Homeಮುಖಪುಟನಿಮ್ಮಲ್ಲಿರುವ ನಾಯಕತ್ವ ಗುಣವನ್ನು ಸದ್ಬಳಕೆ ಮಾಡಿಕೊಳ್ಳುವುದು ಹೇಗೆ ಗೊತ್ತೆ?

ನಿಮ್ಮಲ್ಲಿರುವ ನಾಯಕತ್ವ ಗುಣವನ್ನು ಸದ್ಬಳಕೆ ಮಾಡಿಕೊಳ್ಳುವುದು ಹೇಗೆ ಗೊತ್ತೆ?

- Advertisement -
- Advertisement -

ಜೀವನ ಕಲೆಗಳು: ಅಂಕಣ- 23

ನಾಯಕತ್ವದ ಕಲೆ

ನಾಯಕತ್ವ ಎನ್ನುವುದು ಒಂದು ಕಲೆಯಲ್ಲ. ಕಲೆಗಳ ಒಂದು ಚಲಿಸುವ ಭಂಡಾರ. ನಾಯಕ ಎಂದ ಕೂಡಲೇ ರಾಜಕೀಯ ನೇತಾರರ, ಮತ ಯಾಚನೆಯ ವೇಳೆಯ, ಚಿತ್ರಣ ನಮ್ಮ ಕಣ್ಣ ಮುಂದೆ ಬರಬೇಕಿಲ್ಲ, ಏಕೆಂದರೆ ಅವರಲ್ಲಿ ಹೆಚ್ಚು ಜನ ನಿಜವಾದ ಅರ್ಥದಲ್ಲಿ ನಾಯಕರೇ ಅಲ್ಲ.

ನಾಯಕ ಎಂದರೆ ಸಮಾಜದಲ್ಲಿ ತಮ್ಮ ವ್ಯಕ್ತಿತ್ವದಿಂದ, ತಮ್ಮ ಕೆಲಸದಿಂದ ಉತ್ತಮ ಮಾದರಿಯಾದ, ಜನಸಾಮಾನ್ಯರು ಸ್ವ-ಇಚ್ಛೆಯಿಂದ ಹಿಂಬಾಲಿಸಬಹುದಂತಹ ವ್ಯಕ್ತಿ. ಕೇವಲ ಹಿಂಬಾಲಕರಿದ್ದಾರೆಂಬ ಕಾರಣಕ್ಕೆ ಯಾರೂ ನಾಯಕರಾಗುವುದಿಲ್ಲ.

ನಾಯಕರಿಗೆ ವಯಸ್ಸು, ವಿದ್ಯೆ, ವೃತ್ತಿ, ವಂಶ, ಜಾತಿ, ಧರ್ಮ, ಲಿಂಗ, ಹಣಇವುಗಳ ಕನಿಷ್ಠ ಅಥವಾ ಗರಿಷ್ಠ ಇತಿಮಿತಿ ಎಂಬುದೇ ಇಲ್ಲ. ಈ ಅಂಶಗಳ ಇರುವಿಕೆ ಅಥವಾ ಕೊರತೆ ಅವರನ್ನು ನಾಯಕರಾಗದಂತೆ ತಡೆಯುವುದಿಲ್ಲ ಆದರೆ ಕೆಲವೊಮ್ಮೆ ಮತ್ತು ಕೆಲವೊಂದು ಕ್ಷೇತ್ರ/ಸನ್ನಿವೇಶದಲ್ಲಿ, ಈ ಅಂಶಗಳು ಅವರಿಗೆ ಅನುಕೂಲಕರ ಎಂದು ಕಂಡು ಬಂದರೂ, ಕೇವಲ ಇವುಗಳ ಆಧಾರದ ಮೇಲೆ ಯಾರೂ ನಾಯಕರಾಗಲು ಸಾಧ್ಯವಿಲ್ಲ, ಒಂದು ವೇಳೆ ಆಗಿದ್ದರೆ, ಅವರು ಇಡೀ ಸಮಾಜಕ್ಕೆ ಪ್ರಯೋಜನವಾಗುವಂತಹ ನಾಯಕರಂತೂ ಆಗುವುದಿಲ್ಲ, ಕೇವಲ ಒಂದು ವರ್ಗಕ್ಕೆ ಪ್ರಯೋಜನಕಾರಿಯಾಗಬಹುದು.

ಒಂದು ಕ್ಷೇತ್ರದಲ್ಲಿ ನಾಯಕರೆಂದೆನಿಸಿಕೊಂಡವರು ಇನ್ನೊಂದು ಕ್ಷೇತ್ರದಲ್ಲೂ ನಾಯಕರಾಗಿರುತ್ತಾರೆ ಎನ್ನುವ ಖಾತರಿ ಏನೂ ಇಲ್ಲ. ನಮ್ಮ ದೇಶದ ಎಲ್ಲಾ ಕ್ಷೇತ್ರಗಳಲ್ಲಿ, ನಾಯಕರ ವಿಪರೀತ ಕೊರತೆ ಇದೆ ಮತ್ತು ಎಲ್ಲರಿಗೂ ನಾಯಕರಾಗುವ ಅರ್ಹತೆ/ಸಾಧ್ಯತೆ ಇದೆ, ಆದರೂ ಇಚ್ಛಾಶಕ್ತಿಯ ಕೊರತೆಯಿಂದ ಎಲ್ಲರೂ ನಾಯಕರಾಗುವುದಿಲ್ಲ.

ನಾಯಕತ್ವವನ್ನು ಸಂದರ್ಭ (ಸಿಚ್ಯುಏಷನಲ್), ವ್ಯವಹಾರ (ಟ್ರಾನ್ಸಾಕ್ಷನಲ್) ಮತ್ತು ಪರಿವರ್ತನೆ (ಟ್ರಾನ್ಸ್ಫ಼ಾರ್ಮೇಟಿವ್) ಮುಂತಾದ ಮೂರು ವಿಧದಲ್ಲಿ ವಿಂಗಡಿಸಿ ವಿವರಿಸಬಹುದು.

·         ಸಂದರ್ಭ ಎದುರಾದಾಗ, ಅವಕಾಶ ಸಿಕ್ಕಾಗ, ನಾಯಕತ್ವ ತೋರಿಸಬಲ್ಲ ವ್ಯಕ್ತಿ ಸಾಂದರ್ಭಿಕ ನಾಯಕ.

·         ಯಾವುದೇ ವ್ಯವಹಾರಗಳನ್ನು ಸಮರ್ಪಕವಾಗಿ ನಿರ್ವಹಿಸಬಲ್ಲವರು ವ್ಯವಹಾರಿಕ ನಾಯಕರು. ಉದಾ: ಕಂಪನಿಯ ವ್ಯವಸ್ಥಾಪಕರು, ಮಾರುಕಟ್ಟೆ ಗಟ್ಟಿಗರು, ಇತ್ಯಾದಿ. ಇದರಲ್ಲಿ ಮೇಲ್ವಿಚಾರಣೆ, ಸಂಸ್ಥೆ, ಪ್ರದರ್ಶನ, ಲಾಭ-ನಷ್ಟ, ಇನಾಮು-ದಂಡನೆ, ಸೋಲು—ಗೆಲುವು ಮುಂತಾದ ಶಬ್ದಗಳ ಪ್ರಯೋಗ ಹೆಚ್ಚಿರುತ್ತದೆ.

·         ವ್ಯವಸ್ಥೆಯಲ್ಲಿ ಪರಿವರ್ತನೆ ತರಬಲ್ಲ, ಸಮಾಜವನ್ನು ಬದಲಾಯಿಸಬಲ್ಲವರು ಪರಿವರ್ತನಾ ನಾಯಕರು.

ಕೆಲವು ಕಲೆಗಳು ಒಂದು ತರಹದ ನಾಯಕತ್ವಕ್ಕೆ ಅತ್ಯಂತ ಪ್ರಯೋಜನಕಾರಿ ಎನಿಸಿದರೆ, ಇನ್ನು ಕೆಲವು ನಿಶ್ಪ್ರಯೋಜಕ ಎನಿಸಬಹುದು. ಆದರೆ ಸಮಾಜಕ್ಕೆ ಮೂರೂ ತರಹದ ನಾಯಕರ ಅವಶ್ಯಕತೆ ಇದೆ. ಓರ್ವ ವ್ಯಕ್ತಿ ಒಂದು, ಎರಡು ಅಥವಾ ಮೂರೂ ರೀತಿಯ ನಾಯಕ ಆಗಲೂ ಬಹುದು.

ನಾಯಕತ್ವ ಮಾನವ ನಡತೆಯ ಒಂದು ಲಕ್ಷಣವಾಗಿರುವುದರಿಂದ ಅವರ ಲಾಲನೆ-ಪಾಲನೆ, ಸಂಸ್ಕೃತಿ, ಹುಟ್ಟಿ ಬೆಳೆದ ವಾತಾವರಣ ಎಲ್ಲವೂ ಅವರ ನಡತೆಯ ಮೇಲೆ ತಮ್ಮ ಛಾಪು ಮೂಡಿಸಿರುತ್ತದೆ. ಇದರಿಂದಾಗಿ ಕೆಲವು ಕಲೆಗಳು ಅವರಿಗೆ ಸಹಜವಾಗಿಯೇ ಬಂದಿರಬಹುದು ಅಥವಾ ಕಲಿಯಲು ಸುಲಭವಾಗಬಹುದು. ಇಂತಹವರನ್ನು ಕೆಲವೊಮ್ಮೆ ಹುಟ್ಟು ನಾಯಕರು (ಬಾರ್ನ್ ಲೀಡರ್ಸ್) ಎನ್ನಬಹುದು.

ಹಾಗಾದರೆ ಜನಸಾಮಾನ್ಯರಿಗೆ ನಾಯಕರಾಗಲು ಯಾವ ಕಲೆ ಇರಬೇಕು ಅಥವಾ ಕಲಿಯಬೇಕು ನೋಡೋಣ.

ಅಂತರ್ಜಾಲ (ಇಂಟರ್ನೆಟ್) ಜಾಲಿಸಿ ನೋಡಿದರೆ ನಿಮಗೆ ನಾಯಕತ್ವಕ್ಕೆ ಬೇಕಾದ 5 ಕಲೆ, 10, ಕಲೆ, 50 ಕಲೆ, 100 ಕಲೆಗಳ ಪಟ್ಟಿಯ ಜೊತೆಗೆ ಬೇಕಾದಷ್ಟು, ಬೇಡವಾದಷ್ಟು ಮಾಹಿತಿ ಸಿಗಬಹುದು. ನನಗೆ “ಮುಖ್ಯ”ಎಂದೆನಿಸಿದ ಕೆಲವೊಂದು ಕಲೆಗಳನ್ನು ಮಾತ್ರ ತಿಳಿಸುತ್ತೇನೆ.

ಮೊಟ್ಟಮೊದಲಿಗೆ ಬೇಕಾಗಿರುವುದು ಮುನ್ನಡೆ (ಇನಿಷಿಯೇಟಿವ್), ಮೊದಲ ಹೆಜ್ಜೆಯ ಇಚ್ಛಾಶಕ್ತಿ ಒಳಗಿನಿಂದ ಬರಬೇಕು. ಅದಕ್ಕೆ ವಿಯೋಜಕ ಶಕ್ತಿ (ಟ್ರಿಗರ್) ಯಾವುದೋ ಘಟನೆ, ಸನ್ನಿವೇಶ, ಆಸಕ್ತಿ, ಮುಂತಾದವು ಇರಬಹುದು ಆದರೆ ಆ ಕಿಡಿ ಒಳಗಿನಿಂದ ಹೊತ್ತಿ ಉರಿಯಬೇಕು. ಇದನ್ನು ಸ್ವ-ಪ್ರೇರೇಪಣೆ ಎನ್ನಲೂ ಬಹುದು.

ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಮತ್ತು ನಿಷ್ಠೆ: ಪ್ರಾಮಾಣಿಕತೆಗೆ ಪರ್ಯಾಯವಿಲ್ಲ. ನಮ್ಮ ನಾಯಕರು ಪ್ರಾಮಾಣಿಕರಲ್ಲದಿದ್ದರೆ ಅಂತಹವರ ಹಿಂದೆ ಹೋಗುವುದರಲ್ಲಿ ಅರ್ಥವಿಲ್ಲ. ಅದೇ ರೀತಿ ಕೆಲಸದ ಬಗ್ಗೆ ನಿಷ್ಠೆಯೂ ಇರಬೇಕು. ಇದರಿಂದ ಅವರಲ್ಲಿ ಮಿಕ್ಕವರಿಗೆ ವಿಶ್ವಾಸ ಮೂಡುತ್ತದೆ.

ಇತರರನ್ನು ಪ್ರೇರೇಪಿಸುವ ಕಲೆ: ನಮ್ಮ ನಾಯಕರಿಗೆ ದೂರದೃಷ್ಟಿ (ವಿಷನ್) ಇರಬೇಕು, ಅದರತ್ತ ಅವರು ತಮ್ಮನ್ನು ಮತ್ತು ಹಿಂಬಾಲಕರನ್ನು ಪ್ರೇರೇಪಿಸಿ, ಬೊಮ್ಮನಹಳ್ಳಿಯ ಕಿಂದರ ಜೋಗಿಯಂತೆ, ಮುಂದಕ್ಕೆ ಕರೆದುಕೊಂಡು ಹೋಗುವ ಕೆಲಸ ಸದಾ ಮಾಡುತ್ತಿರಬೇಕು.

ಬದ್ಧತೆ ಮತ್ತು ಉತ್ಸಾಹ: ತಮ್ಮ ಕೆಲಸದ ಪ್ರತಿ ನಾಯಕರಿಗೆ ಬದ್ಧತೆ ಇರಬೇಕು. ಕೆಲಸ ಮಾಡದಿರಲು ನೂರೆಂಟು ಕಾರಣಗಳು ಸಿಗಬಹುದು ಆದರೆ ಇದು ನಮ್ಮ ಕೆಲಸ ಎಂಬ ಬದ್ಧತೆ ಇದ್ದರೆ ಅದನ್ನು ಮಾಡಿಯೇ ತೀರಬೇಕು. ಯಾರೂ ಆಂಶಿಕ (ಪಾರ್ಟ್-ಟೈಂ) ನಾಯಕರಾಗಲು ಸಾಧ್ಯವಿಲ್ಲ, ಆಂಶಿಕ ಹಿಂಬಾಲಕ ಬೇಕಾದರೆ ಆಗಬಹುದು. ಅದೇ ರೀತಿ ಅವರಲ್ಲಿ ಉತ್ಸಾಹ ತುಂಬಿ ತುಳುಕುತ್ತಿರಬೇಕು, ಅದರಿಂದ ಮಿಕ್ಕವರಿಗೂ ಸ್ಪೂರ್ತಿ ಬರುತ್ತದೆ.

ಸಂವಹನೆಯ ಕಲೆ: ಯಾರಿಗೆ, ಏನು, ಯಾವಾಗ ಹೇಳಬೇಕು ಅಥವಾ ವ್ಯಕ್ತ ಪಡಿಸಬೇಕು ಅದನ್ನು ಸಮರ್ಪಕವಾಗಿ ತಿಳಿಸುವ ಕಲೆ ಅವರಲ್ಲಿರಬೇಕು. ಸಂವಹನೆ ಕಲೆಯ ಬಗ್ಗೆ ಈಗಾಗಲೇ ತಿಳಿಸಿದ್ದೇನೆ.

ನಿರ್ಧಾರ ತೆಗೆದುಕೊಳ್ಳುವ ಕಲೆ: ಸರಿಯಾದ ಸಮಯಕ್ಕೆ, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಜಾಣತನ, ಧೈರ್ಯ ನಾಯಕರಲ್ಲಿರಬೇಕು. ತೆಗೆದುಕೊಂಡ ನಿರ್ಧಾರದ ಪರಿಣಾಮ ಎದುರಿಸುವ ಶಕ್ತಿಯೂ ಇರಬೇಕು. ಈ ಕಲೆಯ ಬಗ್ಗೆಯೂ ಈಗಾಗಲೇ ವಿವರಿಸಿದ್ದೇನೆ.

ಉತ್ತರದಾಯಿತ್ವ: ತಾವು ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿಯೂ ಉತ್ತರದಾಯಿಯೂ ಆಗಿರಬೇಕು. ಹೊಣೆಗಾರಿಕೆಯನ್ನು ಇನ್ನೊಬ್ಬರ ಹೆಗಲಿಗೆ ಹಾಕುವವರು ಒಳ್ಳೆಯ ನಾಯಕರಲ್ಲ. ಅವಶ್ಯಕತೆ ಬಿದ್ದಲ್ಲಿ ತಲೆದಂಡ ತೆರಲೂ ಸಿದ್ಧರಾಗಿರಬೇಕು.

ಅಧಿಕಾರ ಇತರರಿಗೆ ನೀಡುವ ಕಲೆ: ಇದನ್ನು ಡೆಲಿಗೇಷನ್ ಎನ್ನುತ್ತಾರೆ. ನಾಯಕರಾದ ಮಾತ್ರಕ್ಕೆ ಎಲ್ಲಾ ಕೆಲಸ ತಾವೇ ಮಾಡಬೇಕಾಗಿಲ್ಲ, ಯಾವ ಕೆಲಸಕ್ಕೆ ಯಾರು ಸರಿಯಾದವರು ಎಂದು ಗುರುತಿಸಿ, ಅವರಿಗೆ ಜವಾಬ್ದಾರಿ ವಹಿಸಿ, ಅವರಿಂದ ಕೆಲಸ ತೆಗೆಸುವುದು ನಾಯಕರ ಕಲೆ.

ಸೃಜನಶೀಲತೆ ಮತ್ತು ಹೊಸತನ ಹುಡುಕುವ ಕಲೆ: ಮನುಷ್ಯರು ಯಂತ್ರಗಳಲ್ಲ, ಅವರಿಗೆ ಅದೇ ಕೆಲಸ, ಅದೇ ರೀತಿ ಮಾಡಲು ಬೇಸರ ಬರುತ್ತದೆ. ನಾಯಕರಾದವರು ಕೆಲಸ ಹಂಚುವಲ್ಲಿ, ಕೆಲಸದ ಪ್ರಕ್ರಿಯೆಯಲ್ಲಿ ಏನಾದರೂ ನವೀನತೆ ತರುತ್ತಲೇ ಇರಬೇಕು. ಇದರಿಂದ ತಂಡದಲ್ಲಿ ಉತ್ಸಾಹ ಹೆಚ್ಚುತ್ತದೆ.

ಸಕಾರಾತ್ಮಕ ಚಿಂತನೆ: ಸಕಾರಾತ್ಮ ಚಿಂತನೆ ಉಳ್ಳವರು ಒಳ್ಳೆಯ ನಾಯಕರಾಗುತ್ತಾರೆ. ತಂಡದ ಮಿಕ್ಕ ಸದಸ್ಯರು ಅಥವಾ ಸನ್ನಿವೇಶ ನಿರಾಶಾದಾಯಕವಾಗಿದ್ದರೂ, ಅವರನ್ನು ಪ್ರೇರೇಪಿಸಿ, ಹುರಿದುಂಬಿಸಿ ಮುನ್ನಡೆಯುವವನೇ ನಾಯಕ.

ತನ್ನನ್ನು ತಾನು ತಿದ್ದಿಕೊಳ್ಳುವ ಕಲೆ: ನಾಯಕರಾದವರು ತಮ್ಮ ಹಿಂಬಾಲಕರಿಂದ ಪ್ರತ್ಯಾದಾನ (ಫೀಡ್-ಬ್ಯಾಕ್)  ಧನಾತ್ಮಕವಾಗಲೀ, ಋಣಾತ್ಮಕವಾಗಲೀ, ಟೀಕೆ-ಟಿಪ್ಪಣಿಗಳನ್ನು ಯಾವಾಗಲೂ ಸ್ವೀಕರಿಸಬೇಕು. ಅದರಿಂದ ತಮ್ಮನ್ನು ತಾವು ಇನ್ನಷ್ಟು ಉತ್ತಮಗೊಳಿಸುವ ಅವಕಾಶ ಸಿಗುತ್ತದೆ. ಕೇವಲ ಹೊಗಳು-ಭಟ್ಟರನ್ನು ಕಲೆಹಾಕಿಕೊಳ್ಳಬಾರದು.

ಇಷ್ಟು ಕಲೆಗಳನ್ನು ನೀವು ಕಲಿತು ಅನುಷ್ಠಾನ ಮಾಡಿಕೊಂಡರೆ ಸಾಕು, ನಾಳೆಯಿಂದ ನೀವೂ ನಾಯಕರಾಗಬಹುದು. ಆಗುತ್ತೀರಲ್ಲವೇ?

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...