Homeಅಂತರಾಷ್ಟ್ರೀಯಜಗತ್ ವಿಖ್ಯಾತಿ ಗಳಿಸಿ ಸಾವನ್ನಪ್ಪಿರುವ ಗಾಜಾ ಪತ್ರಕರ್ತೆ ಫಾತಿಮಾ ಹಸೌನಾ ಕುರಿತು ಒಂದಿಷ್ಟು....

ಜಗತ್ ವಿಖ್ಯಾತಿ ಗಳಿಸಿ ಸಾವನ್ನಪ್ಪಿರುವ ಗಾಜಾ ಪತ್ರಕರ್ತೆ ಫಾತಿಮಾ ಹಸೌನಾ ಕುರಿತು ಒಂದಿಷ್ಟು….

- Advertisement -
- Advertisement -

ಗಾಜಾದ ಜಗತ್ ವಿಖ್ಯಾತಿ ಗಳಿಸಿದ್ದ 25 ವರ್ಷದ ಛಾಯಾಗ್ರಾಹಕಿ ಫಾತಿಮಾ ಹಸೌನಾ ಅವರು ಗಾಜಾ ನಗರದ ಅಲ್-ತುಫಾ ನೆರೆಹೊರೆಯಲ್ಲಿರುವ ಅವರ ಮನೆಯ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಗೆ ಬುಧವಾರದಂದು ಬಲಿಯಾಗಿದ್ದಾರೆ. ಈ ಸ್ಫೋಟದಲ್ಲಿ ಫಾತಿಮಾ ಮತ್ತು ಆಕೆಯ ಗರ್ಭಿಣಿ ಸಹೋದರಿ ಸೇರಿದಂತೆ ಹತ್ತು ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ.

ಅವರು ಫೋಟೋಗಳು ಮತ್ತು ವೀಡಿಯೊಗಳ ಮೂಲಕ ಗಾಜಾದಲ್ಲಿನ ಜೀವನವನ್ನು ದಾಖಲಿಸುವಲ್ಲಿ ವರ್ಷಗಳನ್ನು ಕಳೆದಿದ್ದರು, ದುಃಖ, ಸಾವುನೋವು ಮತ್ತು ಪ್ರತಿಭಟನೆಯ ದೈನಂದಿನ ದೃಶ್ಯಗಳನ್ನು ಸೆರೆಹಿಡಿದಿದ್ದರು. ಇಲ್ಲಿನ ಯುದ್ಧದ ಕ್ರೌರ್ಯವನ್ನು ದಾಖಲಿಸಲು ಒಂದೂವರೆ ವರ್ಷದಿಂದ ಗಾಜಾದಲ್ಲಿ ಕಳೆದಿದ್ದರು. ಇಲ್ಲಿ ಅವರು ಯುದ್ದದ ವೈಮಾನಿಕ ದಾಳಿಗಳು, ತನ್ನ ಮನೆಯ ನಾಶ ಮತ್ತು ತನ್ನ ಹತ್ತು ಸಂಬಂಧಿಕರ ಭೀಕರ ಸಾವಿನ ಚಿತ್ರಗಳನ್ನೂ ಸೆರೆಹಿಡಿದ್ದರು.

ನಿರಂತರ ಅಪಾಯಗಳ ಹೊರತಾಗಿಯೂ ಫಾತಿಮಾ ಹಸೌನಾ ತನ್ನ ಕಣ್ಣುಗಳ ಮೂಲಕ ಗಾಜಾದ ಕಥೆಯನ್ನು ಜಗತ್ತಿಗೆ ಹೇಳಲು ಬದ್ಧರಾಗಿದ್ದರು. ಸಾವು ಯಾವಾಗಲೂ ತನ್ನ ಹತ್ತಿರದಲ್ಲಿದೆ ಎಂದು ಅವರಿಗೆ ತಿಳಿದಿತ್ತು, ಆದರೆ ತಮ್ಮ ಕಥೆಯನ್ನು ಇಡೀ ಜಗತ್ತಿಗೆ ತಿಳಿಸಬೇಕೆಂದು ಅವರು ದೃಢನಿಶ್ಚಯ ಹೊಂದಿದ್ದರು.

“ನಾನು ಸಾವನ್ನಪ್ಪುವುದಿದ್ದರೆ, ನನಗೆ ಜೋರಾದ ಸಾವು ಬರಲು ಬಯಸುತ್ತೇನೆ” ಎಂದು ಅವರು ಒಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದರು. “ನಾನು ಕೇವಲ ಬ್ರೇಕಿಂಗ್ ನ್ಯೂಸ್ ಅಥವಾ ಗುಂಪಿನಲ್ಲಿರುವ ಒಂದು ಸಂಖ್ಯೆಯಾಗಿರಲು ಬಯಸುವುದಿಲ್ಲ. ಜಗತ್ತು ಕೇಳುವ ಸಾವು, ಕಾಲಾಂತರದಲ್ಲಿ ಉಳಿಯುವ ಆಘಾತ, ಕಾಲ ಅಥವಾ ಸ್ಥಳವು ಹೂತುಹಾಕಲು ಸಾಧ್ಯವಾಗದ ಕಾಲಾತೀತ ಚಿತ್ರ ನನಗೆ ಬೇಕು.”

ಫಾತಿಮಾ ಹಸೌನಾ ತನ್ನ ಮದುವೆಗೆ ಕೆಲವು ದಿನಗಳ ಮೊದಲು ಬುಧವಾರ ಉತ್ತರ ಗಾಜಾದಲ್ಲಿರುವ ಅವರ ಮನೆಯ ಮೇಲೆ ಇಸ್ರೇಲಿ ವೈಮಾನಿಕ ದಾಳಿ ನಡೆಸಿದಾಗ ಆ ಆಸೆ ದುರಂತವಾಗಿ ಅಂತ್ಯಕಂಡಿತ್ತು.

ಇಸ್ರೇಲಿ ಸೈನಿಕರು ಮತ್ತು ನಾಗರಿಕರ ವಿರುದ್ಧ ದಾಳಿಗಳಲ್ಲಿ ಭಾಗಿಯಾಗಿದ್ದ ಹಮಾಸ್ ಸದಸ್ಯನನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲಿ ಸೇನೆ ತಿಳಿಸಿದೆ.

ಫಾತಿಮಾ ಹಸೌನಾ ಅವರ ಸಾವಿಗೆ 24 ಗಂಟೆಗಳ ಮೊದಲು, ಇಸ್ರೇಲಿ ದಾಳಿಯ ಸಮಯದಲ್ಲಿ ಗಾಜಾದಲ್ಲಿ ಹಸೌನಾ ಜೀವನದ ಕುರಿತಾದ ಸಾಕ್ಷ್ಯಚಿತ್ರವನ್ನು ಕ್ಯಾನೆಸ್ ಜೊತೆಗೆ ನಡೆಯುತ್ತಿರುವ ಫ್ರೆಂಚ್ ಸ್ವತಂತ್ರ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು ಎಂದು ಘೋಷಿಸಲಾಗಿತ್ತು.

ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುತ್ತಿರುವ ಕ್ಯಾನೆಸ್ ಚಲನಚಿತ್ರೋತ್ಸವವು ಈ ಸಂದರ್ಭದಲ್ಲಿ ಹೃತ್ಪೂರ್ವಕ ಗೌರವವನ್ನು ಹಂಚಿಕೊಂಡಿದೆ. “ಅವಳ ನಗು ಅವಳ ದೃಢತೆಯಷ್ಟೇ ಮಾಂತ್ರಿಕವಾಗಿತ್ತು. ಅಲ್ಲಿನ ದುರಂತ ಘಟನೆಗಳಿಗೆ ಸಾಕ್ಷಿಯಾಗುವುದು, ಶೋಕ, ಹಸಿವಿನ ಗಾಜಾದ ಛಾಯಾಚಿತ್ರ ತೆಗೆಯುವುದು, ಬಾಂಬ್‌ಗಳ ನಡುವೆ ಆಹಾರವನ್ನು ವಿತರಿಸುವುದು, ನಾವು ಅವಳ ಬಗ್ಗೆ ಭಯಭೀತರಾಗಿದ್ದೆವು.”

ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಹಸೌನರ ಕುರಿತು ಇರಾನಿನ ನಿರ್ದೇಶಕಿ ಸೆಪಿದೇಹ್ ಫಾರ್ಸಿಯ ಚಿತ್ರೀಕರಿಸಿದ ಸಾಕ್ಷ್ಯಚಿತ್ರವನ್ನು ಮೇ ತಿಂಗಳಲ್ಲಿ ಪ್ರದರ್ಶಿಸಲಾಗುವುದು. ಹಸೌನಾ ಎಂಬ ಯುವತಿಯ ಜೀವ ಶಕ್ತಿ ಪವಾಡದಂತೆ ಕಾಣುವ ಚಿತ್ರವನ್ನು ನಾವು ವೀಕ್ಷಿಸಿದ್ದೇವೆ ಮತ್ತು ಕಾರ್ಯಕ್ರಮ ಮಾಡಿದ್ದೇವೆ ಎಂದು ಕ್ಯಾನೆಸ್ ಚಲನಚಿತ್ರೋತ್ಸವದ ತಂಡವು ಹೇಳಿದೆ.

ಆಕೆಯ ಮರಣಾನಂತರ ಅದು ಹೀಗೆ ಬರೆದಿದೆ: “ಇಂದಿನ ಸೂರ್ಯನು ಹಾನಿಯನ್ನು ತರುವುದಿಲ್ಲ. ಕುಂಡಗಳಲ್ಲಿರುವ ಸಸ್ಯಗಳು ಸೌಮ್ಯವಾದ ಸಂದರ್ಶಕನಿಗೆ ಹೊಂದಿಕೊಳ್ಳುತ್ತವೆ. ತಾಯಂದಿರು ತಮ್ಮ ಬಟ್ಟೆಗಳನ್ನು ಬೇಗನೆ ಒಣಗಿಸಲು ಸಹಾಯ ಮಾಡುವಷ್ಟು ಪ್ರಕಾಶಮಾನವಾಗಿರುತ್ತದೆ ಮತ್ತು ಮಕ್ಕಳು ದಿನವಿಡೀ ಆಟವಾಡಲು ಸಾಕಷ್ಟು ತಂಪಾಗಿರುತ್ತದೆ. ಇಂದಿನ ಸೂರ್ಯ ಯಾರ ಮೇಲೂ ಕಠಿಣವಾಗಿರುವುದಿಲ್ಲ.”

ನಿರ್ದೇಶಕಿ ಸೆಪಿದೇಹ್ ಫಾರ್ಸಿ ನಿರ್ಮಿಸಿದ ‘ಪುಟ್ ಯುವರ್ ಸೋಲ್ ಆನ್ ಯುವರ್ ಹ್ಯಾಂಡ್ ಅಂಡ್ ವಾಕ್’ ಚಿತ್ರವು, ಹಸೌನಾ ಮತ್ತು ಫಾರ್ಸಿ ನಡುವಿನ ವೀಡಿಯೊ ಸಂಭಾಷಣೆಗಳ ಮೂಲಕ ಗಾಜಾದಲ್ಲಿರುವ ಪ್ಯಾಲೆಸ್ಟೀನಿಯನ್ನರ ದೈನಂದಿನ ಜೀವನದ ಕಥೆಯನ್ನು ಹೇಳುತ್ತದೆ. ”ನಾನು ಅವಳ ನಗು, ಅವಳ ಕಣ್ಣೀರು, ಅವಳ ಭರವಸೆಗಳು ಮತ್ತು ಅವಳ ಖಿನ್ನತೆಯನ್ನು ಚಿತ್ರೀಕರಿಸಿದೆ” ಎಂದು ಫಾರ್ಸಿ ವಿವರಿಸಿದ್ದಾರೆ.

“ಅವಳು ತುಂಬಾ ನಿರಾಳವಾಗಿದ್ದಳು, ತುಂಬಾ ಪ್ರತಿಭಾನ್ವಿತೆ. ನೀವು ಈ ಸಾಕ್ಷ್ಯಚಿತ್ರವನ್ನು ನೋಡಿದಾಗ ನಿಮಗೆ ಅರ್ಥವಾಗುತ್ತದೆ” ಎಂದು ಫಾರ್ಸಿ ಅವರು ಡೆಡ್‌ಲೈನ್‌ಗೆ ತಿಳಿಸಿದ್ದಾರೆ. “ಅವಳ ಸಾವಿನ ಕೆಲವು ಗಂಟೆಗಳ ಹಿಂದೆ ನಾನು ಅವಳೊಂದಿಗೆ ಮಾತನಾಡಿದ್ದೆ, ಆ ಚಿತ್ರ ಕೇನ್ಸ್‌ನಲ್ಲಿ ಪ್ರದರ್ಶನಗೊಳ್ಳಲಿದೆ ಬನ್ನಿ ಎಂದು ಹೇಳಿ ಅವಳನ್ನು ಆಹ್ವಾನಿಸಿದ್ದೆ” ಎಂದು ಫಾರ್ಸಿ ವಿವರಿಸುತ್ತಾರೆ.

ಹಸೌನಾಳ ಜೀವಕ್ಕಾಗಿ ತಾನು ಭಯದಿಂದ ಬದುಕಿದ್ದೆ. ಆದರೆ ಅವಳೆ ಭಯಪಡದಿದ್ದರೆ, ನನಗೆ ಅವಳ ಬಗ್ಗೆ ಭಯಪಡುವ ಹಕ್ಕಿಲ್ಲ ಎಂದು ನಾನು ನನಗೆ ಹೇಳಿಕೊಂಡೆ. ನಾನು ಅವಳ ಶಕ್ತಿಗೆ, ಅವಳ ಅಚಲ ನಂಬಿಕೆಗೆ ಅಂಟಿಕೊಂಡೆ ಎಂದು ಫಾರ್ಸಿ ಹೇಳುತ್ತಾರೆ.

ಫ್ರಾನ್ಸ್‌ನಲ್ಲಿ ದೇಶಭ್ರಷ್ಟರಾಗಿ ವಾಸಿಸುತ್ತಿರುವ ಫಾರ್ಸಿ, ಇತ್ತೀಚಿನ ಇತಿಹಾಸದಲ್ಲಿ ಗಾಜಾ ಪತ್ರಕರ್ತರಿಗೆ ಅತ್ಯಂತ ಮಾರಕ ಸಂಘರ್ಷವಾಗಿದ್ದು, 2023ರಿಂದ 170ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಆದು ಕೆಲವು ಅಂದಾಜಿನ ಪ್ರಕಾರ 206ರವರೆಗೆ ಹೆಚ್ಚಾಗಿದೆ ಎಂದು ಹೇಳುತ್ತಾರೆ.

ಇಸ್ರೇಲಿ ವೈಮಾನಿಕ ದಾಳಿಯು ಹಸೌನಾಳನ್ನು ತಮ್ಮಿಂದ ಕಸಿದುಕೊಂಡಿದೆ ಎಂಬ ಸುದ್ದಿಯನ್ನು ಕೇಳಿದ ಗಾಜಾದ ಸಹ ಪತ್ರಕರ್ತರು ದುಃಖ ಮತ್ತು ಆಕ್ರೋಶದಿಂದ ಪ್ರತಿಕ್ರಿಯಿಸಿದ್ದಾರೆ. “ಹಸೌನಾ ಬಾಂಬ್ ದಾಳಿ ಮತ್ತು ಗುಂಡಿನ ಚಕಮಕಿಯ ನಡುವೆಯೂ ಗಾಜಾದಲ್ಲಿನ ಹತ್ಯಾಕಾಂಡಗಳನ್ನು ತಮ್ಮ ಕಣ್ಣಿನಿಂದ ದಾಖಲಿಸಿದ್ದರು. ಜನರ ನೋವು ಮತ್ತು ಕಿರುಚಾಟಗಳನ್ನು ತಮ್ಮ ಛಾಯಾಚಿತ್ರಗಳಲ್ಲಿ ಸೆರೆಹಿಡಿದಿದ್ದರು” ಎಂದು ಗಾಜಾದಲ್ಲಿರುವ ಅಲ್ ಜಜೀರಾ ವರದಿಗಾರ ಅನಸ್ ಅಲ್-ಶರೀಫ್ ದುಃಖಿಸುತ್ತಾ ಹೇಳುತ್ತಾರೆ.

ಗಾಜಾ ಮೂಲದ ಮತ್ತೊಬ್ಬ ಪತ್ರಕರ್ತೆ ಮಿಕ್ದಾದ್ ಜಮೀಲ್, ಜನರು ಹಸೌನಾರ ಗಾಜಾ ಪರಿಸ್ಥಿತಿ ಕುರಿತು ಸೆರೆಹಿಡಿದ ಫೋಟೋಗಳನ್ನು ನೋಡಬೇಕು, ಅವರ ಮಾತುಗಳನ್ನು ಓದಬೇಕು. ಗಾಜಾದ ಜೀವನ, ಯುದ್ಧದಲ್ಲಿ ಅಲ್ಲಿನ ಮಕ್ಕಳ ಹೋರಾಟದ ಕುರಿತು ಅವರು ಸೆರೆಹಿಡಿದ ಚಿತ್ರಗಳನ್ನು ಅವರ ಮಸೂರದ ಮೂಲಕ ವೀಕ್ಷಿಸಿ” ಎಂದು ಕರೆ ನೀಡಿದ್ದಾರೆ.

ಗಾಜಾದ ಪ್ಯಾಲೆಸ್ಟೀನಿಯನ್ ಕವಿ ಹೈದರ್ ಅಲ್-ಘಜಾಲಿಯವರು ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ, ‘ತಾನು ಕೊಲ್ಲಲ್ಪಡುವ ಮೊದಲು, ಹಸೌನಾ ತಾನು ಸತ್ತಾಗ ತನಗಾಗಿ ಒಂದು ಕವಿತೆ ಬರೆಯಲು ಕೇಳಿಕೊಂಡಿದ್ದಳು’ ಎಂದು ಹೇಳಿದ್ದಾರೆ.

ಪ್ಲಾನ್ ಇಂಟರ್ನ್ಯಾಷನಲ್‌ನ ಜಾಗತಿಕ ಮಾನವೀಯ ನಿರ್ದೇಶಕ ಡಾ. ಉನ್ನಿ ಕೃಷ್ಣನ್, ಫಾತಿಮಾ ನಮ್ಮೆಲ್ಲರಿಗೂ ಸ್ಫೂರ್ತಿಯ ದಾರಿದೀಪವಾಗಿದ್ದರು ಎಂದು ಹೇಳಿದ್ದಾರೆ.

ತನ್ನ ನಿರ್ಭೀತ ಕಥೆ ಹೇಳುವಿಕೆ ಮತ್ತು ಸಂಘರ್ಷದ ಸಂದರ್ಭದಲ್ಲಿ ಅಚಲ ಧೈರ್ಯದ ಮೂಲಕ ಅವರು ಗಾಜಾದ ಹೃದಯಕ್ಕೆ ಜಗತ್ತಿಗೆ ಒಂದು ಕಿಂಡಿಯನ್ನು ನೀಡಿದವರು. ನಾವು ಫಾತಿಮಾ ಅವರನ್ನು ಕೇವಲ ಪ್ರಬಲ ಧ್ವನಿಯಾಗಿ ಅಲ್ಲ, ಜೀವನ, ಕಲೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಗಾಜಾದ ಜನರ ಮೇಲಿನ ಪ್ರೀತಿಯಿಂದ ತುಂಬಿದ ವ್ಯಕ್ತಿಯಾಗಿ ತಿಳಿದುಕೊಂಡೆವು ಎಂದು ಕೃಷ್ಣನ್ ಅಭಿಪ್ರಾಯಿಸಿದ್ದಾರೆ.

2023ರ ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ ಮೇಲಿನ ದಾಳಿಯ ನಂತರ, ಇಸ್ರೇಲ್ ಗಾಜಾದ ಮೇಲೆ ಬಾಂಬ್ ದಾಳಿಯನ್ನು ಪ್ರಾರಂಭಿಸಿದಾಗಿನಿಂದ ಸುಮಾರು 51,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಮಾರ್ಚ್‌ನಲ್ಲಿ ಹಮಾಸ್‌ನೊಂದಿಗಿನ ಕದನ ವಿರಾಮ ವಿಫಲವಾದಾಗಿನಿಂದ ಇಸ್ರೇಲ್ ತನ್ನ ಮಾರಕ ವೈಮಾನಿಕ ದಾಳಿಗಳನ್ನು ಪುನರಾರಂಭಿಸಿದೆ ಮತ್ತು ಶುಕ್ರವಾರ ನಡೆದ ದಾಳಿಗಳಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ.

ಮಂಗಳೂರು| ವಕ್ಫ್‌ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ: ಭಾರೀ ಸಂಖ್ಯೆಯಲ್ಲಿ ಜನರು ಭಾಗಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ’; ನ್ಯಾಯಮೂರ್ತಿ ಉಜ್ವಲ್  ಭೂಯಾನ್

ಹೊಸದಿಲ್ಲಿ: ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನತೆ ಮತ್ತು ಘನತೆಯ ಭರವಸೆ ನೀಡುತ್ತದೆ. ಆದರೆ ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತದ ಸಾಮಾಜಿಕ ರಚನೆಯಲ್ಲಿ ಬಿರುಕುಗಳು ಆಳವಾಗಿ ಅಡಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ...

ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ಆರೋಪ; ಎಎಸ್ಎ ಪ್ರತಿಭಟನೆ

ದಲಿತ ವಿದ್ಯಾರ್ಥಿಯ ಮೇಲೆ ಜಾತಿ ಆಧಾರಿತ ಹಲ್ಲೆ ನಡೆದಿದ್ದರೂ ಪ್ರಕರಣದಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದ (ಯುಒಎಚ್) ಆಡಳಿತಾತ್ಮಕ ನಿಷ್ಕ್ರಿಯತೆ ಇದೆ ಎಂದು ಆರೋಪಿಸಿ, ಅಂಬೇಡ್ಕರ್ ವಿದ್ಯಾರ್ಥಿ ಸಂಘ (ಎಎಸ್ಎ) ಸೋಮವಾರ (ಫೆ.23) ಪ್ರತಿಭಟನೆ ನಡೆಸಿತು...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಬಂಧನ

ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ರಾಷ್ಟ್ರೀಯ ಅಧ್ಯಕ್ಷ ಉದಯ್ ಭಾನು ಚಿಬ್ ಅವರನ್ನು ದೆಹಲಿ ಪೊಲೀಸರು ಮಂಗಳವಾರ (ಫೆ. 24) ಮುಂಜಾನೆ ಸುಮಾರು 4:30ಕ್ಕೆ ಬಂಧಿಸಿದ್ದಾರೆ. ಕಳೆದ ವಾರ ದೆಹಲಿಯ ಭಾರತ್ ಮಂಟಪದಲ್ಲಿ ನಡೆದ...

ಭೂ ವಿವಾದದಲ್ಲಿ ಸಹೋದರರ ಹತ್ಯೆ; ಒಂದೇ ಕುಟುಂಬದ 13 ಮಂದಿಗೆ ಜೀವಾವಧಿ ಶಿಕ್ಷೆ

ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಮಾರು 10 ವರ್ಷಗಳ ಹಿಂದೆ ಇಬ್ಬರು ಸಹೋದರರನ್ನು ಹತ್ಯೆಗೈದ ಪ್ರಕರಣದಲ್ಲಿ ಒಂದೇ ಕುಟುಂಬದ 13 ಮಂದಿಗೆ ಉತ್ತರ ಪ್ರದೇಶದ ಸಹರಾನ್‌ಪುರದ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು...

ಉತ್ತರ ಪ್ರದೇಶ: ಬಜರಂಗದಳ ದೂರಿನ ಮೇರೆಗೆ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಕೇರಳ ಮೂಲದ ಪಾದ್ರಿಯ ಬಂಧನ

ಬಜರಂಗದಳ ಸದಸ್ಯರು ನೀಡಿದ ದೂರಿನ ಮೇರೆಗೆ ಧಾರ್ಮಿಕ ಮತಾಂತರದ ಆರೋಪದ ಮೇಲೆ ಕೇರಳದ ಪಾದ್ರಿಯೊಬ್ಬರನ್ನು ಉತ್ತರ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ತಿರುವನಂತಪುರಂ ಮೂಲದ ಪಾದ್ರಿ ಜೋಸ್ ಥಾಮಸ್,...

‘ನಾಚಿಕೆಗೇಡು ಅಂದ್ರೇನು ನಾನು ಹೇಳ್ತೇನೆ’: ಅಮೆರಿಕ ವ್ಯಾಪಾರ ಒಪ್ಪಂದ, ಎಪ್‌ಸ್ಟೀನ್ ಫೈಲ್ಸ್ ಉಲ್ಲೇಖಿಸಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಎಐ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಶರ್ಟ್‌ ಬಿಚ್ಚಿ ಪ್ರತಿಭಟಿಸಿದ್ದನ್ನು 'ಗಲೀಜು, ನಾಚಿಕೆಗೇಡು'ಎಂದಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ವಿಡಿಯೋ ಮೂಲಕ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, "ಪ್ರಧಾನಿ...

ಜಾರ್ಖಂಡ್ | ಏರ್ ಆಂಬ್ಯುಲೆನ್ಸ್ ಪತನ : ರೋಗಿ, ವೈದ್ಯ ಸೇರಿ 7 ಮಂದಿ ಸಾವು

ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಆಂಬ್ಯುಲೆನ್ಸ್ ಜಾರ್ಖಂಡ್‌ನ ಛಾತ್ರಾ ಜಿಲ್ಲೆಯಲ್ಲಿ ಸೋಮವಾರ (ಫೆ.24) ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ ಏಳು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ರೆಡ್‌ಬರ್ಡ್‌ ಏರ್ವೇಸ್ ಪ್ರೈವೆಟ್ ಲಿಮಿಟೆಡ್ ಎಂಬ ಸಂಸ್ಥೆ ನಿರ್ವಹಣೆ...

ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ

ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಬಹುಕಾಲದ ಸಂಪೂರ್ಣ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿ (ಎಸ್‌ಸಿ) ಎಡಗೈ ಸಂಬಂಧಿತ ಜಾತಿ ಮುಖಂಡರು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳು ಮತ್ತು...

“ಇಲ್ಲಿ 60 ವರ್ಷ ವಾಸಿಸಿದ್ದೆವು, ಒಂದೇ ದಿನದಲ್ಲಿ ನಿರಾಶ್ರಿತರಾದೆವು”: ಅಜಿ ನದಿ ದಡದ ಅಕ್ರಮ ಅತಿಕ್ರಮಣ ತೆರವಿನಲ್ಲಿ ಮನೆ ಕಳೆದುಕೊಂಡವರ ಮಾತು

ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ (ಆರ್‌ಎಂಸಿ) ಜಂಗಲೇಶ್ವರದಲ್ಲಿ ನೂರಾರು ವಸತಿ ರಚನೆಗಳನ್ನು ನೆಲಸಮಗೊಳಿಸಿ ಹಲವಾರು ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಿರುವ ಅಜಿ ನದಿಯ ದಡದಲ್ಲಿ ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕಲು ದೊಡ್ಡ ಪ್ರಮಾಣದ ನೆಲಸಮ ಕಾರ್ಯಾಚರಣೆಯ...

ಇಂಡಿಯಾ ಬಣದ ಸಂಚಾಲಕರಾಗಲು ಸ್ಟಾಲಿನ್ ಸೂಕ್ತ: ಮಣಿಶಂಕರ್ ಅಯ್ಯರ್

"ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಇಂಡಿಯಾ ಬಣದ ಸಂಚಾಲಕರಾಗಲು ಸೂಕ್ತ" ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಪ್ರತಿಪಾದಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅಯ್ಯರ್, ತಮಿಳುನಾಡು ಮುಖ್ಯಮಂತ್ರಿ ಇಂಡಿಯಾ ಬಣದ ಸಂಚಾಲಕರಾಗಲು ಉತ್ತಮ...