Homeಕರ್ನಾಟಕಕಾರವಾರದ ಕಾಳಿ ನದಿ ದಂಡೆ ಮತ್ತು ಕಡಲ ತೀರದಲ್ಲಿ ಹಿಮಾಲಯದ ವಲಸೆ ಹಕ್ಕಿಗಳ ಹಾಡು

ಕಾರವಾರದ ಕಾಳಿ ನದಿ ದಂಡೆ ಮತ್ತು ಕಡಲ ತೀರದಲ್ಲಿ ಹಿಮಾಲಯದ ವಲಸೆ ಹಕ್ಕಿಗಳ ಹಾಡು

- Advertisement -
- Advertisement -

ಚಳಿಗಾಲದಲ್ಲಿ ವಲಸೆ ಬರುವ ದೂರದ ಹಿಮಾಲಯ ಮತ್ತು ಹಲವು ಕಡೆಯ ಹಕ್ಕಿಗಳ ಹಾಡು ಕಾರವಾರದ ಕಾಳಿ ನದಿಯ ಇಕ್ಕೆಲ ಮತ್ತು ಅರಬ್ಭೀ ಸಮುದ್ರದ ದಂಡೆಯಲ್ಲಿ ಕೇಳಿ ಬರಲಾರಂಭಿಸಿದ್ದು ಪಕ್ಷಿ ಪ್ರಿಯರನ್ನು ಖುಷಿ ಪಡಿಸುತ್ತಿದೆ. ನದಿಯ ಎರಡೂ ಕಡೆಯ ಜವುಗು, ಹುಲ್ಲುಗಾವಲು, ಅಳಿವೆ ಹಾಗೂ ಕಡಲಂಚಿಗೆ ಉತ್ತರ ಗೋಲಾರ್ಧದ ತುತ್ತತುದಿಯ ಹಿಮಚ್ಛಾದಿತ ಪ್ರದೇಶದಿಂದ ವಲಸೆ ಬಂದಿರುವ ವಿವಿಧ ಬಗೆಯ ಹಕ್ಕಿಗಳು ಮತ್ತವುಗಳ ಚಲನವಲನಗಳನ್ನು ಕೈಗಾ ಬರ್ಡರ್ಸ್ ತಂಡ ಸೆರೆಹಿಡಿದಿದೆ.

ಕೋವಿಡ್ ಹಾವಳಿಯಿಂದಾಗಿ ಕಳೆದೆರಡು ವರ್ಷದಿಂದ ಕ್ಷೇತ್ರ ಕಾರ್ಯ ಮಾಡಲಾಗದ ಬೇಸರದಲ್ಲಿದ್ದ ಕೈಗಾ ಬರ್ಡರ್ಸ್ ತಂಡವೀಗ ವಲಸೆ ಹಕ್ಕಿಗಳ ಕಲರವ, ಹಾರಾಟ, ಸಂತಾನೋತ್ಪತ್ತಿಯೇ ಮುಂತಾದ ಚಟುವಟಿಕೆಗಳ ದಾಖಲೆಯಲ್ಲಿ ತೊಡಗಿದೆ. ಶಕ್ತಿ ಮೂಲಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳ ಅವೈಜ್ಞಾನಿಕ ಬಳಕೆಯಿಂದ ಭೂಮಂಡಲದ ತಾಪಮಾನ ಏರುಗತಿಯಲ್ಲಿರುವ ಈ ವಿಷಮ ಕಾಲಘಟ್ಟದಲ್ಲಿ ಋತು ಮಾನಗಳ ಬದಲಾವಣೆಯ ಬಹುಮೂಲ್ಯವಾದ ಸೂಚಕಗಳಾದ ಪಕ್ಷಿಗಳ ಸಂರಕ್ಷಣೆಯ ಅರಿವು ಜನರಲ್ಲಿ ಮೂಡಬೇಕಾದ ಅನಿವಾರ್ಯತೆ ಎದುರಾಗಿದೆಯೆಂದು ತಂಡದ ಹಿರಿಯ ಪಕ್ಷಿ ತಜ್ಞ ಜಲೀಲ್ ಬಾರ್ಗಿರ್ ಹೇಳುತ್ತಾರೆ.

ಉತ್ತರ ಯುರೋಪ್, ಸೈಬಿರಿಯಾ, ಫಿನ್ಲ್ಯಾಂಡ್, ಮೆಡಿಟೆರಿಯನ್ ಸಮುದ್ರ, ಲಡಾಕ್, ಟಿಬೆಟ್‌ಗಳಿಂದ ಸಾವಿರಾರು ಕಿಮೀ ದೂರದ ಕಾರವಾರ ನದಿ-ಕಡಲು ದಂಡೆಗೆ ಹಾರಿ ಬಂದಿರುವ ಪಕ್ಷಿಗಳ ಅಪರೂಪದ ಚಿತ್ರ ಕೈಗಾ ಬರ್ಡರ್ಸ್ ಬಳಗ ತೆಗೆದಿದೆ. ಕಿತ್ತಳೆ ಕಾಲಿನ ಕಡಲಹಕ್ಕಿ [RUDDY TURNSTONE], ನೀಲಕತ್ತಿನ ಉಲ್ಲಂಕಿ [Ruff], ಕಡಲ ಉಲ್ಲಂಕಿ [Great Knot], ಬೂದು ಬೆನ್ನಿನ ಕಡಲಕ್ಕಿ [Heuglin’s Gull], ಕೆಂಪು ಕಾಲಿನ ಚಾಣ [Amur Falcon], ಪಟ್ಟೆರೆಕ್ಕೆಯ ಸೆಳೆವ [Montagu’s Harrier], ಪಟ್ಟೆತಲೆ ಹೆಬ್ಬಾತು [Bar Headed Geese] ಮತ್ತು ಬಿಳಿಕತ್ತಿನ ಉಲಿಯಕ್ಕಿ [Lesser Whltethroat] ಕಾರವಾರದ ಸುತ್ತಮುತ್ತ ಕಂಡುಬಂದಿವೆ. ಉತ್ತರ ಗೋಲಾರ್ಧದ ಹಿಮಾವೃತ ಪ್ರದೇಶಗಳ ಅತ್ಯುಗ್ರ ಛಳಿಗಾಲ ತಾಳಲಾಗದೆ ಸ್ವಲ್ಪ ಬೆಚ್ಚಗಿರವ ದಕ್ಷಿಣದತ್ತ ಹಕ್ಕಿಗಳು ವಲಸೆ ಬರುವುದು ಸಾಮಾನ್ಯ.

ಹಿಮ ಪ್ರದೇಶದ ಹಕ್ಕಿಗಳ ಜತೆ ಸ್ಥಳೀಯ ಅಳಿವಿನಂಚಿನ ವಲಸಿಗ ಬಿಳಿ ರಣ ಹದ್ದು [Egyptian Vulture] ಹಾಗೂ ಹಿಮಾಲಯದ ದೊಡ್ಡ ರಣ ಹದ್ದು [Himalayan Griffon Vulture] ಸಹ ಕಂಡುಬಂದಿದೆಯೆಂದು ಕೈಗಾ ಬರ್ಡ್‌ರ್ಸ್ ಬಳಗದವರು ಹೇಳುತ್ತಾರೆ. ಬಿಳಿರಣಹದ್ದು ತರುಣಾವಸ್ಥೆಯಲ್ಲಿ ಕಂಡುಬಂದಿರುವುದು ಅವುಗಳ ಸಂತಾನ ಹತ್ತಿರದಲ್ಲೆ ಆಗಿರುವುದನ್ನು ದೃಢಪಡಿಸುವಂತಿದೆ. ಸತ್ತ ಜಾನುವಾರುಗಳ ಕಳೆಬರದ [ಆಹಾರದ] ಕೊರತೆ, ಪಶುವೈದ್ಯಕೀಯದಲ್ಲಿ ನಿಷೇದಿತ ಔಷಧಿಗಳ ಮಿತಿಮಿಮೀರಿದ ಬಳಕೆ ಮತ್ತು ವಾಸಸ್ಥಳಗಳ ಒತ್ತುವರಿಯಿಂದ ಅಳಿವಿನಂಚಿನಲ್ಲಿರುವ ಬಿಳಿ ರಣಹದ್ದು, ಹಿಮಾಲಯದ ಬೃಹತ್ ಹದ್ದು ಮತ್ತು ಕಡಲ ಉಲ್ಲಂಕಿ ಪ್ರಬೇಧಗಳು ಕಾರವಾರದ ಆಚೀಚೆ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.

ಅಪಾಯದಂಚಿನಲ್ಲಿರುವ ರಣ ಹದ್ದುಗಳ ಸಂರಕ್ಷಣೆಗೆ ಜಿಲ್ಲಾಡಳಿತ, ಅರಣ್ಯ ಇಲಾಖೆ ಮತ್ತು ಪಶುಸಂದೋಪನಾ ಇಲಾಖೆಗಳು ಒಂದಾಗಿ ಪ್ರಯತ್ನ ನಡೆಸಬೇಕೆಂದು ಕೈಗಾ ಬರ್ಡರ್ಸ್ ತಂಡದ ಸಂಯೋಜಕ ಮೋಹನದಾಸ್ ಸರ್ಕಾರಕ್ಕೆ ಪತ್ರ ಬರೆದು ಮನವಿಮಾಡಿದ್ದಾರೆ.


ಇದನ್ನೂ ಓದಿ: ಆಹಾರ ಶ್ರೇಷ್ಠತೆಯ ರಾಜಕೀಯದ ವಿವಿಧ ಮುಖಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...