Homeಅಂತರಾಷ್ಟ್ರೀಯಗಡಿಗಳ ಕಲ್ಪನೆಯನ್ನು ತಿದ್ದುವ ಪುಸ್ತಕ: 'ಅಕ್ಸಾಯ್ ಚಿನ್' ವಿವಾದದ ಇತಿಹಾಸ.... ಪುಸ್ತಕ ಪರಿಚಯ

ಗಡಿಗಳ ಕಲ್ಪನೆಯನ್ನು ತಿದ್ದುವ ಪುಸ್ತಕ: ‘ಅಕ್ಸಾಯ್ ಚಿನ್’ ವಿವಾದದ ಇತಿಹಾಸ…. ಪುಸ್ತಕ ಪರಿಚಯ

- Advertisement -
- Advertisement -

| ನಿಖಿಲ್ ಕೋಲ್ಪೆ |

ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದಗಳ ಬಗ್ಗೆ ಯಡೂರ ಮಹಾಬಲ ಅವರು ಬರೆದಿರುವ ‘ಅಕ್ಸಾಯ್ ಚಿನ್’ ವಿವಾದದ ಇತಿಹಾಸ ಮತ್ತು ಪಶ್ಚಿಮ ಮತ್ತು ಮಧ್ಯಮ ಕ್ಷೇತ್ರಗಳಲ್ಲಿ ಭಾರತ ಮತ್ತು ಚೈನಾ ನಡುವಿನ ಗಡಿ ರೇಖೆ ವಿವಾದಗಳು ಎಂಬ ಪುಸ್ತಕ ಕೈಸೇರಿ ಕೆಲದಿನಗಳಾದವು. ಅವರು ಡೋಕ್ಲಾಂ ವಿವಾದದ ಬಗ್ಗೆ ಮತ್ತು ಗಡಿಯಲ್ಲಿಯೇ ಇರುವ ಅರುಣಾಚಲ ಪ್ರದೇಶ ಮತ್ತು ಟಿಬೆಟ್ ಬಗ್ಗೆಯೂ ಕುತೂಹಲಕಾರಿ ಮಾಹಿತಿ ಇರುವ ಪುಸ್ತಕಗಳನ್ನೂ ಬರೆದಿದ್ದಾರೆ. ‘ಚಿಂತನ ಚಿಲುಮೆ’ ಪ್ರಕಟಿಸಿರುವ ಈ ನಾಲ್ಕುನೂರಕ್ಕೂ ಹೆಚ್ಚು ಪುಟಗಳನ್ನು ಹೊಂದಿರುವ ಈ ಪುಸ್ತಕ ಗಿರೀಶ ತಾಳಿಕಟ್ಟೆ ಅವರು ರಚಿಸಿರುವ ಸುಂದರ ಮುಖಪುಟವನ್ನು ಹೊಂದಿದೆ.

ಮುಖ್ಯವಾಗಿ ಈ ಪುಸ್ತಕ ನನ್ನಲ್ಲಿ ಕೆಲವು ಪ್ರಶ್ನೆಗಳನ್ನೆಬ್ಬಿಸಿ ಚಿಂತಿಸುವಂತೆ ಮಾಡಿತು. ಪ್ರತಿಯೊಂದು ದೇಶವೂ ಇತಿಹಾಸದ ಉದ್ದಕ್ಕೂ ಗಡಿ ವಿವಾದಗಳ ಕಾರಣದಿಂದ ರಕ್ತದ ಹೊಳೆಯನ್ನೇ ಹರಿಸಿದೆ. ರಾಜ ಪ್ರಭುತ್ವಗಳಲ್ಲಿ ಸಾಮಾನ್ಯ ಪ್ರಜೆಗಳಿಗೆ ಏನೂ ಪ್ರಯೋಜನವಿಲ್ಲದ ಇಂತಹಾ ತಕರಾರು ಮತ್ತು ಯುದ್ಧಗಳು ವಿನಾಶವನ್ನೇ ತಂದಿವೆ. ರಾಜರುಗಳ ಆಕ್ರಮಣಶೀಲತೆ, ವಿಸ್ತರಣಾವಾದ ಮತ್ತು ಕೆಲವೊಮ್ಮೆ ಕ್ಷುಲ್ಲಕ ಕಾರಣಗಳೂ ಇದಕ್ಕೆ ಕಾರಣವಾಗಿದ್ದಿದೆ. ನಾವು ಶಾಲೆಗಳಲ್ಲಿ ಕಲಿತ ಇತಿಹಾಸದಲ್ಲಿ ರಾಜರುಗಳು ಮಾಡಿದ ಯುದ್ಧಗಳು ಮತ್ತು ಗಡಿ ವಿಸ್ತರಣೆಗಳನ್ನು ಮಹಾನ್ ಸಾಧನೆಗಳಂತೆ ಬಿಂಬಿಸಲಾಗಿದೆಯೇ ಹೊರತು, ಅವುಗಳಿಂದ ಸಾಮಾನ್ಯ ಪ್ರಜೆಗಳಿಗೆ ಆದ ಅನ್ಯಾಯ, ಅತ್ಯಾಚಾರಗಳ ಬಗ್ಗೆ ಚಕಾರವಿಲ್ಲ. (ಅಶೋಕನ ಕಾಲದಲ್ಲಿ ಕಳಿಂಗದಲ್ಲಿ ನಡೆದ ವಿನಾಶವನ್ನು ಹೊರತುಪಡಿಸಿ).

ಮುಖ್ಯವಾಗಿ ಭಕ್ತರಿಗೆ ಮಾತ್ರವಲ್ಲ ಸಾಮಾನ್ಯ ಜನರಿಗೂ ಗಡಿಯ ಕಲ್ಪನೆ ಇಲ್ಲ. ಅದು ರಾಮಣ್ಣ-ಭೀಮಣ್ಣರ ಎರಡು ಜಮೀನುಗಳ ಹಾಗೆ ನಡುವೆ ಬೇಲಿ ಹಾಕಿದ ಅಥವಾ ಹಾಕದಿರುವ ಸ್ಥಿತಿಯಲ್ಲಿರುತ್ತದೆಂದು ಹೆಚ್ಚಿನವರ ಕಲ್ಪನೆ. ಆದರೆ, ಕಿಲೋಮೀಟರ್‍ಗಟ್ಟಲೆ ಹರಿದಿರುವ ಹೆಚ್ಚಿನ ಗಡಿಗಳಲ್ಲಿ ಸರಿಯಾದ ಗುರುತುಗಳೂ ಇಲ್ಲ; ಮಾತ್ರವಲ್ಲ ನೂರಾರು ಚದರ ಕಿ.ಮೀ. ಜಾಗಗಳಿಗೆ ಇನ್ನೂ ಮನುಷ್ಯರು ಕಾಲಿಟ್ಟಿಲ್ಲ ಎಂಬುದು ಅವರ ಕಲ್ಪನೆಗೆ ನಿಲುಕುವುದಿಲ್ಲ. ಕೆಲವು ಪ್ರದೇಶಗಳಲ್ಲಿ ಹುಲ್ಲು ಕೂಡಾ ಬೆಳೆಯುವುದಿಲ್ಲ! ಕೆಲವು ಪ್ರದೇಶಗಳಿಗೆ ವ್ಯೂಹಾತ್ಮಕ ಮಹತ್ವ ಮಾತ್ರ ಇರುತ್ತದೆ. (ಉದಾಹರಣೆಗೆ ಸಿಯಾಚಿನ್) ಆದರೆ, ದೇಶಗಳು ಗಡಿ ರಕ್ಷಣೆಯ ಹೆಸರಿನಲ್ಲಿ ಹಣ ಖರ್ಚು ಮಾಡುತ್ತವೆ. ಗಡಿ ಎಂಬುದು ಭಾವನಾತ್ಮಕ ವಿಷಯವಾಗಿರುವುದರಿಂದ ಅಧಿಕಾರಲ್ಲಿರುವವರು ಸುಲಭವಾಗಿ ಪರಿಹರಿಸಬಹುದಾದ ಸಮಸ್ಯೆಗಳನ್ನು ಜೀವಂತ ಇರಿಸಿ, ಕಗ್ಗಂಟಾಗಿ ಮಾಡಿ ಬೇಕಾದಾಗಲೆಲ್ಲಾ ನಾಟಕವಾಡಿ, ಯುದ್ಧದ ಭ್ರಮೆ ಹುಟ್ಟಿಸಿ ರಾಜಕೀಯ ಲಾಭ ಮಾಡಿಕೊಳ್ಳುತ್ತಾರೆ.

ಲೇಖಕ ಯಡೂರ ಮಹಾಬಲ

ಈ ಪುಸ್ತಕದಲ್ಲಿ ಲೇಖಕರು ಭಾರತ-ಚೀನಾ ನಡುವಿನ ಪಶ್ಚಿಮ ಮತ್ತು ಮಧ್ಯ ಕ್ಷೇತ್ರಗಳ ಗಡಿ ವಿವಾದವನ್ನು ಕುರಿತು ಬರೆದಿದ್ದಾರೆ. (ಪೂರ್ವದ್ದು ಅವರ ಇತರ ಮೂರು ಪುಸ್ತಕಗಳಲ್ಲಿವೆ.) ಇಲ್ಲಿ ಆಕ್ಸಾಯ್ ಚಿನ್ ವಿವಾದದ ಬಗ್ಗೆ ಮಾತನಾಡುತ್ತಾ, ವಿವಿಧ ರಾಜರುಗಳ ಮತ್ತು ಬ್ರಿಟಿಷರ ಕಾಲದಲ್ಲಿ ನಡೆದ ಸರ್ವೇಗಳ ಬಗ್ಗೆ ವಿವರವಾಗಿ ಬರೆಯುತ್ತಾ, ಹಿಮ ಬೀಳುವ ದುರ್ಗಮ ಪ್ರದೇಶಗಳಲ್ಲಿ, ಕಾಲಾಳುಗಳು ಮತ್ತು ಕೆಲವೇ ಕುದುರೆ ಸವಾರರನ್ನು ಹಿಡಿದುಕೊಂಡು ಕಾಟಾಚಾರಕ್ಕೆ ಮಾಡಲಾದ ಸರ್ವೇಗಳ ಕಷ್ಟವನ್ನು ಅವರು ಕತೆಯೊಂದನ್ನು ಹೇಳುವ ರೀತಿಯಲ್ಲಿ ವಿವರಿಸಿದ್ದಾರೆ. ಕಟ್ಟುಕತೆಯಲ್ಲ; ಲಭ್ಯ ದಾಖಲೆಗಳನ್ನು ಉಲ್ಲೇಖಿಸಿ ಬರೆದ ಕತೆ.

ನಮಗೆ ಭಾರತೀಯರಿಗೆ ಇತಿಹಾಸವನ್ನು ಕತೆಯ ರೀತಿಯಲ್ಲಿ ಓದುವುದು, ಅರ್ಥಮಾಡಿಕೊಳ್ಳುವುದು ಮತ್ತು ಸ್ವೀಕರಿಸುವುದು ಅಭ್ಯಾಸವಾಗಿಬಿಟ್ಟಿದೆ. ಅದಕ್ಕಾಗಿಯೇ ನಾವು ಯಾವುದೇ ದಾಖಲೆಗಳನ್ನು ನೋಡದೆಯೇ, ಆ ರಾಜ ಹಾಗಿದ್ದ, ಈ ಭೋಜ ಹೀಗಿದ್ದ, ಅವನು ಸಾಲು ಮರಗಳನ್ನು ನೆಡಿಸಿದ, ಇವನು ಧರ್ಮಿಷ್ಟನಾಗಿದ್ದ. ಅವನು ಕ್ರೂರಿಯಾಗಿದ್ದ.. ಹಾಗೆ, ಹೀಗೆ ಎಂಬಂತಹ ಕಟ್ಟುಕತೆಗಳನ್ನು ನಂಬಿಬಿಡುತ್ತೇವೆ ಮಾತ್ರವಲ್ಲ; ಅವರನ್ನು ಹೀರೋಗಳನ್ನಾಗಿಯೂ, ವಿಲನ್‍ಗಳಾಗಿಯೋ ಸ್ವೀಕರಿಸಿ, ವೈಭವೀಕರಿಸಿ ಇತಿಹಾಸದ ಹೆಸರಿನಲ್ಲಿ ವರ್ತಮಾನವನ್ನೂ, ಭವಿಷ್ಯವನ್ನೂ ಕದಡುತ್ತಿದ್ದೇವೆ.

ಆದುದರಿಂದ ಕನ್ನಡಿಗರ ಮಟ್ಟಿಗೆ ಈ ಪುಸ್ತಕ ಅಗತ್ಯವಾಗಿದೆ. ಮೇಲೆ ಹೇಳಿದ ಕತೆ ಗಡಿಗಳಿಗೂ ಸಂಬಂಧಿಸಿದೆ. ನಾವು ಯಾವುದೋ ಕಾಲ್ಪನಿಕ ಅಥವಾ ಊಹೆಗೆ ನಿಲುಕದಷ್ಟು ಕಾಲ್ಪನಿಕ ವಿಷಯಗಳನ್ನು ಹಿಡಿದುಕೊಂಡು ನಾವು ಗಡಿ ಪ್ರಶ್ನೆಗಳನ್ನು ಎತ್ತಿ ದೇಶಪ್ರೇಮದ ಅಮಲಿನಲ್ಲಿ ಗಡಿ ಕಾಯುವ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿ ಪೂರ್ವಭಾವಿಯಾಗಿಯೇ ಅವರನ್ನು ಕೊಲ್ಲುತ್ತೇವೆ.

ಈ ಗಡಿಕಾಯುವ ಸೈನಿಕರುಗಳನ್ನು ಕೊಲ್ಲುವ ವಿವಾದಗಳು ಎಷ್ಟು ಕ್ಷುಲ್ಲಕವಾಗಿವೆ; ಆಧಾರರಹಿತವಾಗಿವೆ ಎಂಬುದನ್ನು ವಿವರಿಸಲು ಮತ್ತು ಅರ್ಥ ಮಾಡಿಕೊಳ್ಳಲು ಈ ಪುಸ್ತಕ ನೆರವಾಗುತ್ತದೆ.

ಅಕ್ಸಾಯ್ ಚಿನ್ ವಿವಾದಕ್ಕೆ ಸಂಬಂಧಿಸಿದಂತೆ 1864-65ರಲ್ಲಿ ಡಬ್ಲ್ಯೂ. ಎಚ್. ಜಾನ್ಸನ್ ಎಂಬ ಆಕ್ಷೇಪಾರ್ಹ ಅಧಿಕಾರಿಯೊಬ್ಬ ಸರ್ವೇ ಮಾಡಿದ್ದ. ಅಕ್ಸಾಯ್ ಚಿನ್ ವಿವಾದದ ಭ್ರೂಣ ಹುಟ್ಟಿಕೊಂಡದ್ದು ಜಾನ್ಸ್ ಪ್ರಕರಣದಿಂದ ಎಂದು ಲೇಖಕರು ಬರೆಯುತ್ತಾರೆ. ಈ ಕುರಿತು ನೀಡಲಾದ ವಿವರದಲ್ಲಿ ಖ್ಯಾತ ಇಂಡೋ ಚೀನಾ ಸಂಬಂಧಗಳ ತಜ್ಞ ಆಲ್‍ಸ್ಟರ್ ಲ್ಯಾಂಬ್ ಹೀಗೆ ವಿಡಂಬನಾತ್ಮಕವಾಗಿ ಬರೆದಿದ್ದಾರೆ.

ಪ್ರಶ್ನೆ ಮತ್ತು ಉತ್ತರಗಳು
ಪ್ರ: ಜಾನ್ಸನ್ ಅವರು ಆಕ್ಸಾಯ್ ಚಿನ್ ಪ್ರದೇಶದಲ್ಲಿ ಭಾರತೀಯ ಮಗುವಿಗೆ ಜನ್ಮವಿತ್ತ ಭಾರತೀಯ ತಾಯಿಯನ್ನು ಕಂಡರೇ?
ಉ: ಇಲ್ಲ.
ಪ್ರ: ಅವರು ಆಕ್ಸಾಯ್ ಚಿನ್ ಪ್ರದೇಶದಲ್ಲಿ ಚೀನಿ ಮಗುವಿಗೆ ಜನ್ಮವಿತ್ತ ಚೀನಿ ತಾಯಿಯನ್ನು ಕಂಡರೇ?
ಉ: ಇಲ್ಲ.
ಪ್ರ: ಅವರು ಅಲ್ಲಿ ಭಾರತೀಯ ಜಿರಳೆಯನ್ನು ಕಂಡರೆ?
ಉ:ಇಲ್ಲ.
ಪ್ರ: ಅವರು ಅಲ್ಲಿ ಚೀನಿ ಜಿರಳೆಯನ್ನು ಕಂಡರೆ?
ಉ: ಇಲ್ಲ.
ಪ್ರ: ಏಕೆ?
ಉ: ಸ್ವಾಮಿ. ಅಕ್ಸಾಯ್ ಚಿನ್ ಭಾರತೀಯರು ಮತ್ತು ಚೀನೀಯರು ಬಿಡಿ, ಜಿರಳೆಗಳ ಮಾತೃಭೂಮಿಯೂ ಅಲ್ಲ. ಮೈನಸ್ 20ರಿಂದ 50 ಡಿಗ್ರಿ ಉಷ್ಣಾಂಶದಲ್ಲಿ ಜಿರಳೆಗಳೂ ಬದುಕುವುದಿಲ್ಲ. ಅವುಗಳಿಗೆ ಟಿಬೆಟಿನ ರಗ್ಗುಗಳನ್ನಾಗಲೀ, ಲಡಾಕಿನ ಸ್ವೆಟರ್‍ಗಳನ್ನಾಗಲೀ, ಕಾಶ್ಮೀರಿ ಶಾಲು ಅಥವಾ ಯಾರ್ಕಂಡಿ ಬೂಟುಗಳನ್ನಾಗಲೀ ಯಾರೂ ನೀಡಿರಲಿಲ್ಲ.

ಭಾರತ ಮತ್ತು ಚೀನಾ ಎಂತಹಾ ನಿರುಪಯೋಗಿ ಪ್ರದೇಶಕ್ಕಾಗಿ ಕಚ್ಚಾಡುತ್ತಾ ಗಡಿ ವಿವಾದವನ್ನು ಜೀವಂತ ಇಟ್ಟಿವೆ. ಇದರಿಂದ ಒಂದು ಲಾಭ ಇದೆ. ಭಾರತದ ಮೇಲೆ ಒತ್ತಡ ಹೇರಲು ಚೀನಾ ಗಡಿ ವಿವಾದ ಎಬ್ಬಿಸಿದರೆ, ಇಲ್ಲಿನ ಹುಸಿ ಭೂಪಟ ದೇಶಪ್ರೇಮಿಗಳನ್ನು ಹುಚ್ಚೆಬ್ಬಿಸಿ ಮತ ಪಡೆಯಲು ಭಾರತ ಗಡಿ ವಿವಾದ ಎಬ್ಬಿಸುತ್ತದೆ.

ಪುಸ್ತಕ ದೀರ್ಘವಾಗಿದ್ದು, ಸಾಮಾನ್ಯ ಓದುಗರಿಗೆ ಇಷ್ಟೆಲ್ಲಾ ಓದುವ ತಾಳ್ಮೆ ಇದೆಯೇ ಎಂದು ನನಗನಿಸಿತು. ಆದರೆ, ಇತಿಹಾಸದ ವಾಸ್ತವ ನೆಲೆಗಳನ್ನು ತಿಳಿದುಕೊಳ್ಳುವ ಆಸಕ್ತಿ ಇರುವವರಿಗೆ ಇದೊಂದು ಕುತೂಹಲಕಾರಿ ಪುಸ್ತಕ. ಲೇಖಕರು 200ಕ್ಕೂ ಹೆಚ್ಚು ನಕ್ಷೆಗಳು ಮತ್ತು ಫೋಟೋಪ್ರತಿಗಳನ್ನು ನೀಡಿದ್ದಾರೆ. ಇವುಗಳಲ್ಲಿ ಕೆಲವು ಗಡಿಯಷ್ಟೇ ಅಸ್ಪಷ್ಟವಾಗಿರುವುದರಿಂದ ಕೈಬಿಟ್ಟು ಪುಸ್ತಕದ ಭಾರ ಕಡಿಮೆ ಮಾಡಬಹುದಿತ್ತು.

ಒಟ್ಟಿನಲ್ಲಿ ಇದು ಗಡಿಯ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನೆರವಾಗುತ್ತದೆ. ಆ ಅರ್ಥ ಮತ್ತು ಸತ್ಯ ಒಂದೇ. ಅದೆಂದರೆ, ವಾಸ್ತವವಾಗಿ ಇದೊಂದು ಸಮಸ್ಯೆಯೇ ಅಲ್ಲ. ರಾಜಕೀಯ ಕಾರಣಗಳಿಂದಾಗಿ ಅದನ್ನು ಸಮಸ್ಯೆಯಾಗಿ ಉಳಿಸಿಕೊಳ್ಳಲಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...