Homeಮುಖಪುಟನಿಮ್ಮಲ್ಲಿರುವ ನಾಯಕತ್ವ ಗುಣವನ್ನು ಸದ್ಬಳಕೆ ಮಾಡಿಕೊಳ್ಳುವುದು ಹೇಗೆ ಗೊತ್ತೆ?

ನಿಮ್ಮಲ್ಲಿರುವ ನಾಯಕತ್ವ ಗುಣವನ್ನು ಸದ್ಬಳಕೆ ಮಾಡಿಕೊಳ್ಳುವುದು ಹೇಗೆ ಗೊತ್ತೆ?

- Advertisement -
- Advertisement -

ಜೀವನ ಕಲೆಗಳು: ಅಂಕಣ- 23

ನಾಯಕತ್ವದ ಕಲೆ

ನಾಯಕತ್ವ ಎನ್ನುವುದು ಒಂದು ಕಲೆಯಲ್ಲ. ಕಲೆಗಳ ಒಂದು ಚಲಿಸುವ ಭಂಡಾರ. ನಾಯಕ ಎಂದ ಕೂಡಲೇ ರಾಜಕೀಯ ನೇತಾರರ, ಮತ ಯಾಚನೆಯ ವೇಳೆಯ, ಚಿತ್ರಣ ನಮ್ಮ ಕಣ್ಣ ಮುಂದೆ ಬರಬೇಕಿಲ್ಲ, ಏಕೆಂದರೆ ಅವರಲ್ಲಿ ಹೆಚ್ಚು ಜನ ನಿಜವಾದ ಅರ್ಥದಲ್ಲಿ ನಾಯಕರೇ ಅಲ್ಲ.

ನಾಯಕ ಎಂದರೆ ಸಮಾಜದಲ್ಲಿ ತಮ್ಮ ವ್ಯಕ್ತಿತ್ವದಿಂದ, ತಮ್ಮ ಕೆಲಸದಿಂದ ಉತ್ತಮ ಮಾದರಿಯಾದ, ಜನಸಾಮಾನ್ಯರು ಸ್ವ-ಇಚ್ಛೆಯಿಂದ ಹಿಂಬಾಲಿಸಬಹುದಂತಹ ವ್ಯಕ್ತಿ. ಕೇವಲ ಹಿಂಬಾಲಕರಿದ್ದಾರೆಂಬ ಕಾರಣಕ್ಕೆ ಯಾರೂ ನಾಯಕರಾಗುವುದಿಲ್ಲ.

ನಾಯಕರಿಗೆ ವಯಸ್ಸು, ವಿದ್ಯೆ, ವೃತ್ತಿ, ವಂಶ, ಜಾತಿ, ಧರ್ಮ, ಲಿಂಗ, ಹಣಇವುಗಳ ಕನಿಷ್ಠ ಅಥವಾ ಗರಿಷ್ಠ ಇತಿಮಿತಿ ಎಂಬುದೇ ಇಲ್ಲ. ಈ ಅಂಶಗಳ ಇರುವಿಕೆ ಅಥವಾ ಕೊರತೆ ಅವರನ್ನು ನಾಯಕರಾಗದಂತೆ ತಡೆಯುವುದಿಲ್ಲ ಆದರೆ ಕೆಲವೊಮ್ಮೆ ಮತ್ತು ಕೆಲವೊಂದು ಕ್ಷೇತ್ರ/ಸನ್ನಿವೇಶದಲ್ಲಿ, ಈ ಅಂಶಗಳು ಅವರಿಗೆ ಅನುಕೂಲಕರ ಎಂದು ಕಂಡು ಬಂದರೂ, ಕೇವಲ ಇವುಗಳ ಆಧಾರದ ಮೇಲೆ ಯಾರೂ ನಾಯಕರಾಗಲು ಸಾಧ್ಯವಿಲ್ಲ, ಒಂದು ವೇಳೆ ಆಗಿದ್ದರೆ, ಅವರು ಇಡೀ ಸಮಾಜಕ್ಕೆ ಪ್ರಯೋಜನವಾಗುವಂತಹ ನಾಯಕರಂತೂ ಆಗುವುದಿಲ್ಲ, ಕೇವಲ ಒಂದು ವರ್ಗಕ್ಕೆ ಪ್ರಯೋಜನಕಾರಿಯಾಗಬಹುದು.

ಒಂದು ಕ್ಷೇತ್ರದಲ್ಲಿ ನಾಯಕರೆಂದೆನಿಸಿಕೊಂಡವರು ಇನ್ನೊಂದು ಕ್ಷೇತ್ರದಲ್ಲೂ ನಾಯಕರಾಗಿರುತ್ತಾರೆ ಎನ್ನುವ ಖಾತರಿ ಏನೂ ಇಲ್ಲ. ನಮ್ಮ ದೇಶದ ಎಲ್ಲಾ ಕ್ಷೇತ್ರಗಳಲ್ಲಿ, ನಾಯಕರ ವಿಪರೀತ ಕೊರತೆ ಇದೆ ಮತ್ತು ಎಲ್ಲರಿಗೂ ನಾಯಕರಾಗುವ ಅರ್ಹತೆ/ಸಾಧ್ಯತೆ ಇದೆ, ಆದರೂ ಇಚ್ಛಾಶಕ್ತಿಯ ಕೊರತೆಯಿಂದ ಎಲ್ಲರೂ ನಾಯಕರಾಗುವುದಿಲ್ಲ.

ನಾಯಕತ್ವವನ್ನು ಸಂದರ್ಭ (ಸಿಚ್ಯುಏಷನಲ್), ವ್ಯವಹಾರ (ಟ್ರಾನ್ಸಾಕ್ಷನಲ್) ಮತ್ತು ಪರಿವರ್ತನೆ (ಟ್ರಾನ್ಸ್ಫ಼ಾರ್ಮೇಟಿವ್) ಮುಂತಾದ ಮೂರು ವಿಧದಲ್ಲಿ ವಿಂಗಡಿಸಿ ವಿವರಿಸಬಹುದು.

·         ಸಂದರ್ಭ ಎದುರಾದಾಗ, ಅವಕಾಶ ಸಿಕ್ಕಾಗ, ನಾಯಕತ್ವ ತೋರಿಸಬಲ್ಲ ವ್ಯಕ್ತಿ ಸಾಂದರ್ಭಿಕ ನಾಯಕ.

·         ಯಾವುದೇ ವ್ಯವಹಾರಗಳನ್ನು ಸಮರ್ಪಕವಾಗಿ ನಿರ್ವಹಿಸಬಲ್ಲವರು ವ್ಯವಹಾರಿಕ ನಾಯಕರು. ಉದಾ: ಕಂಪನಿಯ ವ್ಯವಸ್ಥಾಪಕರು, ಮಾರುಕಟ್ಟೆ ಗಟ್ಟಿಗರು, ಇತ್ಯಾದಿ. ಇದರಲ್ಲಿ ಮೇಲ್ವಿಚಾರಣೆ, ಸಂಸ್ಥೆ, ಪ್ರದರ್ಶನ, ಲಾಭ-ನಷ್ಟ, ಇನಾಮು-ದಂಡನೆ, ಸೋಲು—ಗೆಲುವು ಮುಂತಾದ ಶಬ್ದಗಳ ಪ್ರಯೋಗ ಹೆಚ್ಚಿರುತ್ತದೆ.

·         ವ್ಯವಸ್ಥೆಯಲ್ಲಿ ಪರಿವರ್ತನೆ ತರಬಲ್ಲ, ಸಮಾಜವನ್ನು ಬದಲಾಯಿಸಬಲ್ಲವರು ಪರಿವರ್ತನಾ ನಾಯಕರು.

ಕೆಲವು ಕಲೆಗಳು ಒಂದು ತರಹದ ನಾಯಕತ್ವಕ್ಕೆ ಅತ್ಯಂತ ಪ್ರಯೋಜನಕಾರಿ ಎನಿಸಿದರೆ, ಇನ್ನು ಕೆಲವು ನಿಶ್ಪ್ರಯೋಜಕ ಎನಿಸಬಹುದು. ಆದರೆ ಸಮಾಜಕ್ಕೆ ಮೂರೂ ತರಹದ ನಾಯಕರ ಅವಶ್ಯಕತೆ ಇದೆ. ಓರ್ವ ವ್ಯಕ್ತಿ ಒಂದು, ಎರಡು ಅಥವಾ ಮೂರೂ ರೀತಿಯ ನಾಯಕ ಆಗಲೂ ಬಹುದು.

ನಾಯಕತ್ವ ಮಾನವ ನಡತೆಯ ಒಂದು ಲಕ್ಷಣವಾಗಿರುವುದರಿಂದ ಅವರ ಲಾಲನೆ-ಪಾಲನೆ, ಸಂಸ್ಕೃತಿ, ಹುಟ್ಟಿ ಬೆಳೆದ ವಾತಾವರಣ ಎಲ್ಲವೂ ಅವರ ನಡತೆಯ ಮೇಲೆ ತಮ್ಮ ಛಾಪು ಮೂಡಿಸಿರುತ್ತದೆ. ಇದರಿಂದಾಗಿ ಕೆಲವು ಕಲೆಗಳು ಅವರಿಗೆ ಸಹಜವಾಗಿಯೇ ಬಂದಿರಬಹುದು ಅಥವಾ ಕಲಿಯಲು ಸುಲಭವಾಗಬಹುದು. ಇಂತಹವರನ್ನು ಕೆಲವೊಮ್ಮೆ ಹುಟ್ಟು ನಾಯಕರು (ಬಾರ್ನ್ ಲೀಡರ್ಸ್) ಎನ್ನಬಹುದು.

ಹಾಗಾದರೆ ಜನಸಾಮಾನ್ಯರಿಗೆ ನಾಯಕರಾಗಲು ಯಾವ ಕಲೆ ಇರಬೇಕು ಅಥವಾ ಕಲಿಯಬೇಕು ನೋಡೋಣ.

ಅಂತರ್ಜಾಲ (ಇಂಟರ್ನೆಟ್) ಜಾಲಿಸಿ ನೋಡಿದರೆ ನಿಮಗೆ ನಾಯಕತ್ವಕ್ಕೆ ಬೇಕಾದ 5 ಕಲೆ, 10, ಕಲೆ, 50 ಕಲೆ, 100 ಕಲೆಗಳ ಪಟ್ಟಿಯ ಜೊತೆಗೆ ಬೇಕಾದಷ್ಟು, ಬೇಡವಾದಷ್ಟು ಮಾಹಿತಿ ಸಿಗಬಹುದು. ನನಗೆ “ಮುಖ್ಯ”ಎಂದೆನಿಸಿದ ಕೆಲವೊಂದು ಕಲೆಗಳನ್ನು ಮಾತ್ರ ತಿಳಿಸುತ್ತೇನೆ.

ಮೊಟ್ಟಮೊದಲಿಗೆ ಬೇಕಾಗಿರುವುದು ಮುನ್ನಡೆ (ಇನಿಷಿಯೇಟಿವ್), ಮೊದಲ ಹೆಜ್ಜೆಯ ಇಚ್ಛಾಶಕ್ತಿ ಒಳಗಿನಿಂದ ಬರಬೇಕು. ಅದಕ್ಕೆ ವಿಯೋಜಕ ಶಕ್ತಿ (ಟ್ರಿಗರ್) ಯಾವುದೋ ಘಟನೆ, ಸನ್ನಿವೇಶ, ಆಸಕ್ತಿ, ಮುಂತಾದವು ಇರಬಹುದು ಆದರೆ ಆ ಕಿಡಿ ಒಳಗಿನಿಂದ ಹೊತ್ತಿ ಉರಿಯಬೇಕು. ಇದನ್ನು ಸ್ವ-ಪ್ರೇರೇಪಣೆ ಎನ್ನಲೂ ಬಹುದು.

ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಮತ್ತು ನಿಷ್ಠೆ: ಪ್ರಾಮಾಣಿಕತೆಗೆ ಪರ್ಯಾಯವಿಲ್ಲ. ನಮ್ಮ ನಾಯಕರು ಪ್ರಾಮಾಣಿಕರಲ್ಲದಿದ್ದರೆ ಅಂತಹವರ ಹಿಂದೆ ಹೋಗುವುದರಲ್ಲಿ ಅರ್ಥವಿಲ್ಲ. ಅದೇ ರೀತಿ ಕೆಲಸದ ಬಗ್ಗೆ ನಿಷ್ಠೆಯೂ ಇರಬೇಕು. ಇದರಿಂದ ಅವರಲ್ಲಿ ಮಿಕ್ಕವರಿಗೆ ವಿಶ್ವಾಸ ಮೂಡುತ್ತದೆ.

ಇತರರನ್ನು ಪ್ರೇರೇಪಿಸುವ ಕಲೆ: ನಮ್ಮ ನಾಯಕರಿಗೆ ದೂರದೃಷ್ಟಿ (ವಿಷನ್) ಇರಬೇಕು, ಅದರತ್ತ ಅವರು ತಮ್ಮನ್ನು ಮತ್ತು ಹಿಂಬಾಲಕರನ್ನು ಪ್ರೇರೇಪಿಸಿ, ಬೊಮ್ಮನಹಳ್ಳಿಯ ಕಿಂದರ ಜೋಗಿಯಂತೆ, ಮುಂದಕ್ಕೆ ಕರೆದುಕೊಂಡು ಹೋಗುವ ಕೆಲಸ ಸದಾ ಮಾಡುತ್ತಿರಬೇಕು.

ಬದ್ಧತೆ ಮತ್ತು ಉತ್ಸಾಹ: ತಮ್ಮ ಕೆಲಸದ ಪ್ರತಿ ನಾಯಕರಿಗೆ ಬದ್ಧತೆ ಇರಬೇಕು. ಕೆಲಸ ಮಾಡದಿರಲು ನೂರೆಂಟು ಕಾರಣಗಳು ಸಿಗಬಹುದು ಆದರೆ ಇದು ನಮ್ಮ ಕೆಲಸ ಎಂಬ ಬದ್ಧತೆ ಇದ್ದರೆ ಅದನ್ನು ಮಾಡಿಯೇ ತೀರಬೇಕು. ಯಾರೂ ಆಂಶಿಕ (ಪಾರ್ಟ್-ಟೈಂ) ನಾಯಕರಾಗಲು ಸಾಧ್ಯವಿಲ್ಲ, ಆಂಶಿಕ ಹಿಂಬಾಲಕ ಬೇಕಾದರೆ ಆಗಬಹುದು. ಅದೇ ರೀತಿ ಅವರಲ್ಲಿ ಉತ್ಸಾಹ ತುಂಬಿ ತುಳುಕುತ್ತಿರಬೇಕು, ಅದರಿಂದ ಮಿಕ್ಕವರಿಗೂ ಸ್ಪೂರ್ತಿ ಬರುತ್ತದೆ.

ಸಂವಹನೆಯ ಕಲೆ: ಯಾರಿಗೆ, ಏನು, ಯಾವಾಗ ಹೇಳಬೇಕು ಅಥವಾ ವ್ಯಕ್ತ ಪಡಿಸಬೇಕು ಅದನ್ನು ಸಮರ್ಪಕವಾಗಿ ತಿಳಿಸುವ ಕಲೆ ಅವರಲ್ಲಿರಬೇಕು. ಸಂವಹನೆ ಕಲೆಯ ಬಗ್ಗೆ ಈಗಾಗಲೇ ತಿಳಿಸಿದ್ದೇನೆ.

ನಿರ್ಧಾರ ತೆಗೆದುಕೊಳ್ಳುವ ಕಲೆ: ಸರಿಯಾದ ಸಮಯಕ್ಕೆ, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಜಾಣತನ, ಧೈರ್ಯ ನಾಯಕರಲ್ಲಿರಬೇಕು. ತೆಗೆದುಕೊಂಡ ನಿರ್ಧಾರದ ಪರಿಣಾಮ ಎದುರಿಸುವ ಶಕ್ತಿಯೂ ಇರಬೇಕು. ಈ ಕಲೆಯ ಬಗ್ಗೆಯೂ ಈಗಾಗಲೇ ವಿವರಿಸಿದ್ದೇನೆ.

ಉತ್ತರದಾಯಿತ್ವ: ತಾವು ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿಯೂ ಉತ್ತರದಾಯಿಯೂ ಆಗಿರಬೇಕು. ಹೊಣೆಗಾರಿಕೆಯನ್ನು ಇನ್ನೊಬ್ಬರ ಹೆಗಲಿಗೆ ಹಾಕುವವರು ಒಳ್ಳೆಯ ನಾಯಕರಲ್ಲ. ಅವಶ್ಯಕತೆ ಬಿದ್ದಲ್ಲಿ ತಲೆದಂಡ ತೆರಲೂ ಸಿದ್ಧರಾಗಿರಬೇಕು.

ಅಧಿಕಾರ ಇತರರಿಗೆ ನೀಡುವ ಕಲೆ: ಇದನ್ನು ಡೆಲಿಗೇಷನ್ ಎನ್ನುತ್ತಾರೆ. ನಾಯಕರಾದ ಮಾತ್ರಕ್ಕೆ ಎಲ್ಲಾ ಕೆಲಸ ತಾವೇ ಮಾಡಬೇಕಾಗಿಲ್ಲ, ಯಾವ ಕೆಲಸಕ್ಕೆ ಯಾರು ಸರಿಯಾದವರು ಎಂದು ಗುರುತಿಸಿ, ಅವರಿಗೆ ಜವಾಬ್ದಾರಿ ವಹಿಸಿ, ಅವರಿಂದ ಕೆಲಸ ತೆಗೆಸುವುದು ನಾಯಕರ ಕಲೆ.

ಸೃಜನಶೀಲತೆ ಮತ್ತು ಹೊಸತನ ಹುಡುಕುವ ಕಲೆ: ಮನುಷ್ಯರು ಯಂತ್ರಗಳಲ್ಲ, ಅವರಿಗೆ ಅದೇ ಕೆಲಸ, ಅದೇ ರೀತಿ ಮಾಡಲು ಬೇಸರ ಬರುತ್ತದೆ. ನಾಯಕರಾದವರು ಕೆಲಸ ಹಂಚುವಲ್ಲಿ, ಕೆಲಸದ ಪ್ರಕ್ರಿಯೆಯಲ್ಲಿ ಏನಾದರೂ ನವೀನತೆ ತರುತ್ತಲೇ ಇರಬೇಕು. ಇದರಿಂದ ತಂಡದಲ್ಲಿ ಉತ್ಸಾಹ ಹೆಚ್ಚುತ್ತದೆ.

ಸಕಾರಾತ್ಮಕ ಚಿಂತನೆ: ಸಕಾರಾತ್ಮ ಚಿಂತನೆ ಉಳ್ಳವರು ಒಳ್ಳೆಯ ನಾಯಕರಾಗುತ್ತಾರೆ. ತಂಡದ ಮಿಕ್ಕ ಸದಸ್ಯರು ಅಥವಾ ಸನ್ನಿವೇಶ ನಿರಾಶಾದಾಯಕವಾಗಿದ್ದರೂ, ಅವರನ್ನು ಪ್ರೇರೇಪಿಸಿ, ಹುರಿದುಂಬಿಸಿ ಮುನ್ನಡೆಯುವವನೇ ನಾಯಕ.

ತನ್ನನ್ನು ತಾನು ತಿದ್ದಿಕೊಳ್ಳುವ ಕಲೆ: ನಾಯಕರಾದವರು ತಮ್ಮ ಹಿಂಬಾಲಕರಿಂದ ಪ್ರತ್ಯಾದಾನ (ಫೀಡ್-ಬ್ಯಾಕ್)  ಧನಾತ್ಮಕವಾಗಲೀ, ಋಣಾತ್ಮಕವಾಗಲೀ, ಟೀಕೆ-ಟಿಪ್ಪಣಿಗಳನ್ನು ಯಾವಾಗಲೂ ಸ್ವೀಕರಿಸಬೇಕು. ಅದರಿಂದ ತಮ್ಮನ್ನು ತಾವು ಇನ್ನಷ್ಟು ಉತ್ತಮಗೊಳಿಸುವ ಅವಕಾಶ ಸಿಗುತ್ತದೆ. ಕೇವಲ ಹೊಗಳು-ಭಟ್ಟರನ್ನು ಕಲೆಹಾಕಿಕೊಳ್ಳಬಾರದು.

ಇಷ್ಟು ಕಲೆಗಳನ್ನು ನೀವು ಕಲಿತು ಅನುಷ್ಠಾನ ಮಾಡಿಕೊಂಡರೆ ಸಾಕು, ನಾಳೆಯಿಂದ ನೀವೂ ನಾಯಕರಾಗಬಹುದು. ಆಗುತ್ತೀರಲ್ಲವೇ?

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...