Homeಮುಖಪುಟಬೀದಿಗೆ ಬಿದ್ದ ಜೆಟ್ ಏರ್‍ವೇಸ್ ಸಿಬ್ಬಂದಿ: ಕೆಲಸ ಕಳೆದುಕೊಳ್ಳುವ ಎಲ್ಲರ ಗೋಳೂ ಒಂದೇ(ನಾ)?

ಬೀದಿಗೆ ಬಿದ್ದ ಜೆಟ್ ಏರ್‍ವೇಸ್ ಸಿಬ್ಬಂದಿ: ಕೆಲಸ ಕಳೆದುಕೊಳ್ಳುವ ಎಲ್ಲರ ಗೋಳೂ ಒಂದೇ(ನಾ)?

- Advertisement -
- Advertisement -

| ಡಾ.ವಾಸು ಎಚ್.ವಿ |

ಕುಖ್ಯಾತ ಮಾಫಿಯಾ ಡಾನ್, ಭಯೋತ್ಪಾದಕ ಕೃತ್ಯಗಳ ಆರೋಪಿ ಕ್ರಿಮಿನಲ್ ದಾವೂದ್ ಇಬ್ರಾಹಿಂನ ಬೇನಾಮಿ ಒಡೆತನದ್ದೆಂದು ಹೇಳಲಾಗುತ್ತಿರುವ ಜೆಟ್ ಏರ್‍ವೇಸ್ ಸಂಸ್ಥೆ ಆರ್ಥಿಕವಾಗಿ ಕುಸಿದು ಕುಂತಿದೆ. ಅದರಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 16,000 ಸಿಬ್ಬಂದಿ ಬೀದಿಗೆ ಬಿದ್ದಿದ್ದಾರೆ. ಗಗನದಲ್ಲಿ ಓಡಾಡುತ್ತಿದ್ದ ಪೈಲಟ್‍ಗಳು, ಗಗನಸಖಿಯರು ಸೇರಿದಂತೆ ನೂರಾರು ಜನ ಅಕ್ಷರಶಃ ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡಿ, ‘ನಮ್ಮ ಗೋಳನ್ನು ಕೇಳಿ, ಉದ್ಯೋಗ ಉಳಿಸಿಕೊಡಿ’ ಎಂದು ಬೇಡಿಕೊಂಡಿದ್ದಾರೆ.

ಇದನ್ನೂ ಓದಿ: ದಾವೂದ್ ಬೇನಾಮಿ ಒಡೆತನದ ಜೆಟ್ ಏರ್ ವೇಸ್

ಕಳೆದ ಅಕ್ಟೋಬರ್‍ನಿಂದ ಕಡಿಮೆಯೆಂದರೂ 2,000 ಉದ್ಯೋಗಿಗಳು ಬಿಟ್ಟು ಹೋಗಿದ್ದಾರೆ. ಆ ನಂತರವೂ 1,500 ಪೈಲಟ್‍ಗಳು, 3,000 ಗಗನಸಖಿಯರನ್ನೊಳಗೊಂಡ ವಿಮಾನ ಸಿಬ್ಬಂದಿ, 5,000 ಭೂಕಾರ್ಯಾಚರಣಾ ಸಿಬ್ಬಂದಿ, 2,000 ತಾಂತ್ರಿಕ ಸಿಬ್ಬಂದಿ ಮತ್ತು 3,000 ಆಡಳಿತ ಅಧಿಕಾರಿಗಳು ಸೇರಿ 14,500 ಜನ ಸಿಬ್ಬಂದಿಗಳು ಉಳಿದುಕೊಂಡಿದ್ದರು. ಇತರ ವಿಮಾನಯಾನ ಕಂಪೆನಿಗಳಿಗೆ ಹೋಲಿಸಿದರೆ ಹೆಚ್ಚೇ ಸಂಬಳ ಕೊಡುತ್ತಿದ್ದ ಜೆಟ್ ಏರ್‍ವೇಸ್‍ನಲ್ಲಿದ್ದ ಇಷ್ಟು ಜನರು ಒಮ್ಮೆಗೇ ಕೆಲಸ ಕಳೆದುಕೊಳ್ಳುವುದೆಂದರೆ, ಅದು ಉಂಟು ಮಾಡುವ ತಲ್ಲಣವನ್ನು ಯಾರೂ ಊಹಿಸಬಹುದು.


ಇವೆಲ್ಲಾ ಸಂಖ್ಯೆಗಳು. ಆದರೆ, ಯಾವುದಾದರೂ ಒಂದು ಕಡೆ ಉದ್ಯೋಗವನ್ನು ನಂಬಿಕೊಂಡು ಕೆಲಸ ಮಾಡುವ ಉದ್ಯೋಗಿಗೆ ಆ ಉದ್ಯೋಗ ಇದ್ದಕ್ಕಿದ್ದಂತೆ ಇಲ್ಲವಾಗಿಬಿಟ್ಟರೆ ಅವರ ಮಟ್ಟಿಗೆ ಅದೊಂದು ಆಘಾತವೇ ಆಗಿರುತ್ತದೆ. ಉದ್ಯೋಗ ಮಾರುಕಟ್ಟೆಯಲ್ಲಿ ಅವರಿಗೆ ಇನ್ನೊಂದು ಕೆಲಸ ಸಲೀಸಾಗಿ ಸಿಗುವಂತಿದ್ದರೆ ಆ ಮಾತು ಬೇರೆ. ಈಗ ಸ್ಪೈಸ್‍ಜೆಟ್‍ನವರು, ಇಲ್ಲಿ ಕೆಲಸ ಕಳೆದುಕೊಂಡ 100 ಜನ ಪೈಲಟ್‍ಗಳು ಮತ್ತು 400 ಜನ ವಿಮಾನ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿಗೆ ತಮ್ಮಲ್ಲಿ ಉದ್ಯೋಗ ಕೊಟ್ಟಿದ್ದಾರೆ. ಜೆಟ್‍ನಲ್ಲಿ ಪಡೆಯುತ್ತಿದ್ದ ಸಂಬಳಕ್ಕೆ ಹೋಲಿಸಿದರೆ ಇಲ್ಲಿ ಶೇ.25ರಷ್ಟು ಸಂಬಳ ಮಾತ್ರ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಮತ್ತು ಪರಿಣಾಮವನ್ನು ಅಂದಾಜು ಮಾಡಬಹುದು.

ಜೆಟ್ ಏರ್‍ವೇಸ್‍ಅನ್ನು ಬೇರೆ ಯಾರಾದರೂ ಕೊಂಡುಕೊಳ್ಳಲಿ, ಎಸ್‍ಬಿಐ ಈ ಕಂಪೆನಿಗೆ ಸಾಲ ಕೊಡಲಿ, ಸರ್ಕಾರವು ತುರ್ತು ಪರಿಹಾರ ನಿಧಿಯನ್ನು ಕೊಟ್ಟು ಸಂಬಳದ ಬಾಕಿ (ಈಗಾಗಲೇ ಹಲವು ತಿಂಗಳುಗಳಿಂದ ಸಂಬಳ ಕೊಟ್ಟಿಲ್ಲ) ತೀರಿಸಲಿ ಹೀಗೆ ಹಲವು ಬೇಡಿಕೆಗಳನ್ನು ಸಿಬ್ಬಂದಿ ಮುಂದಿಟ್ಟಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿಯಿಂದ ಹಿಡಿದು ರಾಷ್ಟ್ರಪತಿಯವರೆಗೆ ಎಲ್ಲರಿಗೂ ಅವರ ಬೇಡಿಕೆ ತಲುಪಿದೆ. ಇವುಗಳಲ್ಲಿ ಕೆಲವನ್ನು ಸರ್ಕಾರ, ಬ್ಯಾಂಕ್‍ಗಳು ಪರಿಶೀಲಿಸುತ್ತಲೂ ಇವೆ.

ಈ ರೀತಿಯ ಸಹಾಯವನ್ನು ಸರ್ಕಾರ ಮಾಡಬೇಕಾಗುತ್ತದೆ. ಈ ಸಿಬ್ಬಂದಿಯಲ್ಲಿ ಪೈಲಟ್‍ಗಳಿಗೆ ತಿಂಗಳಿಗೆ ನಾಲ್ಕು ಲಕ್ಷ ವೇತನವಿದ್ದರೆ, ಮೂರು ಲಕ್ಷಕ್ಕೂ ಹೆಚ್ಚು ತಿಂಗಳ ಕಂತು ಪಾವತಿ ಮಾಡುವಂತಹ ಸಾಲಗಳನ್ನು ಮಾಡಿಕೊಂಡಿರಬಹುದು. ಇನ್ನು ಕೆಳಹಂತದವರಿಗೆ 50 ಸಾವಿರ ಸಂಬಳವಿದ್ದರೆ, ಮನೆ ಸಾಲವೂ ಒಳಗೊಂಡಂತೆ ಹಲವು ಇಎಂಐಗಳನ್ನು ಪಾವತಿಸುವ ಕಷ್ಟ ಅವರಿಗಿರಬಹುದು. ಹಾಗಾಗಿ ಇದ್ದಕ್ಕಿದ್ದಂತೆ ನಾಲ್ಕೈದು ತಿಂಗಳ ವೇತನವೇ ಇಲ್ಲದಿದ್ದರೆ ಆಕಾಶವು ನೆಲಕ್ಕೆ ಮತ್ತು ಪಾತಾಳಕ್ಕೆ ಕುಸಿದಂತೆ ಆಗುವ ಎಲ್ಲಾ ಸಾಧ್ಯತೆ ಇದ್ದೇ ಇರುತ್ತದೆ. ಇವರಲ್ಲೇ ಕೆಲವರು ಮಕ್ಕಳ ಶಾಲಾ ಶುಲ್ಕವನ್ನೂ ಕಟ್ಟಲಾಗಿಲ್ಲ ಎಂದು ಗೋಳಾಡಿದ್ದನ್ನು ನೋಡಬಹುದು. ಇವರೆಲ್ಲರ ಕಷ್ಟಕ್ಕೆ ಮರುಗಬೇಕಿದೆ. ಈ ಕಂಪೆನಿ ದಾವೂದ್ ಇಬ್ರಾಹಿಂನ ಬೇನಾಮಿ ಎಂಬುದೂ ಒಂದು ಆರೋಪ (ಆರೋಪಕ್ಕೆ ಎಷ್ಟೇ ಗಟ್ಟಿ ಕಾರಣಗಳಿದ್ದರೂ, ಅದನ್ನು ಪ್ರತ್ಯೇಕವಾಗಿ ನಿಭಾಯಿಸಬೇಕು).

ಆದರೆ, ಇಲ್ಲಿ ಎರಡು ಪ್ರಶ್ನೆಗಳು ಏಳುತ್ತವೆ. ಒಂದು – ಯಾವುದೇ ಕಂಪೆನಿಯು ಇದ್ದಕ್ಕಿದ್ದಂತೆ ಕಾರ್ಯಾಚರಣೆ ನಿಲ್ಲಿಸಿ ಕೈ ಎತ್ತುವುದಾದರೆ ಅದಕ್ಕೆ ಕಾರ್ಮಿಕ ಕಾನೂನುಗಳು ಅನ್ವಯವಾಗುವುದಿಲ್ಲವೇ? ಲೇಆಫ್ ಕಾನೂನುಗಳು ಈಗ ಹೇಗೂ ಇವೆ. ಅಂತಹ ಸಂದರ್ಭದಲ್ಲಿ ಸಂಬಂಧಿಸಿದ ಮಾಲೀಕರ ಇತರ ಆಸ್ತಿಪಾಸ್ತಿಗಳನ್ನು ಬಳಸಿ ಸಿಬ್ಬಂದಿಗೆ ಪರಿಹಾರ ಕಲ್ಪಿಸಲು ಏಕೆ ಸಾಧ್ಯವಿಲ್ಲ? ಲಾಭ ಬಂದಾಗ ಮಾತ್ರ ಹೆಚ್ಚಿನ ಪಾಲು ಕಬಳಿಸಬೇಕು, ನಷ್ಟವಾದರೆ ಸಿಬ್ಬಂದಿ ಅಥವಾ ಸಾರ್ವಜನಿಕ ಬ್ಯಾಂಕು ಅಥವಾ ಸರ್ಕಾರ ಏಕೆ ಹೊರಬೇಕು? ಈ ವಿಚಾರ ಚರ್ಚೆಯಾಗುತ್ತಲೇ ಇಲ್ಲ. ವಿಜಯ್ ಮಲ್ಯನ ಕಿಂಗ್‍ಫಿಷರ್ ಏರ್‍ಲೈನ್ಸ್ ನಷ್ಟಕ್ಕೀಡಾದಾಗಲೂ ಆತ ಕೇಳಿದ್ದು, ‘ನನ್ನ ಐಷಾರಾಮಿ ಏರ್‍ಲೈನ್ಸ್ ನಷ್ಟಕ್ಕೀಡಾಗುತ್ತಿದೆ. ಸರ್ಕಾರ ಏನು ಮಾಡುತ್ತಿದೆ?’ ಎಂಬ ಧಮಕಿ! ಆತನ ಇನ್ನೂ ಎಷ್ಟೋ ಬೇರೆ ಬೇರೆ ಆಸ್ತಿಗಳು ಆಗಲೂ ಇದ್ದವು, ಈಗಲೂ ಇವೆ. ದಕ್ಷಿಣ ಆಫ್ರಿಕಾದಲ್ಲಿರುವ ಸ್ವಂತ ಕಾಡನ್ನೂ ಒಳಗೊಂಡು (ರೆಸಾರ್ಟ್ ಅಲ್ಲ, ಕಾಡು!!). ಹಾಗೆಯೇ ಜೆಟ್ ಏರ್‍ವೇಸ್‍ನ ನರೇಶ್ ಗೋಯೆಲ್‍ನ ಆಸ್ತಿಪಾಸ್ತಿಯ ವಿವರಗಳು ಸಾರ್ವಜನಿಕವಾಗಬೇಕು. ಉಳಿದ ವ್ಯವಹಾರಗಳೂ ಸಹಾ ಪಾರದರ್ಶಕವಾಗಿರಬೇಕು. ಸಾಧ್ಯವಾದಷ್ಟೂ ಅವುಗಳಿಂದಲೇ ಸಿಬ್ಬಂದಿ ಅಥವಾ ಸಿಬ್ಬಂದಿಗೆ ತಾತ್ಕಾಲಿಕ ಪರಿಹಾರ ಕಲ್ಪಿಸಿದ ಸರ್ಕಾರ ಅಥವಾ ಬ್ಯಾಂಕಿಗೆ ಋಣ ಸಂದಾಯ ಆಗಬೇಕು.


ಎರಡು, ವಿಮಾನಯಾನ ಸಿಬ್ಬಂದಿಯ ಕುರಿತು ಮಾಧ್ಯಮಗಳು, ಸರ್ಕಾರ, ಬ್ಯಾಂಕು ಎಲ್ಲರೂ ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ದೇಶಾದ್ಯಂತ ಖಾಸಗಿ ಕಂಪೆನಿಗಳ ಕಾರ್ಮಿಕರು, ದಿನನಿತ್ಯವೂ ಖಾಸಗಿ ಗುತ್ತಿಗೆ ಕಾರ್ಮಿಕರು ಮತ್ತು ಸರ್ಕಾರೀ ಗುತ್ತಿಗೆ ನೌಕರರು ಬೇಕಾಬಿಟ್ಟಿ ಕೆಲಸ ಕಳೆದುಕೊಳ್ಳುತ್ತಿದ್ದಾರಲ್ಲಾ, ಅವರ ಬಗ್ಗೆ ಈ ಥರದಲ್ಲಿ ಯಾರೂ ಕಣ್ಣೀರು ಮಿಡಿಯುವುದಿಲ್ಲವಲ್ಲಾ ಏಕೆ? ಅವರ ಜೀವನ ಕಡಿಮೆ ಬೆಲೆಯುಳ್ಳದ್ದಾ? ಅಪಘಾತ ಪರಿಹಾರ ಕೊಡುವಾಗಲೂ ಬೀದಿಯಲ್ಲಿ ಸತ್ತವರಿಗೊಂದು ಬೆಲೆ, ವಿಮಾನದಲ್ಲಿ ಸತ್ತವರಿಗೊಂದು ಪರಿಹಾರ ನಿಗದಿಯಾಗುತ್ತದಲ್ಲಾ ಹಾಗೇನಾ ಇದೂ?

ಇರಲಿ, ಪೈಲಟ್‍ಗೂ ಗುತ್ತಿಗೆ ಕಾರ್ಮಿಕರಿಗೂ ಒಂದೇ ಸಂಬಳ ಕೊಡಿ ಎಂಬುದೂ ಇಲ್ಲಿನ ಚರ್ಚೆಯಲ್ಲ. ಉದ್ಯೋಗ ಕಳೆದುಕೊಳ್ಳುವುದರ ವಿಚಾರದಲ್ಲಿ ಪೈಲಟ್‍ಗೆ ಇರುವ ಕಷ್ಟ ಹೇಗೆ ಕಷ್ಟವೋ, ಗುತ್ತಿಗೆ ನೌಕರರಿಗೂ ಅಂತಹುದೇ ಕಷ್ಟ ಇರುವುದಿಲ್ಲವಾ? ಇಲ್ಲಿ, ಪೈಲಟ್‍ಗಿದ್ದದ್ದು ಖಾಯಂ ಕೆಲಸ, ಗುತ್ತಿಗೆಯಲ್ಲಿ ಕೆಲಸ ಮಾಡುವವರಿಗೆ ಅಂತಹ ಗ್ಯಾರಂಟಿ ಇರುವುದಿಲ್ಲ ಎಂಬ ವಾದವನ್ನು ತರಬಾರದು. ಗುತ್ತಿಗೆ ನೌಕರಿ ಎನ್ನುವುದೇ ದೊಡ್ಡ ಬೋಗಸ್. ಖಾಯಂ ನೌಕರಿಯನ್ನು ತಪ್ಪಿಸಲು ಕಾನೂನಿಗೆ ವಿರುದ್ಧವಾಗಿ ಜಾರಿಗೆ ತಂದಿರುವ, ವರ್ಷಾನುಗಟ್ಟಲೇ ದುಡಿಸಿಕೊಳ್ಳುವ ಪದ್ಧತಿ ಗುತ್ತಿಗೆಯದ್ದಾಗಿದೆ.

ಅಂತಿಮವಾಗಿ ಇಷ್ಟು ಹೇಳಬಹುದು. ಜೆಟ್ ಏರ್‍ವೇಸ್‍ನ ಸಿಬ್ಬಂದಿಯ ನೆರವಿಗೆ ಸರ್ಕಾರವು ನಿಲ್ಲಲಿ, ಅವರ ತಲ್ಲಣವನ್ನು ಕೊನೆಗೊಳಿಸಲಿ. ಅದೇ ರೀತಿ ದೇಶದ ಎಲ್ಲೆಡೆ ಏಕಾಏಕಿ ಕೆಲಸ ಕಳೆದುಕೊಳ್ಳುವ ಎಲ್ಲರ ಪರವಾಗಿಯೂ ದುಡಿಸಿಕೊಳ್ಳುವ ಕಂಪೆನಿ, ಮಾಲೀಕರು, ಸರ್ಕಾರ ನಿಲ್ಲಬೇಕು.

(ಲೇಖಕರು, ಗುತ್ತಿಗೆ ನೌಕರರ ಸಂಘಟನೆಯ ಮುಂಚೂಣಿ ವ್ಯಕ್ತಿ.
ಲೇಖನದ ಅಭಿಪ್ರಾಯಗಳು ಲೇಖಕರವು. ಅವು ನಾನುಗೌರಿ.ಕಾಂ ವೆಬ್‍ತಂಡದ ಅಭಿಪ್ರಾಯಗಳು ಆಗಿರಲೇಬೇಕೆಂದಿಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...