Homeಕರ್ನಾಟಕರಾಜೇಶ್ವರಿ ತೇಜಸ್ವಿ ಸ್ಮರಣೆ; ಜೀವನ ಪ್ರೀತಿಯ ಹುಚ್ಚುತನವನ್ನು ಕಾಣಿಸಿದ ಲೇಖಕಿ

ರಾಜೇಶ್ವರಿ ತೇಜಸ್ವಿ ಸ್ಮರಣೆ; ಜೀವನ ಪ್ರೀತಿಯ ಹುಚ್ಚುತನವನ್ನು ಕಾಣಿಸಿದ ಲೇಖಕಿ

- Advertisement -
- Advertisement -

ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರು ತಮ್ಮ 84ನೇ ವಯಸ್ಸಿನಲ್ಲಿ ನಮ್ಮನ್ನಗಲಿದ್ದಾರೆ. ರಾಜೇಶ್ವರಿ ಅವರ ಹೆಸರನ್ನು ಜನ ಹೆಚ್ಚಾಗಿ ಕೇಳಿದ್ದೇ ತೇಜಸ್ವಿ ಅವರ ಅಗಲಿಕೆಯ ನಂತರ. ಬಹುಶಃ ಅವರ ಆಪ್ತ ವಲಯದವರನ್ನು ಹೊರತುಪಡಿಸಿ ಇನ್ನಾರ ಗಮನಕ್ಕೂ ಬಾರದಂತೆ ನೇಪಥ್ಯದಲ್ಲಿಯೇ ಬದುಕಿದ್ದವರು.

ತೇಜಸ್ವಿ ಅವರ ಹಠಾತ್ ನಿರ್ಗಮನದ ನಂತರ ಹಲವು ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ಕೆಲವೆಡೆ ತೇಜಸ್ವಿ ಅವರಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿಯೂ ರಾಜೇಶ್ವರಿ ಅವರು ಮಾತನಾಡಿದ್ದಿದೆ. ಅವರ ಎಲ್ಲ ಮಾತುಗಳು ಮತ್ತೆ ತೇಜಸ್ವಿ ಅವರನ್ನೇ ಸುತ್ತುವರೆದಿದ್ದವು. ಹೀಗಾಗಿ ರಾಜೇಶ್ವರಿ ಅವರ ಬಗ್ಗೆ ಬರೆಯುವುದೆಂದರೆ ಮತ್ತೆ ತೇಜಸ್ವಿ ಅವರ ಬಗ್ಗೆಯೇ ಮತ್ತೊಂದು ಮಗ್ಗುಲಿಂದ ಬರೆದಂತೆ.

ನಮ್ಮ ಮನೆಗೂ ಬಂದರು ಗಾಂಧೀಜಿ ಎಂಬ ಕೃತಿಯ ಮುನ್ನುಡಿಯಲ್ಲಿ ಎಲ್.ಸಿ. ಸುಮಿತ್ರ ಅವರು ಉಲ್ಲೇಖಿಸಿರುವ ಮಾತು. ’ನಿರುತ್ತರ’ಕ್ಕೆ ಭೇಟಿ ನೀಡಿದ್ದ ಮನೋರಖ್ಖಿತ ಭಂತೇಜಿ ಅವರು ರಾಜೇಶ್ವರಿ ಅವರಿಗೆ ಕೇಳಿದರಂತೆ; “ನೀವು ತತ್ವಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದೀರಲ್ಲ, ನಿಮಗೆ ತತ್ವಶಾಸ್ತ್ರದ ಯಾವ ಸ್ಕೂಲ್ ಒಪ್ಪಿಗೆ?” ಎಂದು. “ತೇಜಸ್ವಿ ಪರಿಚಯವಾದ ನಂತರ ಅವೆಲ್ಲ ಸ್ಕೂಲ್‌ಗಳನ್ನು ತ್ಯಜಿಸಿ ತೇಜಸ್ವಿ ತತ್ವವನ್ನು ಒಪ್ಪಿಕೊಂಡವಳು ನಾನು”- ಇದು ರಾಜೇಶ್ವರಿ ಅವರ ಉತ್ತರವಾಗಿತ್ತು.

ರಾಜೇಶ್ವರಿ ಅವರು ಹುಟ್ಟಿದ್ದು 1937ರಲ್ಲಿ. ಓದಿ ಬೆಳೆದದ್ದು ಬೆಂಗಳೂರು – ಮೈಸೂರುಗಳಲ್ಲಿ. ರಾಜೇಶ್ವರಿ ಅವರ ತಂದೆ ಸರ್ಕಾರಿ ಇಲಾಖೆಯಲ್ಲಿ ಉನ್ನತ ನೌಕರಿಯಲ್ಲಿದ್ದು ನಿವೃತ್ತಿಯಾಗಿದ್ದರು. ತಮ್ಮ ಎರಡನೇ ಕೃತಿ ’ನಮ್ಮ ಮನೆಗೂ ಬಂದರು ಗಾಂಧೀಜಿ’ಯಲ್ಲಿ ಅವರೇ ಸ್ಮರಿಸಿರುವಂತೆ, ಅವರ ತಂದೆಯವರು ಯಾವಾಗಲೂ ಹೇಳುತ್ತಿದ್ದರಂತೆ: “ಹೆಣ್ಣು ಮಕ್ಕಳು ಮದುವೆಯಾಗಬೇಕು ನಿಜ, ಆದರೆ ತಮ್ಮ ಕಾಲ ಮೇಲೆ ತಾವು ನಿಲ್ಲುವಂತಹ ವಿದ್ಯಾಭ್ಯಾಸ ಕೊಡಿಸುವುದು ತಂದೆತಾಯಿಯರ ಆದ್ಯ ಕರ್ತವ್ಯ” ಎಂದು. ಹಾಗೆಯೇ ಈಗ್ಗೆ ಏಳೆಂಟು ದಶಕಗಳ ಹಿಂದೆಯೇ ತಮ್ಮ ಮಗಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದರು.

ರಾಜೇಶ್ವರಿ ಅವರು ತಮ್ಮ ಬದುಕಿನ ಕೊನೆಯ ಹತ್ತು ವರ್ಷಗಳನ್ನು ಹೊರತುಪಡಿಸಿ ಎಂದೂ ಹೆಚ್ಚು ಬರೆದವರಲ್ಲ. ತೇಜಸ್ವಿ ಅವರು ಆತ್ಮಕತೆಯೊಂದನ್ನು ಬರೆದಿರುತ್ತಿದ್ದರೆ ಬಹುಶಃ ಅವರಿಬ್ಬರ ಬದುಕಿನಲ್ಲಿ ಬರೆಯದೇ ಉಳಿಯುವಂಥದ್ದೇನೂ ಇರುತ್ತಿರಲಿಲ್ಲವೋ ಏನೋ ಅನ್ನಿಸುವುದೂ ಇದೆ. ತೇಜಸ್ವಿ ಎಂಬ ವರ್ಚಸ್ವಿ ಲೇಖಕನ ಸಂಗಾತಿಯಾಗಿ ತುಂಬು ಜೀವನ ಕಳೆದಿದ್ದ ಅವರ ಬದುಕಿನ ಸಮೃದ್ಧ ಅನುಭವಗಳು ಎಲ್ಲಿಯೂ ದಾಖಲಾಗಿರಲಿಲ್ಲ. ಯಾರೋ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈಗಿರುವ ಸಾಹಿತ್ಯದ ಭಾರಕ್ಕೆ ನಾನೊಂದಷ್ಟು ಹೊರೆಯೇಕೆ ಸೇರಿಸಲಿ ಎಂದಿದ್ದರಂತೆ.

ತೇಜಸ್ವಿ ಅವರ ಬಹುತೇಕ ಬರೆಹಗಳನ್ನು ಓದಿದವರಿಗೆ ಅವರ ಲೌಖಿಕ ಬದುಕಿನ ಎಲ್ಲ ಕೋನಗಳೂ ಅಲ್ಲಿ ಢಾಳಾಗಿ ದಾಖಲಾಗಿಬಿಟ್ಟಿವೆ ಎನಿಸಿರುತ್ತದೆ. ಇದಕ್ಕೆ ಕಾರಣ ಅವರ ಬಹುತೇಕ ಕೃತಿಗಳಲ್ಲಿ ಅವರೂ ಒಂದು ಪಾತ್ರವೇ ಆಗಿರುತ್ತಿದ್ದದು. ವಿಷಯ ಅಷ್ಟು ಸರಳವಿಲ್ಲವೆನಿಸುತ್ತದೆ. ನಾವೊಮ್ಮೆ ಅವರ ಮನೆಗೆ ಹೋದಾಗ ಶೋಕೇಸಿನಲ್ಲಿದ್ದ ಹಳೇ ಲಾಟೀನು ಕಂಡು, ಕೇಳಿದ್ದೆ. ಮೇಡಂ ಇದೇ ಲಾಟೀನ ನೀವು ಕರೆಂಟಿಲ್ಲದ ಮನೆಯಲ್ಲಿ ಇದ್ದಾಗ ಬಳಸ್ತಿದ್ದದ್ದು ಎಂದು. ಅವರು ಹೌದು ಎಂದು ನೆನಪಿನ ಲೋಕಕ್ಕೆ ಜಾರಿದ್ದರು. (ಇದು ತೇಜಸ್ವಿ ಬರೆದಿದ್ದಲ್ಲ, ರಾಜೇಶ್ವರಿ ಅವರು ದಾಖಲಿಸಿರೋದು)

1966ರಲ್ಲಿ ಕೆಲವೇ ಬಂಧು ಮತ್ತು ಸ್ನೇಹಿತರ ಸಮಕ್ಷಮದಲ್ಲಿ ಕೈಹಿಡಿದಿದ್ದ ರಾಜೇಶ್ವರಿ ಮತ್ತು ತೇಜಸ್ವಿ ಅವರು ಚಿತ್ರಕೂಟ ಎಂಬ ಹೆಸರಿನ ತೋಟದ ಮನೆಯಲ್ಲಿ ಹತ್ತಿರಹತ್ತಿರ ದಶಕದ ಕಾಲ ವಿದ್ಯುತ್ ಸಂಪರ್ಕವಿಲ್ಲದ ಮನೆಯಲ್ಲಿ ಲಾಟೀನಿನ ಆಸರೆಯಲ್ಲಿ ಬದುಕಿದ್ದರು. ಆ ಅವಧಿಯಲ್ಲಿ ತೇಜಸ್ವಿ ಎರಡು ಕಾದಂಬರಿ ಮತ್ತು ಕಥಾಸಂಕಲನಗಳನ್ನು ಪ್ರಕಟಿಸಿದ್ದನ್ನೂ ಹೇಳಿದರು. ಪತಿ-ಪತ್ನಿ ಇಬ್ಬರೂ ಮೈಸೂರು- ಬೆಂಗಳೂರುಗಳೆಂಬ ನಗರಗಳಲ್ಲಿ ಹುಟ್ಟಿ ಬೆಳೆದು ಬದುಕಿ ಹಾಗೆ ಕಾಡ ನಡುವೆ ಕರೆಂಟಿಲ್ಲದ ಸ್ಥಳದಲ್ಲಿ ಬದುಕುವುದು ಹುಡುಗಾಟಿಕೆಯ ಮಾತಾಗಿರಲಿಲ್ಲ; ಜೀವನಪ್ರೀತಿಯ ಹುಚ್ಚುತನ.

ತೇಜಸ್ವಿ ಮನೆಗೆ ಬೀಗ ಹಾಕುವುದರ ವಿರುದ್ಧವಿದ್ದರಂತೆ. ಯಾರು ಬಂದು ಏನು ತೊಗೊಂಡು ಹೋಗ್ತಾರೆ ಬಿಡಮ್ಮ ಅನ್ನೋರಂತೆ. ಸಣ್ಣ ಪುಟ್ಟ ವ್ಯಾಪಾರ ಮಾಡೋವ್ರ ಬಳಿ ಚೌಕಾಸಿ ಮಾಡಿದರೆ ಅವ್ರೂ ಚೂರು ಎಂಪವರ್ ಆಗ್ಲಿ ಚೌಕಾಸಿ ಬಿಟ್ಟು ಕೊಟ್ಟು ಬಾ ಅನ್ನೋವ್ರಂತೆ. ಇನ್ನು ಪ್ರಯೋಗಶೀಲತೆಯಲ್ಲಿ ಇಬ್ಬರ ಈಡು-ಜೋಡು ಹೊಂದಿತ್ತು ಎಂದು ಕಾಣುತ್ತದೆ. ಭೂತನಕಾಡಿನಲ್ಲಿದ್ದಾಗ ಇಬ್ಬರೂ ಯಾವುದೋ ಕಾಡುಮರದ ಹಣ್ಣು ತಿಂದು ಹೊಟ್ಟೆ ನುಲಿತ ತಾಳಲಾರದೆ ಡಾಕ್ಟರ ಬಳಿ ಹೋದಾಗ ಅವರು ಹಾಗೆ ಸಿಕ್ಕ ಸಿಕ್ಕದ್ದೆಲ್ಲಾ ತಿನ್ನಬೇಡಿರಂದು ಬೈದು ಕಳಿಸಿದ್ದರಂತೆ.

ತೇಜಸ್ವಿ ಅವರ ನೂರಾರು ರೀತಿಯ ಸಾಹಸಗಳು ಸುಮ್ಮನೆ ಜರುಗಿದವಲ್ಲ, ಅವೆಲ್ಲಕ್ಕೂ ರಾಜೇಶ್ವರಿ ಅವರ ಒತ್ತಾಸೆ ಇದ್ದೇ ಇದೆ. ಅದು ಲಹರಿ ಪತ್ರಿಕೆಯಿಂದ ಹಿಡಿದು ಅವರ ಫೋಟೋಗ್ರಫಿಯವರೆಗೆ. ನನ್ನ ತೇಜಸ್ವಿ ಕೃತಿಯಲ್ಲಿ ಒಂದು ತಮಾಷೆಯ ಪ್ರಸಂಗ ದಾಖಲಾಗಿದೆ. ತೇಜಸ್ವಿ ಅವರು ಪಕ್ಷಿಗಳ ಫೋಟೋ ಕ್ಲಿಕ್ಕಿಸಲು ಅವುಗಳ ಅರಿವಿಗೆ ಬಾರದಂತ ’ಮರೆ’ಯೊಂದನ್ನು ಮಾಡಿಕೊಂಡಿದ್ದರಂತೆ. (ಹಾಗೆಂದರೆ ಪಕ್ಷಿಗಳಿಗೆ ತಮ್ಮ ಆವಾಸದ ಬಳಿಯೇ ಒಂದು ಕೃತಕ ರಚನೆ ಆಗಿದೆ ಎಂದು ತಿಳಿಯದಂತೆ ಏರ್ಪಡಿಸಿಕೊಳ್ಳುವ ವ್ಯವಸ್ಥೆ). ಪಕ್ಷಿಗಳು ಅತ್ಯಂತ ಚಂಚಲಚಿತ್ತದ ಮತ್ತು ಅತಿಜಾಗರೂಕ ಜೀವಿಗಳು. ಒಂದು ಸಣ್ಣ ಎಲೆಯ ಅಲುಗುವಿಕೆಯೂ ಅವು ಪುರ್ರನೆ ಹಾರಿಹೋಗುವಂತೆ ಮಾಡಿಬಿಡುತ್ತವೆ. ಒಮ್ಮೆ ತೇಜಸ್ವಿ ಹಲವು ಗಂಟೆಗಳ ಕಾಲ ಅಂಥ ಮರೆಯೊಂದರಲ್ಲಿ ಕೂತು ಕ್ಯಾಮರಾಗೆ ಕಣ್ಣು ಕೀಲಿಸಿ ಇನ್ನೇನು ಕ್ಲಿಕ್ಕಿಸಬೇಕು ಎಂದುಕೊಂಡಿರುವಾಗ ಅಲ್ಲಿಯೇ ಪಕ್ಕದಲ್ಲಿದ್ದ ಕರಿಬೇವಿನ ಗಿಡದ ಬಳಿಗೆ ಹಾಡು ಗುನುಗಿಕೊಂಡು ಬಂದ ರಾಜೇಶ್ವರಿ ಒಗ್ಗರಣೆಗೆ ಸೊಪ್ಪು ಕುಯ್ದುಕೊಂಡು ಹೋಗುವ ಹೊತ್ತಿಗೆ ಹಕ್ಕಿ ಹೆದರಿ ಹಾರಿ ಹೋಗಿತ್ತಂತೆ. ತೇಜಸ್ವಿ ಮೈಮುರಿಯುತ್ತ ಮರೆಯಿಂದ ಹೊರಬಂದಾಗ ನೆನಪಾಯ್ತಂತೆ ಅವರು ಅಲ್ಲಿ ಗಂಟೆಗಳಿಂದ ಕಾಯುತ್ತಿದ್ದ ಸಂಗತಿ!

ಇನ್ನೊಮ್ಮೆ, ರಾಜೇಶ್ವರಿ ಬೆಂಗಳೂರಿನಲ್ಲಿದ್ದಾಗ ತೇಜಸ್ವಿ ಬರೆದ ಪತ್ರ ಸಕಾಲಕ್ಕೆ ತಲುಪದೆ ಎದುರಾದ ಫಜೀತಿ ಬಗ್ಗೆ ವಿಸ್ತಾರವಾಗಿ ಬರೆದುಕೊಂಡಿದ್ದಾರೆ. ಪತ್ರಗಳೆಂದಾಗ ನೆನಪಾಗುವ ಸಂಗತಿ. ರಾಜೇಶ್ವರಿ-ತೇಜಸ್ವಿ ಅವರ ನಡುವಿನ ಹತ್ತಾರು ಪತ್ರಗಳು ನನ್ನ ತೇಜಸ್ವಿ ಕೃತಿಯಲ್ಲಿ ಅಚ್ಚಾಗಿವೆ. ಅವೆಲ್ಲ ಪತ್ರಗಳ ಕಟ್ಟು ಒಮ್ಮೆ ಸಿಕ್ಕಾಗ ಇವುಗಳನ್ನು ತಾವು ಹೊಸ ಮನೆ ಕಟ್ಟುವಾಗ ಅದರ ಪಾಯದ ಮಣ್ಣಿಗೆ ಹಾಕಿಬಿಡೋಣೆಂದು ಇಬ್ಬರೂ ತೀರ್ಮಾನಿಸಿದ್ದರಂತೆ. ಆದರೆ ಮನೆ ಕಟ್ಟುವ ಕಾಲಕ್ಕೆ ಅವು ಕೈಗೆ ಸಿಗದ ಕಾರಣ ಉಳಿದವಂತೆ. ಈಗ ನನ್ನ ತೇಜಸ್ವಿ ಮಾತ್ರವಲ್ಲದೆ ತೇಜಸ್ವಿ ಪತ್ರಗಳು ಎಂಬ ಪತ್ರ ಸಂಕಲನದಲ್ಲಿಯೂ ನೂರಾರು ಪತ್ರಗಳು ದಾಖಲಾಗಿವೆ. ನರೇಂದ್ರ ರೈ ದೇರ್ಲ ಆ ಪತ್ರಗಳ ಸಂಯೋಜನೆಯನ್ನು ಮಾಡಿದ್ದಾರೆ. ಈ ಸಂಕಲನದಲ್ಲಿ ಕೂಡ ತೇಜಸ್ವಿ ಅವರಿಗೆ ರಾಜೇಶ್ವರಿ ಅವರು ಬರೆದ ಹಲವು ಪತ್ರಗಳಿವೆ. ಮದುವೆಯಾದ ಇಪ್ಪತ್ತು ವರ್ಷಗಳ ನಂತರ ಗಂಡ ಹೆಂಡಿರು ಪತ್ರದಲ್ಲಿ ಪರಸ್ಪರ ಕಾಲೆಳೆಯುವಂತ ಮಾತು ಬರೆದುಕೊಂಡುದನ್ನು ಓದುವುದೇ ಮಜಾ.

ರಾಜೇಶ್ವರಿ: ಈಶ (ಈಶಾನ್ಯೆ) ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿರುವಳು. ಇನ್ನು ಅವಳ Englishನ ಬಗ್ಗೆ ನಕ್ಕು ಸಾಯಬೇಕು. ನಿಮ್ಮ ಮಗಳೇ ಅವಳು. ನೀವು ನನಗೆ ಬರೆದಿರುವ ಅಡ್ರೆಸ್ಸಿನಲ್ಲಿ ಎರಡು ತಪ್ಪಿವೆ!

ತೇಜಸ್ವಿ: (ಮಾರುತ್ತರದಲ್ಲಿ) ನಿನ್ನ ಕನ್ನಡ ಅಕ್ಷರಗಳು ಶೋಚನೀಯ ಸ್ಥಿತಿ ತಲುಪುತ್ತಿವೆ. ಯಾಕೆ ಒಂಚೂರು ಗಮನವಿಟ್ಟು ಬರೆಯಬಾರದು.

ತೇಜಸ್ವಿ ಅವರು ಬರೆಯದೇ ಉಳಿಸಿದ ಆತ್ಮಕತೆಯ ಕೊರತೆಯನ್ನು ತಮ್ಮದೇ ರೀತಿಯಲ್ಲಿ ತುಂಬಿಸಿದವರು ರಾಜೇಶ್ವರಿ ತೇಜಸ್ವಿ. ರಾಜೇಶ್ವರಿ ಅವರ ನೆನಪಿನ ಶಕ್ತಿ ಎಷ್ಟು ಶಕ್ತವಾದ್ದು ಎಂಬುದು ಅವರ ಬರೆಹ ಮತ್ತು ಮಾತುಗಳನ್ನು ಗಮನಿಸಿದವರಿಗೆ ಚೆನ್ನಾಗಿ ಅರ್ಥವಾಗಿರುತ್ತದೆ. ರಾಜೇಶ್ವರಿ ಆನರ್ಸ್ ಓದುವಾಗ ಯು.ಆರ್. ಅನಂತಮೂರ್ತಿ ಅವರಿಗೆ ಮೇಷ್ಟ್ರಂತೆ. ಆಗವರು ಹೇಳಿದ್ದ T.S. Eliotನ ಪದ್ಯವೊಂದನ್ನು ಯಥಾವತ್ತಾಗಿ ನೆನಪಿನ ಶಕ್ತಿಯಿಂದ ದಾಖಲಿಸಿದ್ದಾರೆ.

ಮುಂದೆ ಅದರ ಅರ್ಥವನ್ನು ತೇಜಸ್ವಿ ಅವರಿಂದ ಮನಗಾಣಿಸಿಕೊಂಡೆ ಎಂದಿದ್ದಾರೆ.

ತೇಜಸ್ವಿ ಅವರ ಬರಹದಲ್ಲಿ ಎಂದೂ ಇಣುಕದೇ ಇರುವ ಅವರ ಮನೆಕಟ್ಟುವಾಗಿನ ಪ್ರಯೋಗ, ಫೋಟೋ ಪ್ರಿಂಟ್ ಹಾಕಲು, ಪಕ್ಷಿಗಳ ಫೋಟೋ ಕ್ಲಿಕ್ಕಿಸಲು ಪಡುತ್ತಿದ್ದ ಪಡಿಪಾಟಲು, ಮನೆಗೆ ಗುಡ್ಡದಿಂದ ಶುದ್ಧ ನೀರು ಬರುವಂತೆ ಏರ್ಪಡಿಸಿಕೊಂಡಿದ್ದ ತಮ್ಮದೇ ಆದ ತಾಂತ್ರಿಕ ವ್ಯವಸ್ಥೆ, ತಮ್ಮ ಸ್ಕೂಟರು, ಜೀಪು ಇತ್ಯಾದಿಗಳನ್ನು ತಾವೇ ರಿಪೇರಿ ಮಾಡಿಕೊಳ್ಳುವ ಅವರ ಪ್ರಯೋಗಶೀಲ ಗುಣ, ಗೆಳೆಯರ ಜೊತೆ ಸುತ್ತಾಡಿ ಬೇಟೆ ಮಾಂಸ ತಂದರೆ ತಾವೇ ತಯಾರು ಮಾಡಿಕೊಳ್ಳುವ ಪಾಕ ಪ್ರಾವೀಣ್ಯ ಎಲ್ಲವೂ ಸಾದ್ಯಂತವಾಗಿ ದಾಖಲಾಗಿದ್ದು ರಾಜೇಶ್ವರಿ ಅವರ ’ನನ್ನ ತೇಜಸ್ವಿ’ ಕೃತಿಯ ಮೂಲಕವೆ.

ತಮ್ಮ ಎಪ್ಪತ್ತನಾಲ್ಕನೇ ವಯಸ್ಸಿನಲ್ಲಿ ಲೇಖಕಿಯಾಗಿ ಇಷ್ಟು ಸಮರ್ಥವಾಗಿ ತಮ್ಮ ಚೊಚ್ಚಲ ಕೃತಿಯಲ್ಲಿಯೇ ಇಂಥ ಪ್ರಬುದ್ಧತೆ ಸಾಧಿಸಿದ್ದ ರಾಜೇಶ್ವರಿ ಅವರು ಕೆಲ ವರ್ಷ ಮುಂಚೆಯೇ ಬರೆಹ ಆರಂಭಿಸಿದ್ದರೆ ಇನ್ನೊಂದಷ್ಟು ಬರೆಯುತ್ತಿದ್ದರೇನೊ ಎಂದುಕೊಳ್ಳುವ ಊಹೆ, ತೇಜಸ್ವಿ ಅವರ ಲೋಕದಲ್ಲಿ ಕಳೆದೇ ಹೋಗುವಷ್ಟು ತನ್ಮಯತೆಯ ಕಾರಣಕ್ಕೆ ಸ್ವತಃ ಲೇಖಕಿಯೇ ಹಿಂದೆ ಸರಿದುಬಿಡುವರಲ್ಲವೆ ಎಂಬ ಸಂದೇಹದ ಜೊತೆಗೇ ಅಗಲಿದ ಅವರ ತುಂಬು ವ್ಯಕ್ತಿತ್ವಕ್ಕೆ ವಿದಾಯ ಹೇಳಬಹುದೇನೊ.

ರೋಹಿತ್ ಅಗಸರಹಳ್ಳಿ

ರೋಹಿತ್ ಅಗಸರಹಳ್ಳಿ
ಕನ್ನಡ ಉಪನ್ಯಾಸಕರು, ಸಿನೆಮಾ ಪ್ರೇಮಿ, ಅಗಸರಹಳ್ಳಿ, ಮಂಡ್ಯ ಜಿಲ್ಲೆ.


ಇದನ್ನೂ ಓದಿ: ತೇಜಸ್ವಿ ಕಂಡ ನಾಯಿ ಲೋಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...