Homeಕರ್ನಾಟಕಅಪ್ಪ ಎಂಬ ಆಕಾಶ ಮತ್ತು ಭೂಮಿ: ಸುಧೀಂದ್ರ ಹಾಲ್ದೊಡ್ಡೇರಿ ಬಗ್ಗೆ ಮಗಳ ಮನತುಂಬಿದ ಮಾತುಗಳು...

ಅಪ್ಪ ಎಂಬ ಆಕಾಶ ಮತ್ತು ಭೂಮಿ: ಸುಧೀಂದ್ರ ಹಾಲ್ದೊಡ್ಡೇರಿ ಬಗ್ಗೆ ಮಗಳ ಮನತುಂಬಿದ ಮಾತುಗಳು…

- Advertisement -
- Advertisement -

ಖ್ಯಾತ ವಿಜ್ಞಾನ ಬರಹಗಾರ, ಡಿಆರ್‌ಡಿಒ ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಅವರು ಇಂದು ನಿಧನರಾಗಿದ್ದಾರೆ. ಸುಧೀಂದ್ರ ಹಾಲ್ದೊಡ್ಡೇರಿ ಅವರ ಮಗಳು, ಲೇಖಕಿ ಮೇಘನಾ ಸುಧೀಂದ್ರ ಅವರು ಅಪ್ಪಂದಿರ ದಿನದಂದು ತಮ್ಮ ಅಪ್ಪನ ಬಗ್ಗೆ ಬರೆದ ಬರಹವನ್ನು ಅವರ ನೆನಪಿನಲ್ಲಿ ಇಂದು ಪ್ರಕಟಿಸುತ್ತಿದ್ದೆವೆ.

’ಅಪ್ಪ ಎಂದಾಗಲ್ಲೆಲ್ಲ ನನಗೆ ಎರಡು ಇಂಸಿಡೆಂಟ್ ನೆನಪಾಗುತ್ತದೆ. ನನ್ನ ಪೂರ್ತಿ ಹೆಸರಿನ ಅರ್ಧ ಭಾಗ ಅಪ್ಪನೇ ತುಂಬಿಕೊಂಡಿದ್ದಾರೆ. ಅರ್ಧ ಜನ ನನ್ನನ್ನು “ಸುಧೀಂದ್ರನ ಮಗಳು” ಎಂದು ಗುರುತಿಸಿ ನನ್ನ ಹೆಸರನ್ನೇ ಮರೆಯುವಷ್ಟು ಅಪ್ಪನ್ನನ್ನು ಪ್ರೀತಿಸುವವರಿದ್ದಾರೆ’.
ಘಟನೆ 1
ಒಮ್ಮೆ ಅಪ್ಪ ಕೆಲಸದ ಮೇಲೆ ರಷ್ಯಾದ ಮಾಸ್ಕೋಗೆ ಹೋಗಿದ್ದರು. ಎಂದಿನಂತೆ ಅಪ್ಪನಿಗೆ ದಿನಾ ಫೋನ್ ಮಾಡಿ, “ಯಾವಾಗ ಬರ್ತ್ಯಾ ಅಪ್ಪ, ಯಾವಾಗ ಬರ್ತ್ಯಾ ಅಪ್ಪ” ಎಂದು ಕೇಳಿ ಕೇಳಿ ಸುಸ್ತು ಮಾಡಿದ್ದೆ. ಅಪ್ಪ “ಒಂದು ವಾರ ಬಿಟ್ಟು, 2 ವಾರ ಬಿಟ್ಟು” ಎಂದು ಅನ್ನುತ್ತಿದ್ದರು. ಇನ್ನು ಮಾಸ್ಕೋದಿಂದ ಹೊರಡುವ ದಿನ ಬಂತು, “ಏನು ಬೇಕು ಮಗಳೇ?” ಎಂದು ಕೇಳಿದ್ದರು, “ಸೂಟ್ ಕೇಸ್ ತುಂಬ ಚಾಕ್ಲೇಟ್ ಬೇಕಪ್ಪ” ಎಂದು ಅಂದಿದ್ದೆ. ಅದನ್ನೆಲ್ಲಾ ಹೇಳಿ ಮರೆತೂ ಹೋಗಿದ್ದೆ.

ಸರಿ ಅಪ್ಪ ಮನೆಗೆ ಬಂದರು, ನಾನು ಸ್ಕೂಲಿಗೆ ಹೋಗಿದ್ದೆ, ಸಂಜೆ ಬಂದರೆ ಒಂದು ರೂಮಿನಲ್ಲಿ ದೊಡ್ಡ ಸೂಟ್ ಕೇಸ್ ಇಟ್ಟಿದ್ದರು. ತೆಗೆದರೆ ನಿಜವಾಗಿಯೂ ಅದರ ಪೂರ್ತಿ ಚಾಕ್ಲೇಟ್ ಇತ್ತು. ಒಂದು 35 ಕೆಜಿಯ ಸೂಟ್ಕೇಸಿನ ತುಂಬಾ ಚಾಕ್ಲೇಟ್ ತಂದಿದ್ದರು ಅಪ್ಪ. ಅವರನ್ನ ಕಸ್ಟಮ್ಸಿನಲ್ಲಿ ಹಿಡಿದ್ದಿದ್ದರೂ ಸಹ. ವೈಟ್ ಪಾಸ್‌ಪೋರ್ಟ್ ಮತ್ತು ಮಗಳಿಗೆ ಚಾಕ್ಲೇಟ್ ತೆಗೆದುಕೊಂಡು ಹೋಗುತ್ತಿದ್ದೇನೆ ಎಂಬ ಸಬೂಬಿನೊಂದಿಗೆ ಬಿಟ್ಟಿದ್ದರಂತೆ. ಒಂದು ಸೂಟ್ಕೇಸಿನ ಬಟ್ಟೆಯನ್ನೆಲ್ಲಾ ಬಿಟ್ಟು, ಮಗಳಿಗೆ ಚಾಕ್ಲೇಟ್ ತಂದಿದ್ದರು ಅಪ್ಪ. ನಾನು ಸುಮ್ಮನೆ ಹೇಳುವ ಮಾತನ್ನ ನಿಜ ಮಾಡೋದು ಅಪ್ಪ ಮಾತ್ರ.

ಘಟನೆ 2
ನಾನು ಸೆಕೆಂಡ್ ಪಿಯೂಸಿಯಲ್ಲಿ ಓದೋದು ಬಿಟ್ಟು ಆರಾಮಾಗಿ ಸಂಗೀತ, ನಾಟಕ ಅಂದುಕೊಂಡಿದ್ದೆ. ಹೋಗಲಿ ಅದರಲ್ಲೂ ಏನು ಅಂತಹ ಸಾಧನೆ ಮಾಡಿರಲ್ಲಿಲ್ಲ. ಸುಮ್ಮನೆ ಕ್ಲಾಸ್ ಚಕ್ಕರ್ ಹಾಕೋಕೆ ಒಂದು ನೆಪ ಅಷ್ಟೆ. ಎಸ್ಸೆಸೆಲ್ಸಿಯಲ್ಲಿ ವಿಪರೀತ ಮಾರ್ಕ್ಸ್ ತೆಗೆದುಕೊಂಡ ಓವರ್ ಕಾನ್ಫೆಡೆನ್ಸ್ ನನ್ನಲ್ಲಿತ್ತು. “ಬರತ್ತೆ ಬಿಡು ಮಾರ್ಕ್ಸ್” ಅನ್ನೋ ಕೊಬ್ಬು. ಅಪ್ಪ ಒಂದೆರೆಡು ಬಾರಿ ಮೆತ್ತಗೆ ಹೇಳಿದ್ದರು, “ಹತ್ತನೇ ಕ್ಲಾಸಿನ ಹಾಗಲ್ಲ ಇದು, ಸರಿಯಾಗಿ ಓದು, ಇದು ನಿನ್ನ ಜೀವನದ ಟರ್ನಿಂಗ್ ಪಾಯಿಂಟ್” ಎಂದು. ನಾನು ಆರಾಮಾಗಿಯೇ ಇದ್ದೆ. ಎಕ್ಸಾಮು ಬರೆದೆ. ಅತೀ ಸಾಧಾರಣ ಮಾರ್ಕ್ಸು, ಅತೀ ಸಾಧಾರಣ ಸಿಇಟಿ ರ್ಯಾಂಕು ಬಂತು. ಅಪ್ಪನಿಗೆ ಇದ್ದ ಕನೆಕ್ಷನ್ಸು, ದುಡ್ಡು ಇವೆಲ್ಲವೂ ನನ್ನನ್ನ ಕಾಪಾಡುತ್ತದೆ ಎಂಬ ಕೆಟ್ಟ ಕಾನ್ಫಿಡೆನ್ಸು ನನ್ನಲ್ಲಿತ್ತು. ಅಪ್ಪ ರಿಸೆಲ್ಟ್ ನೋಡಿ ಒಂದೇ ಮಾತು ಹೇಳಿದರು, “ನಿನ್ನ ಯೋಗ್ಯತೆಗೆ ಎಲ್ಲಿ ಸೀಟು ಸಿಗತ್ತೋ ಅಲ್ಲಿ ಸೇರ್ಕೊಂಡು ಇಂಜಿನಿಯರಿಂಗ್ ಮುಗಿಸು, ಗುಡ್ ಲಕ್” ಅಂದರು. “ನೆನೆಪಿರಲಿ ನೀನು ಎಷ್ಟೇ ಮಾರ್ಕ್ಸ್ ತೆಗೆದರೂ ನನ್ನ ಮಗಳೇ ಅದೇನು ಬದಲಾಗಲ್ಲ” ಎಂದು ಸಾಂತ್ವನ ಹೇಳಿ ಹೋದರು.

ನಾನು ಊರಾಚೆ ಕಾಲೇಜಿಗೆ ಸೇರಿದೆ. ದಿನಾ ಬೆಳಗ್ಗೆ 6 ಘಂಟೆಗೆ ಹೊರಟರೆ ಸಂಜೆ 6 ಘಂಟೆಗೆ ಬರುತ್ತಿದ್ದೆ. 1 ವರ್ಷ ಆಟಾಡಿದ್ದಕ್ಕೆ 4 ವರ್ಷ ಒದ್ದಾಡಿದೆ. ಅಪ್ಪ ಸುಮ್ಮನೆ ಮುಗುಳ್ನಗುತ್ತಿದ್ದರು. ಇಂಜಿನಿಯರಿಂಗ್ ಮುಗಿಸಿದ ನಂತರ, “ನೀನು ಯಾರ ಶಿಫಾರಸ್ಸಿನಲ್ಲೋ, ಯಾರ ದುಡ್ಡಲ್ಲೋ ಓದಲ್ಲಿಲ್ಲ ನಿನ್ನ ಯೋಗ್ಯತೆಗೆ ತಕ್ಕ ಹಾಗೆ ಓದಿದೆ, ಯಾವತ್ತೂ ಅಷ್ಟೇ ನೀನು ಕಷ್ಟ ಪಟ್ಟು ನೀನು ದಕ್ಕಿಸಿಕೊಂಡಿದ್ದೇ ನಿನ್ನ ಬಳಿ ಶಾಶ್ವತವಾಗಿ ಉಳಿಯೋದು, ಅಪ್ಪ ಅಮ್ಮ ಫ್ರೀಯಾಗಿ ಕೊಟ್ಟಿದ್ದೂ ಉಳಿಯಲ್ಲ” ಎಂಬ ಅತಿ ದೊಡ್ಡ ಜೀವನದ ಪಾಠವನ್ನು ಹೇಳಿಕೊಟ್ಟರು.

ಇದಾದ ನಂತರ ನಾನು ಯಾವತ್ತೂ ಯಾವುದನ್ನೂ ಲೈಟಾಗಿ ತೆಗೆದುಕೊಳ್ಳಲ್ಲಿಲ್ಲ. ತಲೆ ಬಗ್ಗಿಸಿ ಕೆಲಸ ಮಾಡಿಕೊಂಡು ಹೋಗಿದ್ದೇನೆ. ಅದು ವಿದೇಶದಲ್ಲಿ ಮಾಸ್ಟರ್ಸ್ ಇರಬಹುದು, ಅಥವಾ ಕೆಲಸ ಇರಬಹುದು ಅಥವಾ ಪುಸ್ತಕ-ಲೇಖನ ಬರೆಯೋದಿರಬಹುದು.

ಪ್ರೀತಿ ಮಾಡುತ್ತಲೇ ಅಸಂಖ್ಯಾತ ಜೀವನ ಪಾಠ ಕಲಿಸುತ್ತಿರುವ ಅಪ್ಪನಿಗೆ ಅಪ್ಪನ ದಿನದ ಶುಭಾಶಯಗಳು. ನೀನೆ ನನಗೆ ಸ್ಪೂರ್ತಿ ಅಪ್ಪ. ನನ್ನ ಮೂರನೆಯ ಪುಸ್ತಕವನ್ನ( #AI ಕಥೆಗಳು) ನಿನಗೇ ಅರ್ಪಣೆ ಮಾಡಿದ್ದೇನೆ.

  • ಮೇಘನಾ ಸುಧೀಂದ್ರ

ಇದನ್ನೂ ಓದಿ: ಖ್ಯಾತ ವಿಜ್ಞಾನ ಬರಹಗಾರ, DRDO ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ (61) ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...