Homeಚಳವಳಿಪತ್ರಕರ್ತರ ಬಂಧನ: ಯೋಗಿಯ ಉತ್ತರಪ್ರದೇಶ ಸರ್ಕಾರಕ್ಕೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್

ಪತ್ರಕರ್ತರ ಬಂಧನ: ಯೋಗಿಯ ಉತ್ತರಪ್ರದೇಶ ಸರ್ಕಾರಕ್ಕೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್

ಒಂದೇ ವಾರದಲ್ಲಿ ಉತ್ತರ ಪ್ರದೇಶದಲ್ಲಿ 5 ಜನ ಅಮಾಯಕರನ್ನು ನಿಯಮಬಾಹಿರಬಾಗಿ ಬಂಧಿಸಲಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದು ತಕ್ಷಣ ಬಿಡುಗಡೆಗೆ ಆದೇಶಿಸಿದೆ.

- Advertisement -
- Advertisement -

| ಡಾ. ಸ್ವಾತಿ ಶುಕ್ಲ |

ಒಬ್ಬ ಮಹಿಳೆಯು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮದುವೆಯ ಪ್ರಸ್ತಾಪದ ವಿಡಿಯೋ ಹೊರಬಿದ್ದ ನಂತರ ಯುಪಿಯ ಪೊಲೀಸ್ ಬಂಧನದ ಸರಣಿ ಪ್ರಾರಂಭಿಸಿದೆ. ಈ ವರದಿ ಬರೆಯುವ ಸಮಯಕ್ಕೆ 5 ವ್ಯಕ್ತಿಗಳನ್ನು ಬಂಧಿಸಲಾಗಿದೆ. ಯುಪಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವಿರುದ್ಧ ಆಕ್ಷೇಪಾರ್ಹ ವರದಿಗಳನ್ನು ಹಂಚಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ. ಬಂಧಿತ ಐವರಲ್ಲಿ ಮೂವರು ಪತ್ರಕರ್ತರು, ಒಬ್ಬ ರೈತ ಮತ್ತು ಒಬ್ಬ ಗ್ರಾಮ ಮುಖ್ಯಸ್ಥ. ಈ ಕ್ರಮಗಳಿಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದು ತಕ್ಷಣ ಬಿಡುಗಡೆಗೆ ಆದೇಶಿಸಿದೆ.

ಘಟನಾಕ್ರಮ

ಮುಫ್ತಿಯಲ್ಲಿ ಬಂದು ಯುಪಿ ಪೊಲೀಸರು ಕಳೆದ ಶನಿವಾರದಂದು ಪ್ರಶಾಂತ್ ಕನೋಜಿಯಾ ಅವರನ್ನು ಅವರ ಮನೆಯಿಂದ ಬಂಧಿಸಿದರು. ಬಂಧನದ ನಂತರ ಪ್ರಶಾಂತ್ ಅವರ ಹೆಂಡತಿಗೆ ತನ್ನ ಗಂಡನನ್ನು ಉತ್ತರಪ್ರದೇಶಕ್ಕೆ ಕರೆದೊಯ್ಯಲಾಗಿದೆ ಹಾಗು ಅಲ್ಲಿ ಅವರನ್ನು ಬಂಧಿಸಲಾಗಿದೆ ಎನ್ನುವ ಸುದ್ದಿ ಬಂತು. ಪ್ರಶಾಂತ್ ಅವರ ಅಪರಾಧ – ಒಬ್ಬ ಮಹಿಳೆಯು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮದುವೆಯ ಪ್ರಸ್ತಾಪವನ್ನಿಡುವ ವಿಡಿಯೋ ಅನ್ನು ತಮ್ಮ ಟ್ವಿಟರ್ ಖಾತೆಯಿಂದ ಹಂಚಿದ್ದು. ಲಖನೌನ ಹಜರತ್ ಗಂಜ್ ಪೊಲೀಸ್ ಠಾಣೆಯಲ್ಲಿ ಅಲ್ಲಿಯ ಅಧಿಕಾರಿಯು ಎಫ್ ಐ ಆರ್ ದಾಖಲಿಸಿದ್ದಾರೆ.

ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ಅದರಲ್ಲಿ ಒಬ್ಬ ಮಹಿಳೆ ಹಲವಾರು ಸುದ್ದಿ ವಾಹಿನಿಗಳ ವರದಿಗಾರರೊಂದಿಗೆ ಮಾತನಾಡುತ್ತ, ತಾನು ಮುಖ್ಯಮಂತ್ರಿಯೊಂದಿಗೆ ವಿಡಿಯೋ ಚಾಟ್ ಮೂಲಕ ಮಾತನಾಡುತ್ತಿದ್ದಳೆಂದು ಹೇಳಿಕೊಂಡಿದ್ದಾಳೆ ಹಾಗೂ ಈಗ ಮುಖ್ಯಮಂತ್ರಿ ತನ್ನೊಂದಿಗೆ ವಿವಾಹ ಮಾಡಿಕೊಳ್ಳುವರೇ ಎಂದು ಕೇಳಿದ್ದಾಳೆ.
ಇದಾದ ನಂತರ ನೇಷನ್ ಲೈವ್ ಸುದ್ದಿ ವಾಹಿನಿಯ ಮುಖ್ಯಸ್ಥ ಹಾಗೂ ಸಂಪಾದಕ ಇಶಿಕಾ ಸಿಂಗ್ ಮತ್ತು ಅನುಜ್ ಶುಕ್ಲಾ ಅವರನ್ನೂ ಬಂಧಿಸಲಾಗಿದೆ. ಆ ವಾಹಿನಿಯಲ್ಲಿ ಮೇಲೆ ಹೇಳಲಾದ ವಿಡಿಯೋ ಅನ್ನು ಬಿತ್ತರಿಸಿ ಅದರ ಬಗ್ಗೆ ಚರ್ಚೆ ಮಾಡಲಾಗಿತ್ತು.

ಈ ಬಂಧನಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 ಮತ್ತು ಐಟಿ ಅ್ಯಕ್ಟ್‍ನ ಸೆಕ್ಷನ್ 66 ರ ಅಡಿಯಲ್ಲಿ ಮಾಡಲಾಗಿದೆ. ಸೆಕ್ಷನ್ 500 ಮಾನಹಾನಿಗೆ ಸಂಬಂಧಿಸಿದೆ. ಇವು, ನಾನ್ ಕಾಗ್ನಿಸೆಬಲ್ ಅಪರಾಧಗಳಿವೆಯಾದುದರಿಂದ ಖುದ್ದು ಫಿರ್ಯಾದಿಯೇ ಪ್ರಕರಣ ದಾಖಲಿಸಬೇಕು. ಪೊಲೀಸ್ ತಾನೇ ಖುದ್ದಾಗಿ ಎಫ್‍ಐರ್ ದಾಖಲಿಸಿ ಕ್ರಮ ಕೈಗೊಳ್ಳುವಂತಿಲ್ಲ. ಇಂತಹ ಪ್ರಕರಣಗಳಲ್ಲಿ ವಾರಂಟ್ ಇಲ್ಲದೇ ಕನೋಜಿಯ ಅವರನ್ನು ಬಂಧಿಸುವಂತಿಲ್ಲ. 66ರ ಐಟ್ ಸೆಕ್ಷನ್ ಒಂದು ಕಂಪ್ಯೂಟರ್ ಸಿಸ್ಟಮ್ ಅನ್ನು ಅಪ್ರಾಮಾಣಿಕವಾಗಿ ಹಾನಿಗೊಳಿಸುವುದಕ್ಕೆ ಸಂಬಂಧಿಸಿದೆ. ಈ ಬಂಧನಗಳಲ್ಲಿ ಕಂಡುಬಂದಂತೆ, ದಂಡಸಂಹಿತೆಯ ಯಾವ ಸೆಕ್ಷನ್‍ಗಳೂ ಈ ಬಂಧನಗಳಿಗೆ ಅನ್ವಯವಾಗುವುದಿಲ್ಲ.

ಈ ಬಂಧನಗಳನ್ನು ಸಮರ್ಥಿಸಿಕೊಳ್ಳುತ್ತ ಯುಪಿ ಪೊಲೀಸರು ಭಾರತೀಯ ದಂಡ ಸಂಹಿತೆ 505 (ಸಾರ್ವಜನಿಕ ಸುವ್ಯವಸ್ಥೆಯನ್ನು ಕೆಡಿಸುವುದಕ್ಕೆ ಸಂಬಂಧಿಸಿದ್ದು) ಹಾಗೂ ಐಟಿ ಆ್ಯಕ್ಟ್‍ನ 67 ಸೆಕ್ಷನ್ (ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಅಶ್ಲೀಲ ವಿಷಯವನ್ನು ಪ್ರಕಟಿಸುವುದು) ಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ. ಒಂದು ಸಲ ಆ ವಿಡಿಯೊ ಅನ್ನು ನೋಡಿದರೆ ಸಾರ್ವಜನಿಕ ಸುವ್ಯವಸ್ಥೆಯನ್ನು ಕೆಡಿಸುವುದಾಗಲಿ ಅಥವಾ ಅಶ್ಲೀಲತೆಯಾಗಲಿ ಕಂಡುಬರುವುದಿಲ್ಲ.

ಟ್ವಿಟರ್‍ನಲ್ಲಿ ನೆಟ್ಟಿಗರು ಪ್ರಶಾಂತ್ ಕನೋಜಿಯಾ ಅವರನ್ನು ಬಿಡುಗಡೆ ಮಾಡುವಂತೆ ಅಭಿಯಾನ ಪ್ರಾರಂಭಿಸಿದ್ದಾರೆ. ಭಾರತದ ಸಂಪಾದಕರ ಗಿಲ್ಡ್ ಈ ಬಂಧನಗಳನ್ನು ಖಂಡಿಸಿದೆ.

ಕನೋಜಿಯಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಅವರ ಕುಟುಂದ ಸದಸ್ಯರು ಅವರನ್ನು ಬಿಡುಗಡೆ ಮಾಡುವಂತೆ ಸುಪ್ರೀಮ್ ಕೋರ್ಟಿ ಮೊರೆ ಹೊಕ್ಕಿದ್ದಾರೆ. ಅದೇ ಸಮಯದಲ್ಲಿ ಹಲವಾರು ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಪತ್ರಕರ್ತರ ಮೇಲೆ ಕೈಗೊಳ್ಳುತ್ತಿರುವ ಈ ಹತೋಟಿ ಕ್ರಮಗಳನ್ನು ಖಂಡಿಸಿ ಭಾರತೀಯ ಪ್ರೆಸ್ ಕ್ಲಬ್ ಎದುರುಗಡೆ ಪ್ರತಿಭಟನೆ ಮಾಡಿದ್ದಾರೆ. ವಿಚಿತ್ರವೇನೆಂದರೆ ಮುಖ್ಯವಾಹಿನಿಯ ಯಾವ ಮೀಡಿಯಾ ಹೌಸ್ ಗಳು ಈ ಪ್ರತಿಭಟನೆಯನ್ನು ವರದಿ ಮಾಡಿಲ್ಲ. ಕೊನೆಗೆ India Resists ಫೇಸ್ ಬುಕ್ ಲೈವ್ ಮೂಲಕ ಮಾತ್ರ ದೇಶದ ಜನರನ್ನು ತಲುಪಿದೆ.

ಪ್ರತಿಭಟನೆಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಬಂಧನಗಳು ಪತ್ರಕರ್ತರಿಗೆ ಮಾತ್ರ ಸೀಮಿತವಾಗದೇ, ಗೋಲಾ ಗ್ರಾಮದ ನಿವಾಸಿ ಪೀರ್ ಮೊಹಮ್ಮದ್ ಹಾಗೂ ಆ ಗ್ರಾಮದ ಮುಖ್ಯಸ್ಥ ಅಖ್ಲಾಕ್ ಅಹ್ಮದ್ ಅವರನ್ನು ಯೋಗಿ ಆದಿತ್ಯನಾಥ್ ಅವರ ವಿವಾಹದ ಅಣಕು ಆಮಂತ್ರಣ ಪತ್ರಿಕೆಯನ್ನು ಫೇಸ್‍ಬುಕ್‍ನಲ್ಲಿ ಹಂಚಿದ್ದಕ್ಕೆ ಅವರನ್ನೂ ಬಂಧಿಸಲಾಗಿದೆ. ಈ ಇಬ್ಬರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆ ಫೇಸ್‍ಬುಕ್ ಪೋಸ್ಟ್‍ನಲ್ಲಿ ಧರ್ಮೇಂದ್ರ ಭಾರತಿ ಅವರನ್ನು ಟ್ಯಾಗ್ ಮಾಡಲಾಗಿತ್ತು ಎನ್ನುವ ಕಾರಣಕ್ಕೇ ಅವರನ್ನೂ ಬಂಧಿಸಲಾಗಿದೆ.

ಪೊಲೀಸ್ ಸರಕಾರದ ಪ್ರತಿಷ್ಠಾಪನೆ
ಯೋಗಿ ಆದಿತ್ಯನಾಥ ಅವರು ಅಧಿಕಾರಕ್ಕೆ ಬಂದಾಗಿನಿಂದ ಪೊಲೀಸರಿಗೆ ಅಭಯ ಹಸ್ತ ನೀಡಿ ಒಂದು ಪೊಲೀಸ್ ಸರಕಾರವನ್ನು ರಚಿಸುವಲ್ಲಿ ಯುಪಿಯ ಆಡಳಿತ ಸಕ್ರಿಯವಾಗಿದೆ. ಯೋಗಿ ಸರಕಾರದ ಮೊದಲ ಹತ್ತು ತಿಂಗಳುಗಳು ಅ್ಯಂಟಿ ರೋಮಿಯೋ ಸ್ಕ್ವಾಡ್(ಪಡೆಗಳು), ಎನ್‍ಕೌಂಟರ್‍ಗಳು ಮತ್ತು ಗೋರಖಪುರದ ಹಸುಳೆಗಳ ಸಾವಿಗೆ ಕುಖ್ಯಾತಿ ಗಳಿಸಿತ್ತು. ಮಹಿಳೆಯರನ್ನು ಚುಡಾಯಿಸುವುರಿಂದ ಸುರಕ್ಷತೆ ನೀಡುವ ಹೆಸರಿನಲ್ಲಿ ಯುವಕ ಯುವತಿಯರಿಗೆ ಕಿರುಕುಳ ನೀಡುತ್ತ್ತ ನೈತಿಕ ಪೊಲೀಸ್‍ಗಿರಿಯನ್ನು ಈ ಪಡೆಗಳು ಮಾಡಿದವು. ಹೆಚ್ಚುತ್ತಿರುವ ಅಪರಾಧಕ್ಕೆ ಕಡಿವಾಣ ಹಾಕಲು ಪೊಲೀಸರಿಗೆ ಎನ್‍ಕೌಂಟರ್ ಮಾಡಲು ಅಭಯ ಹಸ್ತವನ್ನು ನೀಡಿ ಎನ್‍ಕೌಂಟರ್ ಸರಕಾರ ಎನ್ನುವ ಹೆಸರನ್ನು ಗಳಿಸಿತು.

2019ರ ವರೆಗೆ 3000 ಎನ್‍ಕೌಂಟರ್‍ಗಳನ್ನು ಮಾಡಿದ್ದನ್ನು ಸಾಧನೆಯೆಂಬಂತೆ ಬಿಂಬಿಸಲಾಗುತ್ತಿದೆ. ಮಾನವ ಹಕ್ಕು ಸಂಘಟನೆಗಳು ಈ ನಕಲಿ ಎನ್‍ಕೌಂಟರ್‍ಗಳ ಬಗ್ಗೆ ಆತಂಕ ವ್ಯಕ್ತಪಡಿಸಿವೆ.

ನಕಲಿ ಎನ್ ಕೌಂಟರ್ ಗಳ ಹೆಚ್ಚಿ ಮಾಹಿತಿಗೆ ವೈರ್ ಲೇಖನ ಇಲ್ಲಿ ಓದಿ

ನ್ಯೂಸ್ ಕ್ಲಿಕ್ ಲೇಖನ ಓದಿ

ಈ ಬಂಧನಗಳು, ಡಾ. ಕಫೀಲ್ ಖಾನ್ ಅವರನ್ನು ಅಮಾನತ್ತು ಗೊಳಿಸಿ ಅವರಿಗೆ ಕಿರುಕುಳ ಕೊಟ್ಟಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಆದ ಸಾವುಗಳಿಗೆ ಅವರ ಮೇಲೇ ಆಪಾದನೆ ಮಾಡಿದ್ದು, ಇವೆಲ್ಲವುಗಳು ಸಮಾಜಕ್ಕೆ ಇರುವ ತನ್ನ ಜವಾಬ್ದಾರಿಗಳಿಂದ ಯುಪಿಯ ಸರಕಾರ ಹೇಗೆ ಜಾರಿಕೊಂಡಿದೆ ಎನ್ನುವುದನ್ನು ತೋರಿಸುತ್ತವೆ.

2019ರ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿನಿಂದ ಯೋಗಿ ಆಡಳಿತಕ್ಕೆ ಇನ್ನಷ್ಟು ಕಸುವು ಬಂದಂತಾಗಿದೆ. ಕಳೆದ ಎರಡು ವರ್ಷಗಳಿಂದ ರಾಜ್ಯ ಸರಕಾರದ ಸಂಪೂರ್ಣ ಅಧಿಕಾರ ಬರಿ ಒಬ್ಬ ವ್ಯಕ್ತಿ ಯೋಗಿ ಆದಿತ್ಯನಾಥ ಅವರ ಕೈಯಲ್ಲಿದೆ. ಇಷ್ಟು ವರ್ಷ ಕಾಳಜಿಯಿಂದ ಸೃಷ್ಟಿಸಿದ ತನ್ನ ಇಮೇಜನ್ನು ಮುರಿಯವ ಬೆದರಿಕೆ ಒಡ್ಡುವ ವ್ಯಕ್ತಿಗಳನ್ನು ಶಿಕ್ಷಿಸಲು ಯಾವ ಮಟ್ಟಿಗೆ ಹೋಗಬಹುದು ಎನ್ನುವುದನ್ನು ಈ ನಕಲಿ ಆರೋಪಗಳ ಆಧಾರದ ಮೇಲೆ ಮಾಡಿದ ಬಂಧನಗಳು ತೋರಿಸುತ್ತವೆ.

ಅಧಿಕಾರದ ದುರುಪಯೋಗ ಮಾಡುವುದು ನಮ್ಮ ದೇಶಕ್ಕೆ ಹೊಸದಲ್ಲ. 2019ರ ಲೋಕಸಭೆ ಚುನಾವಣಗೆ ಮುಂಚೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚಿತ್ರವನ್ನು ವಿರೂಪಗೊಳಿಸಿದ್ದಕ್ಕಾಗಿ ಒಬ್ಬ ಬಿಜೆಪಿಯ ಕಾರ್ಯಕರ್ತನನ್ನು ಬಂಧಿಸಲಾಗಿತ್ತು. ಆದರೆ ಸುಪ್ರೀಮ್ ಕೋರ್ಟ್ ಈ ಪ್ರಕರಣವನ್ನು ತುರ್ತಾಗಿ ಗಮನಿಸಿದ್ದರಿಂದ ಆ ಕಾರ್ಯಕರ್ತನನ್ನು ಬಿಡುಗಡೆ ಮಾಡಬೇಕಾಯಿತು.

ಇಷ್ಟೆಲ್ಲಾ ನಡೆಯುತ್ತಿದ್ದರೂ ಕರ್ನಾಟಕದ ಮಾಧ್ಯಮಗಳು ಇವುಗಳನ್ನು ಖಂಡಿಸುವುದ ಇರಲಿ ಈ ಕುರಿತು ಸಣ್ಣ ಸುದ್ದಿ ಸಹ ಮಾಡುವುದಿಲ್ಲ. ಇಲ್ಲಿ ಕರ್ನಾಟಕದಲ್ಲಿ ಸನ್ನಿವೇಶ ಸಂಪೂರ್ಣ ವಿರುದ್ಧವಾಗಿದೆ. ಇಲ್ಲಿ ಟಿವಿ ಮಾಧ್ಯಮಗಳು ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿದ್ದು ಒಂದು ಪಕ್ಷದ ಪರವಾಗಿ ನೇರವಾಗಿ ಕೆಲಸ ಮಾಡುತ್ತಿವೆ. ವಯಕ್ತಿಕ ನಿಂದನೆ, ತೇಜೋವಧೆ ಮಾಡುವುದರಲ್ಲಿಯೇ ನಿರತವಾಗಿದ್ದು ಇವುಗಳ ವಿರುದ್ಧ ಯಾರಾದರೂ ಕೇಸು ದಾಖಲಿಸಿದರೂ ಸಹ ಎಮರ್ಜೆನ್ಸಿ ಘೋಷಣೆ ಆಗಿದೆ ಅನ್ನೋ ರೀತಿಯಲ್ಲಿ ವರ್ತಿಸುತ್ತಿವೆ. ಪತ್ರಿಕೋಧ್ಯಮದ ಲವಲೇಶವೂ ಇಲ್ಲಿನ ಟಿವಿ ಚಾನೆಲ್ ಗಳಿಗೆ ಗೊತ್ತಿಲ್ಲದಿರುವುದು ದುರಂತ.

ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ಸಮಸ್ಯೆ ಮುಂಚೆಯಿಂದಲೂ ಇದೆ. ಪುಸ್ತಕಗಳನ್ನು, ಸಿನೆಮಾಗಳನ್ನು ಹಾಗೂ ಸಾಮಾಜಿಕ ಜಾಲತಾಣಗಳ ವಿಷಯಗಳನ್ನು ಕಟ್ಟುನಿಟ್ಟಾದ ನೀತಿಗಳ ಅಡಿ ಪರಿಶೀಲಸಲಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರದ ಸೂಚ್ಯಾಂಕದಲ್ಲಿ ಭಾರತ ಪಾಕಿಸ್ತಾನಕ್ಕಿಂತ ಒಂದು ಸ್ಥಾನ ಮುಂದಿದೆ. ಹಾಗಾದರೆ ನಾವು ಪಾಕಿಸ್ತಾನಕ್ಕಿಂತಲೂ ಉತ್ತಮ ಎಂದು ಹೇಳಿಕೊಳ್ಳುವುದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...