Homeಕರ್ನಾಟಕರಂಗಾಯಣದ ಗೌರವ ಹಾಳುಮಾಡದಿರಿ: ಹಿರಿಯ ಸಾಹಿತಿಗಳು, ರಂಗಕರ್ಮಿಗಳು, ಚಿಂತಕರ ಆಗ್ರಹ

ರಂಗಾಯಣದ ಗೌರವ ಹಾಳುಮಾಡದಿರಿ: ಹಿರಿಯ ಸಾಹಿತಿಗಳು, ರಂಗಕರ್ಮಿಗಳು, ಚಿಂತಕರ ಆಗ್ರಹ

- Advertisement -
- Advertisement -

ಮೈಸೂರು ರಂಗಾಯಣ ಮತ್ತು ಬಹುರೂಪಿಯ ಗೌರವವನ್ನು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಸಿ.ಕಾರ್ಯಪ್ಪ ಅವರು ಹಾಳುಮಾಡಬಾರದು ಎಂದು ಆಗ್ರಹಿಸಿರುವ ಹಿರಿಯ ಕಲಾವಿದರು, ಸಾಹಿತಿಗಳು, ರಂಗಕರ್ಮಿಗಳು ಬಹಿರಂಗ ಪತ್ರ ಬರೆದಿದ್ದಾರೆ.

ರಂಗಾಯಣದ ನಿರ್ದೇಶಕರು ಬಹುರೂಪಿ ಕಾರ್ಯಕ್ರಮವನ್ನು ರಾಜಕೀಯಗೊಳಿಸುತ್ತಿರುವ ಕುರಿತು ವಿಷಾದ ವ್ಯಕ್ತಪಡಿಸಿರುವ ಕಲಾವಿದರು, ರಂಗಾಯಣ ನಿರ್ದೇಶಕರ ಇತ್ತೀಚಿನ ಹೇಳಿಕೆಗಳನ್ನು ಕಟುವಾಗಿ ಟೀಕಿಸಿದ್ದಾರೆ. ನಿರ್ದೇಶಕರಿಗೆ ಬರೆದ ಪೂರ್ಣ ಪತ್ರ ಇಲ್ಲಿದೆ.

ರಂಗಾಯಣ: ಒಂದು ಸದಾಗ್ರಹ

ಈ ಬಾರಿಯ ‘ಬಹುರೂಪಿ ನಾಟಕೋತ್ಸವ’ ತನ್ನ ಬಣ್ಣವನ್ನು ಬದಲಾಯಿಸುತ್ತಿರುವುದಕ್ಕೆ ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಕೆಲವು ಕಾರಣಗಳನ್ನು ನೀಡಿದ್ದಾರೆ. ಬಹುರೂಪಿಯ ಸಮಾರಂಭಕ್ಕೆ ರಂಗಾಯಣ ಆಯ್ಕೆಮಾಡಿರುವ ಇಬ್ಬರು ಅತಿಥಿಗಳ ಬಗ್ಗೆ ಮೈಸೂರಿನ ರಂಗಭೂಮಿ ಕಲಾವಿದರು, ಬರಹಗಾರರು ಮತ್ತು ಧೀಮಂತರು ಎತ್ತಿರುವ ಆಕ್ಷೇಪದ ಹಿನ್ನೆಲೆಯಲ್ಲಿ ಕಾರ್ಯಪ್ಪ ಈ ಮಾತುಗಳನ್ನು ಆಡಿದ್ದಾರೆ. ಹಾಗೆಯೇ ರಂಗಾಯಣದ ಕಿರಿಯ ಕಲಾವಿದರು ಆಡಿರುವ ಮಾತುಗಳು ಮತ್ತು ಹಂಚಿಕೊಂಡಿರುವ ಅಭಿಪ್ರಾಯಗಳ ಬಗ್ಗೆಯೂ ಈ ನಿರ್ದೇಶಕರು ಮಾತನಾಡಿದ್ದಾರೆ.
ಬಹುರೂಪಿಯ ಈ ಇಬ್ಬರು ಅತಿಥಿಗಳ ಬಗ್ಗೆ ಆಕ್ಷೇಪ ಹೊರಬಿದ್ದಾಗ ಕಾರ್ಯಪ್ಪನವರು ಇದನ್ನು ʼಎಡಚರʼ ಅಡ್ಡಗಾಲು, ಕಿರುಕುಳ ಎಂದು ಭಾವಿಸಿದರು. ಈ ಸಂದರ್ಭವನ್ನು ಬಳಸಿಕೊಂಡು ಎಡಚರು ಮತ್ತು ಬಲಚರು ಎಂದೆಲ್ಲ ಹೇಳಿ ಎಡಚರನ್ನು ಕಟುವಾಗಿ ಟೀಕಿಸಿದ್ದಾರೆ.

ಮೈಸೂರಿನ ರಂಗಪ್ರಿಯರಾಗಲಿ, ಕರ್ನಾಟಕದ ರಂಗಾಸಕ್ತರಾಗಲಿ, ರಂಗಾಯಣವನ್ನು ಒಂದು ಗಂಭೀರ ರಂಗಭೂಮಿಯ ಸಂಸ್ಥೆ ಎಂದು ಪರಿಭಾವಿಸಿ ದಶಕಗಳೇ ಕಳೆದಿವೆ. ರಂಗಾಯಣವನ್ನು ಕಟ್ಟಿಬೆಳಸಿದ ಈವರೆಗಿನ ರಂಗಕಲೆಯ ಅಧ್ಯಾಪಕರಾಗಲಿ, ರಂಗಾಯಣದ ನಿರ್ದೇಶಕರಾಗಲಿ, ರಂಗಾಸಕ್ತರಾಗಲಿ ಎಂದೂ ರಂಗಾಯಣವನ್ನು ಎಡಚ, ಬಲಚ ಸಂಸ್ಥೆ ಎಂದು ಭಾವಿಸಲೇ ಇಲ್ಲ. ಯಾರ ಒಲವು ಯಾವುದೇ ಇರಲಿ, ರಂಗಭೂಮಿ, ಅಥವಾ ಬಹುರೂಪಿ ಉತ್ಸವ ಎಂದಾಗ, ಇದೆಲ್ಲವನ್ನು ಮೀರಿದ ಒಂದು ಸಾಂಸ್ಕೃತಿಕ ಹಬ್ಬ, ಇಡೀ ರಾಷ್ಟ್ರದ ಭಿನ್ನ ಭಾಷೆಗಳ, ಸಂಸ್ಕೃತಿಗಳ ಮೇಳ, ಹೊಸ ಹೊಸ ಪ್ರಯೋಗಗಳ, ಸಾಧನೆಗಳ ವೇದಿಕೆ ಎಂದು ಗೌರವಿಸಿದರು. ಈ ಕಾರಣಕ್ಕಾಗಿಯೇ ʼಬಹುರೂಪಿʼ ಎಂದರೆ ಇಡೀ ಕರ್ನಾಟಕದ ಜನತೆ ಕುತೂಹಲದಿಂದ, ಆಸಕ್ತಿಯಿಂದ ನೋಡುತ್ತ, ಭಾಗವಹಿಸುತ್ತ ಈ ಹಬ್ಬಕ್ಕೆ ಆಸರೆಯಾಗಿ ನಿಂತಿದ್ದಾರೆ.
ಇದು ಒಬ್ಬರ ಸಾಧನೆಯಲ್ಲ; ರಂಗಾಯಣದ ನಿರ್ದೇಶಕರು, ರಂಗಕಲೆಯ ಅಧ್ಯಾಪಕರು, ಕಲಾವಿದರು, ಕಲಾರಸಿಕರು ಎಲ್ಲ ಸೇರಿದ ಸಾಮೂಹಿಕ ಪ್ರಯತ್ನದ ಫಲ. ಹಾಗೆಯೇ ಈ ಬಹುರೂಪಿ ಉತ್ಸವಕ್ಕೆ ಸರ್ಕಾರ, ಖಾಸಗೀ ಸಂಸ್ಥೆಗಳು ಮತ್ತು ಸಾರ್ವಜನಿಕರು ಆರ್ಥಿಕ ಬಲವನ್ನೂ ಒದಗಿಸುತ್ತ ಬಂದಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಲು ಅವಕಾಶವೇ ಇಲ್ಲದಂತೆ ಈ ಹಬ್ಬ ಎರಡು ದಶಕಗಳ ಕಾಲ ನಡೆದುಕೊಂಡು ಬಂದಿದೆ.

ಇದನ್ನೂ ಓದಿರಿ: ಬಹುರೂಪಿಗೆ ಸೂಲಿಬೆಲೆ, ಮಾಳವಿಕಾಗೆ ಆಹ್ವಾನ ವಿರೋಧಿಸಿ ‘ಪರ್ವ’ ಕಿರಿಯ ಕಲಾವಿದರಿಂದ ರಂಗಾಯಣಕ್ಕೆ ಪತ್ರ

ಕಾರ್ಯಪ್ಪನವರು ತಾವೇ ಸರ್ಕಾರದಿಂದ ಹಣತಂದಿರುವುದಾಗಿ ಹೇಳಿಕೊಂಡಿದ್ದಾರೆ. ಅವರು ತಾವೇ ಹೇಳಿಕೊಂಡಿರುವಂತೆ, ಕಾರ್ಯಪ್ಪನವರು ಆರ್‌‌ಎಸ್‌ಎಸ್‌ನಿಂದ ಬಂದವರು. ಆರ್‌‌ಎಸ್‌ಎಸ್‌ನ ಬಿಗಿಹಿಡಿತದಲ್ಲಿರುವ ಸರ್ಕಾರ ಕಾರ್ಯಪ್ಪನವರು ಕೇಳಿದಷ್ಟು ಹಣವನ್ನು ಕೊಟ್ಟಿರಬಹುದು. ಆದರೆ ಈ ಹಣ ಯಾವುದೇ ಪಕ್ಷದ ಅಥವಾ ಸಂಸ್ಥೆಯ ಹಣವಲ್ಲ. ಇದು ಜನರ ಹಣ. ನಾಡಿನ ಜನರು ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಈ ಹಣದ ಮೂಲಕ ಬೆಳೆಸುತ್ತ ಬಂದಿದ್ದಾರೆ. ಸರ್ಕಾರ ಈ ಹಣವನ್ನು ಕೊಡುವುದು ಅದರ ಕರ್ತವ್ಯಭಾಗ. ಇಲ್ಲಿ ಕಾರ್ಯಪ್ಪನವರ ಓಡಾಟ, ಶ್ರಮ ಇದ್ದರೆ ಅದಕ್ಕಾಗಿ ಅವರಿಗೆ ವಂದನೆ ಹೇಳೋಣ. ಆದರೆ ಹಣ ಸಾರ್ವಜನಿಕ ಹಣ ಎಂಬ ಎಚ್ಚರ ಮಾನ್ಯ ಕಾರ್ಯಪ್ಪನರಿಗೆ ಮತ್ತು ಆರ್‌‌ಎಸ್‌ಎಸ್‌ ಅಥವಾ ಬಿಜೆಪಿಗೆ ಇರಬೇಕಾಗುತ್ತದೆ.

ರಂಗಾಯಣದ ಕಿರಿಯ ಕಲಾವಿದರ ಬಗ್ಗೆ ಕಾರ್ಯಪ್ಪನವರು ಆಡಿರುವ ಮಾತುಗಳು ಈಗ ಗಾಳಿಯಲ್ಲಿ ಹರಿದಾಡುತ್ತಿವೆ. ಆ ಮಾತುಗಳನ್ನು ಇಲ್ಲಿ ಬಳಸದೆ, ಅದರ ಧ್ವನಿ ಮತ್ತು ಅರ್ಥವನ್ನಷ್ಟೆ ಬಳಸಿಕೊಂಡು ಹೇಳುವುದಾದರೆ: ರಂಗಾಯಣವಾಗಲಿ, ಅದು ಪ್ರಸ್ತುತ ಪಡಿಸುವ ವಿಭಿನ್ನ ಬಗೆಯ ನಾಟಕಗಳಾಗಲಿ ಕೇವಲ ರಂಜನೆಗಾಗಿ ಇರುವ ಸಾಧನಗಳಲ್ಲ. ಯಾವುದೇ ನಾಡಿನ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಸಮಾಜದ ಚಿಂತನೆಯನ್ನು ಬೆಳೆಸುತ್ತ, ವೈಚಾರಿಕ ಎಚ್ಚರವನ್ನು ಜಾಗೃತವಾಗಿಡುತ್ತ, ಜನತಂತ್ರ ವ್ಯವಸ್ಥೆಯ ಜೀವನಾಡಿಯಾಗಿ ಕ್ರಿಯಾಶೀಲವಾಗಿರುತ್ತವೆ. ಕಲಾವಿದರು ಮುಕ್ತವಾಗಿ ಮಾತನಾಡುವ, ಪ್ರಬುದ್ಧವಾಗಿ ಚಿಂತಿಸುವ ಅವಕಾಶವೂ ಇಲ್ಲಿರುತ್ತದೆ. ಇಂಥ ಅವಕಾಶ ಬಳಕೆಯಾಗುತ್ತಿದ್ದರೆ ನಾವೆಲ್ಲ ಸಂತೋಷಪಡಬೇಕು. ಜನತೆಯ ಹಣ ಸರಿಯಾದ ರೀತಿಯಲ್ಲಿ ಉಪಯೋಗವಾಗುತ್ತಿದೆ ಎಂದುಕೊಳ್ಳಬೇಕು. ಅದು ಬಿಟ್ಟು, ʼಸರ್ಕಾರದ ಹಣವನ್ನು ತಿಂದು, ಸರ್ಕಾರಕ್ಕೆ ದ್ರೋಹ ಬಗೆಯುತ್ತಿದ್ದಾರೆʼ ಇತ್ಯಾದಿ ನಮೂನೆಯ ಮಾತನಾಡುವುದು ರಂಗಾಯಣದಂಥ ಸ್ವಾಯತ್ತ ಸಂಸ್ಥೆಯ, ಜನ ಸಂಸ್ಥೆಯ ಘನತೆಯನ್ನು ಕೆಳಗಿಳಿಸಿದಂತಾಗುತ್ತದೆ. ರಂಗಾಯಣದ ನಿರ್ದೇಶಕ ಸ್ಥಾನದಲ್ಲಿರುವವರು ಇಂಥ ಕೆಲಸಕ್ಕೆ ಮುಂದಾಗಬಾರದು.

ಇದಲ್ಲದೆ, ಕಾರ್ಯಪ್ಪನವರು ‘ಸಂವಾದ’ (SAMVADA) ಎಂಬ ಯೂಟ್ಯೂಬ್ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ, ಬಿ.ವಿ.ಕಾರಂತರನಂತರ ರಂಗಾಯಣಕ್ಕೆ ನಿರ್ದೇಶಕರಾಗಿ ಬಂದವರಲ್ಲಿ ಒಬ್ಬರನ್ನು ಬಿಟ್ಟರೆ ಉಳಿದವರೆಲ್ಲ ‘ಮಾವೋವಾದಿಗಳ ಸಿದ್ಧಾಂತಗಳನ್ನು ಸ್ವೀಕರಿಸುವವರು’ ಎಂದು ಇಲ್ಲಸಲ್ಲದ ಮಾತಾಡಿದ್ದಾರೆ. ಆ ಸಿದ್ಧಾಂತವನ್ನು, ತನಗಿಂತ ಮುಂಚೆ ರಂಗಾಯಣದಲ್ಲಿದ್ದು ಆ ಸಂಸ್ಥೆಗೆ ಜವಾಬ್ದಾರರಾಗಿದ್ದವರ ತಲೆಗೆ ಮೇಲಿಂದಮೇಲೆ ಕಟ್ಟಿದ್ದಾರೆ. ಆದರೆ, ಆ ಸಂಬಂಧ ಅವರು ಆಡಿರುವುದೆಲ್ಲ ಶುದ್ಧ ಅಬದ್ಧವಾದ ಮಾತು. ವಿಶ್ವವಿದ್ಯಾಲಯಗಳೂ ಸೇರಿದಂತೆ ಕರ್ನಾಟಕದ ಯಾವುದೇ ಶಿಕ್ಷಣ ಸಂಸ್ಥೆ ಮತ್ತು ಕಲಾಸಂಸ್ಥೆಯ ಮುಖ್ಯಸ್ಥರು ಕಾರ್ಯಪ್ಪನವರ ತರಹ ಅಬದ್ಧಗಳನ್ನು, ಕೀಳು ಮಾತುಗಳನ್ನು ಎಂದೂ ಆಡಿದ್ದಿಲ್ಲವೆಂದೇ ಹೇಳಬೇಕು.

ಈವರೆಗೆ ರಂಗಾಯಣ ನಡೆದುಬಂದ ದಾರಿಯನ್ನು ನೋಡಿದರೆ, ನಿರ್ದೇಶಕ ಸ್ಥಾನದಲ್ಲಿದ್ದು ಕೆಲಸ ಮಾಡಿರುವ ಗಣ್ಯರು, ಮತ್ತು ಅಲ್ಲಿ ಅದರ ಆರಂಭದ ದಿನಗಳಿಂದ ಕೆಲಸಮಾಡಿ ಅದರ ಆರೋಗ್ಯಪೂರ್ಣ ಕಾಯಕಕ್ಕೆ ಬುನಾದಿಹಾಕಿದ ರಂಗಕಲೆಯ ಅಧ್ಯಾಪಕರು, ವಿಭಿನ್ನ ಚಿಂತನೆಯ, ತಾತ್ವಿಕ ನಿಲುವಿನ, ದೃಷ್ಟಿ ಧೋರಣೆಯ ಗಂಭೀರ ವ್ಯಕ್ತಿಗಳು. ಇವರು ತಮ್ಮ ವ್ಯಕ್ತಿಗತ ಅಭಿಪ್ರಾಯಗಳನ್ನು ಬದಿಗಿಟ್ಟು ರಂಗಭೂಮಿಯ ಘನತೆಗೆ ಕುಂದುಬರದಂತೆ ನೋಡಿಕೊಂಡಿದ್ದಾರೆ. ತಮ್ಮ ಕೈಲಾದ ಮಟ್ಟಿಗೆ ರಂಗಾಯಣವನ್ನು ಬೆಳಸಿ, ಉಳಿಸಿ ಹೋಗಿದ್ದಾರೆ. ಇವತ್ತು ಕರ್ನಾಟಕದಲ್ಲಿ ಮತ್ತು ಕನ್ನಡಿಗರ ಮನಸ್ಸಿನಲ್ಲಿ ರಂಗಾಯಣ ಮತ್ತು ಬಹುರೂಪಿಗಳು ಉಳಿದಿದ್ದರೆ ಅದಕ್ಕೆ ಕಾರಣ ಈ ಎಲ್ಲ ಗಣ್ಯರು. ಅವರನ್ನು ಯಾರೂ ʼಎಡಚರುʼ ʼಬಲಚರುʼ ಎಂದು ಗುರುತಿಸಲಿಲ್ಲ. ಅವರು ರಂಗಭೂಮಿಯವರು. ಅಲ್ಲಿಯೇ ಚಿಂತಿಸಿ, ದುಡಿದು, ರಂಗಭೂಮಿಯನ್ನು ಬೆಳಸಿದವರು; ಕರ್ನಾಟಕವನ್ನು ಮುನ್ನಡೆಸಿದವರು.
ಕಾರ್ಯಪ್ಪನವರು ಮತ್ತು ಅವರಂಥವರು ರಂಗಾಯಣವನ್ನು ಮತ್ತು ಬಹುರೂಪಿಯನ್ನು ಹಗುರವಾಗಿ ನೋಡಬಾರದು; ಅವುಗಳ ಗೌರವವನ್ನು ಹಾಳುಮಾಡಬಾರದು ಎಂಬ ಸದಾಗ್ರಹ ನಮ್ಮದು.

ಇಂತೀ:
ಪಂಡಿತ ರಾಜೀವ ತಾರಾನಾಥ್, ಸರೋದ್ ವಾದಕ
ಪ. ಮಲ್ಲೇಶ್, ಸಮಾಜವಾದಿ ಕಾರ್ಯಕರ್ತ
ಎಂ. ಸಿ. ಕೃಷ್ಣಪ್ರಸಾದ್, ನಟ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ
ಎಸ್. ರಾಮು, ನಟ, ರಂಗನಿರ್ದೇಶಕ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ.
ಸಂತೋಷಕುಮಾರ್ ಕುಸನೂರು, ನಟ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ
ನೂರ್ ಅಹಮದ್ ಶೇಖ್, ನಟ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ
ಮೈಮ್ ರಮೇಶ್, ನಟ, ರಂಗನಿರ್ದೇಶಕ, ಮೈಸೂರು ರಂಗಾಯಣದ ನಿವೃತ್ತ ಕಲಾವಿದ
ರಘುನಂದನ, ಕವಿ, ರಂಗನಿರ್ದೇಶಕ, ಮಾಜಿ ಅಭಿನಯ ಪ್ರಶಿಕ್ಷಕ, ರಂಗಾಯಣ, ಮೈಸೂರು
ಬಸವಲಿಂಗಯ್ಯ, ರಂಗನಿರ್ದೇಶಕ, ಮತ್ತು ಮತ್ತು ಮಾಜಿ ನಿರ್ದೇಶಕ, ರಂಗಾಯಣ, ಮೈಸೂರು
ಭಾಗೀರಥಿಬಾಯಿ ಕದಂ, ಬಹುಭಾಷಾ ನಟಿ, ರಂಗನಿರ್ದೇಶಕಿ, ಮತ್ತು ಮಾಜಿ ನಿರ್ದೇಶಕಿ, ರಂಗಾಯಣ, ಮೈಸೂರು
ವೆಂಕಟರಮಣ ಐತಾಳ, ರಂಗನಿರ್ದೇಶಕ, ನೀನಾಸಮ್ ರಂಗಶಿಕ್ಷಣ ಕೇಂದ್ರದ ನಿವೃತ್ತ ಪ್ರಾಂಶುಪಾಲ,
ಇಕ್ಬಾಲ್ ಅಹ್ಮದ್ , ರಂಗ ನಿರ್ದೇಶಕ ಹಾಗೂ ನಟ, ಮತ್ತು ಚಿತ್ರಕಾರ
ಎಸ್. ಸುರೇಂದ್ರನಾಥ್, ಕತೆಗಾರ, ನಾಟಕಕಾರ, ರಂಗನಿರ್ದೇಶಕ
ಐ. ಕೆ. ಬೊಳುವಾರು, ರಂಗನಿರ್ದೇಶಕ, ನಿರತನಿರಂತ, ಪುತ್ತೂರು
ಪ್ರಕಾಶ್ ಗರುಡ, ರಂಗನಿರ್ದೇಶಕ, ಮತ್ತು ಮಾಜಿ ನಿರ್ದೇಶಕ, ರಂಗಾಯಣ, ಧಾರವಾಡ
ರಜನಿ ಗರುಡ, ರಂಗನಿರ್ದೇಶಕಿ, ಗೊಂಬೆಮನೆ, ಧಾರವಾಡ
ವಸಂತ ಬನ್ನಾಡಿ, ರಂಗನಿರ್ದೇಶಕ, ಬರಹಗಾರ
ಬಿ. ಸುರೇಶ, ರಂಗಕರ್ಮಿ, ಚಲನಚಿತ್ರ ನಿರ್ಮಾಪಕ, ನಿರ್ದೇಶಕ
ಶಂಕರಯ್ಯ ಆರ್ ಘಂಟಿ, ರಂಗ ನಿರ್ದೇಶಕ, ಸಂಘಟಕ, ಕಲಬುರಗಿ
ಅಚ್ಯುತಕುಮಾರ್ ಎಚ್ ಕೆ, ನಟ
ಎಚ್ ಎಸ್ ರಾಘವೇಂದ್ರರಾವ್, ವಿಮರ್ಶಕ, ಅನುವಾದಕ
ಎನ್. ಮನು ಚಕ್ರವರ್ತಿ, ಸಾಹಿತ್ಯ ಮತ್ತು ಚಲನಚಿತ್ರ ವಿಮರ್ಶಕ
ಓ. ಎಲ್. ನಾಗಭೂಷಣಸ್ವಾಮಿ, ಅನುವಾದಕ, ವಿಮರ್ಶಕ
ಜಿ. ಪಿ. ಬಸವರಾಜು, ಕವಿ
ಜಿ. ರಾಜಶೇಖರ್, ಬರಹಗಾರ
ರಾಜೇಂದ್ರ ಚೆನ್ನಿ, ಲೇಖಕ
ಬೊಳುವಾರು ಮಹಮದ್ ಕುಂಞಿ, ಬರಹಗಾರ, ಹಾಗೂ ಗೌರವಾಧ್ಯಕ್ಷ, ಸಮುದಾಯ, ಕರ್ನಾಟಕ.
ಕೇಶವ ಶರ್ಮ, ಬರಹಗಾರ
ಡಿ. ಎಸ್. ನಾಗಭೂಷಣ, ಲೇಖಕ, ಮತ್ತು ಸಂಪಾದಕ, ಹೊಸ ಮನುಷ್ಯ
ಬಿ.ಟಿ.ಜಾಹ್ನವಿ, ಕತೆಗಾರ್ತಿ
ಅಮರೇಶ ನುಗಡೋಣಿ, ಕತೆಗಾರ
ಪಿ.ಮಹಮ್ಮದ್‌, ವ್ಯಂಗ್ಯಚಿತ್ರಕಾರ
ಆರ್‌.ವಿಜಯರಾಘವನ್‌, ಬರಹಗಾರ
ಟಿ. ಎಸ್. ವೇಣುಗೋಪಾಲ್, ಅರ್ಥಿಕ ಚಿಂತಕ-ಲೇಖಕ, ಪುಸ್ತಕ ಪ್ರಕಾಶಕ
ಡಾ.ವಿ.ಲಕ್ಷ್ಮೀನಾರಾಯಣ, ಸಾಮಾಜಿಕ ಕಾರ್ಯಕರ್ತ
ಇ.ರತಿರಾವ್‌, ಸಾಮಾಜಿಕ ಕಾರ್ಯಕರ್ತೆ
ನಾ. ದಿವಾಕರ, ಬರಹಗಾರ, ಸಾಮಾಜಿಕ ಕಾರ್ಯಕರ್ತ
ಪ್ರೊ. ಪಂಡಿತಾರಾಧ್ಯ, ಬರಹಗಾರ, ನಿವೃತ್ತ ಪ್ರಾಧ್ಯಾಪಕ
ರವಿಕುಮಾರ್ ಕಾಶಿ, ಸಮಕಾಲೀನ ಕಲಾವಿದ
ವಿ. ಎನ್. ಲಕ್ಷ್ಮೀನಾರಾಯಣ, ಬರಹಗಾರ, ನಿವೃತ್ತ ಪ್ರಾಧ್ಯಾಪಕ
ಶೈಲಜ, ಸಂಗೀತಜ್ಞೆ, ಲೇಖಕಿ, ಪುಸ್ತಕ ಪ್ರಕಾಶಕಿ
ಸಚ್ಚಿದಾನಂದ ಕೆ. ಜೆ., ವರ್ಣಚಿತ್ರ ಕಲಾವಿದ
ಸವಿತಾ ನಾಗಭೂಷಣ, ಕವಯಿತ್ರಿ
ಪ್ರಶಾಂತ್ ಪಂಡಿತ್, ಚಲನಚಿತ್ರ ಸಂಕಲನಕಾರ


ಇದನ್ನೂ ಓದಿರಿ: ರಂಗಾಯಣ ನಿರ್ದೇಶಕರ ವಜಾಕ್ಕೆ ಪ್ರಗತಿಪರ ಚಿಂತಕರ ಆಗ್ರಹ; ಬಹುರೂಪಿ ಬಹಿಷ್ಕರಿಸಲು ನಿರ್ಧಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...