Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಜನರಿಗೆ ಸುಖವನ್ನುಂಟುಮಾಡುವ ಸಮಸ್ತ ವಿಷಯಗಳ ಪುಸ್ತಕ

ಜನರಿಗೆ ಸುಖವನ್ನುಂಟುಮಾಡುವ ಸಮಸ್ತ ವಿಷಯಗಳ ಪುಸ್ತಕ

- Advertisement -
- Advertisement -

ಷಿಕಾರಿಪುರದಲ್ಲಿದ್ದಿರಬಹುದಾದ ಚಾವುಂಡರಾಯನ ಕಾಲ ಪ್ರಾಯಶಃ ಶಕ 969 ಕ್ರಿ. ಶ. 1042. ಈತ ರಚಿಸಿರುವ ಗ್ರಂಥದ ಹೆಸರೇ ಲೋಕೋಪಕಾರಂ. ಶ್ರವಣ ಬೆಳಗೊಳದ ಗೊಮ್ಮಟೇಶ್ವರನ ಕೆತ್ತಿಸಿದ ಚಾವುಂಡರಾಯನಿಗೂ ಮತ್ತು ಲೋಕೋಪಕಾರಂ ಗ್ರಂಥದ ಕರ್ತೃವಿಗೂ ಏನೂ ಸಂಬಂಧವಿಲ್ಲ. ಈತನ ಹೆಸರನ್ನು ಕೇಳಿ ಬಹುಶಃ ಜೈನ ಮತಸ್ಥನಿರಬೇಕೆಂದುಕೊಂಡರೆ ಅದೂ ಅಲ್ಲ. ಈತ ಸಕಲ ವಿದ್ಯಾ ಸಂಪನ್ನ ಬ್ರಾಹ್ಮಣ.

ಇನ್ನು ಈ ಶೀರ್ಷಿಕೆಯ ಪ್ರಕಾರ ಲೋಕ ಎಂದರೆ ಭೌತಿಕವಾದ ಜಗತ್ತಲ್ಲ. ಜನರೆಂದು ಅರ್ಥ. ಜನೋಪಕಾರ ಎನ್ನುವುದನ್ನೇ ಲೋಕೋಪಕಾರ ಎನ್ನುತ್ತಿದ್ದಾರೆ ಈ ಕರ್ತೃ.

ಈ ಭೂಮಂಡಲದಲ್ಲಿ ಜನ್ಮಿಸಿದ ಸಮಸ್ತ ಪ್ರಾಣಿಗಳಿಗೂ ಸುಖವು ಬೇಕು. ಹಾಗಾಗಿ ಜನರಿಗೆ ಸುಖವನ್ನು ಉಂಟುಮಾಡುವ ಸಮಸ್ತ ವಿಷಯಗಳನ್ನು ಈ ಪುಸ್ತಕವು ಒಳಗೊಂಡಿದೆ.

ಯಾವುದಪ್ಪಾ ಆ ವಿಷಯಗಳೆಂದರೆ, ವೃಕ್ಷಾರ್ಯುವೇದ, ಸೂಪಶಾಸ್ತ್ರ, ಪಶುಗಳಿಗೆ ವೈದ್ಯ, ಬಾಲ ವೈದ್ಯ, ಅಶ್ವ ವೈದ್ಯ, ಗಜವೈದ್ಯ, ನರಾದಿವೈದ್ಯ, ವಿಷವೈದ್ಯ, ಲೈಂಗಿಕ ಸಮಸ್ಯೆ, ಕೃಷಿ, ಪಶು ಸಾಕಣೆ, ಮನೆ ಮದ್ದು, ಜ್ಯೋತಿಷ್ಯ, ಶಕುನಗಳು; ಹೀಗೆ ಆ ಕಾಲಘಟ್ಟದಲ್ಲಿ ಜನರು ತಮ್ಮ ಸುಖಾನ್ವೇಷಣೆಯಲ್ಲಿ ಏನೇನಲ್ಲಾ ಅನುಸರಿಸುತ್ತಿದ್ದರೋ ಅಥವಾ ಅವಲಂಬಿಸುತ್ತಿದ್ದರೋ ಆ ವಿಷಯಗಳನ್ನೆಲ್ಲಾ ಈ ಪುಸ್ತಕವು ಒಳಗೊಂಡಿದೆ.

ಪುಸ್ತಕವು ಆಸಕ್ತಿಯಿಂದ ಕೂಡಿರುವುದೇಕೆಂದರೆ, ಆ ಕಾಲಘಟ್ಟದಲ್ಲಿ ಜನರು ಸಾಮಾನ್ಯವಾಗಿ ಪರಿಗಣಿಸುತ್ತಿದ್ದ ಮತ್ತು ಶ್ರದ್ಧೆಯನ್ನು ತೋರುತ್ತಿದ್ದ ವಿಷಯಗಳನ್ನೆಲ್ಲಾ ಬರಹಗಾರ ದಾಖಲು ಮಾಡಿದ್ದಾರೆ. ಆ ಜನರ ನಂಬಿಕೆಗಳು, ಆಸಕ್ತಿಗಳು, ಅಗತ್ಯಗಳು, ಅಭಿರುಚಿಗಳೆಲ್ಲಾ ಅನಾವರಣಗೊಳ್ಳುತ್ತಾ ಹೋಗುತ್ತವೆ.

ಉದಾಹರಣೆಗೊಂದು ನೋಡಿ, “ಒಂದೆಲದ, ಹೊನಗನ್ನೆ, ಅಮರ್ದುವಳ್ಳಿ, ಕೊಳುಗುಳಿಕೆ ಈ ಔಷಧಿಗಳಲ್ಲಿ ದೊರಕಿದ ಒಂದೊಂದರ ರಸಮಂ ಕೊಂಡು ಸಕ್ಕರೆಯಂ ಬೆರಸಿ ಕುಡಿಸಿದಡೆ ಪಿತ್ತಂ ಕಿಡುವುದು.”

ಪಿತ್ತ ಕಳಕೊಂಡರಾ, ಇನ್ನು ನಿಮ್ಮ ಮುಖವು ಚಂದ್ರನ ಕಾಂತಿಯಲ್ಲಿ ಹೊಳೆಯಬೇಕಾದರೆ, “ಜವೆ, ಕೋಷ್ಠಂ, ಲೋಧ್ರಂ ಇವುರೊಳಗೆ ಆವುದೊಂದು ದ್ಕೊರಕಿದುದಂ ಕೊಂಡು ಉದಕದಲ್ಲರೆದು ಮುಸುಡಂ ಪೂಸಲ್ ಮುಸುಡು ಚಂದ್ರನ ಮರ್ಯಾದೆಯಲ್ಲಿ ಕಾಂತಿಯಪ್ಪುದು – ಬೇಗಮಪ್ಪುದು.”

ಫೇರ್ ಅಂಡ್ ಲೌವ್ಲೀ ಜಾಹಿರಾತಿನಂತೆ ಇಲ್ಲಿ ಚಾವುಂಡರಾಯರೂ ಆಶ್ವಾಸನೆ ಕೊಡುತ್ತಾರೆ “ಬೇಗಮಪ್ಪುದು” ಎಂದು.

ಅತ್ಯಂತ ಕುತೂಹಲಕರವಾದ ವಿಷಯಗಳೆಂದರೆ ಭೂಮಿಯ ಮೇಲ್ಭಾಗವನ್ನು ನೋಡಿ, ಅಲ್ಲಿರುವ ಗಿಡಗಳು, ಮರಗಳು ಯಾವುವು, ಹೇಗೆ ಬೆಳೆದಿವೆ ಎಂಬುದನ್ನೆಲ್ಲಾ ನೋಡಿ, ಬಾವಿ ತೋಡಲು ನೀರಿನ ನೆಲೆಯನ್ನು ಪತ್ತೆ ಹಚ್ಚುವುದು.

ತರಾವರಿ ಸುಗಂಧಗಳ ಗಟ್ಟಿಯಾದ ಮೊಸರು ಮಾಡುವುದು, ಕಡಿಮೆ ವಸ್ತುಗಳನ್ನು ಬಳಸಿ ಅಡಿಗೆಯನ್ನು ರುಚಿಕರವಾಗಿ ಮಾಡುವುದು, ತರಕಾರಿಗಳನ್ನು, ಹಣ್ಣುಗಳನು ಗುರುತಿಸುವ ಬಗೆ ಇತ್ಯಾದಿಗಳನ್ನೆಲ್ಲಾ ವಿವರಿಸಿದ್ದಾರೆ.

ಪ್ರಾಣಿಗಳ ಮೇಲಿನ ದಯೆ, ಗಿಡಗಳನ್ನು ಗುರುತಿಸುವುದು, ಕೃಷಿಗೆ ಅಗತ್ಯ ಸಲಹೆ; ಹೀಗೆ ಎಲ್ಲಾ ವಿಷಯಗಳಲ್ಲೂ ಪಾರಂಗತರಾಗದಿದ್ದರೂ ತಕ್ಷಣಕ್ಕೆ ಒಂದಿಷ್ಟುಮಾಹಿತಿಯನ್ನು ಪಡೆದುಕೊಂಡು ಕೆಲಸಕ್ಕೆ ತೊಡಗಲು ಸಾಧ್ಯವಾಗುವ ಹಾಗೆ ವಿಷಯಗಳು ಹೆಣೆಯಲ್ಪಟ್ಟಿವೆ. ಒಂದು ಮನೆ ಎಂದರೆ ತಕ್ಷಣಕ್ಕೆ ಏನಾದರೂ ಜ್ವರ, ಗಾಯ, ಅಥವಾ ವಿಷ ಸೇವನೆ ಎಂತಾದರೂ ಆಗಿಬಿಡಬಹುದು. ಅದಕ್ಕೆ ಈ ಪುಸ್ತಕ ಮನೆಗಳಲ್ಲಿರಬೇಕು ಎಂಬುದು ಗ್ರಂಥಕರ್ತನ ಆಶಯ.

ಗೃಹಸಂಗಾತಿ ಎಂಬ ಪುಸ್ತಕವೊಂದು ಆಧುನಿಕ, ಸರಳ ಕನ್ನಡದಲ್ಲಿದೆ. ಅದೂ ಕೂಡಾ ಹೀಗೆಯೇ. ಸಾವಿರ ವರ್ಷಗಳ ಹಿಂದೆ ಕನ್ನಡದಲ್ಲೊಬ್ಬರು ಈ ಆಲೋಚನೆ, ಆಶಯದಲ್ಲಿ ಒಂದು ಗ್ರಂಥ ರಚನೆ ಮಾಡಿರುವುದು ನಿಜಕ್ಕೂ ವಿಶೇಷ. ಪುಸ್ತಕವನ್ನು ಓದುತ್ತಿದ್ದರೆ ಆ ಜನರ ಆಸಕ್ತಿ, ಅಭಿರುಚಿ, ಚಾತುರ್ಯಗಳೆಲ್ಲಾ ತಿಳಿಯುತ್ತಾ ಹೋಗುತ್ತದೆ. ಖುಷಿಯಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ ಈ ಪುಸ್ತಕದ ಸಂಪಾದಕರು ಹೆಚ್ ಶೇಷ ಅಯ್ಯಂಗಾರ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...