Homeಮುಖಪುಟಬೀದಿಗೆ ಬಿದ್ದ ಜೆಟ್ ಏರ್‍ವೇಸ್ ಸಿಬ್ಬಂದಿ: ಕೆಲಸ ಕಳೆದುಕೊಳ್ಳುವ ಎಲ್ಲರ ಗೋಳೂ ಒಂದೇ(ನಾ)?

ಬೀದಿಗೆ ಬಿದ್ದ ಜೆಟ್ ಏರ್‍ವೇಸ್ ಸಿಬ್ಬಂದಿ: ಕೆಲಸ ಕಳೆದುಕೊಳ್ಳುವ ಎಲ್ಲರ ಗೋಳೂ ಒಂದೇ(ನಾ)?

- Advertisement -
- Advertisement -

| ಡಾ.ವಾಸು ಎಚ್.ವಿ |

ಕುಖ್ಯಾತ ಮಾಫಿಯಾ ಡಾನ್, ಭಯೋತ್ಪಾದಕ ಕೃತ್ಯಗಳ ಆರೋಪಿ ಕ್ರಿಮಿನಲ್ ದಾವೂದ್ ಇಬ್ರಾಹಿಂನ ಬೇನಾಮಿ ಒಡೆತನದ್ದೆಂದು ಹೇಳಲಾಗುತ್ತಿರುವ ಜೆಟ್ ಏರ್‍ವೇಸ್ ಸಂಸ್ಥೆ ಆರ್ಥಿಕವಾಗಿ ಕುಸಿದು ಕುಂತಿದೆ. ಅದರಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 16,000 ಸಿಬ್ಬಂದಿ ಬೀದಿಗೆ ಬಿದ್ದಿದ್ದಾರೆ. ಗಗನದಲ್ಲಿ ಓಡಾಡುತ್ತಿದ್ದ ಪೈಲಟ್‍ಗಳು, ಗಗನಸಖಿಯರು ಸೇರಿದಂತೆ ನೂರಾರು ಜನ ಅಕ್ಷರಶಃ ಬೀದಿಯಲ್ಲಿ ನಿಂತು ಪ್ರತಿಭಟನೆ ಮಾಡಿ, ‘ನಮ್ಮ ಗೋಳನ್ನು ಕೇಳಿ, ಉದ್ಯೋಗ ಉಳಿಸಿಕೊಡಿ’ ಎಂದು ಬೇಡಿಕೊಂಡಿದ್ದಾರೆ.

ಇದನ್ನೂ ಓದಿ: ದಾವೂದ್ ಬೇನಾಮಿ ಒಡೆತನದ ಜೆಟ್ ಏರ್ ವೇಸ್

ಕಳೆದ ಅಕ್ಟೋಬರ್‍ನಿಂದ ಕಡಿಮೆಯೆಂದರೂ 2,000 ಉದ್ಯೋಗಿಗಳು ಬಿಟ್ಟು ಹೋಗಿದ್ದಾರೆ. ಆ ನಂತರವೂ 1,500 ಪೈಲಟ್‍ಗಳು, 3,000 ಗಗನಸಖಿಯರನ್ನೊಳಗೊಂಡ ವಿಮಾನ ಸಿಬ್ಬಂದಿ, 5,000 ಭೂಕಾರ್ಯಾಚರಣಾ ಸಿಬ್ಬಂದಿ, 2,000 ತಾಂತ್ರಿಕ ಸಿಬ್ಬಂದಿ ಮತ್ತು 3,000 ಆಡಳಿತ ಅಧಿಕಾರಿಗಳು ಸೇರಿ 14,500 ಜನ ಸಿಬ್ಬಂದಿಗಳು ಉಳಿದುಕೊಂಡಿದ್ದರು. ಇತರ ವಿಮಾನಯಾನ ಕಂಪೆನಿಗಳಿಗೆ ಹೋಲಿಸಿದರೆ ಹೆಚ್ಚೇ ಸಂಬಳ ಕೊಡುತ್ತಿದ್ದ ಜೆಟ್ ಏರ್‍ವೇಸ್‍ನಲ್ಲಿದ್ದ ಇಷ್ಟು ಜನರು ಒಮ್ಮೆಗೇ ಕೆಲಸ ಕಳೆದುಕೊಳ್ಳುವುದೆಂದರೆ, ಅದು ಉಂಟು ಮಾಡುವ ತಲ್ಲಣವನ್ನು ಯಾರೂ ಊಹಿಸಬಹುದು.


ಇವೆಲ್ಲಾ ಸಂಖ್ಯೆಗಳು. ಆದರೆ, ಯಾವುದಾದರೂ ಒಂದು ಕಡೆ ಉದ್ಯೋಗವನ್ನು ನಂಬಿಕೊಂಡು ಕೆಲಸ ಮಾಡುವ ಉದ್ಯೋಗಿಗೆ ಆ ಉದ್ಯೋಗ ಇದ್ದಕ್ಕಿದ್ದಂತೆ ಇಲ್ಲವಾಗಿಬಿಟ್ಟರೆ ಅವರ ಮಟ್ಟಿಗೆ ಅದೊಂದು ಆಘಾತವೇ ಆಗಿರುತ್ತದೆ. ಉದ್ಯೋಗ ಮಾರುಕಟ್ಟೆಯಲ್ಲಿ ಅವರಿಗೆ ಇನ್ನೊಂದು ಕೆಲಸ ಸಲೀಸಾಗಿ ಸಿಗುವಂತಿದ್ದರೆ ಆ ಮಾತು ಬೇರೆ. ಈಗ ಸ್ಪೈಸ್‍ಜೆಟ್‍ನವರು, ಇಲ್ಲಿ ಕೆಲಸ ಕಳೆದುಕೊಂಡ 100 ಜನ ಪೈಲಟ್‍ಗಳು ಮತ್ತು 400 ಜನ ವಿಮಾನ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿಗೆ ತಮ್ಮಲ್ಲಿ ಉದ್ಯೋಗ ಕೊಟ್ಟಿದ್ದಾರೆ. ಜೆಟ್‍ನಲ್ಲಿ ಪಡೆಯುತ್ತಿದ್ದ ಸಂಬಳಕ್ಕೆ ಹೋಲಿಸಿದರೆ ಇಲ್ಲಿ ಶೇ.25ರಷ್ಟು ಸಂಬಳ ಮಾತ್ರ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣ ಮತ್ತು ಪರಿಣಾಮವನ್ನು ಅಂದಾಜು ಮಾಡಬಹುದು.

ಜೆಟ್ ಏರ್‍ವೇಸ್‍ಅನ್ನು ಬೇರೆ ಯಾರಾದರೂ ಕೊಂಡುಕೊಳ್ಳಲಿ, ಎಸ್‍ಬಿಐ ಈ ಕಂಪೆನಿಗೆ ಸಾಲ ಕೊಡಲಿ, ಸರ್ಕಾರವು ತುರ್ತು ಪರಿಹಾರ ನಿಧಿಯನ್ನು ಕೊಟ್ಟು ಸಂಬಳದ ಬಾಕಿ (ಈಗಾಗಲೇ ಹಲವು ತಿಂಗಳುಗಳಿಂದ ಸಂಬಳ ಕೊಟ್ಟಿಲ್ಲ) ತೀರಿಸಲಿ ಹೀಗೆ ಹಲವು ಬೇಡಿಕೆಗಳನ್ನು ಸಿಬ್ಬಂದಿ ಮುಂದಿಟ್ಟಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿಯಿಂದ ಹಿಡಿದು ರಾಷ್ಟ್ರಪತಿಯವರೆಗೆ ಎಲ್ಲರಿಗೂ ಅವರ ಬೇಡಿಕೆ ತಲುಪಿದೆ. ಇವುಗಳಲ್ಲಿ ಕೆಲವನ್ನು ಸರ್ಕಾರ, ಬ್ಯಾಂಕ್‍ಗಳು ಪರಿಶೀಲಿಸುತ್ತಲೂ ಇವೆ.

ಈ ರೀತಿಯ ಸಹಾಯವನ್ನು ಸರ್ಕಾರ ಮಾಡಬೇಕಾಗುತ್ತದೆ. ಈ ಸಿಬ್ಬಂದಿಯಲ್ಲಿ ಪೈಲಟ್‍ಗಳಿಗೆ ತಿಂಗಳಿಗೆ ನಾಲ್ಕು ಲಕ್ಷ ವೇತನವಿದ್ದರೆ, ಮೂರು ಲಕ್ಷಕ್ಕೂ ಹೆಚ್ಚು ತಿಂಗಳ ಕಂತು ಪಾವತಿ ಮಾಡುವಂತಹ ಸಾಲಗಳನ್ನು ಮಾಡಿಕೊಂಡಿರಬಹುದು. ಇನ್ನು ಕೆಳಹಂತದವರಿಗೆ 50 ಸಾವಿರ ಸಂಬಳವಿದ್ದರೆ, ಮನೆ ಸಾಲವೂ ಒಳಗೊಂಡಂತೆ ಹಲವು ಇಎಂಐಗಳನ್ನು ಪಾವತಿಸುವ ಕಷ್ಟ ಅವರಿಗಿರಬಹುದು. ಹಾಗಾಗಿ ಇದ್ದಕ್ಕಿದ್ದಂತೆ ನಾಲ್ಕೈದು ತಿಂಗಳ ವೇತನವೇ ಇಲ್ಲದಿದ್ದರೆ ಆಕಾಶವು ನೆಲಕ್ಕೆ ಮತ್ತು ಪಾತಾಳಕ್ಕೆ ಕುಸಿದಂತೆ ಆಗುವ ಎಲ್ಲಾ ಸಾಧ್ಯತೆ ಇದ್ದೇ ಇರುತ್ತದೆ. ಇವರಲ್ಲೇ ಕೆಲವರು ಮಕ್ಕಳ ಶಾಲಾ ಶುಲ್ಕವನ್ನೂ ಕಟ್ಟಲಾಗಿಲ್ಲ ಎಂದು ಗೋಳಾಡಿದ್ದನ್ನು ನೋಡಬಹುದು. ಇವರೆಲ್ಲರ ಕಷ್ಟಕ್ಕೆ ಮರುಗಬೇಕಿದೆ. ಈ ಕಂಪೆನಿ ದಾವೂದ್ ಇಬ್ರಾಹಿಂನ ಬೇನಾಮಿ ಎಂಬುದೂ ಒಂದು ಆರೋಪ (ಆರೋಪಕ್ಕೆ ಎಷ್ಟೇ ಗಟ್ಟಿ ಕಾರಣಗಳಿದ್ದರೂ, ಅದನ್ನು ಪ್ರತ್ಯೇಕವಾಗಿ ನಿಭಾಯಿಸಬೇಕು).

ಆದರೆ, ಇಲ್ಲಿ ಎರಡು ಪ್ರಶ್ನೆಗಳು ಏಳುತ್ತವೆ. ಒಂದು – ಯಾವುದೇ ಕಂಪೆನಿಯು ಇದ್ದಕ್ಕಿದ್ದಂತೆ ಕಾರ್ಯಾಚರಣೆ ನಿಲ್ಲಿಸಿ ಕೈ ಎತ್ತುವುದಾದರೆ ಅದಕ್ಕೆ ಕಾರ್ಮಿಕ ಕಾನೂನುಗಳು ಅನ್ವಯವಾಗುವುದಿಲ್ಲವೇ? ಲೇಆಫ್ ಕಾನೂನುಗಳು ಈಗ ಹೇಗೂ ಇವೆ. ಅಂತಹ ಸಂದರ್ಭದಲ್ಲಿ ಸಂಬಂಧಿಸಿದ ಮಾಲೀಕರ ಇತರ ಆಸ್ತಿಪಾಸ್ತಿಗಳನ್ನು ಬಳಸಿ ಸಿಬ್ಬಂದಿಗೆ ಪರಿಹಾರ ಕಲ್ಪಿಸಲು ಏಕೆ ಸಾಧ್ಯವಿಲ್ಲ? ಲಾಭ ಬಂದಾಗ ಮಾತ್ರ ಹೆಚ್ಚಿನ ಪಾಲು ಕಬಳಿಸಬೇಕು, ನಷ್ಟವಾದರೆ ಸಿಬ್ಬಂದಿ ಅಥವಾ ಸಾರ್ವಜನಿಕ ಬ್ಯಾಂಕು ಅಥವಾ ಸರ್ಕಾರ ಏಕೆ ಹೊರಬೇಕು? ಈ ವಿಚಾರ ಚರ್ಚೆಯಾಗುತ್ತಲೇ ಇಲ್ಲ. ವಿಜಯ್ ಮಲ್ಯನ ಕಿಂಗ್‍ಫಿಷರ್ ಏರ್‍ಲೈನ್ಸ್ ನಷ್ಟಕ್ಕೀಡಾದಾಗಲೂ ಆತ ಕೇಳಿದ್ದು, ‘ನನ್ನ ಐಷಾರಾಮಿ ಏರ್‍ಲೈನ್ಸ್ ನಷ್ಟಕ್ಕೀಡಾಗುತ್ತಿದೆ. ಸರ್ಕಾರ ಏನು ಮಾಡುತ್ತಿದೆ?’ ಎಂಬ ಧಮಕಿ! ಆತನ ಇನ್ನೂ ಎಷ್ಟೋ ಬೇರೆ ಬೇರೆ ಆಸ್ತಿಗಳು ಆಗಲೂ ಇದ್ದವು, ಈಗಲೂ ಇವೆ. ದಕ್ಷಿಣ ಆಫ್ರಿಕಾದಲ್ಲಿರುವ ಸ್ವಂತ ಕಾಡನ್ನೂ ಒಳಗೊಂಡು (ರೆಸಾರ್ಟ್ ಅಲ್ಲ, ಕಾಡು!!). ಹಾಗೆಯೇ ಜೆಟ್ ಏರ್‍ವೇಸ್‍ನ ನರೇಶ್ ಗೋಯೆಲ್‍ನ ಆಸ್ತಿಪಾಸ್ತಿಯ ವಿವರಗಳು ಸಾರ್ವಜನಿಕವಾಗಬೇಕು. ಉಳಿದ ವ್ಯವಹಾರಗಳೂ ಸಹಾ ಪಾರದರ್ಶಕವಾಗಿರಬೇಕು. ಸಾಧ್ಯವಾದಷ್ಟೂ ಅವುಗಳಿಂದಲೇ ಸಿಬ್ಬಂದಿ ಅಥವಾ ಸಿಬ್ಬಂದಿಗೆ ತಾತ್ಕಾಲಿಕ ಪರಿಹಾರ ಕಲ್ಪಿಸಿದ ಸರ್ಕಾರ ಅಥವಾ ಬ್ಯಾಂಕಿಗೆ ಋಣ ಸಂದಾಯ ಆಗಬೇಕು.


ಎರಡು, ವಿಮಾನಯಾನ ಸಿಬ್ಬಂದಿಯ ಕುರಿತು ಮಾಧ್ಯಮಗಳು, ಸರ್ಕಾರ, ಬ್ಯಾಂಕು ಎಲ್ಲರೂ ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ದೇಶಾದ್ಯಂತ ಖಾಸಗಿ ಕಂಪೆನಿಗಳ ಕಾರ್ಮಿಕರು, ದಿನನಿತ್ಯವೂ ಖಾಸಗಿ ಗುತ್ತಿಗೆ ಕಾರ್ಮಿಕರು ಮತ್ತು ಸರ್ಕಾರೀ ಗುತ್ತಿಗೆ ನೌಕರರು ಬೇಕಾಬಿಟ್ಟಿ ಕೆಲಸ ಕಳೆದುಕೊಳ್ಳುತ್ತಿದ್ದಾರಲ್ಲಾ, ಅವರ ಬಗ್ಗೆ ಈ ಥರದಲ್ಲಿ ಯಾರೂ ಕಣ್ಣೀರು ಮಿಡಿಯುವುದಿಲ್ಲವಲ್ಲಾ ಏಕೆ? ಅವರ ಜೀವನ ಕಡಿಮೆ ಬೆಲೆಯುಳ್ಳದ್ದಾ? ಅಪಘಾತ ಪರಿಹಾರ ಕೊಡುವಾಗಲೂ ಬೀದಿಯಲ್ಲಿ ಸತ್ತವರಿಗೊಂದು ಬೆಲೆ, ವಿಮಾನದಲ್ಲಿ ಸತ್ತವರಿಗೊಂದು ಪರಿಹಾರ ನಿಗದಿಯಾಗುತ್ತದಲ್ಲಾ ಹಾಗೇನಾ ಇದೂ?

ಇರಲಿ, ಪೈಲಟ್‍ಗೂ ಗುತ್ತಿಗೆ ಕಾರ್ಮಿಕರಿಗೂ ಒಂದೇ ಸಂಬಳ ಕೊಡಿ ಎಂಬುದೂ ಇಲ್ಲಿನ ಚರ್ಚೆಯಲ್ಲ. ಉದ್ಯೋಗ ಕಳೆದುಕೊಳ್ಳುವುದರ ವಿಚಾರದಲ್ಲಿ ಪೈಲಟ್‍ಗೆ ಇರುವ ಕಷ್ಟ ಹೇಗೆ ಕಷ್ಟವೋ, ಗುತ್ತಿಗೆ ನೌಕರರಿಗೂ ಅಂತಹುದೇ ಕಷ್ಟ ಇರುವುದಿಲ್ಲವಾ? ಇಲ್ಲಿ, ಪೈಲಟ್‍ಗಿದ್ದದ್ದು ಖಾಯಂ ಕೆಲಸ, ಗುತ್ತಿಗೆಯಲ್ಲಿ ಕೆಲಸ ಮಾಡುವವರಿಗೆ ಅಂತಹ ಗ್ಯಾರಂಟಿ ಇರುವುದಿಲ್ಲ ಎಂಬ ವಾದವನ್ನು ತರಬಾರದು. ಗುತ್ತಿಗೆ ನೌಕರಿ ಎನ್ನುವುದೇ ದೊಡ್ಡ ಬೋಗಸ್. ಖಾಯಂ ನೌಕರಿಯನ್ನು ತಪ್ಪಿಸಲು ಕಾನೂನಿಗೆ ವಿರುದ್ಧವಾಗಿ ಜಾರಿಗೆ ತಂದಿರುವ, ವರ್ಷಾನುಗಟ್ಟಲೇ ದುಡಿಸಿಕೊಳ್ಳುವ ಪದ್ಧತಿ ಗುತ್ತಿಗೆಯದ್ದಾಗಿದೆ.

ಅಂತಿಮವಾಗಿ ಇಷ್ಟು ಹೇಳಬಹುದು. ಜೆಟ್ ಏರ್‍ವೇಸ್‍ನ ಸಿಬ್ಬಂದಿಯ ನೆರವಿಗೆ ಸರ್ಕಾರವು ನಿಲ್ಲಲಿ, ಅವರ ತಲ್ಲಣವನ್ನು ಕೊನೆಗೊಳಿಸಲಿ. ಅದೇ ರೀತಿ ದೇಶದ ಎಲ್ಲೆಡೆ ಏಕಾಏಕಿ ಕೆಲಸ ಕಳೆದುಕೊಳ್ಳುವ ಎಲ್ಲರ ಪರವಾಗಿಯೂ ದುಡಿಸಿಕೊಳ್ಳುವ ಕಂಪೆನಿ, ಮಾಲೀಕರು, ಸರ್ಕಾರ ನಿಲ್ಲಬೇಕು.

(ಲೇಖಕರು, ಗುತ್ತಿಗೆ ನೌಕರರ ಸಂಘಟನೆಯ ಮುಂಚೂಣಿ ವ್ಯಕ್ತಿ.
ಲೇಖನದ ಅಭಿಪ್ರಾಯಗಳು ಲೇಖಕರವು. ಅವು ನಾನುಗೌರಿ.ಕಾಂ ವೆಬ್‍ತಂಡದ ಅಭಿಪ್ರಾಯಗಳು ಆಗಿರಲೇಬೇಕೆಂದಿಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...