Homeಕರ್ನಾಟಕಕಾರವಾರದ ಕಾಳಿ ನದಿ ದಂಡೆ ಮತ್ತು ಕಡಲ ತೀರದಲ್ಲಿ ಹಿಮಾಲಯದ ವಲಸೆ ಹಕ್ಕಿಗಳ ಹಾಡು

ಕಾರವಾರದ ಕಾಳಿ ನದಿ ದಂಡೆ ಮತ್ತು ಕಡಲ ತೀರದಲ್ಲಿ ಹಿಮಾಲಯದ ವಲಸೆ ಹಕ್ಕಿಗಳ ಹಾಡು

- Advertisement -
- Advertisement -

ಚಳಿಗಾಲದಲ್ಲಿ ವಲಸೆ ಬರುವ ದೂರದ ಹಿಮಾಲಯ ಮತ್ತು ಹಲವು ಕಡೆಯ ಹಕ್ಕಿಗಳ ಹಾಡು ಕಾರವಾರದ ಕಾಳಿ ನದಿಯ ಇಕ್ಕೆಲ ಮತ್ತು ಅರಬ್ಭೀ ಸಮುದ್ರದ ದಂಡೆಯಲ್ಲಿ ಕೇಳಿ ಬರಲಾರಂಭಿಸಿದ್ದು ಪಕ್ಷಿ ಪ್ರಿಯರನ್ನು ಖುಷಿ ಪಡಿಸುತ್ತಿದೆ. ನದಿಯ ಎರಡೂ ಕಡೆಯ ಜವುಗು, ಹುಲ್ಲುಗಾವಲು, ಅಳಿವೆ ಹಾಗೂ ಕಡಲಂಚಿಗೆ ಉತ್ತರ ಗೋಲಾರ್ಧದ ತುತ್ತತುದಿಯ ಹಿಮಚ್ಛಾದಿತ ಪ್ರದೇಶದಿಂದ ವಲಸೆ ಬಂದಿರುವ ವಿವಿಧ ಬಗೆಯ ಹಕ್ಕಿಗಳು ಮತ್ತವುಗಳ ಚಲನವಲನಗಳನ್ನು ಕೈಗಾ ಬರ್ಡರ್ಸ್ ತಂಡ ಸೆರೆಹಿಡಿದಿದೆ.

ಕೋವಿಡ್ ಹಾವಳಿಯಿಂದಾಗಿ ಕಳೆದೆರಡು ವರ್ಷದಿಂದ ಕ್ಷೇತ್ರ ಕಾರ್ಯ ಮಾಡಲಾಗದ ಬೇಸರದಲ್ಲಿದ್ದ ಕೈಗಾ ಬರ್ಡರ್ಸ್ ತಂಡವೀಗ ವಲಸೆ ಹಕ್ಕಿಗಳ ಕಲರವ, ಹಾರಾಟ, ಸಂತಾನೋತ್ಪತ್ತಿಯೇ ಮುಂತಾದ ಚಟುವಟಿಕೆಗಳ ದಾಖಲೆಯಲ್ಲಿ ತೊಡಗಿದೆ. ಶಕ್ತಿ ಮೂಲಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳ ಅವೈಜ್ಞಾನಿಕ ಬಳಕೆಯಿಂದ ಭೂಮಂಡಲದ ತಾಪಮಾನ ಏರುಗತಿಯಲ್ಲಿರುವ ಈ ವಿಷಮ ಕಾಲಘಟ್ಟದಲ್ಲಿ ಋತು ಮಾನಗಳ ಬದಲಾವಣೆಯ ಬಹುಮೂಲ್ಯವಾದ ಸೂಚಕಗಳಾದ ಪಕ್ಷಿಗಳ ಸಂರಕ್ಷಣೆಯ ಅರಿವು ಜನರಲ್ಲಿ ಮೂಡಬೇಕಾದ ಅನಿವಾರ್ಯತೆ ಎದುರಾಗಿದೆಯೆಂದು ತಂಡದ ಹಿರಿಯ ಪಕ್ಷಿ ತಜ್ಞ ಜಲೀಲ್ ಬಾರ್ಗಿರ್ ಹೇಳುತ್ತಾರೆ.

ಉತ್ತರ ಯುರೋಪ್, ಸೈಬಿರಿಯಾ, ಫಿನ್ಲ್ಯಾಂಡ್, ಮೆಡಿಟೆರಿಯನ್ ಸಮುದ್ರ, ಲಡಾಕ್, ಟಿಬೆಟ್‌ಗಳಿಂದ ಸಾವಿರಾರು ಕಿಮೀ ದೂರದ ಕಾರವಾರ ನದಿ-ಕಡಲು ದಂಡೆಗೆ ಹಾರಿ ಬಂದಿರುವ ಪಕ್ಷಿಗಳ ಅಪರೂಪದ ಚಿತ್ರ ಕೈಗಾ ಬರ್ಡರ್ಸ್ ಬಳಗ ತೆಗೆದಿದೆ. ಕಿತ್ತಳೆ ಕಾಲಿನ ಕಡಲಹಕ್ಕಿ [RUDDY TURNSTONE], ನೀಲಕತ್ತಿನ ಉಲ್ಲಂಕಿ [Ruff], ಕಡಲ ಉಲ್ಲಂಕಿ [Great Knot], ಬೂದು ಬೆನ್ನಿನ ಕಡಲಕ್ಕಿ [Heuglin’s Gull], ಕೆಂಪು ಕಾಲಿನ ಚಾಣ [Amur Falcon], ಪಟ್ಟೆರೆಕ್ಕೆಯ ಸೆಳೆವ [Montagu’s Harrier], ಪಟ್ಟೆತಲೆ ಹೆಬ್ಬಾತು [Bar Headed Geese] ಮತ್ತು ಬಿಳಿಕತ್ತಿನ ಉಲಿಯಕ್ಕಿ [Lesser Whltethroat] ಕಾರವಾರದ ಸುತ್ತಮುತ್ತ ಕಂಡುಬಂದಿವೆ. ಉತ್ತರ ಗೋಲಾರ್ಧದ ಹಿಮಾವೃತ ಪ್ರದೇಶಗಳ ಅತ್ಯುಗ್ರ ಛಳಿಗಾಲ ತಾಳಲಾಗದೆ ಸ್ವಲ್ಪ ಬೆಚ್ಚಗಿರವ ದಕ್ಷಿಣದತ್ತ ಹಕ್ಕಿಗಳು ವಲಸೆ ಬರುವುದು ಸಾಮಾನ್ಯ.

ಹಿಮ ಪ್ರದೇಶದ ಹಕ್ಕಿಗಳ ಜತೆ ಸ್ಥಳೀಯ ಅಳಿವಿನಂಚಿನ ವಲಸಿಗ ಬಿಳಿ ರಣ ಹದ್ದು [Egyptian Vulture] ಹಾಗೂ ಹಿಮಾಲಯದ ದೊಡ್ಡ ರಣ ಹದ್ದು [Himalayan Griffon Vulture] ಸಹ ಕಂಡುಬಂದಿದೆಯೆಂದು ಕೈಗಾ ಬರ್ಡ್‌ರ್ಸ್ ಬಳಗದವರು ಹೇಳುತ್ತಾರೆ. ಬಿಳಿರಣಹದ್ದು ತರುಣಾವಸ್ಥೆಯಲ್ಲಿ ಕಂಡುಬಂದಿರುವುದು ಅವುಗಳ ಸಂತಾನ ಹತ್ತಿರದಲ್ಲೆ ಆಗಿರುವುದನ್ನು ದೃಢಪಡಿಸುವಂತಿದೆ. ಸತ್ತ ಜಾನುವಾರುಗಳ ಕಳೆಬರದ [ಆಹಾರದ] ಕೊರತೆ, ಪಶುವೈದ್ಯಕೀಯದಲ್ಲಿ ನಿಷೇದಿತ ಔಷಧಿಗಳ ಮಿತಿಮಿಮೀರಿದ ಬಳಕೆ ಮತ್ತು ವಾಸಸ್ಥಳಗಳ ಒತ್ತುವರಿಯಿಂದ ಅಳಿವಿನಂಚಿನಲ್ಲಿರುವ ಬಿಳಿ ರಣಹದ್ದು, ಹಿಮಾಲಯದ ಬೃಹತ್ ಹದ್ದು ಮತ್ತು ಕಡಲ ಉಲ್ಲಂಕಿ ಪ್ರಬೇಧಗಳು ಕಾರವಾರದ ಆಚೀಚೆ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.

ಅಪಾಯದಂಚಿನಲ್ಲಿರುವ ರಣ ಹದ್ದುಗಳ ಸಂರಕ್ಷಣೆಗೆ ಜಿಲ್ಲಾಡಳಿತ, ಅರಣ್ಯ ಇಲಾಖೆ ಮತ್ತು ಪಶುಸಂದೋಪನಾ ಇಲಾಖೆಗಳು ಒಂದಾಗಿ ಪ್ರಯತ್ನ ನಡೆಸಬೇಕೆಂದು ಕೈಗಾ ಬರ್ಡರ್ಸ್ ತಂಡದ ಸಂಯೋಜಕ ಮೋಹನದಾಸ್ ಸರ್ಕಾರಕ್ಕೆ ಪತ್ರ ಬರೆದು ಮನವಿಮಾಡಿದ್ದಾರೆ.


ಇದನ್ನೂ ಓದಿ: ಆಹಾರ ಶ್ರೇಷ್ಠತೆಯ ರಾಜಕೀಯದ ವಿವಿಧ ಮುಖಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....