Homeಕರ್ನಾಟಕಪಾಪಿ-ಪೊಲೀಸ್ ನಂಟು ಎಸಿಪಿ ವೆಂಕಿಗೆ ಇಂಥಾ ಇತಿಹಾಸ ಉಂಟು!

ಪಾಪಿ-ಪೊಲೀಸ್ ನಂಟು ಎಸಿಪಿ ವೆಂಕಿಗೆ ಇಂಥಾ ಇತಿಹಾಸ ಉಂಟು!

- Advertisement -
- Advertisement -

ವೆಂಕಟೇಶ್ ಪ್ರಸನ್ನ ಎಂಬ ಪೊಲೀಸ್ ಅಧಿಕಾರಿಯು ತನ್ನ ಭೂಗತ ಜಗತ್ತಿನ ಸಂಪರ್ಕ ಮತ್ತು ಶಾಮೀಲುದಾರಿಕೆಯ ಕಾರಣದಿಂದ ಈಗ ರಾಜ್ಯಾದ್ಯಂತ ಸುದ್ದಿಯಲ್ಲಿದ್ದಾರೆ. ಆದರೆ ಆತನನ್ನು ಬಲ್ಲ ಮಂಗಳೂರಿನ ಜನಕ್ಕೆ ಇದ್ಯಾವ ಹೊಸ ಸುದ್ದಿ ಎನಿಸಿ ಎಂದು ಮೂಗು ಮುರಿಯುತ್ತಿದ್ದಾರೆ. ಏಕೆಂದರೆ ರವಿ ಪೂಜಾರಿಯಂತಹ ಭೂಗತ ಡಾನ್‍ಗಳೊಂದಿಗಿನ ವೆಂಕಟೇಶ್ ಪ್ರಸನ್ನರ ಸಂಬಂಧವು ಮಂಗಳೂರಿನಲ್ಲಿದ್ದಾಗಲೇ ಗಟ್ಟಿಗೊಂಡಿದ್ದು. ಪೊಲೀಸ್ ಇಲಾಖೆಯೊಳಗೂ ಇದು ಜಗಜ್ಜಾಹೀರಾದ ವಿಚಾರವೇ.

ಶೃಂಗೇರಿ ತಾಲೂಕಿನ ಬ್ರಾಹ್ಮಣ ಕುಟುಂಬವೊಂದರ ವೆಂಕಟೇಶ್ ಪ್ರಸನ್ನರ ಸಂಬಂಧ ಭೂಗತ ಡಾನ್‍ಗಳೊಂದಿಗೆ ಮಾತ್ರವಿಲ್ಲ; ಅಷ್ಟೇ ಗಾಢ ಸಂಬಂಧವಿರುವುದು ಸಂಘಪರಿವಾರದ ಜೊತೆಗೂ ಆಗಿದೆ. ಒಂದು ಇನ್ನೊಂದನ್ನು ಪೊರೆಯುತ್ತಾ ಇದೆಯೆಂಬುದು ಇನ್ನೊಂದು ವಾಸ್ತವ. ಈ ಮೂರೂ ಅಂಶಗಳು (ವೆಂಕಟೇಶ್ ಪ್ರಸನ್ನ, ಸಂಘಪರಿವಾರ ಮತ್ತು ರವಿಪೂಜಾರಿಯಂತಹ ಭೂಗತ ಲೋಕದ ಜನ) ಒಂದಕ್ಕೊಂದು ಬೆಸೆದುಕೊಂಡಿವೆಯೆಂದು ಮಂಗಳೂರಿನಲ್ಲಿ ಒಮ್ಮೆ ದೊಡ್ಡ ಸುದ್ದಿಯಾಗಿದ್ದು ನೌಷಾದ್ ಖಾಸಿಂಯವರ ಕೊಲೆಯ ಸಂದರ್ಭದಲ್ಲಿ.

ವಿಪರ್ಯಾಸವೆಂದರೆ ಅದೇ ನೌಷಾದ್ ಖಾಸಿಂಯವರ ಕೊಲೆಯ ಆರೋಪಿ ದಿನೇಶ್ ಮತ್ತಿತರರನ್ನು ಇದೇ ವೆಂಕಟೇಶ್ ಪ್ರಸನ್ನ ಬೆಂಗಳೂರಿನಿಂದ ಎತ್ತಾಕಿಕೊಂಡು ಬಂದು ವಿಚಾರಣೆಗೆ ಗುರಿಯಾಗಿಸಿದರು ಎಂಬುದು ಆತನನ್ನು ತಕ್ಷಣದ ಆರೋಪಿ ಸ್ಥಾನದಿಂದ ವಿಮುಕ್ತನನ್ನಾಗಿಸಿತ್ತು. ಆದರೆ ಒಳಗಿನ ಸಂಗತಿ ಬೇರೆಯೇ ಆಗಿತ್ತು.

ನೌಷಾದ್ ಖಾಸಿಂಜಿ ಮಂಗಳೂರಿನ ಜನಪ್ರಿಯ ವಕೀಲರು. ಅದರಲ್ಲೂ ಬಡವರ ಪಾಲಿಗೆ ಆಪತ್ಬಾಂಧವ. ಅಮಾಯಕ ಮುಸ್ಲಿಂ ಯುವಕರನ್ನು ಪೊಲೀಸರು ವಿವಿಧ ಕೇಸುಗಳಲ್ಲಿ ಬಂಧಿಸಿ ಭಯೋತ್ಪಾದಕ ಪಟ್ಟ ಕಟ್ಟುವುದು ಹೊಸದೇನಲ್ಲ. ಅಂತಹವರ ಪರವಾಗಿ ನ್ಯಾಯ ಕೊಡಿಸಲು ನೌಷಾದ್ ಎಂದೂ ಹಿಂಜರಿಯುತ್ತಿರಲಿಲ್ಲ. ಆ ಕಾರಣದಿಂದ ಮುಸ್ಲಿಂ ವಿರೋಧಿ ಮನಸ್ಥಿತಿಯ ಪೊಲೀಸರಿಗೂ ಅವರಿಗೂ ಶತ್ರುತ್ವವೂ ಬೆಳೆದಿತ್ತು. ಉಡುಪಿ ಎಂಎಲ್‍ಎ ರಘುಪತಿ ಭಟ್ಟರ ಪತ್ನಿ ಪದ್ಮಪ್ರಿಯರ ನಿಗೂಢ ಸಾವಿನ ಪ್ರಕರಣದಲ್ಲಿ ಬಿಜೆಪಿಯ ಸಿಲುಕಿಸಲೆತ್ನಿಸಿದ್ದ ಅತುಲ್‍ರಾವ್ ಪರವೂ ನೌಷಾದ್ ವಾದಿಸಿದ್ದರು.

ಈ ಮಧ್ಯೆ ಮಂಗಳೂರಿನ ಭೂಗತ ಲೋಕದಲ್ಲಿ ಹಿಂದೂ ಮುಸ್ಲಿಂ ಗುಂಪುಗಳು ಬೇರೆ ತಲೆಯೆತ್ತಿದ್ದವು. ಟಿಪಿಕಲ್ ಮಂಗಳೂರು ಸಂಸ್ಕೃತಿಯ ಭಾಗವಾಗಿ. ಇದೇ ಮಂಗಳೂರು ಮೂಲದ ಡಾನ್‍ಗಳು ಬೆಂಗಳೂರು, ಮುಂಬೈಗಳಲ್ಲೆಲ್ಲಾ ಡಾನ್‍ಗಿರಿ ನಡೆಸಿ ದುಬೈ ಮತ್ತಿತರ ಅರಬ್ ದೇಶಗಳಲ್ಲಿ ತಲೆಮರೆಸಿಕೊಳ್ಳುವುದೂ ಹೊಸತಾಗಿರಲಿಲ್ಲ. ಅಂಥದ್ದೆಲ್ಲಾ ನಡೆಸಿ ನಂತರ ‘ಹಿಂದೂ ರಕ್ಷಕ’ರ ಅವತಾರವೆತ್ತಿ ಮತ್ತೆ ಇಲ್ಲಿ ‘ಮುಖ್ಯವಾಹಿನಿ’ ಸೇರಿಕೊಳ್ಳುವುದೂ ಹೊಸದಲ್ಲ.

ಇದೀಗ ಬಂಧಿತವಾಗಿರುವ ರವಿ ಪೂಜಾರಿಯದ್ದೂ ಅದೇ ಜಾಡು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಹೇಳಿಕೇಳಿ ರವಿ ಪೂಜಾರಿ ನೌಷಾದ್ ಖಾಸಿಂಜಿಯ ಮರ್ಡರ್ (ಏಪ್ರಿಲ್ 9, 2009) ಸಂದರ್ಭದಲ್ಲೇ ಕಮ್ಯುನಲ್ ಮಾಫಿಯಾದ ಭಾಗವಾಗಿದ್ದುದು ಸಾಬೀತಾಗಿತ್ತು. ಹಾಗಾಗಿಯೂ ವೆಂಕಟೇಶ್ ಪ್ರಸನ್ನರ ಹಸ್ತವೂ ಆ ಮರ್ಡರ್‍ನಲ್ಲಿತ್ತು ಎಂಬುದು ಆ ಸಂದರ್ಭದಲ್ಲಿ ಪ್ರತಿಭಟಿಸಿದವರ ಆಕ್ರೋಶದಲ್ಲಿ ಎದ್ದು ಕಾಣುತ್ತಿತ್ತು.

ಆ ಪ್ರತಿಭಟನೆಯ ಸಂದರ್ಭದಲ್ಲಿ ಮಂಗಳೂರು ಎಸ್‍ಪಿ ಆಗಿದ್ದ (ಆಗಿನ್ನೂ ಕಮೀಷನರೇಟ್ ಬಂದಿರಲಿಲ್ಲ) ಸುಬ್ರಹ್ಮಣ್ಯೇಶ್ವರ ರಾವ್ ಮತ್ತು ಐಜಿ ಗೋಪಾಲ್ ಹೊಸೂರ್ ಅವರ ಮೇಲೆ ವಿಪರೀತ ಒತ್ತಡವಿತ್ತು. ಸ್ಫೋಟವಾಗಲು ಕಾದು ಕುಳಿತಂತಿದ್ದ ಮಂಗಳೂರು, ಕೋಮು ಬಣ್ಣ ಪಡೆದುಕೊಳ್ಳುತ್ತಿದ್ದ ಭೂಗತ ಲೋಕ, ಸರ್ಕಾರ ನಡೆಸುತ್ತಿದ್ದದ್ದು ಬಿಜೆಪಿ – ಹೀಗಿರುವಾಗ ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುವುದು ಸುಲಭವಿರಲಿಲ್ಲ. ಆದರೆ, ನೌಷಾದ್ ಖಾಸಿಂ ಕೊಲೆಗಾರರನ್ನು ಕೊಲೆಯಾದ 15 ದಿನಗಳಲ್ಲಿ ಬಂಧಿಸಲಾಯಿತು. ಬಂಧಿತರಾದ ದಿನೇಶ್ ಶೆಟ್ಟಿ, ರಿತೇಶ್ ಮತ್ತಿತರರೆಲ್ಲರೂ ರವಿ ಪೂಜಾರಿಯ ಸಹಚರರು ಎಂಬುದು ಖಚಿತವಾಗಿತ್ತು.

ಕೊಲೆಯ ವಿರುದ್ಧ ಸಿಡಿದೆದ್ದಿದ್ದ ಪ್ರತಿಭಟನಾಕಾರರು ಸುಮ್ಮನಾದರೂ ನೌಷಾದ್‍ರ ಸೀನಿಯರ್ ಪುರುಷೋತ್ತಮ್ ಪೂಜಾರಿಯವರು ಸುಮ್ಮನಾಗಲಿಲ್ಲ. ಈ ಕೊಲೆಯಲ್ಲಿ ವೆಂಕಟೇಶ್ ಪ್ರಸನ್ನ ಮತ್ತು ಇನ್ನಿಬ್ಬರು ಇನ್ಸ್‍ಪೆಕ್ಟರ್‍ಗಳ ಪಾತ್ರವಿದೆಯೆಂದು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಲ್ಲದೇ ಸಿಬಿಐ ತನಿಖೆ ನಡೆಯಬೇಕೆಂದು ಹೈಕೋರ್ಟ್‍ನವರೆಗೆ ಹೋಗಿದ್ದರು. ಅಷ್ಟರಲ್ಲಾಗಲೇ (2011) ತನಿಖೆ ಸಾಕಷ್ಟು ಮುಂದುವರೆದಿದ್ದರಿಂದ ಪೊಲೀಸ್ ಅಧಿಕಾರಿಗಳ ವಿರುದ್ಧದ ಕೇಸನ್ನು ಹೈಕೋರ್ಟು ಕೈಬಿಟ್ಟಿತ್ತು. ಆದರೆ, 2015ರ ನವೆಂಬರ್‍ನಲ್ಲಿ ಇತರ ಆರೋಪಿಗಳಿಗೆ ಶಿಕ್ಷೆಯೂ ಆಯಿತು. ಅವರೇ ಮರ್ಡರರ್ಸ್ ಎಂದು ಕೋರ್ಟು ಎತ್ತಿ ಹಿಡಿದಿತ್ತು.

ಸದರಿ ಕೇಸಿನಲ್ಲಿ ಮಂಗಳೂರು ಪೊಲೀಸರು ತೋರಿದ ಕಾರ್ಯಕ್ಷಮತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ನೌಷಾದ್ ಅವರು ರಷೀದ್ ಮಲಬಾರಿ ಎಂಬ ಛೋಟಾ ಶಕೀಲ್‍ನ ಸಹವರ್ತಿಯ ವಕೀಲರಾಗಿದ್ದುದರಿಂದ ಅವರ ಮರ್ಡರ್ ನಡೆದಿತ್ತು. ಇದೇ ನೌಷಾದ್ ಒಬ್ಬ ಪ್ರಸಿದ್ಧ ಮಾನವಹಕ್ಕು ವಕೀಲರಾಗಿಯೂ ಹೆಸರು ಮಾಡಿದ್ದರು. ಸಹಜವಾಗಿ ಪೊಲೀಸರು ಇಂಥವರ ವಿರುದ್ಧ ಇರುತ್ತಾರೆ. ಆದರೆ, ಮಂಗಳೂರಿನ ಅಧಿಕಾರಿಗಳ ತಂಡ ಬೆನ್ನುಬಿದ್ದು ಕೊಲೆಗಾರರನ್ನು ಹಿಡಿದರು. ದಿನೇಶ್ ಮತ್ತಿತರರೇ ಕೊಲೆಗಾರರು ಎಂಬುದು ಕಾಲ್ ರೆಕಾಡ್ರ್ಸ್ ಮತ್ತು ಲೊಕೇಶನ್ ವಿವರಗಳಿಂದ ಶೇ.99ರಷ್ಟು ಖಚಿತವಾದ ಮೇಲೆ ಬೆಂಗಳೂರಿಗೆ ಹೋಗಿ ಹಿಡಿದು ತಂದಿದ್ದಷ್ಟೇ ವೆಂಕಟೇಶ್ ಪ್ರಸನ್ನ. ಹಾಗೆ ನೋಡಿದರೆ ಭೂಗತ ಲೋಕದ ಜೊತೆಗೆ ನಂಟು ಹೊಂದಿರುವ ಇಂತಹ ಅಧಿಕಾರಿಗಳು ಬಹಳ ಚುರುಕಾಗಿಯೂ ಇರುತ್ತಾರೆ. ತಮ್ಮದೇ ಸಂಪರ್ಕ ಬಳಸಿ ಕೆಲವು ಕೇಸುಗಳನ್ನು ಸುಲಭದಲ್ಲಿ ಬಗೆಹರಿಸುತ್ತಾರೆ. ಇನ್ನೆಷ್ಟೋ ಕೇಸುಗಳಲ್ಲಿ ಬರೀ ಡೀಲ್‍ಗಳು ಆಗುತ್ತವೆ.

ಇಂತಹ ವೆಂಕಟೇಶ್ ಪ್ರಸನ್ನ ಇದೀಗ ಬೆಂಗಳೂರಿನಲ್ಲಿ ಎಸಿಪಿ ಮತ್ತು ಭೂಗತ ಪಾತಕಿ ರವಿ ಪೂಜಾರಿಯ ಮಾಹಿತಿದಾರ ಎಂಬ ಸುದ್ದಿ ಪತ್ರಿಕೆಗಳಲ್ಲಿ ರಾರಾಜಿಸುತ್ತಿದೆ. ಸ್ವತಃ ಪೊಲೀಸ್ ಕಮೀಷನರ್ ಭಾಸ್ಕರರಾವ್ ಈ ಕುರಿತು ಡಿಜಿ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದು ಇಲಾಖಾ ವಿಚಾರಣೆ ಆರಂಭವಾಗಿದೆ. ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳನ್ನು ವೆಂಕಟೇಶ್ ಪ್ರಸನ್ನ ರವಿ ಪೂಜಾರಿಗೆ ತಿಳಿಸುತ್ತಿದ್ದರು ಎಂಬುದು ಹೊಸ ಆರೋಪ. 2016ರಲ್ಲಿ ಬೆಂಗಳೂರಿಗೆ ಬಂದಿದ್ದ ವೆಂಕಟೇಶ್ ಕುರಿತು ಆಂಬಿಡೆಂಟ್ ಪ್ರಕರಣದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು.

ಇದೇ ಕಾರಣಕ್ಕೆ ಸಿಸಿಬಿಯಿಂದ ವಿವಿಐಪಿ ಭದ್ರತಾ ವಿಭಾಗಕ್ಕೆ ವರ್ಗಾವಣೆಯಾಗಿದ್ದ ಅವರು ಮತ್ತೆ ಸಿಸಿಬಿಗೇ ಬಂದಿದ್ದರು. ಈಗ ಮತ್ತೊಮ್ಮೆ ಅದೇ ವಿಭಾಗಕ್ಕೆ ವರ್ಗಾವಣೆಯಾಗಿದ್ದಾರೆ. ಅಂದರೆ ರವಿ ಪೂಜಾರಿಯಂತಹ, ಕರ್ನಾಟಕವೊಂದರಲ್ಲೇ 97 ಪ್ರಕರಣದಲ್ಲಿ ಆರೋಪಿಯಾಗಿರುವ ಆರೋಪಿಯ ಜೊತೆಗೆ ಸಖ್ಯ ಇದೆ ಎನ್ನುವ ಅಧಿಕಾರಿಗೆ ವಿವಿಐಪಿ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಿದರೆ ಸಾಕೇ ಎನ್ನುವುದನ್ನು ಇಲಾಖೆಯೇ ಉತ್ತರಿಸಬೇಕಿದೆ.

ದುರಂತವೆಂದರೆ ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿ ‘ವಿಶೇಷ ಸ್ಥಾನ’ಗಳನ್ನು ಪಡೆದಿರುತ್ತಾರೆ. ಅವರ ‘ಕನೆಕ್ಷನ್’ಗಳು ಹಿರಿಯ ಅಧಿಕಾರಿಗಳಿಗೂ ಬೇಕಿರುತ್ತವೆ. ಎಲ್ಲವನ್ನೂ ಅಧಿಕೃತ ಮಾರ್ಗಗಳಿಂದಲೇ ಮಾಡಲಾಗದಾಗ ಅವರು ಇಂಥವರನ್ನೂ ಬಳಸುತ್ತಾರೆ. ನೋಡುನೋಡುತ್ತಲೇ ಇವರುಗಳು ಸೂಪರ್‍ಕಾಪ್‍ಗಳೆಂಬ ಬಿರುದುಗಳನ್ನೂ ಪಡೆದುಕೊಂಡಿರುತ್ತಾರೆ. ಪೊಲೀಸ್ ಇಲಾಖೆ, ಕಳ್ಳದಂಧೆಗಳು, ಕೊಲೆಗಡುಕ ಮಾಫಿಯಾಗಳು ಇವೆಲ್ಲವೂ ಎಂದೆಂದೂ ಇರುವಂಥವೇ ಮತ್ತು ಅವುಗಳ ಬಗ್ಗೆ ಕ್ರೈಮ್ ಸುದ್ದಿ ಮಾಡುವವರು ಬರೆಯುತ್ತಾ ಅವನ್ನು ರೋಚಕಗೊಳಿಸುತ್ತಾ ಹೋಗುವುದೂ ಇಂದಿನ ನಾರ್ಮೆಲ್ಸಿ ಎಂದಾಗಿಬಿಟ್ಟಿದೆ. ಇವುಗಳ ಹಿಂದೆ ಕರಾಳಲೋಕದ ಆಟಗಳು ಸಾಕಷ್ಟಿರುತ್ತದೆ; ಯಾರ್ಯಾರದ್ದೋ ಬದುಕುಗಳು ಮುರುಟಿ ಹೋಗುತ್ತವೆ ಎಂಬುದು ‘ಸಭ್ಯಲೋಕ’ವಾದ ಪೊಲೀಸ್ ಇಲಾಖೆ ಮತ್ತು ಪತ್ರಿಕೋದ್ಯಮಗಳಿಗೂ ಬೇಡವಾಗಿಬಿಟ್ಟರೆ ಅಲ್ಲಿಗೆ ಎಲ್ಲವೂ ಆಟ ಮಾತ್ರವೇ ಆಗಿಬಿಡುತ್ತದೆ. ಎನ್‍ಕೌಂಟರ್ ಸ್ಪೆಷಲಿಸ್ಟುಗಳು ಕೆಲವೊಮ್ಮೆ ದಂಧೆಗಳನ್ನೂ ನಡೆಸುತ್ತಿರುತ್ತಾರೆ. ಅವರನ್ನು ತೆಗಳುವ ಮತ್ತು ಹೊಗಳುವ ಎರಡೂ ಬಗೆಯ ಪತ್ರಕರ್ತರೂ ಇರುತ್ತಾರೆ. ಈ ದುರಂತವನ್ನು ಬಿಚ್ಚಿಡಲು ಹೋಗುವವರು ನೂರು ಸಾರಿ ಯೋಚಿಸುವ ವಾತಾವರಣವಿದೆ.

ಇವೆಲ್ಲಕ್ಕೂ ಮಿಗಿಲಾದ ಅಪಾಯವಿರುವುದು ಸದರಿ ಪೊಲೀಸ್ ಅಧಿಕಾರಿಗಳು ಕಮ್ಯುನಲ್ ಮಾಫಿಯಾದ ಭಾಗವಾಗುವುದು. ಸರ್ಕಾರವೂ ಅದಕ್ಕೆ ಪೂರಕವಾಗಿಬಿಟ್ಟರೆ ಕಥೆ ಮುಗಿದಂತೆಯೇ. ವೆಂಕಟೇಶ್ ಪ್ರಸನ್ನರ ಲಿಂಕುಗಳು ಈ ರೀತಿ ಹಲವು ಎಳೆಗಳನ್ನು ತೋರುತ್ತಿವೆ. ಒಂದೇ ಪತ್ರಿಕೆಯ ಬಾಕ್ಸ್ ಐಟಮ್ಮಿನಲ್ಲಿ ಅವರ ಪರವಾದ ಸುದ್ದಿಯೂ, ಮುಖ್ಯ ಭಾಗದಲ್ಲಿ ಅವರ ಕರಾಳ ಮುಖವನ್ನು ತೋರುವ ಸುದ್ದಿ ಬರಲು ಈ ಸಿಕ್ಕುಗಳೂ ಕಾರಣವಾಗಿದೆ. ಇಲಾಖೆಯಲ್ಲಿ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಇಂಥವು ಬೆಳೆಯಲು ಬಿಡದಿದ್ದರೆ ಮಾತ್ರ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...