Homeಮುಖಪುಟನಿಮ್ಮಲ್ಲಿರುವ ನಾಯಕತ್ವ ಗುಣವನ್ನು ಸದ್ಬಳಕೆ ಮಾಡಿಕೊಳ್ಳುವುದು ಹೇಗೆ ಗೊತ್ತೆ?

ನಿಮ್ಮಲ್ಲಿರುವ ನಾಯಕತ್ವ ಗುಣವನ್ನು ಸದ್ಬಳಕೆ ಮಾಡಿಕೊಳ್ಳುವುದು ಹೇಗೆ ಗೊತ್ತೆ?

- Advertisement -
- Advertisement -

ಜೀವನ ಕಲೆಗಳು: ಅಂಕಣ- 23

ನಾಯಕತ್ವದ ಕಲೆ

ನಾಯಕತ್ವ ಎನ್ನುವುದು ಒಂದು ಕಲೆಯಲ್ಲ. ಕಲೆಗಳ ಒಂದು ಚಲಿಸುವ ಭಂಡಾರ. ನಾಯಕ ಎಂದ ಕೂಡಲೇ ರಾಜಕೀಯ ನೇತಾರರ, ಮತ ಯಾಚನೆಯ ವೇಳೆಯ, ಚಿತ್ರಣ ನಮ್ಮ ಕಣ್ಣ ಮುಂದೆ ಬರಬೇಕಿಲ್ಲ, ಏಕೆಂದರೆ ಅವರಲ್ಲಿ ಹೆಚ್ಚು ಜನ ನಿಜವಾದ ಅರ್ಥದಲ್ಲಿ ನಾಯಕರೇ ಅಲ್ಲ.

ನಾಯಕ ಎಂದರೆ ಸಮಾಜದಲ್ಲಿ ತಮ್ಮ ವ್ಯಕ್ತಿತ್ವದಿಂದ, ತಮ್ಮ ಕೆಲಸದಿಂದ ಉತ್ತಮ ಮಾದರಿಯಾದ, ಜನಸಾಮಾನ್ಯರು ಸ್ವ-ಇಚ್ಛೆಯಿಂದ ಹಿಂಬಾಲಿಸಬಹುದಂತಹ ವ್ಯಕ್ತಿ. ಕೇವಲ ಹಿಂಬಾಲಕರಿದ್ದಾರೆಂಬ ಕಾರಣಕ್ಕೆ ಯಾರೂ ನಾಯಕರಾಗುವುದಿಲ್ಲ.

ನಾಯಕರಿಗೆ ವಯಸ್ಸು, ವಿದ್ಯೆ, ವೃತ್ತಿ, ವಂಶ, ಜಾತಿ, ಧರ್ಮ, ಲಿಂಗ, ಹಣಇವುಗಳ ಕನಿಷ್ಠ ಅಥವಾ ಗರಿಷ್ಠ ಇತಿಮಿತಿ ಎಂಬುದೇ ಇಲ್ಲ. ಈ ಅಂಶಗಳ ಇರುವಿಕೆ ಅಥವಾ ಕೊರತೆ ಅವರನ್ನು ನಾಯಕರಾಗದಂತೆ ತಡೆಯುವುದಿಲ್ಲ ಆದರೆ ಕೆಲವೊಮ್ಮೆ ಮತ್ತು ಕೆಲವೊಂದು ಕ್ಷೇತ್ರ/ಸನ್ನಿವೇಶದಲ್ಲಿ, ಈ ಅಂಶಗಳು ಅವರಿಗೆ ಅನುಕೂಲಕರ ಎಂದು ಕಂಡು ಬಂದರೂ, ಕೇವಲ ಇವುಗಳ ಆಧಾರದ ಮೇಲೆ ಯಾರೂ ನಾಯಕರಾಗಲು ಸಾಧ್ಯವಿಲ್ಲ, ಒಂದು ವೇಳೆ ಆಗಿದ್ದರೆ, ಅವರು ಇಡೀ ಸಮಾಜಕ್ಕೆ ಪ್ರಯೋಜನವಾಗುವಂತಹ ನಾಯಕರಂತೂ ಆಗುವುದಿಲ್ಲ, ಕೇವಲ ಒಂದು ವರ್ಗಕ್ಕೆ ಪ್ರಯೋಜನಕಾರಿಯಾಗಬಹುದು.

ಒಂದು ಕ್ಷೇತ್ರದಲ್ಲಿ ನಾಯಕರೆಂದೆನಿಸಿಕೊಂಡವರು ಇನ್ನೊಂದು ಕ್ಷೇತ್ರದಲ್ಲೂ ನಾಯಕರಾಗಿರುತ್ತಾರೆ ಎನ್ನುವ ಖಾತರಿ ಏನೂ ಇಲ್ಲ. ನಮ್ಮ ದೇಶದ ಎಲ್ಲಾ ಕ್ಷೇತ್ರಗಳಲ್ಲಿ, ನಾಯಕರ ವಿಪರೀತ ಕೊರತೆ ಇದೆ ಮತ್ತು ಎಲ್ಲರಿಗೂ ನಾಯಕರಾಗುವ ಅರ್ಹತೆ/ಸಾಧ್ಯತೆ ಇದೆ, ಆದರೂ ಇಚ್ಛಾಶಕ್ತಿಯ ಕೊರತೆಯಿಂದ ಎಲ್ಲರೂ ನಾಯಕರಾಗುವುದಿಲ್ಲ.

ನಾಯಕತ್ವವನ್ನು ಸಂದರ್ಭ (ಸಿಚ್ಯುಏಷನಲ್), ವ್ಯವಹಾರ (ಟ್ರಾನ್ಸಾಕ್ಷನಲ್) ಮತ್ತು ಪರಿವರ್ತನೆ (ಟ್ರಾನ್ಸ್ಫ಼ಾರ್ಮೇಟಿವ್) ಮುಂತಾದ ಮೂರು ವಿಧದಲ್ಲಿ ವಿಂಗಡಿಸಿ ವಿವರಿಸಬಹುದು.

·         ಸಂದರ್ಭ ಎದುರಾದಾಗ, ಅವಕಾಶ ಸಿಕ್ಕಾಗ, ನಾಯಕತ್ವ ತೋರಿಸಬಲ್ಲ ವ್ಯಕ್ತಿ ಸಾಂದರ್ಭಿಕ ನಾಯಕ.

·         ಯಾವುದೇ ವ್ಯವಹಾರಗಳನ್ನು ಸಮರ್ಪಕವಾಗಿ ನಿರ್ವಹಿಸಬಲ್ಲವರು ವ್ಯವಹಾರಿಕ ನಾಯಕರು. ಉದಾ: ಕಂಪನಿಯ ವ್ಯವಸ್ಥಾಪಕರು, ಮಾರುಕಟ್ಟೆ ಗಟ್ಟಿಗರು, ಇತ್ಯಾದಿ. ಇದರಲ್ಲಿ ಮೇಲ್ವಿಚಾರಣೆ, ಸಂಸ್ಥೆ, ಪ್ರದರ್ಶನ, ಲಾಭ-ನಷ್ಟ, ಇನಾಮು-ದಂಡನೆ, ಸೋಲು—ಗೆಲುವು ಮುಂತಾದ ಶಬ್ದಗಳ ಪ್ರಯೋಗ ಹೆಚ್ಚಿರುತ್ತದೆ.

·         ವ್ಯವಸ್ಥೆಯಲ್ಲಿ ಪರಿವರ್ತನೆ ತರಬಲ್ಲ, ಸಮಾಜವನ್ನು ಬದಲಾಯಿಸಬಲ್ಲವರು ಪರಿವರ್ತನಾ ನಾಯಕರು.

ಕೆಲವು ಕಲೆಗಳು ಒಂದು ತರಹದ ನಾಯಕತ್ವಕ್ಕೆ ಅತ್ಯಂತ ಪ್ರಯೋಜನಕಾರಿ ಎನಿಸಿದರೆ, ಇನ್ನು ಕೆಲವು ನಿಶ್ಪ್ರಯೋಜಕ ಎನಿಸಬಹುದು. ಆದರೆ ಸಮಾಜಕ್ಕೆ ಮೂರೂ ತರಹದ ನಾಯಕರ ಅವಶ್ಯಕತೆ ಇದೆ. ಓರ್ವ ವ್ಯಕ್ತಿ ಒಂದು, ಎರಡು ಅಥವಾ ಮೂರೂ ರೀತಿಯ ನಾಯಕ ಆಗಲೂ ಬಹುದು.

ನಾಯಕತ್ವ ಮಾನವ ನಡತೆಯ ಒಂದು ಲಕ್ಷಣವಾಗಿರುವುದರಿಂದ ಅವರ ಲಾಲನೆ-ಪಾಲನೆ, ಸಂಸ್ಕೃತಿ, ಹುಟ್ಟಿ ಬೆಳೆದ ವಾತಾವರಣ ಎಲ್ಲವೂ ಅವರ ನಡತೆಯ ಮೇಲೆ ತಮ್ಮ ಛಾಪು ಮೂಡಿಸಿರುತ್ತದೆ. ಇದರಿಂದಾಗಿ ಕೆಲವು ಕಲೆಗಳು ಅವರಿಗೆ ಸಹಜವಾಗಿಯೇ ಬಂದಿರಬಹುದು ಅಥವಾ ಕಲಿಯಲು ಸುಲಭವಾಗಬಹುದು. ಇಂತಹವರನ್ನು ಕೆಲವೊಮ್ಮೆ ಹುಟ್ಟು ನಾಯಕರು (ಬಾರ್ನ್ ಲೀಡರ್ಸ್) ಎನ್ನಬಹುದು.

ಹಾಗಾದರೆ ಜನಸಾಮಾನ್ಯರಿಗೆ ನಾಯಕರಾಗಲು ಯಾವ ಕಲೆ ಇರಬೇಕು ಅಥವಾ ಕಲಿಯಬೇಕು ನೋಡೋಣ.

ಅಂತರ್ಜಾಲ (ಇಂಟರ್ನೆಟ್) ಜಾಲಿಸಿ ನೋಡಿದರೆ ನಿಮಗೆ ನಾಯಕತ್ವಕ್ಕೆ ಬೇಕಾದ 5 ಕಲೆ, 10, ಕಲೆ, 50 ಕಲೆ, 100 ಕಲೆಗಳ ಪಟ್ಟಿಯ ಜೊತೆಗೆ ಬೇಕಾದಷ್ಟು, ಬೇಡವಾದಷ್ಟು ಮಾಹಿತಿ ಸಿಗಬಹುದು. ನನಗೆ “ಮುಖ್ಯ”ಎಂದೆನಿಸಿದ ಕೆಲವೊಂದು ಕಲೆಗಳನ್ನು ಮಾತ್ರ ತಿಳಿಸುತ್ತೇನೆ.

ಮೊಟ್ಟಮೊದಲಿಗೆ ಬೇಕಾಗಿರುವುದು ಮುನ್ನಡೆ (ಇನಿಷಿಯೇಟಿವ್), ಮೊದಲ ಹೆಜ್ಜೆಯ ಇಚ್ಛಾಶಕ್ತಿ ಒಳಗಿನಿಂದ ಬರಬೇಕು. ಅದಕ್ಕೆ ವಿಯೋಜಕ ಶಕ್ತಿ (ಟ್ರಿಗರ್) ಯಾವುದೋ ಘಟನೆ, ಸನ್ನಿವೇಶ, ಆಸಕ್ತಿ, ಮುಂತಾದವು ಇರಬಹುದು ಆದರೆ ಆ ಕಿಡಿ ಒಳಗಿನಿಂದ ಹೊತ್ತಿ ಉರಿಯಬೇಕು. ಇದನ್ನು ಸ್ವ-ಪ್ರೇರೇಪಣೆ ಎನ್ನಲೂ ಬಹುದು.

ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಮತ್ತು ನಿಷ್ಠೆ: ಪ್ರಾಮಾಣಿಕತೆಗೆ ಪರ್ಯಾಯವಿಲ್ಲ. ನಮ್ಮ ನಾಯಕರು ಪ್ರಾಮಾಣಿಕರಲ್ಲದಿದ್ದರೆ ಅಂತಹವರ ಹಿಂದೆ ಹೋಗುವುದರಲ್ಲಿ ಅರ್ಥವಿಲ್ಲ. ಅದೇ ರೀತಿ ಕೆಲಸದ ಬಗ್ಗೆ ನಿಷ್ಠೆಯೂ ಇರಬೇಕು. ಇದರಿಂದ ಅವರಲ್ಲಿ ಮಿಕ್ಕವರಿಗೆ ವಿಶ್ವಾಸ ಮೂಡುತ್ತದೆ.

ಇತರರನ್ನು ಪ್ರೇರೇಪಿಸುವ ಕಲೆ: ನಮ್ಮ ನಾಯಕರಿಗೆ ದೂರದೃಷ್ಟಿ (ವಿಷನ್) ಇರಬೇಕು, ಅದರತ್ತ ಅವರು ತಮ್ಮನ್ನು ಮತ್ತು ಹಿಂಬಾಲಕರನ್ನು ಪ್ರೇರೇಪಿಸಿ, ಬೊಮ್ಮನಹಳ್ಳಿಯ ಕಿಂದರ ಜೋಗಿಯಂತೆ, ಮುಂದಕ್ಕೆ ಕರೆದುಕೊಂಡು ಹೋಗುವ ಕೆಲಸ ಸದಾ ಮಾಡುತ್ತಿರಬೇಕು.

ಬದ್ಧತೆ ಮತ್ತು ಉತ್ಸಾಹ: ತಮ್ಮ ಕೆಲಸದ ಪ್ರತಿ ನಾಯಕರಿಗೆ ಬದ್ಧತೆ ಇರಬೇಕು. ಕೆಲಸ ಮಾಡದಿರಲು ನೂರೆಂಟು ಕಾರಣಗಳು ಸಿಗಬಹುದು ಆದರೆ ಇದು ನಮ್ಮ ಕೆಲಸ ಎಂಬ ಬದ್ಧತೆ ಇದ್ದರೆ ಅದನ್ನು ಮಾಡಿಯೇ ತೀರಬೇಕು. ಯಾರೂ ಆಂಶಿಕ (ಪಾರ್ಟ್-ಟೈಂ) ನಾಯಕರಾಗಲು ಸಾಧ್ಯವಿಲ್ಲ, ಆಂಶಿಕ ಹಿಂಬಾಲಕ ಬೇಕಾದರೆ ಆಗಬಹುದು. ಅದೇ ರೀತಿ ಅವರಲ್ಲಿ ಉತ್ಸಾಹ ತುಂಬಿ ತುಳುಕುತ್ತಿರಬೇಕು, ಅದರಿಂದ ಮಿಕ್ಕವರಿಗೂ ಸ್ಪೂರ್ತಿ ಬರುತ್ತದೆ.

ಸಂವಹನೆಯ ಕಲೆ: ಯಾರಿಗೆ, ಏನು, ಯಾವಾಗ ಹೇಳಬೇಕು ಅಥವಾ ವ್ಯಕ್ತ ಪಡಿಸಬೇಕು ಅದನ್ನು ಸಮರ್ಪಕವಾಗಿ ತಿಳಿಸುವ ಕಲೆ ಅವರಲ್ಲಿರಬೇಕು. ಸಂವಹನೆ ಕಲೆಯ ಬಗ್ಗೆ ಈಗಾಗಲೇ ತಿಳಿಸಿದ್ದೇನೆ.

ನಿರ್ಧಾರ ತೆಗೆದುಕೊಳ್ಳುವ ಕಲೆ: ಸರಿಯಾದ ಸಮಯಕ್ಕೆ, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಜಾಣತನ, ಧೈರ್ಯ ನಾಯಕರಲ್ಲಿರಬೇಕು. ತೆಗೆದುಕೊಂಡ ನಿರ್ಧಾರದ ಪರಿಣಾಮ ಎದುರಿಸುವ ಶಕ್ತಿಯೂ ಇರಬೇಕು. ಈ ಕಲೆಯ ಬಗ್ಗೆಯೂ ಈಗಾಗಲೇ ವಿವರಿಸಿದ್ದೇನೆ.

ಉತ್ತರದಾಯಿತ್ವ: ತಾವು ತೆಗೆದುಕೊಂಡ ನಿರ್ಧಾರಕ್ಕೆ ಬದ್ಧರಾಗಿಯೂ ಉತ್ತರದಾಯಿಯೂ ಆಗಿರಬೇಕು. ಹೊಣೆಗಾರಿಕೆಯನ್ನು ಇನ್ನೊಬ್ಬರ ಹೆಗಲಿಗೆ ಹಾಕುವವರು ಒಳ್ಳೆಯ ನಾಯಕರಲ್ಲ. ಅವಶ್ಯಕತೆ ಬಿದ್ದಲ್ಲಿ ತಲೆದಂಡ ತೆರಲೂ ಸಿದ್ಧರಾಗಿರಬೇಕು.

ಅಧಿಕಾರ ಇತರರಿಗೆ ನೀಡುವ ಕಲೆ: ಇದನ್ನು ಡೆಲಿಗೇಷನ್ ಎನ್ನುತ್ತಾರೆ. ನಾಯಕರಾದ ಮಾತ್ರಕ್ಕೆ ಎಲ್ಲಾ ಕೆಲಸ ತಾವೇ ಮಾಡಬೇಕಾಗಿಲ್ಲ, ಯಾವ ಕೆಲಸಕ್ಕೆ ಯಾರು ಸರಿಯಾದವರು ಎಂದು ಗುರುತಿಸಿ, ಅವರಿಗೆ ಜವಾಬ್ದಾರಿ ವಹಿಸಿ, ಅವರಿಂದ ಕೆಲಸ ತೆಗೆಸುವುದು ನಾಯಕರ ಕಲೆ.

ಸೃಜನಶೀಲತೆ ಮತ್ತು ಹೊಸತನ ಹುಡುಕುವ ಕಲೆ: ಮನುಷ್ಯರು ಯಂತ್ರಗಳಲ್ಲ, ಅವರಿಗೆ ಅದೇ ಕೆಲಸ, ಅದೇ ರೀತಿ ಮಾಡಲು ಬೇಸರ ಬರುತ್ತದೆ. ನಾಯಕರಾದವರು ಕೆಲಸ ಹಂಚುವಲ್ಲಿ, ಕೆಲಸದ ಪ್ರಕ್ರಿಯೆಯಲ್ಲಿ ಏನಾದರೂ ನವೀನತೆ ತರುತ್ತಲೇ ಇರಬೇಕು. ಇದರಿಂದ ತಂಡದಲ್ಲಿ ಉತ್ಸಾಹ ಹೆಚ್ಚುತ್ತದೆ.

ಸಕಾರಾತ್ಮಕ ಚಿಂತನೆ: ಸಕಾರಾತ್ಮ ಚಿಂತನೆ ಉಳ್ಳವರು ಒಳ್ಳೆಯ ನಾಯಕರಾಗುತ್ತಾರೆ. ತಂಡದ ಮಿಕ್ಕ ಸದಸ್ಯರು ಅಥವಾ ಸನ್ನಿವೇಶ ನಿರಾಶಾದಾಯಕವಾಗಿದ್ದರೂ, ಅವರನ್ನು ಪ್ರೇರೇಪಿಸಿ, ಹುರಿದುಂಬಿಸಿ ಮುನ್ನಡೆಯುವವನೇ ನಾಯಕ.

ತನ್ನನ್ನು ತಾನು ತಿದ್ದಿಕೊಳ್ಳುವ ಕಲೆ: ನಾಯಕರಾದವರು ತಮ್ಮ ಹಿಂಬಾಲಕರಿಂದ ಪ್ರತ್ಯಾದಾನ (ಫೀಡ್-ಬ್ಯಾಕ್)  ಧನಾತ್ಮಕವಾಗಲೀ, ಋಣಾತ್ಮಕವಾಗಲೀ, ಟೀಕೆ-ಟಿಪ್ಪಣಿಗಳನ್ನು ಯಾವಾಗಲೂ ಸ್ವೀಕರಿಸಬೇಕು. ಅದರಿಂದ ತಮ್ಮನ್ನು ತಾವು ಇನ್ನಷ್ಟು ಉತ್ತಮಗೊಳಿಸುವ ಅವಕಾಶ ಸಿಗುತ್ತದೆ. ಕೇವಲ ಹೊಗಳು-ಭಟ್ಟರನ್ನು ಕಲೆಹಾಕಿಕೊಳ್ಳಬಾರದು.

ಇಷ್ಟು ಕಲೆಗಳನ್ನು ನೀವು ಕಲಿತು ಅನುಷ್ಠಾನ ಮಾಡಿಕೊಂಡರೆ ಸಾಕು, ನಾಳೆಯಿಂದ ನೀವೂ ನಾಯಕರಾಗಬಹುದು. ಆಗುತ್ತೀರಲ್ಲವೇ?

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಗಲಕೋಟೆಯ ವಿವಿಧ ಪ್ರದೇಶಗಳಲ್ಲಿ ಎಸ್‌ಐಆರ್‌ ವಿರುದ್ಧ ಜನಜಾಗೃತಿ ಜಾಥಾ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು. ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ...

SIR ವಿರೋಧಿ ಜನಜಾಗೃತಿ ಜಾಥಾ: ಕಾಫಿ ನಾಡು ಚಿಕ್ಕಮಗಳೂರಲ್ಲಿ ಅದ್ದೂರಿ ಸ್ವಾಗತ

ಚಿಕ್ಕಮಗಳೂರು: ರಾಜ್ಯಾದ್ಯಂತ ಐದು ವಿಭಾಗಗಳಲ್ಲಿ ಸಂಚರಿಸುತ್ತಿರುವ 'SIR ವಿರೋಧಿ ಜನಜಾಗೃತಿ ಜಾಥಾ'ದ 3ನೇ ಮಾರ್ಗದ ತಂಡಕ್ಕೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಭಾನುವಾರ ಬೆಳಗ್ಗೆ ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಆಗಮಿಸಿದ ಜಾಥಾ...

ಚಿಕ್ಕಮಗಳೂರಿನಲ್ಲಿ ಎಸ್‌ಐಆರ್ (SIR) ವಿರೋಧಿ ಜಾಥಾ: ಮತದಾರರ ಹಕ್ಕು ಕಸಿಯುವ ಹುನ್ನಾರದ ವಿರುದ್ಧ ಆಕ್ರೋಶ

ಭಾರತ ಚುನಾವಣಾ ಆಯೋಗವು ಜಾರಿಗೆ ತಂದಿರುವ ವಿಶೇಷ ತೀವ್ರ ಪರಿಷ್ಕರಣೆ (SIR - Special Intensive Revision) ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜಾಗ್ರತೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ....

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...