Homeಕರ್ನಾಟಕಈ ದುರಿತ ಕಾಲದಲ್ಲಿ ನೆಟ್ಟಿಗರಿಗೊಂದು ಸಿಟ್ಟಿನ ಪತ್ರ

ಈ ದುರಿತ ಕಾಲದಲ್ಲಿ ನೆಟ್ಟಿಗರಿಗೊಂದು ಸಿಟ್ಟಿನ ಪತ್ರ

2009ರ ಚುನಾವಣೆಯಲ್ಲಿ ಕರ್ನಾಟಕದ ಮತದಾರರಲ್ಲಿ 41.6% ಜನ ಬಿಜೆಪಿಗೆ ಮತ ಹಾಕಿದರೆ, 2014 ರಲ್ಲಿ 43% ಮತದಾರರು ಬಿಜೆಪಿಗೆ ತಮ್ಮ ಮತ ನೀಡಿದರು. 2019ರಲ್ಲಿ ಬಿಜೆಪಿಯ ಮತದಾರರ ಪ್ರಮಾಣ 52%. ನಾವು, ನೆಟ್ಟಿಗರೂ, ಈ ಹೆಚ್ಚಳಕ್ಕೆ ಕಾರಣರಾಗಿದ್ದೇವೆಯೇ?

- Advertisement -
- Advertisement -

ಪ್ರಿಯ ನೆಟ್ಟಿಗರೆ,
ಕರ್ನಾಟಕದಲ್ಲಿ ಮೈತ್ರಿ ಸರಕಾರ ಸಂಕಷ್ಟದಲ್ಲಿದೆ. ಹಲವಾರು ಶಾಸಕರು ರಾಜೀನಾಮೆ ನೀಡಿದ್ದಾರೆ. ಕುದುರೆ ವ್ಯಾಪಾರ ನಡೆಯುತ್ತಿದೆ ಎನ್ನುವ ಸುದ್ದಿಗಳು ಪ್ರಚಲಿತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರೂ ಇದರ ಬಗ್ಗೆಯೇ ಬರಹಗಳನ್ನು ಬರೆಯುತ್ತಿದ್ದೀರಿ. ಸದ್ಯದ ಸ್ಥಿತಿಯನ್ನು ವಿವರಿಸಲು ಇಷ್ಟು ಮಟ್ಟದ ಹಾಸ್ಯದ ವ್ಯಂಗ್ಯದ ಬಳಕೆಗೆ ಒಂದು ರೀತಿಯ ಪೈಪೋಟಿಯೇ ನಡೆಸಿದ್ದಂತಿದೆ.

ಈ ರೀತಿಯಲ್ಲಿ ಗೇಲಿ ಮಾಡಲು ನಮಗೆ ಸಂಪೂರ್ಣ ಅಧಿಕಾರವಿದೆ. ಎಲ್ಲಾ ರಾಜಕೀಯ ಹಿತಾಸಕ್ತಿಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ಗೇಲಿಯಾಗುತ್ತಿದೆ ಎನ್ನುವ ಅರಿವಿದೆ. ಆದರೂ ಅವರೇನೂ ಮಾಡುವುದಿಲ್ಲ. ನಮಗೆ ಸಾಂವಿಧಾನಿಕವಾಗಿ ಸಿಕ್ಕ ಹಕ್ಕಿನ ಕಾರಣದಿಂದ, ಅವರೇನೂ ಮಾಡಲಾಗದೇ ನಿಷ್ಕ್ರಿಯರಾಗಿದ್ದಾರೆಂದು ನಾವೆಂದುಕೊಳ್ಳುತ್ತೇವೆ. ಆದರೆ ವಾಸ್ತವ ಅದಲ್ಲ. ಯಾವ ರಾಜಕೀಯ ಶಕ್ತಿಯೂ ನೇರವಾಗಿ ಯಾವ ಕ್ರಮಗಳನ್ನೂ ತೆಗೆದುಕೊಳ್ಳಲೇ ಇರುವುದಕ್ಕೆ ಕಾರಣವೆಂದರೆ ಈ ಬರಹಗಳು ಅವರಿಗೆ ಯಾವುದೇ ರೀತಿಯ ಅಪಾಯವನ್ನು ಒಡ್ಡುವುದಿಲ್ಲ. ಅಪಾಯ ಒಡ್ಡಿದಾಗ ಏನಾಗಬಹುದು ಎನ್ನುವುದನ್ನು ಈಗೀಗ ಕಾಣುತ್ತಿದ್ದೇವೆ.

ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದರಿಂದ ನಮಗೆಲ್ಲ ಒಂದು ರೀತಿಯ ಸೆನ್ಸ್ ಆಫ್ ಪಾವರ್ ಸಿಗುತ್ತೆ; ನಾವು ಇತರರಿಗಿಂತ ಉತ್ತಮರು ಎನ್ನುವ ಮೇಲರಿಮೆಯ ಭಾವನೆಯನ್ನೂ ನೀಡುತ್ತದೆ. ಈ ಮೇಲರಿಮೆ ನಮ್ಮ ಮುಂದೆ ಇರುವ ಸವಾಲುಗಳನ್ನು ಸರಿಯಾದ ರೀತಿಯಲ್ಲಿ ಎದುರಿಸದೇ ಇರುವುದಕ್ಕೆ ಕಾರಣವಾಗಬಲ್ಲದು.

ಆದರೆ ಪ್ರಸಕ್ತ ಬೆಳವಣಿಗೆಗಳಿಂದ ನಮಗಾರಿಗೂ ಆಘಾತವಾದಂತೆ ತೋರುತ್ತಿಲ್ಲ. ಆಘಾತವಾಗುವಂತಹ ಸಂದರ್ಭಗಳೇ ನಮಗಿಲ್ಲವೇನೋ? ನಮ್ಮಲ್ಲಿ ಕೆಲವರು ಈ ಬೆಳವಣಿಗೆಗೆ ಸಿಟ್ಟನ್ನು ತೋರಿಸುತ್ತಿದ್ದಾರೆ. ಈ ಸಿಟ್ಟನ್ನು ನಮ್ಮ ಫೇಸ್‍ಬುಕ್‍ನ ಜಾಣ್ಮೆಯ ಬರಹಗಳಿಂದ ಮಾತ್ರ ತಣಿಸಬೇಕೆ? ಅಪಾಯವಿರುವುದು ಇಲ್ಲಿಯೇ ಗೆಳೆಯರೆ, ನಮ್ಮ ಸಿಟ್ಟು ತಣಿದುಬಿಡುತ್ತೆ ಕೆಲಮಟ್ಟಿಗೆ. ಸಿಟ್ಟು ತಣಿಯದಂತೆ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಇನ್ನೂ ಒಂದು ವಾದವಿದೆ. ಆ ಸಿಟ್ಟು ಯಾವ ಕಾರಣಕ್ಕೆ? ಇವರನ್ನು ಆಯ್ಕೆ ಮಾಡಿದಾಗ ಇವರು ಎಂಥವರು ಎನ್ನುವುದು ನಮಗೆಲ್ಲರಿಗೂ ಚೆನ್ನಾಗಿ ಗೊತ್ತಿತ್ತು. ಇನ್ಯಾಕೆ ಸಿಟ್ಟು? ಎಂಬುದು. ಅದೂ ಸಹಾ ಅರ್ಧಸತ್ಯದ ಮಾತು. ನಾವು ಎಂದೂ ಇದರ ಬದಲಾವಣೆಗೆ ಕೈ ಹಾಕದಂತೆ ಮಾಡುವ ವಾದ ಅದು.

ಇನ್ನೊಂದು ವಿಷಯ, ಸುಮಾರು 2010ರಿಂದ ನಾವು ಬಿಜೆಪಿಯ, ನರೇಂದ್ರ ಮೋದಿಯ ಬೆಂಬಲಿಗರನ್ನು ಭಕ್ತರೆಂದು ಕರೆದು ಗೇಲಿ ಮಾಡುತ್ತಲೇ ಬಂದಿದ್ದೇವೆ. ಅವರನ್ನು ಅನ್‍ಫ್ರೆಂಡ್ ಮಾಡುವ ಬೆದರಿಕೆ ಹಾಕುತ್ತಲೇ ಬಂದಿದ್ದೇವೆ. ಅದರಿಂದ ಆದ ಪರಿಣಾಮ ಏನು ಎನ್ನುವ ಉತ್ತರವನ್ನು ಹುಡುಕುವ ಸಮಯ ಬಂದಿದೆ. 2009ರ ಚುನಾವಣೆಯಲ್ಲಿ ಕರ್ನಾಟಕದ ಮತದಾರರಲ್ಲಿ 41.6% ಜನ ಬಿಜೆಪಿಗೆ ಮತ ಹಾಕಿದರೆ, 2014 ರಲ್ಲಿ 43% ಮತದಾರರು ಬಿಜೆಪಿಗೆ ತಮ್ಮ ಮತ ನೀಡಿದರು. 2019ರಲ್ಲಿ ಬಿಜೆಪಿಯ ಮತದಾರರ ಪ್ರಮಾಣ 52%. ನಾವು, ನೆಟ್ಟಿಗರೂ, ಈ ಹೆಚ್ಚಳಕ್ಕೆ ಕಾರಣರಾಗಿದ್ದೇವೆಯೇ?

ಆಯ್ತು, ನಾವು ಕಾರಣರಲ್ಲ ಎಂದಿಟ್ಟುಕೊಳ್ಳೋಣ. ಸದ್ಯದ ಈ ಅಸಹ್ಯಕರ, ಅವಮಾನಕರ ವಿದ್ಯಮಾನಗಳು ಮುಂದೆ ಮರುಕಳಿಸದಂತೆ ಮಾಡಲು ನಮ್ಮ ವ್ಯಂಗ್ಯ, ಸಿಟ್ಟು ಏನಾದರೂ ಮಾಡಬಲ್ಲವೇ? ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನಾವು ಮಾಡುವ ಪ್ರತಿರೋಧ, ವ್ಯಂಗ್ಯಕ್ಕೆ ನೀಡಿರುವ ಸ್ವಾತಂತ್ರ್ಯವು ಒಂದು ಲೆಕ್ಕಾಚಾರದೊಂದಿಗೆ ನೀಡಲಾಗಿದ್ದು ಎನ್ನುವ ವಿಷಯವನ್ನು ಮನದಟ್ಟಾಗಿಸಬೇಕಿದೆ.

ಈ ವಿದ್ಯಮಾನಗಳು ನಮ್ಮನ್ನು, ನಮ್ಮ ರಾಜ್ಯವನ್ನು ಅವಮಾನಕ್ಕೆ ದೂಡಿವೆ ಎಂದರೆ ಇವು ಮರುಕಳಿಸದಂತೆ ಆಗದಂತೆ ಏನು ಮಾಡಬೇಕು ಎನ್ನುವ ಚಿಂತನೆಯೂ ಸಾಮಾಜಿಕ ಜಾಲತಾಣಗಳಲ್ಲಿ ಶುರು ಮಾಡಬೇಕಿದೆ. ಭವಿಷ್ಯವನ್ನು ರೂಪಿಸುವ ಚಿಂತನೆಗಳು ಶುರುವಾದರೆ ಅಲ್ಲಿ ವ್ಯಂಗ್ಯಕ್ಕೆ ಸ್ಥಾನವಿರುವುದಿಲ್ಲ; ಒಂದು ವೇಳೆ ಇದ್ದರೂ ಅದು Constructive ಆಗಿರುತ್ತೆ. ನಮ್ಮ ಪ್ರತಿ ಫೇಸ್‍ಬುಕ್ ಗೋಡೆಬರಹ ಸಕಾರಾತ್ಮಕ ಬದಲಾವಣೆಗೆ ಪೂರಕವಾಗಿದೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

ರಾಜಕೀಯ ಸ್ಥಿತಿಯನ್ನು ಉತ್ತಮವಾಗಿ ವಿಶ್ಲೇಷಿಸಿದ್ದೇವೆ ಎಂದ ಮಾತ್ರಕ್ಕೆ ಹೆಮ್ಮೆ ಪಡುವುದನ್ನು ನಿಲ್ಲಿಸುತ್ತೇವೆ. ಖಾರವಾಗಿ ಬರೆಯುವುದರಿಂದ ಏನಾದರೂ ಲಾಭವಿದೆಯೇ ಎನ್ನುವುದನ್ನು ಕೇಳಿಕೊಳ್ಳುತ್ತೇವೆ. ಸತ್ಯವನ್ನು ನುಡಿದ ಮಾತ್ರಕ್ಕೆ ನಮ್ಮ ಕರ್ತವ್ಯ ಮುಗಿಯುವುದಿಲ್ಲ ಎಂದುದು ತಿಳಿಯುವುದೂ ಭವಿಷ್ಯಕ್ಕೆ ನಾವು ನಿಜವಾಗಿಯೂ ಜವಾಬ್ದಾರರಾದಾಗ ಮಾತ್ರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...