Homeಕರ್ನಾಟಕಈ ದುರಿತ ಕಾಲದಲ್ಲಿ ನೆಟ್ಟಿಗರಿಗೊಂದು ಸಿಟ್ಟಿನ ಪತ್ರ

ಈ ದುರಿತ ಕಾಲದಲ್ಲಿ ನೆಟ್ಟಿಗರಿಗೊಂದು ಸಿಟ್ಟಿನ ಪತ್ರ

2009ರ ಚುನಾವಣೆಯಲ್ಲಿ ಕರ್ನಾಟಕದ ಮತದಾರರಲ್ಲಿ 41.6% ಜನ ಬಿಜೆಪಿಗೆ ಮತ ಹಾಕಿದರೆ, 2014 ರಲ್ಲಿ 43% ಮತದಾರರು ಬಿಜೆಪಿಗೆ ತಮ್ಮ ಮತ ನೀಡಿದರು. 2019ರಲ್ಲಿ ಬಿಜೆಪಿಯ ಮತದಾರರ ಪ್ರಮಾಣ 52%. ನಾವು, ನೆಟ್ಟಿಗರೂ, ಈ ಹೆಚ್ಚಳಕ್ಕೆ ಕಾರಣರಾಗಿದ್ದೇವೆಯೇ?

- Advertisement -
- Advertisement -

ಪ್ರಿಯ ನೆಟ್ಟಿಗರೆ,
ಕರ್ನಾಟಕದಲ್ಲಿ ಮೈತ್ರಿ ಸರಕಾರ ಸಂಕಷ್ಟದಲ್ಲಿದೆ. ಹಲವಾರು ಶಾಸಕರು ರಾಜೀನಾಮೆ ನೀಡಿದ್ದಾರೆ. ಕುದುರೆ ವ್ಯಾಪಾರ ನಡೆಯುತ್ತಿದೆ ಎನ್ನುವ ಸುದ್ದಿಗಳು ಪ್ರಚಲಿತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರೂ ಇದರ ಬಗ್ಗೆಯೇ ಬರಹಗಳನ್ನು ಬರೆಯುತ್ತಿದ್ದೀರಿ. ಸದ್ಯದ ಸ್ಥಿತಿಯನ್ನು ವಿವರಿಸಲು ಇಷ್ಟು ಮಟ್ಟದ ಹಾಸ್ಯದ ವ್ಯಂಗ್ಯದ ಬಳಕೆಗೆ ಒಂದು ರೀತಿಯ ಪೈಪೋಟಿಯೇ ನಡೆಸಿದ್ದಂತಿದೆ.

ಈ ರೀತಿಯಲ್ಲಿ ಗೇಲಿ ಮಾಡಲು ನಮಗೆ ಸಂಪೂರ್ಣ ಅಧಿಕಾರವಿದೆ. ಎಲ್ಲಾ ರಾಜಕೀಯ ಹಿತಾಸಕ್ತಿಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ಗೇಲಿಯಾಗುತ್ತಿದೆ ಎನ್ನುವ ಅರಿವಿದೆ. ಆದರೂ ಅವರೇನೂ ಮಾಡುವುದಿಲ್ಲ. ನಮಗೆ ಸಾಂವಿಧಾನಿಕವಾಗಿ ಸಿಕ್ಕ ಹಕ್ಕಿನ ಕಾರಣದಿಂದ, ಅವರೇನೂ ಮಾಡಲಾಗದೇ ನಿಷ್ಕ್ರಿಯರಾಗಿದ್ದಾರೆಂದು ನಾವೆಂದುಕೊಳ್ಳುತ್ತೇವೆ. ಆದರೆ ವಾಸ್ತವ ಅದಲ್ಲ. ಯಾವ ರಾಜಕೀಯ ಶಕ್ತಿಯೂ ನೇರವಾಗಿ ಯಾವ ಕ್ರಮಗಳನ್ನೂ ತೆಗೆದುಕೊಳ್ಳಲೇ ಇರುವುದಕ್ಕೆ ಕಾರಣವೆಂದರೆ ಈ ಬರಹಗಳು ಅವರಿಗೆ ಯಾವುದೇ ರೀತಿಯ ಅಪಾಯವನ್ನು ಒಡ್ಡುವುದಿಲ್ಲ. ಅಪಾಯ ಒಡ್ಡಿದಾಗ ಏನಾಗಬಹುದು ಎನ್ನುವುದನ್ನು ಈಗೀಗ ಕಾಣುತ್ತಿದ್ದೇವೆ.

ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದರಿಂದ ನಮಗೆಲ್ಲ ಒಂದು ರೀತಿಯ ಸೆನ್ಸ್ ಆಫ್ ಪಾವರ್ ಸಿಗುತ್ತೆ; ನಾವು ಇತರರಿಗಿಂತ ಉತ್ತಮರು ಎನ್ನುವ ಮೇಲರಿಮೆಯ ಭಾವನೆಯನ್ನೂ ನೀಡುತ್ತದೆ. ಈ ಮೇಲರಿಮೆ ನಮ್ಮ ಮುಂದೆ ಇರುವ ಸವಾಲುಗಳನ್ನು ಸರಿಯಾದ ರೀತಿಯಲ್ಲಿ ಎದುರಿಸದೇ ಇರುವುದಕ್ಕೆ ಕಾರಣವಾಗಬಲ್ಲದು.

ಆದರೆ ಪ್ರಸಕ್ತ ಬೆಳವಣಿಗೆಗಳಿಂದ ನಮಗಾರಿಗೂ ಆಘಾತವಾದಂತೆ ತೋರುತ್ತಿಲ್ಲ. ಆಘಾತವಾಗುವಂತಹ ಸಂದರ್ಭಗಳೇ ನಮಗಿಲ್ಲವೇನೋ? ನಮ್ಮಲ್ಲಿ ಕೆಲವರು ಈ ಬೆಳವಣಿಗೆಗೆ ಸಿಟ್ಟನ್ನು ತೋರಿಸುತ್ತಿದ್ದಾರೆ. ಈ ಸಿಟ್ಟನ್ನು ನಮ್ಮ ಫೇಸ್‍ಬುಕ್‍ನ ಜಾಣ್ಮೆಯ ಬರಹಗಳಿಂದ ಮಾತ್ರ ತಣಿಸಬೇಕೆ? ಅಪಾಯವಿರುವುದು ಇಲ್ಲಿಯೇ ಗೆಳೆಯರೆ, ನಮ್ಮ ಸಿಟ್ಟು ತಣಿದುಬಿಡುತ್ತೆ ಕೆಲಮಟ್ಟಿಗೆ. ಸಿಟ್ಟು ತಣಿಯದಂತೆ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಇನ್ನೂ ಒಂದು ವಾದವಿದೆ. ಆ ಸಿಟ್ಟು ಯಾವ ಕಾರಣಕ್ಕೆ? ಇವರನ್ನು ಆಯ್ಕೆ ಮಾಡಿದಾಗ ಇವರು ಎಂಥವರು ಎನ್ನುವುದು ನಮಗೆಲ್ಲರಿಗೂ ಚೆನ್ನಾಗಿ ಗೊತ್ತಿತ್ತು. ಇನ್ಯಾಕೆ ಸಿಟ್ಟು? ಎಂಬುದು. ಅದೂ ಸಹಾ ಅರ್ಧಸತ್ಯದ ಮಾತು. ನಾವು ಎಂದೂ ಇದರ ಬದಲಾವಣೆಗೆ ಕೈ ಹಾಕದಂತೆ ಮಾಡುವ ವಾದ ಅದು.

ಇನ್ನೊಂದು ವಿಷಯ, ಸುಮಾರು 2010ರಿಂದ ನಾವು ಬಿಜೆಪಿಯ, ನರೇಂದ್ರ ಮೋದಿಯ ಬೆಂಬಲಿಗರನ್ನು ಭಕ್ತರೆಂದು ಕರೆದು ಗೇಲಿ ಮಾಡುತ್ತಲೇ ಬಂದಿದ್ದೇವೆ. ಅವರನ್ನು ಅನ್‍ಫ್ರೆಂಡ್ ಮಾಡುವ ಬೆದರಿಕೆ ಹಾಕುತ್ತಲೇ ಬಂದಿದ್ದೇವೆ. ಅದರಿಂದ ಆದ ಪರಿಣಾಮ ಏನು ಎನ್ನುವ ಉತ್ತರವನ್ನು ಹುಡುಕುವ ಸಮಯ ಬಂದಿದೆ. 2009ರ ಚುನಾವಣೆಯಲ್ಲಿ ಕರ್ನಾಟಕದ ಮತದಾರರಲ್ಲಿ 41.6% ಜನ ಬಿಜೆಪಿಗೆ ಮತ ಹಾಕಿದರೆ, 2014 ರಲ್ಲಿ 43% ಮತದಾರರು ಬಿಜೆಪಿಗೆ ತಮ್ಮ ಮತ ನೀಡಿದರು. 2019ರಲ್ಲಿ ಬಿಜೆಪಿಯ ಮತದಾರರ ಪ್ರಮಾಣ 52%. ನಾವು, ನೆಟ್ಟಿಗರೂ, ಈ ಹೆಚ್ಚಳಕ್ಕೆ ಕಾರಣರಾಗಿದ್ದೇವೆಯೇ?

ಆಯ್ತು, ನಾವು ಕಾರಣರಲ್ಲ ಎಂದಿಟ್ಟುಕೊಳ್ಳೋಣ. ಸದ್ಯದ ಈ ಅಸಹ್ಯಕರ, ಅವಮಾನಕರ ವಿದ್ಯಮಾನಗಳು ಮುಂದೆ ಮರುಕಳಿಸದಂತೆ ಮಾಡಲು ನಮ್ಮ ವ್ಯಂಗ್ಯ, ಸಿಟ್ಟು ಏನಾದರೂ ಮಾಡಬಲ್ಲವೇ? ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನಾವು ಮಾಡುವ ಪ್ರತಿರೋಧ, ವ್ಯಂಗ್ಯಕ್ಕೆ ನೀಡಿರುವ ಸ್ವಾತಂತ್ರ್ಯವು ಒಂದು ಲೆಕ್ಕಾಚಾರದೊಂದಿಗೆ ನೀಡಲಾಗಿದ್ದು ಎನ್ನುವ ವಿಷಯವನ್ನು ಮನದಟ್ಟಾಗಿಸಬೇಕಿದೆ.

ಈ ವಿದ್ಯಮಾನಗಳು ನಮ್ಮನ್ನು, ನಮ್ಮ ರಾಜ್ಯವನ್ನು ಅವಮಾನಕ್ಕೆ ದೂಡಿವೆ ಎಂದರೆ ಇವು ಮರುಕಳಿಸದಂತೆ ಆಗದಂತೆ ಏನು ಮಾಡಬೇಕು ಎನ್ನುವ ಚಿಂತನೆಯೂ ಸಾಮಾಜಿಕ ಜಾಲತಾಣಗಳಲ್ಲಿ ಶುರು ಮಾಡಬೇಕಿದೆ. ಭವಿಷ್ಯವನ್ನು ರೂಪಿಸುವ ಚಿಂತನೆಗಳು ಶುರುವಾದರೆ ಅಲ್ಲಿ ವ್ಯಂಗ್ಯಕ್ಕೆ ಸ್ಥಾನವಿರುವುದಿಲ್ಲ; ಒಂದು ವೇಳೆ ಇದ್ದರೂ ಅದು Constructive ಆಗಿರುತ್ತೆ. ನಮ್ಮ ಪ್ರತಿ ಫೇಸ್‍ಬುಕ್ ಗೋಡೆಬರಹ ಸಕಾರಾತ್ಮಕ ಬದಲಾವಣೆಗೆ ಪೂರಕವಾಗಿದೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

ರಾಜಕೀಯ ಸ್ಥಿತಿಯನ್ನು ಉತ್ತಮವಾಗಿ ವಿಶ್ಲೇಷಿಸಿದ್ದೇವೆ ಎಂದ ಮಾತ್ರಕ್ಕೆ ಹೆಮ್ಮೆ ಪಡುವುದನ್ನು ನಿಲ್ಲಿಸುತ್ತೇವೆ. ಖಾರವಾಗಿ ಬರೆಯುವುದರಿಂದ ಏನಾದರೂ ಲಾಭವಿದೆಯೇ ಎನ್ನುವುದನ್ನು ಕೇಳಿಕೊಳ್ಳುತ್ತೇವೆ. ಸತ್ಯವನ್ನು ನುಡಿದ ಮಾತ್ರಕ್ಕೆ ನಮ್ಮ ಕರ್ತವ್ಯ ಮುಗಿಯುವುದಿಲ್ಲ ಎಂದುದು ತಿಳಿಯುವುದೂ ಭವಿಷ್ಯಕ್ಕೆ ನಾವು ನಿಜವಾಗಿಯೂ ಜವಾಬ್ದಾರರಾದಾಗ ಮಾತ್ರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...