Homeಕರ್ನಾಟಕಅಪ್ಪ ಎಂಬ ಆಕಾಶ ಮತ್ತು ಭೂಮಿ: ಸುಧೀಂದ್ರ ಹಾಲ್ದೊಡ್ಡೇರಿ ಬಗ್ಗೆ ಮಗಳ ಮನತುಂಬಿದ ಮಾತುಗಳು...

ಅಪ್ಪ ಎಂಬ ಆಕಾಶ ಮತ್ತು ಭೂಮಿ: ಸುಧೀಂದ್ರ ಹಾಲ್ದೊಡ್ಡೇರಿ ಬಗ್ಗೆ ಮಗಳ ಮನತುಂಬಿದ ಮಾತುಗಳು…

- Advertisement -
- Advertisement -

ಖ್ಯಾತ ವಿಜ್ಞಾನ ಬರಹಗಾರ, ಡಿಆರ್‌ಡಿಒ ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಅವರು ಇಂದು ನಿಧನರಾಗಿದ್ದಾರೆ. ಸುಧೀಂದ್ರ ಹಾಲ್ದೊಡ್ಡೇರಿ ಅವರ ಮಗಳು, ಲೇಖಕಿ ಮೇಘನಾ ಸುಧೀಂದ್ರ ಅವರು ಅಪ್ಪಂದಿರ ದಿನದಂದು ತಮ್ಮ ಅಪ್ಪನ ಬಗ್ಗೆ ಬರೆದ ಬರಹವನ್ನು ಅವರ ನೆನಪಿನಲ್ಲಿ ಇಂದು ಪ್ರಕಟಿಸುತ್ತಿದ್ದೆವೆ.

’ಅಪ್ಪ ಎಂದಾಗಲ್ಲೆಲ್ಲ ನನಗೆ ಎರಡು ಇಂಸಿಡೆಂಟ್ ನೆನಪಾಗುತ್ತದೆ. ನನ್ನ ಪೂರ್ತಿ ಹೆಸರಿನ ಅರ್ಧ ಭಾಗ ಅಪ್ಪನೇ ತುಂಬಿಕೊಂಡಿದ್ದಾರೆ. ಅರ್ಧ ಜನ ನನ್ನನ್ನು “ಸುಧೀಂದ್ರನ ಮಗಳು” ಎಂದು ಗುರುತಿಸಿ ನನ್ನ ಹೆಸರನ್ನೇ ಮರೆಯುವಷ್ಟು ಅಪ್ಪನ್ನನ್ನು ಪ್ರೀತಿಸುವವರಿದ್ದಾರೆ’.
ಘಟನೆ 1
ಒಮ್ಮೆ ಅಪ್ಪ ಕೆಲಸದ ಮೇಲೆ ರಷ್ಯಾದ ಮಾಸ್ಕೋಗೆ ಹೋಗಿದ್ದರು. ಎಂದಿನಂತೆ ಅಪ್ಪನಿಗೆ ದಿನಾ ಫೋನ್ ಮಾಡಿ, “ಯಾವಾಗ ಬರ್ತ್ಯಾ ಅಪ್ಪ, ಯಾವಾಗ ಬರ್ತ್ಯಾ ಅಪ್ಪ” ಎಂದು ಕೇಳಿ ಕೇಳಿ ಸುಸ್ತು ಮಾಡಿದ್ದೆ. ಅಪ್ಪ “ಒಂದು ವಾರ ಬಿಟ್ಟು, 2 ವಾರ ಬಿಟ್ಟು” ಎಂದು ಅನ್ನುತ್ತಿದ್ದರು. ಇನ್ನು ಮಾಸ್ಕೋದಿಂದ ಹೊರಡುವ ದಿನ ಬಂತು, “ಏನು ಬೇಕು ಮಗಳೇ?” ಎಂದು ಕೇಳಿದ್ದರು, “ಸೂಟ್ ಕೇಸ್ ತುಂಬ ಚಾಕ್ಲೇಟ್ ಬೇಕಪ್ಪ” ಎಂದು ಅಂದಿದ್ದೆ. ಅದನ್ನೆಲ್ಲಾ ಹೇಳಿ ಮರೆತೂ ಹೋಗಿದ್ದೆ.

ಸರಿ ಅಪ್ಪ ಮನೆಗೆ ಬಂದರು, ನಾನು ಸ್ಕೂಲಿಗೆ ಹೋಗಿದ್ದೆ, ಸಂಜೆ ಬಂದರೆ ಒಂದು ರೂಮಿನಲ್ಲಿ ದೊಡ್ಡ ಸೂಟ್ ಕೇಸ್ ಇಟ್ಟಿದ್ದರು. ತೆಗೆದರೆ ನಿಜವಾಗಿಯೂ ಅದರ ಪೂರ್ತಿ ಚಾಕ್ಲೇಟ್ ಇತ್ತು. ಒಂದು 35 ಕೆಜಿಯ ಸೂಟ್ಕೇಸಿನ ತುಂಬಾ ಚಾಕ್ಲೇಟ್ ತಂದಿದ್ದರು ಅಪ್ಪ. ಅವರನ್ನ ಕಸ್ಟಮ್ಸಿನಲ್ಲಿ ಹಿಡಿದ್ದಿದ್ದರೂ ಸಹ. ವೈಟ್ ಪಾಸ್‌ಪೋರ್ಟ್ ಮತ್ತು ಮಗಳಿಗೆ ಚಾಕ್ಲೇಟ್ ತೆಗೆದುಕೊಂಡು ಹೋಗುತ್ತಿದ್ದೇನೆ ಎಂಬ ಸಬೂಬಿನೊಂದಿಗೆ ಬಿಟ್ಟಿದ್ದರಂತೆ. ಒಂದು ಸೂಟ್ಕೇಸಿನ ಬಟ್ಟೆಯನ್ನೆಲ್ಲಾ ಬಿಟ್ಟು, ಮಗಳಿಗೆ ಚಾಕ್ಲೇಟ್ ತಂದಿದ್ದರು ಅಪ್ಪ. ನಾನು ಸುಮ್ಮನೆ ಹೇಳುವ ಮಾತನ್ನ ನಿಜ ಮಾಡೋದು ಅಪ್ಪ ಮಾತ್ರ.

ಘಟನೆ 2
ನಾನು ಸೆಕೆಂಡ್ ಪಿಯೂಸಿಯಲ್ಲಿ ಓದೋದು ಬಿಟ್ಟು ಆರಾಮಾಗಿ ಸಂಗೀತ, ನಾಟಕ ಅಂದುಕೊಂಡಿದ್ದೆ. ಹೋಗಲಿ ಅದರಲ್ಲೂ ಏನು ಅಂತಹ ಸಾಧನೆ ಮಾಡಿರಲ್ಲಿಲ್ಲ. ಸುಮ್ಮನೆ ಕ್ಲಾಸ್ ಚಕ್ಕರ್ ಹಾಕೋಕೆ ಒಂದು ನೆಪ ಅಷ್ಟೆ. ಎಸ್ಸೆಸೆಲ್ಸಿಯಲ್ಲಿ ವಿಪರೀತ ಮಾರ್ಕ್ಸ್ ತೆಗೆದುಕೊಂಡ ಓವರ್ ಕಾನ್ಫೆಡೆನ್ಸ್ ನನ್ನಲ್ಲಿತ್ತು. “ಬರತ್ತೆ ಬಿಡು ಮಾರ್ಕ್ಸ್” ಅನ್ನೋ ಕೊಬ್ಬು. ಅಪ್ಪ ಒಂದೆರೆಡು ಬಾರಿ ಮೆತ್ತಗೆ ಹೇಳಿದ್ದರು, “ಹತ್ತನೇ ಕ್ಲಾಸಿನ ಹಾಗಲ್ಲ ಇದು, ಸರಿಯಾಗಿ ಓದು, ಇದು ನಿನ್ನ ಜೀವನದ ಟರ್ನಿಂಗ್ ಪಾಯಿಂಟ್” ಎಂದು. ನಾನು ಆರಾಮಾಗಿಯೇ ಇದ್ದೆ. ಎಕ್ಸಾಮು ಬರೆದೆ. ಅತೀ ಸಾಧಾರಣ ಮಾರ್ಕ್ಸು, ಅತೀ ಸಾಧಾರಣ ಸಿಇಟಿ ರ್ಯಾಂಕು ಬಂತು. ಅಪ್ಪನಿಗೆ ಇದ್ದ ಕನೆಕ್ಷನ್ಸು, ದುಡ್ಡು ಇವೆಲ್ಲವೂ ನನ್ನನ್ನ ಕಾಪಾಡುತ್ತದೆ ಎಂಬ ಕೆಟ್ಟ ಕಾನ್ಫಿಡೆನ್ಸು ನನ್ನಲ್ಲಿತ್ತು. ಅಪ್ಪ ರಿಸೆಲ್ಟ್ ನೋಡಿ ಒಂದೇ ಮಾತು ಹೇಳಿದರು, “ನಿನ್ನ ಯೋಗ್ಯತೆಗೆ ಎಲ್ಲಿ ಸೀಟು ಸಿಗತ್ತೋ ಅಲ್ಲಿ ಸೇರ್ಕೊಂಡು ಇಂಜಿನಿಯರಿಂಗ್ ಮುಗಿಸು, ಗುಡ್ ಲಕ್” ಅಂದರು. “ನೆನೆಪಿರಲಿ ನೀನು ಎಷ್ಟೇ ಮಾರ್ಕ್ಸ್ ತೆಗೆದರೂ ನನ್ನ ಮಗಳೇ ಅದೇನು ಬದಲಾಗಲ್ಲ” ಎಂದು ಸಾಂತ್ವನ ಹೇಳಿ ಹೋದರು.

ನಾನು ಊರಾಚೆ ಕಾಲೇಜಿಗೆ ಸೇರಿದೆ. ದಿನಾ ಬೆಳಗ್ಗೆ 6 ಘಂಟೆಗೆ ಹೊರಟರೆ ಸಂಜೆ 6 ಘಂಟೆಗೆ ಬರುತ್ತಿದ್ದೆ. 1 ವರ್ಷ ಆಟಾಡಿದ್ದಕ್ಕೆ 4 ವರ್ಷ ಒದ್ದಾಡಿದೆ. ಅಪ್ಪ ಸುಮ್ಮನೆ ಮುಗುಳ್ನಗುತ್ತಿದ್ದರು. ಇಂಜಿನಿಯರಿಂಗ್ ಮುಗಿಸಿದ ನಂತರ, “ನೀನು ಯಾರ ಶಿಫಾರಸ್ಸಿನಲ್ಲೋ, ಯಾರ ದುಡ್ಡಲ್ಲೋ ಓದಲ್ಲಿಲ್ಲ ನಿನ್ನ ಯೋಗ್ಯತೆಗೆ ತಕ್ಕ ಹಾಗೆ ಓದಿದೆ, ಯಾವತ್ತೂ ಅಷ್ಟೇ ನೀನು ಕಷ್ಟ ಪಟ್ಟು ನೀನು ದಕ್ಕಿಸಿಕೊಂಡಿದ್ದೇ ನಿನ್ನ ಬಳಿ ಶಾಶ್ವತವಾಗಿ ಉಳಿಯೋದು, ಅಪ್ಪ ಅಮ್ಮ ಫ್ರೀಯಾಗಿ ಕೊಟ್ಟಿದ್ದೂ ಉಳಿಯಲ್ಲ” ಎಂಬ ಅತಿ ದೊಡ್ಡ ಜೀವನದ ಪಾಠವನ್ನು ಹೇಳಿಕೊಟ್ಟರು.

ಇದಾದ ನಂತರ ನಾನು ಯಾವತ್ತೂ ಯಾವುದನ್ನೂ ಲೈಟಾಗಿ ತೆಗೆದುಕೊಳ್ಳಲ್ಲಿಲ್ಲ. ತಲೆ ಬಗ್ಗಿಸಿ ಕೆಲಸ ಮಾಡಿಕೊಂಡು ಹೋಗಿದ್ದೇನೆ. ಅದು ವಿದೇಶದಲ್ಲಿ ಮಾಸ್ಟರ್ಸ್ ಇರಬಹುದು, ಅಥವಾ ಕೆಲಸ ಇರಬಹುದು ಅಥವಾ ಪುಸ್ತಕ-ಲೇಖನ ಬರೆಯೋದಿರಬಹುದು.

ಪ್ರೀತಿ ಮಾಡುತ್ತಲೇ ಅಸಂಖ್ಯಾತ ಜೀವನ ಪಾಠ ಕಲಿಸುತ್ತಿರುವ ಅಪ್ಪನಿಗೆ ಅಪ್ಪನ ದಿನದ ಶುಭಾಶಯಗಳು. ನೀನೆ ನನಗೆ ಸ್ಪೂರ್ತಿ ಅಪ್ಪ. ನನ್ನ ಮೂರನೆಯ ಪುಸ್ತಕವನ್ನ( #AI ಕಥೆಗಳು) ನಿನಗೇ ಅರ್ಪಣೆ ಮಾಡಿದ್ದೇನೆ.

  • ಮೇಘನಾ ಸುಧೀಂದ್ರ

ಇದನ್ನೂ ಓದಿ: ಖ್ಯಾತ ವಿಜ್ಞಾನ ಬರಹಗಾರ, DRDO ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ (61) ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...