Homeಮುಖಪುಟಇಂದು ಚಂದ್ರಗ್ರಹಣ 2019: ತಿಳಿಯಬೇಕಾದ ವಿಷಯಗಳು

ಇಂದು ಚಂದ್ರಗ್ರಹಣ 2019: ತಿಳಿಯಬೇಕಾದ ವಿಷಯಗಳು

- Advertisement -
- Advertisement -

ಇಂದು ರಾತ್ರಿ ಸಂಭವಿಸಲಿರುವ ಖಂಡಗ್ರಾಸ, ಅಂದರೆ, ಭಾಗಶಃ ಚಂದ್ರಗ್ರಹಣ ಉತ್ತರ ಅಮೆರಿಕವನ್ನು ಹೊರತುಪಡಿಸಿ ಬಹುತೇಕ ಎಲ್ಲಾ ದೇಶಗಳಲ್ಲಿ ಗೋಚರಿಸಲಿದೆ. ಇಲ್ಲಿ ನೀವು 2019ರ ಚಂದ್ರಗಹಣದ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಅತ್ಯಗತ್ಯ ಅಂಶಗಳಿವೆ.

ಇಂದಿನ ಚಂದ್ರಗ್ರಹಣವನ್ನು ಮೋಡಗಳು ಅವಕಾಶ ಕೊಟ್ಟರೆ ಭಾರತದಾದ್ಯಂತ ಕಾಣಬಹುದು. ಇದು ಭಾರತದಲ್ಲಿ 2019ರ ಕೊನೆಯ ಚಂದ್ರಗಹಣ. ಇದು ಮಧ್ಯರಾತ್ರಿ ಕಳೆದ ಸ್ವಲ್ಪವೇ ಹೊತ್ತಿನಲ್ಲಿ ಆರಂಭವಾಗಿ, ಬೆಳಗ್ಗಿನ ಜಾವದ ತನಕ ಮುಂದುವರಿಯಲಿದೆ.

ಚಂದ್ರಗ್ರಹಣದ ಸಮಯ

ಜುಲೈ 17, 2017ರ ರಾತ್ರಿ 12.13ಕ್ಕೆ ಗ್ರಹಣದ ಆರಂಭ. 3.00 ಗಂಟೆಯ ಹೊತ್ತಿಗೆ ಗರಿಷ್ಟ ಪ್ರಮಾಣವನ್ನು ತಲುಪಲಿದೆ. 1.31ರ ಹೊತ್ತಿಗೆ ಅದು ಹಿಂದೆ ಸರಿಯಲು ಆರಂಭವಾಗಿ  ಖಂಡ ಅಥವಾ ಭಾಗಶಃ (Partial) ಗ್ರಹಣವಾಗಲಿದೆ. ಆ ಬಳಿಕ  ಅದು 4.29ರ ತನಕ ಹಿಂದೆ ಸರಿಯುತ್ತಾ ನಂತರ  Penumbra ಎಂದು ಕರೆಯಲ್ಪಡುವ ಹಂತಕ್ಕೆ ತಲಪುತ್ತದೆ. ಅದು ಅಂತಿಮವಾಗಿ 5.47ಕ್ಕೆ ಕೊನೆಗೊಳ್ಳುತ್ತದೆ. ಇಡೀ ಗ್ರಹಣವು 5 ಗಂಟೆ 34 ನಿಮಿಷಗಳ ಕಾಲ ಇದ್ದು, ಭಾಗಶಃ ಗ್ರಹಣವು 2 ಗಂಟೆ 58 ನಿಮಿಷಗಳ ಕಾಲ ಇರಲಿದೆ.

149 ವರ್ಷಗಳ ನಂತರದ ಕಾಕತಾಳೀಯ

ಈ ಚಂದ್ರಗ್ರಹಣ ಕೆಲವರಿಗೆ ಮಹತ್ವದ್ದು ಏಕೆಂದರೆ, 149 ವರ್ಷಗಳ ನಂತರ ಅದು ಕೆಲವು ಭಾರತೀಯರು ಮಹತ್ವದ್ದೆಂದು ನಂಬುವ ಗುರು ಪೂರ್ಣಿಮಾದ ದಿನ ಬರುತ್ತದೆ. ಚಂದ್ರಗ್ರಹಣವು ಗರಿಷ್ಟ ಪ್ರಮಾಣ ತಲಪಿದಾಗ, ಭೂಮಿಯ ನೆರಳು ಅರ್ಧ ಭಾಗದಷ್ಟು ಚಂದ್ರನನ್ನು ಆವರಿಸಲಿದೆ. ಇದು ಈ ವರ್ಷ ಭಾರತದಲ್ಲಿ ಕೊನೆಯ ಚಂದ್ರಗ್ರಹಣವಾಗಿದೆ. ಪಶ್ಚಿಮ ಮತ್ತು ಮಧ್ಯ ಭಾರತದಲ್ಲಿ ಗ್ರಹಣವನ್ನು ಪೂರ್ಣಾಣಾವಧಿ ಅಂದರೆ, ಆರಂಭದಿಂದ ಅಂತ್ಯದ ವರೆಗೆ ಕಾಣಬಹುದು.

ಚಂದ್ರಗ್ರಹಣವನ್ನು ನೋಡುವುದು ಹೇಗೆ?

ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲಿಯೇ ನೋಡಬಹುದು. ಆದರೆ, ಸೂರ್ಯಗ್ರಹಣವನ್ನು ಬರಿಗಣ್ಣಿನಲ್ಲಿಯೇ ನೋಡುವುದು ಕುರುಡುತನಕ್ಕೆ ಕಾರಣವಾಗುತ್ತದೆ. ಚಂದ್ರಗ್ರಹಣ ನೋಡಲು ಯಾವುದೇ ಭಯ ಅಗತ್ಯವಿಲ್ಲ.

ಮೂಢನಂಬಿಕೆ ಬೇಡ!

ಚಂದ್ರ, ಭೂಮಿ, ಸೂರ್ಯ ಹೆಚ್ಚು ಕಡಿಮೆ ಎಂದೇ ರೇಖೆಗೆ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬರುವುದರಿಂದ ಭೂಮಿಯ ನೆರಳು ಚಂದ್ರನ ಮೇಲೆ ಹಾದುಹೋಗುತ್ತದೆ. ಈ ಕಾರಣದಿಂದಲೇ ಚಂದ್ರಗ್ರಹಣ ಹುಣ್ಣಿಮೆ ದಿನ ಮತ್ತು ಸೂರ್ಯಗ್ರಹಣ ಅಮವಾಸ್ಯೆಯ ದಿನ ಮಾತ್ರ ಸಂಭವಿಸುತ್ತದೆ. ಅದೇ ರೀತಿಯಲ್ಲಿ ಸೂರ್ಯ ಮತ್ತು ಭೂಮಿಯ ನಡುವೆ ಒಂದೇ ರೇಖೆಯಲ್ಲಿ ಚಂದ್ರ ಹಾದುಹೋದರೆ, ಅದು ಸೂರ್ಯನನ್ನು ಮರೆಮಾಚಿ ಸೂರ್ಯಗ್ರಹಣ ಸಂಭವಿಸುತ್ತದೆ. ಮೂರೂ ನಿಖರವಾಗಿ ಒಂದೇ ರೇಖೆಯಲ್ಲಿದ್ದರೆ ಖಗ್ರಾಸ ಅಥವಾ ಸಂಪೂರ್ಣ ಗ್ರಹಣಗಳೂ, ಸ್ವಲ್ಪ ವ್ಯತ್ಯಾಸವಿದ್ದರೆ ಖಂಡ ಅಥವಾ ಭಾಗಶಃ ಗ್ರಹಣಗಳು ಸಂಭವಿಸುತ್ತವೆ. ಚಂದ್ರಗ್ರಹಣವು ಒಂದು ಸಾಮಾನ್ಯ ಖಗೋಳ ಪ್ರಕ್ರಿಯೆಯಾಗಿದ್ದು, ಅದನ್ನು ನೋಡುವುದರಿಂದಲಾಗಲೀ ಆ ಹೊತ್ತಿಗೆ ಆಹಾರ ಸೇವಿಸುವುದರಿಂದಲಾಗಲೀ ಯಾವುದೇ ಹಾನಿ ಇಲ್ಲ ಎಂದು ವಿಜ್ಞಾನಿಗಳು ಖಚಿತಪಡಿಸುತ್ತಾರೆ.

ಇದೇ ವೇಳೆ ಇಂದು ಗ್ರಹಣದ ಕುರಿತು ಇರುವ ಮೂಢನಂಬಿಕೆಯನ್ನು ಹೋಗಲಾಡಿಸಲು ಮಾನವ ಬಂಧುತ್ವ ವೇದಿಕೆಯು ‘ಗ್ರಹಣ ಸಂಭ್ರಮ’ ಹೆಸರಿನಲ್ಲಿ ಹಲವು ಜಿಲ್ಲೆಗಳಲ್ಲಿ ಸಾಮೂಹಿಕ ಭೋಜನ ಮತ್ತು ಇತರ ಸಾರ್ವಜನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಮುಂದಿನ ಗ್ರಹಣ

ಮುಂದಿನ ಕಿರು ಗ್ರಹಣವು ಜನವರಿ 10, 2020ರಂದು ನಡೆಯಲಿದೆ. ಅದೇ ವರ್ಷ ಕೆಲವು ಚಿಕ್ಕ ಗ್ರಹಣಗಳು ನಡೆಯಲಿದ್ದು, ಭಾರತದಲ್ಲಿ ಗೋಚರವಾಗವು. ಮುಂದಿನ ಭಾಗಶಃ (ಖಂಡಗ್ರಾಸ) ಚಂದ್ರಗ್ರಹಣವು ನವೆಂಬರ್ 19, 2021ರಲ್ಲಿ, ಮತ್ತು ಖಗ್ರಾಸ ಅಂದರೆ, ಪೂರ್ಣ ಚಂದ್ರಗ್ರಹಣವು ಮೇ 26, 2021ರಂದು ಸಂಭವಿಸಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...