Homeಚಳವಳಿಪತ್ರಕರ್ತರ ಬಂಧನ: ಯೋಗಿಯ ಉತ್ತರಪ್ರದೇಶ ಸರ್ಕಾರಕ್ಕೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್

ಪತ್ರಕರ್ತರ ಬಂಧನ: ಯೋಗಿಯ ಉತ್ತರಪ್ರದೇಶ ಸರ್ಕಾರಕ್ಕೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್

ಒಂದೇ ವಾರದಲ್ಲಿ ಉತ್ತರ ಪ್ರದೇಶದಲ್ಲಿ 5 ಜನ ಅಮಾಯಕರನ್ನು ನಿಯಮಬಾಹಿರಬಾಗಿ ಬಂಧಿಸಲಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದು ತಕ್ಷಣ ಬಿಡುಗಡೆಗೆ ಆದೇಶಿಸಿದೆ.

- Advertisement -
- Advertisement -

| ಡಾ. ಸ್ವಾತಿ ಶುಕ್ಲ |

ಒಬ್ಬ ಮಹಿಳೆಯು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮದುವೆಯ ಪ್ರಸ್ತಾಪದ ವಿಡಿಯೋ ಹೊರಬಿದ್ದ ನಂತರ ಯುಪಿಯ ಪೊಲೀಸ್ ಬಂಧನದ ಸರಣಿ ಪ್ರಾರಂಭಿಸಿದೆ. ಈ ವರದಿ ಬರೆಯುವ ಸಮಯಕ್ಕೆ 5 ವ್ಯಕ್ತಿಗಳನ್ನು ಬಂಧಿಸಲಾಗಿದೆ. ಯುಪಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವಿರುದ್ಧ ಆಕ್ಷೇಪಾರ್ಹ ವರದಿಗಳನ್ನು ಹಂಚಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ. ಬಂಧಿತ ಐವರಲ್ಲಿ ಮೂವರು ಪತ್ರಕರ್ತರು, ಒಬ್ಬ ರೈತ ಮತ್ತು ಒಬ್ಬ ಗ್ರಾಮ ಮುಖ್ಯಸ್ಥ. ಈ ಕ್ರಮಗಳಿಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದು ತಕ್ಷಣ ಬಿಡುಗಡೆಗೆ ಆದೇಶಿಸಿದೆ.

ಘಟನಾಕ್ರಮ

ಮುಫ್ತಿಯಲ್ಲಿ ಬಂದು ಯುಪಿ ಪೊಲೀಸರು ಕಳೆದ ಶನಿವಾರದಂದು ಪ್ರಶಾಂತ್ ಕನೋಜಿಯಾ ಅವರನ್ನು ಅವರ ಮನೆಯಿಂದ ಬಂಧಿಸಿದರು. ಬಂಧನದ ನಂತರ ಪ್ರಶಾಂತ್ ಅವರ ಹೆಂಡತಿಗೆ ತನ್ನ ಗಂಡನನ್ನು ಉತ್ತರಪ್ರದೇಶಕ್ಕೆ ಕರೆದೊಯ್ಯಲಾಗಿದೆ ಹಾಗು ಅಲ್ಲಿ ಅವರನ್ನು ಬಂಧಿಸಲಾಗಿದೆ ಎನ್ನುವ ಸುದ್ದಿ ಬಂತು. ಪ್ರಶಾಂತ್ ಅವರ ಅಪರಾಧ – ಒಬ್ಬ ಮಹಿಳೆಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮದುವೆಯ ಪ್ರಸ್ತಾಪವನ್ನಿಡುವ ವಿಡಿಯೋ ಅನ್ನು ತಮ್ಮ ಟ್ವಿಟರ್ ಖಾತೆಯಿಂದ ಹಂಚಿದ್ದು. ಲಖನೌನ ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಅಲ್ಲಿಯ ಅಧಿಕಾರಿಯು ಎಫ್ ಐ ಆರ್ ದಾಖಲಿಸಿದ್ದಾರೆ.

ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ಅದರಲ್ಲಿ ಒಬ್ಬ ಮಹಿಳೆ ಹಲವಾರು ಸುದ್ದಿ ವಾಹಿನಿಗಳ ವರದಿಗಾರರೊಂದಿಗೆ ಮಾತನಾಡುತ್ತ, ತಾನು ಮುಖ್ಯಮಂತ್ರಿಯೊಂದಿಗೆ ವಿಡಿಯೋ ಚಾಟ್ ಮೂಲಕ ಮಾತನಾಡುತ್ತಿದ್ದಳೆಂದು ಹೇಳಿಕೊಂಡಿದ್ದಾಳೆ ಹಾಗೂ ಈಗ ಮುಖ್ಯಮಂತ್ರಿ ತನ್ನೊಂದಿಗೆ ವಿವಾಹ ಮಾಡಿಕೊಳ್ಳುವರೇ ಎಂದು ಕೇಳಿದ್ದಾಳೆ.
ಇದಾದ ನಂತರ ನೇಷನ್ ಲೈವ್ ಸುದ್ದಿ ವಾಹಿನಿಯ ಮುಖ್ಯಸ್ಥ ಹಾಗೂ ಸಂಪಾದಕ ಇಶಿಕಾ ಸಿಂಗ್ ಮತ್ತು ಅನುಜ್ ಶುಕ್ಲಾ ಅವರನ್ನೂ ಬಂಧಿಸಲಾಗಿದೆ. ಆ ವಾಹಿನಿಯಲ್ಲಿ ಮೇಲೆ ಹೇಳಲಾದ ವಿಡಿಯೋ ಅನ್ನು ಬಿತ್ತರಿಸಿ ಅದರ ಬಗ್ಗೆ ಚರ್ಚೆ ಮಾಡಲಾಗಿತ್ತು.

ಈ ಬಂಧನಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 ಮತ್ತು ಐಟಿ ಅ್ಯಕ್ಟ್‍ನ ಸೆಕ್ಷನ್ 66 ರ ಅಡಿಯಲ್ಲಿ ಮಾಡಲಾಗಿದೆ. ಸೆಕ್ಷನ್ 500 ಮಾನಹಾನಿಗೆ ಸಂಬಂಧಿಸಿದೆ. ಇವು, ನಾನ್ ಕಾಗ್ನಿಸೆಬಲ್ ಅಪರಾಧಗಳಿವೆಯಾದುದರಿಂದ ಖುದ್ದು ಫಿರ್ಯಾದಿಯೇ ಪ್ರಕರಣ ದಾಖಲಿಸಬೇಕು. ಪೊಲೀಸ್ ತಾನೇ ಖುದ್ದಾಗಿ ಎಫ್‍ಐರ್ ದಾಖಲಿಸಿ ಕ್ರಮ ಕೈಗೊಳ್ಳುವಂತಿಲ್ಲ. ಇಂತಹ ಪ್ರಕರಣಗಳಲ್ಲಿ ವಾರಂಟ್ ಇಲ್ಲದೇ ಕನೋಜಿಯ ಅವರನ್ನು ಬಂಧಿಸುವಂತಿಲ್ಲ. 66ರ ಐಟ್ ಸೆಕ್ಷನ್ ಒಂದು ಕಂಪ್ಯೂಟರ್ ಸಿಸ್ಟಮ್ ಅನ್ನು ಅಪ್ರಾಮಾಣಿಕವಾಗಿ ಹಾನಿಗೊಳಿಸುವುದಕ್ಕೆ ಸಂಬಂಧಿಸಿದೆ. ಈ ಬಂಧನಗಳಲ್ಲಿ ಕಂಡುಬಂದಂತೆ, ದಂಡಸಂಹಿತೆಯ ಯಾವ ಸೆಕ್ಷನ್‍ಗಳೂ ಈ ಬಂಧನಗಳಿಗೆ ಅನ್ವಯವಾಗುವುದಿಲ್ಲ.

ಈ ಬಂಧನಗಳನ್ನು ಸಮರ್ಥಿಸಿಕೊಳ್ಳುತ್ತ ಯುಪಿ ಪೊಲೀಸರು ಭಾರತೀಯ ದಂಡ ಸಂಹಿತೆ 505 (ಸಾರ್ವಜನಿಕ ಸುವ್ಯವಸ್ಥೆಯನ್ನು ಕೆಡಿಸುವುದಕ್ಕೆ ಸಂಬಂಧಿಸಿದ್ದು) ಹಾಗೂ ಐಟಿ ಆ್ಯಕ್ಟ್‍ನ 67 ಸೆಕ್ಷನ್ (ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಅಶ್ಲೀಲ ವಿಷಯವನ್ನು ಪ್ರಕಟಿಸುವುದು) ಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ. ಒಂದು ಸಲ ಆ ವಿಡಿಯೊ ಅನ್ನು ನೋಡಿದರೆ ಸಾರ್ವಜನಿಕ ಸುವ್ಯವಸ್ಥೆಯನ್ನು ಕೆಡಿಸುವುದಾಗಲಿ ಅಥವಾ ಅಶ್ಲೀಲತೆಯಾಗಲಿ ಕಂಡುಬರುವುದಿಲ್ಲ.

ಟ್ವಿಟರ್‍ನಲ್ಲಿ ನೆಟ್ಟಿಗರು ಪ್ರಶಾಂತ್ ಕನೋಜಿಯಾ ಅವರನ್ನು ಬಿಡುಗಡೆ ಮಾಡುವಂತೆ ಅಭಿಯಾನ ಪ್ರಾರಂಭಿಸಿದ್ದಾರೆ. ಭಾರತದ ಸಂಪಾದಕರ ಗಿಲ್ಡ್ ಈ ಬಂಧನಗಳನ್ನು ಖಂಡಿಸಿದೆ.

ಕನೋಜಿಯಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಅವರ ಕುಟುಂದ ಸದಸ್ಯರು ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಮ್ ಕೋರ್ಟಿ ಮೊರೆ ಹೊಕ್ಕಿದ್ದಾರೆ. ಅದೇ ಸಮಯದಲ್ಲಿ ಹಲವಾರು ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಪತ್ರಕರ್ತರ ಮೇಲೆ ಕೈಗೊಳ್ಳುತ್ತಿರುವ ಈ ಹತೋಟಿ ಕ್ರಮಗಳನ್ನು ಖಂಡಿಸಿ ಭಾರತೀಯ ಪ್ರೆಸ್ ಕ್ಲಬ್ ಎದುರುಗಡೆ ಪ್ರತಿಭಟನೆ ಮಾಡಿದ್ದಾರೆ. ವಿಚಿತ್ರವೇನೆಂದರೆ ಮುಖ್ಯವಾಹಿನಿಯ ಯಾವ ಮೀಡಿಯಾ ಹೌಸ್ ಗಳು ಈ ಪ್ರತಿಭಟನೆಯನ್ನು ವರದಿ ಮಾಡಿಲ್ಲ. ಕೊನೆಗೆ India Resists ಫೇಸ್ ಬುಕ್ ಲೈವ್ ಮೂಲಕ ಮಾತ್ರ ದೇಶದ ಜನರನ್ನು ತಲುಪಿದೆ.

ಪ್ರತಿಭಟನೆಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಬಂಧನಗಳು ಪತ್ರಕರ್ತರಿಗೆ ಮಾತ್ರ ಸೀಮಿತವಾಗದೇ, ಗೋಲಾ ಗ್ರಾಮದ ನಿವಾಸಿ ಪೀರ್ ಮೊಹಮ್ಮದ್ ಹಾಗೂ ಆ ಗ್ರಾಮದ ಮುಖ್ಯಸ್ಥ ಅಖ್ಲಾಕ್ ಅಹ್ಮದ್ ಅವರನ್ನು ಯೋಗಿ ಆದಿತ್ಯನಾಥ್ ಅವರ ವಿವಾಹದ ಅಣಕು ಆಮಂತ್ರಣ ಪತ್ರಿಕೆಯನ್ನು ಫೇಸ್‍ಬುಕ್‍ನಲ್ಲಿ ಹಂಚಿದ್ದಕ್ಕೆ ಅವರನ್ನೂ ಬಂಧಿಸಲಾಗಿದೆ. ಈ ಇಬ್ಬರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆ ಫೇಸ್‍ಬುಕ್ ಪೋಸ್ಟ್‍ನಲ್ಲಿ ಧರ್ಮೇಂದ್ರ ಭಾರತಿ ಅವರನ್ನು ಟ್ಯಾಗ್ ಮಾಡಲಾಗಿತ್ತು ಎನ್ನುವ ಕಾರಣಕ್ಕೇ ಅವರನ್ನೂ ಬಂಧಿಸಲಾಗಿದೆ.

ಪೊಲೀಸ್ ಸರಕಾರದ ಪ್ರತಿಷ್ಠಾಪನೆ
ಯೋಗಿ ಆದಿತ್ಯನಾಥ ಅವರು ಅಧಿಕಾರಕ್ಕೆ ಬಂದಾಗಿನಿಂದ ಪೊಲೀಸರಿಗೆ ಅಭಯ ಹಸ್ತ ನೀಡಿ ಒಂದು ಪೊಲೀಸ್ ಸರಕಾರವನ್ನು ರಚಿಸುವಲ್ಲಿ ಯುಪಿಯ ಆಡಳಿತ ಸಕ್ರಿಯವಾಗಿದೆ. ಯೋಗಿ ಸರಕಾರದ ಮೊದಲ ಹತ್ತು ತಿಂಗಳುಗಳು ಅ್ಯಂಟಿ ರೋಮಿಯೋ ಸ್ಕ್ವಾಡ್(ಪಡೆಗಳು), ಎನ್‍ಕೌಂಟರ್‍ಗಳು ಮತ್ತು ಗೋರಖಪುರದ ಹಸುಳೆಗಳ ಸಾವಿಗೆ ಕುಖ್ಯಾತಿ ಗಳಿಸಿತ್ತು. ಮಹಿಳೆಯರನ್ನು ಚುಡಾಯಿಸುವುರಿಂದ ಸುರಕ್ಷತೆ ನೀಡುವ ಹೆಸರಿನಲ್ಲಿ ಯುವಕ ಯುವತಿಯರಿಗೆ ಕಿರುಕುಳ ನೀಡುತ್ತ್ತ ನೈತಿಕ ಪೊಲೀಸ್‍ಗಿರಿಯನ್ನು ಈ ಪಡೆಗಳು ಮಾಡಿದವು. ಹೆಚ್ಚುತ್ತಿರುವ ಅಪರಾಧಕ್ಕೆ ಕಡಿವಾಣ ಹಾಕಲು ಪೊಲೀಸರಿಗೆ ಎನ್‍ಕೌಂಟರ್ ಮಾಡಲು ಅಭಯ ಹಸ್ತವನ್ನು ನೀಡಿ ಎನ್‍ಕೌಂಟರ್ ಸರಕಾರ ಎನ್ನುವ ಹೆಸರನ್ನು ಗಳಿಸಿತು.

2019ರ ವರೆಗೆ 3000 ಎನ್‍ಕೌಂಟರ್‍ಗಳನ್ನು ಮಾಡಿದ್ದನ್ನು ಸಾಧನೆಯೆಂಬಂತೆ ಬಿಂಬಿಸಲಾಗುತ್ತಿದೆ. ಮಾನವ ಹಕ್ಕು ಸಂಘಟನೆಗಳು ಈ ನಕಲಿ ಎನ್‍ಕೌಂಟರ್‍ಗಳ ಬಗ್ಗೆ ಆತಂಕ ವ್ಯಕ್ತಪಡಿಸಿವೆ.

ನಕಲಿ ಎನ್ ಕೌಂಟರ್ ಗಳ ಹೆಚ್ಚಿ ಮಾಹಿತಿಗೆ ವೈರ್ ಲೇಖನ ಇಲ್ಲಿ ಓದಿ

ನ್ಯೂಸ್ ಕ್ಲಿಕ್ ಲೇಖನ ಓದಿ

ಈ ಬಂಧನಗಳು, ಡಾ. ಕಫೀಲ್ ಖಾನ್ ಅವರನ್ನು ಅಮಾನತ್ತು ಗೊಳಿಸಿ ಅವರಿಗೆ ಕಿರುಕುಳ ಕೊಟ್ಟಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಆದ ಸಾವುಗಳಿಗೆ ಅವರ ಮೇಲೇ ಆಪಾದನೆ ಮಾಡಿದ್ದು, ಇವೆಲ್ಲವುಗಳು ಸಮಾಜಕ್ಕೆ ಇರುವ ತನ್ನ ಜವಾಬ್ದಾರಿಗಳಿಂದ ಯುಪಿಯ ಸರಕಾರ ಹೇಗೆ ಜಾರಿಕೊಂಡಿದೆ ಎನ್ನುವುದನ್ನು ತೋರಿಸುತ್ತವೆ.

2019ರ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿನಿಂದ ಯೋಗಿ ಆಡಳಿತಕ್ಕೆ ಇನ್ನಷ್ಟು ಕಸುವು ಬಂದಂತಾಗಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯ ಸರಕಾರದ ಸಂಪೂರ್ಣ ಅಧಿಕಾರ ಬರಿ ಒಬ್ಬ ವ್ಯಕ್ತಿ ಯೋಗಿ ಆದಿತ್ಯನಾಥ ಅವರ ಕೈಯಲ್ಲಿದೆ. ಇಷ್ಟು ವರ್ಷ ಕಾಳಜಿಯಿಂದ ಸೃಷ್ಟಿಸಿದ ತನ್ನ ಇಮೇಜನ್ನು ಮುರಿಯವ ಬೆದರಿಕೆ ಒಡ್ಡುವ ವ್ಯಕ್ತಿಗಳನ್ನು ಶಿಕ್ಷಿಸಲು ಯಾವ ಮಟ್ಟಿಗೆ ಹೋಗಬಹುದು ಎನ್ನುವುದನ್ನು ಈ ನಕಲಿ ಆರೋಪಗಳ ಆಧಾರದ ಮೇಲೆ ಮಾಡಿದ ಬಂಧನಗಳು ತೋರಿಸುತ್ತವೆ.

ಅಧಿಕಾರದ ದುರುಪಯೋಗ ಮಾಡುವುದು ನಮ್ಮ ದೇಶಕ್ಕೆ ಹೊಸದಲ್ಲ. 2019ರ ಲೋಕಸಭೆ ಚುನಾವಣಗೆ ಮುಂಚೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚಿತ್ರವನ್ನು ವಿರೂಪಗೊಳಿಸಿದ್ದಕ್ಕಾಗಿ ಒಬ್ಬ ಬಿಜೆಪಿಯ ಕಾರ್ಯಕರ್ತನನ್ನು ಬಂಧಿಸಲಾಗಿತ್ತು. ಆದರೆ ಸುಪ್ರೀಮ್ ಕೋರ್ಟ್ ಈ ಪ್ರಕರಣವನ್ನು ತುರ್ತಾಗಿ ಗಮನಿಸಿದ್ದರಿಂದ ಆ ಕಾರ್ಯಕರ್ತನನ್ನು ಬಿಡುಗಡೆ ಮಾಡಬೇಕಾಯಿತು.

ಇಷ್ಟೆಲ್ಲಾ ನಡೆಯುತ್ತಿದ್ದರೂ ಕರ್ನಾಟಕದ ಮಾಧ್ಯಮಗಳು ಇವುಗಳನ್ನು ಖಂಡಿಸುವುದ ಇರಲಿ ಈ ಕುರಿತು ಸಣ್ಣ ಸುದ್ದಿ ಸಹ ಮಾಡುವುದಿಲ್ಲ. ಇಲ್ಲಿ ಕರ್ನಾಟಕದಲ್ಲಿ ಸನ್ನಿವೇಶ ಸಂಪೂರ್ಣ ವಿರುದ್ಧವಾಗಿದೆ. ಇಲ್ಲಿ ಟಿವಿ ಮಾಧ್ಯಮಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿದ್ದು ಒಂದು ಪಕ್ಷದ ಪರವಾಗಿ ನೇರವಾಗಿ ಕೆಲಸ ಮಾಡುತ್ತಿವೆ. ವಯಕ್ತಿಕ ನಿಂದನೆ, ತೇಜೋವಧೆ ಮಾಡುವುದರಲ್ಲಿಯೇ ನಿರತವಾಗಿದ್ದು ಇವುಗಳ ವಿರುದ್ಧ ಯಾರಾದರೂ ಕೇಸು ದಾಖಲಿಸಿದರೂ ಸಹ ಎಮರ್ಜೆನ್ಸಿ ಘೋಷಣೆ ಆಗಿದೆ ಅನ್ನೋ ರೀತಿಯಲ್ಲಿ ವರ್ತಿಸುತ್ತಿವೆ. ಪತ್ರಿಕೋಧ್ಯಮದ ಲವಲೇಶವೂ ಇಲ್ಲಿನ ಟಿವಿ ಚಾನೆಲ್ ಗಳಿಗೆ ಗೊತ್ತಿಲ್ಲದಿರುವುದು ದುರಂತ.

ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ಸಮಸ್ಯೆ ಮುಂಚೆಯಿಂದಲೂ ಇದೆ. ಪುಸ್ತಕಗಳನ್ನು, ಸಿನೆಮಾಗಳನ್ನು ಹಾಗೂ ಸಾಮಾಜಿಕ ಜಾಲತಾಣಗಳ ವಿಷಯಗಳನ್ನು ಕಟ್ಟುನಿಟ್ಟಾದ ನೀತಿಗಳ ಅಡಿ ಪರಿಶೀಲಸಲಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರದ ಸೂಚ್ಯಾಂಕದಲ್ಲಿ ಭಾರತ ಪಾಕಿಸ್ತಾನಕ್ಕಿಂತ ಒಂದು ಸ್ಥಾನ ಮುಂದಿದೆ. ಹಾಗಾದರೆ ನಾವು ಪಾಕಿಸ್ತಾನಕ್ಕಿಂತಲೂ ಉತ್ತಮ ಎಂದು ಹೇಳಿಕೊಳ್ಳುವುದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...