆಲ್ಲಾ ಅಂಶಗಳೂ ಧರ್ಮಕೇಂದ್ರಿತ. ಯಾಕೆಂದರೆ ಧರ್ಮವೇ ಇವೆಲ್ಲವನ್ನೂ ರೂಪಿಸುತ್ತದೆ!

ಹಾಗಿದ್ದರೆ ಯಾವ ಸಂಸ್ಕೃತಿಯ ಮೂಲಕ ದೇಶವನ್ನು ಮತ್ತು ಹಿಂದೂ ಧರ್ಮವನ್ನು ನಿರ್ಧರಿಸಬೇಕು? ವೈದಿಕ ಸಾಹಿತ್ಯವೇ ಇವೆಲ್ಲವನ್ನೂ ನಿರ್ಧರಿಸುತ್ತದೆ ಎಂದರೆ ನನ್ನ ಊರಿನ ದೈವ ಪಾತ್ರಿ ಒಬ್ಬ ಹಾಡುವ ಪಾಡ್ದನಕ್ಕೆ ಈ ದೇಶದಲ್ಲಿ ಬೆಲೆ ಇಲ್ಲವೇ? ಅಖಿಲ ಭಾರತ ಮಟ್ಟದಲ್ಲಿ ದೈವಾರಾಧನೆ, ಯಕ್ಷಗಾನಕ್ಕೆ ಇರುವ ಸ್ಥಾನ ಏನು? ಕೇವಲ ದೇವರನ್ನೇ ನಂಬುವುದು ದೇಶದ ಸಂಸ್ಕೃತಿ ಎಂದರೆ ದೇವರ ಅಸ್ತಿತ್ವವನ್ನು ಅಲ್ಲಗಳೆದು ಭಾರತೀಯ ತಾತ್ವಿಕ ಪರಂಪರೆಯಲ್ಲಿ ಅತ್ಯುನ್ನತ ಸ್ಥಾನ ಪಡೆದಿರುವ ಲೋಕಾಯತ, ನಾಸ್ತಿಕ, ಚಾರ್ವಾಕ ಮೊದಲಾದವರು ಭಾರತೀಯರೆಲ್ಲವೆ? ವೇದಗಳನ್ನು ತಿರಸ್ಕರಿಸಿ, ಜಾತಿವ್ಯವಸ್ಥೆಯನ್ನು, ವರ್ಣವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ ನಾಥ, ಕಾಳಾಮುಖ, ಸಾಂಖ್ಯ, ಬೌದ್ಧ, ಶರಣ ಮೊದಲಾದ ಪಂಥಗಳು ಭಾರತದಲ್ಲವೇ? ಸಾವಿರಾರು ಭಾಷೆಗಳು ಮತ್ತು ಅವುಗಳ ಸುತ್ತ ಬೆಳೆದಿರುವ ಸಂಸ್ಕೃತಿಗಳು ಭಾರತಕ್ಕೆ ಬೇಡವೇ?

ಹಿಂದುತ್ವವನ್ನು ಪ್ರಶ್ನಿಸಿ ಅದರ ಕೋಮುವಾದಿ ರಾಷ್ಟ್ರೀಯತೆಗೆ ಉತ್ತರ ನೀಡಲು ನಮ್ಮ ಮುಂದೆ ಇರುವದು, ಈ ದೇಶ ಸಾವಿರಾರು ವರ್ಷಗಳಿಂದ ಬೆಳೆಸಿಕೊಂಡು ಬಂದಿರುವ ಬಹುಮುಖಿ ಸಂಸ್ಕೃತಿ. ಇದಕ್ಕೆ ನಾನು ಹುಟ್ಟಿ ಬೆಳೆದ ದಕ್ಷಿಣ ಕನ್ನಡದಲ್ಲಿಯೇ ನೂರಾರು ಉದಾಹರಣೆಗಳಿವೆ.

ಇವುಗಳನ್ನು ತಿರುಗಿ ನೋಡಿದಾಗ, ನನಗೆ ಏಕರೂಪಿ ಸಂಸ್ಕೃತಿಯನ್ನು ಪ್ರಚಾರ ಮಾಡುವ ಹಿಂದುತ್ವದಿಂದ ಬಹುತ್ವದ ಬೇರುಗಳಿಗೆ ದೊಡ್ಡ ಹೊಡೆತ ಬೀಳುತ್ತದೆ ಎಂಬ ಭಯ ಗೋಚರಿಸುತ್ತದೆ. ತುಳುನಾಡಿನ ಸಂಸ್ಕೃತಿ ಒಡೆಯುವುದನ್ನು ಕಲಿಸಿಲ್ಲ. ಹಕ್ಕುಗಳಿಗೆ ಹೋರಾಡುವ ಕೋಟಿ ಚೆನ್ನಯರು, ಸ್ತ್ರೀಮತವನ್ನು ಉದ್ಧರಿಸಲು ತನ್ನ ಪತಿಯನ್ನು ತಿರಸ್ಕರಿಸುವ ಅಕ್ಕೆರಸು ಸಿರಿ, ತನ್ನ ಅರಸನನ್ನು ರಕ್ಷಿಸಲು ಪ್ರಾಣ ನೀಡುವ ಮಾಮ್ಮಾಲಿ ಬ್ಯಾರಿ, ಬಪ್ಪನಾಡಿನ ದುರ್ಗಾಪರಮೇಶ್ವರಿ, ಒಲಿದ ಬಪ್ಪ ಬ್ಯಾರಿ ಮೊದಲಾದ ಜಾನಪದ ನಾಯಕರು ಈ ನೆಲದ ಸಂಸ್ಕೃತಿಯನ್ನು ಕಟ್ಟಿದ್ದಾರೆ.

ಬೊಬ್ಬರ್ಯ ಎಂಬ ಮುಸಲ್ಮಾನ ಬ್ಯಾರಿಯೊಬ್ಬ ಮೀನುಗಾರರ ದೈವವಾಗುವುದು ಜಾನಪದದಿಂದ ಹೊರತು ರಾಜಕೀಯ ಪ್ರೇರಿತ ಮತೀಯತೆಯಿಂದಲ್ಲ. ಹಿಂದುತ್ವ ಹಿಂದೂ ಧರ್ಮವನ್ನು ಸುಧಾರಿಸುವ ಬದಲು ಒಂದು ಕರ್ಮಠ ಮತಧರ್ಮವನ್ನಾಗಿ ಮಾರ್ಪಾಡು ಮಾಡುವಾಗ ನಾವು ಬಹುತ್ವದ ಬಗ್ಗೆ ಹೆಚ್ಚುಹೆಚ್ಚು ಮಾತನಾಡಬೇಕಾಗಿದೆ. ಹಿಂದುತ್ವದಲ್ಲಿ ಬೊಬ್ಬರ್ಯ ದೈವದ ಕಥೆಯನ್ನು ಮಹಾಭಾರತದ ಬಬ್ರುವಾಹನನ ಕಥೆಯೊಂದಿಗೆ ಜೋಡಿಸಿ ತಿರುಚಲು ಯತ್ನಿಸಿದರೆ ಸಾಮಾನ್ಯನೊಬ್ಬ ಹಾಡುವ ಪಾಡ್ದನದಲ್ಲಿ ಅವನು ಒಬ್ಬ ಮುಸಲ್ಮಾನ!

ಹಿಂದುತ್ವದಲ್ಲಿ ಬಹುತ್ವಕ್ಕೆ ಅವಕಾಶ ಇಲ್ಲ. ತುಳುವಿನ ಸಬಲೀಕರಣದ ಬಗ್ಗೆ ಅದು ಮಾತನಾಡಿದರೂ ಅದಕ್ಕೆ ಬೇಕಾದ ಪಠ್ಯವನ್ನು ರೂಪಿಸುವಾಗ ಕೋಮುವಾದವನ್ನು ತರಲಾಗುತ್ತದೆ. ಹೀಗಾಗಿ ತುಳುವಿನ ಬಗೆಗಿನ ವಿದ್ವತ್‌ಪೂರ್ಣ ಚರ್ಚೆ ಕಳೆದ ಎರಡು ದಶಕಗಳಿಂದ ತೀರ ಕಡಿಮೆಯಾಗಿದೆ.

ನಮಗೆ ಬೇಕಾದದ್ದು ನಮ್ಮ ಹಿರಿಯರು ನೀಡಿದ ಎಲ್ಲರನ್ನೂ ಒಳಗೊಳ್ಳುವ ತುಳು ಸಂಸ್ಕೃತಿ. ಇದು ಕೇವಲ ತುಳುವಿನ ವಿಚಾರದಲ್ಲಿ ಮಾತ್ರವಲ್ಲ ಇಡೀ ದೇಶದ ವಿಚಾರದಲ್ಲೂ ಮುಖ್ಯವಾಗುತ್ತದೆ! ನನ್ನ ಮನೆಯ ಸಂಸ್ಕೃತಿಯ ಮೂಲಕ ನನ್ನ ದೇಶವನ್ನು ವ್ಯಾಖ್ಯಾನಿಸಲು ಸಾಧ್ಯವಾದರೆ ಅದೇ ನಿಜವಾದ ದೇಶಪ್ರೇಮ. ಹಾಗಾದಾಗ ಮಾತ್ರ ಭಾರತ ನಮ್ಮ ಒಳಗೆ ಗಟ್ಟಿಯಾಗಿ ನೆಲೆಯೂರಲು ಸಾಧ್ಯ.

ಕೋಮುವಾದದಿಂದ ಅಧಃಪತನಕ್ಕೆ ಹೋಗುತ್ತಿರುವ ಭಾರತವನ್ನು ಉಳಿಸುವ ಜವಾಬ್ದಾರಿ ಕನ್ನಡಿಗರಾದ ನಮ್ಮ ಮೇಲಿದೆ. ಕವಿರಾಜ ಮಾರ್ಗಕಾರ ಹೇಳುವ “ಕನ್ನಡಂಗಳ” ವೈವಿಧ್ಯತೆಯ ಜೊತೆಗೆ ತುಳು, ಕೊರಗ, ಕೊಡವ ಮೊದಲಾದ ಕರ್ನಾಟಕದ ಭಾಷೆಗಳು ತಮ್ಮ ಅಸ್ತಿತ್ವದ ಬಗ್ಗೆ ದನಿ ಎತ್ತಿವೆ. ಈ ಸಂಸ್ಕೃತಿಗಳು ಕನ್ನಡನಾಡನ್ನು ಬೆಳೆಸಿವೆ. ಕನ್ನಡದ ದನಿಗಳು ತುಳುವಿನವೂ, ಕೊಡವ ಭಾಷೆಯದ್ದೂ, ಅಳಿವಿನಂಚಿನಲ್ಲಿ ಇರುವ ಕೊರಗರದ್ದೂ ಆಗಬೇಕು! ಈ ಪ್ರಜ್ಞೆ ಇಡೀ ಕರ್ನಾಟಕವನ್ನು ವ್ಯಾಪಿಸಬೇಕು. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡನ್ನು ಕಟ್ಟಿದ ಈ ಬಹುಮುಖಿ ನೆಲೆಗಳ ಉಳಿವಿನ ಬಗ್ಗೆ ದನಿ ಎತ್ತುವ ಮೂಲಕ ಪತನಮುಖಿ ಭಾರತದ ಚೈತನ್ಯವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ.

ಚರಣ್ ಐವರ್ನಾಡು

ಚರಣ್ ಐವರ್ನಾಡು
ಯುವ ಬರಹಗಾರ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಇತಿಹಾಸ, ಜಾನಪದ, ರಾಜಕೀಯ ಮತ್ತು ಸಬಾಲ್ಟ್ರನ್ ಅಧ್ಯಯನಗಳು ಇವರ ಬರವಣಿಗೆಯ ಕ್ಷೇತ್ರಗಳು.


ಇದನ್ನೂ ಓದಿ: ಭಾಷಾ ರಾಜಕಾರಣ ಮತ್ತು ತುಳು ರಾಜ್ಯದ ಬೇಡಿಕೆ: ಪ್ರೊ. ಪುರುಷೋತ್ತಮ ಬಿಳಿಮಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...