Homeಮುಖಪುಟಬೀದಿಗೆ ಬಿದ್ದ ಜೆಟ್ ಏರ್‍ವೇಸ್ ಸಿಬ್ಬಂದಿ: ಕೆಲಸ ಕಳೆದುಕೊಳ್ಳುವ ಎಲ್ಲರ ಗೋಳೂ ಒಂದೇ(ನಾ)?

ಬೀದಿಗೆ ಬಿದ್ದ ಜೆಟ್ ಏರ್‍ವೇಸ್ ಸಿಬ್ಬಂದಿ: ಕೆಲಸ ಕಳೆದುಕೊಳ್ಳುವ ಎಲ್ಲರ ಗೋಳೂ ಒಂದೇ(ನಾ)?

- Advertisement -
- Advertisement -

| ಡಾ.ವಾಸು ಎಚ್.ವಿ |

ಕುಖ್ಯಾತ ಮಾಫಿಯಾ ಡಾನ್, ಭಯೋತ್ಪಾದಕ ಕೃತ್ಯಗಳ ಆರೋಪಿ ಕ್ರಿಮಿನಲ್ ದಾವೂದ್ ಇಬ್ರಾಹಿಂನ ಬೇನಾಮಿ ಒಡೆತನದ್ದೆಂದು ಹೇಳಲಾಗುತ್ತಿರುವ ಜೆಟ್ ಏರ್‍ವೇಸ್ ಸಂಸ್ಥೆ ಆರ್ಥಿಕವಾಗಿ ಕುಸಿದು ಕುಂತಿದೆ. ಅದರಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 16,000 ಸಿಬ್ಬಂದಿ ಬೀದಿಗೆ ಬಿದ್ದಿದ್ದಾರೆ. ಗಗನದಲ್ಲಿ ಓಡಾಡುತ್ತಿದ್ದ ಪೈಲಟ್‍ಗಳು, ಗಗನಸಖಿಯರು ಸೇರಿದಂತೆ ನೂರಾರು ಜನ ಅಕ್ಷರಶಃ ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡಿ, ‘ನಮ್ಮ ಗೋಳನ್ನು ಕೇಳಿ, ಉದ್ಯೋಗ ಉಳಿಸಿಕೊಡಿ’ ಎಂದು ಬೇಡಿಕೊಂಡಿದ್ದಾರೆ.

ಇದನ್ನೂ ಓದಿ: ದಾವೂದ್ ಬೇನಾಮಿ ಒಡೆತನದ ಜೆಟ್ ಏರ್ ವೇಸ್

ಕಳೆದ ಅಕ್ಟೋಬರ್‍ನಿಂದ ಕಡಿಮೆಯೆಂದರೂ 2,000 ಉದ್ಯೋಗಿಗಳು ಬಿಟ್ಟು ಹೋಗಿದ್ದಾರೆ. ಆ ನಂತರವೂ 1,500 ಪೈಲಟ್‍ಗಳು, 3,000 ಗಗನಸಖಿಯರನ್ನೊಳಗೊಂಡ ವಿಮಾನ ಸಿಬ್ಬಂದಿ, 5,000 ಭೂಕಾರ್ಯಾಚರಣಾ ಸಿಬ್ಬಂದಿ, 2,000 ತಾಂತ್ರಿಕ ಸಿಬ್ಬಂದಿ ಮತ್ತು 3,000 ಆಡಳಿತ ಅಧಿಕಾರಿಗಳು ಸೇರಿ 14,500 ಜನ ಸಿಬ್ಬಂದಿಗಳು ಉಳಿದುಕೊಂಡಿದ್ದರು. ಇತರ ವಿಮಾನಯಾನ ಕಂಪೆನಿಗಳಿಗೆ ಹೋಲಿಸಿದರೆ ಹೆಚ್ಚೇ ಸಂಬಳ ಕೊಡುತ್ತಿದ್ದ ಜೆಟ್ ಏರ್‍ವೇಸ್‍ನಲ್ಲಿದ್ದ ಇಷ್ಟು ಜನರು ಒಮ್ಮೆಗೇ ಕೆಲಸ ಕಳೆದುಕೊಳ್ಳುವುದೆಂದರೆ, ಅದು ಉಂಟು ಮಾಡುವ ತಲ್ಲಣವನ್ನು ಯಾರೂ ಊಹಿಸಬಹುದು.


ಇವೆಲ್ಲಾ ಸಂಖ್ಯೆಗಳು. ಆದರೆ, ಯಾವುದಾದರೂ ಒಂದು ಕಡೆ ಉದ್ಯೋಗವನ್ನು ನಂಬಿಕೊಂಡು ಕೆಲಸ ಮಾಡುವ ಉದ್ಯೋಗಿಗೆ ಆ ಉದ್ಯೋಗ ಇದ್ದಕ್ಕಿದ್ದಂತೆ ಇಲ್ಲವಾಗಿಬಿಟ್ಟರೆ ಅವರ ಮಟ್ಟಿಗೆ ಅದೊಂದು ಆಘಾತವೇ ಆಗಿರುತ್ತದೆ. ಉದ್ಯೋಗ ಮಾರುಕಟ್ಟೆಯಲ್ಲಿ ಅವರಿಗೆ ಇನ್ನೊಂದು ಕೆಲಸ ಸಲೀಸಾಗಿ ಸಿಗುವಂತಿದ್ದರೆ ಆ ಮಾತು ಬೇರೆ. ಈಗ ಸ್ಪೈಸ್‍ಜೆಟ್‍ನವರು, ಇಲ್ಲಿ ಕೆಲಸ ಕಳೆದುಕೊಂಡ 100 ಜನ ಪೈಲಟ್‍ಗಳು ಮತ್ತು 400 ಜನ ವಿಮಾನ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿಗೆ ತಮ್ಮಲ್ಲಿ ಉದ್ಯೋಗ ಕೊಟ್ಟಿದ್ದಾರೆ. ಜೆಟ್‍ನಲ್ಲಿ ಪಡೆಯುತ್ತಿದ್ದ ಸಂಬಳಕ್ಕೆ ಹೋಲಿಸಿದರೆ ಇಲ್ಲಿ ಶೇ.25ರಷ್ಟು ಸಂಬಳ ಮಾತ್ರ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಮತ್ತು ಪರಿಣಾಮವನ್ನು ಅಂದಾಜು ಮಾಡಬಹುದು.

ಜೆಟ್ ಏರ್‍ವೇಸ್‍ಅನ್ನು ಬೇರೆ ಯಾರಾದರೂ ಕೊಂಡುಕೊಳ್ಳಲಿ, ಎಸ್‍ಬಿಐ ಈ ಕಂಪೆನಿಗೆ ಸಾಲ ಕೊಡಲಿ, ಸರ್ಕಾರವು ತುರ್ತು ಪರಿಹಾರ ನಿಧಿಯನ್ನು ಕೊಟ್ಟು ಸಂಬಳದ ಬಾಕಿ (ಈಗಾಗಲೇ ಹಲವು ತಿಂಗಳುಗಳಿಂದ ಸಂಬಳ ಕೊಟ್ಟಿಲ್ಲ) ತೀರಿಸಲಿ ಹೀಗೆ ಹಲವು ಬೇಡಿಕೆಗಳನ್ನು ಸಿಬ್ಬಂದಿ ಮುಂದಿಟ್ಟಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿಯಿಂದ ಹಿಡಿದು ರಾಷ್ಟ್ರಪತಿಯವರೆಗೆ ಎಲ್ಲರಿಗೂ ಅವರ ಬೇಡಿಕೆ ತಲುಪಿದೆ. ಇವುಗಳಲ್ಲಿ ಕೆಲವನ್ನು ಸರ್ಕಾರ, ಬ್ಯಾಂಕ್‍ಗಳು ಪರಿಶೀಲಿಸುತ್ತಲೂ ಇವೆ.

ಈ ರೀತಿಯ ಸಹಾಯವನ್ನು ಸರ್ಕಾರ ಮಾಡಬೇಕಾಗುತ್ತದೆ. ಈ ಸಿಬ್ಬಂದಿಯಲ್ಲಿ ಪೈಲಟ್‍ಗಳಿಗೆ ತಿಂಗಳಿಗೆ ನಾಲ್ಕು ಲಕ್ಷ ವೇತನವಿದ್ದರೆ, ಮೂರು ಲಕ್ಷಕ್ಕೂ ಹೆಚ್ಚು ತಿಂಗಳ ಕಂತು ಪಾವತಿ ಮಾಡುವಂತಹ ಸಾಲಗಳನ್ನು ಮಾಡಿಕೊಂಡಿರಬಹುದು. ಇನ್ನು ಕೆಳಹಂತದವರಿಗೆ 50 ಸಾವಿರ ಸಂಬಳವಿದ್ದರೆ, ಮನೆ ಸಾಲವೂ ಒಳಗೊಂಡಂತೆ ಹಲವು ಇಎಂಐಗಳನ್ನು ಪಾವತಿಸುವ ಕಷ್ಟ ಅವರಿಗಿರಬಹುದು. ಹಾಗಾಗಿ ಇದ್ದಕ್ಕಿದ್ದಂತೆ ನಾಲ್ಕೈದು ತಿಂಗಳ ವೇತನವೇ ಇಲ್ಲದಿದ್ದರೆ ಆಕಾಶವು ನೆಲಕ್ಕೆ ಮತ್ತು ಪಾತಾಳಕ್ಕೆ ಕುಸಿದಂತೆ ಆಗುವ ಎಲ್ಲಾ ಸಾಧ್ಯತೆ ಇದ್ದೇ ಇರುತ್ತದೆ. ಇವರಲ್ಲೇ ಕೆಲವರು ಮಕ್ಕಳ ಶಾಲಾ ಶುಲ್ಕವನ್ನೂ ಕಟ್ಟಲಾಗಿಲ್ಲ ಎಂದು ಗೋಳಾಡಿದ್ದನ್ನು ನೋಡಬಹುದು. ಇವರೆಲ್ಲರ ಕಷ್ಟಕ್ಕೆ ಮರುಗಬೇಕಿದೆ. ಈ ಕಂಪೆನಿ ದಾವೂದ್ ಇಬ್ರಾಹಿಂನ ಬೇನಾಮಿ ಎಂಬುದೂ ಒಂದು ಆರೋಪ (ಆರೋಪಕ್ಕೆ ಎಷ್ಟೇ ಗಟ್ಟಿ ಕಾರಣಗಳಿದ್ದರೂ, ಅದನ್ನು ಪ್ರತ್ಯೇಕವಾಗಿ ನಿಭಾಯಿಸಬೇಕು).

ಆದರೆ, ಇಲ್ಲಿ ಎರಡು ಪ್ರಶ್ನೆಗಳು ಏಳುತ್ತವೆ. ಒಂದು – ಯಾವುದೇ ಕಂಪೆನಿಯು ಇದ್ದಕ್ಕಿದ್ದಂತೆ ಕಾರ್ಯಾಚರಣೆ ನಿಲ್ಲಿಸಿ ಕೈ ಎತ್ತುವುದಾದರೆ ಅದಕ್ಕೆ ಕಾರ್ಮಿಕ ಕಾನೂನುಗಳು ಅನ್ವಯವಾಗುವುದಿಲ್ಲವೇ? ಲೇಆಫ್ ಕಾನೂನುಗಳು ಈಗ ಹೇಗೂ ಇವೆ. ಅಂತಹ ಸಂದರ್ಭದಲ್ಲಿ ಸಂಬಂಧಿಸಿದ ಮಾಲೀಕರ ಇತರ ಆಸ್ತಿಪಾಸ್ತಿಗಳನ್ನು ಬಳಸಿ ಸಿಬ್ಬಂದಿಗೆ ಪರಿಹಾರ ಕಲ್ಪಿಸಲು ಏಕೆ ಸಾಧ್ಯವಿಲ್ಲ? ಲಾಭ ಬಂದಾಗ ಮಾತ್ರ ಹೆಚ್ಚಿನ ಪಾಲು ಕಬಳಿಸಬೇಕು, ನಷ್ಟವಾದರೆ ಸಿಬ್ಬಂದಿ ಅಥವಾ ಸಾರ್ವಜನಿಕ ಬ್ಯಾಂಕು ಅಥವಾ ಸರ್ಕಾರ ಏಕೆ ಹೊರಬೇಕು? ಈ ವಿಚಾರ ಚರ್ಚೆಯಾಗುತ್ತಲೇ ಇಲ್ಲ. ವಿಜಯ್ ಮಲ್ಯನ ಕಿಂಗ್‍ಫಿಷರ್ ಏರ್‍ಲೈನ್ಸ್ ನಷ್ಟಕ್ಕೀಡಾದಾಗಲೂ ಆತ ಕೇಳಿದ್ದು, ‘ನನ್ನ ಐಷಾರಾಮಿ ಏರ್‍ಲೈನ್ಸ್ ನಷ್ಟಕ್ಕೀಡಾಗುತ್ತಿದೆ. ಸರ್ಕಾರ ಏನು ಮಾಡುತ್ತಿದೆ?’ ಎಂಬ ಧಮಕಿ! ಆತನ ಇನ್ನೂ ಎಷ್ಟೋ ಬೇರೆ ಬೇರೆ ಆಸ್ತಿಗಳು ಆಗಲೂ ಇದ್ದವು, ಈಗಲೂ ಇವೆ. ದಕ್ಷಿಣ ಆಫ್ರಿಕಾದಲ್ಲಿರುವ ಸ್ವಂತ ಕಾಡನ್ನೂ ಒಳಗೊಂಡು (ರೆಸಾರ್ಟ್ ಅಲ್ಲ, ಕಾಡು!!). ಹಾಗೆಯೇ ಜೆಟ್ ಏರ್‍ವೇಸ್‍ನ ನರೇಶ್ ಗೋಯೆಲ್‍ನ ಆಸ್ತಿಪಾಸ್ತಿಯ ವಿವರಗಳು ಸಾರ್ವಜನಿಕವಾಗಬೇಕು. ಉಳಿದ ವ್ಯವಹಾರಗಳೂ ಸಹಾ ಪಾರದರ್ಶಕವಾಗಿರಬೇಕು. ಸಾಧ್ಯವಾದಷ್ಟೂ ಅವುಗಳಿಂದಲೇ ಸಿಬ್ಬಂದಿ ಅಥವಾ ಸಿಬ್ಬಂದಿಗೆ ತಾತ್ಕಾಲಿಕ ಪರಿಹಾರ ಕಲ್ಪಿಸಿದ ಸರ್ಕಾರ ಅಥವಾ ಬ್ಯಾಂಕಿಗೆ ಋಣ ಸಂದಾಯ ಆಗಬೇಕು.


ಎರಡು, ವಿಮಾನಯಾನ ಸಿಬ್ಬಂದಿಯ ಕುರಿತು ಮಾಧ್ಯಮಗಳು, ಸರ್ಕಾರ, ಬ್ಯಾಂಕು ಎಲ್ಲರೂ ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ದೇಶಾದ್ಯಂತ ಖಾಸಗಿ ಕಂಪೆನಿಗಳ ಕಾರ್ಮಿಕರು, ದಿನನಿತ್ಯವೂ ಖಾಸಗಿ ಗುತ್ತಿಗೆ ಕಾರ್ಮಿಕರು ಮತ್ತು ಸರ್ಕಾರೀ ಗುತ್ತಿಗೆ ನೌಕರರು ಬೇಕಾಬಿಟ್ಟಿ ಕೆಲಸ ಕಳೆದುಕೊಳ್ಳುತ್ತಿದ್ದಾರಲ್ಲಾ, ಅವರ ಬಗ್ಗೆ ಈ ಥರದಲ್ಲಿ ಯಾರೂ ಕಣ್ಣೀರು ಮಿಡಿಯುವುದಿಲ್ಲವಲ್ಲಾ ಏಕೆ? ಅವರ ಜೀವನ ಕಡಿಮೆ ಬೆಲೆಯುಳ್ಳದ್ದಾ? ಅಪಘಾತ ಪರಿಹಾರ ಕೊಡುವಾಗಲೂ ಬೀದಿಯಲ್ಲಿ ಸತ್ತವರಿಗೊಂದು ಬೆಲೆ, ವಿಮಾನದಲ್ಲಿ ಸತ್ತವರಿಗೊಂದು ಪರಿಹಾರ ನಿಗದಿಯಾಗುತ್ತದಲ್ಲಾ ಹಾಗೇನಾ ಇದೂ?

ಇರಲಿ, ಪೈಲಟ್‍ಗೂ ಗುತ್ತಿಗೆ ಕಾರ್ಮಿಕರಿಗೂ ಒಂದೇ ಸಂಬಳ ಕೊಡಿ ಎಂಬುದೂ ಇಲ್ಲಿನ ಚರ್ಚೆಯಲ್ಲ. ಉದ್ಯೋಗ ಕಳೆದುಕೊಳ್ಳುವುದರ ವಿಚಾರದಲ್ಲಿ ಪೈಲಟ್‍ಗೆ ಇರುವ ಕಷ್ಟ ಹೇಗೆ ಕಷ್ಟವೋ, ಗುತ್ತಿಗೆ ನೌಕರರಿಗೂ ಅಂತಹುದೇ ಕಷ್ಟ ಇರುವುದಿಲ್ಲವಾ? ಇಲ್ಲಿ, ಪೈಲಟ್‍ಗಿದ್ದದ್ದು ಖಾಯಂ ಕೆಲಸ, ಗುತ್ತಿಗೆಯಲ್ಲಿ ಕೆಲಸ ಮಾಡುವವರಿಗೆ ಅಂತಹ ಗ್ಯಾರಂಟಿ ಇರುವುದಿಲ್ಲ ಎಂಬ ವಾದವನ್ನು ತರಬಾರದು. ಗುತ್ತಿಗೆ ನೌಕರಿ ಎನ್ನುವುದೇ ದೊಡ್ಡ ಬೋಗಸ್. ಖಾಯಂ ನೌಕರಿಯನ್ನು ತಪ್ಪಿಸಲು ಕಾನೂನಿಗೆ ವಿರುದ್ಧವಾಗಿ ಜಾರಿಗೆ ತಂದಿರುವ, ವರ್ಷಾನುಗಟ್ಟಲೇ ದುಡಿಸಿಕೊಳ್ಳುವ ಪದ್ಧತಿ ಗುತ್ತಿಗೆಯದ್ದಾಗಿದೆ.

ಅಂತಿಮವಾಗಿ ಇಷ್ಟು ಹೇಳಬಹುದು. ಜೆಟ್ ಏರ್‍ವೇಸ್‍ನ ಸಿಬ್ಬಂದಿಯ ನೆರವಿಗೆ ಸರ್ಕಾರವು ನಿಲ್ಲಲಿ, ಅವರ ತಲ್ಲಣವನ್ನು ಕೊನೆಗೊಳಿಸಲಿ. ಅದೇ ರೀತಿ ದೇಶದ ಎಲ್ಲೆಡೆ ಏಕಾಏಕಿ ಕೆಲಸ ಕಳೆದುಕೊಳ್ಳುವ ಎಲ್ಲರ ಪರವಾಗಿಯೂ ದುಡಿಸಿಕೊಳ್ಳುವ ಕಂಪೆನಿ, ಮಾಲೀಕರು, ಸರ್ಕಾರ ನಿಲ್ಲಬೇಕು.

(ಲೇಖಕರು, ಗುತ್ತಿಗೆ ನೌಕರರ ಸಂಘಟನೆಯ ಮುಂಚೂಣಿ ವ್ಯಕ್ತಿ.
ಲೇಖನದ ಅಭಿಪ್ರಾಯಗಳು ಲೇಖಕರವು. ಅವು ನಾನುಗೌರಿ.ಕಾಂ ವೆಬ್‍ತಂಡದ ಅಭಿಪ್ರಾಯಗಳು ಆಗಿರಲೇಬೇಕೆಂದಿಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾವೇರಿ: ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಡಿ.ಕೆ.ಶಿವಕುಮಾರ್

ರಾಜ್ಯದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಿರುವಾಗ ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕಾದ ಹೊಣೆಗಾರಿಕೆ ಇದೆ. ಕಾವೇರಿ ವಿಚಾರದಲ್ಲಿ ನಮ್ಮ ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಎಂದು...

‘ಅಸ್ತಿತ್ವದ ಸಮಸ್ಯೆಯಲ್ಲ, ಹೊಣೆಗಾರಿಕೆಯೇ ಮುಖ್ಯ’: ಆರ್‌ಎಸ್‌ಎಸ್ ನೋಂದಣಿ ಕುರಿತು ಬಿ.ಎಲ್. ಸಂತೋಷ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ಹಾಗೂ ಅದರ ಕಾನೂನಾತ್ಮಕ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಹಾಗೂ ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್...

ನಾನು ‘ದಿಮಾಗಿ ನಕ್ಸಲ್’ ಆಗಿದ್ದರೆ ಅದಕ್ಕೆ ಹೆಮ್ಮೆ ಇದೆ: ಮೋದಿ-ರಿಜಿಜು ವಿರುದ್ಧ ಚಿದಂಬರಂ ತಿರುಗೇಟು

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ್ದ ‘ದಿಮಾಗಿ ನಕ್ಸಲರು’ (ವೈಚಾರಿಕ ನಕ್ಸಲರು) ಎಂಬ ಪದ ಬಳಕೆ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಪ್ರಧಾನಿಯವರ ಈ...

CAA ವಿರೋಧಿ ಪ್ರತಿಭಟನೆಗೆ ಕಾರಣವಾಗಿದ್ದ ಪ್ರಶ್ನೆಗಳು ಮತ್ತೆ ಜನಗಣತಿಯಲ್ಲಿ-ವರದಿ

ಶೀಘ್ರದಲ್ಲೇ ಪ್ರಾರಂಭವಾಗಲಿರುವ ಜನಗಣತಿಯ ಜನಸಂಖ್ಯಾ ಎಣಿಕೆ ಹಂತವು, 2011ರ ಜನಗಣತಿಗೆ ಹೋಲಿಸಿದರೆ 14 ಹೊಸ ಅಥವಾ ಮಾರ್ಪಡಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪೈಕಿ ಹಲವು ಪ್ರಶ್ನೆಗಳು 2020ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ...

ಹಿಂಗೋಲಿ ಶಾಲೆಯಲ್ಲಿ ಪ್ರಾಂಶುಪಾಲರ ಮದ್ಯಪಾನ, ಶಿಕ್ಷಕರ ಅಭಾವ: ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಅಭಿಜೀತ್ ದೀಪ್ಕೆ

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಲಿಂಬಾಲಾ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶೈಕ್ಷಣಿಕ ವಾತಾವರಣ ಸಂಪೂರ್ಣವಾಗಿ ಕುಸಿದಿದ್ದು, ಶಾಲಾ ಪ್ರಾಂಶುಪಾಲರ ಹೊಣೆಗೇಡಿತನ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರ ಆಕ್ರೋಶ ಮುಗಿಲುಮುಟ್ಟಿದೆ. ಶಾಲೆಯ ಪ್ರಾಂಶುಪಾಲರು...

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ? CAG ವರದಿ

ದೇಶಾದ್ಯಂತ ನೆರೆ, ಬರ, ಭೂಕುಸಿತದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ ಭಾರಿ ಪ್ರಮಾಣದ ಕಡಿತವಾಗುತ್ತಿರುವುದು ಈಗ ನಿರೂಪಿತವಾಗಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ...

EFLU ವಿದ್ಯಾರ್ಥಿ ಸಂಘದ ಮುಖಂಡರು, NSUI ಸದಸ್ಯರ ಮೇಲೆ ರಾಡ್ ಮತ್ತು ಬಿಯರ್ ಬಾಟಲಿಗಳಿಂದ ಹಲ್ಲೆ; ABVP ಸದಸ್ಯರ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌ನ ಪ್ರತಿಷ್ಠಿತ ಇಂಗ್ಲಿಷ್ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯ (ಇಎಫ್‌ಎಲ್‌ಯು - EFLU) ಕ್ಯಾಂಪಸ್‌ನಲ್ಲಿ ಭೀಕರ ಹಿಂಸಾಚಾರ ಸಂಭವಿಸಿದ್ದು, ವಿದ್ಯಾರ್ಥಿ ಸಂಘದ ಮುಖಂಡರು ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ಸದಸ್ಯರ ಮೇಲೆ...

NALSAR ವಿವಾದ : ಕಾನೂನು ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ

ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಹೊರಡಿಸಿದ್ದ ನಿರ್ದೇಶನಗಳ ಕುರಿತು ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಥ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಕ್ಷಮೆಯಾಚಿಸಿದ್ದಾರೆ. ಹೈದರಾಬಾದ್‌ನ ನಲ್ಸಾರ್...

ವಿಮಲ್ ‘ಏಲೈಚಿ’ ಜಾಹೀರಾತು ವಿವಾದ: ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್‌ಗೆ ಮಹಾರಾಷ್ಟ್ರ ಎಫ್‌ಡಿಎ ಶೋಕಾಸ್ ನೋಟಿಸ್

ಬಾಲಿವುಡ್‌ನ ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರುಗಳು ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. 'ವಿಮಲ್ ಏಲೈಚಿ' ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ...

ಹನೂರು ಶೂಟೌಟ್ ಪ್ರಕರಣ: ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲು

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶಾಗ್ಯ ಗ್ರಾಮ ಪಂಚಾಯತ್ ವಾಪ್ತಿಯ ಅರಣ್ಯ ಪ್ರದೇಶದಲ್ಲಿ ಮೂವರು ಗುಂಡೇಟಿಗೆ ಬಲಿಯಾದ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್​​​​ಐಆರ್ ದಾಖಲಾಗಿದೆ. ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಹನೂರು...