Homeಕರ್ನಾಟಕರಂಗಾಸಕ್ತರಿಗೆ ವಿಶೇಷ ಅವಕಾಶ: ತುಮಕೂರಿನ ಡೀಪ್ ಪೋಕಸ್ ಸಂಸ್ಥೆಯಿಂದ ಅಭಿನಯ ತರಭೇತಿ ಕಾರ್ಯಗಾರ

ರಂಗಾಸಕ್ತರಿಗೆ ವಿಶೇಷ ಅವಕಾಶ: ತುಮಕೂರಿನ ಡೀಪ್ ಪೋಕಸ್ ಸಂಸ್ಥೆಯಿಂದ ಅಭಿನಯ ತರಭೇತಿ ಕಾರ್ಯಗಾರ

ಪ್ರವೇಶ ಉಚಿತವಾಗಿದ್ದು ಪ್ರತಿದಿನ ಮದ್ಯಾಹ್ನ 3.30 ರಿಂದ ಸಂಜೆ 8 ರವರೆಗೆ, ತುಮಕೂರಿನ ಅಮಾನಿಕೆರೆಯ ಎದುರುಗಡೆ ಇರುವ ಕನ್ನಡ ಭವನದಲ್ಲಿ ಶಿಬಿರ ನಡೆಯಲಿದೆ

- Advertisement -
- Advertisement -

| ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ಕನ್ನಡ ರಂಗಭೂಮಿಯಲ್ಲಿ ತುಮಕೂರು ವಿಶೇಷ ಸ್ಥಾನವನ್ನು ಪಡೆದಿದೆ. ಕಂಪನಿ ನಾಟಕದ ದಿಗ್ಗಜರಲ್ಲೊಬ್ಬರಾದ ಗುಬ್ಬಿ ವೀರಣ್ಣನವರ ತವರು ಜಿಲ್ಲೆಯಾದ ಇಲ್ಲಿ, ಈಗಲೂ ಎಂದಿಗೂ ನಿಲ್ಲದಂತೆ ಪ್ರತಿ ಶನಿವಾರ ಮತ್ತು ಭಾನುವಾರ ಪೌರಾಣೀಕ ನಾಟಕ ನಡೆಯತ್ತಲೇ ಇವೆ. ಮುಂಗಡವಾಗಿ 6 ತಿಂಗಳವರೆಗೂ ಈ ವಾರಗಳು ಕಾಯ್ದಿರಿಸುತ್ತಾರೆ. ಇಂತಹ ರಂಗ ನೆಲೆಯ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ಆಧುನಿಕ ರಂಗಭೂಮಿ ಚಟುವಟಿಕೆಗಳು ನಡೆಯುತ್ತಿವೆ. ಇದೀಗ ಹೆಸರಾಂತ ರಂಗ ನಿರ್ಧೇಶಕ ನಟರಾಜ್ ಹೊನ್ನವಳ್ಳಿ ಅವರ ನೇತೃತ್ವದ ಡೀಪ್ ಪೋಕಸ್ ಸಂಸ್ಥೆಯು ಹತ್ತು ದಿನಗಳ ಅಭಿನಯ ತರಭೇತಿ ಶಿಬಿರ ಹಮ್ಮಿಕೊಂಡಿದೆ. ಜೂನ್ 23 ರಿಂದ ಜುಲೈ 2ರವರೆಗೆ ಶಿಬಿರ ನಡೆಯಲಿದ್ದು, ಜೂನ್ 23ರ ಭಾನುವಾರ ಸಂಜೆ 5.30ಕ್ಕೆ ಶಿಬಿರ ಉದ್ಘಾಟನೆಗೊಳ್ಳಲಿದೆ. ಈ ಶಿಬಿರವನ್ನು ಉದ್ಘಾಟಿಸಲು ರಂಗಭೂಮಿ ಮತ್ತು ಸಿನೆಮಾ ನಟರಾದ ಅಚ್ಯುತ್, ನೀನಾಸಂ ಸತೀಶ್, ಧರ್ಮೇಂದ್ರ ಮುಂತಾದವರು ಭಾಗವಹಿಸಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‍ನ ತುಮಕೂರು ಜಿಲ್ಲಾ ಘಟಕ, ಝೆನ್ ಟೀಮ್ ಮತ್ತು ಸಮ್ಮತ ಥೀಯೇಟರ್ ತುಮಕೂರು ಇವರ ಸಹಯೋಗದಲ್ಲಿ ಶಿಬಿರ ನಡೆಯಲಿದೆ. ಪ್ರವೇಶ ಉಚಿತವಾಗಿದ್ದು ಪ್ರತಿದಿನ ಮದ್ಯಾಹ್ನ 3.30 ರಿಂದ ಸಂಜೆ 8 ರವರೆಗೆ, ತುಮಕೂರಿನ ಅಮಾನಿಕೆರೆಯ ಎದುರುಗಡೆ ಇರುವ ಕನ್ನಡ ಭವನದಲ್ಲಿ ಶಿಬಿರ ನಡೆಯಲಿದೆ. ಈ ಶಿಬಿರಕ್ಕೆ ರಂಗನಿರ್ಧೇಕರಾದ ಚನ್ನಕೇಶವ ಜಿ, ಶಿವಮೊಗ್ಗ ರಂಗಾಯಣ ನಿರ್ದೇಶಕರಾದ ಎಂ.ಗಣೇಶ್, ನಟರಾದ ಅಚ್ಯುತ್, ನೀನಾಸಂ ಸತೀಶ್, ಹನುಮಂತೇಗೌಡ ,ನಟಿ ಅಂಜಾನಾ ಶೆಟ್ಟಿ ತುಮಕೂರಿನ ರಂಗಕರ್ಮಿಗಳಾದ ಗೋಮಾರದಹಳ್ಳಿ ಮಂಜುನಾಥ್, ಉಗಮ ಶ್ರೀನಿವಾಸ್, ತಿಪಟೂರು ಚಂದ್ರು, ರಂಗಾಯಣ ರವಿಶಂಕರ್ , ಚೇತನ್ ನೀನಾಸಂ ಮುಂತಾದ ಪ್ರತಿಭೆಗಳು ಜೊತೆಯಾಗಲಿದ್ದಾರೆ.

ಶಿಬಿರದ ನಿರ್ದೇಶಕರಾಗಿ ನಟರಾಜ್ ಹೊನ್ನವಳ್ಳಿ

ನಟರಾಜ್ ಹೊನ್ನವಳ್ಳಿಯವರು ಮೂಲತಹ ತಿಟೂರಿನ ಹೊನ್ನವಳ್ಳಿಯವರಾಗಿದ್ದಾರೆ. ನೀನಾಸಂ ಸಂಸ್ಥೆಯಲ್ಲಿ ರಂಗಶಿಕ್ಷಣದ ಕೋರ್ಸ್ ಮಾಡಿರುವ ಇವರು ಪಾಶ್ಚತ್ಯ ರಂಗಭೂಮಿನ ಕುರಿತು ವಿಶೇಷ ಆಧ್ಯಯನವನ್ನು ಮಾಡಿದ್ದಾರೆ. ತಿಪಟೂರಿನಲ್ಲಿ ಪ್ರೋಥಿಯೋ ಎಂಬ ತಂಡವನ್ನು ಕಟ್ಟಿದ್ದರು. ನಾಡಿನ ಖ್ಯಾತ ರಂಗ ನೀರ್ದೇಶಕರಾಗಿ ಗುರುತಿಸಿಕೊಂಡಿರುವ ಇವರು ಕ್ರೀಯಾಶೀಲ ರಂಗಕರ್ಮಿಯಾಗಿದ್ದಾರೆ.

ನಟರಾಜ್ ಹೊನ್ನವಳ್ಳಿ

ಲಂಕೇಶರ ಬದುಕು, ಶಂಕರ ಮೊಕಾಶಿ ಪುಣೇಕರ್ ಅವರ ನಟ ನಾರಾಯಣಿ , ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್, ಮಾಸ್ತಿಯವರ ಸುಬ್ಬಣ್ಣ ಕಾದಂಬರಿ, ಗುಣಮುಖ, ಮುದುಕನ ಮದುವೆ, ಶೇಕ್ಸಫೀಯರ್ ಮನೆಗೆ ಬಂದ ಮುಂತಾದ 50ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸಂದಿದೆ. ಇವರ ರಂಗಸಾಧನೆಗಾಗಿ ತಿಪಟೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಕ.ಸಾ.ಪ ಗೌರವಿಸಿತ್ತು.

ಡೀಪ್ ಪೋಕಸ್ ಸಂಸ್ಥೆಯ ಕುರಿತು

ಡೀಪ್ ಪೋಕಸ್ ಸಂಸ್ಥೆ ರಂಗ ನಿರ್ಧೇಶಕ ನಟರಾಜ್ ಹೊನ್ನವಳ್ಳಿಯವರ ಕನಸಿನ ಅಭಿನಯ ತರಬೇತಿ ಸಂಸ್ಥೆಯಾಗಿದೆ. ಈ ಸಂಸ್ಥೆಯು ರಂಗಭೂಮಿ ಮತ್ತು ಸಿನೆಮಾ ನಟನೆಯ ಮತ್ತು ಅಭಿನಯ ತಂತ್ರಗಳ ಬಗ್ಗೆ ಅಧ್ಯಯನ ಸಂಸ್ಥೆಯಾಗಿ ಮುಂದಿನ ದಿನಗಳಲ್ಲಿ ರೂಪುಗೊಳ್ಳಲಿದೆ. ಸದ್ಯ ಹತ್ತು ದಿನಗಳ ಕಾರ್ಯಗಾರ ನಡೆಯುತ್ತಿದ್ದು ನಂತರ ಶಿಬಿರದ ನಿರ್ದೇಶಕರಾದ ನಟರಾಜ್ ಹೊನ್ನವಳ್ಳಿಯವರ ನಿರ್ದೇಶನದಲ್ಲಿ ದ.ರಾ.ಬೇಂದ್ರೆ ರಚಿಸಿರುವಂತಹ ಕಾಳಿದಾಸರ ಮೇಘದೂತ ನಾಟಕ ನಿರ್ಮಾಣವಾಗಲಿದೆ. ಹೀಗೆ ಸಿನೆಮಾ ಮತ್ತು ರಂಗಭೂಮಿಯ ಅಭಿನಯಕ್ಕಾಗಿ ದೇಹ ಮತ್ತು ಮನಸ್ಸನ್ನು ಸಿದ್ಧಪಡಿಸಿಕೊಳ್ಳುವುದು ಹೇಗೆ ಮತ್ತು ನಿರ್ದೇಶನವನ್ನೂ ಒಳಗೊಂಡೊಂತೆ ಬೇರೆ ಬೇರೆ ವಿಭಾಗಗಳನ್ನು ಕಲಿಸುವ ನಿಟ್ಟಿನಲ್ಲಿ ಡೀಪ್ ಫೋಕಸ್ ಅಭಿನಯ ಸ್ಟೋಡಿಯೋ ರೂಪುಗೊಳ್ಳಲಿದೆ. ತುಮಕೂರು ಭಾಗದಲ್ಲಿ ಒಂದು ರಂಗಭೂಮಿ ಮತ್ತು ಸಿನೆಮಾಕ್ಕೆ ಸಂಬಂಧಿಸಿದ ಶಾಲೆಯಾಗಿ ರೂಪುಗೊಳ್ಳೂವ ಸಿದ್ದತೆಯಲ್ಲಿರುವುದ ಸಂತಸದ ವಿಷಯ.

ತರಭೇತಿ ಶಿಬಿರದಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗೆ ಈ ಈ ಮೊಬೈಲ್ ನಂಬರ್ ಗಳಿಗೆ ಸಂಪರ್ಕಿಸಬಹುದಾಗಿದೆ. 9606546903, 7676360812, 9901848170, 8105515256.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...