Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಜನರಿಗೆ ಸುಖವನ್ನುಂಟುಮಾಡುವ ಸಮಸ್ತ ವಿಷಯಗಳ ಪುಸ್ತಕ

ಜನರಿಗೆ ಸುಖವನ್ನುಂಟುಮಾಡುವ ಸಮಸ್ತ ವಿಷಯಗಳ ಪುಸ್ತಕ

- Advertisement -
- Advertisement -

ಷಿಕಾರಿಪುರದಲ್ಲಿದ್ದಿರಬಹುದಾದ ಚಾವುಂಡರಾಯನ ಕಾಲ ಪ್ರಾಯಶಃ ಶಕ 969 ಕ್ರಿ. ಶ. 1042. ಈತ ರಚಿಸಿರುವ ಗ್ರಂಥದ ಹೆಸರೇ ಲೋಕೋಪಕಾರಂ. ಶ್ರವಣ ಬೆಳಗೊಳದ ಗೊಮ್ಮಟೇಶ್ವರನ ಕೆತ್ತಿಸಿದ ಚಾವುಂಡರಾಯನಿಗೂ ಮತ್ತು ಲೋಕೋಪಕಾರಂ ಗ್ರಂಥದ ಕರ್ತೃವಿಗೂ ಏನೂ ಸಂಬಂಧವಿಲ್ಲ. ಈತನ ಹೆಸರನ್ನು ಕೇಳಿ ಬಹುಶಃ ಜೈನ ಮತಸ್ಥನಿರಬೇಕೆಂದುಕೊಂಡರೆ ಅದೂ ಅಲ್ಲ. ಈತ ಸಕಲ ವಿದ್ಯಾ ಸಂಪನ್ನ ಬ್ರಾಹ್ಮಣ.

ಇನ್ನು ಈ ಶೀರ್ಷಿಕೆಯ ಪ್ರಕಾರ ಲೋಕ ಎಂದರೆ ಭೌತಿಕವಾದ ಜಗತ್ತಲ್ಲ. ಜನರೆಂದು ಅರ್ಥ. ಜನೋಪಕಾರ ಎನ್ನುವುದನ್ನೇ ಲೋಕೋಪಕಾರ ಎನ್ನುತ್ತಿದ್ದಾರೆ ಈ ಕರ್ತೃ.

ಈ ಭೂಮಂಡಲದಲ್ಲಿ ಜನ್ಮಿಸಿದ ಸಮಸ್ತ ಪ್ರಾಣಿಗಳಿಗೂ ಸುಖವು ಬೇಕು. ಹಾಗಾಗಿ ಜನರಿಗೆ ಸುಖವನ್ನು ಉಂಟುಮಾಡುವ ಸಮಸ್ತ ವಿಷಯಗಳನ್ನು ಈ ಪುಸ್ತಕವು ಒಳಗೊಂಡಿದೆ.

ಯಾವುದಪ್ಪಾ ಆ ವಿಷಯಗಳೆಂದರೆ, ವೃಕ್ಷಾರ್ಯುವೇದ, ಸೂಪಶಾಸ್ತ್ರ, ಪಶುಗಳಿಗೆ ವೈದ್ಯ, ಬಾಲ ವೈದ್ಯ, ಅಶ್ವ ವೈದ್ಯ, ಗಜವೈದ್ಯ, ನರಾದಿವೈದ್ಯ, ವಿಷವೈದ್ಯ, ಲೈಂಗಿಕ ಸಮಸ್ಯೆ, ಕೃಷಿ, ಪಶು ಸಾಕಣೆ, ಮನೆ ಮದ್ದು, ಜ್ಯೋತಿಷ್ಯ, ಶಕುನಗಳು; ಹೀಗೆ ಆ ಕಾಲಘಟ್ಟದಲ್ಲಿ ಜನರು ತಮ್ಮ ಸುಖಾನ್ವೇಷಣೆಯಲ್ಲಿ ಏನೇನಲ್ಲಾ ಅನುಸರಿಸುತ್ತಿದ್ದರೋ ಅಥವಾ ಅವಲಂಬಿಸುತ್ತಿದ್ದರೋ ಆ ವಿಷಯಗಳನ್ನೆಲ್ಲಾ ಈ ಪುಸ್ತಕವು ಒಳಗೊಂಡಿದೆ.

ಪುಸ್ತಕವು ಆಸಕ್ತಿಯಿಂದ ಕೂಡಿರುವುದೇಕೆಂದರೆ, ಆ ಕಾಲಘಟ್ಟದಲ್ಲಿ ಜನರು ಸಾಮಾನ್ಯವಾಗಿ ಪರಿಗಣಿಸುತ್ತಿದ್ದ ಮತ್ತು ಶ್ರದ್ಧೆಯನ್ನು ತೋರುತ್ತಿದ್ದ ವಿಷಯಗಳನ್ನೆಲ್ಲಾ ಬರಹಗಾರ ದಾಖಲು ಮಾಡಿದ್ದಾರೆ. ಆ ಜನರ ನಂಬಿಕೆಗಳು, ಆಸಕ್ತಿಗಳು, ಅಗತ್ಯಗಳು, ಅಭಿರುಚಿಗಳೆಲ್ಲಾ ಅನಾವರಣಗೊಳ್ಳುತ್ತಾ ಹೋಗುತ್ತವೆ.

ಉದಾಹರಣೆಗೊಂದು ನೋಡಿ, “ಒಂದೆಲದ, ಹೊನಗನ್ನೆ, ಅಮರ್ದುವಳ್ಳಿ, ಕೊಳುಗುಳಿಕೆ ಈ ಔಷಧಿಗಳಲ್ಲಿ ದೊರಕಿದ ಒಂದೊಂದರ ರಸಮಂ ಕೊಂಡು ಸಕ್ಕರೆಯಂ ಬೆರಸಿ ಕುಡಿಸಿದಡೆ ಪಿತ್ತಂ ಕಿಡುವುದು.”

ಪಿತ್ತ ಕಳಕೊಂಡರಾ, ಇನ್ನು ನಿಮ್ಮ ಮುಖವು ಚಂದ್ರನ ಕಾಂತಿಯಲ್ಲಿ ಹೊಳೆಯಬೇಕಾದರೆ, “ಜವೆ, ಕೋಷ್ಠಂ, ಲೋಧ್ರಂ ಇವುರೊಳಗೆ ಆವುದೊಂದು ದ್ಕೊರಕಿದುದಂ ಕೊಂಡು ಉದಕದಲ್ಲರೆದು ಮುಸುಡಂ ಪೂಸಲ್ ಮುಸುಡು ಚಂದ್ರನ ಮರ್ಯಾದೆಯಲ್ಲಿ ಕಾಂತಿಯಪ್ಪುದು – ಬೇಗಮಪ್ಪುದು.”

ಫೇರ್ ಅಂಡ್ ಲೌವ್ಲೀ ಜಾಹಿರಾತಿನಂತೆ ಇಲ್ಲಿ ಚಾವುಂಡರಾಯರೂ ಆಶ್ವಾಸನೆ ಕೊಡುತ್ತಾರೆ “ಬೇಗಮಪ್ಪುದು” ಎಂದು.

ಅತ್ಯಂತ ಕುತೂಹಲಕರವಾದ ವಿಷಯಗಳೆಂದರೆ ಭೂಮಿಯ ಮೇಲ್ಭಾಗವನ್ನು ನೋಡಿ, ಅಲ್ಲಿರುವ ಗಿಡಗಳು, ಮರಗಳು ಯಾವುವು, ಹೇಗೆ ಬೆಳೆದಿವೆ ಎಂಬುದನ್ನೆಲ್ಲಾ ನೋಡಿ, ಬಾವಿ ತೋಡಲು ನೀರಿನ ನೆಲೆಯನ್ನು ಪತ್ತೆ ಹಚ್ಚುವುದು.

ತರಾವರಿ ಸುಗಂಧಗಳ ಗಟ್ಟಿಯಾದ ಮೊಸರು ಮಾಡುವುದು, ಕಡಿಮೆ ವಸ್ತುಗಳನ್ನು ಬಳಸಿ ಅಡಿಗೆಯನ್ನು ರುಚಿಕರವಾಗಿ ಮಾಡುವುದು, ತರಕಾರಿಗಳನ್ನು, ಹಣ್ಣುಗಳನು ಗುರುತಿಸುವ ಬಗೆ ಇತ್ಯಾದಿಗಳನ್ನೆಲ್ಲಾ ವಿವರಿಸಿದ್ದಾರೆ.

ಪ್ರಾಣಿಗಳ ಮೇಲಿನ ದಯೆ, ಗಿಡಗಳನ್ನು ಗುರುತಿಸುವುದು, ಕೃಷಿಗೆ ಅಗತ್ಯ ಸಲಹೆ; ಹೀಗೆ ಎಲ್ಲಾ ವಿಷಯಗಳಲ್ಲೂ ಪಾರಂಗತರಾಗದಿದ್ದರೂ ತಕ್ಷಣಕ್ಕೆ ಒಂದಿಷ್ಟುಮಾಹಿತಿಯನ್ನು ಪಡೆದುಕೊಂಡು ಕೆಲಸಕ್ಕೆ ತೊಡಗಲು ಸಾಧ್ಯವಾಗುವ ಹಾಗೆ ವಿಷಯಗಳು ಹೆಣೆಯಲ್ಪಟ್ಟಿವೆ. ಒಂದು ಮನೆ ಎಂದರೆ ತಕ್ಷಣಕ್ಕೆ ಏನಾದರೂ ಜ್ವರ, ಗಾಯ, ಅಥವಾ ವಿಷ ಸೇವನೆ ಎಂತಾದರೂ ಆಗಿಬಿಡಬಹುದು. ಅದಕ್ಕೆ ಈ ಪುಸ್ತಕ ಮನೆಗಳಲ್ಲಿರಬೇಕು ಎಂಬುದು ಗ್ರಂಥಕರ್ತನ ಆಶಯ.

ಗೃಹಸಂಗಾತಿ ಎಂಬ ಪುಸ್ತಕವೊಂದು ಆಧುನಿಕ, ಸರಳ ಕನ್ನಡದಲ್ಲಿದೆ. ಅದೂ ಕೂಡಾ ಹೀಗೆಯೇ. ಸಾವಿರ ವರ್ಷಗಳ ಹಿಂದೆ ಕನ್ನಡದಲ್ಲೊಬ್ಬರು ಈ ಆಲೋಚನೆ, ಆಶಯದಲ್ಲಿ ಒಂದು ಗ್ರಂಥ ರಚನೆ ಮಾಡಿರುವುದು ನಿಜಕ್ಕೂ ವಿಶೇಷ. ಪುಸ್ತಕವನ್ನು ಓದುತ್ತಿದ್ದರೆ ಆ ಜನರ ಆಸಕ್ತಿ, ಅಭಿರುಚಿ, ಚಾತುರ್ಯಗಳೆಲ್ಲಾ ತಿಳಿಯುತ್ತಾ ಹೋಗುತ್ತದೆ. ಖುಷಿಯಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ ಈ ಪುಸ್ತಕದ ಸಂಪಾದಕರು ಹೆಚ್ ಶೇಷ ಅಯ್ಯಂಗಾರ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...