Homeಕರ್ನಾಟಕಅಭಿವೃದ್ಧಿ ಭ್ರಮೆಯ ಮತ್ತೊಂದು ಪ್ರಯೋಗ ; ಅಘನಾಶಿನಿ ನದಿ ನೀರನ್ನು ಬಯಲುಸೀಮೆಗೊಯ್ಯುವ ಯೋಜನೆ

ಅಭಿವೃದ್ಧಿ ಭ್ರಮೆಯ ಮತ್ತೊಂದು ಪ್ರಯೋಗ ; ಅಘನಾಶಿನಿ ನದಿ ನೀರನ್ನು ಬಯಲುಸೀಮೆಗೊಯ್ಯುವ ಯೋಜನೆ

- Advertisement -
- Advertisement -

ದಕ್ಷಿಣ ಕನ್ನಡ ಹೇಗೆ ಹಿಂದುತ್ವದ ಪ್ರಯೋಗ ಶಾಲೆಯೋ ಹಾಗೆಯೇ ಉತ್ತರಕನ್ನಡವೆಂದರೆ ಪ್ರಳಯಾಂತಕ ಸರ್ಕಾರಿ ಯೋಜನೆಗಳ ಪ್ರಯೋಗ ಪಶು! ಉತ್ತರಕನ್ನಡದ ಜೀವನದಿಗಳಾದ ಕಾಳಿ, ಶರಾವತಿ, ಬೇಡ್ತಿ, ಗಂಗಾವಳಿಮೇಲೆ ಆಗಾಗ ಪೊಕ್ಕು ಪರ್ಯಾವರ್ಣ ಪಂಡಿತರ ಕೆಟ್ಟ ಕಣ್ಣು ಬೀಳುತ್ತಲೇ ಇರುತ್ತದೆ. ಕೆಲವು ದಿನಗಳಿಂದ ಬೇಡ್ತಿ ವರಾದ ನದಿ ಜೋಡಣೆ ತಿರುವು ಯೋಜನೆ ಪ್ರಸ್ತಾಪದಿಂದ ಕಂಗಾಲಾಗಿರುವ ಜಿಲ್ಲೆಯ ಜನರೀಗ ಅಘನಾಶಿನಿ ನದಿ ನೀರನ್ನು ಬಳ್ಳಾರಿ ಕಡೆ ಹರಿಸುವ ಪ್ಲಾನ್ ವರದಿ ನೋಡಿ ಬೆಚ್ಚಿಬಿದ್ದಿದ್ದಾರೆ.

ಅಘನಾಶಿನಿ ನದಿ ಕೊಳ್ಳದಲ್ಲಿ ಜಲವಿದ್ಯುತ್ ಮತ್ತು ಏತ ನೀರಾವರಿ ಯೋಜನೆ ನಡೆಸುವ ಹುನ್ನಾರ ಕಳೆದ 50 ವರ್ಷದಿಂದ ನಾನಾ ನಮೂನೆಯಲ್ಲಿ ನಡೆಯುತ್ತಲೇ ಇದೆ. ಕಳೆದ ವರ್ಷ ಸಿಲಿಕಾನ್ ಸಿಟಿ (ಬೆಂಗಳೂರು) ದಾಹ ಇಂಗಿಸಲು ಅಘನಾಶಿನಿ ನದಿ ಅತ್ತ ತಿರುಗಿಸುವ ಯೋಜನೆಯೊಂದರ ಪ್ರಸ್ತಾಪವಾಗಿತ್ತು. ತಮ್ಮನ್ನು ಬೀದಿ ಪಾಲಾಗಿಸುವ ಈ ಎಡವಟ್ಟು ಯೋಜನೆಯಿಂದ ಸಿಟ್ಟಿಗೆದ್ದ ಅಘನಾಶಿನಿ ಕೊಳ್ಳದ ಮಂದಿ ಪ್ರತಿಭಟನೆಗೆ ಇಳಿದಿದ್ದರು. ಆ ಪ್ರಾಜೆಕ್ಟ್ ಸರ್ಕಾರಿ ಕಡತದಲ್ಲಿ ಅಡಗಿ ಕುಳಿತು ಸಮಯಸಾಧಿಸುತ್ತಲೇ ಇದೆ. ಇದೀಗ ಅದೇ ಅಘನಾಶಿನಿ ನದಿಯನ್ನು ಅವಿಭಜಿತ ಬಳ್ಳಾರಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳತ್ತ ತಿರುಗಿಸುವ ಕೆಲಸ ರಹಸ್ಯವಾಗಿ ಶುರುವಾಗಿದೆ!

ಕಾಲೇಶ್ವರಮ್ ಮಾದರಿ ಪ್ಲಾನ್

ತೆಲಂಗಾಣದ ಕಾಲೇಶ್ವರಮ್‌ನಲ್ಲಿ 1.25 ಲಕ್ಷ ಕೋಟಿ ಖರ್ಚು ಮಾಡಿ ಪರಿಸರ ಅರಣ್ಯಕ್ಕೆ ದೊಡ್ಡ ಅನಾಹುತವಾಗುವಂಥ ಏತ ನೀರಾವರಿ ಯೋಜನೆಯೊಂದನ್ನು ಕೈಗೊಳ್ಳಲಾಗಿದೆ. ಈ ಯೋಜನೆ ಮಾದರಿಯಲ್ಲಿ ಅಘನಾಶಿನಿ ನದಿ ಕಣಿವೆಯಲ್ಲಿ ನೀರಾವರಿ ಯೋಜನೆ ಆರಂಭಿಸಿದರೆ ಬಳ್ಳಾರಿ ಜಿಲ್ಲೆಯ ಕೊಟ್ಟೂರು, ಜಗಳೂರು, ಕೂಡ್ಲಿಗಿ, ಹರಪನಹಳ್ಳಿ, ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ ಮತ್ತು ಚಿತ್ರದುರ್ಗ ಜಿಲ್ಲೆಯ ದುರ್ಗ ಮತ್ತು ಹೆಡೆಕೋಟೆ ಪ್ರದೇಶದ 6 ಲಕ್ಷ ಎಕರೆ ಭೂಮಿ ಹಸಿರಾಗಿಸಬಹುದೆಂಬ ವರದಿಯೊಂದನ್ನು ನಿವೃತ್ತ ಉಪಮುಖ್ಯ ಇಂಜಿನಿಯರ್ ಪ್ರಕಾಶ್ ಕುದರಿ ಸಿದ್ಧಪಡಿಸಿದ್ದಾರೆ. ಈ ವರದಿ ಪ್ರಕಾರ ಯಾವುದೇ ಗ್ರಾಮ ಮುಳುಗಡೆಯಾಗದು, ಅರಣ್ಯ ನಾಶವಾಗದು, ಪರಿಸರಕ್ಕೆ ಧಕ್ಕೆಯಿಲ್ಲ.

ಅಘನಾಶಿನಿ ನದಿ 117 ಕಿ.ಮೀ ಪಯಣದಲ್ಲಿ ಬಕುರಹೊಳೆ, ದೋಣಿಹಳ್ಳ, ಚಂಡಿಕಾ ಹೊಳೆ, ಮಾಸ್ತಿಮನೆ ಹಳ್ಳ, ಬೆಣ್ಣೆ ಹೊಳೆಯೇ ಮುಂತಾದ ಹೊಳೆ ಹಳ್ಳ ಸೇರಿಸಿಕೊಂಡು 120 ಟಿಎಂಸಿ ನೀರನ್ನು ಅರಬ್ಬೀ ಸಮುದ್ರಕ್ಕೆ ಸೇರಿಸುತ್ತದೆ ಎಂದು ಕುದರಿ ಸಾಹೇಬರು ಹೇಳಿರುತ್ತಾರೆ. ಅವರ ಪ್ರಕಾರ ಈ ವ್ಯರ್ಥವಾಗುವ 120 ಟಿಎಂಸಿ ನೀರಿನಲ್ಲಿ, ಪ್ರತಿ ಸೆಕೆಂಡಿಗೆ 5 ಸಾವಿರ ಲೀಟರ್ ನೀರೆತ್ತುವ ಸಾಮರ್ಥ್ಯದ 24 ಬೃಹತ್ ಪಂಪ್‌ಗಳಿಂದ ಬಯಲುಸೀಮೆಯ ಮೂರು ಜಿಲ್ಲೆಗಳಿಗೆ ಕಾಲುವೆಗಳ ಮೂಲಕ 60 ಟಿಎಂಸಿ ನೀರನ್ನು ಹರಿಸಬಹುದು. ಇದರಿಂದ ವರ್ಷಕ್ಕೆ 40 ಸಾವಿರ ಕೋಟಿರೂಗಳ ಕೃಷಿ ಉತ್ಪನ್ನ ಪಡೆಯಬಹುದು ಎಂದಿದ್ದಾರೆ. 40 ಸಾವಿರ ಕೋಟಿ ಬಜೆಟ್‌ನ ಸದರಿ ಪ್ರಾಜೆಕ್ಟ್ ಕೇವಲ 9 ತಿಂಗಳಲ್ಲಿ ಮುಗಿಸಬಹುದೆನ್ನುತ್ತಾರೆ ಕುದರಿ.

ವರದಿಯಷ್ಟು ಸುಲಭವಲ್ಲ!

ಕಲ್ಪನಾಲೋಕದಲ್ಲಿ ಬಯಲುಸೀಮೆಯನ್ನು ಹಸಿರು ಮಾಡುವಷ್ಟು ಸರಳ ಸುಲಭವಲ್ಲ ಅಘನಾಶಿನಿ ನೀರನ್ನು ಹಿಮ್ಮುಖವಾಗಿ ಹರಿಸುವುದು ಎನ್ನುತ್ತಾರೆ ಪರಿಸರ ತಜ್ಞರು. ಶಿರಸಿ ತಾಲ್ಲೂಕಿನ ಶಂಕರ ಹೊಂಡದಲ್ಲಿ ಹುಟ್ಟುವ ಅಘನಾಶಿನಿ ನದಿ ಪಕ್ಕದ ಸಿದ್ಧಾಪುರ ತಾಲ್ಲೂಕಿನಲ್ಲಿ ಹರಿದು ಸರ್ವಋತುರಮಣೀಯ ಉಂಚುಳ್ಳಿ ಜಲಪಾತ ಸೃಷ್ಟಿಸಿ ಸಹ್ಯಾದ್ರಿ ನಿತ್ಯಹರಿದ್ವರ್ಣ ಕಾಡು ಮೇಡು ಬೇಧಿಸಿ ಕುಮಟಾ ತಾಲ್ಲೂಕಿನ ಅಘನಾಶಿನಿ ತದಡಿ ಗ್ರಾಮಗಳ ಬಳಿ ಅರಬ್ಬೀ ಸಮುದ್ರ ಸೇರುತ್ತದೆ. ದೇಶದಲ್ಲೇ ಸ್ವಚ್ಛವಾದ ಮಾಲಿನ್ಯ ರಹಿತ ನದಿ ಎಂಬ ಹೆಗ್ಗಳಿಕೆಯ ಈ ಪುಟ್ಟ ಅಘನಾಶಿನಿಯ ಒಟ್ಟ್ಟು ಜಲಾನಯನ ಪ್ರದೇಶ 1350 ಚ.ಕಿ.ಮೀ.

ಅಘನಾಶಿನಿಯ 120 ಟಿಎಂಸಿ ಅಡಿಯಷ್ಟು ನೀರು ಸಮುದ್ರ ಸೇರುತ್ತದೆ ಎಂಬುದಕ್ಕೆ ಯಾವ ಆಧಾರವೂ ಇಲ್ಲ. ಕುದುರಿಯವರ ವರದಿಯ ದೊಡ್ಡ ಲೋಪವೇ ಇದು. ಹೀಗಾಗಿ ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ದಾವಣಗೆರೆಗೆ 60 ಟಿಎಂಸಿ ಅಡಿ ನೀರು ಒಯ್ಯುಲು ಸಾಧ್ಯವೇ ಇಲ್ಲ. ಕೇಂದ್ರಿಯ ಜಲ ಮಂಡಳಿ ಕುಮಟಾ ತಾಲ್ಲೂಕಿನ ಸಂತೆಗುಳಿಯಲ್ಲಿ ಅಘನಾಶಿನಿಯ ಹರಿವಿನ ಪ್ರಮಾಣ ನಿಖರವಾಗಿ ಲೆಕ್ಕ ಹಾಕಿದೆ. ಕಳೆದ 10 ವರ್ಷದ ನೀರಿನ ಹರಿವಿನ ದಾಖಲೆಯಂತೆ ನದಿಯ ಒಟ್ಟು ನೀರಿನ ಇಳುವರಿ ಬರೀ 85 ಟಿಎಂಸಿ ಮಾತ್ರ! ಈ ಅಂದಾಜಿನಂತೆ ತದಡಿಯಲ್ಲಿ ಅಘನಾಶಿ ನೀರು ಸಮುದ್ರಕ್ಕೆ ಸೇರುವ 100 ಟಿಎಂಸಿಗಿಂತ ಹೆಚ್ಚಿರಬಾರದು. ಈ ಲೆಕ್ಕಾಚಾರದಂತೆ ಇಂಜಿನಿಯರ್ ಕುದರಿ ಬಳಕೆಯಾಗದೇ ಇರುವ (Surplus Water) ಎಂದು ಹೇಳುವುದೇ ಅಸಮಂಜಸ ಎಂಬುದು ಭೂಜಲ ಶಾಸ್ತ್ರಜ್ಞರ ತರ್ಕ.

ಕುದರಿ ವರದಿಯಲ್ಲಿ ಹೇಳಿರುವ ಹೊಳೆ, ಹಳ್ಳಿಗಳೆಲ್ಲ ಸಿದ್ಧಾಪುರದ ಉಂಚಳ್ಳಿ ಜಲಪಾತದ ನಂತರ ಅಘನಾಶಿನಿ ಪಾತ್ರವನ್ನು ಸೇರಿಕೊಳ್ಳವಂಥವುಗಳು. ಆದರೆ ಅವರ ಪ್ರಾಜೆಕ್ಟ್ ರಿಪೋರ್ಟ್‌ನಲ್ಲಿ ಉಂಚಳ್ಳಿ ಜಲಪಾತಕ್ಕೂ ಮೊದಲೇ ಸಿದ್ಧಾಪುರ ತಾಲ್ಲೂಕಿನ ಹಾವಿನಬೀಳು ಗ್ರಾಮದ ಹತ್ತಿರ ಅಣೆಕಟ್ಟು ಕಟ್ಟಿ ನೀರೆತ್ತಲಾಗುತ್ತದೆ. ಮಾವಿನ ಮನೆ ಹೊಳೆಗೆ ಒಡ್ಡು ಹಾಕಿದಾಗ ಹಿಮ್ಮುಖವಾಗಿ ನೀರು ಕಳಿಸಲು ಕಮ್ಮಿಯೆಂದರೂ 20 ಅಡಿ ನೀರು ನಿಲ್ಲುವಂತೆ ಮಾಡಬೇಕಾಗುತ್ತದೆ. ಆಗ ನದಿಯಾಚೆಯ ಹಲವು ಹಳ್ಳಿಗಳು ಜಲಸಮಾಧಿ ಆಗುವುದು ಗ್ಯಾರಂಟಿ!

ಇದೊಂದು ಅಲ್ಲಸಲ್ಲದ ಯೋಜನೆ ಎಂಬುದಕ್ಕೆ ಅನೇಕ ಕಾರಣಗಳಿವೆ. ಅಘನಾಶಿನಿ ನದಿ ಮೂರು ತಾಲೂಕುಗಳಲ್ಲಿ ಮಳೆಗಾಲದಲ್ಲಷ್ಟೇ ಮೈದುಂಬಿ ಹರಿದು, ಬೇಸಿಗೆಯಲ್ಲಿ ಬಸವಳಿಯುತ್ತದೆ. ಶಿರಸಿ, ಕುಮಟಾ ಮತ್ತು ಹೊನ್ನಾವರಕ್ಕೆಲ್ಲ ಕುಡಿಯುವ ನೀರಿನ ಸರಬರಾಜಾಗುವುದು ಅಘನಾಶಿನಿಂದಲೇ! ಬೇಸಿಗೆಯಲ್ಲಿ ನದಿ ಬತ್ತುವುದರಿಂದ ಶಿರಸಿಯಲ್ಲಿ ನೀರಿನ ಹಾಹಾಕಾರ ಏಳುತ್ತದೆ. ನದಿಗುಂಟದ ಕೆರೆ ಬಾವಿ ತೋಟ ಗದ್ದೆಗಳು ನೀರಿನ ಸೆಲೆಯಿಲ್ಲದೆ ಒಣಗುವುದು ಸಾಮಾನ್ಯ ಸಂಗತಿ. ನದಿ ಪಾತ್ರದಲ್ಲೇ ನೀರಿನ ಬರ ಬರುವಾಗ ಬಯಲುಸೀಮೆಯ ಫಲಾನುಭವಿ ಹಳ್ಳಿಗಳಿಗೆ ನೀರೊದಗಿಸುವುದಾದರೂ ಹೇಗೆ? ಇದರ ಪರಿಕಲ್ಪನೆ ಸಹ್ಯಾದ್ರಿ ಪರಿಸರದ ಪರಿಜ್ಞಾನ ಕುದರಿಯವರಿಗೆ ಇದ್ದಂತಿಲ್ಲ ಎಂಬ ಕೂಗೆದ್ದಿದೆ.

ಕುದರಿಯವರಿಗೆ ’ಸ್ಫೂರ್ತಿ’ಯಾಗಿರುವುದು ತೆಲಂಗಾಣದ ಕಾಲೇಶ್ವರಮ್ ಏತ ನೀರಾವರಿ ಯೋಜನೆ. ಈ ಯೋಜನೆ ಅನೇಕ ಅನಾಹುತ ಮಾಡದ್ದಿದೆ. ಅದು ಆಪೋಷನ ಪಡೆದಿರುವ ಕಾಡಿನ ವಿವರ, ಕೆನಾಲ್ ನಿರ್ಮಾಣಕ್ಕೆ ದೊಡ್ಡ ಪ್ರಮಾಣದಲ್ಲಿ ಭೂ ಅಗೆತ ಮಾಡಿರುವುದರಿಂದ ಆಗಿರುವ ಅನಾಹುತಗಳ ’ಕತೆ’ ಈಗಾಗಲೇ ಸಾಕಷ್ಟು ವರದಿಯಾಗಿದೆ. ಅಘನಾಶಿನಿಯ ಹಾವಿನ ಬೀಳು ಏತ ನೀರಾವರಿ ಯೋಜನೆಗೂ ಸಾವಿರಾರು ಕಿ.ಮೀಟರ್‌ಗಟ್ಟಲೆ ಉದ್ದದ ಕಾಲುವೆಗಳು ಬೇಕು. ಆಗೆಲ್ಲ ಅರಣ್ಯ ಕಡಿತ, ಭೂ ಅಗೆತ ಆಗುವುದರಿಂದ ಅಪಾರ ಹಾನಿ ಆಗುವುದು ನಿಸ್ಸಂಶಯ. ಇದೆಲ್ಲ ಗಮನಿಸಿದಾಗ ಇಂಜಿನಿಯರ್ ಕುದರಿ ಕೊಟ್ಟಿರುವ ವರದಿ ಸುಂದರವಾಗಿ ಕಂಡರೂ ಗಂಡಾಂತರಕಾರಿ ಎನ್ನಲಾಗುತ್ತಿದೆ.

ಜೀವ ಜೀವನದ ನದಿ

ಅಘನಾಶಿನಿ ಹುಟ್ಟಿನಿಂದ ಮುಖಜ ಪ್ರದೇಶದವರೆಗೂ ಅಡೆತಡೆಯಿಲ್ಲದೆ ಮುಕ್ತವಾಗಿ ಸ್ವತಂತ್ರವಾಗಿ ಹರಿಯುವ ದೇಶದ ಕೆಲವೇ ಕೆಲವು ನದಿಗಳಲ್ಲಿ ಒಂದು. ಕಲ್ಮಷ ಸೇರಿಸಿಕೊಳ್ಳದೆ ನಿಶ್ಚಲವಾಗಿ ಹರಿಯುವ ಜೀವ ನದಿ ಎಂಬ ಹೆಗ್ಗಳಿಕೆಯೂ ಅಘನಾಶಿನಿಯದು. ಅಘನಾಶಿನಿ ತಪ್ಪಲಿನಲ್ಲಿ ಪರಿಸರ ಸ್ನೇಹಿ ಬದುಕು ಕಟ್ಟಿಕೊಂಡ ಹತ್ತಾರು ಸಾವಿರ ಮುಗ್ಧ ಕೃಷಿಕ ಹಾಗೂ ವನವಾಸಿ ಬುಡಕಟ್ಟು ಕುಟುಂಬಗಳಿವೆ. ವೈವಿಧ್ಯ ವನ್ಯಜೀವಿ ಸಂಕುಲ, ವಿಶಿಷ್ಟ ಕೃಷಿತಳಿ, ಗಿಡಮೂಲಿಕೆ ಅಘನಾಶಿನಿ ಕೊಳ್ಳದಲ್ಲಿದೆ. ನದಿಯು ಎರಡೂ ದಂಡೆ ಗುಂಟ ಜೀವನ ಸಾಗಿಸುತ್ತಿರುವ ನೂರಾರು ಹಳ್ಳಿಗಳ ಲಕ್ಷಾಂತರ ಮಂದಿಗೆ ಅವರ ಕೆರೆ, ಬಾವಿ, ತೋಟ, ಕಾಡು ಮೇಡಿಗೆ ಅಪಾರ ಪಶು, ಪಕ್ಷಿ, ಪ್ರಾಣಿ, ಕೀಟ ಜೀವ ಜಂತುಗಳ ಜೀವ ಜಾಲಕ್ಕೆ ಅಘನಾಶಿನಿ ಜೀವ ಜೀವನದ ನದಿ

ನಿರಾತಂಕವಾಗಿ ಹರಿಯುವ ಅಘನಾಶಿನಿ ಅಪಾರ ಪೋಷಕಾಂಶವಿರುವ ಸಾವಯವ ಪದಾರ್ಥ, ಹೂಳು, ಮಣ್ಣು ಸಾಗಿಸುತ್ತ ಮುಖಜ ಭೂಮಿಯ ಅಸಂಖ್ಯ ಜಲಚರ ವಂಶಾಭಿವೃದ್ಧಿಗೆ ನೆರವಾಗುತ್ತಿದೆ; ಮೀನು, ಬೆಳಚು, ಚಿಪ್ಪಿಕಲ್ಲು, ಮರಳು, ಉಪ್ಪು ಉದ್ಯಮ ಉಳಿಸಿ ಬೆಳೆಸಿ ಸಹಸ್ರಾರು ಕುಟುಂಬ ಜೀವನೋಪಾಯದ ಮೂಲವಾಗಿದೆ. ಕೋಟ್ಯಂತರ ರೂಪಾಯಿ ಆದಾಯಕ್ಕೆ ಮೂಲವಾಗಿರುವ ಅಘನಾಶಿನಿ ನೀರು ಯಾವುದೇ ಬಳಕೆಯಿಲ್ಲದೆ ಸಮುದ್ರಕ್ಕೆ ಸೇರಿ ಪೋಲಾಗುತ್ತಿದೆ ಎಂಬ ’ಪಂಡಿತರ’ ಪ್ರವರವೇ ಹಾಸ್ಯಸ್ಪದ.

ಅಘನಾಶಿನಿಯ ನೀರು ವ್ಯರ್ಥವಾಗುವುದಿರಲಿ ಎಷ್ಟೋ ನದಿ ಪಾತ್ರದ ಜನ, ಜಾನುವಾರು, ಸಸ್ಯ, ಜಲಚರಗಳಿಗೆ ಕೆಲವೊಮ್ಮೆ ನೀರಿನ ಅಭಾವ ಆಗುತ್ತಿದೆ. ಪ್ರಸ್ತಾವಿತ ಏತ ನೀರಾವರಿ ಅಥವಾ ಇನ್ಯಾವುದೇ ಜಲ ವಿದ್ಯುತ್, ಕುಡಿಯುವ ನೀರಿನ ಯೋಜನೆ ಕೈಗೊಂಡರೆ ನದಿಯ ನೀರಿನ ಹರಿಯುವಿಕೆ ಪ್ರಮಾಣ ನಿಯಂತ್ರಣಗೊಂಡು ಸಮುದ್ರದ ಉಪ್ಪು ನೀರು ನದಿ ಪಾತ್ರವನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆ ಇದೆ.

ನದಿಗಳ ನೀರು ನಿಸರ್ಗ ವ್ಯವಸ್ಥೆಯಲ್ಲಿ ಸೀಮಿತ ಪ್ರದೇಶದ ಹಕ್ಕಲ್ಲವೆಂಬ ವಾದ ಸರಿ. ಆದರೆ ಕಾರ್ಯಸಾಧುವಲ್ಲದ ಮತ್ತು ಸ್ಥಳೀಯರಿಗೇ ಅವಶ್ಯವಿರುವಾಗ ನೀರಿನ ಆಮದು ಯೋಜನೆ ಹಾಕಿಕೊಳ್ಳುವುದು ಸರಿಯಾದ ನಡೆಯಲ್ಲ. ಇದರಿಂದ ಎರಡೂ ಕಡೆಯವರಿಗೆ ಸಂಕಷ್ಟ ಎದುರಾಗಿ ಸರ್ಕಾರಿ ಹಣ, ರಾಜಕಾರಣಿ – ಸರ್ಕಾರಿ ಪರ್ಯವರ್ಣ ಪಂಡಿತರು – ಗುತ್ತಿಗೆದಾರರ ಒಕ್ಕೂಟದ ಪಾಲಾಗುತ್ತದೆಯಷ್ಟೇ! ಅಭಿವೃದ್ಧಿ ಭ್ರಮೆಯ ಇಂಥ ಲೂಟಿ ಯೋಜನೆಗಳಿಗೆ ಆಳುವವರು ಇನ್ನಾದರೂ ತಡೆಹಾಕಬೇಕು. ಇದರ ಫಲಾನುಭವಿಗಳು ಎಂದು ನಂಬಿಸಲಾಗುತ್ತಿರುವವರೂ ಕೂಡ ಎಚ್ಚೆತ್ತುಕೊಂಡು ಇದರ ವಿರುದ್ಧ ಹೋರಾಡಬೇಕಿದೆ.

ಅಘನಾಶಿನಿ ಏತ ನೀರಾವರಿ ಯೋಜನೆ ಬಜೆಟ್ಟಿನ (ರೂ 40 ಸಾವಿರ ಕೋಟಿ- ಇದು ಆಮೇಲೆ ಹೆಚ್ಚುತ್ತಾ ಹೋಗುವುದು ಸರ್ಕಾರಿ ಯೋಜನೆಗಳ ವಾಡಿಕೆ) ಕಾಲು ಭಾಗ ವೆಚ್ಚ ಮಾಡಿದರೂ ಸಾಕು, ಚಿತ್ರದುರ್ಗ, ಕೊಪ್ಪಳ, ಬಳ್ಳಾರಿ, ದಾವಣಗೆರೆ ಕಡೆಯ ಜಲಾನಯನ ಅಭಿವೃದ್ಧಿ ಆಧಾರಿತ ನೀರಾವರಿ ಯೋಜನೆಗಳನ್ನು ಕೈಗೊಳ್ಳಬಹುದು. ಇವುಗಳತ್ತ ಗಮನ ಹರಿಸುವಂತಾಗಲಿ ಎನ್ನುತ್ತಾರೆ ಪರಿಸರ ಮತ್ತು ಭೂಜಲ ಶಾಸ್ತ್ರಜ್ಞರು.


ಇದನ್ನೂ ಓದಿ: ಮತ್ತೆ ಕಾಡುತ್ತಿದೆ ಬೇಡ್ತಿ-ವರದಾ-ಅಘನಾಶಿನಿ ನದಿ ಜೋಡಣೆ ಗುಮ್ಮ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...